Thursday 31 January 2013

ಸ್ತ್ರೀ ಸಂವೇದನೆ - stree samvedane- 3

  
                               ಯುವತಿಯರ ಸಿಗರೇಟು ಸೇವನೆ 

ಮಂಗಳೂರಿನ ಅತ್ತಾವರದ ಕೆಫೆ  ಒಂದರಲ್ಲಿ ಮೂವರು ಯುವತಿಯರು ಒಬ್ಬ ಯುವಕನೊಂದಿಗೆ ಸಿಗರೇಟು ಸೇದುತ್ತಿರುವುದನ್ನು ನೋಡಿದ ಬಜರಂಗ ದಳ ಹಾಗು ದುರ್ಗವಾಹಿನಿಯ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ ಬಗ್ಗೆ ಓದಿ ಆಶ್ಚರ್ಯ ಆಯಿತು! ಸಾವಿರಾರು ಗಂಡಸರು ಸಿಗರೇಟು ಸೇದಿ ಜರ್ದ ತಿಂದು ಹಾಳಾಗುತ್ತಿರುವುದು ಇವರ ಕಣ್ಣಿಗೆ ಕಾಣಿಸುವುದಿಲ್ಲವೆ?ಬಸ್ಸು ಗಳಲ್ಲಿ ಯಾವುದೇ ಎಗ್ಗಿಲ್ಲದೆ ಸಿಗರೆಟ್ ಸೇದುವ ಯುವಕರು ಇವರ ಕಣ್ಣಿಗೆ ಕಾಣಿಸುವುದಿಲ್ಲವೇಕೆ?ಸಾರಾಯಿ ಕುಡಿದು ಮೈ ಮರೆತು ಬೀದಿ ಬೀದಿಗಳಲ್ಲಿ ಬಿದ್ದು ಮರ್ಯಾದಸ್ತರು ಓಡಾಡಲು ಅಳುಕುವಂತೆ ಮಾಡುವ ಗಂಡಸರನ್ನೇಕೆ ಹಿಡಿದು ಪೋಲಿಸರಿಗೊಪ್ಪಿಸುವುದಿಲ್ಲ .ಯುವತಿಯರು ಪಾರ್ಟಿ ಮಾಡಿದರೆ ಸಿಗರೆಟ್ ಸೇದಿದರೆ ದಾಳಿ ಮಾಡುವ ಇವರು ಅತ್ಯಾಚಾರಿಗಳ ಹಾಗೂ ಮಹಿಳೆಯರಿಗೆ ಕಿರುಕುಳ ನೀಡಿದವರ ಬಗ್ಗೆ  ಯಾಕೆ ಮೌನವಾಗಿರುತ್ತಾರೆ ?ಯಾಕೆಂದರೆ ಅವರು ಪುರುಷರು ಅಲ್ಲವೇ?ಇವರ ಪೌರುಷ ಏನಿದ್ದರೂ ಸ್ತ್ರೀಯರ ಮೇಲೆ ಮಾತ್ರ!ನೀವೇನಂತೀರಿ ?
                                                                                                                             -     ಲಕ್ಷ್ಮಿ ಪ್ರಸಾದ್ 

No comments:

Post a Comment