Saturday 3 August 2013

ತುಳುವರ ಆಟಿ ಕಳೆಂಜ-ಒಂದು ತುಳು ಜಾನಪದ ಕುಣಿತ

Photo: ತುಳುವರ ಆಟಿ  ಕಳೆಂಜ
 ತುಳುನಾಡಿನಲ್ಲಿ ಆಟಿಕಳೆಂಜನ ಕುಣಿತ ಬಹಳ ಪ್ರಸಿದ್ಧವಾದುದು. ಇದು ಮುಗೇರರ ,ನಲಿಕೆಯವರ ಆಚರಣಾತ್ಮಕ ಕುಣಿತ. ಮುಗೇರರು ಬೆಳ್ತಂಗಡಿ ತಾಲೂಕಿನಲ್ಲಿ ಮಾತ್ರ ಆಟಿಕಳೆಂಜದ ಪ್ರದರ್ಶನ ಮಾಡುತ್ತಾರೆ. ತುಳುನಾಡಿನ ಇತರ ಪ್ರದೇಶಗಳಲ್ಲಿ ನಲಿಕೆಯವರು ಆಟಿಕಳೆಂಜ ಪ್ರದರ್ಶನ ಮಾಡುತ್ತಾರೆ. ಹೆಸರೇ ಹೇಳುವಂತೆ ಇದು ಆಟಿ ತಿಂಗಳಿನಲ್ಲಿ ಮಾತ್ರ ಇರುವ ಕುಣಿತ. ಕಳೆಂಜನನ್ನು ಬೆರ್ಮೆರ್ ಮಾಣಿ ಎಂದೂ, ಕಲೆಂಜ ಬೆರ್ಮೆರ್ ಎಂದೂ, ಬೆರ್ಮೆರ್ ಎಂದೂ ಕರೆಯುತ್ತಾರೆ. ಈತನನ್ನು ಬೆರ್ಮೆರ್ನ ಪ್ರತಿನಿಧಿ ಎಂದೂ ಹೇಳುತ್ತಾರೆ. “ತುಳುನಾಡಿನ ಪ್ರಾಚೀನ ಆರಾಧ್ಯದೈವವಾದ ಬೆರ್ಮೆರ್ನ್ ಪ್ರತಿನಿಧಿಯಾದ ಕಳೆಂಜನು ಆಟಿತಿಂಗಳಿನಲ್ಲಿ ಊರಿಗೆ ಹಬ್ಬದ ಮಾರಿಬೀದಿಯನ್ನು ಕಳೆಯುವುದಕ್ಕಾಗಿಯೇ ಬರುವುದೇ ‘ಆಟಿ ಕಳೆಂಜ’ ಎಂದು ಗುರುತಿಸಬಹುದು” 
ಈತನಿಗೆ ಕೇಪುಲ ಗಿಡದ ಕೋಲಿನಿಂದ ಮಾಡಿದ ಮುಡಿ (ಕಿರೀಟ)ವಿದೆ. ಮೈಕೈಗಳಿಗೆ ಬಿಳಿಬಣ್ಣದ ಸೇಡಿಯನ್ನು ಬಳಿದು, ಕಿಬ್ಬೊಟ್ಟೆಯಿಂದ ಎದೆಯವರೆಗೆ ಕೆಂಪುಬಣ್ಣದಲ್ಲಿ ಗುಣಿಸು (x) ಚಿಹ್ನೆಯ ಆಕಾರವನ್ನು ಬಿಡಿಸುತ್ತಾರೆ. ಸೊಂಟಕ್ಕೆ ತೆಂಗಿನ ತಿರಿ, ಮುಖಕ್ಕೆ ತೆಂಗಿನ ನಾರಿನಲ್ಲಿ ಮಾಡಿದ ಮೀಸೆ ಮತ್ತು ಗಡ್ಡ ಇರುತ್ತದೆ. ಕೈಯಲ್ಲಿ ಉದ್ದದ ಪನೆಛತ್ರ ಮತ್ತು ದುಡಿ ಇರುತ್ತದೆ.  ಆತನ ರೂಪದ ವರ್ಣನೆ ಹೀಗಿದೆ:
ತುಳು: ಬಿರ್ಮರೆ ಮಾನಿಯಾಂಡ ಕಲೆಂಜ ಮುಡಿದೀವೊನು
 ಮುದಿ ದೀವೊನು ಕಲೆಂಜ ಸತ್ತಿಗೆ, ಪತ್ತೊನು
 ಸತ್ತಿಗೆ ಪತ್ತೊನು ಕಲೆಂಜ ಸವಲೆಯ ಬೀಜೆಮಾನು
 ಸವಲೋ ಬೀಜೋನು ಬೀರ ತಿತೊನು
 ಕಲೆಂಜ ಕಲೆಂಜ ಕಲೆಂಜ ಬೆರ್ಮರ್
ಕನ್ನಡ: ಬೆರ್ಮರ ಪ್ರತಿನಿಧಿಯಾದರೆ ಕಲೆಂಜ ಕಿರೀಟ ಇರಿಸಿಕೋ
 ಕಿರೀಟ ಇಟ್ಟುಕೋ ಕಲೆಂಜ ಛತ್ರ ಹಿಡಿದುಕೋ
 ಛತ್ರ ಹಿಡಿದುಕೋ ಕಲೆಂಜ ಚಾಮರ ಹಿಡಿದುಕೋ
 ಚಾಮರ ಬೀಸಿಕೋ ಕಲೆಂಜ ಬಿರುದು ಕರೆಸಿಕೋ
 ಕಲೆಂಜ ಕಲೆಂಜ ಕಲೆಂಜ ಕಲೆಂಜ ಬಿರ್ಮೆರ್
ಇಲ್ಲಿ ಕಲೆಂಜನನ್ನು ಬೆರ್ಮರ್ ಮಾಣಿ ಎಂದು ಹೇಳಿದ್ದರೂ ಕಿರೀಟ ಇಟ್ಟುಕೋ, ಸತ್ತಿಗೆ ಹಿಡಿ, ಚಾಮರ ಬೀಸಿಕೋ, ಇತ್ಯಾದಿ ಅರಸುವಿಗೆ ಉಚಿತವಾದ ವರ್ಣನೆಗಳನ್ನು ಮಾಡಿದೆ.
ಆಟಿಕಲೆಂಜನು ಋತುಮತಿಯಾಗದ ಹುಡುಗಿಯ ತಲೆಗೆ, ಗರ್ಭಿಣಿಯಾಗದ ಹೆಂಗಸಿನ ತಲೆಗೆ, ದನ ಕರು ಹಾಕದಿದ್ದರೆ ಅದರ ತಲೆಗೆ, ಮರ ಕಾಯಿ ಬಿಡದಿದ್ದರೆ ಅದರ ಬುಡಕ್ಕೆ ನೀರು ಹೊಯ್ಯುವ ಪದ್ಧತಿ ಇದೆ. ಇಲ್ಲಿ ಕಲೆಂಜ ಸಂತಾನವನ್ನು ನೀಡುವ ಶಕ್ತಿಯಾಗಿ ಕಾಣಿಸುತ್ತಾನೆ. ಬೆರ್ಮರ್ ಕೂಡ ಫಲೀಕರಣದ ದೇವತೆ. ಮುಗೇರ್ಲು ಕೋಲದ ಆರಂಭದಲ್ಲಿ ಬೆರ್ಮೆರ್ ಸಂಧಿಯನ್ನು ಹೇಳುತ್ತಾರೆ. ಆ ಸಂಧಿಯಲ್ಲಿ ವರ್ಣಿಸಿರುವಂತೆ ಬೆರ್ಮೆರ್ನ ಸತ್ತಿಗೆ, ಚಾಮರ, ಕಿರೀಟಗಳು ಇವೆ. ಈ ಬಗ್ಗೆ ಡಾ. ಅಭಯ ಕುಮಾರ ಕೌಕ್ರಾಡಿ ಅವರು “ಈ ಸಂಧಿ ಬೆರ್ಮೆರ್ ಸ್ವರೂಪವನ್ನು ತಿಳಿಸಿದರೂ, ಈ ರೀತಿಯ ಬಿರ್ಮೆರ್ ಮೂರ್ತಿಯನ್ನು ತುಳುನಾಡಿನಲ್ಲಿ ಎಲ್ಲಿಯೂ ಕಾಣಲು ಸಾಧ್ಯವಿಲ್ಲ. ಆದರೆ ತುಳುನಾಡಿನ ಆಟಿತಿಂಗಳಿನಲ್ಲಿ ಬರುವ ಕಲೆಂಜನನ್ನು ಮುಗೇರರು ಬಿರ್ಮೆರ್ ಮಾನಿ ಎಂದು ಕರೆಯುತ್ತಾರೆ. ಅವನ ಸ್ವರೂಪವು ಸುಮಾರಾಗಿ ಈ ಸಂಧಿಯಲ್ಲಿ ಚಿತ್ರಿತವಾಗಿರುವಂತೆಯೇ ಕಂಡುಬರುತ್ತದೆ. ಹೀಗೆ ದಕ್ಷಿಣ ಕನ್ನಡದ ಒಂದು ವಿಶಿಷ್ಟ ಪ್ರಾಚೀನ ಆರಾಧನ ದೈವವೇ ಈ ಬಿರ್ಮೆರ್ ಎಂದು ನಿರ್ಧರಿಸಬಹುದಾಗಿದೆ” ಎಂದು ಹೇಳಿದ್ದಾರೆ.ಮಳೆಗಾಲದ ಆಟಿ  ತಿಂಗಳಿನಲ್ಲಿ ಮನೆ ಮನೆಗೆ ಬರುವ ಆತಿ ಕಳೆಂಜ ಕಾಡಿನಿಂದ ಜನರಿಗೆ ಬೇಕಾದ ಔಷಧ ಗಿಡಮೂಲಿಕೆಗಳನ್ನು ತಂದು ಕೊಡುತ್ತಾನೆ .ಆಟಿ ಕಳೆನಜನಿಗೆ ಮೆಣಸು ಉಪ್ಪು ಅಕ್ಕಿ ಮೊದಲಾದವುಗಳನ್ನು ನೀಡುತ್ತಾರೆ .ಮಳೆಗಾಲದ ಗದ್ದೆಯ ಕೆಲಸ ಎಲ್ಲ ಮುಗಿದ ನಂತರ ಮೂಲದ ಉಳುಮೆಗಾರ ಮೊದಲಾದವರಿಗೆ ಕೆಲಸ ಇರುವುದಿಲ್ಲ .ಮಳೆ ಬಂದು ಕಾಡಿನಲ್ಲಿ ಔಷಧ ಗಿಡ ಮೂಲಿಕೆಗಳು ಸಮೃದ್ಧವಾಗಿ ಸಿಗುವ ಕಾಲ ಆದ್ದರಿಂದ ಆಗ ಅವರು ಕಾಡಿಗೆ ಹೋಗಿ ಬೇಕಾದ ಗಿಡಮೂಲಿಕೆಗಳನ್ನು ತಂದು ಮನೆ ಮನೆಗೆ ಹೋಗಿ ಬೇಕಾದ ಔಷಧಗಳನ್ನು ನೀಡುವುದಕ್ಕಾಗಿ ಬರುವ ಸಾಧ್ಯತೆ ಇದೆ ಆಗ ಅವರಿಗೆ ಬೇಕಾದ ಆಹಾರ ಮೆಣಸು ಇತ್ಯಾದಿಗಳನ್ನು ಮನೆ ಮಂದಿ ನೀದುತ್ತಿದ್ದಿರಬಹುದು .ಈ ಸಂದರ್ಭದಲ್ಲಿ ಅವರು ಮನೋರಂಜನೆಗಾಗಿ ದುಡಿ ಬಡಿದು ನರ್ತಿಸುತ್ತಿದ್ದಿರುವ ಸಾಧ್ಯತೆ ಇದೆ .
ಏನೇ ಆದರೂ ಈಗ ನಾವು ಆಟಿ  ಕಲೆಂಜನನ್ನು ನೋಡ ಬೇಕಾದರೆ ಸುಲಭ ಇಲ್ಲ ಈಗ ಹೆಚ್ಚಿನವರು ಆಟಿ ಕಲೆಂಜ ಕಟ್ಟಿ ಮನೆ ಮನೆಗೆ ಬರುವುದನ್ನು ನಿಲ್ಲಿಸಿದ್ದಾರೆ .ಅವರಿಗೆ ಸೂಕ್ತ ಗೌರವ ಸಿಗದ್ದು ಇದಕ್ಕೆ ಮುಖ್ಯ ಕಾರಣ ಆಗಿದೆ ಆಟಿ ಕಳೆಂಜ ಸೋನದ ಜೋಗಿ ಮೊದಲಾದ ಕುಣಿತವಾಡುತ್ತಾ  ಬರುತ್ತಿದ್ದವರನ್ನು ನಮ್ಮ ತುಳು ಸಂಸ್ಕೃತಿಯ ಪ್ರವಾಹಕರೆಂದು ಗೌರವಿಸದೆ ಅವರನ್ನು ತಿರುಪೆಯವರನ್ನು ಕಾಣುವಂತೆ ಅವಜ್ಞೆಯಿಂದ ಕಂಡದ್ದೇ ಇದಕ್ಕೆ ಮುಖ್ಯ ಕಾರಣವಾಗಿದೆ
ತುಳುವರ ಆಟಿ ಕಳೆಂಜ-ಒಂದು ತುಳು ಜಾನಪದ ಕುಣಿತ ತುಳುನಾಡಿನಲ್ಲಿ ಆಟಿಕಳೆಂಜನ ಕುಣಿತ ಬಹಳ ಪ್ರಸಿದ್ಧವಾದುದು. copy rights reserved (C)Dr.laxmi g prasad ಇದು ಮುಗೇರರ ,ನಲಿಕೆಯವರ ಆಚರಣಾತ್ಮಕ ಕುಣಿತ. ಮುಗೇರರು ಬೆಳ್ತಂಗಡಿ ತಾಲೂಕಿನಲ್ಲಿ ಮಾತ್ರ ಆಟಿಕಳೆಂಜದ ಪ್ರದರ್ಶನ ಮಾಡುತ್ತಾರೆ. ತುಳುನಾಡಿನ ಇತರ ಪ್ರದೇಶಗಳಲ್ಲಿ ನಲಿಕೆಯವರು ಆಟಿಕಳೆಂಜ ಪ್ರದರ್ಶನ ಮಾಡುತ್ತಾರೆ. ಹೆಸರೇ ಹೇಳುವಂತೆ ಇದು ಆಟಿ ತಿಂಗಳಿನಲ್ಲಿ ಮಾತ್ರ ಇರುವ ಕುಣಿತ. ಕಳೆಂಜನನ್ನು ಬೆರ್ಮೆರ್ ಮಾಣಿ ಎಂದೂ, ಕಲೆಂಜ ಬೆರ್ಮೆರ್ ಎಂದೂ, ಬೆರ್ಮೆರ್ ಎಂದೂ ಕರೆಯುತ್ತಾರೆ.copy rights reserved (C)Dr.laxmi g prasad ಈತನನ್ನು ಬೆರ್ಮೆರ್ನ ಪ್ರತಿನಿಧಿ ಎಂದೂ ಹೇಳುತ್ತಾರೆ. “ತುಳುನಾಡಿನ ಪ್ರಾಚೀನ ಆರಾಧ್ಯದೈವವಾದ ಬೆರ್ಮೆರ್ನ್ ಪ್ರತಿನಿಧಿಯಾದ ಕಳೆಂಜನು ಆಟಿತಿಂಗಳಿನಲ್ಲಿ ಊರಿಗೆ ಹಬ್ಬದ ಮಾರಿಬೀದಿಯನ್ನು ಕಳೆಯುವುದಕ್ಕಾಗಿಯೇ ಬರುವುದೇ ‘ಆಟಿ ಕಳೆಂಜ’ ಎಂದು ಗುರುತಿಸಬಹುದು”
ಈತನಿಗೆ ಕೇಪುಲ ಗಿಡದ ಕೋಲಿನಿಂದ ಮಾಡಿದ ಮುಡಿ (ಕಿರೀಟ)ವಿದೆ. ಮೈಕೈಗಳಿಗೆ ಬಿಳಿಬಣ್ಣದ ಸೇಡಿಯನ್ನು ಬಳಿದು, ಕಿಬ್ಬೊಟ್ಟೆಯಿಂದ ಎದೆಯವರೆಗೆ ಕೆಂಪುಬಣ್ಣದಲ್ಲಿ ಗುಣಿಸು (x) ಚಿಹ್ನೆಯ ಆಕಾರವನ್ನು ಬಿಡಿಸುತ್ತಾರೆ. ಸೊಂಟಕ್ಕೆ ತೆಂಗಿನ ತಿರಿ, ಮುಖಕ್ಕೆ ತೆಂಗಿನ ನಾರಿನಲ್ಲಿ ಮಾಡಿದ ಮೀಸೆ ಮತ್ತು ಗಡ್ಡ ಇರುತ್ತದೆ.
copy rights reserved (C)Dr.laxmi g prasad ಕೈಯಲ್ಲಿ ಉದ್ದದ ಪನೆಛತ್ರ ಮತ್ತು ದುಡಿ ಇರುತ್ತದೆ. ಆತನ ರೂಪದ ವರ್ಣನೆ ಹೀಗಿದೆ:
ತುಳು: ಬಿರ್ಮರೆ ಮಾನಿಯಾಂಡ ಕಲೆಂಜ ಮುಡಿದೀವೊನು
ಮುದಿ ದೀವೊನು ಕಲೆಂಜ ಸತ್ತಿಗೆ, ಪತ್ತೊನು
ಸತ್ತಿಗೆ ಪತ್ತೊನು ಕಲೆಂಜ ಸವಲೆಯ ಬೀಜೆಮಾನು
ಸವಲೋ ಬೀಜೋನು ಬೀರ ತಿತೊನು
ಕಲೆಂಜ ಕಲೆಂಜ ಕಲೆಂಜ ಬೆರ್ಮರ್
ಕನ್ನಡ: ಬೆರ್ಮರ ಪ್ರತಿನಿಧಿಯಾದರೆ ಕಲೆಂಜ ಕಿರೀಟ ಇರಿಸಿಕೋ
ಕಿರೀಟ ಇಟ್ಟುಕೋ ಕಲೆಂಜ ಛತ್ರ ಹಿಡಿದುಕೋ
ಛತ್ರ ಹಿಡಿದುಕೋ ಕಲೆಂಜ ಚಾಮರ ಹಿಡಿದುಕೋ
ಚಾಮರ ಬೀಸಿಕೋ ಕಲೆಂಜ ಬಿರುದು ಕರೆಸಿಕೋ
ಕಲೆಂಜ ಕಲೆಂಜ ಕಲೆಂಜ ಕಲೆಂಜ ಬಿರ್ಮೆರ್
ಇಲ್ಲಿ ಕಲೆಂಜನನ್ನು ಬೆರ್ಮರ್ ಮಾಣಿ ಎಂದು ಹೇಳಿದ್ದರೂ ಕಿರೀಟ ಇಟ್ಟುಕೋ, ಸತ್ತಿಗೆ ಹಿಡಿ, ಚಾಮರ ಬೀಸಿಕೋ, ಇತ್ಯಾದಿ ಅರಸುವಿಗೆ ಉಚಿತವಾದ ವರ್ಣನೆಗಳನ್ನು ಮಾಡಿದೆ.
ಆಟಿಕಲೆಂಜನು ಋತುಮತಿಯಾಗದ ಹುಡುಗಿಯ ತಲೆಗೆ, ಗರ್ಭಿಣಿಯಾಗದ ಹೆಂಗಸಿನ ತಲೆಗೆ, ದನ ಕರು ಹಾಕದಿದ್ದರೆ ಅದರ ತಲೆಗೆ, ಮರ ಕಾಯಿ ಬಿಡದಿದ್ದರೆ ಅದರ ಬುಡಕ್ಕೆ ನೀರು ಹೊಯ್ಯುವ ಪದ್ಧತಿ ಇದೆ.
copy rights reserved (C)Dr.laxmi g prasad ಇಲ್ಲಿ ಕಲೆಂಜ ಸಂತಾನವನ್ನು ನೀಡುವ ಶಕ್ತಿಯಾಗಿ ಕಾಣಿಸುತ್ತಾನೆ. ಬೆರ್ಮರ್ ಕೂಡ ಫಲೀಕರಣದ ದೇವತೆ. ಮುಗೇರ್ಲು ಕೋಲದ ಆರಂಭದಲ್ಲಿ ಬೆರ್ಮೆರ್ ಸಂಧಿಯನ್ನು ಹೇಳುತ್ತಾರೆ. ಆ ಸಂಧಿಯಲ್ಲಿ ವರ್ಣಿಸಿರುವಂತೆ ಬೆರ್ಮೆರ್ನ ಸತ್ತಿಗೆ, ಚಾಮರ, ಕಿರೀಟಗಳು ಇವೆ. copy rights reserved (C)Dr.laxmi g prasadಈ ಬಗ್ಗೆ ಡಾ. ಅಭಯ ಕುಮಾರ ಕೌಕ್ರಾಡಿ ಅವರು “ಈ ಸಂಧಿ ಬೆರ್ಮೆರ್ ಸ್ವರೂಪವನ್ನು ತಿಳಿಸಿದರೂ, ಈ ರೀತಿಯ ಬಿರ್ಮೆರ್ ಮೂರ್ತಿಯನ್ನು ತುಳುನಾಡಿನಲ್ಲಿ ಎಲ್ಲಿಯೂ ಕಾಣಲು ಸಾಧ್ಯವಿಲ್ಲ. ಆದರೆ ತುಳುನಾಡಿನ ಆಟಿತಿಂಗಳಿನಲ್ಲಿ ಬರುವ ಕಲೆಂಜನನ್ನು ಮುಗೇರರು ಬಿರ್ಮೆರ್ ಮಾನಿ ಎಂದು ಕರೆಯುತ್ತಾರೆ. ಅವನ ಸ್ವರೂಪವು ಸುಮಾರಾಗಿ ಈ ಸಂಧಿಯಲ್ಲಿ ಚಿತ್ರಿತವಾಗಿರುವಂತೆಯೇ ಕಂಡುಬರುತ್ತದೆ. ಹೀಗೆ ದಕ್ಷಿಣ ಕನ್ನಡದ ಒಂದು ವಿಶಿಷ್ಟ ಪ್ರಾಚೀನ ಆರಾಧನ ದೈವವೇ ಈ ಬಿರ್ಮೆರ್ ಎಂದು ನಿರ್ಧರಿಸಬಹುದಾಗಿದೆ” ಎಂದು ಹೇಳಿದ್ದಾರೆ.ಮಳೆಗಾಲದ ಆಟಿ ತಿಂಗಳಿನಲ್ಲಿ ಮನೆ ಮನೆಗೆ ಬರುವ copy rights reserved (C)Dr.laxmi g prasadಆತಿ ಕಳೆಂಜ ಕಾಡಿನಿಂದ ಜನರಿಗೆ ಬೇಕಾದ ಔಷಧ ಗಿಡಮೂಲಿಕೆಗಳನ್ನು ತಂದು ಕೊಡುತ್ತಾನೆ .ಆಟಿ ಕಳೆನಜನಿಗೆ ಮೆಣಸು ಉಪ್ಪು ಅಕ್ಕಿ ಮೊದಲಾದವುಗಳನ್ನು ನೀಡುತ್ತಾರೆ .ಮಳೆಗಾಲದ ಗದ್ದೆಯ ಕೆಲಸ ಎಲ್ಲ ಮುಗಿದ ನಂತರ ಮೂಲದ ಉಳುಮೆಗಾರ ಮೊದಲಾದವರಿಗೆ ಕೆಲಸ ಇರುವುದಿಲ್ಲ .ಮಳೆ ಬಂದು ಕಾಡಿನಲ್ಲಿ ಔಷಧ ಗಿಡ ಮೂಲಿಕೆಗಳು ಸಮೃದ್ಧವಾಗಿ ಸಿಗುವ ಕಾಲ ಆದ್ದರಿಂದ ಆಗ ಅವರು ಕಾಡಿಗೆ ಹೋಗಿ ಬೇಕಾದ ಗಿಡಮೂಲಿಕೆಗಳನ್ನು ತಂದು ಮನೆ ಮನೆಗೆ ಹೋಗಿ ಬೇಕಾದ ಔಷಧಗಳನ್ನು ನೀಡುವುದಕ್ಕಾಗಿ ಬರುವ ಸಾಧ್ಯತೆ ಇದೆ ಆಗ ಅವರಿಗೆ ಬೇಕಾದ ಆಹಾರ ಮೆಣಸು ಇತ್ಯಾದಿಗಳನ್ನು ಮನೆ ಮಂದಿ ನೀದುತ್ತಿದ್ದಿರಬಹುದುcopy rights reserved (C)Dr.laxmi g prasad .ಈ ಸಂದರ್ಭದಲ್ಲಿ ಅವರು ಮನೋರಂಜನೆಗಾಗಿ ದುಡಿ ಬಡಿದು ನರ್ತಿಸುತ್ತಿದ್ದಿರುವ ಸಾಧ್ಯತೆ ಇದೆ .
ಏನೇ ಆದರೂ ಈಗ ನಾವು ಆಟಿ ಕಲೆಂಜನನ್ನು ನೋಡ ಬೇಕಾದರೆ ಸುಲಭ ಇಲ್ಲ ಈಗ ಹೆಚ್ಚಿನವರು ಆಟಿ ಕಲೆಂಜ ಕಟ್ಟಿ ಮನೆ ಮನೆಗೆ ಬರುವುದನ್ನು ನಿಲ್ಲಿಸಿದ್ದಾರೆ .ಅವರಿಗೆ ಸೂಕ್ತ ಗೌರವ ಸಿಗದ್ದು ಇದಕ್ಕೆ ಮುಖ್ಯ ಕಾರಣ ಆಗಿದೆ
copy rights reserved (C)Dr.laxmi g prasad ಆಟಿ ಕಳೆಂಜ ಸೋನದ ಜೋಗಿ ಮೊದಲಾದ ಕುಣಿತವಾಡುತ್ತಾ ಬರುತ್ತಿದ್ದವರನ್ನು ನಮ್ಮ ತುಳು ಸಂಸ್ಕೃತಿಯ ಪ್ರವಾಹಕರೆಂದು ಗೌರವಿಸದೆ ಕಲಾವಿದರೆಂದು ಗುರುತಿಸದೆ ಅವರನ್ನು ತಿರುಪೆಯವರನ್ನು ಕಾಣುವಂತೆ ಅವಜ್ಞೆಯಿಂದ ಕಂಡದ್ದೇ ಇದಕ್ಕೆ ಮುಖ್ಯ ಕಾರಣವಾಗಿದೆcopy rights reserved (C)Dr.laxmi g prasad

No comments:

Post a Comment