Monday 20 October 2014

ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು 131:ಹಳ್ಳದಿಂದ ಎದ್ದು ಬಂದ ಹಳ್ಳತ್ತಾಯ-ಡಾ.ಲಕ್ಷ್ಮೀ ಜಿ ಪ್ರಸಾದ


  

copy rights reserved
ಹಳ್ಳದಿಂದ ಎದ್ದು ಬಂದ ದೈವವೇ ಹಳ್ಳತ್ತಾಯ. ಹಳ್ಳತ್ತಾಯ ದೈವದ ಕಥೆಯು ಪುರಾಣ ಹಾಗೂ ಜಾನಪದ ಐತಿಹ್ಯಗಳಿಂದ ಕೂಡಿದೆ. ಇಲ್ಲಿ ಅರಸು ದೌರ್ಜನ್ಯದ ಚಿತ್ರಣವೂ ಇದೆ ಕಾಣಿಯೂರು ಸಮೀಪದ ಚಾರ್ವಾಕದ ಕಪಿಲೇಶ್ವರ  (ಕೀರ್ತೇಶ್ವರ?)ದೇವಾಲಯದಲ್ಲಿ ಹಳ್ಳತ್ತಾಯ ದೈವಕ್ಕೆ ನೇಮ ಇದೆ.copy rights reserved © ಡಾ.ಲಕ್ಷ್ಮೀ ಜಿ ಪ್ರಸಾದ 
ಶಿವನು ಪಾರ್ವತಿಯೊಂದಿಗೆ ಕೈಲಾಸದಲ್ಲಿರುತ್ತಾನೆ. ಆಗ ಅವನ ಎಲ್ಲ ಗಣಗಳು, ಪರಿವಾರದವರು ಅವನನ್ನು ಸ್ತುತಿಸುತ್ತಿರುತ್ತಾರೆ. ವೀರಭದ್ರ ಕಾಲು ಚಾಚಿ ಕುಳಿತಿರುತ್ತಾನೆ. ಕುಂಡೋದರನೆಂಬ ಶಿವಗಣನೊಬ್ಬ ಶಿವನಿಗೆ ನಮಸ್ಕರಿಸಲೆಂದು ಹೋಗುವಾಗ ಕಾಲು ಚಾಚಿ ಕುಳಿತಿದ್ದ ವೀರಭದ್ರನನ್ನು ನೋಡದೆ ಆತನ ಕಾಲನ್ನು ತುಳಿಯುತ್ತಾನೆ. ಆಗ ಕೋಪಗೊಂಡ ವೀರಭದ್ರನು ಭೂಲೋಕದಲ್ಲಿ ನರನಾಗಿ ಹುಟ್ಟುಎಂದು ಶಾಪವನ್ನು ಕೊಡುತ್ತಾನೆ. ಆಗ ಶಿವಭಕ್ತನಾದ ಕುಂಡೋದರನು ಶಿವನನ್ನು ಪ್ರಾರ್ಥಿಸುತ್ತಾನೆ. ಆಗ ಶಿವನು ನೀನು ನರನಾಗಿ ಹುಟ್ಟಿ ಮುಂದೆ copy rights reserved © ಡಾ.ಲಕ್ಷ್ಮೀ ಜಿ ಪ್ರಸಾದ ಭೂಲೋಕದಲ್ಲಿ ಜೈನರಿಂದ ಹಾಗೂ ಬ್ರಾಹ್ಮಣರಿಂದ ಆರಾಧಿಸಲ್ಪಡುವ ದೈವವಾಗುಎಂದು ವರವನ್ನು ಕೊಡುತ್ತಾನೆ.
ಅಂತೆಯೇ ಕುಂಡೋದರನು ಕಾಡಿನ ಮರದ ಬುಡವೊಂದರಲ್ಲಿ ಮಾನವ ಶಿಶುವಾಗಿ ಹುಟ್ಟುತ್ತಾನೆ. ಬೀರು ಬೈದ್ಯ ಮರದ ಬುಡದಲ್ಲಿ ಇರುವ ಶಿಶುವನ್ನು ನೋಡಿ ಸಂತಸಗೊಳ್ಳುತ್ತಾನೆ. ಸಂತಸದಿಂದ ಮನೆಗೆ ಕರೆತಂದು ಪ್ರೀತಿಯಿಂದ ಸಾಕುತ್ತಾನೆ.copy rights reserved © ಡಾ.ಲಕ್ಷ್ಮೀ ಜಿ ಪ್ರಸಾದ 
ಆ ಮಗು ಸಾಹಸಿ, ಪರಾಕ್ರಮಿಯಾಗಿ ಬೆಳೆಯುತ್ತಾನೆ. ಆ ಕಾಲದಲ್ಲಿ ವೇಣೂರಿನಲ್ಲಿ ಭೈರವ ಅರಸರು ರಾಜ್ಯಾಡಳಿತ ನಡೆಸುತ್ತಿದ್ದರು. ಆಗ ಅವರ ರಾಜ್ಯದಲ್ಲಿ ಕಳ್ಳತನ, ದರೋಡೆ, ಮೋಸ, ಅನ್ಯಾಯ, ದಂಗೆಗಳು ನಡೆಯುತ್ತಿದ್ದವು. ಇವುಗಳ  ಉಪಟಳವನ್ನು ದೂರಮಾಡಿದವರಿಗೆ ಮಲ್ಲನೇಮ’, ‘ದೊಡ್ಡಗೌರವಕೊಡುತ್ತೇನೆ ಎಂದು ಡಂಗುರ ಸಾರಿಸುತ್ತಾರೆ.

 ಆಗ ಆ ವೀರ ಹುಡುಗ ವೇಣೂರಿಗೆ ಹೋಗಿ ಅಲ್ಲಿಯ ಕಪಟ, ದಂಗೆಗಳನ್ನು ಹತೋಟಿಗೆ ತರುತ್ತಾನೆ. ಆಗ ವೇಣೂರಿನ ಭೈರವರಸ ಅವನಿಗೆ ಸಲ್ಲಿಸಬೇಕಾದ ಗೌರವವನ್ನು ನೀದುವುದಿಲ್ಲ. ಬದಲಿಗೆ ಅವನನ್ನು ಬಿರುವಎಂದು ಅವಹೇಳನ ಮಾಡುತ್ತಾನೆ. ಆಗ ಅಂಥಹ ಕೃತಘ್ಞ ರಾಜನ ನೆಲದಲ್ಲಿ ಒಂದು ಕ್ಷಣಕೂಡ ನಿಲ್ಲಬಾರದೆಂದು ಅವನು ಅಲ್ಲಿಂದ ಹೊರಡುತ್ತಾನೆ. copy rights reserved © ಡಾ.ಲಕ್ಷ್ಮೀ ಜಿ ಪ್ರಸಾದ 
ಆಗ ಭೈರವ ಅರಸ ಆತನನ್ನು ಸೈನಿಕರ ಮೂಲಕ ಹೆಡೆಮುರಿ ಕಟ್ಟಿಸಿ ಕೆರೆಯೊಂದರಲ್ಲಿ ಹಾಕಿ ಕಲ್ಲು ಮುಳ್ಳು ಹಾಕಿ ಮುಚ್ಚುತ್ತಾರೆ. ಅವನನ್ನು ಹುಡುಕಿಕೊಂಡು ಬಂದ ತಾಯಿ ಆತನನ್ನು ಕರೆದು ಹಾಲು ಎರೆದಾಗ  ಹಳ್ಳದಿಂದ ದೈವವಾಗಿ ಎದ್ದು ಬರುತ್ತಾನೆ. 
ಹಳ್ಳದಿಂದ ಎದ್ದು ಬಂದ ಆತನನ್ನು ಹಳ್ಳತ್ತಾಯ ಎಂದು ಕರೆದು ಪೂಜಿಸುತ್ತಾರೆ. ಹಳ್ಳತ್ತಾಯ ದೈವವು ಭೈರವ ಅರಸನಿಗೆ ನಾನಾವಿಧದ ಹಾನಿಯನ್ನುಂಟು ಮಾಡುತ್ತಾನೆ. ಆಗ ಇದು ಯಾರ ಉಪಟಳವೆಂದು ತಿಳಿಯಲು ಜೋಯಿಸರನ್ನು ಕರೆಸಿ ಬಲಿಮೆಯಲ್ಲಿ ನೋಡಿದಾಗ ಇದು ಹಳ್ಳತ್ತಾಯನ ಉಪಟಳವೆಂದು ಕಂಡುಬರುತ್ತದೆ. 
ಆಗ ವೇಣೂರಿನ ಅರಸ ಹಳ್ಳತ್ತಾಯ ದೈವಕ್ಕೆ ಬಲಿಭೋಗ ಕೊಟ್ಟು ಅದನ್ನು ಶಾಂತಗೊಳಿಸುತ್ತಾನೆ. ಜೈನರು, ಬ್ರಾಹ್ಮಣರು ಹಾಗೂ ತುಳುವರು ಹಳ್ಳತ್ತಾಯ ದೈವವನ್ನು ಆರಾಧಿಸುತ್ತಾರೆ.copy rights reserved © ಡಾ.ಲಕ್ಷ್ಮೀ ಜಿ ಪ್ರಸಾದ 
 ನೆರಿಯದಲ್ಲಿ ಹಳ್ಳತ್ತಾಯಿ ಎಂಬ ದೈವದ ಆರಾಧನೆ ಇರುವ ಬಗ್ಗೆಶ್ರೀಯುತ ರಾಜಗೋಪಾಲ್ ಹೆಬ್ಬಾರ್ ನೆರಿಯ ಅವರು ತಿಳಿಸಿರುತ್ತಾರೆ.ಮಲರಾಯ >ಮಲರಾಯಿ ,ದುಗ್ಗಲಾಯ>ದುಗ್ಗಲಾಯಿ .ಮಂದ್ರಾಯ >ಮಂದ್ರಾಯಿ ಹೀಗೆಅನೇಕ ಪ್ರದೆಶದಳcopy rights reserved © ಡಾ.ಲಕ್ಷ್ಮೀ ಜಿ ಪ್ರಸಾದ ಲ್ಲಿ ಈ ದೈವಗಳ ಹೆಸರು ಹಾಗೂ ಸ್ತ್ರೀ /ಪುರುಷ ವಿನ್ಯಾಸಗಳಲ್ಲಿ ತುಸು ಪರಿವರ್ತನೆ ಗೊಂದಲಗಳು ಇವೆ .ಹಾಗೆಯೇ ಇಲ್ಲಿ ಕೂಡ ಹಳ್ಳತ್ತಾಯ ಮತ್ತು ಹಳ್ಳತ್ತಾಯಿ ದೈವಗಳು ಎರಡೂ ಒಂದೇ ಆಗಿರುವ ಸಾಧ್ಯೆತೆ ಇದೆ .
ಸೂಕ್ತ ಫೋಟೋವನ್ನು ಕಳುಹಿಸಿಕೊಟ್ಟ ಶ್ರೀಯುತ ರಾಜಗೋಪಾಲ್ ಹೆಬ್ಬಾರ ಅವರಿಗೆ ಕೃತಜ್ಞತೆಗಳು 
ಹಳ್ಳತ್ತಾಯ ದೈವದ ಬಗ್ಗೆ ಮಾಹಿತಿ ನೀಡಿದ ಶೀನ ಪರವ ಹಾಗೂ ಲೋಕೇಶ ಅವರಿಗೆ ಧನ್ಯವಾದಗಳು


No comments:

Post a Comment