Friday 10 April 2015

ಕೊಡಗಿನ ಲಿಂಗ ರಾಜೇಂದ್ರ ಒಡೆಯರ ಸ್ವಹಸ್ತಾಕ್ಷರ ಇರುವ ದಾನಪತ್ರ (ಕಾಲ ಕ್ರಿ.ಶ 1809)(c)ಡಾ.ಲಕ್ಷ್ಮೀ ಜಿ ಪ್ರಸಾದ


 copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ ಕಾವಿನ ಮೂಲೆ ಯವರು ಕೊಡಗರಸರ ಕರಣಿಕರು ಆಗಿದ್ದರು ಎಂದು ಹೇಳುದನ್ನು ಬೆಳ್ಳಾರೆ ಗೆ ಹೋದ ಹೊಸತರಲ್ಲೇ  ಕೇಳಿದ್ದೆ .ಇತ್ತೀಚಿಗೆ ಮಾರ್ಚ್ 9 ಕ್ಕೆ ನನ್ನ ಅಕ್ಕನ ಮಗ ಡಾ.ರಾಜೇಶ ರುಪಾಯಿ ಮೂಲೆಗೆ ಮದುವೆಯಾಗಿದ್ದು ,ಮದುಮಗಳು ಡಾ.ನಿತಾಶಾಳ ಅಜ್ಜನ ಮನೆ ಕಾವಿನ ಮೂಲೆ ಎಂದು ತಿಳಿಯಿತು , ಅವರ ತಾಯಿ ವಸಂತ ಲಕ್ಷ್ಮಿ ನನ್ನ ಹಳೆಯ ಸ್ನೇಹಿತರು ಕೂಡ !ಹಾಗಾಗಿ ಅವರಲ್ಲಿ ಕಾವಿನ ಮೂಲೆಯ ಬಗ್ಗೆ ವಿಚಾರಿಸಿದೆ ಆಗ ಅವರು ಅವರ ತಂದೆ ಮನೆ ಕಾವಿನ ಮೂ ಲೆಯಲಿ ಒಂದು ದಾನ ಶಾಸನ ಇರುವ ಬಗ್ಗೆ ತಿಳಿಸಿದರು ,ಹಾಗೆ ಅವರ ಸಹೋದರ ರಾಜಾರಾಮ ಭಟ್ ಕೆ ಅವರನ್ನು ಸಂಪರ್ಕಿಸಿ ಅವರ ಮನೆಗೆ ಹೋಗಿ ಮಾಹಿತಿ ಸಂಗ್ರಹಿಸಿದೆcopy  rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ


ಇದು ಇದು ಒಂದು ಅಪರೂಪದ ಅಪ್ರಕಟಿತ ದಾನ ಶಾಸನ 
 ಕಾವಿನಮೂಲೆ ರಾಜಾರಾಮ ಭಟ್ ಕೆ ಅವರ ಹಿರಿಯರಿಗೆ ಕೊಡಗರಸರು ನೀಡಿದ ಭೂಮಿಯ ಬಗ್ಗೆ ಇದರಲ್ಲಿ ಮಾಹಿತಿ ಇದೆ
ರಾಜಾರಾಮ ಭಟ್ಟರ ಕುಟುಂಬದ ಹಿರಿಯರಾದ ಸಣ್ಣಯ್ಯ ಎಂಬವರಿಗೆ ಬೆಳ್ಳಾರೆ ಗ್ರಾಮಕ್ಕೆ ಸೇರಿದ ಉಮಿಕ್ಕಳ ಎಂಬ   ಜಾಗವನ್ನು ದಾನವಾಗಿ ಕೊಟ್ಟು ಕಾಲ ಕಾಲಕ್ಕೆ ಸಲ್ಲಿಸಬೇಕಾದ ಕಂದಾಯದ ಬಗ್ಗೆ ಇದರಲ್ಲಿ ಮಾಹಿತಿ ಇದೆ .ಆರಂಭದ ಮೋಹರಿನಲ್ಲಿ ಲಿಂ ಎಂದು ಬರೆದಿದ್ದು ಕಾಲವನ್ನು 1809 ಎಂದು ನೀಡಿದೆ ಇದರಲ್ಲಿ ಲಿಂಗ ರಾಜೇಂದ್ರ ಒಡೆಯರ್ ಎಂದು ಇಂಗ್ಲಿಷ್ ಮತ್ತು ಅರೇಬಿಕ್ ನಲ್ಲಿ ಬರೆಯಲಾಗಿದೆ
ಇದರ ಕೊನೆಯಲಿ ಕೊಡಗಿನ ಲಿಂಗ ರಾಜೇಂದ್ರ ಒಡೆಯರ ಸ್ವಹಸ್ತಾಕ್ಷರ ಇದೆ


No comments:

Post a Comment