Thursday 8 October 2015

ದೊಡ್ಡವರ ಹಾದಿ ..

ದೊಡ್ಡವರ ಹಾದಿ ..

ಮೊನ್ನೆ ಐದನೇ ತಾರೀಕಿನಂದು ನಮಗೆ ಪಿ ಯು ಉಪನ್ಯಾಸಕರಿಗೆ ತರಬೇತಿ ಕಾರ್ಯಗಾರವಿತ್ತು ,ಅದಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಸಂವಹನ ಕಲೆ ಬಗ್ಗೆ ಮಾತಾಡಲು ಡಾ.ಎಸ್ ಎನ್ ಶ್ರೀಧರ ,ಕೆ ಎಸ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜ್ ನ ಪ್ರಾಂಶುಪಾಲರಾದ ಬಂದಿದ್ದರು .ಸಂವಾದ ನಡುವೆ ನಿಮ್ಮಲ್ಲಿ ಪ್ರಕಟಣೆ ಇದ್ದವರು ಯಾರಿದ್ದೀರಿ? ಎಂದು ಕೇಳಿದರು.

ಸಾಮಾನ್ಯವಾಗಿ ಸಭೆ ಸಮಾರಂಭ ತರಬೇತಿ ಕಾರ್ಯಕ್ರಮ ಎಲ್ಲೆಡೆಗಳಲ್ಲಿ ಕೊನೆಯ ಸಾಲಿನಲ್ಲಿ ಕುಳಿತು ಮೌನವಾಗಿ ಸುಮ್ಮನೆ ಕೇಳಿಸಿಕೊಳ್ಳುವ ಪ್ರತಿಕ್ರಿಯೆ ಕೊಡದೆ ಸುಮ್ಮನಿರುವ ಜಯಮಾನದವಳಾದ ನಾನು ಅಂದು ಸ್ನೇಹಿತೆಯರ ಒತ್ತಾಯಕ್ಕೆ ಕಟ್ಟು ಬಿದ್ದು ಮುಂದಿನ ಸಾಲಿನಲ್ಲಿ ಬೇರೆ ಕುಳಿತಿದ್ದೆ ,

ಅವರು ಪ್ರಕಟಣೆ ಮಾಡಿದವರು ಇದ್ದೀರಾ ಎಂದು ಕೇಳಿದಾಗ ಅಪ್ರಯತ್ನವಾಗಿ ನನ್ನ ಕೈ  ಮೇಲೆ ಎತ್ತಿದೆ ಆಗ ಅವರು ಏನು ಪ್ರಕಟ ಮಾಡಿದ್ದೀರಿ ಎಂದು ಕೇಳಿದರು ,20 ಪುಸ್ತಕಗಳನ್ನು ಪ್ರಕಟಿಸಿದ್ದೇನೆ ಸುಮಾರು 200 ಲೇಖನಗಳೂ ಪ್ರಕಟವಾಗಿವೆ ಎಂದು ಹೇಳಿದೆ ,ಆಗ ಅವರು ನನ್ನ ಪರಿಚಯ ಹೇಳಿ ಎಂದು ವೇದಿಕೆಗೆ ಕರೆದರು ,ನಾನು ಇತ್ತೀಚೆಗೆ ಬೆಂಗಳೂರಿಗೆ ವರ್ಗವನೆಯಾಗಿ ಬಂದಿದ್ದ ಕಾರಣ ಯರಿಗೂಉ ನನ್ನ ಪರಿಚಯ ಇರಲಿಲ್ಲ ಕೂಡ ಹಾಗಾಗಿ ನನ್ನ ಪರಿಚಯ ಹೇಳಿ ಎರಡು ಡಾಕ್ಟರೇಟ್ ಪದವಿ ಗಳಿಸಿದ ಬಗ್ಗೆ ಹಾಗೆ ನನ್ನ ಸಂಶೋಧನೆ ಪ್ರಕಟಿತ ಪುಸ್ತಕಗಳು ಬರವನೆಗೆಯ ಹವ್ಯಾಸ ಬಗ್ಗೆ ಹಾಗೂ ಬ್ಲಾಗ್ ಬಗ್ಗೆ ಹೇಳಿದೆ

ನನ್ನ ಸುಬ್ಬಿ ಇಂಗ್ಲಿಷ್ ಕಲ್ತದು ಮತ್ತು ಇತರ ನಾಟಕಗಳು ಕೃತಿ ನನ್ನ ಕೈಯಲ್ಲಿತ್ತು ಅದನ್ನು ಡಾ.ಎಸ್ ಎಸ್ ಶ್ರೀಧರ್ ಅವರಿಗೆ ನೀಡಿದ್ದೆ ,ಇಂಜಿನಿಯರಿಂಗ್ ಕಾಲೇಜ್ ಪ್ರಿನ್ಸಿಪಾಲ್ ಆಗಿರುವ ಅದನ್ನೆಲ್ಲ ಓದಲಾರರು ಎಂದು ಕೊಂಡಿದ್ದೆ ನಾನು ಆದರೆ ದೊಡ್ಡವರು ಅವರ ದೊಡ್ಡ ಗುಣಗಳಿಂದಲೇ ಗುರುತಿಸಲ್ಪಡುತ್ತಾರೆ ಎಂದು ಇಂದು ನಾನು ಬ್ಲಾಗ್ ನೋಡಿದಾಗ ತಿಳಿಯಿತು .ಅವರು ನನ್ನ ಬ್ಲಾಗ್ ಬರಹಗಳನ್ನು ಓದಿ ಹೀಗೆ ಪ್ರತಿಕ್ರಿಯೆ ನೀಡಿದ್ದರು ಡಾ. ಲಕ್ಶ್ಮಿ ಪ್ರಸಾದ್,

ನೀವು ನನಗೆ ಕೊಟ್ಟ ನಿಮ್ಮ ಪುಸ್ತಕ ಓದಿದೆ. ನಿಮ್ಮ ಬರಹಗಳು ಚೆನ್ನಾಗಿ ಮೂಡಿ ಬಂದಿವೆ. ಹಾಗೇ ನಿಮ್ಮ ಈ ಬ್ಲಾಗಿನಲ್ಲಿ ನಿಮ್ಮ ಸಾಧನೆಯನ್ನೂ ಓದಿದೆ. ಸಮಾಜದಲ್ಲಿ ಈ ರೀತಿ ನಿಮಗೆ ಛಾಲೆಂಜ್ ಮಾಡುವರು ಯಾವಗಲೂ ಇರುತ್ತಾರೆ. ತಾವು ಹೀಗಿರುವಂತೆಯೇ ಮುಂದೆಯೂ ಸಹ ಅವನ್ನು ಸ್ವೀಕರಿಸಿ, ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ.

ಇಂತಿ ನಿಮ್ಮ ವಿಶ್ವಾಸಿ,
ಡಾ. ಎಸ್. ಎನ್. ಶ್ರೀಧರ

ಅವರ ಸೌಜನ್ಯಯುತ ನಡವಳಿಕೆಗೆ ನಿಜಕ್ಕೂ ಬೆರಗಾದೆ .ಇದೆ ರೀತಿ ಈ ಹಿಂದೆ ನನ್ನ ಬರಹಗಳನ್ನು ಓದಿ ಡಾ.ಪುರುಷೋತ್ತಮ ಬಿಳಿಮಲೆ ,ಡಾ.ವಿವೇಕ ರೈ ,ಡಾ.ವಾಮನ ನಂದಾವರ .ಡಾ.ತಿಮ್ಮಪ್ಪ ಅವರು ಕೂಡ ಪ್ರತಿಕ್ರಿಯಿಸಿದ ಬಗ್ಗೆ ನೆನಪಾಯಿತು ,ದೊಡ್ಡವರು ಅವರ ದೊಡ್ಡ ಗುಣಗಳನ್ನು ಎಂದೂ ಬಿಡುವುದಿಲ್ಲ ಅಲ್ಲವೇ ?

No comments:

Post a Comment