Friday 29 April 2016

ಸಾವಿರದೊಂದು ಗುರಿಯೆಡೆಗೆ:306 ತುಳುನಾಡ ದೈವಗಳು -ಪೋಲಿಸ್ ತೆಯ್ಯಂ -ಡಾ.ಲಕ್ಷ್ಮೀ ಜಿ ಪ್ರಸಾದ






 ಚಿತ್ರ ಕೃಪೆ :kcn ಮತ್ತು ಮನೋಜ್ ಕುಂಬ್ಳೆ

ತುಳುವರ ಭೂತಾರಾಧನೆ ಒಂದು ಅನನ್ಯ ಸಂಸ್ಕೃತಿ ,ಇಲ್ಲಿ ಯಾರು ಯಾವಾಗ ಹೇಗೆ ಯಾಕೆ ದೈವತ್ವ ಪಡೆಯುತ್ತಾರೆ ಎಂಬುದಕ್ಕೆ ಒಂದು ಸಿದ್ಧ ಸೂತ್ರವಿಲ್ಲ .ಅದಕ್ಕೆ ಜಾತಿ ಧರ್ಮ ದೇಶದ ಗಡಿ ಕೂಡ ಇಲ್ಲ
ಅನೇಕ ಅಧಿಕಾರಿಗಳು ಕೂಡ ಇಲ್ಲಿ ದೈವತ್ವ ಪಡೆದಿರುವುದು ಅಲ್ಲಲ್ಲಿ ಕಂಡು ಬಂರುತ್ತದೆ .ಮಂಜೇಶ್ವರ ದ ಮೀಯ ಪದವು  ಸಮೀಪದ ಪೊಳ್ಳ ಕಜೆ ಎಂಬಲ್ಲಿ ಬ್ರಿಟಿಶ್ ಸುಭೇದಾರನೊಬ್ಬ ದೈವತ್ವ ಪಡೆದು ಕನ್ನಡ ಬೀರ ಎಂಬ ದೈವವಾಗಿ ನೆಲೆ ನಿಂತಿದ್ದಾನೆ ,
ಅಂತೆಯೇ ಉಡುಪಿ -ಕಾಪಿನಲ್ಲಿ ಗುರಿಕ್ಕಾರ ಸೇನವ ಪಟೇಲ ,ಪೋಲಿಸ್ ,ಕಳ್ಳ ಭೂತಗಳಿಗೆ ಆರಾಧನೆ ಇದೆ ,
ಕಾಸರಗೋಡು ಪರಿಸರದಲ್ಲಿ ಒಂದು ಪೋಲಿಸ್ ಭೂತಕ್ಕೆ ಆರಾಧನೆ ಇದೆ .ಇದು ಮಲಯಾಳ ಪರಿಸರದಲ್ಲಿ ಆರಾಧನೆ ಗೊಳ್ಳುತ್ತಿದ್ದು ಈ ದೈವವನ್ನು ಪೋಲಿಸ್ ತೆಯ್ಯಂ ಎಂದು ಕರೆದಿದ್ದಾರೆ ತುಳುವರ ದೈವ  ಪದ ಮಲಯಾಳದಲ್ಲಿ ತೆಯ್ಯಂ ಎಂದು ಬಳಕೆಯಾಗುತ್ತದೆ ,
ಕಾಸರಗೋಡು ಸಮೀಪದಲ್ಲಿರುವ ಪದನ್ನಕ್ಕಡ್ ಪಾನುಕ್ತಾಯತ್ ತರವಾಡು ಕುಟುಂಬದಲ್ಲಿ ಕರಿ ಚಾಮುಂಡಿ ದೈವದ ಆರಾಧನೆ ಸಮಯದಲ್ಲಿ ಪೋಲಿಸ್ ತೆಯ್ಯಂ ಗೆ ಆರಾಧನೆ ಮಾಡುತ್ತಾರೆ .(C).ಡಾ.ಲಕ್ಷ್ಮೀ ಜಿ ಪ್ರಸಾದ
ಹಿಂದೆ ಈ ಮನೆತನಕ್ಕೆ ಸೇರಿದ ಹಿರಿಯರಾದ ಎಡಚೇರಿ ಕಾರ್ನವೆರ್ ಕರಿಚಾಮುಂಡಿ ದೈವದ ಕಳಿಯಾಟ (ಮಲಯಾಳದಲ್ಲಿ ಭಗವತಿ ಹಾಗು ಇತರ ದೈವಗಳಿಗೆ ನಡೆಸುವ ವೈಭವದ ಕೋಲ /ನೇಮದ ಒಂದು ಪ್ರಕಾರ  ಕಳಿಯಾಟ   ) ನೋಡಲು ಹೋಗುತ್ತಾರೆ .ಅಲ್ಲಿನ ಭಕ್ತಿ ವೈಭವವನ್ನು ನೋಡಿ ಅವರು "ತಮ್ಮ ತರವಾಡಿನಲ್ಲಿ ಕೂಡ ಇಂಥಹ ಒಂದು ಕಳಿಯಾಟ ಉತ್ಸವ ನಡೆಯಬೇಕು ಎಂದು ಕರಿ ಚಾಮುಂಡಿ ದೈವದಲ್ಲಿ ಅರಿಕೆ ಮಾಡಿಕೊಳ್ಳುತ್ತಾರೆ .
ಅಲ್ಲಿಂದ ದೈವಗಳ ಅನುಗ್ರಹ ಪಡೆದು ತಮ್ಮ ಮನೆಗೆ ಹಿಂದಿರುಗುತ್ತಾರೆ .
ಹಿಂತಿರುಗಿ ಬರುವ ದಾರಿಯಲ್ಲಿ ನಾಯನ್ಮಾರೆರ್ ನಡುವೆ ಯಾವುದೊ ಕಾರಣಕ್ಕೆ ವಿವಾದ ಉಂಟಾಗಿ ಹೊಡೆದಾಟ ಆಗುತ್ತದೆ .ಅದನ್ನು ಬಿಡಿಸಲೆಂದು ಬಂದ ಪೋಲಿಸ್ ಒಬ್ಬಾತನಿಗೆ ಕತ್ತಿಯ ಏಟು ಬಿದ್ದು ಆಟ ನೆಲದಲ್ಲಿ ಬಿದ್ದು ಹೊರಳಾಡುತ್ತಿರುತ್ತಾನೆ.ಅವನನ್ನು ತನ್ನ ಮಡಿಲಲ್ಲಿ ಮಲಗಿಸಿ ನೀರು ಕುಡಿಸಿ ಉಪಚಾರ ಮಾಡುತಾರೆ ದಯಾಳುವಾದ ಎಡಚೇರಿ ಕಾರ್ನವೆರ್.ಅವರು ನೀಡಿದ ನೀರನು ಕುಡಿದು ಆ ಪೋಲಿಸ್ ಅಲ್ಲಿಯೇ ಸಾವನ್ನಪ್ಪುತ್ತಾನೆ.
ಅಲ್ಲಿನದ ಅವರು ತಮ್ಮ ತರವಾಡು  ಮನೆಗೆ ಬರುತ್ತಾರೆ.
ಅಲ್ಲಿ ಅವರಿಗೆ ಕರಿಚಾಮುಂಡಿ ದೈವದ ಸಾನ್ನಿಧ್ಯ ದ ಅರಿವಾಗುತ್ತದೆ.ಜೊತೆಗೆ ಪೋಲಿಸ್ ಕೂಡ ದೈವತ್ವ ಪಡೆದು ದೈವವಾಗಿ ಕರಿಚಮುಂಡಿ ಸೇರಿಗೆಯಲ್ಲಿರುವುದು ಅವರಿಗೆ ತಿಳಿದು ಬರುತ್ತದೆ .
ಅವರು  ಕರಿಚಾಮುಂದಿಗೆ ಕಳಿಯಾಟ ಮೂಲಕ ಆರಧಿಸುವಾಗ ಪೋಲಿಸ್ ತೆಯ್ಯಂ ಗೆ ಕೂಡ ಕೋಲ ಕೊಟ್ಟು ಆರಾಧಿಸುತ್ತಾರೆ.
ಮುಂದೆ ಅವರ ಕುಟುಂಬದವರು ಈ ಪರಂಪರೆಯನ್ನು ಮುಂದುವರಿಸಿದರು
ಪೋಲಿಸ್ ತೆಯ್ಯಂ ತನ್ನ ಮೂಲ ವೃತ್ತಿಗೆ ಅನುಗುಣವಾಗಿ ಬೀಡಿ ಸೇದಿದವರನ್ನು ಹಿಡಿದು ಶಿಕ್ಷಿಸುವುದು ,ಜನ ಗುಂಪು  ಸೇರಿದಾಗ ಅವರನ್ನುಚದುರಿಸಿ  ಓಡಿಸಿ ದೂರ ಮಾಡುವುದೇ ಮೊದಲಾದ ಅಭಿನಯವನ್ನು ಮಾಡುತ್ತದೆ ,ಪೂರ್ತಿಯಾಗಿ ಪೋಲಿಸ್ ra ವೇಷ ಭೂಷಣ ಈ ದೈವಕ್ಕೆ ಇರುತ್ತದೆcopy rights reserved  - -ಡಾ.ಲಕ್ಷ್ಮೀ ಜಿ ಪ್ರಸಾದ
ಮಾಹಿತಿ ಮೂಲ .kasaragodunews internet portal
http://kasaragodchannel.com/%E0%B4%AA%E0%B5%8B%E0%B4%B2%E0%B5%80%E0%B4%B8%E0%B5%8D-%E0%B4%A4%E0%B5%86%E0%B4%AF%E0%B5%8D%E0%B4%AF%E0%B4%82-%E0%B4%85%E0%B4%B0%E0%B4%99%E0%B5%8D%E0%B4%99%E0%B4%BF%E0%B4%B2%E0%B5%86%E0%B4%A4%E0%B5%8D/

ಕನ್ನಡಕ್ಕೆ ಸಂಗ್ರಹಾನುವಾದ ಮಾಡಿ ಕೊಟ್ಟ ಶ್ರೀ ಶಂಕರ್ ಕುಂಜತ್ತೂರು ಇವರಿಗೆ ಕೃತಜ್ಞತೆಗಳು


  

Thursday 28 April 2016

ಸಾವಿರದೊಂದು ಗುರಿಯೆಡೆಗೆ:305 ತುಳುನಾಡ ದೈವಗಳು-ಮುಂಡಂತಾಯ (c)ಡಾ.ಲಕ್ಷ್ಮೀ ಜಿ ಪ್ರಸಾದ

 

ಒಂದೇ ದೈವ ಪ್ರಾದೇಶಿಕವಾಗಿ ಬೇರೆ ಬೇರೆ ಹೆಸರುಗಳಲ್ಲಿ ಆರಾಧನೆ ಹೊಂದುತ್ತದೆ ಎಂಬುದು ಒಂದು ಸಾಮಾನ್ಯವಾದ ವಾದ .ಆದರೆ ಹೆಸರು ಒಂದೇ ಇದ್ದರೂ ಅರಧಿಸಲ್ಪಡುವ ದೈವಗಳು ಬೇರೆ ಬೇರೆ ಆಗಿರುವ ಬಗ್ಗೆ ಅನೇಕ ಕಡೆ ಮಾಹಿತಿಗಳು ಸಿಗುತ್ತವೆ ,ಉದರ ಚಾಮುಂಡಿ ಗುಡ ಚಾಮುಂಡಿ ಕೆರೆ ಚಾಮುಂಡಿ ಕರಿ ಚಾಮುಂಡಿ ಎಲ್ಲವೂ ಒಂದೇ ದೈವದ ಬೇರೆ ಬೇರೆ ಹೆಸರುಗಳಲ್ಲ .ಹೆಸರು ಒಂದೇ ಆಗಿದ್ದರೂ ಇವುಗಳು ಬೇರೆ ಬೇರೆ ದೈವತಗಳಾಗಿವೆ .ಹೆಸರು ಒಂದೇ ಇದ್ದರೂ ಬೇರೆ ಬೇರೆ ಶಕ್ತಿಗಳ ಆರಾಧನೆ ತುಳುನಾಡಿನಲ್ಲಿ ಇರುವ ಬಗ್ಗೆ ಅನೇಕ ಆಧಾರಗಳು ನಿದರ್ಶನಗಳು ಸಿಕ್ಕಿವೆ  . ಇದಕ್ಕೆ  ಒಂದು ನಿದರ್ಶನ ಕಮಲ ಶಿಲೆಯ ಮುಂಡಂತ್ತಾಯ ದೈವದ ಆರಾಧನೆ .
ತುಳುನಾಡಿನಲ್ಲಿ ಮುಡದೇರ್ ಕಾಲ ಭೈರವ ,ಮುಂಡತ್ತಾಯ,ಹೆಸರಿನ ದೈವ ಬಹಳ ಪ್ರಸಿದ್ಧವಾದುದು .ಮೂಡು ದಿಕ್ಕಿನಿಂದ ಇಳಿದ ಬಂದ ಕಾರಣ ಮುಂಡತ್ತಾಯ ಎಂಬ ಹೆಸರು ಬಂತು ಶಿವನ ಹಣೆಯಿಂದ ಎಂದರೆ ಮುಂಡದಿನದ ಉದಿಸಿದ ಕರಣ ಮುಂಡತ್ತಾಯ ಎಂಬ ಹೆಸರು ಬಂತು ಇತ್ಯಾದಿಯಾಗಿ ಅನೇಕ ಅಭಿಪ್ರಾಯಗಳಿವೆ ,
ಆದರೆ ಕಮಲಶಿಲೆಯ ದೇವಾಲಯದಲ್ಲಿ ಆರಾಧಿಸಲ್ಪಡುವ ಮುಂಡಂತಾಯ ಮುಂಡತ್ತಾಯ ದೈವವಲ್ಲ ಇದು ಬೇರೆಯೇ ಒಂದು  ದೈವ .(C).ಡಾ.ಲಕ್ಷ್ಮೀ ಜಿ ಪ್ರಸಾದ
"ಈತ ಮೂಲತ ಓರ್ವ ಮಲಯಾಳ ತಂತ್ರಿ .ದೇವಿಯ ಅನುಗ್ರಹವನ್ನು ಪಡೆದಿರುತ್ತಾನೆ.ಮುಂದೆ ದೈವತ್ವ ಪಡೆದು ಅಲ್ಲಿ ಆರಾಧಿಸಲ್ಪಡುತ್ತಾನೆ"ಎಂಬ ಮಾಹಿತಿಯನ್ನು ಶ್ರೀಯುತ ರವೀಶ ಆಚಾರ್ಯ ಅವರು ನೀಡಿದ್ದಾರೆ .
ಸಾಮಾನ್ಯವಾಗಿ ದೇವರ ಅನುಗ್ರಹಕ್ಕೆ ಪಾತ್ರರಾದವರು ದೇವಾಲಯ ಕಟ್ಟಿಸಿದವರು ದೈವತ್ವ ಪಡೆದು ಆರಾಧಿಸಲ್ಪಡುವ ವಿಚಾರ ಅನೇಕ ಕಡೆ ಕಾಣಿಸಿಕೊಂಡಿದೆ ,ಕಾನಲ್ತಾಯ ಕೂಡ ಮೂಲತ ಓರ್ವ ಬ್ರಾಹ್ಮಣ ಮಂತ್ರವಾದಿ ಕಾಳಿಕಾಂಬೆಯ ಅನುಗ್ರಹ ಪಡೆದು ದೈವತ್ವ ಪಡೆದು ಆರಾಧಿಸಲ್ಪಡುವ ದೈವತ
ಅಂತೆಯೇ ಕಮಲಾ ಶಿಲೆಯ ದೇವಿಯ ಅನುಗ್ರಹ ಪಡೆದ ಮಲಯಾಳ ತಂತ್ರಿ ದೈವತ್ವ ಪಡೆದು ಆರಧಿಸಲ್ಪತ್ತಿರುವ ಸಾಧ್ಯತೆ ಇದೆ
ಕಮಲ ಶಿಲೆ ದೇವಾಲಯದಲ್ಲಿ ಮುಂಡಂತಾಯ ನ ಒಂದು ಮೂರ್ತಿ ಇದೆ ಇದು ಕುದುರೆ ಏರಿದ ವೀರನಂತೆ ಕಾಣಿಸುತ್ತದೆ .ಒಂದು ಕೈಯಲ್ಲಿ ನವಿಲು ಗಿರಿಯ ಕಟ್ಟನ್ನು,ಇನ್ನೊಂದು ಕೈಯಲ್ಲಿ ಮಂತ್ರ ದಂಡವನ್ನು ಹಿಡಿದ ಕುದುರೆ ಏರಿದ ಮೂರ್ತಿ ಇದು'ಕುದುರೆ ಏರಿರುವುದು ಈತ ಮೂಲತ ಅರಸು ಆಗಿದ್ದನೆ ?ಎಂಬ ಸಂಶಯ ಉಂಟುಮಾಡುತ್ತದೆ .
ಸಾಮಾನ್ಯವಾಗಿ ದೇವಾಲಯವನ್ನು ಕಟ್ಟಿಸಿದ ಅರಸುಗಳ ಒಂದು ವಿಗ್ರಹವನ್ನು ದೇವಾಲಯದ ಒಂದು ಕಡೆಪ್ರತಿಷ್ಟಾಪಿಸಿ ದೈವದ ನೆಲೆಯಲ್ಲಿ ಆರಾಧಿಸುವುದುಕಂಡುಬರುತ್ತದೆ ,ಕಾರಿಂಜೇಶ್ವರ ದೇವಾಲಯವನ್ನು ಕಟ್ಟಿಸಿದ ಬ್ರಾಹ್ಮ ಕಾರಿಂಜೆತ್ತಾಯ ಎಂಬ ದೈವವಾಗಿ ಅಲ್ಲಿ ಆರಧಿಸಲ್ಪದುತ್ತಾ ಇದ್ದಾನೆ ಅಂತೆಯೇ ಸುಳ್ಯ ಚೆನ್ನ ಕೇಶವ ದೇವಾಲಯವನ್ನು ಕಟ್ಟಿದ ಬಲ್ಲಾಳ ಅರಸು ಚೆನ್ನಿಗರಾಯ ನಿಗೆ ಅಲ್ಲಿ ಆರಾಧನೆ ಇದೆ(C).ಡಾ.ಲಕ್ಷ್ಮೀ ಜಿ ಪ್ರಸಾದ
ಹಾಗೆಯೇ ಕಮಲಾ ಶಿಲೆಯ ದೇವಾಲಯವನ್ನು ಕಟ್ಟಿಸಿದಾತನೆ ಮುಂಡತ್ತಾಯ/ಮುಂಡಂತಾಯ ಎಂಬಹೆಸರಿನಲ್ಲಿದೈವತ್ವಪಡೆದುಆರಾಧಿಸಲ್ಪಡುವ ಸಾಧ್ಯತೆ ಇದೆ 
ಈಬಗ್ಗೆ ಹೆಚ್ಚಿನ ಮಾಹಿತಿ ಇದ್ದವರು ತಿಳಿಸಬೇಕಾಗಿ ವಿನಂತಿ
ಮಾಹಿತಿ  ಮತ್ತು ಚಿತ್ರವನ್ನು ನೀಡಿದ ರವೀಶ ಆಚಾರ್ಯ ಅವರಿಗೆ ಧನ್ಯವಾದಗಳು