Sunday 4 March 2018

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು: 429 - ಕಾಜಿಗಾರ್ತಿ© ಡಾ.ಲಕ್ಷ್ಮೀ ಜಿ ಪ್ರಸಾದ

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು: 429 - ಕಾಜಿಗಾರ್ತಿ© ಡಾ.ಲಕ್ಷ್ಮೀ ಜಿ ಪ್ರಸಾದ
ತುಳುವಿನಲ್ಲಿ ಕಾಜಿ ಎಂದರೆ ಬಳೆ ಎಂದರ್ಥ.ಇಲ್ಲಿ ಬಳೆ ಮಾರುವ ಮಹಿಳೆಯರು ಇದ್ದಾರೆ.ಇವರನ್ನು ಕಾಜಿಗಾರ್ತಿ ಎಂದು ತುಳುವಿನಲ್ಲಿ ಕರೆಯುತ್ತಾರೆ.
ಈ ದೈವದ ಹೆಸರೇ ಸೂಚಿಸುವಂತೆ ಇದು ಮೂಲತಃ ಮಾನವ ಮೂಲದ ದೈವತ.ಬಳೆಗಾರರ ಸಮುದಾಯದ ಮಹಿಳೆ.
ತುಳುನಾಡಿನಲ್ಲಿ ಯಾರಿಗೆ ಯಾವಾಗ ಯಾಕೆ ದೈವತಗವ ಸಿಗುತ್ತದೆ ಎಮಬುದಕ್ಕೆ ಇದಮಿತ್ಥಂ ಎಂದು ಹೇಳ ಬಹುದಾದ ಸಿದ್ಧ ಸೂತ್ರವಿಲ್ಲ.
ಅಪ್ರತಿಮ ಸಾಹಸ ಮೆರೆದ ಅತಿ ಮಾನುಷ ವ್ಯಕ್ತಿಗಳು ದೈವಗಳಾಗಿದ್ದಾರೆ.ಅಂತೆಯೇ ವರ್ಗ ಜಾತಿ ತಾರತಮ್ಯ ವನ್ನು ಪ್ರಶ್ನಿಸಿದವರು ಪ್ರಧಾನ ದೈವಗಳ ಕೋಪಕ್ಕೆ ಅಥವಾ ಅನುಗ್ರಹಕ್ಕೆ ಪಾತ್ರರಾದವರು ದೈವತ್ವ ಪಡೆದು ಆರಾಧನೆ ಪಡೆಯುತ್ತಾರೆ.
ಇಂತಹ ಯಾವುದೇ ಕಾರಣ ಇಲ್ಲದೇ ಇರುವ ಸಾಮಾನ್ಯರು ಕೂಡ ಪ್ರಧಾನ ದೈವದ ದೃಷ್ಟಿ ತಾಗಿ ಮಾಯಕ ಹೊಂದಿ ಅದೇ ದೈವದ ಸೇರಿಗೆಗೆ ಸಂದು ಆರಾಧನೆ ಪಡೆಯುತ್ತಾರೆ. ಕಬಕ ಬೈಪ್ಪದವಿನಲ್ಲಿ ಅಣ್ಣಪ್ಪ ಪಂಜುರ್ಲಿಯ ದೃಷ್ಟಿ ಬಿದ್ದು ಮಲೆ ಕುಡಿಯರ ಎಳೆಯ ಹುಡುಗಿ ಕುಂಞಿ ಕೆರೆಗೆ ಸ್ನಾನಕ್ಕೆ ಹೋದವಳು ಮಾಯಕ ಹೊಂದಿ ಅಣ್ಣಪ್ಪ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧಿಸಲ್ಪಡುತ್ತಾಳೆ.ಅದೇ ರೀತಿ ಹರಿಕೆ ತೀರಿಸಲು ಬಂದ ಸುಂದರ ಯುವತಿ ದಾರುವಿನ ಮೇಲೆ ದೃಷ್ಟಿ ಇಟ್ಟ ವರ್ನಾರ ಪಂಜುರ್ಲಿ ಆಕೆಯನ್ನು ಹಿಂಬಾಲಿಸಿ ಮಾಯಕ ಮಾಡಿ ತನ್ನ ಸೇರಿಗೆಗೆ ಸಮದಾಯ ಮಾಡಿಕೊಳ್ಳುತ್ತದೆ‌ ದಾರು ಮತ್ತು ಆಕೆಯ ತಮ್ಮ ಕುಂದಯ ಇಬ್ಬರೂ ಕೂಡ ವರ್ನಾರ ಮರ್ಲೆ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧನೆ ಪಡೆಯುತ್ತಾರೆ.
ಹಾಗೆಯೇ ಕಾಜಿಗಾರ್ತಿ ದೈವದ ಹಿನ್ನೆಲೆಯಲ್ಲಿ ಕೂಡ ಇಂತಹದುದೇ ಕಥಾನಕ ಪ್ರಚಲಿತವಿದೆ.
ಕಲ್ಲಡ್ಕ ಸಮೀಪ ಲಕ್ಷ್ಮೀ ಕೆರೆ ಎಂಬ ಕೆರೆ ಇದೆ‌.ಇಲ್ಲಗೆ ಸಮೀಪದಲ್ಲಿ ಪಂಜುರ್ಲಿ ದೈವದ ಕೋಲ ಆಗುತ್ತಾ ಇರುತ್ತದೆ‌.ಆಗ ಕೆರೆ ಸಮೀಪದಲ್ಲಿ ಬಳೆ ಮಾರುತ್ತಾ ಓರ್ವ ಮಹಿಳೆ ಬರುತ್ತಾಳೆ.ಅ ಸಮಯದಲ್ಲಿ ಎದ್ದು ನಿಂತು ಪಂಜುರ್ಲಿ ದೈವ ಈ ಕಾಜಿಗಾರ್ತಿ ಮೇಲೆ ದೃಷ್ಟಿ ಇಡುತ್ತದೆ‌.ಆಗ ಅ ಬಳೆ ಮಾರುವ ಮಹಿಳೆ ಲಕ್ಷ್ಮೀ ಕೆರೆಯಲ್ಲಿ ಮಾಯಕ ಹೊಂದಿ ಪಂಜುರ್ಲಿ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಕಾಜಿಗಾರ್ತಿ ದೈವವಾಗಿ ಆರಾಧನೆ ಪಡೆಯುತ್ತಾಳೆ.
 ದುರಂತ ಮತ್ತು ದೈವತ್ವ ತುಳು ಸಂಸ್ಕೃತಿಯ ಅವಿಭಾಜ್ಯ ಅಂಗಗಳು.ಲಕ್ಷ್ಮೀ ಕೆರೆಯಲ್ಲಿ ಮುಳುಗಿಯೊ ಇನ್ನೆನೋ ಆಗಿ ದುರಂತವನ್ನಪ್ಪಿದ ಸಮಯದಲ್ಲಿ ಪಂಜುರ್ಲಿ ದೈವದ ಕೋಲ ನಡೆಯುತ್ತಿದ್ದು ,ದೈವದ ಕಾರಣಿಕದಿಂದ ಅಕೆ ದೈವತ್ವ ಪಡೆದು ಆರಾಧಿಸಲ್ಪಟ್ಟಿರಬಹುದು.
ಮಾಹಿತಿ ನೀಡಿದ ನಿತೇಶ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು
© ಡಾ.ಲಕ್ಷ್ಮೀ ಜಿ ಪ್ರಸಾದ

No comments:

Post a Comment