Tuesday 12 March 2019

ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು 434 ಪಾಂಡಿ ಅಜ್ಜೆರ್

ತುಳುನಾಡಿನಲ್ಲಿ ಯಾರಿಗೆ ಯಾಕೆ ಯಾವಾಗ ದೈವತ್ವ ಸಿಗುತ್ತದೆ ಎಂಬುದಕ್ಕೆ ಒಂದು ಸಿದ್ಧ ಸೂತ್ರವಿಲ್ಲ ,ಅನೇಕರು ಪ್ರಧಾನ ದೈವಗಳ ಅನುಗ್ರಹಕ್ಕೆ  ಪಾತ್ರರಾಗಿ ಅದೇ ದೈವದ ಸೇರಿಗೆಗೆ ಸಂದು ದೈವವಾಗಿ ಆರಾಧನೆ ಪಡೆದಿದ್ದಾರೆ.ಅಕ್ಕಚ್ಚು,ಜಾನು ನಾಯ್ಕ ,ಅಡ್ಕತ್ತಾಯ ಮೊದಲಾದವರು ಈ ರೀತಿಯಲ್ಲಿ ದೈವತ್ವ ಪಡೆದು ಆರಾಧನೆ ಹೊಂದಿದವರು.
ಪಾಂಡಿ ಬೈದ್ಯ ಕೂಡ ಇದೇ ರೀತಿಯಲ್ಲಿ ಪ್ರಧಾನ ದೈವ ನಾಲ್ಕೈತ್ತಾಯನ ಅನುಗ್ರಹದಿಂದ ದೈವತ್ವ ಪಡೆದವರು.
ಪಾಣೆ ಮಂಗಳೂರಿನ ಕೆದ್ದೇಲ್ ಗುತ್ತಿನ ಮೂಲ‌ಪುರುಷ ಪಾಂಡಿ ಬೈದ್ಯ/ ಪೂಜಾರಿ .ಇಲ್ಲಿನ ಗ್ರಾಮ ದೈವ ನಾಲ್ಕೈತ್ತಾಯ.ನಾಲ್ಕೈತ್ತಾಯ ದೈವದ ಆರಾಧನೆಯನ್ನು ಮಾಡಿದ ಪಾಂಡಿ ಪೂಜಾರಿ ಪಾಂಡಿ ಅಜ್ಜೆರ್ ಎಂಬ ಹೆಸರಿನಲ್ಲಿ ಆರಾಧನೆ ಪಡೆಯುತ್ತಾರೆ‌.
ಆಧಾರ : ತುಳುನಾಡ ಬಿಲ್ಲವರು - ರಮಾನಾಥ್ ಕೋಟೆಕಾರ್
ತುಳುಪಾಡ್ದನಗಳಲ್ಲಿ ಬಿಲ್ಲವರು - ಸಂಕೇತ್ ಪೂಜಾರಿ 

No comments:

Post a Comment