Friday 15 November 2019

ಸಾವಿರದೊಂದು ಗುರಿಯೆಡೆಗೆ : ತುಳುನಾಡ ದೈವಗಳು 446 ಉಪ್ರಝಾಸ್ಸಿ ತೆಯ್ಯಂ

ಉಪ್ರಝಾಸ್ಸಿ ದೈವವನ್ನು ವಿಷ್ಣುವಿನ ಅವತಾರವೆಂದು ಕರೆಯುತ್ತಾರೆ.
ಮೆಲರಿಲಮ್ ಎಂಬ ಕನ್ಯೆ ವಿಷ್ಣುವಿನ ಅನನ್ಯ ಭಕ್ತೆಯಾಗಿದ್ದಳು.ಅವಳು ವಿಷ್ಣು ದೇವರ ಅನುಗ್ರಹದಿಂದ ಅವನ ಅಂಶವನ್ನು ಪಡೆದಿರುವ ಒಬ್ಬ ಮಗನನ್ನು ಪಡೆಯುತ್ತಾಳೆ. ವಿಷ್ಣುವಿನ ದಯೆಯಿಂದ ಹುಟ್ಟಿದ  ಆ ಮಗುವನ್ನು ದಯಾರಪ್ಪನ್ ಎಂದು ಹೆಸರಿಸುತ್ತಾರೆ‌.ದೈವಿಕ ಶಕ್ತಿಯಿರುವ ಆ ಮಗು ಅನೇಕ ಪವಾಡಗಳನ್ನು ಮಾಡುತ್ತದೆ‌.ಅವನು ಬೆಳೆದು ದೊಡ್ಡವನಾಗಿ ಯುವಕನಾದಾಗ ಅನೇಕ ದುಷ್ಟ ಶಕ್ತಿಗಳನ್ನು ಶಿಕ್ಷಿಸಿ ದೂರ ಮಾಡುತ್ತಾನೆ. ಅವನು ದೊಡ್ಡ ವೀರನಾಗುತ್ತಾನೆ
ನಂತರ ಅವನು ವೇಟಕ್ಕೋರು ಮಗನ್ ಎಂಬ ವೀರನನ್ನು ಬಾಲುಸ್ಸೇರಿ ಕೋಟೆಯಲ್ಲಿ ಭೇಟಿಯಾಗುತ್ತಾನೆ‌‌.ನಂತರ ಉಪ್ರಝಾಸ್ಸಿ ಎಂಬ ಪ್ರದೇಶದಲ್ಲಿ ನೆನೆಯಾಗುತ್ತಾನೆ‌.ಕಾಲಾಂತರದಲ್ಲಿ ವೀರನಾದ ಆತ ದೈವತ್ವ ಪಡೆದು ಆರಾಧನೆ ಪಡೆಯುತ್ತಾನೆ‌.ಆತ ಉಪ್ರಝಾಸ್ಸಿಯಲ್ಲಿ ನೆಲೆಸಿದ ಕಾರಣ ಆತನನ್ನು ಉಪ್ರಝಾಸ್ಸಿ  ತೆಯ್ಯ /ದೈವ ಎಂದು ಕರೆದು ಭಕ್ತಿಯಿಂದ ಆರಾಧಿಸುತ್ತಾರೆ.

No comments:

Post a Comment