Tuesday 28 July 2015

ಹೆಜ್ಜೆ ಮೂಡದ ಹಾದಿಯಲ್ಲಿ ನನಗೊಂದು ಗುರುತು : ಡಾ.ಲಕ್ಷ್ಮೀ ಜಿ ಪ್ರಸಾದ

   

ನಾನು ಡಾ.ಲಕ್ಷ್ಮೀ ಜಿ ಪ್ರಸಾದ 

 ಮೂರು-ನಾಲ್ಕು  ವರ್ಷಗಳ ಹಿಂದೆ ನನಗೆ ವಿಕಿಪೀಡಿಯ ಎಂದರೆ ಏನೆಂದೇ ತಿಳಿದಿರಲಿಲ್ಲ ,ಈಗ ನಾನು ಅದರ ಒಂದು ಸಣ್ಣ ಭಾಗವಾಗಿದ್ದೇನೆ!

ಬೆಳ್ಳಾರೆ ಯಲ್ಲಿ mice ಕಂಪ್ಯೂಟರ್ ಶಿಕ್ಷಕಿ ವನಿತಾ  

ವಿಕಿಪೀಡಿಯ ಬಗ್ಗೆ ಸೋಜಿಗದಿಂದ ಹೇಳುದನ್ನು ಕೇಳಿಸಿಕೊಂಡಿದ್ದೆ ಇದರಲ್ಲೇ ಎಲ್ಲ ಮಾಹಿತಿಗಳು ಸಿಗುತ್ತವೆ .ಇದರಲ್ಲಿ ಸಿಗದ ಮಾಹಿತಿಗಳೇ ಇಲ್ಲ ಇತ್ಯಾದಿಯಾಗಿ .

ಕ್ರಮೇಣ ನಾನು ಅಂತರ್ಜಾಲ ಜಗತ್ತಿಗೆ ತೆರೆದುಕೊಂಡೆ,ನನ್ನ ಆಸಕ್ತಿಯ ವಿಚಾರ ನಾನು ಅಧ್ಯಯನ ಮಾಡಿದ ಭೂತಗಳ ಕುರಿತಾಗಿ ಬ್ಲಾಗ್ ಬರೆಯಲು ಆರಂಭಿಸಿದೆ.ಅದನ್ನ ಫೇಸ್ ಬುಕ್ ಮೂಲಕ share ಮಾಡಿದೆ .ಆಗ ಕೂಡ ಅನೇಕರು ನನ್ನಲ್ಲಿ ಈ ಮಾಹಿತಿಗಳು ನಿಮಗೆ ಎಲ್ಲಿಂದ ಸಿಕ್ತು ?ವಿಕಿಪೀಡಿಯ ದಿಂದಲಾ?ಎಂದು ಕೇಳುತ್ತಿದ್ದರು .

ಹಾಗಾದರೆ ಈ ವಿಕಿಪೀಡಿಯ ಎಂಬ ಅದ್ಭುತ ಏನಿರಬಹುದು ಎಂದು ಕುತೂಹಲದಿಂದ ಅದನ್ನು ನೋಡಿದೆ !ಹೌದು ನಿಜಕ್ಕೂ ಇದೊಂದು ಅಭೂತ ಲೋಕವೇ ಸರಿ .ಜ್ಞಾನದ ಭಂಡಾರವಿದು ಆದರೆ ಇಲ್ಲಿ ಮಾಹಿತಿ ಸಿಗಬೇಕಿದ್ದಲ್ಲಿ ಯಾರಾದರೂ ಅಲ್ಲಿಗೆ ಮಾಹಿತಿಯನ್ನು ಮೊದಲು ನೀಡಿರಬೇಕಾಗುತ್ತದೆ.ಎಲ್ಲೂ ಸಿಗದ ನಮ್ಮಲ್ಲಿ ಮಾತ್ರ ಇರುವ ಮಾಹಿತಿಗಳು ಅಲ್ಲಿ ಸಿಗುವುದಿಲ್ಲ .

ಇರಲಿ ,ಈಗ ಈ ವಿಷಯ ಯಾಕೆ ನೆನಪಾಯಿತು ಎಂದು ಹೇಳುವೆ .

ಮೊನ್ನೆ ಒಂದು ದಿನ ಸಾರಂಗ ರೇಡಿಯೋ ದ ನಿರೂಪಕರಾಗಿರುವ ಲೇಖಕ ಮಿತ್ರರಾದ ವಿ ಕೆ ಕಡಬ ಅವರು ಒಂದುಲಿನ್ಕ್ ಅನ್ನು ನನಗೆ ಮೆಸೇಜ್ ಮಾಡಿದರು ,ನಾನು ಕುತೂಹಲದಿಂದ ತೆರೆದು ನೋಡಿದರೆ ಅದು ವಿಕಿಪೀಡಿಯದಲ್ಲಿ ನನ್ನ ಬಗೆಗಿನ ಮಾಹಿತಿ ಇರುವ ಲಿಂಕ್ ಆಗಿತ್ತು ,ಅದನ್ನು ವಿ ಕೆ ಕಡಬ ಅವರು ತುಂಬಿದ್ದರು .

ಹಾಗೆ ನನ್ನ ಕುರಿತು ಅಭಿಮಾನದಿಂದ ಈ ಹಿಂದೆ ಅವರು ಅವರ ಬ್ಲಾಗ್ ನಲ್ಲಿಯೂ ಬರೆದಿದ್ದರು ಸಾರಂಗ್ ರೇಡಿಯೋ ದಲ್ಲೂ ಪ್ರಸರ ಮಾಡಿದ್ದರು .ಅವರಂತೆ ರಶೀದ್ ವಿಟ್ಲಅವರು ನನ್ನ ಭೂತಾರಾಧನೆ ಹಾಗೂ ಇತರ ಅಧ್ಯಯನ ಕುರಿತು ಬರೆದು ಶುಭ ಹಾರಿಸಿದ್ದರು . ಅದಕ್ಕೂ ಮೊದಲು women wonderful creation of God ಗುಂಪು

AN EXCLUSIVE WOMAN-WOMAN OF AUGUST-2014 ಎಂದು ಗೌರವಿಸಿತ್ತು ಆಗ ಗುಂಪಿನ ಅಡ್ಮಿನ್ ಆಗಿರುವ ರೇಶ್ಮ ಸಾರಿಕಾ ಆಗಿರುವ ಅವರು ಆ ಸಂದರ್ಭ ದಲ್ಲಿ ಬರೆದ ನಲ್ನುಡಿಗಳು ,ಈ ಹಿಂದೆ ನನ್ನ ಕುರಿತಾಗಿ ಪತ್ರಿಕೆಗಳಲ್ಲಿ ಬಂದ ಬರಹಗಳು ಎಲ್ಲವನ್ನೂ ಇಲ್ಲಿ ಹಾಕಿದ್ದೇನೆ.ಎಲ್ಲರ ಅಭಿಮಾನಪ್ರೀತಿ ವಿಶ್ವಾಸ ಬೆಂಬಲಗಳಿಗೆ ನಾನು ಋಣಿಯಾಗಿದ್ದೇನೆ

LAKSHMI G PRASAD AN EXCLUSIVE WOMAN-WOMAN OF AUGUST-2014

 https://www.facebook.com/reshma.ayeshasarika/media_set?set=a.672687409480063.1073741948.100002164301988&type=3

Updated about 8 months ago
You cant stop a diamond, and a born talent from shining. Dr Lakshmi G Prasad is a very special woman with exceptional talent and exclusive knowledge, who has
chiselled her personality in to a beautiful sculpture with her great effort, interest, strong will, dedication, wide researching, deep range of study and thus have gained special recognition and respect from the society
.
DR Lakshmi G Prasad is a lecturer by profession, writer and also a research scholar. In all these fields she has involved herself with great enthusiasm and dedication with a deep social concern and has achieved amazing results.DRLakshmi was born in Kolluru Kasaragod district. She is married to Mr Govindaprasad panjigadde . Mr Vedamurthy Narayana Bhatt and Smt Sarasvathi amma are her parents.

As a lecturer by profession she works in Bellare government pre university college.
As Dr Lakshmi was born and brought up in an orthodox family and in religious atmosphere she had to face many restrictions and obstacles which she faced firmly. She was graduated in science, but she didn't stop at that. Her qualifications are surprising, After graduation she did M.Phil. and got three master degrees in Sanskrit, Kannada and Hindi languages respectively with ranks and distinction. Later she involved herself in research works and got doctorate degree and has submitted her thesis for another doctorate degree which is yet to be awarded. .she also passed NET-UGC examinations related to her profession. This long list of her educational qualification tells us about her thirst for knowledge and her dedication.
DR Lakshmi has written and published about 20 books and all of them related to her research works on "Tulu daivas" and "Bhoothaaraadhana" which is practiced in Dakshinakannada District. Tulu people worship local gods with many names, backgrounds, history and with great devotion and respect since ages. They follow very strict customs, practice and believe in the special power of these Bhoothas/ Daivas . She is a known name in many famous newspapers and magazines for her articles and also has written short stories and dramas. To quote few,
1. Arivinangalada sutha
2. Maneyangaladi huu
3. Tulu jaanapada kavithegalu, chandabaari gopala maththu ithara apurva paaddanagalu
4. Kambala kori nema
5. Tulunaadina apurva bhoothagalu
6. Belakinedege and others.

Her articles on present education and Social mal practices are really worth reading.
Lakshmi wrote a drama in Havyaka kannada when she was in seventh standard which gave her the fame . She is known as "The first woman drama writer in Havyaka kannada"
DR Lakshmi is also crowned with many prestigious awards like,
1. Jayaprakasha Narayana raashtriya mahila rathna award
2. Karnataka bhushana
3. Kalajyothi
4. Kaavyashree puraskara
5. Havikannada modala naatakakarthi

DR Lakshmi has never neglected her profession. She works with dedication and innovation and been awarded with "Outstanding teacher award 2013". Her research work is very demanding with lot of travelling. but well supported by her husband and son Arvind who are her inspiration.
Dr Lakshmi is out spoken and always stood against social injustice, gender discrimination .
This is just a brief about DR Lakshmi. For details please refer the link given below and visit her blogs.
we “Woman the wonderful creation of God" group proud to honour DR Lakshmi as the SPECIAL WOMAN FOR THE MONTH OF AUGUST 2014
DR Lakshmi as the SPECIAL WOMAN FOR THE MONTH OF AUGUST 2014

ವಜ್ರ ಎಲ್ಲಿದ್ದರೂ ಪ್ರಕಾಶಿಸುವಂತೆ ಪ್ರತಿಭೆ ಕೂಡ ಎಲ್ಲಿದ್ದರೂ ಪ್ರಕಾಶಿಸುತ್ತದೆ,ಲಕ್ಶ್ಮಿ ಜಿ ಪ್ರಸಾದ್ ಕೂಡ ಓರ್ವ ಇಂತಹ ಅಸಾಧಾರಣ ಪ್ರತಿಭೆ- ಸ್ವಂತಿಕೆ, ಸ್ವಾಭಿಮಾನಗಳಿಂದ ಕೂಡಿದ ವಿಶಿಷ್ಟ ಮಹಿಳೆ,ಅಲ್ಲದೆ ದಕ್ಷತೆ,ಶ್ರಧ್ಧೆ,ನಿರಂತರ ಅಧ್ಯಯನ ಇವುಗಳಿಂದ ವಿಶಿಷ್ಟ ವ್ಯಕ್ತಿತ್ವವನ್ನು ರೂಪಿಸಿಕೊಂಡಿರುವ, ತನ್ಮೂಲಕ ಸಮಾಜದಲ್ಲಿ ಗುರುತಿಸಲ್ಪಟ್ಟಿರುವ, ಸಮಾಜದಿಂದ ಗೌರವಿಸಲ್ಪಟ್ಟಿರುವ ಶಿಕ್ಷಕಿ-ಬರಹಗಾರ್ತಿ-ಸಂಶೋಧಕಿ.
ಲಕ್ಷ್ಮಿಯವರ ಹುಟ್ಟೂರು ಕೋಳ್ಳೂರು-ಕಾಸರಗೋಡು ಜಿಲ್ಲೆ-ತಂದೆ-ಶ್ರೀಯುತ ವೇದಮೂರ್ತಿ ನಾರಾಯಣ ಭಟ್-ವಾರಣಾಶಿ-ತಾಯಿ-ಸರಸ್ವತಿ ಅಮ್ಮ-ವಾರಣಾಶಿ.ಪತಿ ಗೋವಿಂದ ಪ್ರಸಾದ ಪಂಜಿಗದ್ದೆ.
ವೃತ್ತಿ-ಲಕ್ಷ್ಮಿಯವರು ದಕ್ಷಿಣಕನ್ನಡಜಿಲ್ಲೆಯ ಸುಳ್ಯ ತಾಲ್ಲೂಕಿನ ಬೆಳ್ಳಾರೆಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ,ಪ್ರಸ್ತುತ ಬೆಂಗಳೂರಿನ S J B ಕಾಲೇಜಿನಲ್ಲಿ ಬಿಎಡ್ ಅನ್ನು ಇಲಾಖಾ ನಿಯೋಜನೆಯ ಮೇರೆಗೆ ಓದುತ್ತಿದ್ದಾರೆ.

ವಿದ್ಯಾಭ್ಯಾಸ--ಲಕ್ಶ್ಮಿಯವರ ಶೈಕ್ಷಣಿಕ ಅರ್ಹತೆ ಅನನ್ಯವಾದುದು.ವಿಜ್ನ್ಯಾನ ಪದವೀಧರೆಯಾದ ಲಕ್ಷ್ಮಿಸಂಸ್ಕೃತ-ಕನ್ನಡ-ಹಿಂದಿ ಈ ಮೂರು ವಿಷಯಗಳಲ್ಲಿ ಸ್ನಾತಕೋತ್ತರ ಪದವಿ-ಎರಡು ಪಿ ಹೆಚ್ ಡಿ (she is awarded with one Phd and has done research work on the other -has submitted her thesis and expecting her second Phd award ) ಅದರಲ್ಲೂ ಸಂಸ್ಕೃತ ಎಂ ಎನಲ್ಲಿ ಮೊದಲ ರಾಂಕ್-ಕನ್ನಡ ಎಂಎ ನಲ್ಲಿ ನಾಲ್ಕನೆಯ ರಾಂಕ್ -ಹಿಂದಿ ಎಂ ಎ ನಲ್ಲಿ ಡಿಸ್ಟಿಂಕ್ಷನ್ ಗಳಿಸಿದ್ದಾರೆ.ಅಲ್ಲದೆ ಎಂ ಫಿಲ್-ರಾಷ್ಟ್ರಭಾಷಾ ಪ್ರವೀಣ-ಮತ್ತು ಎನ್ ಇ ಟಿ, ಯು ಜಿ ಸಿ ಶೈಕ್ಷಣಿಕ ಅರ್ಹತೆಗಳನ್ನೂ ಗಳಿಸಿದ್ದಾರೆ.ಲಕ್ಷ್ಮಿಯವರ ಜ್ನ್ಯಾನದಾಹ,ಅದಮ್ಯ ಉತ್ಸಾಹ,ಸಾಧಿಸುವ ಛಲ ಇವುಗಳಿಗೆ ಅವರು ಗಳಿಸಿರುವ ಶೈಕ್ಷಣಿಕ ಅರ್ಹತೆಗಳ ದೀರ್ಘ ಪಟ್ಟಿಯೇ ಸಾಕ್ಷಿ.
ಲಕ್ಷ್ಮಿಯವರ ಕೃತಿಗಳು-ಲಕ್ಶ್ಮಿಯವರು ಇಪ್ಪತ್ತು ಸಂಶೋಧನಾ ಕೃತಿಗಳು-ನೂರಕ್ಕೂ ಹೆಚ್ಚು ಸಾಮಾಜಿಕ-ಶೈಕ್ಷಣಿಕ-ಜಾನಪದ -ಸಾಹಿತ್ಯಕ ವಿಷಯಗಳನ್ನು ಕುರಿತ ಲೇಖನಗಳನ್ನು ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ.ನಾಟಕ-ಸಣ್ಣಕಥೆಗಳೂ ಕೂಡ ಇವರ ಲೇಖನಿಯಿಂದ ಹೊರಹೊಮ್ಮಿವೆ.ಅವುಗಳಲ್ಲಿ ಮುಖ್ಯವಾದುವೆಂದರೆ
೧-ಅರಿವಿನಂಗಳದ ಸುತ್ತ{ಶೈಕ್ಷಣಿಕ ಬರಹಗಳ ಸಂಕಲನ}
೨-ಮನೆಯಂಗಳದಿ ಹೂ {ಸಣ್ಣ ಕಥೆಗಳ ಸಂಕಲನ}
೩-ತುಳು ಜಾನಪದ ಕವಿತೆಗಳು,ಚಂದಬಾರಿಗೋಪಾಲ ಮತ್ತು ಇತರಅಪೂರ್ವ ಪಾಡ್ದನಗಳು
೪-ಕಂಬಳ ಕೋರಿ ನೇಮ {ತುಳು ಜಾನಪದ ಸಂಶೋಧನೆ)
೫-ತುಳು ನಾಡಿನ ಅಪೂರ್ವ ಭೂತಗಳು
೬-ಬೆಳಕಿನೆಡೆಗೆ-ಮುಂತಾದುವು.ಪ್ರಾಥಮಿಕ ಶಿಕ್ಷಣಕ್ಕೆ ಎಂಥ ಶಾಲೆ ಉತ್ತಮ--ಪರೀಕ್ಷೆಗಳು ಬರುತ್ತಿವೆ-ಕನ್ನಡ ಮಾಧ್ಯಮದಲ್ಲಿ ವಿಜ್ನ್ಯಾನ ಶಿಕ್ಷಣ-ಸಾಮಾನ್ಯ ಪರೀಕ್ಷೆ ಸಾಮಾನ್ಯರಿಗಲ್ಲಮೊದಲಾದ ಇವರ ಶೈಕ್ಷಣಿಕ ಕಾಳಜಿಯ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾದ ಇವರ ಲೇಖನಗಳು ಗಮನಾರ್ಹ-ಸಂಗ್ರಹಯೋಗ್ಯ.
೭-ಏಳನೆಯ ತರಗತಿಯಲ್ಲಿದ್ದಾಗಲೇ ಇವರು ರಚಿಸಿ ವೇದಿಕೆಯಲ್ಲಿ ಅಭಿನಯಿಸಿದ್ದ "{ಸುಬ್ಬಿ ಇಂಗ್ಲಿಷ್ ಕಲ್ತದ್ದು" ಎಂಬ ನಾಟಕ ಹವ್ಯಕ ಕನ್ನಡದಲ್ಲಿ ಮಹಿಳೆ ರಚಿಸಿದ ಮೊದಲ ನಾಟಕ ಎಂಬ ದಾಖಲೆ ನಿರ್ಮಿಸಿದೆ.

)ಪ್ರಶಸ್ತಿ-ಪುರಸ್ಕಾರಗಳು
1 .ಜಯಪ್ರಕಾಶ ನಾರಾಯಣ ರಾಷ್ಟ್ರೀಯ ಮಹಿಳಾ ರತ್ನ
2 .ಕರ್ನಾಟಕ ಭೂಷಣ
3.ಕಲಾ ಜ್ಯೋತಿ
4.ತುಳುವೆರೆ ಆಯನೋ 2009[ಸಂಶೋಧನಾ ವಿಭಾಗ]
5.ಕಾವ್ಯಶ್ರೀ ಪುರಸ್ಕಾರ[ಕಥಾ ವಿಭಾಗ]
6OUTSTANDING TEACHER AWARD -2013
7 ಹವಿಗನ್ನಡದ ಮೊದಲ ನಾಟಕಗಾರ್ತ
ಸಂಶೋಧನೆ ಕುರಿತು------------
ನಾಡಿನ ಹಿರಿಯ ಸಂಶೋಧಕರೂ ,ಸಾಹಿತಿಗಳೂ .ಶಿಕ್ಷಣ ತಜ್ಞರೂ ಆಗಿರುವ ಡಾ.ಅಮೃತ ಸೋಮೇಶ್ವರ ಅವರು “ಅಧ್ಯಯನ ಕ್ಷೇತ್ರದಲ್ಲೂ ಕ್ಷೇತ್ರ ಕಾರ್ಯದಲ್ಲೂ ವಿಶೇಷ ಪರಿಶ್ರಮಿಸಲು ಹಿಂಜರಿಯತಕ್ಕ ಸಾಮಾನ್ಯ ಸಂಶೋಧಕರಿಗಿಂತ ಭಿನ್ನವಾಗಿ ಲಕ್ಷ್ಮೀ ಜಿ ಪ್ರಸಾದ ಅವರು ಬಹುಮಟ್ಟಿಗೆ ಸಂಕೀರ್ಣ ಹಾಗೂ ಕ್ಲೆಶಕರವಾದ ಭೂತಾರಾಧನಾ ರಂಗವನ್ನು ತಮ್ಮ ಅಧ್ಯಯನಕ್ಕೆ ಆರಿಸಿಕೊಂಡಿದ್ದಾರೆ.ಸಾಮಾನ್ಯವಾಗಿ ರಾತ್ರಿ ಕಾಲದಲ್ಲಿ ನಡೆಯುವ ,ವಿವಿಧ ವಿಧಿ ನಿಷೆಧಗಳಿಂದ ಕೂಡಿರುವ ಈ ಆರಾಧನಾ ಪದ್ಧತಿಯ ಕುರಿತಾದ ವಿವರಗಳನ್ನು ಸಮೀಪದಿಂದ ಕಲೆಹಾಕುವುದು ಮಹಿಳೆಯರಿಗಂತೂಕಷ್ಟ ಸಾಧ್ಯ ಕಾರ್ಯ .ಆದರೆ ಲಕ್ಷ್ಮಿಯವರು ಅಂಥ ಸಾಹಸದಲ್ಲಿ ಸಫಲತೆಯನ್ನು ಹೊಂದಿದ್ದಾರೆ.ತಮ್ಮ ಅಧ್ಯಾಪನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಲೇ ಅವರು ಸಂಶೋಧನಾ ಹಾಗೂ ಸಾಹಿತ್ಯಿಕ ಕ್ಷೇತ್ರದಲ್ಲಿ ದುಡಿಯುತ್ತಾ ಬಂದಿದ್ದಾರೆ “ಎಂದು ಮುಕ್ತವಾಗಿ ಲಕ್ಷ್ಮೀ ಜಿ ಪ್ರಸಾದರ ಸಾಧನೆ ಬಗ್ಗೆ ಮುಕ್ತವಾಗಿ ಪ್ರಶಂಸಿಸಿದ್ದಾರೆ.

ಇತ್ತೀಚಿಗೆ ಪ್ರಕಟವಾದ ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ –ಒಂದು ವಿಶ್ಲೇಷಣಾತ್ಮಕ ಅಧ್ಯಯನ ಎಂಬ ಇವರ ಪಿಎಚ್.ಡಿ ಸಂಶೋಧನಾ ಕೃತಿ ಎಲ್ಲರ ಮೆಚ್ಚುಗೆ ಯನ್ನು ಗಳಿಸಿದ್ದು ಅತ್ಯಧಿಕ ಬೇಡಿಕೆಯನ್ನು ಪಡೆದಿದೆ.ಭೂತಗಳ ಅದ್ಭುತ ಜಗತ್ತು ಇವರ ಕ್ಷೇತ್ರ ಕಾರ್ಯದ ಅನುಭವನ್ನು ಒಳಗೊಂಡ ಕೃತಿ .ಇದರಲ್ಲಿ ಕೋಟಿ ಚೆನ್ನಯ ,ಅಬ್ಬೆ ಜಲಾಯ,ಮುಗೆರ್ಲು ,ಬಬ್ಬರ್ಯ,ಕೋಟೆದ ಬಬ್ಬು ,ಕೊರಗ ತನಿಯ ,ಅಜ್ಜಿ ಭೂತ ,ಬೀರ್ನಾಲ್ವ.ಚಾಮುಂಡಿ ಭೂತಗಳು ,ಅರಬ್ಬಿ ಮತ್ತು ಚೀನೀ ಭೂತಗಳು ಸೇರಿದಂತೆ ಸುಮಾರು ಐವತ್ತು ದೈಅವಗಳ ಬಗ್ಗೆ ಸಮಗ್ರ ಮಾಹಿತಿ ಇದೆ

7-ಲಕ್ಷ್ಮಿಯವರ ಸಾಧನೆಗಳಿಗೆ ಪ್ರೇರಣೆ ಎಲ್ಲಿಂದ? ಎಂಬ ಪ್ರಶ್ನೆಗೆ ಅವರೇ ನೀಡಿದ ಉತ್ತರ ಹೀಗಿದೆ ನೋಡಿ--
,ನನಗೆ ಪ್ರೇರಣೆ ಎಲ್ಲಿಂದ ಅಂತ ತಿಳಿಯುತ್ತಿಲ್ಲ ,ಆರಂಭದಲ್ಲಿ ಎಂ ಫಿಲ್ ಪದವಿಗಾಗಿ ಅಧ್ಯಯನಕ್ಕೆ ತುಳು ಜನಪದ ಸಾಹಿತ್ಯವನ್ನು ಆಯ್ಕೆ ಮಾಡಿ ಆ ತನಕ ವಿದ್ವಾಂಸರ ಪಟ್ಟಿಯಲ್ಲಿ ಹೆಸರು ಕೂಡಾ ಸೇರಿಲ್ಲದ ನಮ್ಮ ಮನೆಯಲ್ಲಿ ಆರಾಧನೆ ಗೊಳ್ಳುತ್ತಿರುವ ಉರವ ಮತ್ತು ಎರು ಬಂಟ ಎಂಬ ಎರಡು ಅಪರೂಪದ ದೈವಗಳ ಬಗ್ಗೆ ಅಧ್ಯಯನ ಮಾಡಿದೆ .ಅದಕ್ಕೆ ಡಾ.ಅಮೃತ ಸೋಮೆಶ್ವರರು ಉತ್ತಮ ಸಂಶೋಧನೆ ಹೀಗೆಯೇ ಮುಂದುವರಿಯಿರಿ ಎಂದು ಅಭಿನಂದಿಸಿದರು ,ಮುಂದೆ ಅದೇ ದಾರಿಯಲ್ಲಿ ನಡೆದು ಈ ತನಕ ಅಧ್ಯಯನ ಆಗದ ಸುಮಾರು 180 ದೈವಗಳ ಕುರಿತು ಅಧ್ಯಯನ ಮಾಡಿ ಮಾಹಿತಿ ಸಂಗ್ರಹಿಸಿದೆ .ಅಷ್ಟರ ತನಕ ಎಲ್ಲೂ ದಾಖಲಾಗದೆ ಇದ್ದ ಕಾರಣ ಸ್ವತಹ ರೆಕಾರ್ಡ್ ಮಾಡಿ ಅಧ್ಯಯನ ಮಾಡಿದೆ ,ಇದಕ್ಕೆ ನನ್ನ ಪತಿ ಗೋವಿಂದ ಪ್ರಸಾದ ,ನನ್ನ ತಂದೆ ತಾಯಿ ,ಸಹೋದರರ ಪೂರ್ಣ ಬೆಂಬಲ ನೀಡಿದ್ದಾರೆ ನಮ್ಮ.ಮಗ ಅರವಿಂದ 4 ವರ್ಷದ ಎಳೆಯ ಮಗು ಆಗಿದ್ದಾಗಲೇ ನನ್ನ ಜೊತೆಗೆ ರೆಕಾರ್ಡಿಂಗ್ ಗೆ ಬರುತ್ತಿದ್ದ ,ನನಗೆ ರೆಕಾರ್ಡಿಂಗ್ ಹಾಗೂ ಫೀಲ್ಡ್ ವರ್ಕ್ ನಲ್ಲಿ ಅವನು ತುಂಬಾ ಸಹಾಯ ಮಾಡಿದ್ದಾನೆ ,ನಾನು ಎರಡನೇ ವರ್ಷ ಪದವಿ ಓದುತ್ತಿದ್ದಾಗ ನನ್ನ ಮದುವೆ ಆಯಿತು ನಂತರ ಓದನ್ನು ಮುಂದುವರಿಸುವುದು ನಮ್ಮ ಸಂಪ್ರದಾಯಸ್ಥ ಸಮಾಜದಲ್ಲಿ ಒಂದು ಸವಾಲು ಆಗಿತ್ತು ,ಸಾಕಷ್ಟು ಅವಮಾನ ,ಅವಹೇಳನವನ್ನು ಎದುರಿಸಬೇಕಾಯಿತು ,ಆಗೆಲ್ಲ ನನ್ನ ಹೆಗಲಿಗೆ ಕೈಕೊಟ್ಟು ಗೋವಿಂದ ಪ್ರಸಾದ್ .ಮತ್ತು ನನ್ನ ತಂದೆ ತಾಯಿ ಸಹೋದರರು
ಡಾ । ಲಕ್ಷ್ಮೀ ಜಿ ಪ್ರಸಾದ, ಎಂ.ಎ (ಕನ್ನಡ ) ಎಂ.ಎ (ಸಂಸ್ಕೃತ )
ಎಂ.ಎ (ಹಿಂದಿ ) ಎಂ.ಫಲ್ . ಪಿಎಚ್

ಸಾಮಾಜಿಕ ಅನ್ಯಾಯ-ಅಸಮತೋಲನ-ಜಾತಿ-ಲಿಂಗ-ವರ್ಗಾಧಾರಿತ ತಾರತಮ್ಯಗಳ ವಿರುಧ್ಧ ಸದಾ ಧ್ವನಿಯೆತ್ತುವ,ಸಾಮಾಜಿಕ ನ್ಯಾಯಕ್ಕಾಗಿ ಆಗ್ರಹಿಸುವ ಪ್ರವೃತ್ತಿ ಹೊಂದಿರುವ ಲಕ್ಶ್ಮಿಯವರು ಕೆಲವರಿಗೆ ನಿಷ್ಟುರರಾಗಿ ಕಾಣಿಸಿದರೂ ಅದನ್ನು ಲಕ್ಷಿಸದೆ ತಮ್ಮ ನೇರ ನಡೆನುಡಿಯನ್ನು ಉಳಿಸಿಕೊಂಡು ತನ್ನತನವನ್ನು ಕಾಯ್ದುಕೊಂಡು ಅನ್ಯಾಯಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ-ಕಾರ್ಯನಿರತೆಯಾಗಿರುವ ಲಕ್ಷ್ಮಿಯವರ ರೀತಿ ಮಹಿಳೆಯರಿಗೆ ಅನುಕರಣೀಯ,
ಡಾ । ಲಕ್ಷ್ಮೀ ಜಿ ಪ್ರಸಾದ, ಎಂ.ಎ (ಕನ್ನಡ ) ಎಂ.ಎ (ಸಂಸ್ಕೃತ )
ಎಂ.ಎ (ಹಿಂದಿ ) ಎಂ.ಫಿಲ್ . ಪಿಎಚ್ ಡಿ (ಹಂಪಿ ಕನ್ನಡ ಯೂನಿವರ್ಸಿಟಿ )ಪಿಎಚ್ ಡಿ (ದ್ರವಿಡಿಯನ್ ಯೂನಿವರ್ಸಿಟಿ )

https://www.facebook.com/notes/lakshmi-g-prasad/ನನ್ನ-ಸಂಕ್ಷಿಪ್ತ-ಪರಿಚಯ/283278238464151

we woman the wonderful creation of GOD" group proud to honour DR LAKSHMI G PRASAD as the SPECIAL WOMAN FOR THE MONTH OF AUGUST 2014

Glad to add that Lakshmi G Prasad recently attended her viva test successfully and is now eligible for getting her second Doctorate degree.When she is awareded with this she will be the first woman and first person to get two doctorate degrees in Tulu culture.. Gongrats dear sis Lakshmi G Prasad.
Reshma a s







ಡಬಲ್ ಪಿ.ಎಚ್.ಡಿ, ತ್ರಿಬಲ್ ಎಂ.ಎ, ಜೊತೆಗೆ ಎಂ.ಫಿಲ್, ಅಧ್ಯಯನ, ಸಂಸಂಶೋಧನೆಗಳ ಮೂಟೆಯ ರಾಶಿ, ನೂರಾರು ಲೇಖನಗಳು, ತುಳುನಾಡಿನ ಭೂತಗಳ ಬಗ್ಗೆ ಹತ್ತಾರು ಕೃತಿಗಳು, ಎಂಟು ಭಾಷೆಗಳಲ್ಲಿ ಪ್ರಾವೀಣ್ಯ, ಶಿಕ್ಷಣ ಕ್ಷೇತ್ರದ ಅಭೂತಪೂರ್ವ ಸಾಧನೆ, ಸಾಹಿತ್ಯ ಲೋಕದ ಮಿಂಚು... ಇವೆಲ್ಲವನ್ನೂ ಒಂದುಗೂಡಿಸಿದಾಗ ರೂಪ ತಾಳುವ ಅಪೂರ್ವ ವ್ಯಕ್ತಿತ್ವವೇ ಡಾ. ಲಕ್ಷ್ಮೀ ಜಿ. ಪ್ರಸಾದ್.
ಜ್ಞಾನದ ದಾಹದ ಅದಮ್ಯ ಬಯಕೆ ಮೂಡಿದರೆ ಏನೇನೆಲ್ಲಾ ಆಗಬಹುದೆಂಬುವುದಕ್ಕೆ ನಮ್ಮ ಮುಂದೆ ಬೆರಳು ತೋರಲು ಇರುವ ವ್ಯಕ್ತಿ ಮತ್ತು ಶಕ್ತಿಯಾಗಿ ಬೆಳೆದ ಮಹಿಳೆ ಮೂಲತಃ ಕಾಸರಗೋಡು ಜಿಲ್ಲೆಯ ಕೋಳ್ಯೂರು ನವರಾದ, ಬೆಳ್ಳಾರೆಯಲ್ಲಿ ಶಿಕ್ಷಕರಾಗಿರುವ, ಪ್ರಸ್ತುತ ಬೆಂಗಳೂರಿನ ನಿವಾಸಿ ಡಾ. ಲಕ್ಷ್ಮೀ ಜಿ. ಪ್ರಸಾದ್.
ನನ್ನ ಒಂದು ಬರಹ ನೋಡಿ ಸಂಪರ್ಕಕ್ಕೆ ಸಿಕ್ಕಿರುವ ನನ್ನ ಫೇಸ್ಬುಕ್ ಗೆಳತಿಯಾಗಿರುವ ಡಾ.ಲಕ್ಷ್ಮೀ ಅವರ ಸಾಧನೆಗಳ ಮೈಲುಗಲ್ಲನ್ನು ಅಕ್ಷರದಲ್ಲಿ ಕಟ್ಟಿಹಾಕಲು ಸಾಧ್ಯವಿಲ್ಲ.
ಅವರ ಫೇಸ್ಬುಕ್ ಪೇಜ್ ನ ಕದ ತೆರೆದರೆ ಅಲ್ಲಿ ಭೂತಗಳ ನರ್ತನ ಪ್ರಾರಂಭವಾಗುತ್ತದೆ. ಅವರ ಪೇಜ್ ಗೆ ಹೋದರೆ ಅಲ್ಲಿ ಭೂತಗಳು, ಭೂತಗಳು ಮತ್ತು ಭೂತಗಳೇ... ತುಳುನಾಡಿನ ಸಂಸ್ಕೃತಿಯಾದ ಭೂತಗಳ ಬಗ್ಗೆ ಬಹಳಷ್ಟು ಆಳವಾದ ಅಧ್ಯಯನ ನಡೆಸಿರುವ, ನಡೆಸುತ್ತಿರುವ ಡಾ.ಲಕ್ಷ್ಮೀ ಅವರು ಸಹಸ್ರಾರು ಭೂತಗಳ ಇತಿಹಾಸವನ್ನು ವಿವಿಧ ಮೂಲಗಳಿಂದ ದಾಖಲಿಸಿಟ್ಟಿರುವ ಅಪ್ರತಿಮ ಜ್ಞಾನದಾಹಿ ಮಹಿಳೆ.
ಒಬ್ಬ ಒಂದು ಪಿ.ಎಚ್.ಡಿ. ಪಡೆಯುವುದು ವಿಶೇಷ. ಎರಡು ಪಡೆಯುವುದು ಅಪರೂಪದಲ್ಲಿ ಅಪರೂಪ. ಅದೂ ತುಳುನಾಡ ಸಂಸ್ಕೃತಿಯ ಬಗ್ಗೆಯೇ ಅಧ್ಯಯನ ಮಾಡಿ ಮೇಲಿಂದ ಮೇಲೆ ಎರಡು ಪಿ.ಎಚ್.ಡಿ ಪಡೆಯುವುದೆಂದರೆ... ಅಬ್ಬಬ್ಬಾ!!! ಅದೂ ಅಲ್ಲದೆ ಕನ್ನಡ, ಸಂಸ್ಕೃತ, ಹಿಂದಿಯಲ್ಲಿ ಹೀಗೇ ಮೂರೂ ವಿಭಾಗದಲ್ಲಿ ಮೂರು ಪ್ರತ್ಯೇಕ ಸ್ನಾತ್ತಕೋತ್ತರ ಪದವಿ ಪಡೆದು, ಎಂಟು ವಿವಧ ಭಾಷೆಗಳನ್ನು ಮಾತನಾಡಬಲ್ಲ ಅಸಾಮಾನ್ಯ ಸ್ತ್ರೀ ಎನಿಸಿಕೊಂಡವರು ಸ್ನೇಹಿತೆ ಡಾ.ಲಕ್ಷ್ಮೀ ಜಿ. ಪ್ರಸಾದ್ ಅವರು.
ಅಧ್ಯಯನ, ಸಂಶೋಧನೆ, ಸಾಹಿತ್ಯದ ಜೊತೆ ಜೊತೆಗೆ ಸಾಮಾಜಿಕ ಬದ್ಧತೆಯನ್ನು ಪ್ರತಿಪಾದಿಸುವ ಪ್ರೀತಿಯ ಅಕ್ಕನ ಮುಂದಿನ ಜೀವನ ಇನ್ನಷ್ಟು ಸಮೃದ್ಧತೆಯಿಂದ ಕೂಡಿರಲಿ ಎಂದು ಆಶಿಸುತ್ತೇನೆ. ಸಾಧ್ಯವಾದರೆ ಡಾ. ಲಕ್ಷ್ಮೀ ಜಿ. ಪ್ರಸಾದ್ ಅವರ ಫೇಸ್ಬುಕ್ ಪೇಜ್ ಗೆ (Facebook/ Lakshmi G Prasad ) ಒಮ್ಮೆ ಹಾಗೇ ಸುಮ್ಮನೆ ಇಣುಕಿ. ಅಲ್ಲಿ ಅವರ ವಿಶಿಷ್ಟ ಸಾಧನೆಯ ಅನಾವರಣವಾಗುತ್ತದೆ.https://www.facebook.com/photo.php?fbid=10205451585680043&set=pb.1562462662.-2207520000.1438095955.&type=3&theater

ತುಳು ಸಂಸ್ಕೃತಿಯ ಬಗ್ಗೆ ಎರಡು ಡಾಕ್ಟರೇಟ್ ಪಡೆದ ಮೊದಲ ಮಹಿಳೆ










5
ಹೆಣ್ಣು ತನ್ನ ಕುಟು೦ಬದ ವ್ಯಾಪ್ತಿಯಲ್ಲಿ ತನ್ನ ಸ್ವತತ್ರ ಬದುಕಿಗಾಗಿ ಪ್ರಶ್ನೆ ಮಾಡಿದಾಗ ಒ೦ದು ಹೊಸ ಬದುಕಿನ ದಾರಿ ತೆರೆದು ಕೊಳ್ಳುತ್ತದೆ.ನಮ್ಮ ಮನೆಯ ಆವರಣದಲ್ಲೇ ಹೆಣ್ಣಿಗೆ ಅನೇಕ ಜವಾಬ್ದಾರಿ ಗಳ ಜೊತೆಗೆ ಮನೆ ಕೆಲಸಕ್ಕೆ ಸೀಮಿತಗೊಲ್ಲಬೇಕೆ೦ಬ ಬಯಕೆ ಹೆತ್ತವರದು.ಇ೦ಥ ವಿಚಾರಗಳ ನಡುವೆ  ಸಮಾಜದಲ್ಲಿನ ಕೆಲವು ಕಟ್ಟು ಪಾಡುಗಳನ್ನು ದಾಟಿ ಮು೦ದೆ ಬ೦ದವರಲ್ಲಿ ಲಕ್ಷ್ಮೀ ಜಿ ಪ್ರಸಾದರು ಒಬ್ಬರು. “ಹೆಣ್ಣು ಎ೦ತ ಕಲ್ತರೆ೦ತ ಒಲೆ ಬೂದಿ ಒಕ್ಕುದು ತಪ್ಪ "ಇದೊ೦ದು ಹವ್ಯಕ ಸಮುದಾಯದ ಕಟ್ಟು ಪಾಡು. ಇದನ್ನೇ ಸವಾಲಾಗಿ ತೆಗೆದುಕೊ೦ಡು ಲಕ್ಷ್ಮೀ ಜಿ ಪ್ರಸಾದರು  ಮನೆಯ ಒಲೆಯ ಬೂದಿ ತೆಗೆಯುವುದು ಅವಮಾನದ ಕೆಲಸ ಎ೦ದು ಭಾವಿಸಿ ಏನಾದರು ಒ೦ದು ಕೆಲಸ ಮಾಡಲೇ ಬೇಕು ಎ೦ದು ಯೋಚನೆ ಮಾಡಿದಾಗ ಹೊಳೆದದ್ದೇ ಪ್ರೊಫೆಸರ್ ಆಗಬೇಕೆ೦ದು.ಅದಕ್ಕಾಗಿ ಬಿ.ಎಸ್ಸಿ ಡಿಗ್ರಿ ಮಾಡಿದರು.ಆದ್ರೆ ವಿಜ್ಞಾನದ ಪಾಠ ಗಳು ಅವರಿಗೆ ಹಿಡಿಸಲಿಲ್ಲ. ಲಕ್ಷ್ಮೀ ಜಿ ಪ್ರಸಾದರಿಗೆ ಸಣ್ಣ ಪ್ರಾಯದಲ್ಲಿಯೇ ನಾಟಕ ಮತ್ತು ನೃತ್ಯದಲ್ಲಿ ಆಸಕ್ತಿ ಇತ್ತು.ತಾನು ಮಾಡಿದ ಬಿ.ಎಸ್ಸಿ ಡಿಗ್ರಿ ತಮ್ಮ ದಾರಿಗೆ ಸೂಕ್ತವಲ್ಲ ಎಂದು ಭಾವಿಸಿದಾಗ ತಮ್ಮ ಪತಿ ಗೋವಿ೦ದ ಪ್ರಸಾದರು ಕನ್ನಡದಲ್ಲಿ ಎಂ.ಎ ಮಾಡುವಂತೆ ಸೂಚಿಸಿದರು .ಇದರ ಬೆನ್ನಲ್ಲೇ,ಹಿ೦ದಿಯಲ್ಲಿ ಎ೦. ಎ ,ಮೊದಲ ದರ್ಜೆಯಲ್ಲಿ ಸ೦ಸ್ಕೃತ ದಲ್ಲಿ ಎ೦. ಎ ಮುಗಿಸಿದರು .ಒಟ್ಟಿನಲ್ಲಿ ಮೂರು ಎ೦. ಎ ಗಳನ್ನು ಮುಗಿಸಿದರು.
ಕನ್ನಡದಲ್ಲಿ ಇವರಿಗೆ ಜಾನಪದ ಸಾಹಿತ್ಯ ಇಷ್ಟ ಆಯ್ತು.ನ೦ತರ ಬೆ೦ಗಳೂರಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ನಿರ್ವಹಿಸುವುದರ ಜೊತೆಗೆ ತುಳುನಾಡಿನ ನಾಗಬ್ರಾಹ್ಮ್ಮ ಮತ್ತು ಕ೦ಬಳ ಬಗೆಗೆ ಪಿ .ಎಚ್ .ಡಿ ಯನ್ನು ಪಡೆದರು.ಪ್ರಸ್ತುತ ಇವರು ಬೆಳ್ಳಾರೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೀವೆಸಲ್ಲಿಸುತ್ತಿದ್ದಾರೆ . ಇವರು ತುಳುನಾಡಿನ ಭೂತಗಳ ಕುರಿತು  “ಭೂತಗಳ ಅದ್ಭುತ ಜಗತ್ತು “ಎ೦ಬ ಅಮೂಲ್ಯವಾದ ಕೃತಿಯನ್ನು ಬರೆದರು.ಮು೦ದೆ ಇದೇ ಹೆಸರಿನಲ್ಲಿ ಒ೦ದು ಬ್ಲಾಗನ್ನು ತೆರೆದರು.ಎಲ್ಲೂ ಇಲ್ಲದ ವಿಸ್ತಾರವಾದ  ಮಾಹಿತಿ ಇವರ ಬ್ಲಾಗ್ ನಲ್ಲಿದೆ.ಇವರ ಬ್ಲಾಗ್ ವಿಳಾಸ :-ಭೂತಗಳ ಅದ್ಭುತ ಜಗತ್ತು 
ಡಾ. ಲಕ್ಷ್ಮೀ ಜಿ ಪ್ರಸಾದರು ಹುಟ್ಟಿದ್ದು ಕಾಸರಗೋಡಿನ ಕೋಳ್ಯೂರುನಲ್ಲಿ.ಇವರ ತಾಯಿಯ ಹೆಸರು ವಾರಣಾಸಿ ಶ್ರೀ ಮತಿ ಸರಸ್ವತಿ  ಅಮ್ಮ .ತ೦ದೆ ದಿ.ವೇ ಮೂ . ನಾರಾಯಣ  ಭಟ್.ಇವರ ಪತಿಯ ಹೆಸರು ಗೋವಿ೦ದ ಪ್ರಸಾದ  ಮಗ ಅರವಿ೦ದ.ಇವರ ಮೂಲ ಹೆಸರು( ಡಾ. ಲಕ್ಷ್ಮೀ ವಿ).
ಸುಬ್ಬಿ ಇ೦ಗ್ಲಿಷು ಕಲ್ತದ್ದು ಇವರು ಬರೆದ ಮೊದಲ ಹವಿಗನ್ನಡ ನಾಟಕವಾಗಿದೆ.ಹವ್ಯಕ ಅಧ್ಯಯನ ಕೇ೦ದ್ರದ ಪ್ರಧಾನ ನಿರ್ದೇಶಕರಾದ ಶ್ರೀ ನಾರಾಯಣ ಶಾನುಭಾಗರು ಇವರ ನಾಟಕದ ಹಸ್ತ ಪ್ರತಿಯನ್ನು ಸ೦ಗ್ರಹಿಸಿದರು. ಸ೦ಶೋಧನೆ ಮಾಡುವುದರಿ೦ದ ಲಾಭವಿದೆ ಎ೦ಬುದು ಹಲವರ  ಅಭಿಪ್ರಾಯ. ಆದ್ರೆ ಇದರಿ೦ದ ನಷ್ಟ ಆಗಿರುವುದನ್ನು ಇವರು ಗಟ್ಟಿಧ್ವನಿಯಲ್ಲಿ ಹೇಳುತ್ತಾರೆ.ಯಾಕ೦ದ್ರೆ ಪಾಡ್ದನ ಹಾಡುವವರಿಗೆ,ಭೂತ ಕಟ್ಟುವವರಿಗೆ ಸ್ವಲ್ಪ ಹಣ ಕೊಡಬೇಕು.ಜೊತೆಗೆ ದೂರದ ಊರುಗಳಿಗೆ ಬಾಡಿಗೆ ಮಾಡಿಕೊ೦ಡು ಹೋಗಬೇಕಾಗುತ್ತದೆ.ನಷ್ಟಗಿ೦ತಲೂ ಆಸಕ್ತಿ ಮುಖ್ಯವೆನ್ನುತ್ತಾರೆ.ಇವರು ಕ್ಯಾಮರಾ ಹಿಡಿದುಕೊ೦ಡು ಹೋದ ಕೆಲವು ಕಡೆಗಳಲ್ಲಿ ಬೈಗುಳವನ್ನು ಕೇಳಿದ್ದಾರೆ.ಫೋಟೋ ಕ್ಲಿಕ್ ಮಾಡದೆ ಬರಿ ಗೈ ನಲ್ಲೂ ಬ೦ದಿರುವುದನ್ನು ಅವರು ನೇರವಾಗಿಯೇ ಹೇಳುತ್ತಾರೆ.ದಲಿದನೊಬ್ಬನ ದಾರುಣ ದುರ೦ತ ಕತೆಯನ್ನು ಈಜೋ ಮ೦ಜೊಟ್ಟಿ ಗೋಣ ನಾಟಕದಲ್ಲಿ ಬಿ೦ಬಿಸಿದ್ದಾರೆ.ಸದಾ ಹೊಸತನದ ವಿಚಾರಗಳನ್ನು ಬರೆಯುತ್ತಲೇ ಇರುತ್ತಾರೆ.ಇವರನ್ನು ಬಹಳ ಸಮಯದಿ೦ದ ಭೇಟಿ ಮಾಡಬೆಕೇ೦ಬ ಹ೦ಬಲ ಇತ್ತು. ಇತ್ತೀಚಿಗೆ ಮ೦ಗಳೂರಿಗೆ ಕಾರ್ಯಕ್ರಮದ ನಿಮಿತ್ತ ಬ೦ದಾಗ ಮಾತಾಡಲು ಸಿಕ್ಕಿದರು.

ಇವರ ಪ್ರಕಟಿತ ಕೃತಿಗಳು
೧.ಅರಿವಿನ೦ಗಳದ ಸುತ್ತ(ಶೈಕ್ಷಣಿಕ ಬರಹಗಳು)
೨. ಮನೆಯ೦ಗಳದಿ ಹೂ(ಕಥಾಸಂಕಲನ)
೩.ದೈವಿಕ ಕ೦ಬಳ(ತುಳು ಜಾನಪದ ಸಂಶೋದನೆ)
೪.ಕಂಬಳ ಕೋರಿ ನೇಮ(ತುಳು ಜಾನಪದ ಸಂಶೋದನೆ)
೫.ತುಂಡು ಭೂತಗಳು-ಒಂದು ಅಧ್ಯಯನ(ಸಂಶೋದನೆ)
೬.ಕನ್ನಡ-ತುಳು ಜನಪದ ಕಾವ್ಯಗಳಲ್ಲಿ ಸಮಾನ ಆಶಯಗಳು(ತೌಲನಿಕ ಅಧ್ಯಯನ)
೭.ತುಳು ಪಾಡ್ದನಗಳಲ್ಲಿ ಸ್ತ್ರೀ(ಸಂಶೋಧನಾತ್ಮಕ ಅಧ್ಯಯನ)
೮.ಪಾಡ್ದನ ಸಂಪುಟ(ಸಂಪಾದನೆ)
೯.ತುಳುವ ಸಂಸ್ಕಾರಗಳು ಮತ್ತು ವೃತ್ತಿಗಳು(ಸಂಸ್ಕೃತಿ ಶೋಧನೆ)
೧೦.ತುಳುನಾಡಿನ ಅಪೂರ್ವ ಭೂತಗಳು(ಸಂಶೋಧನೆ)
೧೧.ಬೆಳಕಿನೆಡೆಗೆ(ಸಂಶೋಧನಾ ಲೇಖನಗಳು)
೧೨.ತುಳು ಜನಪದ ಕವಿತೆಗಳು(ಸಂಪಾದನೆ)
೧೩.ಚಂದಬಾರಿ ರಾಧೆ ಗೋಪಾಲ ಮತ್ತು ಇತರ ಅಪೂರ್ವ ಪಾಡ್ದನಗಳು(ಸಂಪಾದನೆ)
೧೪.ಬಂಗ್ಲೆ ಗುಡ್ಡೆ ಸಣ್ಣಕ್ಕನ ಮೌಖಿಕ ಸಾಹಿತ್ಯ
೧೫.ಶಾರದಾ ಜಿ ಬಂಗೇರರ ಮೌಖಿಕ ಸಾಹಿತ್ಯ
೧೬.ತುಳು ಜನಪದ ಕಾವ್ಯಗಳಲ್ಲಿ ಕಾವ್ಯ ತತ್ವಗಳು
೧೭.ಬಸ್ತರ್ ಜಾನಪದ ಸಾಹಿತ್ಯ  *
೧೮.ಸುಬ್ಬಿ ಇಂಗ್ಲೀಷ್ ಕಲ್ತದು(ಮಹಿಳೆ ಬರೆದ ಮೊದಲ ಹವಿಗನ್ನಡ ನಾಟಕ)
೧೯.ಭೂತಗಳ ಅದ್ಭುತ ಜಗತ್ತು
೨೦.ತುಳುನಾಡಿನ ನಾಗಬ್ರಹ್ಮ ಮತ್ತು ಕಂಬಳ?ಒಂದು ವಿಶ್ಲೇಷಣಾತ್ಮಕ ಅಧ್ಯಯನ.
ಇವರು ಇತ್ತಿಚ್ಜೆಗೆ ಕುಡ್ಲ ತುಳು ವಾರ ಪತ್ರಿಕೆಯಲ್ಲಿ ಅ೦ಕಣವನ್ನೂ ಬರೆಯುತ್ತಿದ್ದಾರೆ. ಜೊತೆಗೆ ಕನ್ನಡ ಪ್ರಭಾದಲ್ಲೂ ಲೇಖನ ಪ್ರಕಟವಾಗುತ್ತಿದೆ.  1065 ದೈವಗಳ ಹೆಸರುಗಳನ್ನು ಪತ್ತೆ ಹಚ್ಚಿ ಪ್ರಕಟಿಸಿದ್ದಾರೆ.ಇವರ ಕೆಲವು ಲೇಖನ ಮತ್ತು ಭೂತಗಳ ಹೆಸರನ್ನು ಅನೇಕರು ನಕಲು ಕೂಡ ಮಾಡಿದ್ದಾರೆ ಈ ಬಗ್ಗೆ ಅವರಿಗೆ ಬೇಸರವಿದೆ.
ಇವರಿಗೆ ಅನೇಕ ಪ್ರಶಸ್ತಿ -ಪುರಸ್ಕಾರಗಳು ಸ೦ದಿವೆ .ಅರಿವಿನ೦ಗಳ ಕೃತಿಗೆ ಕಾವ್ಯ ಶ್ರೀ ಪುರಸ್ಕಾರ,ಜನತಾ ಸೈನಿಕದಳ ಸಾ೦ಸ್ಕ್ರತಿಕ ವೇದಿಕೆಯಿ೦ದ ಕರ್ನಾಟಕ ವಿಭೂಷಣ, ಜಯಪ್ರಕಾಶ ನಾರಾಯಣ ರಾಷ್ಟ್ರೀಯ  ಮಹಿಳಾ ರತ್ನ ,ಕಲಾ ಜ್ಯೋತಿ ಪುರಸ್ಕಾರ ಸ೦ದಿದೆ.ತುಳು ನಾಡಿನ ದೈವಗಳ ಬಗೆಗೆ ಆಳವಾದ ಅಧ್ಯಯನ ಮಾಡಿರುವ ಇವರನ್ನು ತುಳುನಾಡಿನಲ್ಲಿ ಯಾರು ಕೂಡ ಗುರುತಿಸಲಿಲ್ಲ ಎನ್ನುವುದು ಮನದೊಳಗಿನ ಬೇಸರ.ಶ್ರೀ ಮತಿ  ಡಾ. ಲಕ್ಷ್ಮೀ ಜಿ ರವರನ್ನು ವಿದ್ವಾ೦ಸರ ಸಾಲಿನಲ್ಲಿ ಸೇರಿಸಿದರೆ ತಪ್ಪಾಗಲಾರದು.
ನನ್ನ ಬ್ಲಾಗ್ ವಿಳಾಸ:‍ http://vkkadaba.blogspot.in/

ಪ್ರತಿಕ್ರಿಯೆಗಳು










ಫೇಸ್ ಬುಕ್ಕಿನಲ್ಲಿ ಇವರ ಪೋಸ್ಟುಗಳನ್ನು ನೋಡುತ್ತಿರುತ್ತೇನೆ. ಈ ವಿಷಯಗಳನ್ನು ಅದರಿಂದಲೇ ತಿಳಿಯಿತು. ಸಾಧಕಿಗೆ ಅಭಿನಂದನೆಗಳು. ಪರಿಚಯಿಸಿದ ನಿಮಗೂ ಧನ್ಯವಾದಗಳು.
ಕಡಬವನ್ನು ತಾಲ್ಲೂಕು ಮಾಡಬೇಕೆಂಬ ಹೋರಾಟ ಬಲವಾದಾಗ ಅಲ್ಲಿಗೆ ವಿಶೇಷ ತಹಸೀಲ್ದಾರರ ನೇಮಕವಾಯಿತು. ಹಾಗೆ ನೇಮಕವಾಗಿದ್ದ ಕಡಬದ ಮೊದಲ ವಿಶೇಷ ತಹಸೀಲ್ದಾರ್ ನಾನಾಗಿದ್ದೆ!
http://sampada.net/%E0%B2%A4%E0%B3%81%E0%B2%B3%E0%B3%81-%E0%B2%B8%E0%B2%82%E0%B2%B8%E0%B3%8D%E0%B2%95%E0%B3%83%E0%B2%A4%E0%B2%BF%E0%B2%AF-%E0%B2%AC%E0%B2%97%E0%B3%8D%E0%B2%97%E0%B3%86-%E0%B2%8E%E0%B2%B0%E0%B2%A1%E0%B3%81-%E0%B2%A1%E0%B2%BE%E0%B2%95%E0%B3%8D%E0%B2%9F%E0%B2%B0%E0%B3%87%E0%B2%9F%E0%B3%8D-%E0%B2%AA%E0%B2%A1%E0%B3%86%E0%B2%A6-%E0%B2%AE%E0%B3%8A%E0%B2%A6%E0%B2%B2-%E0%B2%AE%E0%B2%B9%E0%B2%BF%E0%B2%B3%E0%B3%86

 


Wp/tcy/ಲಕ್ಷ್ಮೀ ಜಿ ಪ್ರಸಾದ್

Wp > tcy > ಲಕ್ಷ್ಮೀ ಜಿ ಪ್ರಸಾದ್
< Wp‎ | tcy

ಲಕ್ಷ್ಮೀ ಜಿ ಪ್ರಸಾದ್
ಲಕ್ಷ್ಮಿ ಜಿ ಪ್ರಸಾದ್ ಪನ್ಪುನಾರ್ ತುಳು ಬುಕ್ಕೊ ಕನ್ನಡೊಡು ಬೆಂದಿನ ಪೊಣ್ಜೋವು. ಆರೆನ ಬಗೆಟ್ ಉಂದೊಂಜಿ ಪರಿಚಯೊ ಲೇಖನೊ.

ಕೌಟುಂಬಿಕ ಇವರೊEdit

ಲಕ್ಷ್ಮೀ ಜಿ ಪ್ರಸಾದೆರ್ ಪುಟ್ಟಿನಿ ಕಾಸರಗೋಡ್ ದ ಕೋಳ್ಯೂರುಡು.ಅಪ್ಪೆನ ಪುದರ್ ವಾರಣಾಸಿ ಶ್ರೀ ಮತಿ ಸರಸ್ವತಿ ಅಮ್ಮ ಅಮ್ಮೆರ್ ನ ಪುದರ್ ದಿ ವೇ ಮೂ ನಾರಾಯಣ ಭಟ್. ಕಂಡನ್ಯ ನಪುದರ್ ಗೋವಿ೦ದ ಪ್ರಸಾದ. ಮಗೆ ಅರವಿ೦ದ. ಮೇರ್ ನ ಸುರುತ ಪುದರ್ ಡಾ. ಲಕ್ಷ್ಮೀ ವಿ.ಸುಬ್ಬಿ ಇ೦ಗ್ಲಿಷು ಕಲ್ತದ್ದು ಮೇರ್ ಬರೆಯಿನ ಸುರತ ನಾಟಕೊ ತುಳು ಪಾಡ್ದನಲೆಡ್ ಪೊಣ್ಣು [1]

ವಿದ್ಯಾಭ್ಯಾಸೊEdit

  1. ಕನ್ನಡ ಎಂ.ಎ ಐನ ಒಟ್ಟುಗೆ, ಹಿ೦ದಿಡ್ ಎ೦. ಎ, ಸ೦ಸ್ಕೃತ ಡ್ ಎ೦. ಎ ಇಂಚ ಮೂಜಿ ಎ೦. ಎ ಮಲ್ತಿನಾರ್.
  2. ತುಳುನಾಡ್‍ದ ಬೂತಲೆನ ಬಗೆಟ್ ಮಲ್ಲ ಮಟ್ಟ್‌ದ ಅಧ್ಯಯನ ಮಲ್ತಿನಾರ್. ಅಂಚಾದ್ ಇಂಬೆರೆನ ಬ್ಲಾಗ್‍ಡ್ ಭೂತಾರಾಧನೆಗ್ ಸಂಬಂಧಿಸಾಯಿನ ಮಾತ ಇಸಯಲಾ ಓದ್ಯರ ತಿಕುಂಡು.

ಬರೆಯಿನ ಬೂಕುಲುEdit

  1. ಅರಿವಿನ೦ಗಳದ ಸುತ್ತ(ಶೈಕ್ಷಣಿಕ ಬರಹಗಳು)
  2. ಮನೆಯ೦ಗಳದಿ ಹೂ(ಕಥಾಸಂಕಲನ)
  3. ದೈವಿಕ ಕ೦ಬಳ(ತುಳು ಜಾನಪದ ಸಂಶೋದನೆ)
  4. ಕಂಬಳ ಕೋರಿ ನೇಮ(ತುಳು ಜಾನಪದ ಸಂಶೋದನೆ)
  5. ತುಂಡು ಭೂತಗಳು-ಒಂದು ಅಧ್ಯಯನ(ಸಂಶೋದನೆ)
  6. ಕನ್ನಡ-ತುಳು ಜನಪದ ಕಾವ್ಯಗಳಲ್ಲಿ ಸಮಾನ ಆಶಯಗಳು(ತೌಲನಿಕ ಅಧ್ಯಯನ)
  7. ತುಳು ಪಾಡ್ದನಗಳಲ್ಲಿ ಸ್ತ್ರೀ(ಸಂಶೋಧನಾತ್ಮಕ ಅಧ್ಯಯನ)
  8. ಪಾಡ್ದನ ಸಂಪುಟ(ಸಂಪಾದನೆ)
  9. ತುಳುವ ಸಂಸ್ಕಾರಗಳು ಮತ್ತು ವೃತ್ತಿಗಳು(ಸಂಸ್ಕೃತಿ ಶೋಧನೆ)
  10. ತುಳುನಾಡಿನ ಅಪೂರ್ವ ಭೂತಗಳು(ಸಂಶೋಧನೆ)
  11. ಬೆಳಕಿನೆಡೆಗೆ(ಸಂಶೋಧನಾ ಲೇಖನಗಳು)
  12. ತುಳು ಜನಪದ ಕವಿತೆಗಳು(ಸಂಪಾದನೆ)
  13. ಚಂದಬಾರಿ ರಾಧೆ ಗೋಪಾಲ ಮತ್ತು ಇತರ ಅಪೂರ್ವ ಪಾಡ್ದನಗಳು(ಸಂಪಾದನೆ)
  14. ಬಂಗ್ಲೆ ಗುಡ್ಡೆ ಸಣ್ಣಕ್ಕನ ಮೌಖಿಕ ಸಾಹಿತ್ಯ
  15. ಶಾರದಾ ಜಿ ಬಂಗೇರರ ಮೌಖಿಕ ಸಾಹಿತ್ಯ
  16. ತುಳು ಜನಪದ ಕಾವ್ಯಗಳಲ್ಲಿ ಕಾವ್ಯ ತತ್ವಗಳು
  17. ಬಸ್ತರ್ ಜಾನಪದ ಸಾಹಿತ್ಯ
  18. ಸುಬ್ಬಿ ಇಂಗ್ಲೀಷ್ ಕಲ್ತದು(ಮಹಿಳೆ ಬರೆದ ಮೊದಲ ಹವಿಗನ್ನಡ ನಾಟಕ)
  19. ಭೂತಗಳ ಅದ್ಭುತ ಜಗತ್ತು
  20. ತುಳುನಾಡಿನ ನಾಗಬ್ರಹ್ಮ ಮತ್ತು ಕಂಬಳ? ಒಂದು ವಿಶ್ಲೇಷಣಾತ್ಮಕ ಅಧ್ಯಯನ.

ಸಾಧನೆEdit

  1. ತುಳು ಸಂಸ್ಕೃತಿದ ಬಗೆಟ್ ರಡ್ಡ್ ಡಾಕ್ಟರೇಟ್ ಪಡೆಯಿನ ಸುರುತ ಪೊಂಜೊವು.

ಬಾಹ್ಯೊ ಕೊಂಡಿEdit

ಉಲೇಖEdit

  1. http://yourlisten.com/thimmappavk/-29 ಪಾಡ್ದನಲೆಡ್ ಪೊಣ್ಣು

 https://incubator.m.wikimedia.org/wiki/Wp/tcy/%E0%B2%B2%E0%B2%95%E0%B3%8D%E0%B2%B7%E0%B3%8D%E0%B2%AE%E0%B3%80_%E0%B2%9C%E0%B2%BF_%E0%B2%AA%E0%B3%8D%E0%B2%B0%E0%B2%B8%E0%B2%BE%E0%B2%A6%E0%B3%8D


೧ ಹೆಸರು: ಡಾ ಲಕ್ಷ್ಮೀ ವಿ [ಡಾ.ಲಕ್ಷ್ಮೀ ಜಿ ಪ್ರಸಾದ]

2 ಶೈಕ್ಷಣಿಕ ಅರ್ಹತೆಗಳು;

೧ ಬಿಎ.ಸ್ಸಿ-ಎಸ್ ಡಿಎಮ್ ಕಾಲೇಜು ಉಜಿರೆ

ಎಂ.ಎ[ಕನ್ನಡ] ನಾಲ್ಕನೇ RANK ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ

ಎಂ.ಎ[ಸಂಸ್ಕøತ] ಪ್ರಥಮ RANK ಮಂಗಳೂರು ವಿಶ್ವ ವಿದ್ಯಾಲಯ

ಎಂಎ[ಹಿಂದಿ] ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ

ಎಂ.ಫಿಲ್[ವಿಷಯ:ಈಜೋ ಮಂಜೊಟ್ಟಿ ಗೋಣ-ಒಂದು -ವಿಶ್ಲೇಷಣಾತ್ಮಕ ಅಧ್ಯಯನ]ವಿ ಎಮ್ ಯುನಿವರ್ಸಿಟಿ

ಪಿಹೆಚ್.ಡಿ[ವಿಷಯ:ತುಳು ನಾಡಿನ ನಾಗ ಬ್ರಹ್ಮ ಮತ್ತು ಕಂಬಳ-ಒಂದು ವಿಶ್ಲೇಷಣಾತ್ಮಕ ಅಧ್ಯಯನ )ಹಂಪಿ ಕನ್ನಡ ವಿಶ್ವ ವಿದ್ಯಾಲಯ

ಎರಡನೆಯ ಪಿಹೆಚ್.ಡಿ ಪದವಿ [ವಿಷಯ‘ಪಾಡ್ದನಗಳಲ್ಲಿ ತುಳುವ ಸಂಸ್ಕøತಿಯ ಅಭಿವ್ಯಕ್ತಿ’] ದ್ರಾವಿಡ ವಿಶ್ವ ವಿದ್ಯಾಲಯ
೮ .ಎನ್.ಇ.ಟಿ-ಯುಜಿಸಿ


೧೦ ಸಂಶೋಧನಾ ಕೃತಿಗಳು :೨೧

೧೨ಪ್ರಕಟಿತ ಲೇಖನಗಳು =೭೩

೧೩ :೨೧ ರಾಷ್ಟ್ರೀಯ /ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ ಮತ್ತು ಭಾಗವಹಿಸುವಿಕೆ=೨೧

೧೪ :೪೫ ರಾಜ್ಯ /ಪ್ರಾದೇಶಿಕ /ಕಾಲೇಜ್ ಮಟ್ಟದ ೪೫ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ=೪೫

೧೫ :ನನಗೆ ಕನ್ನಡ ,ತುಳು ,ಹಿಂದಿ ,ಇಂಗ್ಲಿಷ್ ,ಸಂಸ್ಕ್ರತ , ,ಹವಿಗನ್ನಡ ,ಗೌಡ ಕನ್ನಡ ಹೀಗೆ ಒಟ್ಟು 7 ಭಾಷೆಗಳ ತಿಳುವಳಿಕೆ ಇದೆ

೧೬ ಪ್ರಶಸ್ತಿ-ಪುರಸ್ಕಾರಗಳು

1 .ಜಯಪ್ರಕಾಶ ನಾರಾಯಣ ರಾಷ್ಟ್ರೀಯ ಮಹಿಳಾ ರತ್ನ

2 .ಕರ್ನಾಟಕ ಭೂಷಣ

3.ಕಲಾ ಜ್ಯೋತಿ

4.ತುಳುವೆರೆ ಆಯನೋ 2009[ಸಂಶೋಧನಾ ವಿಭಾಗ]

5.ಕಾವ್ಯಶ್ರೀ ಪುರಸ್ಕಾರ[ಕಥಾ ವಿಭಾಗ]

6OUTSTANDING TEACHER AWARD -2013

7 ಹವಿಗನ್ನಡದ ಮೊದಲ ನಾಟಕಗಾರ್ತಿ


ನನ್ನ ಸಂಶೋಧನಾ ಕೃತಿಗಳು೨೧

1 ತುಂಡು ಭೂತಗಳು-ಒಂದು ಅಧ್ಯಯನ ಮಾತೃಶ್ರೀ ಪ್ರಕಾಶನ ಬೆಂಗಳೂರು 978-81-920519-0-1

2 ತುಳು ಜನಪದ ಕಾವ್ಯಗಳಲ್ಲಿ ಕಾವ್ಯ ತತ್ವಗಳು ಹೇಮಾಂಶು ಪ್ರಕಾಶನ ಮಂಗಳೂರು 81-86670-73

3 ಬೆಳಕಿನೆಡೆಗೆ ಮಾತೃಶ್ರೀ ಪ್ರಕಾಶನ ಬೆಂಗಳೂರು 978-81-920519-5-6

4 ಕನ್ನಡ ತುಳು ಜನಪದ ಕಾವ್ಯಗಳಲ್ಲಿ ಸಮಾನ ಆಶಯಗಳು ಮಾತೃಶ್ರೀ ಪ್ರಕಾಶನ ಬೆಂಗಳೂರು 978-81-920519-2-5

5 ತುಳು ಪಾಡ್ದನಗಳಲ್ಲಿ ಸ್ತ್ರೀ ಮಾತೃಶ್ರೀ ಪ್ರಕಾಶನ ಬೆಂಗಳೂರು 978-81-920519-4-9

6 ತುಳುವ ಸಂಸ್ಕಾರಗಳು ಮತ್ತು ವೃತ್ತಿಗಳು ಮಾತೃಶ್ರೀ ಪ್ರಕಾಶನ ಬೆಂಗಳೂರು 978-81-920519-1-8

7 ತುಳು ಜನಪದ ಕವಿತೆಗಳು ಮಾತೃಶ್ರೀ ಪ್ರಕಾಶನ ಬೆಂಗಳೂರು 978-81-920519-6-3

8 ಪಾಡ್ದನ ಸಂಪುಟ ಮಾತೃಶ್ರೀ ಪ್ರಕಾಶನ ಬೆಂಗಳೂರು 978-81-920519-3-2

9 ಕಂಬಳ ಕೋರಿ ನೇಮ ಮಾತೃಶ್ರೀ ಪ್ರಕಾಶನ ಬೆಂಗಳೂರು 978-81-920519-7-6

10 ತುಳು ನಾಡಿನ ಅಪೂರ್ವ ಭೂತಗಳು ಮಾತೃಶ್ರೀ ಪ್ರಕಾಶನ ಬೆಂಗಳೂರು 978-81-920519-8-7

11 ಚಂದಬಾರಿ ರಾಧೆ ಗೋಪಾಲ ಮತ್ತು ಇತರ ಪಾಡ್ದನಗಳು ಮಾತೃಶ್ರೀ ಪ್ರಕಾಶನ ಬೆಂಗಳೂರು 978-81-920519-9-4

12 ದೈವಿಕ ಕಂಬಳ ಕೋಣ ಹರೀಶ ಎಂಟರ್ಪ್ರೈಸಸ್ ಬೆಂಗಳೂರ

13 ಅರಿವಿನಂಗಳದ ಸುತ್ತ ಮಾತೃಶ್ರೀ ಪ್ರಕಾಶನ ಬೆಂಗಳೂರು

14 ಮನೆಯಂಗಳದಿ ಹೂ ಮಾತೃಶ್ರೀ ಪ್ರಕಾಶನ ಬೆಂಗಳೂರು

 15 ನಾಗ ಬ್ರಹ್ಮ ಆರಾಧನೆ –ಒಂದು ವಿಶ್ಲೇಷಣಾತ್ಮಕ ಅಧ್ಯಯನ ಪ್ರಚೇತ ಬುಕ್ ಹೌಸ್ ,ಬೆಂಗಳೂರು

16 ತುಳು ಜನಪದ ಕಾವ್ಯಗಳಲ್ಲಿ ಕಾವ್ಯ ತತ್ವಗಳು ಪ್ರಚೇತ ಬುಕ್ ಹೌಸ್ ,ಬೆಂಗಳೂರು

17 ಭೂತಗಳ ಅದ್ಭುತ ಜಗತ್ತಿನಲ್ಲಿ ಪ್ರಚೇತ ಬುಕ್ ಹೌಸ್ ,ಬೆಂಗಳೂರು

18 ಶಾರದಾ ಜಿ ಬಂಗೇರರ ಮೌಖಿಕ ಜಾನಪದ ಪ್ರಚೇತ ಬುಕ್ ಹೌಸ್ ,ಬೆಂಗಳೂರು

19 ಬಂಗಲೆ ಗುಡ್ಡ ಸಣ್ಣಕ್ಕ ನ ಮೌಖಿಕ ಜಾನಪದ ಪ್ರಚೇತ ಬುಕ್ ಹೌಸ್ ,ಬೆಂಗಳೂರು

20 ಬಸ್ತರ್ ಜಾನಪದ ಸಾಹಿತ್ಯ ಪ್ರಚೇತ ಬುಕ್ ಹೌಸ್ ,ಬೆಂಗಳೂರು(ಅಚ್ಚಿನಲ್ಲಿದೆ )

೨೧ ದೇವೆರೆ ದಾಸಿಮಯ್ಯೆರೆ ವಚನೊಳು (ಅಚ್ಚಿನಲ್ಲಿದೆ) ಪ್ರಚೇತ ಬುಕ್ ಹೌಸ್ ,ಬೆಂಗಳೂರು


ಪ್ರಕಟಿತ ಸಂಶೋಧನಾ ಲೇಖನಗಳು -ವಿದ್ವತ್ ಪತ್ರಿಕೆಗಳು=೨೧ ಇತರೆ ೫೨ ಒಟ್ಟು =೭೩

1 .ತುಳು ಪಾಡ್ದನಗಳಲ್ಲಿ ಸ್ತ್ರೀ ಸಾಧನೆ ಬೆಂಗಳೂರು ವಿಶ್ವ ವಿದ್ಯಾಲಯ ಜುಲೈ-ಡಿಸೆಂಬರ್2009

2 ಕನ್ನಡ ಮತ್ತು ತುಳು ಭಾಷಾ ಸಾದೃಶ್ಯಗಳು ಕರ್ನ್ನಾಟಕ ಲೋಚನ ಬಿಎಂ ಶ್ರೀ ಪ್ರತಿಷ್ಠಾನ ಜನವರಿ-ಡಸೆಂಬರ್2010

3 ತುಳು ನಾಡಿನ ನಾಗ ಕೋಲ ಕರ್ನ್ನಾಟಕ ಲೋಚನ ಬಿಎಂ ಶ್ರೀ ಪ್ರತಿಷ್ಠಾನ

4 ಕೆರೆಗೆ ಹಾರ ಹುಳಿಯಾರಿನ ಕೆಂಚವ್ವ ಮತ್ತು ಬಾಲೆ ಮಾಡೆದಿ ಪಾಡ್ದನ ಕರ್ನ್ನಾಟಕ ಲೋಚನ ಬಿಎಂ ಶ್ರೀ ಪ್ರತಿಷ್ಠಾನ

5 ಕುಲೆ ಭೂತಗಳು ಡ್ರಾವಿಡ ಅಧ್ಯಯನ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಜುಲೈ-ಡಿಸೆಂಬರ್2008 2250/1614

6 ಕೆಲವು ತುಂಡು ಭೂತಗಳು ಡ್ರಾವಿಡ ಅಧ್ಯಯನ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಜನವರಿ-ಜೂನ್2010 2250/1614

7 ವಿಶಿಷ್ಟ ಉಪ ದೈವಗಳು ಡ್ರಾವಿಡ ಅಧ್ಯಯನ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಜನವರಿ-ಜೂನ್2009 2250/1614

8 ಬೈಲ ಮಾರಿ ನಲಿಕೆ ಜಾನಪದ ಕರ್ನಾಟಕ ಹಂಪಿ ಕನ್ನಡ ವಿಶ್ವ

9    ಅಜ್ಜಿ ಭೂತ ಮತ್ತು ಕೂಜಿಲು ತುಳುವ ಪ್ರಾದೇಶಿಕಸಂಶೋಧನಾ ಕೇಂದ್ರ                                                                                                                                                                                                                                                                                                                                                                                                                                                                                                                                                                                                                                                                                                                                                                                 
10   ಉರವ ಮತ್ತು ಎರು ಬಂಟ   ತುಳುವ ಪ್ರಾದೇಶಿಕಸಂಶೋಧನಾ ಕೇಂದ್ರ ಉಡುಪಿ                                                                                                                                                                                                                                                                                                                                                                                                                                                                                                                                                                                                                                                                                                                                                                          11   11 ಬೆಳ್ಳಾರೆಯ ಅಧ್ಯಯನ      ತುಳುವ ಪ್ರಾದೇಶಿಕಸಂಶೋಧನಾ ಕೇಂದ್ರ ಉಡುಪಿ                                                                                                                                                                                                                                                                                                                                                                                                                                                                                                                                                                                                                                                                                                                                                                                   
12   ಎಣ್ಮೂರು ಗುತ್ತಿನ ಬಾಲೆ ದೈಯಕ್ಕು   ತುಳುವ ಪ್ರಾದೇಶಿಕಸಂಶೋಧನಾ ಕೇಂದ್ರ ಉಡುಪಿ                                                                                                                                                                                                                                                                                                                                                                                                                                                                                                                                                                                                                                                                                                                                                                                   
13   ಅಬ್ಬೆ ಜಲಾಯ    ತುಳುವ ಪ್ರಾದೇಶಿಕಸಂಶೋಧನಾ ಕೇಂದ್ರ ಉಡುಪಿ                                                                                                                                                                                                                                                                                                                                                                                                                                                                                                                                                                                                                                                                                                                                                                                   
14   ತುಳುನಾಡಿನ ನಾಗ ಭೂತಗಳು       ಕಣಿಪುರ ಫೆಬ್ರುವರಿ2012 

15 ತುಳು ಜನಪದರ ಸಿರಿ ಕೃಷ್ಣ    ತುಳುವ ಉಡುಪಿ

16  ತುಳುನಾಡಿನ ನಾಗ ಭೂತಗಳು ಕಣಿಪುರ ಫೆಬ್ರುವರಿ2012

17  ಕಿರಿಯೋಳು ಹಿರಿದಿಮ್ಮವ್ವ ಮತ್ತು ಪರತಿ

18  ವಾಸ್ತವಿಕ ನೆಲೆಯಲ್ಲಿ ತುಂಡು ಭೂತಗಳು ಕನ್ನಡ ನಾಡು ನುಡಿ ಕನ್ನಡ ಸಾಹಿತ್ಯ ಪರಿಷತ್


ಪ್ರಕಟಿತಲೇಖನಗಳು-ಶೈಕ್ಷಣಿಕ/ವೈಚಾರಿಕ/ಸಂಶೋಧನಾತ್ಮಕ=೫೨



1 ವಿಜಯ ಕರ್ನಾಟಕ ಅಬ್ಬೆ ಜಲಾಯ 8-10-2011

2 ತುಳು ನಾಡಿನ ನಾಗ ಭೂತಗಳು ಉದಯ ವಾಣಿ 5-8-2011

3 ಕನ್ನಡ ಮಾಧ್ಯಮದಲ್ಲಿ ವಿಜ್ಞಾನದ ಶಿಕ್ಷಣ ವಿಜಯ ಕರ್ನಾಟಕ 25-7-2006

4 ಪ್ರಾಥಮಿಕ ಶಿಕ್ಷಣಕ್ಕೆ ಶಾಲೆ ವಿಜಯ ಕರ್ನಾಟಕ

5 ಅವನತಿಯ ಹಾದಿಯಲ್ಲಿ ಉನ್ನತ ವೈದ್ಯಕೀಯ ಶಿಕ್ಷಣ ವಿಜಯ ಕರ್ನಾಟಕ 15-3-2002

6 ಉಪನ್ಯಾಸಕರ ಅರ್ಹತೆಗೊಂದು ಮಾನದಂಡ ವಿಜಯ ಕರ್ನಾಟಕ 19-10-2006

7 ದಾರಿ ಯಾವುದಯ್ಯ ಕಾಯಕದ ಕೈಲಾಸಕ್ಕೆ ವಿಜಯ ಕರ್ನಾಟಕ 11-12002

8 ಪರೀಕ್ಷಗಳು ಬರುತ್ತಿವೆ ವಿಜಯ ಕರ್ನಾಟಕ 1-32002

9 ಮಕ್ಕಳ ಗಣತಿ ಶಿಕ್ಷಕರಿಗೆ ಪಚೀತಿ ವಿಜಯ ಕರ್ನಾಟಕ 14-3-2003
10 ಶಿಕ್ಶಕ ಈಗ ಲಾಟರಿ ಮಾರಾಟಗಾರ ವಿಜಯ ಕರ್ನಾಟಕ 27-12-2002

11 ಸ್ತ್ರೀ ಲೋಲುಪನೀತ ಸಿರಿ ಕೃಷ್ಣ ಉದಯ ವಾಣಿ 20-8-2011

12 ನಳ ಭೀಮರನ್ನು ನೋಡಿ ಕಲಿಯಿರಿ ಉದಯ ವಾಣಿ

13 ಸಾಮಾನ್ಯ ಪರೀಕ್ಷೆ ಸಾಮಾನ್ಯರಿಗಲ್ಲ ವಿಜಯ ಕಿರಣ

14 ಮಕ್ಕಳ ಗಣತಿಗೆ ಬಂದಾಗ ವಿಜಯ ಕಿರಣ

15 ಬಗೆಹರಿಯದ ಸಿಇಟಿ ಗೊಂದಲ ವಿಜಯ ಕಿರಣ

16 ಕ್ರಿಕೆಟ್ ಮಾತ್ರ ಕ್ರೀಡೆಯಲ್ಲ ವಿಜಯ ಕಿರಣ

17 ಸಾಧಿಸುವ ಛಲವೊಂದದ್ದರೆ ಸಾಕು ವಿಜಯ ಕಿರಣ

18 ಕೋಲಾರದ ಗಣಿ ಇನ್ನೆಸ್ಟು ದಿನ ನಮ್ಮದು ವಿಜಯ ಕಿರಣ

19 ಸಂದರ್ಶನವೆಂಬ ನಾಟಕದಲ್ಲಿ ವಿಜಯ ಕಿರಣ

20 ಪರೀಕ್ಷಗಳು ಬರುತ್ತಿವೆ ವಿಜಯ ಕಿರಣ

21 ಸ್ತ್ರೀಯರಿಗೇನು ಬೇಕು ವಿಜಯ ಕಿರಣ

22 ಮಾತಿಗೆ ಬಡತನವಿಲ ್ಲ ವಿಜಯ ಕಿರಣ

23 ದೂರದ ಫ್ಲ್ಯಾಟ್ ನುಣ್ಣಗೆ ವಿಜಯ ಕರ್ನಾಟಕ

24 ಮಧ್ಯಮ ವರ್ಗಕ್ಕೆ ನಿತ್ಯವೂ ಮೂರ್ಖರ ದಿನ ವಿಜಯ ಕರ್ನಾಟಕ 1-4-2005

25 ಮಲೇರಿಯ ನಿರ್ಮೂಲನೆ ವಿಜಯ ಕಿರಣ

26 ಜಾಣ ಕಿವುಡು ವಿಜಯ ಕರ್ನಾಟಕ

27 ಶಿಕ್ಷಕರ ಜವಾಬ್ದಾರಿ ವಿಜಯ ಕರ್ನಾಟಕ
28 ಹೊರಲಾರದ ಮಲ್ಲಿಗೆಯ ಹೊರೆ ಹೊಸ ದಿಗಂತ

29 ದಡವರಿಯದ ಅಲೆಗಳು ಹೊಸ ದಿಗಂತ

30 ನಿಮಗೆಂಥ ಶಿÀಕ್ಷಕರು ಬೇಕು? ಹೊಸ ದಿಗಂತ 5-9-2001

31 ತುಳುವರ ಬಲೀಂದ್ರ ಜ್ಞಾನ ಪಯಸ್ವಿನಿ 2-1-2011

32 ಪಾಡ್ದನಗಳ ಸ್ವರೂಪ ಜ್ಞಾನ ಪಯಸ್ವಿನಿ 16-11-211

33 ಜಾನಪದ ಪರಿಕಲ್ಪನೆ ಜ್ಞಾನ ಪಯಸ್ವಿನಿ 1-12-2011

34 ತುಳು ಪಾಡ್ದನಗಳಲ್ಲಿ ಸ್ತ್ರೀ ಜ್ಞಾನ ಪಯಸ್ವಿನಿ 7-12-2011

35 ಬಾಲ ಜೇವು ಮಾಣಿಗ ಜ್ಞಾನ ಪಯಸ್ವಿನಿ 14-12-2011

36 ಬಾಲೆ ಮಧುರಗೆ ಜ್ಞಾನ ಪಯಸ್ವಿನಿ 21-12-2011

37 ತುಳುವ ಸಂಸ್ಕಾರಗಳು ಜ್ಞಾನ ಪಯಸ್ವಿನಿ 6-12012

38 ಪೆರುವಾಜೆಯಲ್ಲಿ ಅಪರೂಪದ ಬುದ್ಧನ ಮೂರ್ತ ಪತ್ತೆ ಪ್ರಜಾವಾಣಿ 30-3-2012

39 ಪಾಜಪಳ್ಳ ಕಲಾವಿದರು ಜ್ಞಾನ ಪಯಸ್ವಿನಿ 20-2-2012

40 ಪೆರುವಾಜೆಯಲ್ಲಿ ಬುದ್ಧನ ಮೂರ್ತಿಪತ್ತೆ ಜ್ಞಾನ ಪಯಸ್ವಿನಿ 13-1-2012

41 ಶಿಕ್ಷಕರಿಂದೇನು ಮಾಡಲು ಸಾಧ್ಯ? ಸುಳ್ಯ ಸುದ್ದಿ ಬಿಡುಗಡೆ 3-9-2012

42 ನಮ್ಮ ಮಕ್ಕಳನ್ನು ರಕ್ಷಸಿ ಕೊಳ್ಳೋಣ ಸುಳ್ಯ ಸುದ್ದಿ ಬಿಡುಗಡೆ 15-10-2012

43 ಬೆಳ್ಳಾರೆಯ ಸಾಂಸ್ಕøತಿಕ ಅಧ್ಯಯನ ಸುಳ್ಯ ಸುದ್ದಿ ಬಿಡುಗಡೆ 15-8-2011

44 ಕೆಮ್ಮಲೆಯ ನಾಗ ಬ್ರಹ್ಮ ಸುಳ್ಯ ಸುದ್ದಿ ಬಿಡುಗಡೆ 25-7-2011

45 ದ್ವಿಚಕ್ರ ವಾಹನ ಮಹಿಳಗೆ ವರದಾನ ಮಂಗಳಾ ವಾರ ಪತ್ರಿಕೆ

46 ಸಂಸ್ಕøತಿಗೆ ಆಶಾ ಕಿರಣ ಮಂಗಳಾ ವಾರ ಪತ್ರಿಕೆ

47 ಸಂಶೋಧನೆಯ ಹೊಸ ಸಾಧ್ಯತೆಗಳು ಪ್ರಣವ ಸ್ಮøತಿ

48 ಅನೇಕ ದೇವತಾ ತತ್ವದಿಂದ ಏಕ ದೇವತಾ ತತ್ವ ತ್ರಿಮೂರ್ತಿ ಕೌಸ್ತುಭ

49 ಕುಲೆ ಭೂತಗಳು ¸ಸ್ಮರಣ ಸಂಚಿಕೆ ದೇವರ ಕಾನ ಶಾಲೆ

50 ಕನ್ನಡ ತುಳು ಭಾಷಾ ಸಾದೃಶ್ಯಗಳು ¸ಸ್ಮರಣ ಸಂಚಿಕೆ ದೇ ವರ ಕಾನ ಶಾಲೆ

51 ಹೊರಲಾರದ ಮಲ್ಲಿಗೆ ಹೊಸ ದಿಗಂತ

52 ಸಂಸ್ಕøತಾಧ್ಯಯನದ ಪ್ರಸ್ತುತತೆ ಸ್ಮರಣ ಸಂಚಿಕೆ ಸಂಸ್ಕøತ ಸಂಘ ಮಂಗಳೂರು
53 ಯುಜಿಸಿ ನಿಯಮ ಲೆಕ್ಕಕ್ಕ್ಕಿಲ್ಲ ಏತಕ್ಕಿಲ್ಲ ಕ್ರಮ ,ಕನ್ನಡ ಪ್ರಭ
54 ವಿಶ್ವ ವಿದ್ಯಾಲಯಗಳಲ್ಲಿ ಸಂಶೋಧನೆಯ ಬೆಲೆ ಎಷ್ಟು ?ಕನ್ನಡ ಪ್ರಭ
55 ಬಿಗಿ ನಿಯಮಗಳಿರದೆ ಸಂಶೋಧನೆಗಿರದು ಬೆಲೆ ಕನ್ನಡ ಪ್ರಭ
56 ಗಂಡನ ಚಿತೆಯೊಂದಿಗೆ ಬೆಂದು ಹೋದವರೆಷ್ಟೋ ಕನ್ನಡ ಪ್ರಭ
57 ಭಾರತದ ಜನಪದರಲ್ಲಿ ಲೈಂಗಿಕ ಶಿಕ್ಷಣವಿತ್ತೆ ಕನ್ನಡ ಪ್ರಭ
58 ಪ್ಲಾಸ್ಟಿಕ್ ಎಂಬ ಬಹುವಿಧ ಮಾರಿ ನಿಷೇಧ ವೆ ಸರಿಯಾದ ದಾರಿ ಕನ್ನಡ ಪ್ರಭ
59 ಉಪನ್ಯಾಸಕರ ಬಿಎಡ್ ಬವಣೆ ಕನ್ನಡ ಪ್ರಭ
60 ದುಡ್ಡು ಗಳಿಸುವ ಮಾರ್ಗದಲ್ಲಿ ರೋಗಿಗಳ ಕಾಳಜಿಯೆಲ್ಲಿಕನ್ನಡ ಪ್ರಭ
61 ದಡವರಿಯದ ಮಕ್ಕಳಿಗೆ ಬೇಕು ಮಾರ್ಗ ದರ್ಶನ ಕನ್ನಡ ಪ್ರಭ
62 ಸುಳ್ಯ ರೈತಾಪಿ ಜನರ ಸ್ವಾತಂತ್ರ್ಯ ಹೋರಾಟ ಕನ್ನಡ ಪ್ರಭ
63 ಫೇಸ್ ಬುಕ್ ಗಳಲ್ಲಿ ಹೆಣ್ಣುಮಕ್ಕಳ ಫೇಸ್ ಗಳು ಉದಯವಾಣಿ
64 ಹದಗೆಟ್ಟ ಶಿಕ್ಷಣದ ಮನೆಯಲ್ಲಿ ವಿದ್ಯಾರ್ಥಿಯ ಬಾಳು ಹಸನಾದೀತೇ ,ಕನ್ನಡ ಪ್ರಭ
65 ಪಾಠದಲ್ಲಿ ರುವುದನ್ನು ಬೋಧಿಸುವುದಷ್ಟೇ ಶಿಕ್ಷಕರ ಕೆಲಸವೇ ?,ಕನ್ನಡ ಪ್ರಭ
66 ಚರಿತ್ರೆಯ ಗರ್ಭ :ಬೆಳ್ಳಾರೆಯ ಇತಿಹಾಸ ತಿಳಿಯುವುದೇ ?
67 ಸರ್ಪರಾಧನೆ ,ಬಾಕುಡರ ಕುಲ ದೈವ

68 ಕೊನೆಯ ಓಟ ?ಕಂಬಳದ ಕಳದಲ್ಲಿ ಕಳವಳ
69 ಮುಂದೆ ಬೆಟ್ಟವಾಗಬಹುದು ಈ ಪುಟ್ಟ ವಿಚಾರಗಳು












Like   Comment  

Saturday 30 May 2015

ಸಾವಿರದೊಂದು ಗುರಿಯೆಡೆಗೆ:ತುಳುನಾಡ ದೈವಗಳು:225 ಗುದ್ದೊಲಿ ಮೀರಾ (ಗದ್ದುಗೆ ಬೀರೆ )(c)ಡಾ.ಲಕ್ಷ್ಮೀ ಜಿ ಪ್ರಸಾದ

           
 ಚಿತ್ರ ಕೃಪೆ :ಮಹೇಶ್ ಮೈಸೆ
©boloorgarodi@gmail.com
 ನೀರೆ ಗರೊಡಿಯಲ್ಲಿ ಮಾಯಂದಾಲ್ ಪಕ್ಕ ಇರುವ ಬಾಲಕನ ಮೂರ್ತಿಗೆ ಗುದ್ದೊಲಿ ಮೀರಾ ಎಂದು ಹೆಸರು ಇದೆ .ಇಲ್ಲಿ ಆರಾಧಿಸಲ್ಪಡುವ ಗುದ್ದೊಲಿ ಮೀರಾ ಎಂಬ ಆರಾಧ್ಯ ಶಕ್ತಿ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ .ತುಳುನಾಡಿನ ಗರೊಡಿಗಳ ಬಗ್ಗೆ ಸಚಿತ್ರ ಮಾಹಿತಿ ಸಂಗ್ರಹಿಸಿರುವ ಮಹೇಶ ಅವರು ಈ ಬಗ್ಗೆ ಹೀಗೆ ಹೇಳಿದ್ದಾರೆ
 "ನೀರೆ ಬೈಲೂರಿನ ಗರೋಡಿಯಲ್ಲಿ ಮಯಾಂದಾಲ್ ಮೂರ್ತಿಯ ಎಡಬದಿಯಲ್ಲಿ ಗುದ್ದೊಲಿ ಮೀರಾಎಂದು ಇಲ್ಲಿನ ಜನರು ಕರೆಯುವ, ನಿಂತ ಭಂಗಿಯಲ್ಲಿ ಬಾಲಕನ ಮರದ ಮೂರ್ತಿ ಇದೆ. ಇದು ಇತರ ಕಡೆ ಕುಮಾರಎಂಬ ನಾಮದಿಂದ ಕರೆಯಲ್ಪಡುತ್ತದೆ. ಕಳೆದುಹೋದ ವಸ್ತುಗಳನ್ನು ಹಾಗೂ ತಾನು ಮರೆತು ಹೋಗಿ ವಸ್ತುಗಳನ್ನು ಎಲ್ಲಿ ಇಟ್ಟಿದ್ದೇನೆ ಎಂಬುದು ಗೊತ್ತಾಗದೆ ಇದ್ದಾಗ ಇಲ್ಲಿಯ ಜನರು ಗುದ್ದೆಲ್ ಮೀರಾನ ಕೈಯಲ್ಲಿ ಬಾಳೆಹಣ್ಣು ಕೊಡುತ್ತೇನೆ, ಹುಡುಕಿಕೊಡು ಎಂದು ಹರಕೆ ಹೇಳುವ ಪದ್ದತಿ ಇಲ್ಲಿದೆ. (ಮಾಹಿತಿ ಕೃಪೆ: ನೀರೆ ಗರಡಿ ಇತಿಹಾಸ. ಸಂ: ಪ್ರೋ. ಕೆ ನಾರಾಯಣ ಶೆಟ್ಟಿ) -ಚಿತ್ರ: ಮಹೇಶ್- ಮೈಸೆ ©boloorgarodi@gmail.com"

ತುಳುನಾಡಿನ ಗರೊಡಿಗಳಲ್ಲಿ ಮಾಯಂದಾಲ್ ಎಂಬ ಸ್ತ್ರೀ ದೈವತಕ್ಕೆ ಆರಾಧನೆ ಇದೆ .ಅವಳ ಒಂದು ಮೂರ್ತಿ ಕೂಡ ಗರೊಡಿಗಳಲ್ಲಿ ಇವೆ 
.ಮಾಯಂದಾಲ್ ಎಂದರೆ ಮಾಯವಾದವಳು ಎಂದರ್ಥ. ಪಾಂಗುಲ್ಲ ಬನ್ನಾರರ ಬೀಡಿಗೆ ಒಂದು ದೈವ ಬಂದು ಕೋಲತಜುಮಾದಿ ಎಂದು ಆರಾಧನೆ ಪಡೆಯುತ್ತದೆ. ಆಗ ಪಾಂಗುಲ್ಲ ಬನ್ನಾರರು ದೈವಕ್ಕೆ ಕೊಡಬೇಕಾದ ಸಿರಿ ಬಾಳೆ,ಸೀಯಾಳಗಳನ್ನು ಕೊಡುವುದಿಲ್ಲ copy rights reserved (c)Dr.Laxmi g Prasad. ಆಗ
ಪಾಂಗುಲ್ಲ ಬನ್ನಾರರ ಸೋದರ ಸೊಸೆ ಹತ್ತುದಿನದ ಬಾಣಂತಿಯಗಿದ್ದಳು .

ಆಗ ಕೋಪಿಸಿಕೊಂಡ ದೈವ .ಕೋಲತ ಜುಮಾದಿ ಅವಳಿರುವಲ್ಲಿಗೆ ಬಂದು ಅವಳನ್ನು, ಅವಳ ಮಗುವನ್ನು ಮಾಯ ಮಾಡುತ್ತದೆ. ಮಾಯವಾದ ಅವಳು ಗರಡಿಮನೆಯ ಬ್ರಹ್ಮನ ಸೇರಿಗೆಗೆ ಸಂದು, ದೈವವಾಗಿ ಆರಾಧನೆ ಹೊಂದುತ್ತಾಳೆ. ಮಾಯಂದಾಲ್ ಕೋಟಿಚೆನ್ನಯರ ಭಾವನಾತ್ಮಕ  ತಂಗಿ ಎಂಬ ನಂಬುಗೆಯೂ ಇದೆ. ಪ್ರಸವದ ಸಮಯದಲ್ಲಿ ಈ ದೈವಕ್ಕೆ ತಾಯಿ ಮತ್ತು ಮಗುವಿನ ರಕ್ಷಣೆಗಾಗಿ ಹರಿಕೆ ಕೊಟ್ಟು ಆರಾಧಿಸುತ್ತಾರೆcopy rights reserved (c)Dr.Laxmi g Prasad. 



ಇನ್ನೊಂದು ಪಾಡ್ದನ  ಪಾಠದ ಪ್ರಕಾರ ಮಾಣಿಬಾಲೆಯನ್ನು ಸೋದರ ಮಾವನಾದ ಆಲಿಬಾಲಿ ನಾಯಕನು ರಜಪತಿ ಬೈದ್ಯನ ಮಗನೊಂದಿಗೆ ವಿಜೃಂಭಣೆಯಿಂದ ಮದುವೆ ಮಾಡಿಕೊಡುತ್ತಾನೆ. ಮದುವೆಯಾಗಿ ಕೆಲವು ವರ್ಷ ಕಳೆದರೂ ಸಂತಾನ ಭಾಗ್ಯ ಒದಗದಿರಲು ಬೆರ್ಮರಿಗೆ ಹರಕೆ ಹೇಳಿದ ಮೇರೆಗೆ ಆಕೆ ಗರ್ಭವತಿಯಾಗುತ್ತಾಳೆ. ಸಂಭ್ರಮದ ಸೀಮಂತ ನಡೆದ ಬಳಿಕ ಆಕೆ ಹೆರಿಗೆಗಾಗಿ ತನ್ನ ಸೋದರ ಮಾವನಾದ ಆಲಿಬಾಲಿ ನಾಯಕನ ಮನೆಗೆ ಬರುತ್ತಾಳೆ. ನವ ಮಾಸ ತುಂಬಿದ ಮಾಣಿಬಾಲೆ ಗಂಡು ಮಗುವಿಗೆ ಜನ್ಮ ನೀಡು‍ತ್ತಾಳೆ. ಅದೇ  ಮಾಗಣೆಗೆ  ಸೇರಿದ  ಗುಡ್ಡೆಯ  ಮೂಡಂದಾಲ  ಪಟ್ಟದ  ಬೀಡಿನ  ಪಾಂಗೊಲ್ಲ  ಬನ್ನಾರ  ಎಂಬ  ಜೈನ  ಜಮೀನ್ದಾರನು  ಜುಮಾದಿ  ಭೂತವನ್ನು   ನಂಬಿಕೊಂಡು  ಅದಕ್ಕೆ  ಗುಡಿ  ನಿರ್ಮಿಸಿ  ಕೋಲಕ್ಕೆ  ದಿನ  ನಿಗದಿಪಡಿಸುತ್ತಾನೆ.  ಊರಿನ  ಜನರಿಂದ  ಕೋಲಕ್ಕಾಗಿ ಸಿರಿ  ಸೀಯಾಳ ಕೊಡಲು ಆಲಿ ಬಾಲಿ ನಾಯಕನಿಗೆ ಹೇಳಿ ಕಳುಹಿಸುತ್ತಾನೆ. ಆಲಿ ಬಾಲಿ ನಾಯಕ ಕೊಡುವುದಿಲ್ಲ ದಕ್ಕೆ ದೈವ ಅವನ ಸೊಸೆ ಮಾತು ಮಗುವನ್ನು ಮಾಯ ಮಾಡುತ್ತದೆ.ಮಾಯ ವಾದ ಅವರು ದೈವಗಳಗಿ ನೆಲೆ ನಿಲ್ಲುತ್ತಾರೆ
ತಮಗೆ ಸಲ್ಲ ಬೇಕಾದ ಸೇವೆಯನ್ನು ಸಲ್ಲಿಸದೆ  ಇದ್ದಾಗ ದೈವಗಳು ಕೊಪಿಸ್ಕೊಂದು ಶಿಕ್ಷಿಸುವ ವಿಚಾರ ಅನೇಕ ಪಾದ್ದನಗಳಲ್ಲಿದೆ .ಇಲ್ಲಿ ಕೂಡ ಪಾಂಗುಲ್ಲ ಬಂನಾರಣ ಮೇಲಿನ ಕೋಪದಿಂದ ಅವನನ್ನು ಶಿಕ್ಷಿಸುವ ಸಲುವಾಗಿ ಅವನ ಸೋದರ ಸೊಸೆಯನ್ನು ಮಗುವನ್ನು ದೈವ ಮಾಡಿರಬಹುದು .copy rights reserved (c)Dr.Laxmi g Prasad. 
ವಾಸ್ತವಿಕತೆಯ ನೆಲೆ ಗತ್ತಿನಲ್ಲಿ ಯೋಚಿಸಿದಾಗ ಬಾಣಂತಿ ಮಗು ಆಕಸ್ಮಿಕವಾಗಿ ಮರನವನ್ನ್ನಪ್ಪಿರಬಹುದು ಅದಕ್ಕೆ ದೈವದ ಕಾರಣಿಕದ ಕಥಾನಕ ಸೇರಿ, ಅವಳ ಮಗು ಮತ್ತು ಅವಳು ಕೂಡ ದೈವತ್ವ ಪಡೆದು ಆರಾಧಿಸಲ್ಪಟ್ಟಿರಬಹುದು
ಮಾಯಂದಾಲ್ ದೈವಕ್ಕೆ ಸ್ತ್ರೀ ಸಹಜ ವೇಷದಲ್ಲಿ ಭೂತ ಕಟ್ಟಿ ಕೋಲ ನೀಡುತ್ತಾರೆ .ತಾಯಿಯೊಂದಿಗೆ ಮಗುವಿಗೆ ಸಾಂಕೇತಿಕವಾಗಿ ಕೋಲ ನೀಡುತ್ತಾರೆ.ಈ ಮಗುವಿಗೆ ಗದ್ದುಗೆ ವೀರ(ಗದ್ದುಗೆ ಬೀರೆ) ಎಂದು ಹೆಸರಿದ್ದ ಬಗ್ಗೆ ಪಾದ್ದನಗಾರ್ತಿ ವಾರಿಜ ಅವರು ಹೇಳಿದ್ದಾರೆ .ಅಳಿಯ ಕಟ್ಟು ಇರುವಲ್ಲಿ ಮಾವನ ಗುತ್ತಿ ಯ ಅಧಿಕಾರ ಸೊಸೆಯ ಮಗನಿಗೆ ಬರುವುದು ಸಹಜವೇ .ಆ ಅರ್ಥದಲ್ಲಿ ಆತನಿಗೆ ಗದ್ದುಗೆ ಬೀರೆ ಎಂದು ಕರೆದಿರಬಹುದು .copy rights reserved (c)Dr.Laxmi g Prasad. 
 ಆದರೆ ಮಾಯಂದಾಲ್ ಮಗು ಮತ್ತು ಗುದ್ದೊಲಿ ಮೀರಾ ಒಂದೇ ಶಕ್ತಿಯೇ ಅಥವಾ ಬೇರೆ ಬೇರೆಯೇ ಎಂದು ತಿಳಿದು ಬಂದಿಲ್ಲ ,ಗದ್ದುಗೆ ವೀರ (ಗದ್ದುಗೆ ಬೀರೆ) ಎಂಬುದು ಆಡುಮಾತಿನಲ್ಲಿ ಗುದ್ದೊಲಿ ಮೀರಾ ಆಗಿರಬಹುದೇ ?ಅಥವಾ ಸ್ಥಳೀಯ ವೀರನೊಬ್ಬ ಆರಾಧನೆ ಹೊಂದಿ ಮಾಯಂದಾಲ್ ಮಗುವಿನೊಂದಿಗೆ ಗುದ್ದೊಲಿ ಮೀರಾ ಎಂಬ ಹೆಸರಿನಲ್ಲಿ ಸಮೀಕರಿಸಲ್ಪತ್ತಿರುವ ಸಾಧ್ಯತೆ ಕೂಡ ಇಲ್ಲದಿಲ್ಲ.ಬೇರೆಯೇ ಒಂದು ಶಕ್ತಿ ಇರಲೂ ಬಹುದು
ಈತನಿಗೆ ಬಾಳೆ ಹಣ್ಣು ಹರಿಕೆಯಾಗಿ ಅರ್ಪಿಸುವ ಕಾರಣ ಈತ ಮೂಲತಃ ವೀರ ಬಾಲಕನೇ ಆಗಿದ್ದಿರುವ ಸಾಧ್ಯತೆ ಇದೆ .ಈ ಬಗೆ ಹೆಚ್ಚಿನ ಅಧ್ಯಯನ ನಡೆದರೆ ವಾಸ್ತವ ಸಂಗತಿ ತಿಳಿದು ಬರಬಹುದುcopy rights reserved (c)Dr.Laxmi g Prasad. 

ಗುದ್ದೊಲಿ ಮೀರಾ ನ ಬಗ್ಗೆ ಸಚಿತ್ರ ಮಾಹಿತಿ ನೀಡಿದ ಮಹೇಶ್ ಅವರಿಗೆ ಕೃತಜ್ಞತೆಗಳು

Thursday 28 May 2015

ಸಾವಿರದೊಂದು ಗುರಿಯೆಡೆಗೆ:ತುಳುನಾಡ ದೈವಗಳು 220:ಬಗ್ಗ ಪೂಜಾರಿ (c) ಡಾ.ಲಕ್ಷ್ಮೀ ಜಿ ಪ್ರಸಾದ


ಕೇಂಜ ಗರೋಡಿ:ಚಿತ್ರ ಕೃಪೆ :ತುಳುನಾಡಿನ ಗರೋಡಿಗಳು

ದೇವಸ್ಥಾನ ,ದೈವಸ್ಥಾನ ಗಳನ್ನ ಕಟ್ಟಿಸಿದವರು, ದೈವಗಳನ್ನು ನೆಲೆಗೊಳಿಸಲು ಕಾರಣರಾದವರು ,ದೈವಗಳ ಅನನ್ಯ ಭಕ್ತರು ದೈವತ್ವ ಪಡೆದು ಆರಾಧಿಸಲ್ಪಡುವುದು ತುಳುನಾಡಿನಾದ್ಯಂತ ಅಲ್ಲಲ್ಲಿ  ಕಂಡು ಬರುವ ವಿಶಿಷ್ಟ ವಿಚಾರವಾಗಿದೆ .
ಹಿರಿಯಡಕದಲ್ಲಿ ವೀರ ಭದ್ರ ನನ್ನು ನೆಲೆ ಗೊಳಿಸಿದ ಅದ್ಕತ್ತಾಯ ಎಂಬ ಬ್ರಾಹ್ಮಣ ಅಲ್ಲಿ ದೈವತ್ವ ಪಡೆದು ಆರಾಧಿಸಲ್ಪದುತ್ತಿದ್ದಾನೆ .ಬದಿಯಡ್ಕ ಸಮೀಪದ ಕಾರಿಂಜೇಶ್ವರ ದೇವಾಲಯವನ್ನು ಕಟ್ಟಿಸಿದ ಕಾರಿನ್ಜತ್ತಾಯ ಎಂಬ ಬ್ರಾಹ್ಮಣ ಅಲ್ಲಿ ದೈವವಾಗಿ ನೆಲೆ ಗೊಂಡಿದ್ದಾನೆ. ಮಣಿಕ್ಕರದಲ್ಲಿ ವಿಷ್ಣು ಮೂರ್ತಿಯ ದೇವಾಲಯ ಕಟ್ಟಿಸಿದ ಪಾಲ್ತಾಡು ಬೀಡಿನ ಅಚ್ಚು ಬಂಗೆತಿ ದೈವತ್ವವನ್ನು ಪಡೆದಿದ್ದಾಳೆ .

ಅಂತೆಯೇ ಉಡುಪಿ ತಾಲೂಕಿನ ಕುತ್ಯಾರು ಕೇಂಜದಲ್ಲಿ ಕೋಟಿ ಚೆನ್ನಯರ ಗರೋಡಿ ಸ್ಥಾಪನೆಗೆ ಕಾರಣ ಕರ್ತರಾದ  ಮೈಂದ ಪೂಜಾರಿ ದೈವತ್ವ ಪಡೆದು ಬಗ್ಗ ಪೂಜಾರಿ ಎಂಬ ಹೆಸರಿನಲ್ಲಿ ಆರಾಧನೆ ಹೊಂದುವ ವಿಚಾರ ಅಲ್ಲಿನ ಸ್ಥಳೀಯ ಐತಿಹ್ಯದಿಂದ ತಿಳಿದು ಬರುತ್ತದೆ.
ಕೋಟಿ ಚೆನ್ನಯರು ತಮ್ಮ ಕಾರಣಿಕ ತೋರುವುದಕ್ಕಾಗಿ ಕುತ್ಯಾರಿನ ಅರಸು ಕುಂದ ಹೆಗ್ಗಡೆಯನ್ನು ಹುಡುಕುತ್ತ ಬರುತ್ತಾರೆ .ದಾರಿಯಲ್ಲಿ ಮುಲ್ಕಿ ಸೀಮೆಯ  ಮದ್ಯ ಬೀಡಿಗೆ ತಲುಪಿದಾಗ ಅಲ್ಲಿ ಕಾಂತ ಬಾರೆ ಬೂದಾ ಬಾರೆ ತಡೆಯುತ್ತಾರೆ ಅಲ್ಲಿ ಅವರಿಗೆ ಯುದ್ಧವಾದಾಗ ಬಪ್ಪನಾಡು ದೇವಿ ದುರ್ಗೆ ಪ್ರತ್ಯಕ್ಷಳಾಗಿ ರಾಜಿ ಮಾಡಿಸಿ ಮುಲ್ಕಿ ಒಂಬತ್ತು ಗ್ರಾಮ ಕಾಂತಾ ಬಾರೆ ಬುದಾ ಬಾರೆಯರಿಗೆ ಉಳಿದ ತುಳುನಾಡಿನಲ್ಲಿ ಕೋಟಿ ಚೆನ್ನಯರಿಗೆ ಸ್ಥಾನ ಎಂದು ಸಮಾಧಾನ ಹೇಳಿ ಕಳುಹಿಸುತ್ತಾಳೆ.ಅಲ್ಲಿಂದ ಅವರು ಎಲ್ಲೂರು ದೇವರ ದರ್ಶನಕ್ಕೆ ಬಂದಾಗ ಅಲ್ಲಿ ಕೋಟೆದ ಬಬ್ಬು ದೈವ  ಯುದ್ಧಕ್ಕೆ ಬರುತ್ತದೆ ಕೊನೆಗೆ ಆಟ ಸೋತು ಕೋಟಿ ಚೆನ್ನಯರಿಗೆ ಶರಣಾಗುತ್ತಾನೆ.ದೇವರನ್ನು ಭೇಟಿ ಮಾಡಲು ಬಿಡುತ್ತದೆ   ದೇವರು ಅವರಿಗೆ ಕುತ್ಯಾರು ಕುಂದ ಹೆಗ್ಗಡೆಯಲ್ಲಿಗೆ ಹೋಗಲು ತಿಳಿಸುತ್ತಾನೆ .ಆಗ ಅವರು ಹೆಗ್ಗಡೆಯಲ್ಲಿಗೆ  ಬಂದು ತಮಗೆ ಸ್ಥಾನ ಕಟ್ಟಿಸಬೇಕು ಎಂದು ಹೇಳುತ್ತಾರೆ.ಆಗ ಆತ "ಇಂಥ ಸಾವಿರಾರು ದೈವಗಳು ಬಂದು ಜಾಗ ಕೇಳುತ್ತಾರೆ ಎಲ್ಲರಿಗೂ ಜಗ ಕೊಡಲು ಸಾಧ್ಯವಿಲ್ಲ ,ನಿಮ್ಮ ಕರಣಿಕ ತೋರಿಸಿ: ಎನ್ನುತ್ತಾನೆ.
ಆಗ ಕೋಟಿ ಚೆನ್ನಯರು ಅಲ್ಲಿನ ದೈವ ನಿಷ್ಠ ನಾದ ಮೈಂದ ಪೂಜಾರಿ ಮೇಲೆ ದೃಷ್ಟಿ ಬೀರುತ್ತಾರೆ .ಅವನು ತಾಳೆ ಮರದ ತುದಿಯಲ್ಲಿ ಇದ್ದಾಗ ಅವನಷ್ಟು ಎತ್ತರಕ್ಕೆ ಬೆಳೆದು ಅವನ ಕಿವಿಯಲ್ಲಿ ತಾವು ಬಂದ ಕಾರ್ಯವನ್ನು ತಿಳಿಸಿ ಅರಸರಿಗೆ ಹೇಳಲು ಸೂಚಿತ್ತಾರೆ .
ಅವನು ಅರಸನಲ್ಲಿ ಹೇಳಲು ಭಯ ಪಟ್ಟು  ಹಿಂಜರಿದಾಗ ನಿನಗೇನಾದರೂ ಆದರೆ ನಮ್ಮಿಬ್ಬರಲ್ಲಿ ಒಬ್ಬನಾಗಿ ಸೇರಿಸಿಕೊಳ್ಳುತ್ತೇವೆ"ಎಂಬ ಭರವಸೆ ನೀಡುತ್ತಾರೆ.ಮತ್ತೆ ಪುನಃ ಅವನ ಕನಸಿನಲ್ಲಿ ಬಂದು ಹೇಳುತ್ತಾರೆ.
ಹಾಗೆ ಅದನ್ನು ಮೈಂದ ಪೂಜಾರಿ ಅರಸನಲ್ಲಿ ಹೇಳಿದಾಗ ಅರಸು "ಇದನ್ನು ನೀನು ಸತ್ಯ ಪ್ರಮಾಣ ಮಾಡಿ ಹೇಳಬೇಕು ,ಏಳು ರಾತ್ರಿ ಎಂಟು ಹಗಲು ಕುದಿಯುತ್ತಿರುವ ಎಣ್ಣೆಯ ಬಾಣಲೆಯಲ್ಲಿ ಮಿಂದು ಏಳಬೇಕು" ಎಂದು ಹೇಳುತ್ತಾರೆ.
ಆತ ಸ್ನಾನ ಮಾಡಿ ಬಂದು ಕೋಟಿ ಚೆನ್ನಯರನ್ನು ನೆನೆದು ಅವರು ಕೊಟ್ಟ ಗಂಧ ವೀಳ್ಯ ಎಲೆಯನ್ನು  ಕುದಿಯುವ ಎಣ್ಣೆಗೆ ಹಾಕಿ ಮೂರು ಬರಿ ಮುಳುಗಿ ಏಳುತ್ತಾನೆ .ಎದ್ದು ಒದ್ದೆ ಕೂದಲನ್ನು ಕೊಡವಿದಾಗ ಅದರ ಬಿಸಿಗೆ ಅರಸು ಹಾಗೂ ಮನೆ ಮಂದಿ ಹೆದರುತ್ತಾರೆ.
ಹೀಗೆ ಕೋಟಿ ಚೆನ್ನಯರ ಕಾರಣಿಕವನ್ನು ಕಣ್ಣಾರೆ ಕಂಡ ಅರಸು ಕುತ್ಯಾರು ಕೇಂಜ ಅವರಿಗೆ ಗರೋಡಿಯನ್ನು ಕಟ್ಟಿಸುತ್ತಾನೆ.
ಮೈಂದ ಪೂಜಾರಿಗೆ ನೂರಾರು ಎಕರೆ ಜಾಗವನ್ನು ಉಂಬಳಿ ಕೊಟ್ಟು ತನ್ನ ಆಸ್ಥಾನದಲ್ಲಿ ಗೌರವದ ಸ್ಥಾನ ಕೊಡುತ್ತಾನೆ.
ಮುಂದೆ ಎಲ್ಲೂರು ಸೀಮೆಯ ಆರು ಮಾಗಣೆಯ ಎಲ್ಲೂರು ಕುತ್ಯಾರು ಕೊಳಚ್ಚೂರು ,ಕಳತ್ತೂರು ಕಣಿಯೂರು,ನಂದಿಕೂರು ಭಿಲ್ಲವ ಪ್ರಮುಖನಾಗಿ ಗರೋಡಿ ನೇಮದಲ್ಲಿ ಮುಖ್ಯಸ್ಥನಾಗಿರುವ ಆತ ಮುಂದೆ  ಮದುಮಗನಂತೆ ಜರಿ ಪೇಟ ,ಕಚ್ಚೆ ಧರಿಸಿ ಅಲಂಕಾರವಾಗಿ ಮುಕ್ಕಾಲಿಗೆಯಲ್ಲಿ  ತೋಟ ಬಗ್ಗ ಪೂಜಾರಿ ಎಂಬ ಹೆಸರಿನಲ್ಲಿ ದೈವತ್ವ ಪಡೆದು ನೆಲೆಯಾಗುತ್ತಾನೆ .
ಕೋಟಿ ಚೆನ್ನಯರ ಗರೋಡಿ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ಸತ್ಯ ಪ್ರಮಾಣದಂಥ ಅತಿಮಾನುಷ ಸಾಹಸ ಮೆರೆದ ಮೈಂದ ಪೂಜಾರಿ ದೈವತ್ವ ಪಡೆದು ಆರಾಧಿಸಲ್ಪಡುವ ವಿಚಾರ ತುಳುವ ಸಂಸ್ಕೃತಿಯಲ್ಲಿ ಸಹಜವಾದುದೇ ಆಗಿದೆ.ಕುತ್ಯಾರು ಕೇಂಜ ಗರೋಡಿಯಲ್ಲಿ ತೋಟ ಬಗ್ಗ ಪೂಜಾರಿಗೆ ದೈವಿಕ ನೆಲೆಯಲ್ಲಿ ಆರಾಧನೆ ಇದೆ .
ಮಾಹಿತಿ ಮೂಲ :http://www.kotichennaya.com/kenjagarodi
ಶ್ರೀಬ್ರಹ್ಮ ಬೈದರ್ಕಳ ಗರೋಡಿ ಕುತ್ಯಾರು ಕೇಂಜ,ಉಡುಪಿ

Wednesday 20 May 2015

ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು:216 ಬಸ್ತಿ ನಾಯಕ (ಬಾಲ ಬಂಟ ಬಸಪ್ಪ ನಾಯಕ )(c)ಡಾ.ಲಕ್ಷ್ಮೀ ಜಿ ಪ್ರಸಾದ



             
   
               ಚಿತ್ರ ಕೃಪೆ :ಧರ್ಮ ದೈವ
copy rights reservedತುಳುವರ  ಪಾಡ್ದನ ಹಾಗೂ ಭೂತಾರಾಧನೆಯಲ್ಲಿ ಅನೇಕ ಇತಿಹಾಸದ ಎಳೆಗಳು ಅಡಕವಾಗಿವೆ ಅಂತೆಯೇ ಬಸ್ತಿನಾಯಕ ದೈವ ಕಥಾನಕವು ಕೆಳದಿಯ ಇತಿಹಾಸದೊಂದಿಗೆ ತಳಕು ಹಾಕಿಕೊಂಡಿದೆ ಬಸ್ತಿ ನಾಯಕ ಸಾಕಷ್ಟು ಪ್ರಸಿದ್ಧ ದೈವತ .copy rights reserved (c) Dr.Laxmi g Prasad ಈ ದೈವ ಕನ್ನಡದಲ್ಲಿ ನುಡಿ ಕೊಡುವುದು ಈ ದೈವ ಮೂಲತ ಕನ್ನಡಿಗ ಎಂಬುದನು ಸಮರ್ಥಿಸುತ್ತದೆ .ಈ ದೈವ ನುಡಿಯಲ್ಲಿ ತನ್ನನ್ನು ತಾನು ಬಾಲ ಬಂಟ ಬಸಪ್ಪ ನಾಯಕ ಎಂದು ಕರೆದುಕೊಳ್ಳುತ್ತದೆ.ಬಸಪ್ಪನಾಯಕ ಎಂಬುದೇ ಆಡು ಮಾತಿನಲ್ಲಿ ಬಸ್ತಿ ನಾಯಕ ಆಗಿದೆcopy rights reserved (c) Dr.Laxmi g Prasad 
ಈತನೋರ್ವಅರಸು ಆಗಿದ್ದ ಬಗ್ಗೆ ಇಲ್ಲಿ ಮಾಹಿತಿ ದೊರೆಯುತ್ತದೆ .ತಾನು ಮಂಗಳೂರು ಸೀಮೆಯನ್ನು ಹಿಡಿದು ಕೊಂಡೆ ಕಾಲ ಮೇಲೆ ಕಾಲು ಕೈ ಮೇಲೆ ಕೈ ಮೀಸೆ ಮೇಲೆ ಕೈ ಹಾಕಿ ಕೊಂಡೆ ಎಂಬಲ್ಲಿ ಇದು copy rights reserved (c) Dr.Laxmi g Prasad ಸ್ಪಷ್ಟವಾಗುತ್ತದೆ /
ತುಳುನಾಡನ್ನು ಆಳಿದ ಕೆಳದಿ ಸಂಸ್ಥಾನದಲ್ಲಿ ಬಸಪ್ಪ ನಾಯಕ ,ಇಮ್ಮಡಿ ಬಸಪ್ಪ ನಾಯಕ ಮತ್ತು ಚೆನ್ನ ಬಸವ ನಾಯಕ ಎಂಬ ಅರಸುಗಳು ಇದ್ದ ಬಗ್ಗೆ ಇತಿಹಾಸದಿಂದ ತಿಳಿದು ಬರುತ್ತದೆ ಈ ಬಗ್ಗೆ ಅರಿಯಲು ಕೆಳದಿಯ ಇತಿಹಾಸವನ್ನು ಗಮನಿಸಬೇಕಾಗುತ್ತದೆ .copy rights reserved
ಶಿವಮೊಗ್ಗ ಜಿಲ್ಲೆಯ ಸಾಗರದಿಂದ  ಸುಮಾರು  8 ಕಿ.ಮೀ. ದೂರದಲ್ಲಿರುವ ಪುಟ್ಟ ಗ್ರಾಮ ಕೆಳದಿ ಸಂಸ್ಥಾನವಾಗಿ ಬೆಳೆದ ಪರಿ ಅನನ್ಯವಾದುದು .ಹನ್ನೆರಡನೆಯ ಶತಮಾನದಲ್ಲಿ ಈ ಊರು ಸಾಂತರಸರ ಅಧೀನದಲ್ಲಿತ್ತು. ಪೊಂಬುಚ್ಚ ಪುರವರಾಧೀಶ್ವರನಾಗಿದ್ದ ಮಹಾಮಂಡಳೇಶ್ವರ ತ್ರಿಭುವನಮಲ್ಲ ಭುಜಬಲ ಪ್ರತಾಪ ಶಾಂತರಸನ ತೃಟಿತ ಶಾಸನವೊಂದು ಇಲ್ಲಿ ದೊರೆತಿದೆ.


 ಲ್ಲಿಯೇ ಹುಟ್ಟಿ ಬೆಳೆದ ಸಾಮಾನ್ಯ ಮನೆತನವೊಂದಕ್ಕೆ ಸೇರಿದ್ದ ಚೌಡಗೌಡನೆಂಬ ರೈತನಿಗೆ ನಿಕ್ಷೇಪವೊಂದು ದೊರೆತಿದ್ದು ಅದರ ಸಹಾಯದಿಂದ ಅಥವ ತನ್ನ ಸ್ವ ಸಾಮರ್ಥ್ಯದಿಂದ  ಸಣ್ಣ ಪಾಳೆಯಪಟ್ಟೊಂದನ್ನು ಅವನು ಕಟ್ಟಿಕೊಂಡು ಮುಂದೆ ತನ್ನ ಪ್ರಭಾವವನ್ನು ಬೆಳೆಸಿಕೊಂಡನೆಂದೂ ಐತಿಹ್ಯವಿದೆ. ಇವನ ಪರಾಕ್ರಮಕ್ಕೆ ಮೆಚ್ಚಿ ಕೃಷ್ಣದೇವರಾಯ ಎಂಟು ಮಾಗಣೆಗಳ ನಾಯಕತ್ವವನ್ನು ಕೊಟ್ಟು ಇವನನ್ನು ನಾಯಕನನ್ನಾಗಿ ಮಾಡಿದ. ಹೀಗೆ ಕೆಳದಿ ಸು.160೦ರಲ್ಲಿ ಒಂದು ಪುಟ್ಟ ಸಂಸ್ಥಾನದ ರಾಜಧಾನಿಯಾಯಿತು.copy rights reserved (c) Dr.Laxmi g Prasad 

ಚೌಡಗೌಡನ ಕಾಲ  ಸುಮಾರು ಕ್ರಿಸ್ತಶಕ 1500ರಿಂದ 1530.ಇವನ ನಂತರ ಇವನ ಹಿರಿಯ ಮಗ ಸದಾಶಿವ ನಾಯಕನು ವಿಜಯನಗರದ ವಿರೋಧಿಗಳನ್ನು ಹಿಮ್ಮೆಟ್ಟಿಸಿ ಕೇರಳ ರಾಜ್ಯದ ಹಲವು ಭಾಗಗಳನ್ನು ವಶಪಡಿಸಿಕೊಳ್ಳುತ್ತಾನೆ. ಸದಾಶಿವ ನಾಯಕನಿಗೆ ಮೂವರು ಮಕ್ಕಳಿದ್ದು ಅವರುಗಳು ತಂದೆಯ ನಂತರ ಸುಮಾರು ಮೂವತ್ತು ವರುಷಗಳ ರಾಜ್ಯಭಾರ ಮಾಡುತ್ತಾರೆ.ಶಿವಪ್ಪ ನಾಯಕ ವೆಂಕಪ್ಪ ನಾಯಕ ಎರಡನೇ ವೆಂಕಪ್ಪ ನಾಯಕ ಮೊದಲಾದವರು ಸಂಸ್ಥಾನವನ್ನು ಗಟ್ಟಿ ಗೊಳಿಸುತ್ತಾರೆ

ಮುಂದೆ ಇವರ ವಂಶದ ಹಿರಿಯ ಸೋಮಶೇಖರ ನಾಯಕ ಆಳ್ವಿಕೆ ನಡೆಸುತ್ತಾನೆ ಆತನ ಮಡದಿ ಚನ್ನಮ್ಮ ದಿಟ್ಟ ರಾಣಿ ಶಿವಾಜಿಯ ಮಗ ಸಂಭಾಜಿಗೆ ಆಶ್ರಯ ಕೊಟ್ಟ ಕಾರಣ ಔರಂಗ ಜೇಬನ ವಿರೋಧ ಎದುರಾಗಿ ಆತ ದಾಳಿ ಮಾಡುತ್ತಾನೆ copy rights reserved (c) Dr.Laxmi g Prasad ಆತನ ದಾಳಿಯನ್ನು ದಿಟ್ಟವಾಗಿ ಎದುರಿಸಿ ಹಿಮ್ಮೆಟ್ಟಿಸುತ್ತಾಳೆ ಅವಳು .’ಇದಾಗಿ ಸ್ವಲ್ಪ ಸಮಯದಲ್ಲೇ ಬಿಜಾಪುರದ ಸುಲ್ತಾನನು ಕೆಳದಿಗೆ ಮುತ್ತಿಗೆ ಹಾಕಲು ಬಂದನುಶತ್ರುಗಳು ರಾಜ್ಯವನ್ನು ಸುತ್ತುವರಿದಿದ್ದರು ರಾಣಿಗೆ ಯಾವುದೇ ದಾರಿ ತೋಚದೆ ತಾನೆ ಖುದ್ದಾಗಿ ನಿಂತು ಖಡ್ಗವನ್ನು ಹಿಡಿದು ಸೇನೆ ಮುನ್ನೆಡೆಸುವ ಸಂದರ್ಭ ಬಂದಾಗ ಅವರ ರಾಜ್ಯದವರೇ ಅದ ಹಲವರ ವಿರೋಧ ಎದುರಿಸಬೇಕಾಯಿತು.

ಹಲವರು ನಾವು ಹೇಳಿದ ವ್ಯಕ್ತಿಯನ್ನೇ ಪಟ್ಟಕ್ಕೆ ತರಬೇಕು, ಇಲ್ಲವಾದರೆ ನಾವೇ ಜನರನ್ನು ನಿಮ್ಮ ವಿರುದ್ದ ದಂಗೆ ಎಬ್ಬಿಸುತ್ತೇವೆ ಎಂದು ಎಚ್ಚರಿಸಿದರು. copy rights reserved (c) Dr.Laxmi g Prasad ಅತ್ತ ಕಡೆ ಧರಿ ಇತ್ತ ಕಡೆ ಪುಲಿ ಎರಡು ಅಪಾಯವೇ ಸರಿ ಎಂದು ಯೋಚಿಸಿ ತಮಗೆ ಮಕ್ಕಳು ಇಲ್ಲದೆ ಇದ್ದುದರಿಂದ ಬಸಪ್ಪ ನಾಯಕ ಎಂಬ ಹುಡುಗನನ್ನು ದತ್ತು ತಗೆದು ಕೊಂಡಳು.

ಚೆನ್ನಮ್ಮ ತನ್ನ ಜನರನ್ನು ಉದ್ದೇಶಿಸಿ ವೀರ ಕನ್ನಡಿಗರೇ, ಶೂರ ಸೈನಿಕರೇ ಇಂದು ಈ ರಾಜ್ಯದ ಅಳಿವು ಉಳಿವು ನಿಮ್ಮ ಕೈಯಲ್ಲಿದೆ.  ಗೆದ್ದರೆ ರಾಜ್ಯ, ಸತ್ತರೆ ಸ್ವರ್ಗ ಎಂಬ ಅಮರವಾಣಿಯೊಂದಿಗೆ  ಹುರಿದುಂಬಿಸಿದಳು. ಬಿಜಾಪುರದ ಸೈನ್ಯದ ಮೇಲೆ ಶೌರ್ಯದಿಂದ ಹೋರಾಡಿದರು ಜಯ ಲಭಿಸಲಾರದು ಎಂದು ಚೆನ್ನಮ್ಮ ಬಿದನೂರನ್ನು ಬಿಡಬೇಕಾಯಿತು. ಬೇರೆ ಮಾರ್ಗವಿಲ್ಲದೆ, ರಾಜ್ಯ ಭಂಡಾರದ ಸಂಪತ್ತನ್ನು, ಬೆಲೆಯುಳ್ಳ ವಸ್ತುಗಳನ್ನು ಭುವನಗಿರಿಗೆ ಸಾಗಿಸಿದಳು  ಶತ್ರುಗಳು ಬಂದಾಗ ಅವರು ಖಾಲಿಯಾದ ಭಂಡಾರವನ್ನು ಕಂಡು ನಿರಾಸೆಯಾದರು.copy rights reserved (c) Dr.Laxmi g Prasad 

ದತ್ತು ಪ್ರಕರಣದ ಸಮಯದಲ್ಲಿ ರಾಣಿಗೂ ಅವರ ಪ್ರಧಾನಿಗೂ ವಿರಸವಾಗಿ ಪ್ರಧಾನಿ ತಿಮ್ಮಣ್ಣ ನಾಯಕ ರಾಣಿಯನ್ನು ಬಿಟ್ಟು ಹೋಗಿದ್ದನು. ಬಿದನೂರು ಸುಲ್ತಾನ ವಶವಾಯಿತು ಎಂದು ಅರಿತ ದೇಶಾಭಿಮಾನಿ ತಿಮ್ಮಣ್ಣ ರಾಣಿಯನ್ನು ಭೇಟಿ ಮಾಡಿ  ತನ್ನ ತಪ್ಪನ್ನು ಮನ್ನಿಸಬೇಕೆಂದು ಬಿನ್ನಹವಿತ್ತು ರಾಣಿಯ ಜೊತೆ ಕೊಡಿಕೊಂಡು ಮತ್ತೆ ಬಿದನೂರು ಕೋಟೆಗೆ ಮುತ್ತಿಗೆ ಹಾಕಿದರು. ದಟ್ಟವಾದ ಕಾಡಿನಲ್ಲಿ ಚೆನ್ನಮ್ಮನ ಕೈಗೆ ಸಿಕ್ಕ ಸುಲ್ತಾನನ ಸೈನ್ಯ ನುಚ್ಚು ನೊರಾಯಿತು. ಬಿದನೂರು ಮತ್ತೆ ಚೆನ್ನಮ್ಮರ ವಶವಾಯಿತು. ಸರ್ವಾನುಮತದಿಂದ ಕೆಳದಿಯ ಪ್ರಜೆಗಳು ರಾಣಿಯ ಆಡಳಿತವನ್ನು ಒಪ್ಪಿಕೊಂಡರು

ಹೀಗೆ 1670ರಿಂದ 1696ರವರೆಗೆ ಧರ್ಮದಿಂದ ದಕ್ಷತೆಯಿಂದ ರಾಜ್ಯವಾಳಿ, ಕೀರ್ತಿ ವೈಭವಗಳಿಂದ ಬಾಳಿ  ಕಡೆಗೆ ರಾಜ್ಯವನ್ನು ದತ್ತು ಪುತ್ರನಿಗೆ ಒಪ್ಪಿಸಿ  ಶಿವ ಚಿಂತನೆಯಲ್ಲಿ ತೊಡಗಿದರು.ಇಲ್ಲಿಂದ ಮುಂದೆ ಕೆಳದಿ ಸಂಸ್ಥಾನವನ್ನು ಮುನ್ನಡೆಸಿದವನು ಬಸವಪ್ಪ ನಾಯಕ copy rights reserved

ಇವನು ಮಂಗಳೂರು ಸೀಮೆ ಸೇರಿದಂತೆ ಕೆಳದಿಯ ಅಲ್ಲ ಪ್ರದೇಶಗಳ ಆಳ್ವಿಕೆಯನ್ನು ದಕ್ಷವಾಗಿ ಮಾಡಿದ್ದನು .

ಕೆಳದಿಯನ್ನು ಆಳಿದ ಕೊನೆಯ ರಾಣಿ ವೀರಮ್ಮಾಜಿ. ಅವಳ ದತ್ತು ಪುತ್ರ ಚೆನ್ನ ಬಸವ .ಆತನಿಗೆ ಆಕೆ ಪಟ್ಟ ಕಟ್ಟದೆ ಅಧಿಕಾರ ಕೊಡದೆ ಸತಾಯಿಸಿದಳು ಎಂಬ ಅಭಿಪ್ರಾಯವೂ ಇದೆ .ಆತನೊಂದಿಗೆ ಸೇರಿಕೊಂಡು ಆತನಿಗೆ ಕೆಳದಿ ರಾಜ್ಯ ಕೊಡಿಸುತ್ತೇನೆಂದು ಹೇಳಿ ಆತನ ಸಹಾಯದಿಂದ ಮದಕರಿ ನಾಯಕ ಹಾಗೂ ಹೈದರಾಲಿ ಕೆಳದಿಯನ್ನು ವಶಪಡಿಸಲು ಯತ್ನಿಸಿದರೆಂದೂ ಐತಿಹ್ಯವಿದೆcopy rights reserved (c) Dr.Laxmi g Prasad 

.

     ಚೆನ್ನಬಸವಪ್ಪನಾಯಕನ ಅಂತ್ಯದ ಕುರಿತು ಆತ ರೋಗಬಾಧೆಯಿಂದ ತನ್ನ 14ನೆಯ ವಯಸ್ಸಿನಲ್ಲೇ ಮೃತನಾದನೆಂದು ಕೆಳದಿ ಸಂಸ್ಥಾನದ ಇತಿಹಾಸವನ್ನು ಎಳೆ ಎಳೆಯಾಗಿ ವಿವರಿಸುವ ಕೆಳದಿನೃಪ ವಿಜಯದಲ್ಲಿ ಈ ರೀತಿ ಹೇಳಿದೆ:

ಇರುತಿರುತುಂ ತದ್ಧರಣೀ

ಶ್ವರನುರುವಿಧಿವಶದೆ ತಾಂ ಚತುರ್ದಶವರ್ಷಾಂ

ತರದೊಳ್ ಪರಿಣಯಮಿಲ್ಲದೆ

ನೆರೆ ರೋಗಾರ್ತಿಯೊಳ್ ಶಿವನೊಳೈಕ್ಕಂಬಡೆದಂ || (ಕೆ.ನೃ.ವಿ. ೧೧.೫೨)

     ಆದರೆ ಕೆಲವು ಇತಿಹಾಸಕಾರರು (ಡಿ ಲಾ ಟೂರ್, ರೋಬ್ಸನ್, ಕಿರ್ಮಾನಿ, ವಿಲ್ಕ್ಸ್) ಚೆನ್ನಬಸವನಾಯಕನನ್ನು ರಾಣಿ ವೀರಮ್ಮಾಜಿಯೇ ಕೊಲ್ಲಿಸಿದಳೆಂದು ಹೇಳುತ್ತಾರೆ.copy rights reserved (c) Dr.Laxmi g Prasad 

ಒಟ್ಟಿನಲ್ಲಿ ಕೆಳದಿಯ ಇತಿಹಾಸದಲ್ಲಿ ಚೆನ್ನ ಬಸವನಾಯಕ ಓರ್ವ ದುರಂತ ನಾಯಕನಾಗಿ ಕಂಡು ಬರುತ್ತಾನೆ

ಇಲ್ಲಿ ಇಬ್ಬರು ಬಸವಪ್ಪ ನಾಯಕರು ಒಬ್ಬ ಚೆನ್ನ ಬಸವನಾಯಕ ರೂ ಆಳ್ವಿಕೆ ನಡೆಸಿರುವುದು ಕಂಡು ಬರುತ್ತದೆ

ಬಸ್ತಿ ನಾಯಕ ನೇಮದಲ್ಲಿ ದೈವವು ತನ್ನನ್ನು ಬಾಲ ಬಂಟ ಬಸಪ್ಪ ನಾಯಕ ಎಂದು ಕರೆದು ಕೊಳ್ಳುತ್ತದೆ.ತಾನು ಮಂಗಳೂರು ಸೀಮೆ ಹಿಡಿದು ಕೊಂಡೆ ಎಂದೂ ಹೇಳುತ್ತದೆ.   

ಸಾಮಾನ್ಯವಾಗಿ ಮೊದಲ ಅರಸ ಅಥವಾ ಕೊನೆಯ ಅರಸು ದೈವತ್ವ ಪಡೆದು ಆರಾಧಿಸಲ್ಪಡುವುದು ತುಳುನಾಡಿನಲ್ಲಿ ಕಂಡು ಬರುತ್ತದೆ.ಅಲ್ಲದೆ ದುರಂತ ಮತ್ತು ದೈವತ್ವ ಇಲ್ಲಿನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. copy rights reserved (c) Dr.Laxmi g Prasad ಇಲ್ಲಿ ಬಸವಪ್ಪ ನಾಯಕ ಮೊದಲ ಅರಸನಲ್ಲ.

ಚೆನ್ನ ಬಸವ ಕೆಳದಿಯ ಕೊನೆಯಅರಸ ಜೊತೆಗೆ ತಾಯಿಯಿಂದಲೇ ಕಿರುಕುಳಕ್ಕೆ ಒಳಗಾದವನು .ಕೇವಲ ಹದಿನಾಲ್ಕು ಅಥವಾ ಹತ್ತೊಂಬತ್ತು ವರ್ಷಕ್ಕೆ ಮರಣವಪ್ಪಿದವನು.ಹಾಗಾಗಿ ಈತ ಬಾಲಕನೇ ಆಗಿರುವುದರಿಂದ ಬಾಲ ಬಂಟ ಬಸಪ್ಪ ನಾಯಕ ಎಂದು ಕರೆಸಿಕೊಳ್ಳುವ ಬಸ್ತಿ ನಾಯಕ ಹೆಸರಿನ ದೈವ ಮೂಲತ ಈತನೇ ಆಗಿರಬಹುದು.ಈ ದೈವದ ಕೈಯಲ್ಲಿನ ಕಟ್ಟಿ ಗುರಾಣಿ ಕಿರೀಟವನ್ನು ಹೋಲುವ ತಲೆ ಪಟ್ಟ ಮೀಸೆ ಗಾಂಭೀರ್ಯಗಳು ಈತನ ಅರಸು ಮೂಲವನ್ನು ಸಮರ್ಥಿಸುತ್ತದೆ ಅದೇ ರೀತಿ ಆಡುವ ಭಾಷೆ ಕನ್ನಡವಾಗಿದ್ದು ಈತ ಮೂಲತ ತುಳುಭಾಷಿಗನಲ್ಲ ಎಂದು ತಿಳಿಸುತ್ತದೆ .ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆದರೆ ಇದಮಿತ್ಥಂ ಎಂದು ಹೇಳಲು ಸಾಧ್ಯವಾಗಬಹುದು copy rights reserved

Tuesday 12 May 2015

ಸಾವಿರದೊಂದು ಗುರಿಯೆಡೆಗೆ:ತುಳುನಾಡ ದೈವಗಳು 206-207 :ಕಲೆಂಬಿತ್ತಾಯಮತ್ತು ಭಟ್ರು ನಾಯಕ (c)ಡಾ.ಲಕ್ಷ್ಮೀ ಜಿ ಪ್ರಸಾದ


                    
                                                    ಚಿತ್ರ ;ಅಂತರ್ಜಾಲ
ಪುತ್ತೂರು ತಾಲೂಕಿನ ರಾಮಕುಂಜೇಶ್ವರ ದೇವಾಲಯದಲ್ಲಿ ಆರಾಧನೆಗೊಳ್ಳುವ ಕಲೆಂಬಿತ್ತಾಯ ಮತ್ತು ಭಟ್ರು ನಾಯಕ ಅಪರೂಪದ ಎರಡು ಭೂತಗಳು'
ಈ ದೈವಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ .ಶ್ರೀಯುತ ವೆಂಕರಮಣ ಉಪಾಧ್ಯಾಯರು "ಕಲೆಂಬಿ ತ್ತಾಯ ನೂರಿತ್ತಾಯ ಕುಟುಂಬದವರ ಮನೆ ದೈವ ಎಂದು ಹೇಳಿದ್ದಾರೆ .ಇದು ಅವರ ಧರ್ಮ ದೈವ ಎಂದು ಕುಟ್ಟಿ ಪರವ ಅವರು ಹೇಳಿದ್ದಾರೆ.
ನೂರಿತ್ತಾಯ ಅವರ ಕ್ತುಮ್ಬದ ಹಿರಿಯರು ಏಳು ಗಂಗೆ ಗೆ ಅವರ ಹಿರಿಯರ ಸಂಸ್ಕಾರಕ್ಕಾಗಿ ಹೋಗಿ ಬರುವಾಗ ಈ ದೈವ ಅವರೊಂದಿಗೆ ಹಿಂಬಾಲಿಸಿ ಬಂದು ಅವರ ಮನೆ ದೇವರ ಬಲಭಾಗದಲ್ಲಿ ನೆಲೆ ನಿಲ್ಲುತ್ತದೆ .
ಕಲೆಂಬಿ ತ್ತಾಯ ಎಂಬುದು ಶಿವಳ್ಳಿ ಬ್ರಾಹ್ಮಣರ ಒಂದು ಉಪನಾಮ ಕೂಡ .ಓರ್ವ ಕಲೆಂಬಿತ್ತಾಯ ಉಪನಾಮವಿರುವ ಬ್ರಾಹ್ಮಣ ಯಾವುದೊ ಕಾರಣಕ್ಕೆ ದೈವತ್ವ ಪಡೆದು ಆರಾಧಿಸಲ್ಪಟ್ಟಿರುವ ಸಾಧ್ಯತೆ ಇದೆ .
ಇನ್ನು ಭಟ್ರು ನಾಯಕ ಎನ್ನುವ ದೈವದ ಅಬಗ್ಗೆ ಕೂಡ ಯಾವುದೊಂದು ಮಾಹಿತಿ ಲಭ್ಯವಾಗಿಲ್ಲ.ಈ  ಬಗ್ಗೆ ಮಾಹಿತಿ ಇದ್ದವರು ತಿಳಿಸಬೇಕಾಗಿ ವಿನಂತಿ

Friday 1 May 2015

ಸಾವಿರದೊಂದು ಗುರಿಯೆಡೆಗೆ:ತುಳುನಾಡ ದೈವಗಳು:203 ಜತ್ತಿಂಗ © ಡಾ.ಲಕ್ಷ್ಮೀ ಜಿ ಪ್ರಸಾದ

                                          
© copy rights reserved(c) ಡಾಲಕ್ಷ್ಮೀ ಜಿ ಪ್ರಸಾದ ಚಿತ್ರ ಕೃಪೆ :ಚಿತ್ತರಂಜನ್ ತುಳುನಾಡು

ಸುಳ್ಯ ,ಪುತ್ತೂರು ,ಕಾರ್ಕಳ ಉಡುಪಿ ಸರಿದಂತೆ ತುಳುನಾಡಿನಾದ್ಯಂತ ಜಟ್ಟಿಗ ಎಂಬ  ಭೂತಕ್ಕೆ ಆರಾಧನೆ ಇದೆ .ಅರಮನೆ ಜಟ್ಟಿಗ ,ಕೋಟೆ ಜಟ್ಟಿಗ ,ಬೂಡು ಜಟ್ಟಿಗ ಇತ್ಯಾದಿ ಅನೇಕ ಹೆಸರುಗಳಿವೆ.ಇವೆಲ್ಲ ಒಂದೇ ದೈವ ಜತಿಗನ ಬೇರೆ ಬೇರೆ ಹೆಸರುಗಳೋ ಅಥವಾ ಬೇರೆ ಬೇರೆ ದೈವತಗಳೋ ಎಂಬ ಬಗ್ಗೆ ಇದಮಿಥ್ಹಂ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ .ಹೆಸರೇ ಸೂಚಿಸುವಂತೆ ಈತ ಮೂಲತಃ ಪೈಲ್ವಾನ ,ಕುಸ್ತಿ ಪಟು ಆಗಿರಬೇಕು
ವೀರ ಆರಾಧನೆ ಎಲ್ಲೆಡೆ ಕಂಡು ಬರುವ ವಿದ್ಯಮಾನ.ಹೊನ್ನಾವರ ,ಭಟ್ಕಳ ,ಗೇರುಸೊಪ್ಪೆ ಮೊದಲಾಡೆಗೆ ಜಟ್ಟಿಗನನ್ನು ಆರಾಧಿಸುತ್ತಾರೆ .ಈ ಬಗ್ಗೆ ಡಾ,ರಹಮತ್ ತರಿಕೆರೆ ಅವರು ಗೇರುಸೊಪ್ಪೆ ಬಸದಿಯ ಸಮೀಪವೇ ಬಯಲಿನಲ್ಲಿ ಇರುವ ಅನೇಕ ಜಟ್ಟಿಗನ ಕಲ್ಲುಗಳ ಬಗ್ಗೆ  " ಬುಡಕಟ್ಟು ಜನರಾದ ಗೊಂಡರ ದೈವಗಳು ಈ ಕಲ್ಲುಗಳು" ಎಂದು ಹೇಳಿದ್ದಾರೆ 

"ಗೇರುಸೋಪ್ಪೆಯನ್ನು ಆಳಿದ ಮೆಣಸಿನ ಚೆನ್ನ ಭೈರಾ ದೇವಿಯು ಅರಮನೆ ಕೋಟೆ ಗಳನ್ನು ಕಾಯಲು ದೂರದ ಆಂಧ್ರದ ಗೊಂಡ ಸಮುದಾಯದ ವೀರ ಜಟ್ಟಿಗಳನ್ನು ಕರೆಸಿದಳೆಂದು ಐತಿಹ್ಯವಿದೆ .ಕೋಟೆ ಜಟ್ಟಿ ,ಅರಮನೆ ಜಟ್ಟಿ ಹೆಸರುಗಳು ಇದ ನ್ನು  ದೃಡೀಕರಿಸುತ್ತವೆ.ಅರಮನೆಯ ಜಟ್ಟಿ ಅರಮನೆ ಕಾದವನು ಇರಬಹುದು ,ಕೋಟೆ ಕಾಯುವ ಜಟ್ಟಿ ಕೋಟೆ ಜಟ್ಟಿ ಇರಬಹುದು" ಎಂದು ರಹಮತ್ ತರಿಕೆರೆಯವರು ಅಭಿಪ್ರಾಯ ಪಟ್ಟಿದ್ದಾರೆ .

ಮೆಣಸಿನ ಯುದ್ಧದಲ್ಲಿ ಇವರೆಲ್ಲ ಸ್ವಾಮಿ ನಿಷ್ಠೆಯನ್ನು ಮೆರೆದು ಯುದ್ಧ ಮಾಡಿ ದುರಂತವನ್ನಪ್ಪಿರಬಹುದು .ಇವರ ಸಾಹಸ ಸ್ವಾಮಿ ನಿಷ್ಠೆ ಯಿಂದಾಗಿ ಇವರು ಜನ ಮಾನಸದಲ್ಲಿ ನಿಂತು ಆರಾಧನೆ ಪಡೆದಿರ ಬಹುದು .

ಹಗರಣ (ಒಂದು ದೃಶ್ಯ ಕಾವ್ಯ )ದ ಆರಂಭದಲ್ಲಿ ಜಟ್ಟಿಗರ ಪೂಜೆ ಮಾಡುವ ಸಂಪ್ರದಾಯವಿದೆ.

ಅಲ್ಲಿ ಆರಾಧಿಸಲ್ಪಡುವ ಜಟ್ಟಿಗರೇ ತುಳು ಪರಂಪರೆಯ ಜಟ್ಟಿ ದೈವವಾದರೆ ?ವೀರಾರಾಧನೆಯ ಪ್ರಸರಣ ಇಲ್ಲಿಯವರೆಗೆ ಹಬ್ಬಿ ಇಲ್ಲಿನ ಸಂಸ್ಕೃತಿಯಂತೆ ದೈವಗಳ ನೆಲೆಯಲ್ಲಿ ಆರಾಧಿಸಲ್ಪಟ್ಟಿರುವ ಸಾಧ್ಯತೆ ಇದೆ .

ಜಟ್ಟಿಗ ಮತ್ತು ಜತ್ತಿಂಗ ರನ್ನು ಹೆಸರಿನ ಸಾಮ್ಯತೆಯಿಂದಾಗಿ ಒಂದೇ ಭೂತ ಎಂದು ಜನರು ಭಾವಿಸಿದ್ದಾರೆ.
 ಆದ್ರೆ ಇಲ್ಲಿ ಪ್ರಚಲಿತವಿರುವ ಐತಿಹ್ಯದ ಪ್ರಕಾರ ಜತ್ತಿಂಗ  ಭೂತ ಮೂಲತಃ ಒಬ್ಬ ತಂತ್ರಿ .ಚೌಂಡಿ ಆರಾಧನೆಯನ್ನು ಮಾಡುವಾಗ ಓರ್ವ ತಂತ್ರಿ ದ್ರೋಹವನ್ನು ಮಾಡುತ್ತಾರೆ .ಆಗ ಕೋಪಗೊಂಡ ಚೌಂಡಿ /ಚಾಮುಂಡಿ ದೈವ ಆತನನ್ನು ಮಾಯ ಮಾಡಿ ಜಟ್ಟಿಗ ಎಂಬ ಹೆಸರಿನಲ್ಲಿ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತದೆ.ಈ ದೈವವನ್ನು ಜತ್ತಿಂಗೆ /ಜಟ್ಟಿಂಗ ಎಂದೂ ಕರೆಯುತ್ತಾರೆ

 ಈ ಬಗ್ಗೆ ಶಶಾಂಕ ನೆಲ್ಲಿತ್ತಾಯರು ನೀಡಿದ ಒಂದು ಮದಿಪಿನಲ್ಲೂ ಮಾಹಿತಿ ಇದೆ 
 
ಸ್ವಾಮಿ ಅಪ್ಪೆ ಚೌoಡಿ...........
ಆನಿದ ಕಾಲೋಡ್ ಗಟ್ಟದ ರಾಜ್ಯೋಡ್ ಬೀಮರಾಯೇ ತೋಟದ ಕಾರಂಬಡೆ ಮರತ ಮುದೆಲ್ ಪೊಟ್ಟು ಕಲ್ಲುಡ್ ನಿಲೆಯದ್ ಬೀಮರಾಯೇ ಚೌoಡಿ ಪಂಡುದ್ ಗೋಚರ ಮಲ್ಪಯಿ ದೈವದು ಉಲ್ಲ .
ಅನಿದ ಕಾಲೋಡ್ ನಿನನ್ ನಿಲೆ ಮಲ್ಪರೆ ಬತ್ತಿನ ತಂತ್ರಿಲು ಮೋಸ ಮಲ್ತೆರುಂದು ಪನ್ಪಿನೈಕದ್ ಅರೆನ್ ಮಾಯಾ ಮಲ್ತದು ಜಟ್ಟಿಗರಾಯೆ ಪನ್ಪಿನ ದೈವ ಸಗ್ತಿಯಾದ್ ನಿನ ಮರ್ಗಿಲ್ದ್ ನಂಬೊಂದು ಬರ್ಪಿಲೆಕ್ಕ ಮಲ್ತೊಂದು , ತುಳುನಾಡ ಪಂಚ ವರ್ಣದ ಪುಣ್ಯ ಬೂಮಿಡ್ ಬಡಕಾಯಿ ಅಂಕೋಲಾ ಗಡಿದುರ್ದ್ ತೆಂಕಾಯಿ ರಾಮೆಸರ ಗಡಿ ಮುಟ್ಟ ಜಾಗ್ ಜಾಗೆಡ್ ಸಂಚಾರೋಗ್ ಪಿದದೊಂಡ..

ಈತನನ್ನು ಜಟ್ಟಿಗರಾಯ ಎಂದು ಕರೆಯಬೇಕಿದ್ದರೆ ,ಇಲ್ಲಿ ಚಾಮುಂಡಿ ದೈವದ ಆರಾಧನೆಯಲ್ಲಿ ದ್ರೋಹ ಮಾಡಿದ ತಂತ್ರಿ ಜಟ್ಟಿಯೂ ಆಗಿದ್ದನೇ?ಎಂಬ ಸಂದೇಹ ಉಂಟಾಗುತ್ತದೆ .ಚಾಮುಂಡಿದೈವದಆಗ್ರಹಕ್ಕೆತುತ್ತಾಗಿಮಾಯವಾಗಿ  ದೈವತ್ವ ಪಡೆದ ತಂತ್ರಿ ಗೆ ಜಟ್ಟಿಗ ಎಂದು ಹೆಸರು ಬರಬೇಕಿದ್ದರೆ ಆತ ಜಟ್ಟಿ ಕೂಡಾ ಆಗಿದ್ದಿರಬೇಕು .
ಅಥವಾ ತಂತ್ರಿಗಳು/ತಂತ್ರಿದಾರ್ ಎಂಬುದು ಕಾಲಾಂತರದಲ್ಲಿ ತಂತ್ರಿಗ >ಜತ್ತಿಂಗ >ಜಟ್ಟಿಗ ಆಗಿ ಬದಲಾಗಿರುವ ಸಾಧ್ಯತೆ ಇದೆ 



ಅರಮನೆ ಜಟ್ಟಿಗ .ಕೋಟೆ ಜಟ್ಟಿಗ ಮೊದಲಾದ ದೈವಗಳು ಮೂಲತಃ ಜಟ್ಟಿಗರೇ/ಕುಸ್ತಿ ಪಟುಗಳೇ ಆಗಿರಬೇಕು /ಆದರೆ ಜತ್ತಿಂಗ ಮಾತ್ರ ಮೂಲತ ಓರ್ವ ಬ್ರಾಹ್ಮಣ ತಂತ್ರಿ .ಚಾಮುಂಡಿ ದೈವದ ಆರಾಧನೆಯಲ್ಲಿ ದ್ರೋಹ ಮಾಡಿದ್ದಕ್ಕೆ ದೈವ ಆತನನ್ನು ಮಾಯಾ ಮಾಡಿದೆ .ದೈವದ ಆಗ್ರಹಕ್ಕೆ ಸಿಲುಕಿ ಮಯವದವರು ಅದೇ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧಿಸಲ್ಪಡುವ ವಿಚಾರ ತುಳುವ ಸಂಸ್ಕೃತಿಯಲ್ಲಿ ಅಸಹಜವೇನೂ ಅಲ್ಲ.ಹಾಗೆಯೇ ಇಲ್ಲಿ ಕೂಡ ದ್ರೋಹವೆಸಗಿ ಚಾಮುಂಡಿ ದೈವದ ಆಗ್ರಹಕ್ಕೆ ತುತ್ತಾದ ಬ್ರಾಹ್ಮ ತಂತ್ರಿ ದೈವತ್ವ ಪಡೆದು ಜತ್ತಿಂಗ ದೈವವಾಗಿ ಆರಾಧಿಸಲ್ಪಡುತ್ತಿರುವ ಸಾಧ್ಯತೆ ಹೆಚ್ಚಾಗಿದೆ .
ಈ ಭೂತದ ವೇಷ ಭೂಷಣ ಅಭಿನಯ ಅಭಿವ್ಯಕ್ತಿಗಳು ಕೂಡ ಇದನ್ನು ಸಮರ್ಥಿಸುತ್ತದೆ .
ಜತ್ತಿಂಗ ಭೂತಕ್ಕೆ ಸಾಮಾನ್ಯವಾಗಿ ಬ್ರಾಹ್ಮಣರು ಧರಿಸುವ   ಜನಿವಾರ ಕಚ್ಚೆ ನಾಮ ಹಾಕಿ ಭೂತ ಕಟ್ಟುತ್ತಾರೆ .

ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆದರೆ ಸ್ಪಷ್ಟ ಮಾಹಿತಿ ತಿಳಿದು ಬರಬಹುದು