Thursday 5 April 2018

ದೊಡ್ಡವರ ದಾರಿ :55 -ದಿಟ್ಟ ನಿಲುವಿನ ಟಿ ಜಿ ರಾಜಾರಾಮ ಭಟ್ © ಡಾ.ಲಕ್ಷ್ಮೀ ಜಿ ಪ್ರಸಾದ


ದೊಡ್ಡವರ ದಾರಿ :55 -ದಿಟ್ಟ ನಿಲುವಿನ ಟಿ ಜಿ ರಾಜಾರಾಮ ಭಟ್ © ಡಾ.ಲಕ್ಷ್ಮೀ ಜಿ ಪ್ರಸಾದ

 ಸಾಮಾನ್ಯವಾಗಿ ನಾವು ಅನ್ಯಾಯ ನಡೆದಾಗ ಕೂಡ ಸಹಿಸಿಕೊಂಡು ಮೌನವಾಗಿ ಬಿಡುತ್ತೇವೆ.ಯಾಕೆಂದರೆ ನ್ಯಾಯವನ್ನು ಪಡೆಯುವುದು ಸುಲಭದ ದಾರಿಯಲ್ಲ.ನ್ಯಾಯಕ್ಕಾಗಿ ಅಲೆದಾಡುವುದು ಅನ್ಯಾಯವಾದದ್ದಕ್ಕಿಂತ ಹೆಚ್ಚಿನ ಕಷ್ಟ ಆಗುತ್ತದೆ ಎಂಬುದು ನ್ಯಾಯಕ್ಕಾಗಿ ಹೋರಾಡುವ ನನ್ನ ಸ್ವಂತ ಅನುಭವ.
ಆದರೂ ವೈಯುಕ್ತಿಕವಾಗಿ ತೀರಾ ಅನ್ಯಾಯವಾದಾಗ ನಾವು ಹೋರಾಡುತ್ತೇವೆ.ಹೆಚ್ಚಿನವರೂ ಅಲೆದಾಟ ಸಾಕಾಗಿ  ಅರ್ಧದಲ್ಲಿಯೇ ಕೈಬಿಡುತ್ತಾರೆ.ಯಾಕೆಂದರೆ ಇಂದು ನ್ಯಾಯ ಪಡೆಯಲು ಕೂಡ ಅಷ್ಟೇ ಪರಿಶ್ರಮ ಪಡಬೇಕಾಗುತ್ತದೆ.
ಹಾಗಾಗಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವವರ ಸಂಖ್ಯೆ ತೀರಾ ಕಡಿಮೆ‌.ಅನ್ಯಾಯ ನಡೆದಾಗ ಜನರ ಮುಂದೆ ಎರಡು ದಾರಿಗಳು ಇರುತ್ತವೆ‌.ಒಂದು ಅನ್ಯಾಯ ಮಾಡಿದವರ ವಿರುದ್ಧ ತಾನೇ ಹೋರಾಡುವುದು‌.ಇಲ್ಲಿ ಅಂತಹವರು ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ.ಎರಡನೆಯದು ನ್ಯಾಯಾಂಗ ಆಧರಿತ ಹೋರಾಟ‌.ಪೋಲಿಸರಿಗೆ ದೂರು ಕೊಡುವುದು,ನಂತರ ನ್ಯಾಯಾಲಯದಲ್ಲಿ ಹೋರಾಡುವುದು‌.
ಇಲ್ಲಿ ರಾಜಾರಾಮ ಭಟ್ ಈ ಎರಡನೆಯ ದಾರಿಯನ್ನು ಆಯ್ಕೆ ಮಾಡಿಕೊಂಡವರು‌.
ನಡೆದ ವಿಚಾರವನ್ನು ಸಂಕ್ಷಿಪ್ತವಾಗಿ ಹೇಳಿ ಬಿಡುತ್ತೇನೆ.
ಬಂಟ್ವಾಳ ತಾಲೂಕಿನ ಕೈರಂಗಳದಲ್ಲಿ ಒಂದು ಗೋಶಾಲೆಯಲ್ಲಿ ಕಟ್ಟಿ ಮಲೆನಾಡು ಗಿಡ್ಡ ಮೊದಲಾದ ಅಪರೂಪದ ತಳಿಯ ಗೋವುಗಳ ಸಂರಕ್ಷಣೆಯನ್ನು ಮಾಡುತ್ತಿದ್ದಾರೆ‌.ಇದರ ವ್ಯವಸ್ಥಾಪಕರು ರಾಜಾರಾಮ ಭಟ್ ಅವರು‌.
ಇಲ್ಲಿನ ಗೋಶಾಲೆಯಿಂದ ಇದಕ್ಕೆ ಮೊದಲೇ ಎರಡು ಭಾರಿ ಹಸುಗಳನ್ನು ಕದ್ದೊಯ್ದಿದ್ದಾರೆ.ಈ ಬಾರಿ ಇಲ್ಲಿ ನಡೆದದ್ದು ಕೇವಲ ಗೋವುಗಳ ಕಳ್ಳತನವಲ್ಲ .
ಈ ಭಾರಿ ತಲವಾರು ತೋರಿಸಿ ಬಲವಂತವಾಗಿ ಗೋವನ್ನು ಎತ್ತಿಕೊಂಡು ಹೋದದ್ದಲ್ಲದೆ ಇನ್ನೂ ಬರುತ್ತೇವೆ ಸಾಧ್ಯವಾದರೆ ತಡೆಯಿರಿ ಎಂದು ಪಂಥಾಹ್ವಾನ ಹಾಕಿದ್ದಾರೆ‌.
ಕಳ್ಳತನ ಹೇಡಿಗಳ ಕಾರ್ಯ .ಅದರೆ ಇದು ಬಹಳ ದೌರ್ಷ್ಟ್ಯದ ಕೆಲಸ.ಇಂದು ತಲವಾರು ತೋರಿಸಿ ಸಾಧ್ಯವಾದರೆ ತಡೆಯಿರಿ ಎಂದು ಪಂಥಾಹ್ವಾನ ಮಾಡಿ  ಸಂರಕ್ಷಣೆ ಮಾಡಿದ ಗೋವುಗಳನ್ನು ಗೋಶಾಲೆಯಿಂದ ಬಲವಂತವಾಗಿ ಎತ್ತಿಕೊಂಡು ಹೋದವರು ಮುಂದೆ ಮನೆಯ ಹೆಣ್ಣುಮಕ್ಕಳನ್ನು ಎತ್ತಿಕೊಂಡು ಹೋಗಲಾರರೇ ? ಇದು ನನ್ನ ಆತಂಕ ಕೂಡ.
ಇಲ್ಲಿ ನಡೆದ ಗೋ ಕಳ್ಳತನದ ವಿರುದ್ಧ ಪೋಲಿಸರಿಗೆ ಅಮೃತ ಧಾರಾ ಗೋಶಾಲೆಯ ವ್ಯವಸ್ಥಾಪಕರಾದ ರಾಜಾರಾಮ ಭಟ್ ಅವರು ದೂರು ನೀಡಿದ್ದಾರೆ‌.ಅದರೆ ಆರೋಪಗಳನ್ನು ಬಂಧಿಸದ ಕಾರಣ ಈಗ ಹೋರಾಟದ ಮೂರನೆಯ ಆಯಾಮವಾದ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ‌
ಕಳೆದ ಆರು ದಿನಗಳಿಂದ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಇವರು ಮಾಡುತ್ತಿದ್ದಾರೆ‌.ಅವರೇ ಹೇಳಿದಂತೆ ಇದು ಗಾಂಧೀಜಿಯವರು ಹಾಕಿ ಕೊಟ್ಟ ದಾರಿ ಇದು.ಅಹಿಂಸಾ ಮಾರ್ಗದ ಶಕ್ತಿಯುತ ಹೋರಾಟವಿದು‌.ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗಲು ಕೂಡ ಪ್ರೇರಕವಾದ ಹೋರಾಟದ ಮಾರ್ಗವಿದು.
ಆದರೆ ಇದನ್ನು ಕೈಗೊಳ್ಳಲು ಬಹಳ ದಿಟ್ಟತನ ಬೇಕು ಮನೋ ನಿಗ್ರಹ ಬೇಕು.
ಒಂದು ಹೊತ್ತಿನ ಊಟ ತಿಂಡಿ ತಪ್ಪಿದರೇ ಒದ್ದಾಡುವ ನಮಗೆ ಕಳೆದ ಆರ ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ರಾಜಾರಾಮ ಭಟ್ ಅವರ ಮನೋಸ್ಥೈರ್ಯವನ್ನು ಊಹೆ ಮಾಡುವುದು ಕಷ್ಟದ ವಿಚಾರ‌.ಯಾಕೆಂದರೆ ಇಲ್ಲಿ ಜೀವಾಪಾಯ ಕೂಡ ಇದೆ‌.ನಮ್ಮಂತೆ ಅವರಿಗೆ ಕೂಡ ಹೆಂಡತಿ ‌ಮಗಳ ಸಂಸಾರವಿದೆ.ಅವರ ಜವಾಬ್ದಾರಿ ಕೂಡ ಇದೆ.( ಇವರ ಮಡದಿ ಜ್ಯೋತಿ ಮತ್ತು ನಾನು ಬಾಲ್ಯ ಸ್ನೇಹಿತೆಯರು‌ಒಂದೇ ಶಾಲೆಯಲ್ಲಿ ಓದಿದವರು.ಅವರು ನನಗಿಂತ ಒಂದು ವರ್ಷ ಸೀನಿಯರ್ )
ಅವೆಲ್ಲವನ್ನೂ ಮೀರಿ ನಿಂತು ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಮಾಡುತ್ತಿರುವ ರಾಜಾರಾಮ ಭಟ್ ಅವರ ದಿಟ್ಟ ನಿಲುವನ್ನು ಯಾರು ಕೂಡ ಮೆಚ್ಚಬೇಕಾದದ್ದೇ ಆಗಿದೆ.ಇವರೊಂದಿಗೆ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಮಾಡುತ್ತಾ ಇರುವ ವಿಶ್ವನಾಥ್,ದೇವರಾಜ್,ಪ್ರಭಾವತಿ ತಲೆಂಗಳ,ರಾಜೇಶ್
ರತೀಶ್ ಶೆಟ್ಟಿ,ಪ್ರಶಾಂತ್ಕೊಣಾಜೆ  ಶಂಕರ ಭಟ್ ಬಾಲಸುಬ್ರಹ್ಮಣ್ಯ,ಮೋಹನ ಇವರುಗಳು ಕೂಡ ಸ್ತುತ್ಯರ್ಹರೇ ಆಗಿದ್ದಾರೆ, ಏನಂತೀರಿ ? ನಿಮ್ಮ ಅಭಿಪ್ರಾಯ ತಿಳಿಸಿ


ದೊಡ್ಡವರ ದಾರಿ :55 -ದಿಟ್ಟ ನಿಲುವಿನ ಟಿ ಜಿ ರಾಜಾರಾಮ ಭಟ್ © ಡಾ.ಲಕ್ಷ್ಮೀ ಜಿ ಪ್ರಸಾದ

 ದೊಡ್ಡವರ ದಾರಿ :55 -ದಿಟ್ಟ ನಿಲುವಿನ  ಟಿ ಜಿ ರಾಜಾರಾಮ ಭಟ್ © ಡಾ.ಲಕ್ಷ್ಮೀ ಜಿ ಪ್ರಸಾದ
ಸಾಮಾನ್ಯವಾಗಿ ನಾವು ಅನ್ಯಾಯ ನಡೆದಾಗ ಕೂಡ ಸಹಿಸಿಕೊಂಡು ಮೌನವಾಗಿ ಬಿಡುತ್ತೇವೆ.ಯಾಕೆಂದರೆ ನ್ಯಾಯವನ್ನು ಪಡೆಯುವುದು ಸುಲಭದ ದಾರಿಯಲ್ಲ.ನ್ಯಾಯಕ್ಕಾಗಿ ಅಲೆದಾಡುವುದು ಅನ್ಯಾಯವಾದದ್ದಕ್ಕಿಂತ ಹೆಚ್ಚಿನ ಕಷ್ಟ ಆಗುತ್ತದೆ ಎಂಬುದು ನ್ಯಾಯಕ್ಕಾಗಿ ಹೋರಾಡುವ ನನ್ನ ಸ್ವಂತ ಅನುಭವ.
ಆದರೂ ವೈಯುಕ್ತಿಕವಾಗಿ ತೀರಾ ಅನ್ಯಾಯವಾದಾಗ ನಾವು ಹೋರಾಡುತ್ತೇವೆ.ಹೆಚ್ಚಿನವರೂ ಅಲೆದಾಟ ಸಾಕಾಗಿ  ಅರ್ಧದಲ್ಲಿಯೇ ಕೈಬಿಡುತ್ತಾರೆ.ಯಾಕೆಂದರೆ ಇಂದು ನ್ಯಾಯ ಪಡೆಯಲು ಕೂಡ ಅಷ್ಟೇ ಪರಿಶ್ರಮ ಪಡಬೇಕಾಗುತ್ತದೆ.
ಹಾಗಾಗಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವವರ ಸಂಖ್ಯೆ ತೀರಾ ಕಡಿಮೆ‌.ಅನ್ಯಾಯ ನಡೆದಾಗ ಜನರ ಮುಂದೆ ಎರಡು ದಾರಿಗಳು ಇರುತ್ತವೆ‌.ಒಂದು ಅನ್ಯಾಯ ಮಾಡಿದವರ ವಿರುದ್ಧ ತಾನೇ ಹೋರಾಡುವುದು‌.ಇಲ್ಲಿ ಅಂತಹವರು ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ.ಎರಡನೆಯದು ನ್ಯಾಯಾಂಗ ಆಧರಿತ ಹೋರಾಟ‌.ಪೋಲಿಸರಿಗೆ ದೂರು ಕೊಡುವುದು,ನಂತರ ನ್ಯಾಯಾಲಯದಲ್ಲಿ ಹೋರಾಡುವುದು‌.
ಇಲ್ಲಿ ರಾಜಾರಾಮ ಭಟ್ ಈ ಎರಡನೆಯ ದಾರಿಯನ್ನು ಆಯ್ಕೆ ಮಾಡಿಕೊಂಡವರು‌.
ನಡೆದ ವಿಚಾರವನ್ನು ಸಂಕ್ಷಿಪ್ತವಾಗಿ ಹೇಳಿ ಬಿಡುತ್ತೇನೆ.
ಬಂಟ್ವಾಳ ತಾಲೂಕಿನ ಕೈರಂಗಳದಲ್ಲಿ ಒಂದು ಗೋಶಾಲೆಯಲ್ಲಿ ಕಟ್ಟಿ ಮಲೆನಾಡು ಗಿಡ್ಡ ಮೊದಲಾದ ಅಪರೂಪದ ತಳಿಯ ಗೋವುಗಳ ಸಂರಕ್ಷಣೆಯನ್ನು ಮಾಡುತ್ತಿದ್ದಾರೆ‌.ಇದರ ವ್ಯವಸ್ಥಾಪಕರು ರಾಜಾರಾಮ ಭಟ್ ಅವರು‌.
ಇಲ್ಲಿನ ಗೋಶಾಲೆಯಿಂದ ಇದಕ್ಕೆ ಮೊದಲೇ ಎರಡು ಭಾರಿ ಹಸುಗಳನ್ನು ಕದ್ದೊಯ್ದಿದ್ದಾರೆ.ಈ ಬಾರಿ ಇಲ್ಲಿ ನಡೆದದ್ದು ಕೇವಲ ಗೋವುಗಳ ಕಳ್ಳತನವಲ್ಲ .
ಈ ಭಾರಿ ತಲವಾರು ತೋರಿಸಿ ಬಲವಂತವಾಗಿ ಗೋವನ್ನು ಎತ್ತಿಕೊಂಡು ಹೋದದ್ದಲ್ಲದೆ ಇನ್ನೂ ಬರುತ್ತೇವೆ ಸಾಧ್ಯವಾದರೆ ತಡೆಯಿರಿ ಎಂದು ಪಂಥಾಹ್ವಾನ ಹಾಕಿದ್ದಾರೆ‌.
ಕಳ್ಳತನ ಹೇಡಿಗಳ ಕಾರ್ಯ .ಅದರೆ ಇದು ಬಹಳ ದೌರ್ಷ್ಟ್ಯದ ಕೆಲಸ.ಇಂದು ತಲವಾರು ತೋರಿಸಿ ಸಾಧ್ಯವಾದರೆ ತಡೆಯಿರಿ ಎಂದು ಪಂಥಾಹ್ವಾನ ಮಾಡಿ  ಸಂರಕ್ಷಣೆ ಮಾಡಿದ ಗೋವುಗಳನ್ನು ಗೋಶಾಲೆಯಿಂದ ಬಲವಂತವಾಗಿ ಎತ್ತಿಕೊಂಡು ಹೋದವರು ಮುಂದೆ ಮನೆಯ ಹೆಣ್ಣುಮಕ್ಕಳನ್ನು ಎತ್ತಿಕೊಂಡು ಹೋಗಲಾರರೇ ? ಇದು ನನ್ನ ಆತಂಕ ಕೂಡ.
ಇಲ್ಲಿ ನಡೆದ ಗೋ ಕಳ್ಳತನದ ವಿರುದ್ಧ ಪೋಲಿಸರಿಗೆ ಅಮೃತ ಧಾರಾ ಗೋಶಾಲೆಯ ವ್ಯವಸ್ಥಾಪಕರಾದ ರಾಜಾರಾಮ ಭಟ್ ಅವರು ದೂರು ನೀಡಿದ್ದಾರೆ‌.ಅದರೆ ಆರೋಪಗಳನ್ನು ಬಂಧಿಸದ ಕಾರಣ ಈಗ ಹೋರಾಟದ ಮೂರನೆಯ ಆಯಾಮವಾದ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ‌
ಕಳೆದ ಆರು ದಿನಗಳಿಂದ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಇವರು ಮಾಡುತ್ತಿದ್ದಾರೆ‌.ಅವರೇ ಹೇಳಿದಂತೆ ಇದು ಗಾಂಧೀಜಿಯವರು ಹಾಕಿ ಕೊಟ್ಟ ದಾರಿ ಇದು.ಅಹಿಂಸಾ ಮಾರ್ಗದ ಶಕ್ತಿಯುತ ಹೋರಾಟವಿದು‌.ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗಲು ಕೂಡ ಪ್ರೇರಕವಾದ ಹೋರಾಟದ ಮಾರ್ಗವಿದು.
ಆದರೆ ಇದನ್ನು ಕೈಗೊಳ್ಳಲು ಬಹಳ ದಿಟ್ಟತನ ಬೇಕು ಮನೋ ನಿಗ್ರಹ ಬೇಕು.
ಒಂದು ಹೊತ್ತಿನ ಊಟ ತಿಂಡಿ ತಪ್ಪಿದರೇ ಒದ್ದಾಡುವ ನಮಗೆ ಕಳೆದ ಆರ ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ರಾಜಾರಾಮ ಭಟ್ ಅವರ ಮನೋಸ್ಥೈರ್ಯವನ್ನು ಊಹೆ ಮಾಡುವುದು ಕಷ್ಟದ ವಿಚಾರ‌.ಯಾಕೆಂದರೆ ಇಲ್ಲಿ ಜೀವಾಪಾಯ ಕೂಡ ಇದೆ‌.ನಮ್ಮಂತೆ ಅವರಿಗೆ ಕೂಡ ಹೆಂಡತಿ ‌ಮಗಳ ಸಂಸಾರವಿದೆ.ಅವರ ಜವಾಬ್ದಾರಿ ಕೂಡ ಇದೆ.( ಇವರ ಮಡದಿ ಜ್ಯೋತಿ ಮತ್ತು ನಾನು ಬಾಲ್ಯ ಸ್ನೇಹಿತೆಯರು‌ಒಂದೇ ಶಾಲೆಯಲ್ಲಿ ಓದಿದವರು.ಅವರು ನನಗಿಂತ ಒಂದು ವರ್ಷ ಸೀನಿಯರ್ )
ಅವೆಲ್ಲವನ್ನೂ ಮೀರಿ ನಿಂತು ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಮಾಡುತ್ತಿರುವ ರಾಜಾರಾಮ ಭಟ್ ಅವರ ದಿಟ್ಟ ನಿಲುವನ್ನು ಯಾರು ಕೂಡ ಮೆಚ್ಚಬೇಕಾದದ್ದೇ ಆಗಿದೆ.ಇವರೊಂದಿಗೆ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಮಾಡುತ್ತಾ ಇರುವ ವಿಶ್ವನಾಥ್,ದೇವರಾಜ್,ಪ್ರಭಾವತಿ ತಲೆಂಗಳ,ರಾಜೇಶ್
ರತೀಶ್ ಶೆಟ್ಟಿ,ಪ್ರಶಾಂತ್ಕೊಣಾಜೆ  ಶಂಕರ ಭಟ್ ಬಾಲಸುಬ್ರಹ್ಮಣ್ಯ,ಮೋಹನ ಇವರುಗಳು ಕೂಡ ಸ್ತುತ್ಯರ್ಹರೇ ಆಗಿದ್ದಾರೆ, ಏನಂತೀರಿ ? ನಿಮ್ಮ ಅಭಿಪ್ರಾಯ ತಿಳಿಸಿ

Wednesday 14 March 2018

ಸುಳ್ಯ ರೈತಾಪಿ ಜನರ ಸ್ವಾತಂತ್ರ್ಯ ಹೋರಾಟ- ಅಮರ ಸುಳ್ಯದ ಕ್ರಾಂತಿ -©ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕರು

ಸುಳ್ಯ ರೈತಾಪಿ ಜನರ ಸ್ವಾತಂತ್ರ್ಯ ಹೋರಾಟ- ಅಮರ ಸುಳ್ಯದ ಕ್ರಾಂತಿ
© ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕರು
ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ
ಬೆಂಗಳೂರು ಗ್ರಾಮಾಂತರ ಜಿಲ್ಲೆ
ಮೊಬೈಲ್ 9480516684
ಕೋಲಾರ ಜಿಲ್ಲೆಯ ಮುಳಬಾಗಿಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 14-03-2018 ರಂದು ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧ

1857ರಲ್ಲಿ ಝಾನ್ಸಿರಾಣಿ ಲಕ್ಷ್ಮೀಬಾಯಿಯ ನೇತೃತ್ವದಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯಿತೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಆದರೆ ಅದಕ್ಕೂ ಮೊದಲು ಬ್ರಿಟಿಷರ ದಬ್ಬಾಳಿಕೆಯನ್ನು ಯಾರೂ ಪ್ರಶ್ನಿಸಿಲ್ಲ ಎಂದರ್ಥವಲ್ಲ. ಬ್ರಿಟಿಷ್ ಗವರ್ನರ್ ಜನರಲ್ ಡಾಲ್‍ಹೌಸಿ ಬಳಕೆಗೆ ತಂದ ನಿಯಮಾವಳಿಯ ಪ್ರಕಾರ ಮಕ್ಕಳಿಲ್ಲದ ಭಾರತೀಯ ರಾಜರುಗಳು ಬ್ರಿಟಿಷರ ಅನುಮತಿ ಇಲ್ಲದೆ ದತ್ತು ತೆಗೆದುಕೊಳ್ಳುವಂತಿರಲಿಲ್ಲ. ದತ್ತು ತೆಗೆದುಕೊಳ್ಳುವುದಕ್ಕೆ ಮೊದಲೇ ರಾಜನು ಸತ್ತರೆ ಅಥವಾ ಆತನಿಗೆ ದತ್ತು ತೆಗೆದುಕೊಳ್ಳಲು ಅನುಮತಿ ಸಿಗದೆ ಇದ್ದರೆ ಆ ರಾಜನ ರಾಜ್ಯವು ಬ್ರಿಟಿಷರಿಗೆ ಸೇರುತ್ತಿತ್ತು.  ಡಾಲ್‍ಹೌಷಿ ತಂದ ನಿಯಮದಿಂದಾಗಿ ಕೊಡಗು ರಾಜ್ಯ ಕೂಡ ಬ್ರಿಟಿಷರ ಪಾಲಾಗಬೇಕಾಗುತ್ತದೆ.

ಕೊಡಗಿನ ಕೊನೆಯ ಅರಸ ಚಿಕ್ಕವೀರ ರಾಜೇಂದ್ರನು ಆಡಳಿತ ನಡೆಸುತ್ತಿದ್ದಾಗ ಸಮಯವನ್ನು ಹೊಂಚುಹಾಕುತ್ತಿದ್ದ ಬ್ರಿಟಿಷರು ಚಿಕ್ಕವೀರ ರಾಜೇಂದ್ರವನ್ನು ಪದಚ್ಯುತಗೊಳಿಸುತ್ತಾರೆ. ಕೊಡಗಿನ ಅರಸರ ವಂಶಕ್ಕೆ ಸೇರಿದವರು ಯಾರು ಇಲ್ಲದ್ದರಿಂದ ಕೊಡಗು ರಾಜ್ಯವನ್ನು  ಬ್ರಿಟಿಷರು ವಶಪಡಿಸಿಕೊಳ್ಳುತ್ತಾರೆ. ಆ ಸಮಯದಲ್ಲಿ ಬೆಳ್ಳಾರೆ, ಸುಳ್ಯ ಸೇರಿದಂತೆ ಪಂಜ ಸೀಮೆಯನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿಸಿದರು. ಕೊಡಗಿನ ಭಾಗವಾಗಿದ್ದ ಸುಳ್ಯವನ್ನು ಕೊಡಗಿನಿಂದ ಬೇರ್ಪಡಿಸಿದ್ದು ಸುಳ್ಳದ ಜನತೆಗೆ ಇಷ್ಟದ ವಿಚಾರವಾಗಿರಲಿಲ್ಲಿ. ಕೊಡಗರಸರ ಕಾಲದಲ್ಲಿ ಭತ್ತ, ತೆಂಗಿನಕಾಯಿ ಮೊದಲಾದ ವಸ್ತುಗಳ ರೂಪದಲ್ಲಿದ್ದ ಭೂಕಂದಾಯವನ್ನು ಬ್ರಿಟಿಷರು ನಗದಿನ ರೂಪದಲ್ಲಿ ಕೊಡಬೇಕೆಂದು ನಿಯಮ ತಂದರು. ಇದರಿಂದಾಗಿ ಸುಳ್ಯದ ರೈತಾಪಿಜನರು ತೀವ್ರವಾಗಿ ಅಸಮಾಧಾನಗೊಂಡರು. ಸುಳ್ಯದ ಜನರು ಬ್ರಿಟಿಷರನ್ನು ತೊಲಗಿಸಿ ಕೊಡಗನ್ನು ವಶಪಡಿಸಿಕೊಂಡು ಕೊಡಗಿನ ಆಡಳಿತವನ್ನು ಪುನರಾರಂಭಿಸಬೇಕೆಂದು ಒಮ್ಮತದಿಂದ ನಿರ್ಧರಿಸಿದರು. ಇದರ ಫಲವಾಗಿ ಸುಳ್ಯ ಬೆಳ್ಳಾರೆ ಪರಿಸರದಲ್ಲಿ ಒಂದು ಸ್ವಾತಂತ್ರ್ಯ ಸಮರ ಆರಂಭವಾಗಿ 1837 ಎಪ್ರಿಲ್ 5ರಂದು ಮಂಗಳೂರಿನ ಕಲೆಕ್ಟರನ ಆಫೀಸಿನ ಎದುರು ಸ್ವತಂತ್ರ ಧ್ವಜವನ್ನು ಊರಿ, ಹದಿಮೂರು ದಿನಗಳ ಕಾಲ ಕೊಡಗು, ಕಾಸರಗೋಡು, ದ.ಕ.ಜಿಲ್ಲೆಯನ್ನೊಳಗೊಂಡ ಪ್ರದೇಶವು ಸ್ವಾತಂತ್ಯದ ಸಿಹಿಯನ್ನು ಅನುಭವಿಸಿತು. ಇದರ ಫಲವಾಗಿ ಸ್ವತಂತ್ರ ನೆಲಕ್ಕಾಗಿ, ತಾಯ್ನಾಡಿಗಾಗಿ ಮೊದಲ ಸ್ವಾತಂತ್ರ್ಯ ಹೋರಾಟ ನಡೆಯಿತು. ಆದರೆ ಅದನ್ನು ಬ್ರಿಟಿಷರು ಕಲ್ಯಾಣಪ್ಪನ ಕಾಟುಕಾಯಿ ಎಂದು ಕರೆದರು.

ಡಿ. ಎನ್. ಕೃಷ್ಣಯ್ಯನವರು ಹೇಳುವ ಪ್ರಕಾರ 1833ರಲ್ಲಿ ಅಪರಂಪರನೆಂಬ ಜಂಗಮನೊಬ್ಬ ತಾನು ಕೊಡಗಿನ ಲಿಂಗರಾಜೇಂದ್ರ ಒಡೆಯರ ಅಣ್ಣ ಅಪ್ಪಾಜಿಯ ಮಗ ವೀರಪ್ಪ ಒಡೆಯ ಎಂದು ಹೇಳಿಕೊಂಡಾಗ ಕೊಡಗಿನ ಜನರು ಅದನ್ನು ನಂಬುತ್ತಾರೆ. ಆದರೆ ಬ್ರಿಟಿಷರು ಆತನು ರಾಜವಂಶದವನಲ್ಲವೆಂದು ತಿಳಿದು 1835ರಲ್ಲಿ ಆತನನ್ನು ಬಂಧಿಸುತ್ತಾರೆ.

ಅಪರಂಪರನನ್ನು ಬಂಧಿಸಿದಾಗ ಕಲ್ಯಾಣಸ್ವಾಮಿ ಎಂಬಾತನು ತಾನು ಅಪ್ಪಾಜಿಯ ಎರಡನೇ ಮಗ ನಂಜುಂಡಪ್ಪ ಎಂದು ಹೇಳಿಕೊಂಡು ಸುಳ್ಯದಲ್ಲಿ ಜನರು ದಂಗೆ ಏಳುವ ಲಕ್ಷಣ ಕಾಣಿಸಿಕೊಂಡಾಗ ಅವನು ಕೊಡಗಿನವರನ್ನು ಒಟ್ಟುಗೂಡಿಸಲು ಪ್ರಯತ್ನಿಸಿದನು.ಬ್ರಿಟಿಷರಿಗೆ ಇದು ತಿಳಿದು ಆತನನ್ನು 1837ರಲ್ಲಿ ಬಂಧಿಸಿದರು.

ಸುಳ್ಯದ ರೈತಾಪಿ ಜನರು ಈ ಸಂದರ್ಭವನ್ನು ಉಪಯೋಗಿಸಿಕೊಂಡು ಪುಟ್ಟ ಬಸಪ್ಪನೆಂಬ ಜಂಗಮನನ್ನು ಕಲ್ಯಾಣಸ್ವಾಮಿ ಎಂದು ಹೇಳಿ ನಂಬಿಸಿ ಕೆದಂಬಾಡಿ ರಾಮಗೌಡರ ಮನೆಗೆ ಕರೆತಂದು ಆತನನ್ನು ಕಲ್ಯಾಣಸ್ವಾಮಿ ಎಂದು ಬಿಂಬಿಸಿದರು. ರಾಮಗೌಡರಿಗೆ ಓರ್ವ ಬ್ರಿಟಿಷ್ ಅಮಲ್ದಾರನೊಡನೆ ದ್ವೇಷವಿದ್ದು ಆತನನ್ನು ರಾಮಗೌಡರು ಕೊಲ್ಲುತ್ತಾರೆ. ಇದನ್ನೇ ಮಹತ್ಕಾರ್ಯವೆಂದು ಭಾವಿಸಿದ ಸುಳ್ಯದ ಜನರು ದಂಗೆಯೇಳುವುದಕ್ಕೆ ಬೆಂಬಲಿಸಿದರು 1837 ಮಾರ್ಚ್ 30ರಂದು ಹೋರಾಟ ಆರಂಭವಾಯಿತು. ರಾಮಗೌಡರಿಗೆ ಕೂಜಗೋಡು ಮಲ್ಲಪ್ಪಗೌಡರ ಬೆಂಬಲ ದೊರೆಯಿತು. ಇಡೀ ಗೌಡ ಸಮುದಾಯ ಹೋರಾಟಕ್ಕೆ ಬೆಂಬಲ ನೀಡಿತು.

1837ರ ಮಾರ್ಚ್ 30ರಂದು ರಾಮಗೌಡರು ಬೆಳ್ಳಾರೆಗೆ ಕಲ್ಯಾಣಸ್ವಾಮಿಯನ್ನು (ಪುಟ್ಟ ಬಸಪ್ಪ) ಕರೆ ತರುತ್ತಾರೆ. ಬೆಳ್ಳಾರೆಯ ಕೋಟೆಯಲ್ಲಿ ಕಲ್ಯಾಣ ಸ್ವಾಮಿಗೆ ಪಟ್ಟಕಟ್ಟುತ್ತಾರೆ. ಬೆಳ್ಳಾರೆಯ ಕೋಟೆಯಲ್ಲಿದ್ದ ಬ್ರಿಟಿಷರ ಖಜಾನೆಯನ್ನು ವಶಪಡಿಸಿಕೊಂಡರು.ಅಲ್ಲಿ ಭಾರತದ ಸ್ವತಂತ್ರ ಧ್ವಜವನ್ನು ಹಾರಿಸುತ್ತ್ತಾರೆ . ಕೊಡಗಿನ ಬೇರೆ ಬೇರೆ ಭಾಗಗಳಿಗೆ ನಿರೂಪ ಕಳಿಸಿ  ಬೆಂಬಲ ಕೇಳಿದರು. ಬೆಳ್ಳಾರೆಯ ಬೀರಣ್ಣ ಬಂಟರ ನೇತೃತ್ವದಲ್ಲಿ ಒಂದು ಗುಂಪು ಸುಬ್ರಹ್ಮಣ್ಯ ಕಡೆಗೆ ಹೋಯಿತು. ಶ್ರೀ. ಕೆ.ಆರ್. ವಿದ್ಯಾಧರ ಮಡಿಕೇರಿ ಅವರು ‘ಕಂಚುಡ್ಕ ರಾಮಗೌಡ ಹಾಗೂ ಕುಡಕಲ್ಲು ಪುಟ್ಟಗೌಡರ ನೇತೃತ್ವದಲ್ಲಿ ಸೈನ್ಯವನ್ನು ಕುಂಬಳೆ ಕಾಸರಗೋಡಿಗೆ ಕಳುಹಿಸಲಾಯಿತು. ಇನ್ನೊಂದು ತಂಡ ಬಂಟ್ವಾಳ ಕಾರ್ಕಳಕ್ಕೆ ಮತ್ತು ಮತ್ತೊಂದು ತಂಡ ಉಪ್ಪಿನಂಗಡಿ ಬಿಸಲೆಗೆ ಹೋಯಿತೆಂದು’ ಅಭಿಪ್ರಾಯ ಪಟ್ಟಿದ್ದಾರೆ. ಡಿ.ಎನ್. ಕೃಷ್ಣಯನವರ ಪ್ರಕಾರ ಪುತ್ತೂರು, ಪಾಣೆ ಮಂಗಳೂರು ಮತ್ತು ಮಂಗಳೂರಿಗೆ ರಾಮಗೌಡ ಹಾಗೂ ಕಲ್ಯಾಣಸ್ವಾಮಿಯ ನೇತೃತ್ವದಲ್ಲಿ ದಂಡು ಹೊರಟಿತು. ಪುತ್ತೂರನ್ನು ವಶಪಡಿಸಿಕೊಂಡು ಪಾಣೆಮಂಗಳೂರಿಗೆ ಬಂದಾಗ ನಂದಾವರದ ಲಕ್ಷ್ಮಪ್ಪ ಬಂಗರಸನು ಕೂಡಿಕೊಂಡನು. 1837 ಎಪ್ರಿಲ್ 5ರಂದು ಮಂಗಳೂರನ್ನು ವಶಪಡಿಸಿಕೊಂಡು ಬಾವುಟಗುಡ್ಡದಲ್ಲಿ ಧ್ವಜ ಹಾರಿಸಿದರು ಇಲ್ಲಿ 13 ದಿನ ಆಡಳಿತ ನಡೆಸಿದರು.

ಕೊಡಗಿನಲ್ಲಿ ಗುಡ್ಡೆಮನೆ ಅಪ್ಪಯ್ಯ ಹೋರಾಟಕ್ಕೆ ಬೆಂಬಲ ನೀಡಿದರಾದರೂ ಬ್ರಿಟಿಷರ ಕುಮ್ಮಕ್ಕಿನಿಂದಾಗಿ ಇತರರಿಂದ ಬೆಂಬಲ ಸಿಗಲಿಲ್ಲ ಜೊತೆಗೆ ತಲಚೇರಿ-ಕಣ್ಣನ್ನೂರುಗಳಿಂದ ಬ್ರಿಟಿಷ್ ಸೈನ್ಯ ಮಂಗಳೂರು ತಲುಪಿತು. ಇವರಲ್ಲಿ ಸಾವಿರಾರು ಜನರು ಇದ್ದರೂ ಕೂಡ ಕೋವಿಯಂಥ ಮಾರಕಾಯುಧಗಳು ಬೆರಳೆಣಿಕೆಯಷ್ಟು ಮಾತ್ರ ಇದ್ದವು. ಆದ್ದರಿಂದ ಕಲ್ಯಾಣಸ್ವಾಮಿ ತಪ್ಪಿಸಿಕೊಂಡು ಕಡಬದತ್ತ ಸಾಗಿದನು. ಆಧುನಿಕ ಶಸ್ತ್ರಾಸ್ತ್ರಗಳಿಂದ ಸುಸಜ್ಜಿತವಾದ ಬ್ರಿಟಿಷ್ ಪರವಾದ ಹಿಂದುಗಳೇ ಇದ್ದ ಸೈನ್ಯವನ್ನು ಎದುರಿಸಲು ಆಗದೆ ಸೋಲಬೇಕಾಯಿತು. ನಾಲ್ಕು ನಾಡಿನ ಉತ್ತು, ಶಾಂತಳ್ಳಿ ಮಲ್ಲಯ್ಯ ಗುಡ್ಡೆಮನೆ ಅಪ್ಪಯ್ಯ, ಚೆಟ್ಟಿಕುಡಿಯ, ಕುರ್ತುಕುಡಿಯ, ಲಕ್ಷ್ಮಣ ಬಂಗರಸ ಮೊದಲಾದವರು ಸೆರೆ ಸಿಕ್ಕಿದರು.

1837 ಮೇ ತಿಂಗಳ ಎರಡನೇ ವಾರದಲ್ಲಿ ಕಲ್ಯಾಣಸ್ವಾಮಿಯನ್ನು ಬ್ರಿಟಿಷ್ ಸೈನಿಕರು ಸೆರೆಹಿಡಿದು ಆತನನ್ನು ಮಡಿಕೇರಿಗೆ ಕರೆತರುತ್ತಾರೆ ಬ್ರಿಟಿಷರು ಕಲ್ಯಾಣಸ್ವಾಮಿ(ಪುಟ್ಟ ಬಸಪ್ಪ) ಮತ್ತು ಲಕ್ಷ್ಮಪ್ಪ ಬಂಗರಸ ಇವರನ್ನು ಮಂಗಳೂರಿನ ಬೀರ್ನಕಟ್ಟೆಯಲ್ಲಿ ಗಲ್ಲಿಗೇರಿಸಿದರು. ಗುಡ್ಡೆ ಮನೆ ಅಪ್ಪಯ್ಯರನ್ನು ಮಡಿಕೇರಿಯಲ್ಲಿ ಗಲ್ಲಿಗೇರಿಸುತ್ತಾರೆ. ಚೆಟ್ಟಿಕುಡಿಯ, ಕುರ್ತುಕುಡಿಯ ಮತ್ತು ಕೃಷ್ಣಯ್ಯ ಇವರಿಗೆ ಜೀವಾವಧಿ ಶಿಕ್ಷೆ ವಿಧಿಸಿದರು. ಶಾಂತಯ್ಯ ಮಲ್ಲಳ್ಳಿ ಮೊದಲಾದವರಿಗೆ 7-14 ವರ್ಷಗಳ ತನಕ ಸೆರೆಮನೆವಾಸದ ಶಿಕ್ಷೆಯಾಯಿತು. ಡಾ ಪ್ರಭಾಕರ ಶಿಶಿಲರು ಹೇಳಿದಂತೆ ``ಸ್ವಾತಂತ್ರ್ಯ ಸಂಗ್ರಾಮವೆಂದಾಗ ಬೇಕಿದ್ದ ಈ ಹೋರಾಟವನ್ನು ಕಲ್ಯಾಣಪ್ಪನ ಕಾಟುಕಾಯಿ(ದರೋಡೆ) ಎಂದು ಬ್ರಿಟಿಷರು ಕರೆದರು.

ಬೆಳ್ಳಾರೆಯ ಕೋಟೆಯಲ್ಲಿದ್ದ ಬ್ರಿಟಿಷರ ಖಜಾನೆಯನ್ನು ವಶಪಡಿಸಿಕೊಂಡದ್ದು ಬಿಟ್ಟರೆ ಬೇರೆಯಾರ ಸಂಪತ್ತನ್ನು ಈ ಹೋರಾಟಗಾರರ ಗುಂಪು ದೋಚಲಿಲ್ಲ. ಬೆಳ್ಳಾರೆಯ ಕೋಟೆಯಲ್ಲಿದ್ದ ಬ್ರಿಟಿಷ್ ಖಜಾನೆಯನ್ನು ವಶಪಡಿಸಿಕೊಳ್ಳುವ ತನಕ ಬ್ರಿಟಿಷರಿಗೆ ಹೋರಾಟಕ್ಕಾಗಿ ಜನರ ಗುಂಪೊಂದು ಸಂಘಟಿತವಾದದ್ದು ತಿಳಿಯಲಿಲ್ಲ. ಖಜಾನೆಯನ್ನು ವಶಪಡಿಸಿಕೊಂಡಾಗ ಕೂಡ ದರೋಡೆ ಎಂದು ತಿಳಿದರೇ ಹೊರತು, ಅಲ್ಲೊಂದು ಸ್ವಾತಂತ್ರ್ಯ ಹೋರಾಟಕ್ಕೆ ವೇದಿಕೆ ಸಿದ್ಧವಾದುದ್ದು ಬ್ರಿಟಿಷರ ಗಮನಕ್ಕೆ ಬರಲಿಲ್ಲ. ಅಷ್ಟರ ಮಟ್ಟಿಗಿನ ಮುಂಜಾಗರೂಕತೆಯನ್ನು ವಹಿಸಲಾಗಿತ್ತು. ಬೆಳ್ಳಾರೆಯ ಹಿರಿಯರ ಪ್ರಕಾರ ಪುತ್ತೂರು, ಸುಬ್ರಹ್ಮಣ್ಯ ಹಾಗೂ ಇತರೆಡೆಗೆ ದಂಡು ಸಾಗುವಾಗ ಮದುವೆ ದಿಬ್ಬಣದ ರೂಪದಲ್ಲಿ ಸಾಗುತ್ತಿತ್ತು. ಹೀಗೆ ಬ್ರಿಟಿಷ್ ಅಧಿಕಾರಿಗಳಿಗೆ ಚಳ್ಳೆಹಣ್ಣನ್ನು ತಿನ್ನಿಸಿದ್ದರು. ಈ ಹೋರಾಟಗಾರರು ತೆಂಗಿನ ಮಡಲಿನ ಕೊತ್ತಲಿಂಗೆಯ ಮಂಡೆಯನ್ನು ಆಯುಧವಾಗಿ ಉಪಯೋಗಿಸಿಕೊಂಡಿದ್ದರು. ಈ ಹೋರಾಟಗಾರರ ಕೆಚ್ಚೆದೆಗೆ ಸಾಹಸಕ್ಕೆ ಸಾಕ್ಷಿಯಾದ ಬೆಳ್ಳಾರೆಯ ಕೋಟೆ ಈಗ ಕೂಡ ಇದೆ. ಇವರು ವಶಪಡಿಸಿಕೊಂಡ ಬ್ರಿಟಿಷರ ಖಜಾನೆ ಕೂಡ ಇದೆ. ಬೆಳ್ಳಾರೆಯ ಸರಕಾರಿ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣಕ್ಕೆ ಸೇರಿಕೊಂಡು ಬೆಳ್ಳಾರೆಯ ಕೋಟೆ ಇದೆ. ಈ ಪ್ರದೇಶವನ್ನು ಈಗ ಬಂಗ್ಲೆಗುಡ್ಡೆ ಎಂದು ಕರೆಯುತ್ತಾರೆ. ಬ್ರಿಟಿಷರ ಖಜಾನೆ ಇದ್ದ ಬಂಗಲೆಯ ಕಾರಣಕ್ಕೆ ಇಲ್ಲಿಗೆ ಬಂಗ್ಲೆಗುಡ್ಡೆ ಎಂ ಬ ಹೆಸರು ಬಂದಿದೆ. ಸ್ವತಂತ್ರ ಧ್ವಜ ಹಾರಾಡಿದ ಬೆಳ್ಳಾರೆಯ ಈ ಕೋಟೆಯನ್ನು ಸ್ಮಾರಕವಾಗಿ ರಕ್ಷಿಸಬೇಕಾಗಿದೆ .ಜೊತೆಗೆ ಇಲ್ಲಿ ಸ್ವತಂತ್ರ ಧ್ವಜ ಹಾರಿಸಿದ ನೆನಪಿಗಾಗಿ ಇದೇ ಜಾಗದಲ್ಲಿ ಪ್ರತಿ ಸ್ವಾತಂ ತ್ರ್ಯ  ದಿನಾಚರಣೆಯಂದು ಇಲ್ಲಿ ನಮ್ಮ ದೇಶದ ಧ್ವಜವನ್ನು ಹಾರಿಸಿ ಈ ಸ್ವಾತಂ ತ್ರ್ಯ ಹೋರಾಟವನ್ನು ಮತ್ತು ಹುತಾತ್ಮರಾದ ಕಲ್ಯಾಣ ಸ್ವಾಮೀ ಹಾಗು ಇತರ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ ಅವರಿಗೆ ಗೌರವ ಸೂಚಿಸುವ ಕಾರ್ಯ ಅಗತ್ಯವಾಗಿ ಆಗ ಬೇಕಾಗಿದೆ .
ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕರು
ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ
ಬೆಂಗಳೂರು ಗ್ರಾಮಾಂತರ ಜಿಲ್ಲೆ
ಮೊಬೈಲ್ 9480516684


ಆಧಾರಗ್ರಂಥಗಳು:


1ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಲೇ| ಗಣಪತಿರಾವ ಐಗಳು


 2 ಚಿಕವೀರ ರಾಜೇಂದ್ರ ( ಐತಿಹಾಸಕ ಕಾದಂಬರಿ) ಲೇ: ಮಾಸ್ತಿ ವೆಂಕಟೇಶ ಅಯ್ಯಂಗಾರ್

3 ಸ್ವಾಮಿ ಅಪರಂಪಾರ ( ಐತಿಹಾಸಿಕ ಕಾದಂಬರಿ)- ಲೇ| ನಿರಂಜನ( ಕುಲ್ಕುಂದ ಶಿವರಾಯ)

4 ಕಲ್ಯಾಣ ಸ್ವಾಮಿ ( ಐತಿಹಾಸಿಕ ಕಾದಂಬರಿ) ಲೇ| ನಿರಂಜನ ( ಕುಲ್ಕುಂದ ಶಿವರಾಯ)

5 ಚೆನ್ನ ಬಸಪ್ಪ ನಾಯಕ ( ಐತಿಹಾಸಿಕ ಕಾದಂಬರಿ) ಲೇ ನಿರಂಜನ( ಕುಲ್ಕುಂದ ಶಿವರಾಯ)


 6 ಅಮರಸುಳ್ಯದ ದಂಗೆ  -ಲೇ|ಎನ್.ಎಸ್ ದೇವಿಪ್ರಸಾದ  ಸಂಪಾಜೆ


7  In pursuits of our roots - Putturu Anantharaja Gowda


8 ರಾಜ ಪರಂಪರೆಯ ಕೊಡಗು ಮತ್ತು ದಕ್ಷಿಣ ಕನ್ನಡದ ಗೌಡರು- ಲೇ ಪುತ್ತೂರು ಅನಂತರಾಜ ಗೌಡ


9 ಪಂಜ ಸೀಮಾ ದರ್ಶನ-ಲೇ|ಕಾನಕುಡೇಲು ಗಣಪತಿ ಭಟ್ಟ  -


10 ತುಳುನಾಡಿನ ಅಪೂರ್ವ ಭೂತಗಳು  ಲೇ|ಡಾ|| ಲಕ್ಷ್ಮೀ ಜಿ. ಪ್ರಸಾದ  

11  ಬೆಳ್ಳಾರೆ - ಒಂದು ಸಾಂಸ್ಕೃತಿಕ ಅಧ್ಯಯನ( ಸಂಶೋದನಾ ಲೇಖನ) - ಲೇ ಡಾ.ಲಕ್ಷ್ಮೀ ಜಿ ಪ್ರಸಾದ ,ತುಳುವ ಪ್ರಾದೇಶಿಕ ಸಂಶೋಧನಾ ಕೇಂದ್ರ ಉಡುಪಿ

12 ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕು ಬೆಳ್ಳಾರೆ ಗ್ರಾಮದ ಪ್ರಾಚ್ಯಾವಶೇಷಗಳು(ಸಂಶೋಧಾನಾ ಲೇಖನ) - ಲೇ| ಡಾ.ಲಕ್ಷ್ಮೀ ಜಿ ಪ್ರಸಾದ, ಇತಿಹಾಸ ದರ್ಶನ ಸಂ೨೭/೨೦೧೨,ಕರ್ನಾಟಕ ಇತಿಹಾಸ ಅಕಾಡೆಮಿ

13  ಕೆನರ ಜಿಲ್ಲೆಯ ಕಲೆಕ್ಟರ್ ಎಂ.ಲೆವಿನ್, ಮೇಜರ್ ಜನರಲ್ ವಿಗೋರ್(Vigourheux) ಹಾಗೂ ಚಾರ್ಲ್ಸ್ ರಾಬರ್ಟ್ ಕಾಟನ್ ಅವರಿಗೆ ಒಪ್ಪಿಸಿದ ವರದಿ

14 ಕೊಡಗು ಗಜೇಟಿಯರ್

Tuesday 13 March 2018

‌ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು- 432 ಕೋಟ್ರಗುತ್ತಿನ ಬಬ್ಬು ದೈವ © ಡಾ.ಲಕ್ಷ್ಮೀ ಜಿ ಪ್ರಸಾದ


ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು- 432 ಕೋಟ್ರಗುತ್ತಿನ ಬಬ್ಬು ದೈವ © ಡಾ.ಲಕ್ಷ್ಮೀ ಜಿ ಪ್ರಸಾದ
ತುಳುನಾಡಿನ ಪ್ರಸಿದ್ಧ ದೈವ ಕೋಟೆದ ಬಬ್ಬು ಮತ್ತು ಕೋಟ್ರಗುತ್ತಿನ ಬಬ್ಬು ದೈವಗಳು ಬೆರೆ ಬೇರೆಬೇರೆ ದೈವಗಳು.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಗ್ರಾಮಾಂತರ ಪ್ರದೇಶದ ಅಂಬಲ ಮೊಗರು ಕೋಟ್ರಗುತ್ತು ಶ್ರೀ ಲಕ್ಷ್ಮೀ ನರಸಿಂಹ ದೇವಾಲಯವಿದೆ. ಇಲ್ಲಿ ಒಂದು ಅಪರೂಪದ ದೈವಕ್ಕೆ ಆರಾಧನೆ ಇದೆ.
ಹಿಂದೆ ತುಂಡರಸರ ಆಳ್ವಿಕೆ ಇದ್ದ ಕಾಲದಲ್ಲಿ ಬಬ್ಬು ಎಂಬ ಹೆಸರಿನ ದಲಿತ ಸಮುದಾಯದ ಯುವಕ ಅರಸರ ಎತ್ತುಗಳನ್ನು ನೋಡಿಕೊಳ್ಳುವ ಉಳುಮೆ ಮಾಡುವ ಕೆಲಸವನ್ನು ಮಾಡುತ್ತಾ ಇದ್ದನು.
ಒಂದು ದಿನ ಉಳುಮೆ ಮಾಡಲು ಇತ್ತು.ಆದರೂ ಬಬ್ಬು ಮರೆತು ಎತ್ತುಗಳನ್ನು ಗುಡ್ಡೆಗೆ ಮೇಯಲು ಬಿಡುತ್ತಾನೆ.
ಆಗ ಕೋಪಗೊಂಡ ಅರಸು ಆತನ ಹೆಗಲಿಗೆ ನೇಗಿಲು ಕಟ್ಟಿ ಉಳುಮೆ ಮಾಡಿಸುತ್ತಾನೆ.ಆಗ ಆ ಯುವಕ ಹಿಂಸೆ ತಾಳಲಾಗದೆ ಮಣ್ಣನ್ನು ಕಚ್ಚಿ ಶಾಪ ಹಾಕಿ ಸಾಯುತ್ತಾನೆ. ಅದರ ಪರಿಣಾಮವಾಗಿ ಆ ಅರಸುವಿನ ಸಂತತಿ ನಿರ್ವಂಶವಾಗುತ್ತದೆ.
ಹೀಗೆ ಅರಸು ದೌರ್ಜನ್ಯಕ್ಕೆ ತುತ್ತಾಗಿ ಮರಣವನ್ನಪ್ಪಿದ ಬಬ್ಬು ಮುಂದೆ ದೈವತ್ವ ಪಡೆದು ಆರಾಧನೆ ಪಡೆಯುತ್ತಾನೆ.
ಈ ದೈವಕ್ಕೆ ಅಂಬಲ ಮೊಗರು ಲಕ್ಷ್ಮೀ ನರಸಿಂಹ ದೇವಾಲಯದ ಆವರಣದಲ್ಲಿ ಒಂದು ಸಣ್ಣ ಕಲ್ಲು,ಗುಡಿ ಇದೆ.ಇಲ್ಲಿ ನಿತ್ಯ ಈತನಿಗೆ ನೈವೇದ್ಯ ನೀಡಿ ಆರಾಧನೆ ನಡೆಯುತ್ತದೆ.
ಪ್ರಸ್ತುತ ಈ ದೈವದ ಹೆಸರು ಅಲ್ಲಿನವರಿಗೆ ತಿಳಿಯದೆ ಹೋದ ಕಾರಣವೋ ಅಥವಾ ಇನ್ಯಾವುದೊ ಕಾರಣಕ್ಕೆ ಅಲ್ಲಿ ಆತನನ್ನು ಬ್ರಹ್ಮ ರಾಕ್ಷಸ ಎಂದು ಪರಿಗಣಿಸಿದ್ದಾರೆ.ಮತ್ತು ಬ್ರಾಹ್ಮಣ ಸ್ವರೂಪೇೆಭ್ಯಃ ಎಂದು ಪರಿಕಲ್ಪಿಸಿ  ು ಆರಾಧನೆ   ಮಾಡುತ್ತಾರೆ .ಆದರೆ ಬ್ರಾಹ್ಮಣ ದುರ್ಮರಣವನ್ನಪ್ಪಿದರೆ ಮಾತ್ರ ಬ್ರಹ್ಮ ರಾಕ್ಷಸನಾಗುತ್ತಾನೆ.
ಆದರೆ ಇಲ್ಲಿ ದುರಂತವನ್ನಪ್ಪಿದಾತ ದಲಿತ ಸಮುದಾಯದ ಯುವಕ.ಆತನ ಮೂಲ ಹೆಸರು ಬಬ್ಬು ಎಂದು. ಹಾಗಾಗಿ ಈ ದೈವದ ಹೆಸರು ಕೂಡ ಬಬ್ಬು ಎಂದೇ ಆಗಿರಬೇಕು.
ಬಬ್ಬು ಎಂಬ ಪ್ರಸಿದ್ಧ ದೈವ ಇರುವ ಕಾರಣದಿಂದ  ಈ ದೈವದ ಹೆಸರಿನ ಬಗ್ಗೆ ಗೊಂದಲವಾಗಿರಬಹುದು.ಹರೇಕಳ ಸಮೀಪದಲ್ಲಿ ಒಂದು ಅಪರೂಪದ ದೈವಕ್ಕೆ ಆರಾಧನೆ ಇರುವ ಬಗ್ಗೆ ಪದ್ಮನಾಭ ಅವರು ಎರಡು ವರ್ಷಗಳ ಹಿಂದೆಯೇ ತಿಳಿಸಿದ್ದರು.ಆದರೂ  ಆ ಕಡೆಗೆ ಹೋಗಿ ಅಧ್ಯಯನ ಮಾಡಲು ಅವಕಾಶವಾಗಿರಲಿಲ್ಲ.ಕಳೆದ ವಾರ ಇರಾ - ತಿರುವೈಲಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಉಪನ್ಯಾಸ ನೀಡಲು ನಾಗೇಶ್ ಅವರು ಅಹ್ವಾನಿಸಿದ್ದರು.
ಹಾಗೆ ಊರಿಗೆ ಹೋದವಳು ಮಂಗಳೂರಿನಿಂದ ಅಟೋ ಹಿಡಿದು  ತೊಕ್ಕೊಟ್ಟು ಮಾರ್ಗವಾಗಿ ಅಂಬಲ ಮೊಗರು ಲಕ್ಷ್ಮೀ ನರಸಿಂಹ ದೇವಾಲಯಕ್ಕೆ ಹೋದೆ.
ಅಲ್ಲಿ ನ  ಸೇವಾಸಮಿತಿ ಕಾರ್ಯದರ್ಶಿ ಗಳಾದ ದಿವಾಕರ್ ಅವರ ಮೂಲಕ ಅಲ್ಲಿನ ಅರ್ಚಕರಾದ ಶಂಕರನಾರಾಯಣ ಭಟ್ಟರನ್ನು ಸಂಪರ್ಕಿಸಿ ಮಾಹಿತಿಯನ್ನು ಸಂಗ್ರಹಿಸಿದೆ.
ಮಾಹಿತಿ ಸಂಗ್ರಹದಲ್ಲಿ ಸಹಾಯ ಮಾಡಿದ ಪದ್ಮನಾಭ,ದಿವಾಕರ್ ಹಾಗೂ ಶಂಕರನಾರಾಯಣ ಭಟ್ ಅವರಿಗೆ ಧನ್ಯವಾದಗಳು© ಡಾ.ಲಕ್ಷ್ಮೀ ಜಿ ಪ್ರಸಾದ

Sunday 4 March 2018

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು - 431 ಕೇಚ ರಾವುತ © ಡಾ.ಲಕ್ಷ್ಮೀ ಜಿ ಪ್ರಸಾದ




ರೇವಂತ ದೈವದ ಮೂರ್ತಿ ಚಿತ್ರ ಕೃಪೆ ಡಾ.ಇಂದಿರಾ ಹೆಗಡೆ 
ತುಳುನಾಡಿನ  ಉಡುಪಿ ಕುಂದಾಪುರ ಬಾರಕೂರು ಮೊದಲಾದ ಕನ್ನಡ ಪರಿಸರಗಳಲ್ಲಿ ರಾವು ಕೇಚ ರಾವುತ ಎಂಬ ದೈವಕ್ಕೆ ಆರಾಧನೆ ಇದೆ ‌ಕೇಚ ರಾವುತ ಕುದುರೆ ಏರಿದ ಖಡ್ಗ ಹಿಡಿದ ವೀರನನ್ನು ದ್ಯೋತಿಸುವ ಮೂರ್ತಿ ಎಂದು ಡಾ.ಲೀಲಾಭಟ್ ಅವರು ಹೇಳಿದ್ದಾರೆ‌.ರಾವುತನಿಗೆ ಕೋಲ ಕೊಟ್ಟು ಆರಾಧನೆ ಮಾಡುವ ಪದ್ಧತಿ ಮುದ್ದುಮನೆಯಲ್ಲಿ ನಡೆಯುವ ಪಾಣರಾಟದಲ್ಲಿ ಇರುವ ಬಗ್ಗೆ ಲತಾ ಸಂತೋಷ್ ಶೆಟ್ಟಿ ಅವರು ಮಾಹಿತಿ ನೀಡಿದ್ದಾರೆ‌
ಆದರೆ ಈತ ಯಾರೆಂಬ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ .
ಬಾರಕೂರಿನ ಪಂಚಲಿಂಗೇಶ್ವರ ದೆವಾಲಯದ ಹಿಂಭಾಗದಲ್ಲಿ ರೇವಂತ ದೈವದ ಗುಡಿ ಇದೆ ಎಂದು ಡಾ.ಇಂದಿರಾ ಹೆಗಡೆಯವರು ತಿಳಿಸಿದ್ದಾರೆ.
ಇಲ್ಲಿನ ರೇವಂತ ದೈವದ ಮೂರ್ತಿ ಕುದುರೆ ಏರಿದ್ದು ಕೈಯಲ್ಲಿ ಖಡ್ಗ ಹಿಡಿದಿದೆ.ಈತ ಬಾರಕೂರಿನ ಕಾವಲುಗಾರ ದೈವ ಎಂಬ ಐತಿಹ್ಯ ಪ್ರಚಲಿತವಿದೆ‌.ರಾವುತ ಕೇಚ ರಾವುತ ರಾಹುತ ರೇವಂತ ಎಲ್ಲವೂ ಒಂದೇ ದೈವದ ಹೆಸರುಗಳಾಗಿವೆ .
ವಾಸ್ತವದಲ್ಲಿ ಕೂಡ ಈತ ಅರಮನೆ ಕಾಯುವ ವೀರನಾಗಿದ್ದು ಯಾವುದಾದರೂ ಕಾರಣಕ್ಕೆ ದುರಂತವನ್ನಪ್ಪಿ ಅಥವಾ ಸ್ವಾಮಿ ನಿಷ್ಠೆಯ ಕಾರಣಕ್ಕೆ ಮರಣಾನಂತರ ದೈವತ್ವ ಪಡೆದು ಆರಾಧಿಸಲ್ಪಟ್ಟಿರುವ ಸಾಧ್ಯತೆ ಇದೆ
ಈ ಬಗ್ಗೆ ಹೆಚ್ಚಿನ ಅಧ್ಯಯನದ ಅಗತ್ಯವಿದೆ
ಡಾ.ಲಕ್ಷ್ಮೀ ಜಿ ಪ್ರಸಾದ
ಆಧಾರ ಗ್ರಂಥಗಳು
ಭೂತನಾಗರ ನಡುವೆ - ಡಾ.ಲೀಲಾ ಭಟ್
ಅಳಿಯ ಕಟ್ಟು ಮತ್ತು ಬಾರ್ಕೂರು - ಡಾ.ಇಂದಿರಾ ಹೆಗಡೆ 

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು- 430 ಕುಂಡೋದರ ದೈವ - ಡಾ.ಲಕ್ಷ್ಮೀ ಜಿ ಪ್ರಸಾದ

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು- 430 ಕುಂಡೋದರ ದೈವ - ಡಾ.ಲಕ್ಷ್ಮೀ ಜಿ ಪ್ರಸಾದ

ಬಾರಕೂರಿನ ದೇವ ಪಾಂಡ್ಯ ಸಮುದ್ರದ ವ್ಯಾಪಾರಕ್ಕಾಗಿ ಹಡಗನ್ನು ನಿರ್ಮಾಣ ಮಡುತ್ತಾನೆ.ಹಡಗಿನ ನಿರ್ಮಾಣಕ್ಕಾಗಿ‌ಕಡಿದ ಒಂದು ಮರದಲ್ಲಿ ಕುಂಡೋದರ ಎಂಬ ಭೂತ ವಾಸವಾಗಿರುತ್ತದೆ.ತಾನು ಇದ್ದ ಮರವನ್ನು ಕಡಿದುದಕ್ಕಾಗಿ ದೈವ ಕೋಪಗೊಳ್ಳುತ್ತದೆ.
ಹಡಗನ್ನು ಎಷ್ಟು ಪ್ರಯತ್ನ ಮಾಡಿದರೂ ಸಮುದ್ರಕ್ಕೆ ಇಳಿಸಲು ಸಾಧ್ಯವಾಗುವುದಿಲ್ಲ.ಆಗ ಚಿಂತಿಸುತ್ತಾ ಕುಳಿತ ದೇವ ಪಾಂಡ್ಯನಲ್ಲಿ  ನರಬಲಿಯನ್ನು ಕೇಳುತ್ತದೆ .

ಆಗ ತನ್ನ ಏಳು ಜನ ಮಕ್ಕಳಲ್ಲಿ ಒಬ್ಬನ್ನು ಬಲಿಕೊಡಲು ಸಿಧ್ದನಾಗುತ್ತಾನೆ
ಅದಕ್ಕೆ ಒಪ್ಪದ ಅವನ ಮಡದಿ‌ಮಕ್ಕಳನ್ನು ಕಟ್ಟಿಕೊಂಡು ತಂದೆ ಮನೆಗೆ ಹೋಗುತ್ತಾಳೆ
ಅಣ್ಣನ ಕಷ್ಟ ನೋಡಿದ ತಂಗಿ ತನ್ನ ಒಬ್ಬನೇ ಒಬ್ಬ ಮಗನನ್ನು ಬಲಿ ಕೊಡಲು ಹೇಳುತ್ತಾಳೆ ಮೊದಲಿಗೆ ಒಪ್ಪದೇ ಇದ್ದರೂ ನಂತರ ಅವ ಬಲವಂತಕ್ಕೆ ಅಳಿಯ ಜಯಪಾಂಡ್ಯನನ್ನು ಬಲಿಕೊಡಲು ಸಿದ್ಧನಾಗುತ್ತಾನೆ.
ಆಗ ಕುಂಡೋದರ ದೈವ ನರಬಲಿ ಬೇಡ ಎರಡು ಹನಿ ರಕ್ತ ಸಾಕು ಎನ್ನುತ್ತದೆ ಹಾಗೆ ಜಯಪಾಂಡ್ಯನ ಕಿರುಬೆರಳಿ‌ಇಂದ ಎರಡು ಹನಿ ರಕ್ತ ಬಲಿ ಕೊಡುತ್ತಾರೆ.
ಹಡಗು ಸಮುದ್ರಕ್ಕೆ ಇಳಿದು ವ್ಯಾಪಾರದಲ್ಲಿ ದೆವ ಪಾಂಡ್ಯ ತುಂಬಾ ಲಾಭ ಗಳಿಸುತ್ತಾನೆ
 ಎಲ್ಲವನ್ನೂ ತನ್ನ  ತಂಗಿ ಮಗ ಅಳಿಯ ಜಯಪಾಂಡ್ಯನಿಗೆ ನೀಡುತ್ತಾನೆ
 ಅಲ್ಲಿಂದ ತುಳುನಾಡಿನಲ್ಲಿ ಅಳಿಯ ಕಟ್ಟು ಬಳಕೆಗೆ ಬಂತು
 ಕುಂಡೋದರ ಭೂತ ಒಲಿದ ಕಾರಣ ಜಯ ಪಾಂಡ್ಯ ನಿಗೆ ಭೂತಾಳ ಪಾಂಡ್ಯ ಎಂಬ ಹೆಸರು ಬಂತು
 ಕುಂಡೋದರ ದೈವ ಶಿವನ ಪ್ರಮಥ ಗಣ ಎಂಬ ನಂಬಿಕೆ ಇದೆ
ಕುಂಡೋದರ ದೈವಕ್ಕೆ ಕೋಲ ನೀಡಿ ಕೆಲವೆಡೆ ಆರಾಧಿಸುತ್ತಾರೆ
ಡಾ.ಗುರುರಾಜ ಭಟ್ ಅವರು ಜಯ ಪಾಂಡ್ಯ ಮಧುರೆಯ ರಾಜ ವಂಶದವನು.ಆತನ ತಂದೆ ಸೌಮ್ಯವೀರ ಪಾಂಡ್ಯ ತಾಯಿ ಸತ್ಯವತಿ.ಈಕೆ ದೇವ ಪಾಂಡ್ಯನ ತಂಗಿ ಎಂದು ಹೇಳಿದ್ದಾರೆ‌.ಜಯ ಪಾಂಡ್ಯನ ತಂದೆ ಸೌಮ್ಯ ವೀರ ಪಾಂಡ್ಯನು ಕುಂಡೋದರ ದೈವದ ಭಕ್ತನಾಗಿದ್ದನು.ಹಾಗಾಗಿ ದೈವ ಅವನ ಮಗ ಜಯ ಪಾಂಡ್ಯ ನನ್ನು ಅನುಗ್ರಹಿಸಿತು‌.ನರಬಲಿ ಬೇಡವೆಂದು ಹೇಳುತ್ತದೆ ಮತ್ತು ದೇವ ಪಾಂಡ್ಯ ನ ಎಲ್ಲ ಸಂಪತ್ತಿಗೆ ಜಯಪಾಂಡ್ಯನನ್ನು ಹಕ್ಕುದಾರನನ್ನಾಗಿಸಿ ಅಳಿಯ ಕಟ್ಟು ಪದ್ದತಿಯನ್ನು ಜಾರಿಗೆ ತರುವ ಹಾಗೆ ಮಾಡುತ್ತದೆ‌
"ಜಯ ಪಾಂಡ್ಯ/ಭೂತಾಳ ಪಾಂಡ್ಯನು ಕುಂಡೋದರ ದೈವದ ಸಹಾಯದಿಂದ ಸಿದ್ಧವರ್ಮನೆಂಬ ಅರಸನನ್ನು ಯುದ್ಧದಲ್ಲಿ ಸೋಲಿಸಿ ಬಾರಕೂರಿನ ಅರಸನಾದನು. ಇವನ ಸಂತತಿಯವರು ದೀರ್ಘಕಾಲ ಬಾ ರಕೂರಿನಲ್ಲಿ ಆಳ್ವಿಕೆ ಮಾಡುತ್ತಾರೆ ಇವನ ಕಾಲದಿಂದ ತುಳುನಾಡಿನಲ್ಲಿ ಅಳಿಯ ಸಂತಾನ ಪದ್ಧತಿ ಜಾರಿಗೆ ಬರುತ್ತದೆ. ಮುಂದೆ ಕುಂಡೋದರ ಭೂತ ಶಿವನ ಸಭಗೆ ಹೋಗಿ ಶಿವನಿಂದ ಉಜ್ಜಯಿನಿಯ ವಿಕ್ರಮಾದಿತ್ಯನ ಸಿಂಹಾಸನವನ್ನು ಕೇಳಿ ಪಡೆದು ಆ ಸಿಂಹಾಸನದಲ್ಲಿ ಭೂತಾಳಪಾಂಡ್ಯನಿಗೆ ಪಟ್ಟ ಕಟ್ಟುತ್ತದೆ. (ಕ್ರಿ.ಶ. 77-148) ಹಾಗೂ ಮುಂದೆ ಜಯಪಾಂಡ್ಯನು ಅಳಿಯ ಕಟ್ಟು ಕಟ್ಟಲೆಗನ್ನು ರಚಿಸುತ್ತಾನೆ. (ಗುರುರಾಜ ಭಟ್ :ಬಾರಕೂರು ಪು.41-44) ಭೂತಾಳಪಾಂಡ್ಯನು ಕುಂಡೋದರನಿಗೆ ಗುಡಿಯೊಂದನ್ನುಕಟ್ಟಿಸಿದನು......” ಎಂದು ಡಾ.ಗುರುರಾಜ ಭಟ್ ಹೇಳಿದ್ದಾರೆ.

ಭೂತಾಳಪಾಂಡ್ಯನು ಕುಂಡೋದರನಿಗೆ ಮಹೀಶಾಸುರನೆಂಬ ಹೆಸರಿಟ್ಟು ಆತನಿಗೆ ಸಾವಿರ ಪಡಿ ಅಕ್ಕಿ ಸಹಸ್ರ ಪಡಿ ಅರಳು, ಸಾವಿರ ಸೀಯಾಳ, ಬಾಳೆಹಣ್ಣು, ಅಜ ಕುಕ್ಕುಟಗಳಿಂದ ಬಲಿಕೊಟ್ಟು ಭೂತ ರಾಜ ಕುಂಡೋದರನನ್ನು ಪ್ರಾರ್ಥಿಸುತ್ತಾರೆ. ಆಗ ಕುಂಡೋದರ ಭೂತ ಅಲ್ಲಿದ್ದ ಮನುಷ್ಯನ ಮೇಲೆ ಮೈತುಂಬಿ ಬಂದು ಅಳಿಯಕಟ್ಟನ್ನು ನಿರ್ದೇಶಿಸುತ್ತದೆ ಎಂದು ಸ್ಥಳೀಯ ಐತಿಹ್ಯದಿಂದ ತಿಳಿದು ಬರುತ್ತದೆ. ಇಲ್ಲಿ ಒಂದೆಡೆ ಮಹಾಬಲನೇ ಮಹಿಷಾಸುರ ಎಂದು ತಿಳಿದು ಬಂದರೆ, ಇನ್ನೊಂದೆಡೆ ಕುಂಡೋದರ ದೈವವೇ ಮಹಿಷಾಸುರನೆಂಬ ಹೆಸರನ್ನು ಪಡೆದಿರುವ ಬಗ್ಗೆ ತಿಳಿದು ಬರುತ್ತದೆ. ಭೂತಾಳಪಾಂಡ್ಯನ ತಂದೆ ಕುಂಡೋದರ ದೈವದ ಭಕ್ತನೆಂದೂ ಕುಂಡೋದರ ಶಿವನ ಪ್ರಮಥ ಗಣವೆಂದೂ ಹೇಳಲಾಗಿದೆ.
ಬಲಿಯೇಂದ್ರನಿಗೆ ಮಹೀಪಾಲಕನೆಂಬರ್ಥದಲ್ಲಿ ಮಹೀಶಾಸುರನೆಂಬ ಹೆಸರು ಇತ್ತು. ಕುಂಡೋದರ ದೈವವೂ ಮಹೀಶಾಸುರನೆಂಬ ಹೆಸರನ್ನು ಪಡೆದಿದೆ. ಆದ್ದರಿಂದ ಮೋಸ ಹೋದ ಬಲಿಯೇಂದ್ರನು ಮರಣಾನಂತರ ಕುಂಡೋದರ ದೈವವಾಗಿ ಆರಾಧಿಸಲ್ಪಟ್ಟಿರಬಹುದು ಎಂದು ಊಹಿಸಬಹುದು. ಅರಸು ಆರಾಧನೆ ಪದ್ಧತಿ ಬೆಳೆದು ಬಂದಿರುವ ತುಳುನಾಡಿನಲ್ಲಿ ಇದು ಅಸಹಜ ವಿಚಾರ ಎನಿಸುವುದಿಲ್ಲ.
ಕುಂಡ ಎಂದರೆ ಮಣ್ಣಿನ ಮಡಿಕೆ. ಬೆರ್ಮೆರರ್ನ್ನು ಮಣ್ಣಿನ ಮಡಿಕೆಗಳ ಮೂಲಕ ಆರಾಧಿಸುವ ಕ್ರಮ ಪ್ರಚಲಿತವಿದೆ. ಅನಂತಾಡಿಯ ನಾಗಬ್ರಹ್ಮಸ್ಥಾನದಲ್ಲಿ ‘ಬೆರ್ಮೆರ್’ ಎಂದು ಹಳೆಯ ಮಣ್ಣಿನ ಮಡಿಕೆಗಳನ್ನು ಆರಾಧಿಸುತ್ತಾರೆ. ಚೌಕಾರುಗುತ್ತಿಯಲ್ಲಿ ಮಣ್ಣಿನ ಮಡಿಕೆಗಳನ್ನು ಮೂರಿಳು ಎಂದು ಆರಾಧಿಸುತ್ತಾರೆ. ಗರಡಿಗಳಲ್ಲಿ, ಆಲಡೆಗಳಲ್ಲಿ ಹಾಗೂ ಇತರೆಡೆಗಳಲ್ಲಿ ಬ್ರಹ್ಮಲಿಂಗ ಅಥವಾ ಬ್ರಹ್ಮರ ಮೂರ್ತಿಗಳು ಇಲ್ಲದಿರುವಲ್ಲಿ ಬೆರ್ಮರನ್ನು ಮಣ್ಣಿನ ಕಲಶದಲ್ಲಿ ಸಂಕಲ್ಪಿಸಿ ಆರಾಧಿಸುತ್ತಾನೆ. ಕಂಡೇವು ಬೀಡಿನಲ್ಲಿ ಉಳ್ಳಾಯ ದೈವವು ಸಮುದ್ರದಿಂದ ಮಣ್ಣಿನ ಕಲಶದಲ್ಲಿ ಉದ್ಭವಿಸಿ ಮೇಲೆ ಬಂದಿದೆ ಎಂದು ಹೇಳುತ್ತಾರೆ.
ನಾಗಬ್ರಹ್ಮ ಆರಾಧನೆಯ ಒಂದು ಪ್ರಕಾರವಾಗಿರುವ ಕಾಡ್ಯನಾಟದಲ್ಲಿ ಮಣ್ಣಿನ ಕಲಶವನ್ನು ಪೂಜಿಸಲಾಗುತ್ತದೆ. ತುಳುವಿನಲ್ಲಿ ಕಡ್ಯ ಎಂದರೆ ಮಣ್ಣಿನ ಮಡಿಕೆ ಅಥವಾ ಕಲಶ. ಕಾಡ್ಯ ಎಂದರೆ ಕಡ್ಯದಲ್ಲಿ ಇರುವ ನಾಗಬ್ರಹ್ಮ ಎಂದರ್ಥವನ್ನು ಮಾಡಲು ಸಾಧ್ಯವಿದೆ.
ಬ್ರಹ್ಮಮಂಡಲ ಅಥವಾ ಢಕ್ಕೆ ಬಲಿಯಲ್ಲಿ ‘ಬ್ರಹ್ಮ’ನದೆಂದು ಹೇಳಲಾಗುವ ಮನುಷ್ಯಮುಖದ ಆಕಾರವು ಹಿಂದೂಶಿಷ್ಟ ದೇವದೇವತೆಗಳಂತೆ ಸೌಮ್ಯವಾಗಿರದೆ, ಅಸುರ ಪರಿಕಲ್ಪನೆಗೆ ಅನುಗುಣವಾಗಿ ತೆರೆದ ಬಾಯಿ, ಇಣುಕುವ ಕೋರೆ ಹಲ್ಲುಗಳು, ದೊಡ್ಡ ಕಣ್ಣುಗಳನ್ನು ಹೊಂದಿದೆ. ಇದು ‘ಬೆರ್ಮೆರ್’ನ ಅಸುರ ಮೂಲವನ್ನು ಸೂಚಿಸುತ್ತದೆ ಈ ರೂಪ ಬಲಿಯ ರೂಪವನ್ನು ಹೋಲುತ್ತದೆ.
ಕುಂಡೋದರ ಎಂಬುದಕ್ಕೆ ಕುಂಡದ ಹಾಗೆ ಅರ್ಥಾತ್ ಮಣ್ಣಿನ ಮಡಿಕೆಯ ಹಾಗೆ ಹೊಟ್ಟೆಯನ್ನು ಹೊಂದಿರುವವನು ಎಂದು ಅರ್ಥವಿದೆ. ಢಕ್ಕೆಬಲಿಯಲ್ಲಿ ಚಿತ್ರಿಸುವ ಬ್ರಹ್ಮನ ಹೊಟ್ಟೆ ದೊಡ್ಡದಾಗಿ ಇರುತ್ತದೆ. ಈ ಅರ್ಥದಲ್ಲಿಯೂ ಕುಂಡೋದರ ಮತ್ತು ಬೆರ್ಮೆರ್ ಒಂದೇ ಎಂದೂ ಹೇಳಬಹುದು.
ಇನ್ನು ಬ್ರಹ್ಮಕಲಶವೆಂಬ ಮಣ್ಣಿನ ಮಡಿಕೆಗಳು ಎಲ್ಲಾ ದೇವಸ್ಥಾನಗಳಲ್ಲೂ ಬಳಕೆಯಾಗುತ್ತದೆ.
ಕುಂಡೋದರನನ್ನು ಭೂತರಾಜನೆಂದೂ ಭೂತಗಳ ಅಧಿಪತಿ ಎಂದೂ ಭೂತಗಳ ಅಧ್ಯಕ್ಷನೆಂದೂ ಭೂತಾಳ ಪಾಂಡ್ಯನ ಕಥೆಯಲ್ಲಿ ವರ್ಣಿಸಲಾಗಿದೆ. ‘ಬೆರ್ಮೆರ್’ ಕೂಡ ಭೂತರಾಜನೆಂದೂ, ಭೂತಗಳ ಅಧ್ಯಕ್ಷನೆಂದೂ ಪಾಡ್ದನಗಳು ವರ್ಣಿಸುತ್ತವೆ.
ಆದ್ದರಿಂದ ತುಳುನಾಡಿನ ಮೂಲದೈವ ಬೆರ್ಮೆರ್ ಹಾಗೂ ಕುಂಡೋದರ ಒಂದೇ ಎಂದು ಹೇಳಬಹುದು. ಕುಂಡೋದರ ದೈವಕ್ಕಿರುವ ಮಹೀಶಾಸುರ ಎಂಬ ಅಭಿದಾನ, ಮಹಾಬಲಿಗೆ ಇರುವ ಮಹೀಶಾಸುರನೆಂಬ ಬಿರುದು, ಇವುಗಳಿಂದ ಬಲಿಯೇಂದ್ರನೇ ಹಿರಿಯ ಎಂಬರ್ಥದಲ್ಲಿ ‘ಬೆರ್ಮೆರ್’ ಎಂದು ಆರಾಧನೆ ಹೊಂದಿರುವ ಸಾಧ್ಯತೆ ಇದೆ.


ಡಾ.ಲಕ್ಷ್ಮೀ ಜಿ ಪ್ರಸಾದ
ಆಧಾರ ಗ್ರಂಥಗಳು
ಬಾರಕೂರು - ಡಾ.ಗುರುರಾಜ ಭಟ್
ಅಳಿಯ ಕಟ್ಟು ಮತ್ತು ಬಾರ್ಕೂರು - ಒಂದು ಅಧ್ಯಯನ © ಡಾ‌ಇಂದಿರಾ ಹೆಗಡೆ
http://tuluculture.blogspot.in/2014/11/blog-post_1.html?m=1
ಭೂತಾಳ ಪಾಂಡ್ಯನ ಕುರಿತಾದ ಪ್ರಚಲಿತ ಐತಿಹ್ಯಗಳು
ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ ಒಂದು ವಿಶ್ಲೇಷಣಾತ್ಮಕ ಅಧ್ಯಯನ- ಡಾ.ಲಕ್ಷ್ಮೀ ಜಿ ಪ್ರಸಾದ




http://laxmipras.blogspot.in/2018/03/430.html?m=1

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು- 430 ಕುಂಡೋದರ ದೈವ - ಡಾ.ಲಕ್ಷ್ಮೀ ಜಿ ಪ್ರಸಾದ

ಕುಂಡೋದರ/ ಮಹಿಷಾಸುರ ದೈವ: ಚಿತ್ರ ಕೃಪೆ-©ಡಾ.ಇಂದಿರಾ ಹಗಡೆ

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು- 430 ಕುಂಡೋದರ ದೈವ - ಡಾ.ಲಕ್ಷ್ಮೀ ಜಿ ಪ್ರಸಾದ

ಬಾರಕೂರಿನ ದೇವ ಪಾಂಡ್ಯ ಸಮುದ್ರದ ವ್ಯಾಪಾರಕ್ಕಾಗಿ ಹಡಗನ್ನು ನಿರ್ಮಾಣ ಮಡುತ್ತಾನೆ.ಹಡಗಿನ ನಿರ್ಮಾಣಕ್ಕಾಗಿ‌ಕಡಿದ ಒಂದು ಮರದಲ್ಲಿ ಕುಂಡೋದರ ಎಂಬ ಭೂತ ವಾಸವಾಗಿರುತ್ತದೆ.ತಾನು ಇದ್ದ ಮರವನ್ನು ಕಡಿದುದಕ್ಕಾಗಿ ದೈವ ಕೋಪಗೊಳ್ಳುತ್ತದೆ.
ಹಡಗನ್ನು ಎಷ್ಟು ಪ್ರಯತ್ನ ಮಾಡಿದರೂ ಸಮುದ್ರಕ್ಕೆ ಇಳಿಸಲು ಸಾಧ್ಯವಾಗುವುದಿಲ್ಲ.ಆಗ ಚಿಂತಿಸುತ್ತಾ ಕುಳಿತ ದೇವ ಪಾಂಡ್ಯನಲ್ಲಿ  ನರಬಲಿಯನ್ನು ಕೇಳುತ್ತದೆ .

ಆಗ ತನ್ನ ಏಳು ಜನ ಮಕ್ಕಳಲ್ಲಿ ಒಬ್ಬನ್ನು ಬಲಿಕೊಡಲು ಸಿಧ್ದನಾಗುತ್ತಾನೆ
ಅದಕ್ಕೆ ಒಪ್ಪದ ಅವನ ಮಡದಿ‌ಮಕ್ಕಳನ್ನು ಕಟ್ಟಿಕೊಂಡು ತಂದೆ ಮನೆಗೆ ಹೋಗುತ್ತಾಳೆ
ಅಣ್ಣನ ಕಷ್ಟ ನೋಡಿದ ತಂಗಿ ತನ್ನ ಒಬ್ಬನೇ ಒಬ್ಬ ಮಗನನ್ನು ಬಲಿ ಕೊಡಲು ಹೇಳುತ್ತಾಳೆ ಮೊದಲಿಗೆ ಒಪ್ಪದೇ ಇದ್ದರೂ ನಂತರ ಅವ ಬಲವಂತಕ್ಕೆ ಅಳಿಯ ಜಯಪಾಂಡ್ಯನನ್ನು ಬಲಿಕೊಡಲು ಸಿದ್ಧನಾಗುತ್ತಾನೆ.
ಆಗ ಕುಂಡೋದರ ದೈವ ನರಬಲಿ ಬೇಡ ಎರಡು ಹನಿ ರಕ್ತ ಸಾಕು ಎನ್ನುತ್ತದೆ ಹಾಗೆ ಜಯಪಾಂಡ್ಯನ ಕಿರುಬೆರಳಿ‌ನಿಇಂದ ಎರಡು ಹನಿ ರಕ್ತ ಬಲಿ ಕೊಡುತ್ತಾರೆ.
ಹಡಗು ಸಮುದ್ರಕ್ಕೆ ಇಳಿದು ವ್ಯಾಪಾರದಲ್ಲಿ ದೆವ ಪಾಂಡ್ಯ ತುಂಬಾ ಲಾಭ ಗಳಿಸುತ್ತಾನೆ
 ಎಲ್ಲವನ್ನೂ ತನ್ನ  ತಂಗಿ ಮಗ ಅಳಿಯ ಜಯಪಾಂಡ್ಯನಿಗೆ ನೀಡುತ್ತಾನೆ
 ಅಲ್ಲಿಂದ ತುಳುನಾಡಿನಲ್ಲಿ ಅಳಿಯ ಕಟ್ಟು ಬಳಕೆಗೆ ಬಂತು © ಡಾ.ಲಕ್ಷ್ಮೀ ಜಿ‌ ಪ್ರಸಾದ್ 
 ಕುಂಡೋದರ ಭೂತ ಒಲಿದ ಕಾರಣ ಜಯ ಪಾಂಡ್ಯ ನಿಗೆ ಭೂತಾಳ ಪಾಂಡ್ಯ ಎಂಬ ಹೆಸರು ಬಂತು
 ಕುಂಡೋದರ ದೈವ ಶಿವನ ಪ್ರಮಥ ಗಣ ಎಂಬ ನಂಬಿಕೆ ಇದೆ
ಈ ಕಥಾನಕಕ್ಕೆ ಹಲವು ಪಾಠಾಂತರಗಳಿವೆ ಆದರೂ ಮೂಲ ಆಶಯ / ಕಥೆ ಇದೇ ಅಗಿದೆ,ವಿವರಣೆಗಳಲ್ಲಿ ಸ್ವಲ್ಪ ವ್ಯತ್ಯಾಸಗಳಿವೆ.

ಕುಂಡೋದರ ದೈವಕ್ಕೆ ಕೋಲ ನೀಡಿ ಕೆಲವೆಡೆ ಆರಾಧಿಸುತ್ತಾರೆ
ಡಾ.ಗುರುರಾಜ ಭಟ್ ಅವರು ಜಯ ಪಾಂಡ್ಯ ಮಧುರೆಯ ರಾಜ ವಂಶದವನು.ಆತನ ತಂದೆ ಸೌಮ್ಯವೀರ ಪಾಂಡ್ಯ ತಾಯಿ ಸತ್ಯವತಿ.ಈಕೆ ದೇವ ಪಾಂಡ್ಯನ ತಂಗಿ ಎಂದು ಹೇಳಿದ್ದಾರೆ‌.ಜಯ ಪಾಂಡ್ಯನ ತಂದೆ ಸೌಮ್ಯ ವೀರ ಪಾಂಡ್ಯನು ಕುಂಡೋದರ ದೈವದ ಭಕ್ತನಾಗಿದ್ದನು.ಹಾಗಾಗಿ ದೈವ ಅವನ ಮಗ ಜಯ ಪಾಂಡ್ಯ ನನ್ನು ಅನುಗ್ರಹಿಸಿತು‌.ನರಬಲಿ ಬೇಡವೆಂದು ಹೇಳುತ್ತದೆ ಮತ್ತು ದೇವ ಪಾಂಡ್ಯ ನ ಎಲ್ಲ ಸಂಪತ್ತಿಗೆ ಜಯಪಾಂಡ್ಯನನ್ನು ಹಕ್ಕುದಾರನನ್ನಾಗಿಸಿ ಅಳಿಯ ಕಟ್ಟು ಪದ್ದತಿಯನ್ನು ಜಾರಿಗೆ ತರುವ ಹಾಗೆ ಮಾಡುತ್ತದೆ‌
"ಜಯ ಪಾಂಡ್ಯ/ಭೂತಾಳ ಪಾಂಡ್ಯನು ಕುಂಡೋದರ ದೈವದ ಸಹಾಯದಿಂದ ಸಿದ್ಧವರ್ಮನೆಂಬ ಅರಸನನ್ನು ಯುದ್ಧದಲ್ಲಿ ಸೋಲಿಸಿ ಬಾರಕೂರಿನ ಅರಸನಾದನು. ಇವನ ಸಂತತಿಯವರು ದೀರ್ಘಕಾಲ ಬಾ ರಕೂರಿನಲ್ಲಿ ಆಳ್ವಿಕೆ ಮಾಡುತ್ತಾರೆ ಇವನ ಕಾಲದಿಂದ ತುಳುನಾಡಿನಲ್ಲಿ ಅಳಿಯ ಸಂತಾನ ಪದ್ಧತಿ ಜಾರಿಗೆ ಬರುತ್ತದೆ. ಮುಂದೆ ಕುಂಡೋದರ ಭೂತ ಶಿವನ ಸಭಗೆ ಹೋಗಿ ಶಿವನಿಂದ ಉಜ್ಜಯಿನಿಯ ವಿಕ್ರಮಾದಿತ್ಯನ ಸಿಂಹಾಸನವನ್ನು ಕೇಳಿ ಪಡೆದು ಆ ಸಿಂಹಾಸನದಲ್ಲಿ ಭೂತಾಳಪಾಂಡ್ಯನಿಗೆ ಪಟ್ಟ ಕಟ್ಟುತ್ತದೆ. (ಕ್ರಿ.ಶ. 77-148) ಹಾಗೂ ಮುಂದೆ ಜಯಪಾಂಡ್ಯನು ಅಳಿಯ ಕಟ್ಟು ಕಟ್ಟಲೆಗನ್ನು ರಚಿಸುತ್ತಾನೆ. (ಗುರುರಾಜ ಭಟ್ :ಬಾರಕೂರು ಪು.41-44) ಭೂತಾಳಪಾಂಡ್ಯನು ಕುಂಡೋದರನಿಗೆ ಗುಡಿಯೊಂದನ್ನುಕಟ್ಟಿಸಿದನು......” ಎಂದು ಡಾ.ಗುರುರಾಜ ಭಟ್ ಹೇಳಿದ್ದಾರೆ.

ಭೂತಾಳಪಾಂಡ್ಯನು ಕುಂಡೋದರನಿಗೆ ಮಹೀಶಾಸುರನೆಂಬ ಹೆಸರಿಟ್ಟು ಆತನಿಗೆ ಸಾವಿರ ಪಡಿ ಅಕ್ಕಿ ಸಹಸ್ರ ಪಡಿ ಅರಳು, ಸಾವಿರ ಸೀಯಾಳ, ಬಾಳೆಹಣ್ಣು, ಅಜ ಕುಕ್ಕುಟಗಳಿಂದ ಬಲಿಕೊಟ್ಟು ಭೂತ ರಾಜ ಕುಂಡೋದರನನ್ನು ಪ್ರಾರ್ಥಿಸುತ್ತಾರೆ. ಆಗ ಕುಂಡೋದರ ಭೂತ ಅಲ್ಲಿದ್ದ ಮನುಷ್ಯನ ಮೇಲೆ ಮೈತುಂಬಿ ಬಂದು ಅಳಿಯಕಟ್ಟನ್ನು ನಿರ್ದೇಶಿಸುತ್ತದೆ ಎಂದು ಸ್ಥಳೀಯ ಐತಿಹ್ಯದಿಂದ ತಿಳಿದು ಬರುತ್ತದೆ. ಇಲ್ಲಿ ಒಂದೆಡೆ ಮಹಾಬಲನೇ ಮಹಿಷಾಸುರ ಎಂದು ತಿಳಿದು ಬಂದರೆ, ಇನ್ನೊಂದೆಡೆ ಕುಂಡೋದರ ದೈವವೇ ಮಹಿಷಾಸುರನೆಂಬ ಹೆಸರನ್ನು ಪಡೆದಿರುವ ಬಗ್ಗೆ ತಿಳಿದು ಬರುತ್ತದೆ. ಭೂತಾಳಪಾಂಡ್ಯನ ತಂದೆ ಕುಂಡೋದರ ದೈವದ ಭಕ್ತನೆಂದೂ ಕುಂಡೋದರ ಶಿವನ ಪ್ರಮಥ ಗಣವೆಂದೂ ಹೇಳಲಾಗಿದೆ.
ಬಲಿಯೇಂದ್ರನಿಗೆ ಮಹೀಪಾಲಕನೆಂಬರ್ಥದಲ್ಲಿ ಮಹೀಶಾಸುರನೆಂಬ ಹೆಸರು ಇತ್ತು.© ಡಾ.ಲಕ್ಷ್ಮೀ ಜಿ ಪ್ರಸಾದ್ 
 ಕುಂಡೋದರ ದೈವವೂ ಮಹೀಶಾಸುರನೆಂಬ ಹೆಸರನ್ನು ಪಡೆದಿದೆ. ಆದ್ದರಿಂದ ಮೋಸ ಹೋದ ಬಲಿಯೇಂದ್ರನು ಮರಣಾನಂತರ ಕುಂಡೋದರ ದೈವವಾಗಿ ಆರಾಧಿಸಲ್ಪಟ್ಟಿರಬಹುದು ಎಂದು ಊಹಿಸಬಹುದು. ಅರಸು ಆರಾಧನೆ ಪದ್ಧತಿ ಬೆಳೆದು ಬಂದಿರುವ ತುಳುನಾಡಿನಲ್ಲಿ ಇದು ಅಸಹಜ ವಿಚಾರ ಎನಿಸುವುದಿಲ್ಲ.
ಕುಂಡ ಎಂದರೆ ಮಣ್ಣಿನ ಮಡಿಕೆ. ಬೆರ್ಮೆರರ್ನ್ನು ಮಣ್ಣಿನ ಮಡಿಕೆಗಳ ಮೂಲಕ ಆರಾಧಿಸುವ ಕ್ರಮ ಪ್ರಚಲಿತವಿದೆ. ಅನಂತಾಡಿಯ ನಾಗಬ್ರಹ್ಮಸ್ಥಾನದಲ್ಲಿ ‘ಬೆರ್ಮೆರ್’ ಎಂದು ಹಳೆಯ ಮಣ್ಣಿನ ಮಡಿಕೆಗಳನ್ನು ಆರಾಧಿಸುತ್ತಾರೆ. ಚೌಕಾರುಗುತ್ತಿಯಲ್ಲಿ ಮಣ್ಣಿನ ಮಡಿಕೆಗಳನ್ನು ಮೂರಿಳು ಎಂದು ಆರಾಧಿಸುತ್ತಾರೆ. ಗರಡಿಗಳಲ್ಲಿ, ಆಲಡೆಗಳಲ್ಲಿ ಹಾಗೂ ಇತರೆಡೆಗಳಲ್ಲಿ ಬ್ರಹ್ಮಲಿಂಗ ಅಥವಾ ಬ್ರಹ್ಮರ ಮೂರ್ತಿಗಳು ಇಲ್ಲದಿರುವಲ್ಲಿ ಬೆರ್ಮರನ್ನು ಮಣ್ಣಿನ ಕಲಶದಲ್ಲಿ ಸಂಕಲ್ಪಿಸಿ ಆರಾಧಿಸುತ್ತಾನೆ. ಕಂಡೇವು ಬೀಡಿನಲ್ಲಿ ಉಳ್ಳಾಯ ದೈವವು ಸಮುದ್ರದಿಂದ ಮಣ್ಣಿನ ಕಲಶದಲ್ಲಿ ಉದ್ಭವಿಸಿ ಮೇಲೆ ಬಂದಿದೆ ಎಂದು ಹೇಳುತ್ತಾರೆ.
ನಾಗಬ್ರಹ್ಮ ಆರಾಧನೆಯ ಒಂದು ಪ್ರಕಾರವಾಗಿರುವ ಕಾಡ್ಯನಾಟದಲ್ಲಿ ಮಣ್ಣಿನ ಕಲಶವನ್ನು ಪೂಜಿಸಲಾಗುತ್ತದೆ. ತುಳುವಿನಲ್ಲಿ ಕಡ್ಯ ಎಂದರೆ ಮಣ್ಣಿನ ಮಡಿಕೆ ಅಥವಾ ಕಲಶ. ಕಾಡ್ಯ ಎಂದರೆ ಕಡ್ಯದಲ್ಲಿ ಇರುವ ನಾಗಬ್ರಹ್ಮ ಎಂದರ್ಥವನ್ನು ಮಾಡಲು ಸಾಧ್ಯವಿದೆ.
ಬ್ರಹ್ಮಮಂಡಲ ಅಥವಾ ಢಕ್ಕೆ ಬಲಿಯಲ್ಲಿ ‘ಬ್ರಹ್ಮ’ನದೆಂದು ಹೇಳಲಾಗುವ ಮನುಷ್ಯಮುಖದ ಆಕಾರವು ಹಿಂದೂಶಿಷ್ಟ ದೇವದೇವತೆಗಳಂತೆ ಸೌಮ್ಯವಾಗಿರದೆ, ಅಸುರ ಪರಿಕಲ್ಪನೆಗೆ ಅನುಗುಣವಾಗಿ ತೆರೆದ ಬಾಯಿ, ಇಣುಕುವ ಕೋರೆ ಹಲ್ಲುಗಳು, ದೊಡ್ಡ ಕಣ್ಣುಗಳನ್ನು ಹೊಂದಿದೆ. ಇದು ‘ಬೆರ್ಮೆರ್’ನ ಅಸುರ ಮೂಲವನ್ನು ಸೂಚಿಸುತ್ತದೆ ಈ ರೂಪ ಬಲಿಯ ರೂಪವನ್ನು ಹೋಲುತ್ತದೆ.
ಕುಂಡೋದರ ಎಂಬುದಕ್ಕೆ ಕುಂಡದ ಹಾಗೆ ಅರ್ಥಾತ್ ಮಣ್ಣಿನ ಮಡಿಕೆಯ ಹಾಗೆ ಹೊಟ್ಟೆಯನ್ನು ಹೊಂದಿರುವವನು ಎಂದು ಅರ್ಥವಿದೆ. ಢಕ್ಕೆಬಲಿಯಲ್ಲಿ ಚಿತ್ರಿಸುವ ಬ್ರಹ್ಮನ ಹೊಟ್ಟೆ ದೊಡ್ಡದಾಗಿ ಇರುತ್ತದೆ. ಈ ಅರ್ಥದಲ್ಲಿಯೂ ಕುಂಡೋದರ ಮತ್ತು ಬೆರ್ಮೆರ್ ಒಂದೇ ಎಂದೂ ಹೇಳಬಹುದು.© ಡಾ.ಲಕ್ಷ್ಮೀ ಜಿ ಪ್ರಸಾದ್ 
ಇನ್ನು ಬ್ರಹ್ಮಕಲಶವೆಂಬ ಮಣ್ಣಿನ ಮಡಿಕೆಗಳು ಎಲ್ಲಾ ದೇವಸ್ಥಾನಗಳಲ್ಲೂ ಬಳಕೆಯಾಗುತ್ತದೆ.
ಕುಂಡೋದರನನ್ನು ಭೂತರಾಜನೆಂದೂ ಭೂತಗಳ ಅಧಿಪತಿ ಎಂದೂ ಭೂತಗಳ ಅಧ್ಯಕ್ಷನೆಂದೂ ಭೂತಾಳ ಪಾಂಡ್ಯನ ಕಥೆಯಲ್ಲಿ ವರ್ಣಿಸಲಾಗಿದೆ. ‘ಬೆರ್ಮೆರ್’ ಕೂಡ ಭೂತರಾಜನೆಂದೂ, ಭೂತಗಳ ಅಧ್ಯಕ್ಷನೆಂದೂ ಪಾಡ್ದನಗಳು ವರ್ಣಿಸುತ್ತವೆ.
ಆದ್ದರಿಂದ ತುಳುನಾಡಿನ ಮೂಲದೈವ ಬೆರ್ಮೆರ್ ಹಾಗೂ ಕುಂಡೋದರ ಒಂದೇ ಎಂದು ಹೇಳಬಹುದು. ಕುಂಡೋದರ ದೈವಕ್ಕಿರುವ ಮಹೀಶಾಸುರ ಎಂಬ ಅಭಿದಾನ, ಮಹಾಬಲಿಗೆ ಇರುವ ಮಹೀಶಾಸುರನೆಂಬ ಬಿರುದು, ಇವುಗಳಿಂದ ಬಲಿಯೇಂದ್ರನೇ ಹಿರಿಯ ಎಂಬರ್ಥದಲ್ಲಿ ‘ಬೆರ್ಮೆರ್’ ಎಂದು ಆರಾಧನೆ ಹೊಂದಿರುವ ಸಾಧ್ಯತೆ ಇದೆ.

ಕುಂಡೋದರ ದೈವಕ್ಕೆ ಬಾರಕೂರಿನ ಸಿಂಹಾಸನ ಗುಡ್ಡದಲ್ಲಿ ಒಂದು ಗುಡಿ ಇದೆ .ಈ ಗುಡಿಯ ಬಗ್ಗೆ ಗುರುರಾಜ ಭಟ್ಟ್ ಅವರು“ಮಹಿಷಾಸುರ ದೇಗುಲದ ರೇವಂತ (ಕ್ರಿ.ಶ. 10-12ನೇ ಶತಕ) - ಇದೊಂದು ಮೂರು ಅಡಿ ಎತ್ತರದ ಶಿಲ್ಪ. ಕುದುರೆಯ ಮೇಲೆ ಸವಾರಿ ಮಾಡಿಕೊಂಡ ರೇವಂತನ ನಿರ್ದೇಶನವೂ ಕುದುರೆಯ ನಿರ್ದೇಶನವೂ ಚೈತನ್ಯ ಪೂರ್ಣವಾಗಿವೆ.  ಕುದುರೆಯ ಮುಂಗಾಲಿನ ಕೈಕೆಳಗೆ ಹುಲಿಯ ನಿರ್ದೇಶನವಿದೆ. ಕುಂಡೋದರ ಮತ್ತು ಭೂತಾಳ ಪಾಂಡ್ಯರಾಯನಿಗೆ ಸಂಬಂಧಿಸಿದ ಕತೆಗೂ ಈ ದೇಗುಲಕ್ಕೂ ಸಂಬಂಧವಿದೆ ಎಂದು ಪ್ರತೀತಿ. ಆದರೆ ಈ ಬಿಂಬವು ಜೈನ ಬ್ರಹ್ಮನಂತೆ ಕಂಡು ಬರುತ್ತದೆ. ಇಲ್ಲಿಯೇ ಮರದಿಂದ ಮಾಡಿದ ಪಂಚ ಮುಖ ನಂದಿಯೂ ಒಂದು ಕೋಡಿನಿಂದ ಕೂಡಿದ ನಂದಿಯೂ ಇವೆ. ಈ ದೇಗುಲವು ಈಗ ಸಂಪೂರ್ಣವಾಗಿ ಜೀರ್ಣೋದ್ಧಾರಗೊಂಡಿದೆ.” ( ಬಾರ್ಕೂರು ಪು. 34.)”  ಎಂದು ಹೇಳಿದ್ದಾರೆ.ಆದರೆ ರೇವಂತನ ಮೂರ್ತಿಗೂ ಮಹಿಷಾಸುರನ‌ಮೂರ್ತಿಗೂ ವ್ಯತ್ಯಾಸ ಇದೆ ಎಂದು ಡಾ.ಇಂದಿರಾ ಹೆಗಡೆಯವರು ಹೇಳಿದ್ದಾರೆ.

ಡಾ.ಲಕ್ಷ್ಮೀ ಜಿ ಪ್ರಸಾದ
ಆಧಾರ ಗ್ರಂಥಗಳು
ಬಾರಕೂರು - ಡಾ.ಗುರುರಾಜ ಭಟ್
ಅಳಿಯ ಕಟ್ಟು ಮತ್ತು ಬಾರ್ಕೂರು - ಒಂದು ಅಧ್ಯಯನ © ಡಾ‌.ಇಂದಿರಾ ಹೆಗಡೆ
http://tuluculture.blogspot.in/2014/11/blog-post_1.html?m=1
ಭೂತಾಳ ಪಾಂಡ್ಯನ ಕುರಿತಾದ ಪ್ರಚಲಿತ ಐತಿಹ್ಯಗಳು
ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ ಒಂದು ವಿಶ್ಲೇಷಣಾತ್ಮಕ ಅಧ್ಯಯನ- ಡಾ.ಲಕ್ಷ್ಮೀ ಜಿ ಪ್ರಸಾದ

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು: 429 - ಕಾಜಿಗಾರ್ತಿ© ಡಾ.ಲಕ್ಷ್ಮೀ ಜಿ ಪ್ರಸಾದ

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು: 429 - ಕಾಜಿಗಾರ್ತಿ© ಡಾ.ಲಕ್ಷ್ಮೀ ಜಿ ಪ್ರಸಾದ
ತುಳುವಿನಲ್ಲಿ ಕಾಜಿ ಎಂದರೆ ಬಳೆ ಎಂದರ್ಥ.ಇಲ್ಲಿ ಬಳೆ ಮಾರುವ ಮಹಿಳೆಯರು ಇದ್ದಾರೆ.ಇವರನ್ನು ಕಾಜಿಗಾರ್ತಿ ಎಂದು ತುಳುವಿನಲ್ಲಿ ಕರೆಯುತ್ತಾರೆ.
ಈ ದೈವದ ಹೆಸರೇ ಸೂಚಿಸುವಂತೆ ಇದು ಮೂಲತಃ ಮಾನವ ಮೂಲದ ದೈವತ.ಬಳೆಗಾರರ ಸಮುದಾಯದ ಮಹಿಳೆ.
ತುಳುನಾಡಿನಲ್ಲಿ ಯಾರಿಗೆ ಯಾವಾಗ ಯಾಕೆ ದೈವತಗವ ಸಿಗುತ್ತದೆ ಎಮಬುದಕ್ಕೆ ಇದಮಿತ್ಥಂ ಎಂದು ಹೇಳ ಬಹುದಾದ ಸಿದ್ಧ ಸೂತ್ರವಿಲ್ಲ.
ಅಪ್ರತಿಮ ಸಾಹಸ ಮೆರೆದ ಅತಿ ಮಾನುಷ ವ್ಯಕ್ತಿಗಳು ದೈವಗಳಾಗಿದ್ದಾರೆ.ಅಂತೆಯೇ ವರ್ಗ ಜಾತಿ ತಾರತಮ್ಯ ವನ್ನು ಪ್ರಶ್ನಿಸಿದವರು ಪ್ರಧಾನ ದೈವಗಳ ಕೋಪಕ್ಕೆ ಅಥವಾ ಅನುಗ್ರಹಕ್ಕೆ ಪಾತ್ರರಾದವರು ದೈವತ್ವ ಪಡೆದು ಆರಾಧನೆ ಪಡೆಯುತ್ತಾರೆ.
ಇಂತಹ ಯಾವುದೇ ಕಾರಣ ಇಲ್ಲದೇ ಇರುವ ಸಾಮಾನ್ಯರು ಕೂಡ ಪ್ರಧಾನ ದೈವದ ದೃಷ್ಟಿ ತಾಗಿ ಮಾಯಕ ಹೊಂದಿ ಅದೇ ದೈವದ ಸೇರಿಗೆಗೆ ಸಂದು ಆರಾಧನೆ ಪಡೆಯುತ್ತಾರೆ. ಕಬಕ ಬೈಪ್ಪದವಿನಲ್ಲಿ ಅಣ್ಣಪ್ಪ ಪಂಜುರ್ಲಿಯ ದೃಷ್ಟಿ ಬಿದ್ದು ಮಲೆ ಕುಡಿಯರ ಎಳೆಯ ಹುಡುಗಿ ಕುಂಞಿ ಕೆರೆಗೆ ಸ್ನಾನಕ್ಕೆ ಹೋದವಳು ಮಾಯಕ ಹೊಂದಿ ಅಣ್ಣಪ್ಪ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧಿಸಲ್ಪಡುತ್ತಾಳೆ.ಅದೇ ರೀತಿ ಹರಿಕೆ ತೀರಿಸಲು ಬಂದ ಸುಂದರ ಯುವತಿ ದಾರುವಿನ ಮೇಲೆ ದೃಷ್ಟಿ ಇಟ್ಟ ವರ್ನಾರ ಪಂಜುರ್ಲಿ ಆಕೆಯನ್ನು ಹಿಂಬಾಲಿಸಿ ಮಾಯಕ ಮಾಡಿ ತನ್ನ ಸೇರಿಗೆಗೆ ಸಮದಾಯ ಮಾಡಿಕೊಳ್ಳುತ್ತದೆ‌ ದಾರು ಮತ್ತು ಆಕೆಯ ತಮ್ಮ ಕುಂದಯ ಇಬ್ಬರೂ ಕೂಡ ವರ್ನಾರ ಮರ್ಲೆ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧನೆ ಪಡೆಯುತ್ತಾರೆ.
ಹಾಗೆಯೇ ಕಾಜಿಗಾರ್ತಿ ದೈವದ ಹಿನ್ನೆಲೆಯಲ್ಲಿ ಕೂಡ ಇಂತಹದುದೇ ಕಥಾನಕ ಪ್ರಚಲಿತವಿದೆ.
ಕಲ್ಲಡ್ಕ ಸಮೀಪ ಲಕ್ಷ್ಮೀ ಕೆರೆ ಎಂಬ ಕೆರೆ ಇದೆ‌.ಇಲ್ಲಗೆ ಸಮೀಪದಲ್ಲಿ ಪಂಜುರ್ಲಿ ದೈವದ ಕೋಲ ಆಗುತ್ತಾ ಇರುತ್ತದೆ‌.ಆಗ ಕೆರೆ ಸಮೀಪದಲ್ಲಿ ಬಳೆ ಮಾರುತ್ತಾ ಓರ್ವ ಮಹಿಳೆ ಬರುತ್ತಾಳೆ.ಅ ಸಮಯದಲ್ಲಿ ಎದ್ದು ನಿಂತು ಪಂಜುರ್ಲಿ ದೈವ ಈ ಕಾಜಿಗಾರ್ತಿ ಮೇಲೆ ದೃಷ್ಟಿ ಇಡುತ್ತದೆ‌.ಆಗ ಅ ಬಳೆ ಮಾರುವ ಮಹಿಳೆ ಲಕ್ಷ್ಮೀ ಕೆರೆಯಲ್ಲಿ ಮಾಯಕ ಹೊಂದಿ ಪಂಜುರ್ಲಿ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಕಾಜಿಗಾರ್ತಿ ದೈವವಾಗಿ ಆರಾಧನೆ ಪಡೆಯುತ್ತಾಳೆ.
 ದುರಂತ ಮತ್ತು ದೈವತ್ವ ತುಳು ಸಂಸ್ಕೃತಿಯ ಅವಿಭಾಜ್ಯ ಅಂಗಗಳು.ಲಕ್ಷ್ಮೀ ಕೆರೆಯಲ್ಲಿ ಮುಳುಗಿಯೊ ಇನ್ನೆನೋ ಆಗಿ ದುರಂತವನ್ನಪ್ಪಿದ ಸಮಯದಲ್ಲಿ ಪಂಜುರ್ಲಿ ದೈವದ ಕೋಲ ನಡೆಯುತ್ತಿದ್ದು ,ದೈವದ ಕಾರಣಿಕದಿಂದ ಅಕೆ ದೈವತ್ವ ಪಡೆದು ಆರಾಧಿಸಲ್ಪಟ್ಟಿರಬಹುದು.
ಮಾಹಿತಿ ನೀಡಿದ ನಿತೇಶ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು
© ಡಾ.ಲಕ್ಷ್ಮೀ ಜಿ ಪ್ರಸಾದ