Thursday, 20 March 2025

ದೊಡ್ಡವರ ದಾರಿ :76 : ಉದಾರಿ ದಕ್ಷ ಪ್ರಿನ್ಸಿಪಾಲ್ ಸಿಸ್ಟರ್ ನತಾಲಿಯಾ ಡಿ ಸೋಜ ..

 ದೊಡ್ಡವರ ದಾರಿ : ಉದಾರಿ ದಕ್ಷ ಪ್ರಿನ್ಸಿಪಾಲ್  ಸಿಸ್ಟರ್ ನತಾಲಿಯಾ ಡಿ ಸೋಜ 

ಇಲ್ಲಿ ಜಡೆಗಳು ಜಗಳವಾಡುವುದಿಲ್ಲ

ಜಗ ಮೆಚ್ಚುವಂತೆ ಕೆಲಸ ಮಾಡುತ್ತವೆ..



ಕಳೆದ ಇಪ್ಪತ್ತು ದಿನಗಳಿಂದ ನನಗೆ ಬೆಂಗಳೂರಿನ ಜ್ಯೋತಿ ನಿವಾಸ್ ಪಿಯು ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಸ್ಪೆಷಲ್ ಇನ್ವಿಜಿಲೇಟರ್ಸ್ ಸ್ಕ್ವಾಡ್ ಆಗಿ ಕರ್ತವ್ಯ..

ಇದು ಬಹಳ ದೊಡ್ಡ ಶಿಕ್ಷಣ ಸಂಸ್ಥೆ. ಪಿಯು ವಿಭಾಗದಲ್ಲಿಯೇ 2000 ವಿದ್ಯಾರ್ಥಿಗಳಿದ್ದಾರೆ.ಇಲ್ಲಿ ಅನೇಕ ಬಡ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಾರೆ ,ಬಡ ವಿದ್ಯಾರ್ಥಿನಿಯರಿಗೆ ಊಟ ತಿಂಡಿ ಕೂಡ ಉಚಿತವಾಗಿ ಕೊಡುವ ವ್ಯವಸ್ಥೆ ಇದೆ 

ಇಲ್ಲಿನ  ವಿದ್ಯಾರ್ಥಿಗಳಿಗೆ ಇದು ಪರೀಕ್ಷಾ ಕೇಂದ್ರವಲ್ಲ.ಬೇರೆ ಬೇರೆ ಕಾಲೇಜುಗಳ ಒಂದೂವರೆ ಸಾವಿರದಷ್ಟು ವಿದ್ಯಾರ್ಥಿಗಳಿಗೆ ಇಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದವು.

ಇದು ಸಿಸ್ಟರ್ಸ್ ನಡೆಸುವ ಮಹಿಳಾ  ಕಾಲೇಜು..ಹೆಚ್ಚಿನ ಉದ್ಯೋಗಿಗಳು ಕೂಡ ಮಹಿಳೆಯರೇ..ಇಲ್ಲಿನ  ಶಿಸ್ತು,ಸ್ವಚ್ಛತೆ, ಅಚ್ಚುಕಟ್ಟುತನ ಯಾರೂ ಕೂಡ ಮೆಚ್ಚಬೇಕಾದ್ದೇ..

ಅಷ್ಟು ದೊಡ್ಡ ಕಾಲೇಜಾದರೂ ಒಂದಿನಿತು ಗಲಭೆ ಇಲ್ಲ..ಸಿಟ್ಟು ಸೆಡವುಗಳಿಲ್ಲ..

ಚೀಫ್ ಎಕ್ಸಾಮಿನರ್ ಆಗಿರುವ ಪ್ರಿನ್ಸಿಪಾಲ್ ಸಿಸ್ಟರ್ ನತಾಲಿಯಾ ಡಿ ಸೋಜ  ಸಣ್ಣ ವಯಸ್ಸಿನವರು ಆದರೆ ಅವರ ನಿರ್ವಹಣಾ ಸಾಮರ್ಥ್ಯ ಅಸಾಧಾರಣವಾದುದು.ಹಾಗಾಗಿ ಪರೀಕ್ಷಾ ಕಾರ್ಯ ಯಾವುದೊಂದು ಸಣ್ಣ ಗೊಂದಲ ಸಮಸ್ಯೆ ಇಲ್ಲದೇ ನಡೆಯಿತು.

ಸದಾ ನಗು ಮುಖದಿಂದ ತಾಳ್ಮೆಯಿಂದ ಇರುವ ಅವರ ನಡೆ ನುಡಿ ನಿಜಕ್ಕೂ ಅನುಕರಣೀಯವಾಗಿದೆ ,ಇವರು ಫ್ರೆಂಚ್ ಭಾಷಾ ತಜ್ಞರೂ,ಪ್ರೆಂಚ ಉಪನ್ಯಾಸಕರೂ , ಸ್ತ್ರೀವಾದಿಗಳೂ ಆಗಿದ್ದಾರೆ .ಅನೇಕ ಪ್ರಬಂಧ ಗಳನ್ನು ಮಂಡಿಸಿದ್ದಾರೆ.ಸ್ತ್ರೀ ಸಂಬಂಧಿ ವಿಷಯದಲ್ಲಿ ಪಿ ಎಚ್ ಡಿ ಮಾಡ್ತಾ ಇದ್ದಾರೆ.

ಈವತ್ತು ಅಲ್ಲಿನ ಮೂವರು ಉಪನ್ಯಾಸಕಿಯರ ಹುಟ್ಟು ಹಬ್ಬ ಇತ್ತು ಅವರಿಗೆ ಶುಭ ಹಾರೈಸಿ ಉಡುಗೊರೆ ಯನ್ನು ಬಹಳ ಪ್ರೀತಿಯಿಂದ ಕೊಟ್ಟಿದ್ದಾರೆ.ಅದೇ ರೀತಿ ಅಲ್ಲಿನ ಕನ್ನಡ ಉಪನ್ಯಾಸಕಿ ಧನ ಲಕ್ಷ್ಮೀ ಯವರಿಗೆ ಅವರಿಗೆ ಒಂದು ಸಂಸ್ಥೆ ( ಹೆಸರು ಮರೆತೆ ) ಯಿಂದ ಉತ್ತಮ ಶಿಕ್ಷಕಿ ಪ್ರಶಸ್ತಿ ದೊರೆತಿತ್ತು.ಅದನ್ನು ಪಡೆದು ಅವರು ಕಾಲೇಜಿಗೆ ಬಂದಾಗ ಸ್ವತಃ ಪ್ರಾಂಶುಪಾಲರು ಅವರನ್ನು ಮುಕ್ತವಾಗಿ ಅಭಿನಂದಿಸಿ ನಮ್ಮ ಉಪನ್ಯಾಸಕಿ ಎಂದು ಹೆಮ್ಮೆ ಪಟ್ಟದ್ದನ್ನು ನಾನು ಕಣ್ಣಾರೆ ನೋಡಿದೆ .ತಮ್ಮ ಕೈ ಕೆಳಗಿನ ಅಧಿಕಾರಿಗಳನ್ನು ಮೆಚ್ಚಿ ಹೆಮ್ಮೆ ಪಡುವ ಉದಾರತೆ ಎಷ್ಟು ಪ್ರಾಂಶುಪಾಲರಿಗೆ  ಇದೆ ?  ನಮ್ಮ ಬ್ಯಾಟರಾಯನಪುರ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ದಯಾನಂದ ಸ್ವಾಮಿ ಬಿ ಎಂ ಎಸ್ ಅವರಿಗೆ ಇಂತಹ ಉದಾರತೆ ಇದೆ .ಇವರನ್ನು ಬಿಟ್ಟರೆ ಇಂತಹ ಉದಾತ್ತ ಮನೋಭಾವವನ್ನು ನಾನು ಕಂಡದ್ದು ಸಿಸ್ಟರ್ ನತಾಲಿಯಾ ಅವರಲ್ಲಿಯೇ..

ಅಲ್ಲಿನ ಎಲ್ಲ ಉದ್ಯೋಗಿಗಳ ಬಗ್ಗೆ ಕೂಡ ಅವರಿಗೆ ಅಪಾರ ಪ್ರೀತಿ ಅಭಿಮಾನ.‌.ಅದನ್ನು ಅವರ ನಡೆ ನುಡಿ ಆತ್ಮೀಯತೆ ತುಳುಕುವ ಕಣ್ಣಗಳಲ್ಲಿ ನಾವು ಕಾಣಬಹುದು. 

ಈವತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಗಿದವು.ನಾವು ಹಾಜರಾತಿ ಪ್ರಮಾಣ ಪತ್ರ ತಗೊಂಡು ಹೊರಡುವಾಗ   ಬೇಡ ಎಂದರೂ ಶಾಲು ಹೊದೆಸಿ ಸನ್ಮಾನಿಸಿ ಬಹಳ ಪ್ರೀತಿಯಿಂದ ಬೀಳ್ಕೊಟ್ಟರು 

ಎರಡು ಜಡೆಗಳು ಸೇರಿದರೆ ಜಗಳ ಆಗುತ್ತದೆ ಎಂಬ ನುಡಿಯನ್ನು ಈ ಮಹಿಳಾ  ಕಾಲೇಜಿನ ಪ್ರಿನ್ಸಿಪಾಲ್ ಉಪನ್ಯಾಸಕಿಯರು ಮತ್ತು ಮಹಿಳಾ ಸಿಬ್ಬಂದಿಗಳು ಸುಳ್ಳು ಎಂದು ಸಾಧಿಸಿ ತೋರಿಸಿದ್ದಾರೆ

ಇಲ್ಲಿ ಚೀಫ್ ಎಕ್ಸಾಮಿನರ್ (  ಪ್ರಿನ್ಸಪಾಲ್ ಸಿಸ್ಟರ್  ನತಾಲಿಯಾ ಡಿ ಸೋಜ  ,ಜಾಯಿಂಟ್ ಚೀಫ್ ಎಕ್ಸಾಮಿನರ್ ( ರಾಜಮ್ಮ ವಾಣಿಜ್ಯ ಶಾಸ್ತ್ರ ಉಪನ್ಯಾಸಕರು ರಾಣಿ ಸರಳಾದೇವಿ ಕಾಲೇಜು) Answer paper bundle custodian ( ಪ್ರೀತಿ ,ಅರ್ಥ ಶಾಸ್ತ್ರ ಉಪನ್ಯಾಸಕರು ಜ್ಯೋತಿ ನಿವಾಸ್ ಕಾಲೇಜು) ಸ್ಪೆಷಲ್ ಸ್ಕ್ವಾಡ್ ( ನಾನು) ಎಲ್ಲರೂ ಮಹಿಳೆಯರೇ ಆಗಿದ್ದು ಈ ಕೇಂದ್ರದಲ್ಲಿ  ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು  ಯಾವುದೇ ಒಂದು ಕಪ್ಪು ಚುಕ್ಕೆ ಇರದಂತೆ ನಿರ್ವಹಿಸಿದ ಬಗ್ಗೆ ನಮಗೆ ಹೆಮ್ಮೆ ಇದೆ .ಇದರ ಮೂಲ ಕಾರಣ ಕರ್ತರು ಜ್ಯೋತಿ ನಿವಾಸ ಪಿಯು ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ನತಾಲಿಯಾ( ಕುಳಿತವರಲ್ಲಿ ಎಡದಿಂದ ಮೊದಲಿನವರು)ಇನ್ನೋರ್ವ ಸಿಸ್ಟರ್ ( ಹೆಸರು ಕೇಳಲು ಮರೆತೆ) ಆಫೀಸ್ ನಲ್ಲಿ ಬಹಳ ಜವಾಬ್ದಾರಿ ಯಿಂದ ಕೆಲಸ ಮಾಡುತ್ತಿದ್ದು ನಮ್ಮನ್ನು ಬಹಳ ಪ್ರೀತಿ ಆತ್ಮೀಯತೆಯಿಂದ ನಡೆಸಿಕೊಂಡಿದ್ದಾರೆ.ಎಲ್ಲ ಉಪನ್ಯಾಸಕಿಯರೂ,ಉಪನ್ಯಾಸಕರೂ  ಇತರ ಸಿಬ್ಬಂದಿಗಳು ಕೂಡ ಬಹಳ ಸೌಜನ್ಯತೆ ತೋರಿದ್ದಾರೆ

Friday, 14 March 2025

ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಕರಾವಳಿಯ ಸಾವಿರದೊಂದು ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಪ್ರಶಾಂತ ಆಚಾರ್ಯ ಕುಳಾಯಿ ಮಂಗಳೂರು

 ನಮ್ಮ_ಹೆಮ್ಮೆಯ_ಓದುಗ_ಮಿತ್ರರು 

ಕರಾವಳಿಯ ಸಾವಿರದೊಂದು ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ


ಪ್ರಶಾಂತ ಆಚಾರ್ಯ ಕುಳಾಯಿ ಮಂಗಳೂರು


 


ಇವರ ಅಭಿಮಾನದ ನುಡಿಗಳು ಇಲ್ಲಿವೆ


"ನಮಸ್ತೇ ಮೇಡಮ್🙏🙏🙏


*ಕರಾವಳಿಯ ಸಾವಿರದೊಂದು ದೈವಗಳು* ಅತೀ ಅದ್ಭುತವಾದ ಗ್ರಂಥ..... 

ಇತ್ತೀಚಿಗೆ ಕೆಲವರು ತಮ್ಮ ವೈಯಕ್ತಿಕ ಕೀರ್ತಿ ಪ್ರತಿಷ್ಟೆಗಾಗಿ ಅಥವಾ ತಾವೇ ಎಲ್ಲಾ ತಿಳಿದವರು ಎಂಬಂತೆ ತೋರಿಸಿಕೊಳ್ಳಲು ದೈವಗಳ ಬಗ್ಗೆ ಅವರಿಗೆ ಬೇಕಾದ ಹಾಗೆ ಕಥೆಗಳನ್ನು ಹೆಣೆದುಕೊಂಡು ಮುಗ್ದ ಜನರ ಮನಸು ಹಾಗೂ ಹಣ ಹಾಳುಮಾಡುತಿದ್ದಾರೆ....... 

ನಿಮ್ಮ ಈ ಪುಸ್ತಕ ಅವರೆಲ್ಲರಿಗೂ ಸಮರ್ಥವಾಗಿ ಉತ್ತರಿಸಲು ಒಂದು ಅಸ್ತ್ರವಾಗಿದೆ... 

 ನಿಮಗೆ ಇನ್ನೂ ಹೆಚ್ಚಿನ ಸಂಶೋಧನೆ, ಅಧ್ಯಯನ ಮಾಡುವಂತ ಯೋಗವನ್ನೂ, ಅದನ್ನು ಓದುವಂತ ಭಾಗ್ಯವನ್ನು ನಮಗೂ ದೇವರು ಕರುಣಿಸಲಿ..... 

ಧನ್ಯವಾದಗಳು🙏🙏🙏"



ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ನಮ್ಮ‌ಪುಟ್ಟ ಓದುಗ ಮಿತ್ರ ಎಡಮಂಗಲದ ಧನಂಜಯ ಮತ್ತು ಉಷಾ ಧನಂಜಯರ ಏಳು ವರ್ಷದ ಮಗ

 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು
ಮಾಯ ಮತ್ತು ಜೋಗದ ಬೆಳಕಿನಲ್ಲಿ
ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ 
ನಮ್ಮ‌ಪುಟ್ಟ ಓದುಗ ಮಿತ್ರ ಎಡಮಂಗಲದ ಧನಂಜಯ ಮತ್ತು ಉಷಾ ಧನಂಜಯರ ಏಳು ವರ್ಷದ ಮಗ


ನಮ್ಮ ಸಂಸ್ಕೃತಿಯ ಬಗ್ಗೆ ಮುಂದಿನ ಜನಾಂಗಕ್ಕೆ ತಿಳಿಸುವುದೇ ನನ್ನ ಅಧ್ಯಯನದ ಮುಖ್ಯ ಗುರಿ..ಈ ಎಳೆಯ ಓದುವದ್ದು ತಿಳಿದು ಸಾರ್ಥಕ ಭಾವ ಮೂಡಿತು

ಅವರ ಅಭಿಮಾನದ ಮಾತುಗಳು ಇಲ್ಲಿವೆ
.

"ನಮಸ್ತೆ ಮೇಡಂ ‌‌ .‌ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕವನ್ನು ನನ್ನ ೭ ವರ್ಷ ದ ಮಗ ತುಂಬಾ ಚೆನ್ನಾಗಿ ಅಕ್ಷರಗಳನ್ನು  ಜೋಡಿಸಿ ಓದುತ್ತಾ ದೈವಗಳ ಬಗೆಗೆ‌ ಸಾಕಷ್ಟು  ವಿಚಾರಗಳನ್ನು  ತಿಳಿದುಕೊಂಡಿದ್ದಲ್ಲದೆ , ನನಗೂ  ಅದರ ಬಗೆಗೆ ತಿಳಿಸುತ್ತಾನೆ .. ಅವನ ಅತ್ಯಂತ  ಮೆಚ್ಚಿನ  ಪುಸ್ತಕ.  ಅಷ್ಟೇ ಭಕ್ತಿ ಆ ಪುಸ್ತಕ ದ ಮೇಲಿದೆ. ಅವನ ಸ್ನೇಹಿತರಲ್ಲೂ ವಿಚಾರ ಹಂಚಿಕೊಳ್ಳುತ್ತಾನೆ .. ನನಗೆ ತುಂಬಾ ಹೆಮ್ಮೆ ಮತ್ತು  ಖುಷಿ . ಇದೆಲ್ಲ  ಸಾಧ್ಯ ವಾಗಿದ್ದು . ನಿಮ್ಮಿಂದ . 🙏🏻

ನಮ್ಮ ಹೆಮ್ಮೆಯ_ಓದುಗ ಮಿತ್ರರು ಕರಾವಳಿಯ ಸಾವಿರದೊಂದು ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಪ್ರೊ ಬಿ ಸತ್ಯನಾರಾಯಣ ಶೆಟ್ಟಿ ಪ್ರಾಂಶುಪಾಲರು ಸುರಾನಾ ಕಾಲೇಜು ,ಬೆಂಗಳೂರು

 

#ನಮ್ಮ ಹೆಮ್ಮೆಯ_ಓದುಗ ಮಿತ್ರರು
ಕರಾವಳಿಯ ಸಾವಿರದೊಂದು ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ
ಪ್ರೊ ಬಿ ಸತ್ಯನಾರಾಯಣ ಶೆಟ್ಟಿ ಪ್ರಾಂಶುಪಾಲರು ಸುರಾನಾ ಕಾಲೇಜು ,ಬೆಂಗಳೂರು



ಇವರುನಮಗೆ ನಿರಂತರ  ಬೆಂಬಲ ನೀಡುತ್ತಿದ್ದು
ನಮ್ಮಿಂದ ಅನೇಕ ಪುಸ್ತಕಗಳನ್ನು ಖರೀದಿಸಿ ತಮ್ಮ ಸ್ನೇಹಿತರಿಗೆ ಉಡುಗೊರೆಯಾಗಿ ನೀಡಿ ನಮ್ಮ ಸಂಸ್ಕೃತಿಯನ್ನು ಹರಡುವ ಸ್ತುತ್ಯರ್ಹ ಕಾರ್ಯ ಮಾಡಿದ್ದಾರೆ,

ನಮ್ಮ ಹೆಮ್ಮೆಯ ಓದುಗರು ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು: ದಯಾನಂದಸ್ವಾಮಿ ಬಿಎಂಎಸ್

 ನನ್ನ  ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು


ಪುಸ್ತಕದ ಬಗ್ಗೆ ಎರಡು ಒಳ್ಳೆ ಮಾತು ಬರೆದು ಶುಭ ಹಾರೈಸಿದ ನಮ್ಮ‌ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ದಯಾನಂದ ಸ್ವಾಮಿ ಬಿ ಎಂ ಎಸ್ ಅವರಿಗೆ ಇಂದು ಪುಸ್ತಕದ ಪ್ರತಿ ನೀಡಿದೆ 


ತಮ್ಮ ಸಹೋದ್ಯೋಗಿಗಳ ಏಳಿಗೆಯನ್ನು ಬಹುತೇಕರು ಸಹಿಸುವುದಿಲ್ಲ.ಮತ್ಸರದಿಂದ  ಬಹಳಷ್ಟು ಕಿರುಕುಳ ಕೊಡುವ ಮೇಲಧಿಕಾರಿಗಳು ಅನೇಕರಿದ್ದಾರೆ ..ಕೆಲವರು ಕಿರುಕುಳ ಕೊಡದೆ ಸುಮ್ಮನಿರುವವರೂ ಇರಬಹುದು.ಆದರೆ ಬೆಂಬಲ ಕೊಡುವವರು ಬಹಳ ಅಪರೂಪಕ್ಕೆ ಸಿಗುತ್ತಾರೆ.ಈ ನಿಟ್ಟಿನಲ್ಲಿ ನಿಮ್ಮ ಕಾಲೇಜು ಪ್ರಾಂಶುಪಾಲರು ಅಭಿನಂದನಾರ್ಹರು ಎಂದು ನನ್ನ ಪುಸ್ತಕದಲ್ಲಿ ಇವರ ಮಾತನ್ನು ಓದಿದ ಈ ಪುಸ್ತಕ ಬಿಡುಗಡೆ ಮಾಡಿದ್ದ ಡಾ.ಈಶ್ವರ ದೈತೋಟರು ಹೇಳಿದ್ದರು

ಇದು ನಿಜಕ್ಕೂ ನೂರಕ್ಕೆ ನೂರರಷ್ಟು ಸತ್ಯದ ಮಾತು..


ನಾನೇ ಸ್ವತಃ ಬೆಳ್ಳಾರೆ ಕಾಲೇಜಿನಲ್ಲಿದ್ದಾಗ  ಪ್ರಿನ್ಸಿಪಾಲರಾಗಿದ್ದ ಈಗ ದಿವಂಗತರಾಗಿರುವ ಸುಬ್ರಾಯ ಗೌಡರಿಂದ ದ್ವೇಷ ಮತ್ಸರದ ಜಾತಿ ಬೇಧ ಲಿಂಗ ತಾರತಮ್ಯದ ಬಿಸಿಯನ್ನು ಅನುಭವಿಸಿದ್ದೆನಲ್ಲ..


ಇಂಥಹವರ ನಡುವೆ ನಮ್ಮ‌ಬ್ಯಾಟರಾಯನಪುರ ಕಾಲೇಜಿನ ದಯಾನಂದ ಸ್ವಾಮಿಯಂಥಹವರು ನಿಜಕ್ಕೂ ವಿಶಿಷ್ಟರೆನಿಸುತ್ತಾರೆ..


ಇದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದು ಭಡ್ತಿಪಡೆದು ಈಗ ನಮ್ಮ‌ಪದವಿ ಪೂರ್ವ ಶಿಕ್ಷಣ ಇಲಾಖೆಯ  ಸಹ ನಿರ್ದೇಶಕರಾಗಿರುವ ಶೈಲಜಾ ಮೇಡಂ ಅವರು ಕೂಡ ನನಗೆ ತುಂಬು ಬೆಂಬಲವನ್ನು ನೀಡಿದ್ದನ್ನು ಕೂಡ ನಾನೆಂದಿಗೂ ಮರೆಯಲಾರೆ

ನಮ್ಮ ಹೆಮ್ಮೆಯ ಓದುಗರು # ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು- ರಾಘು ಪೂಜಾರಿ ಕಲ್ಮಂಜೆ

 #ನಮ್ಮ_ಹೆಮ್ಮೆಯ_ಓದುಗ_ಮಿತ್ರರು 

# ಮಾಯ ಮತ್ತು ಜೋಗದ ಬೆಳಕಿನಲ್ಲಿ  ಕರಾವಳಿಯ ಸಾವಿರದೊಂದು ದೈವಗಳು



 

ನಮ್ಮ ಆತ್ಮೀಯರಾದ ಸುಭಾಶ್ ಅವರು ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕವನ್ನು ಮಜೂರು ಗರೊಡಿಯ ಕೋಟಿ ಭೈದ್ಯರ ಪಾತ್ರಿಯಾಗಿರುವ ಹಿರಿಯರಾದ ರಾಘು ಪೂಜಾರಿ‌ ಕಲ್ಮಂಜೆಯವರಿಗೆ ಕಾಣಿಕೆಯಾಗಿ ನೀಡಿದ್ದಾರೆ .ಕಲ್ಕುಡ ದೈವದ ಮಧ್ಯಸ್ಥರೂ ಆಗಿರುವ  ಈ ಪುಸ್ತಕವನ್ನು ಮೆಚ್ಚಿದ ರಾಘು ಪೂಜಾರಿಯವರ ಅಂತರಂಗದ ಒಲುಮೆಯ ಮಾತುಗಳನ್ನು ಇಲ್ಲಿ ಕೇಳಬಹುದು ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು

ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಕೃಷ್ಣ ಬೆಳ್ತಂಗಡಿ

 ಯುವ ನಿರ್ದೇಶಕರಾದ ಕೃಷ್ಣ ಬೆಳ್ತಂಗಡಿಯವರು ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕಕ್ಕಾಗಿ ಬಂದಿದ್ದರು.ಬಂದ ನಂತರ ನಮಗೆ ನೆಂಟರು ಎಂದು ತಿಳಿಯಿತು.ಸಿನೇಮ ಕಥೆಗಳ ಬಗ್ಗೆ ಒಂದಷ್ಟು ಪಟ್ಟಾಂಗ ಹೊಡೆದೆವು Krishna Belthangadi