Monday 7 April 2014

ಬೆಟ್ಟವಾಗುವ ಪುಟ್ಟ ವಿಚಾರಗಳು -ಡಾ.ಲಕ್ಷ್ಮೀ ಜಿ ಪ್ರಸಾದ









                                           


                          


 ಅದೊಂದು ಪುಟ್ಟ ಊರು ,ಅತ್ತ ಹಳ್ಳಿಯೂ ಅಲ್ಲದ ಇತ್ತ ಪೇಟೆಯೂ ಅಲ್ಲದ ಪ್ರದೇಶ , ಅಲ್ಲಿ ಗಂಡಸರು ಅನ್ಯಾಯವನ್ನು ಪ್ರಶ್ನಿಸಿದರೆ ಅದು ನ್ಯಾಯಯುತವಾದ ಹೋರಾಟ ,ಹೆಣ್ಣು ಪ್ರಶ್ನಿಸಿದರೆ ಅದು ಜಗಳಗಂಟಿತನ !ಇದು ಆ ಒಂದು ಊರಿನ ಕಥೆ ಅಲ್ಲ .ಎಲ್ಲೆಡೆ ಕಂಡು ಬರುವ ವಿಚಾರ!
ಅಲ್ಲಿಂದ ಅನೇಕ ಮಹಿಳೆಯರು ಸ್ವಲ್ಪ ದೂರದ ಪೇಟೆಯಲ್ಲಿ ಕೆಲಸಕ್ಕೆ ಹೋಗಿ ಬರುತ್ತಾರೆ .ಒಂದು ದಿನ ದೂರದಿಂದ ಓಡಿ  ಬಂದ ಮಹಿಳೆ  ಏದುಸಿರು ಬಿಟ್ಟು ಕೊಂಡು ಬಸ್ಸು ಹತ್ತಿದರು ,ಸುತ್ತ ಮುತ್ತ ನೋಡಿದರೆಎಲ್ಲ ಸೀಟ್ ಗಳೂ ಭರ್ತಿಯಾಗಿದ್ದವು.ಓಡಿ  ಬಂದು ಸುಸ್ತಾಗಿದ್ದ ಮಹಿಳೆಗೆ ಗಂದಸೊಬ್ಬರು ಮಹಿಳೆಗಾಗಿ ಮೀಸಲಿರಿಸಿದ್ದ ಸೀಟಿನಲ್ಲಿ ಕುಳಿತುಕೊಂಡದ್ದು ಕಾಣಿಸಿತು ,ನಿರ್ವಾಹಕರಲ್ಲಿ ಅವರನ್ನು ಎಬ್ಬಿಸಿ ಕೊಡುವಂತೆ ಕೇಳಿದರು .ನೀವೇ ಕೇಳಿ ಎಂದಾತ ನುಣುಚಿಕೊಂಡು ಮುಂದೆ ಹೋಗಿ ನಿಂತ .ಈ ಮಹಿಳೆ  ಕುಳಿತಿದ್ದ ಆ ಗಂಡಸಲ್ಲಿ ಎದ್ದು ಸೀಟು ಕೊಡುವಂತೆ ಹೇಳಿದರು.ಅವರ ಎದುರೆ ನಿರ್ವಾಹಕ ತನಗೂ ಅದಕ್ಕೂ ಸಂಬಂಧ ಇಲ್ಲದಂತೆ ಎದ್ದು ಹೋದದ್ದು ಅವರಿಗೆ ಕುಮ್ಮಕ್ಕು ಕೊಟ್ಟಿತು.”ನಾನು ಪ್ರಾರಂಭದಿಂದಲೇ ಕುಳಿತಿದ್ದೇನೆ ಏಳಲ್ಲ” ಎಂದರು ,ಅವರಿಗೆ ತುಸು ವಯಸ್ಸೂ ಆಗಿತ್ತು .ವಯಸ್ಸಾದವರನ್ನು ಏಳು ಅಂತ ಹೇಳೋಕೆ ನಾಚಿಕೆ ಆಗಲ್ವ?ಅಂತ ಯಾರೋ ಗಂಡಸರು ಹಿಂದಿನಿಂದ ಹೇಳಿದರು .ಈ ಮಹಿಳೆಗೂ ಆಗ ಸಿಟ್ಟು ಬಂತು .ವಯಸ್ಸಾಗಿದ್ರೆ ಹಿರಿಯ ನಾಗರಿಕರ ಸೀಟು ಇದೆ ಅಲ್ಲಿ ಕುಳಿತುಕೊಳ್ಳಿ ಎಂದರು .ಆ ಸೀಟಿನಲ್ಲಿ ಇಬ್ಬರು ಯುವಕರು  ಕುಳಿತಿದ್ದರು.ಆ ಮಹಿಳೆ ಮತ್ತು  ಆ ಗಂಡಸಿನ ನಡುವೆ ಚಕ ಮುಕಿ ನಡೆಯಿತು .ಬಸ್ಸಿನಲ್ಲಿದ್ದ ಕೆಲವು ಗಂಡಸರು ಆ ಗಂಡಸಿನ ಪರ ಸೇರಿ ಮಾತಾಡಿದರು.ಆಗ ಮಹಿಳೆ ನಿರ್ವಾಹಕನಲ್ಲಿ ಆತನನ್ನು ಎಬ್ಬಿಸಿಕೊಡುವಂತೆ ಹೇಳಿದರು .ಮಾತಿಗೆ ಮಾತು ಬೆಳೆಯಿತು .ನಿರ್ವಾಹಕನೊಂದಿಗೆ ಚಾಲಕನೂ ಸೇರಿಕೊಂಡು ಆ ಮಹಿಳೆಗೆ ಹೊಡೆಯಲು ಬಂದರು. ಆ ಬಸ್ಸಿನಲ್ಲಿ ಅನೇಕ ಸ್ತ್ರೀಯರೂ ಇದ್ದರು .ಅಷ್ಟೆಲ್ಲ ಆದರೂ ಆ ಬಸ್ಸಿನಲ್ಲಿದ್ದ  ಒಂದೇ ಒಂದು ಸ್ತ್ರೀ ಕೂಡ ತುಸುವಾದರೂ ಆ ಮಹಿಳೆ ಪರ ಧ್ವನಿ ಎತ್ತಲಿಲ್ಲ .ಅಷ್ಟು ಹೊತ್ತಿಗಾಗುವಾಗ ಇನ್ನೋರ್ವ ಮಹಿಳೆ ಬಸ್ಸನ್ನು ಏರಿದರು .ಅಲ್ಲಿನ ಗಲಾಟೆ ತಿಳಿದು ಆ ಮಹಿಳೆಯನ್ನು ಎಲ್ಲರು ಸೇರಿ ಹೊಡೆದು ಹಾಕಿಯಾರೆಂದು ಕೂಡಲೇ ತಮ್ಮ ಮೊಬೈಲ್ ಮೂಲಕ  ಹತ್ತಿರದ ಪೋಲಿಸ್ ಸ್ಟೇಷನ್ ಗೆ ಮಾಹಿತಿ ನೀಡಿದರು ,ಮುಂದಿನದು ಎಲ್ಲರಿಗೂ ಗೊತ್ತಿರುವದ್ದೆ !ಬಸ್ಸನ್ನು ಸ್ಟೇಷನ್ ಗೆ ಕೊಂಡೊಯ್ದರು .ಆಗ ಅಲ್ಲಿದ್ದ ಮಹಿಳೆಯರಿಗೆ ಗಂಟಲಲ್ಲಿ ಸ್ವರ ಬಂತು .ಅಯ್ಯೋ ಇವಳಿಂದಾಗಿ ನಮಗೆ ಆಫೀಸ್ಗೆ ತಡ ಆಗುತ್ತದೆ ಅಂತ ಅವರನ್ನೇ ಬಯ್ಯಲು ಆರಂಭ ಆಯಿತು .ಮುಂದೆ ಆ ನಿರ್ವಾಹಕ , ಚಾಲಕ ಮತ್ತು ಕುಳಿತಿದ್ದ ಗಂಡಸು ಮೇಲೆ ದೂರು ದಾಖಲಾಯಿತು .ಇಷ್ಟಕ್ಕೂ ಆದದ್ದೇನು ?ಆ ಮಹಿಳೆ ನ್ಯಾಯವಾದದ್ದನ್ನೇ ಕೇಳಿದ್ದರು ! ಆಗ ನಿರ್ವಾಹಕ ಹಿರಿಯ ನಾಗರೀಕರ ಸೀಟಿನಲ್ಲಿ ಕುಳಿತಿದ್ದ ಯುವಕರನ್ನು ಎಬ್ಬಿಸಿ ,ಮಹಿಳೆಯರ ಸೀಟಿನಲ್ಲಿ ಕುಳಿತಿದ್ದವರಿಗೆ ಕೊಡಿಸಿ ಆ ಸೀಟನ್ನು ಆ ಮಹಿಳೆಗೆ ಕೊಡಿಸುತ್ತಿದ್ದರೆ ಯಾವ ಸಮಸ್ಯೆಯೇ ಆಗುತ್ತಿರಲಿಲ್ಲ.
ಅಲ್ಲೊಂದು ಪುಟ್ಟ  ಸಂಸ್ಥೆ  ,ಇಪ್ಪತ್ತೈದು ಮೂವತ್ತು ಮಂದಿ ಕೆಲಸ ಮಾಡುತ್ತಾರೆ.ಹತ್ತು ಹನ್ನೆರಡು ಮಂದಿ ಅದರಲ್ಲಿ ಮಹಿಳೆಯರೂ ಇದ್ದಾರೆ .ಎರಡು ಶೌಚಾಲಯಗಳೂ ಇವೆ .ನಮಗೆ ಬೇರೆ ಟಾಯ್ಲೆಟ್ ಬೇಕು ಎಂಬ ಅಹವಾಲು ಮಹಿಳೆಯರದ್ದು.ಬಾಹ್ಯವಾಗಿ ಹೇಳಲು ಯಾರೂ ತಯಾರಿಲ್ಲ  .ಅಂತು ಇಂತೂ ಒಂದು ಮೀಟಿಂಗ್ ನಲ್ಲಿ  ಓರ್ವ ಮಹಿಳೆ ಈ ಬಗ್ಗೆ ಪ್ರಸ್ತಾಪ ಮಾಡಿದರು .ಕೂಡಲೇ ಬೇರೆ ಒಂದು  ವ್ಯವಸ್ಥೆ ಮಾಡಲು ಫಂಡ್ ಇಲ್ಲ ಅನ್ನುವ ಸಿದ್ಧ ಉತ್ತರ ಎದುರಾಯಿತು .ಐವತ್ತು ವರ್ಷದಿಂದ ಈ ಸಂಸ್ಥೆ ನಡೆಯುತ್ತಾ ಬಂದಿದೆ ,ಇಷ್ಟರ ತನಕ ಯಾರಿಗೂ ಏನೂ ತೊಂದರೆ ಆದ ಬಗ್ಗೆ ಯಾರೂ ಹೇಳಿಲ್ಲ ,ಈಗೇನು ತಕರಾರು ?ಇಷ್ಟು ಇಲ್ಲದ ಸಂಸ್ಥೆಗಳು ಎಷ್ಟಿಲ್ಲ ಇತ್ಯಾದಿಯಾಗಿ ತಲೆಗೊಂದರಂತೆ ಮಾತಾಡಿದರು ಅಲ್ಲಿನ ಪುರುಷ ಸಹೋದ್ಯೋಗಿಗಳು .ನಿತ್ಯ ಕಿರಿ ಕಿರಿ ಅನುಭವಿಸುವ ಮಹಿಳೆಯರು ತುಟಿ ಪಿಟಕ್ಕೆನ್ನಲಿಲ್ಲ!.ಮತ್ತೆ ಎಂದಿನಂತೆ ದಿನಗಳು ಉರುಳಿದವು !ಅಲ್ಲಿ ಬಹಳ ಸುಲಭದ ಪರಿಹಾರೋಪಾಯ ಇತ್ತು .ಎರಡರಲ್ಲಿ ಒಂದನ್ನು ಮಹಿಳೆಯರು ,ಇನ್ನೊಂದನ್ನು ಪುರುಷರು ಬಳಸಿದರಾಯಿತು .ಆದರೆ ಅಷ್ಟರ ಮಟ್ಟಿನ ಉದಾರತೆಯೂ ಅಲ್ಲಿರಲಿಲ್ಲ . ಆ ವಿಷಯ ಪ್ರಸ್ತಾಪಿಸಿದ ಮಹಿಳೆ ಎಲ್ಲರ ಕೆಂಗಣ್ಣಿಗೆ ಪಾತ್ರರಾಗ ಬೇಕಾಯಿತು . ಮಾತು ಮಾತಿಗೆ ಅವರನ್ನು ಹಂಗಿಸುವುದು ಭಂಗಿಸುವುದು ಶುರು ಆಯ್ತು .ಅವರ ಬದುಕು ಅಲ್ಲಿ ನರಕ ಸದೃಶವಾಯಿತು.

ಇಂತಹಾದ್ದೆ ಇನ್ನೊಂದು ಊರು.ಅಲ್ಲೊಂದು ಶಾಲೆ.ಮುಖ್ಯೋಪಾಧ್ಯಾಯರು ಬಹಳ ಶಿಸ್ತಿನ ಸಿಪಾಯಿ .ಶಾಲೆಯಲ್ಲಿ ಒಳ್ಳೆ ಫಲಿತಾಂಶ ಇತ್ತು  ಶಾಲೆಗೆ  ಒಳ್ಳೆ ಹೆಸರಿತ್ತು .ಹತ್ತು ಹನ್ನೆರಡು ಮಂದಿ ಶಿಕ್ಷಕರಿದ್ದರು .ಅದರಲ್ಲಿ ಒಬ್ಬರು ಶಿಕ್ಷಕಿಯೂ ಇದ್ದರು !ಹೆಚ್ಚಾಗಿ ಎಲ್ಲರೂ ಸಮಯಕ್ಕೆ ಸರಿಯಾಗಿಯೇ ಬರುತ್ತಿದ್ದರು.ಆದರೆ ಶಿಕ್ಷಕರು ನಡುವೆ ಫ್ರೀ ಇದ್ದಾಗ ಕಾಫಿಗೆ ಉಟಕ್ಕೆ ತಿಂಡಿಗೆ ಅಂತ ಹೊರ ಹೋಗಿ ತಿರುಗಾಡಿ ಬರುತ್ತಿದ್ದರು. ಮನೆ ದೂರ ಇರುವ ಶಿಕ್ಷಕರು ಕೋಣೆ ಅವಧಿ ತರಗತಿ ಇಲ್ಲದಿದ್ದರೆ ಬೇಗ ಮನೆಗೆ ಹೋಗುತ್ತಿದ್ದರು .ಅಲ್ಲಿದ್ದ  ಶಿಕ್ಷಕಿಯ ಮನೆ ಶಾಲೆಗೆ ಹತ್ತಿರದಲ್ಲೇ ಇತ್ತು .ಮನೆಯಿಂದಲೇ ಬುತ್ತಿ ತರುವ ಕಾರಣ ಇವರು ಶಾಲೆಗೆ ಬಂದ ಮೇಲೆ ಮುಗಿಯುವ ತನಕ ಹೊರ ಹೋಗುತ್ತಿರಲಿಲ್ಲ .ಒಂದಿನ ಏನೋ ಕಾರಣಕ್ಕೆ ಆ  ಶಿಕ್ಷಕಿ ಒಂದಿನ ಶಾಲೆಗೆ ಬರುವಾಗ ಅರ್ಧ ಗಂಟೆ ತಡ ಆಯಿತು!ಮುಖ್ಯೋಪಾಧ್ಯಾಯರು ಜೋರು ಮಾಡಿ ಸಿ ಎಲ್ ಬರೆದು ಕೊಡಿ ಎಂದರು !ದುರದೃಷ್ಟವಶಾತ್ ಅವರ ಖಾತೆಯಲ್ಲಿ ಸಿ ಎಲ್ ,ಇ ಎಲ್ ಗಳು ಖಾಲಿಯಾಗಿದ್ದವು !
ಆಗ ಅವರು “ಬೇರೆ ಶಿಕ್ಷಕರು ನಡು ನಡುವೆ ಹೊರಗೆ ಹೋಗಿ ಬರುವುದಿಲ್ಲವೇ ?ಅನೇಕರು ಸಂಜೆ ಬೇಗ ಮನೆಗೆ ಹೊಗುವುದಿಲ್ಲವೇ ? ಎಂದು ಪ್ರಶ್ನಿಸಿದರು.ಆಗ ಬೇರೆಯವರ ವಿಷಯ ನಿಮಗೆ ಬೇಡ ಎಂದು ದಬಾಯಿಸಿದರು !ಅವರ ಒಂದು ದಿನದ ವೇತನವನ್ನು ತಡೆ ಹಿಡಿಯಲಾಯಿತು !ಒಂದು ದಿನ ತಪ್ಪದಂತೆ ಬಂದು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ ಶಿಕ್ಷಕಿಗೆ ಬಹಳ ನೋವಾಯಿತು. ಈ ನಡುವೆ ಅವರು ಇತರ ಶಿಕ್ಷಕರು ಮನೆಗೆ ಬೇಗ ಹೋಗುತ್ತಿಲ್ಲವೇ ಎಂದು ಪ್ರಶ್ನಿಸಿದ್ದು ಇತರ ಶಿಕ್ಷಕರ ಕಣ್ಣು ಕೆಂಪಗಾಗಲು ಕಾರಣವಾಯಿತು .ಅದರ  ಪರಿಣಾಮ  ಉತ್ತಮ  ಶಿಕ್ಷಕಿಯಾಗಿದ್ದ ಅವರು ಬೇರೆಡೆಗೆ ವರ್ಗಾವಣೆ ಪಡೆದು ಹೋದರು !ಆ ಶಾಲೆಯಲ್ಲಿ  ಆ ಹುದ್ದೆ ಖಾಲಿಯಾಗಿಯೇ ಉಳಿಯಿತು !ಗಣಿತಕ್ಕೆ ಶಿಕ್ಷಕರಿಲ್ಲದೆ ಆ ಶಾಲೆಯ ಮಕ್ಕಳು ಒದ್ದಾಡಿದರು ಪಾಪ ! ಇಷ್ಟಕ್ಕೂ ಇಲ್ಲಿ ಆದದ್ದೇನು ?ಮಹಿಳೆಗೊಂದು ,ಪುರುಷನಿಗೊಂದು ನೀತಿ ಅನುಸರಿಸಿದ್ದು ಅಷ್ಟೇ !
ಹೀಗೆ ಇನ್ನೊಂದು ಶಾಲೆ ,ಅಲ್ಲೋರ್ವ ಬಡ ವಿದ್ಯಾರ್ಥಿನಿ ಓದುತ್ತಿರುತ್ತಾಳೆ. ಅಲ್ಲಿಯ ಶಿಕ್ಷಕನೊಬ್ಬ ಆಕೆಗೆ ಮೈ ಕೈ ಮುಟ್ಟಿ ಕಿರುಕುಳ ಕೊಡ್ತಾನೆ .ಬೇರೆ ದಾರಿ ಇಲ್ಲದಾದಾಗ ಅವಳು ತನ್ನ ತಂದೆ ತಾಯಿಯಲ್ಲಿ ಹೇಳುತ್ತಾಳೆ .ಅವರು  ಆತನ ವಿರುದ್ಧ ದೂರು ನೀಡುತ್ತಾರೆ .ಆತ ಅವಳು ಓದಿ ಬರೆದು ಮಾಡದ್ದಕ್ಕೆ ಜೋರು ಮಾಡಿದ್ದಕ್ಕೆ ಹಾಗೆ ಹೇಳುತ್ತಿದ್ದಾಳೆ ಅಂತ ಹೇಳುತ್ತಾನೆ .ಮುಗಿಯಿತು ಅಲ್ಲಿಗೆ ಆತ ಹೇಳಿದ್ದೇ ಸರಿ !ಪರಿಣಾಮ ಆ ಬಡ ಹುಡುಗಿಯ ವಿದ್ಯಾಭ್ಯಾಸ ಅಲ್ಲಿಗೇ ನಿಂತು ಹೋಯಿತು ,ಅವಳದ್ದು ಮಾತ್ರ ಅಲ್ಲ ಅದೇ ಶಾಲೆಯಲ್ಲಿ ಓದುತ್ತಿದ್ದ ಅವಳ ತಮ್ಮ ತಂಗಿಯರದು ಕೂಡಾ .ಯಾರೊಬ್ಬರೂ ಅವಳು ಹೇಳಿದ್ದೇಕೆ ಸತ್ಯ ಇರಬಾರದೆಂದು ಒಂದು ಕ್ಷಣವೂ ಯೋಚಿಸಲಿಲ್ಲ !ಯಾಕೆಂದರೆ ಅವಳು ಹೆಣ್ಣು ,ಆ ಶಿಕ್ಷಕ ಗಂಡು !
ಇನ್ನೊಂದು  ಸರ್ಕಾರಿ ಸಂಸ್ಥೆಯ ಇಬ್ಬರಿಗೆ ಒಂದೇ ವರ್ಷದಲ್ಲಿ   ಅವರವರ ಸಾಧನೆಗಳಿಗಾಗಿ ಪ್ರಶಸ್ತಿ ಬಂದಿರುತ್ತದೆ .ಅವರಲ್ಲಿ ಒಬ್ಬರು ಮಹಿಳೆ ,ಇನ್ನೊಬ್ಬರು ಪುರುಷ .ಮಹಿಳೆಗೆ ಪ್ರಶಸ್ತಿ ಬಂದು ಒಂದೆರಡು ತಿಂಗಳ ನಂತರ ಅದೇ ರೀತಿಯ ಪ್ರಶಸ್ತಿ ಪುರುಷನಿಗೆ ಬಂತು .ಮಹಿಳೆಗೆ ಬಂದಾಗ ಬಾಯಲ್ಲಿ ಕೂಡ ಅಭಿನಂದನೆ ಹೇಳಲಿಲ್ಲ ,ಪುರುಷನಿಗೆ ಬಂದಾಗ ಭಾರೀ ಸನ್ಮಾನ ಸತ್ಕಾರಗಳು ನಡೆದವು ! ಈ ಬಗ್ಗೆ ಆ ಮಹಿಳೆ ಪ್ರಶ್ನಿಸಿದರೆ “ಗೌರವವನ್ನು ಕೇಳಿ ಪಡೆಯಲು ಆಗುವುದಿಲ್ಲ  ಅದು ನಮ್ಮಿಷ್ಟ ನೀವು ಯಾರು ನಮ್ಮನ್ನು ಕೇಳಲು ?ಹೇಳುವ ಅಹಂಕಾರದ ಉತ್ತರ ಕಾದಿರುತ್ತದೆ , ಸರಕಾರೀ ಸಂಸ್ಥೆಯಲ್ಲಿಯೇ ಕೆಲಸ ಮಾಡುವಲ್ಲಿ ಇಷ್ಟು ಲಿಂಗ ತಾರ ತಮ್ಯ ಇರುವಾಗ ಇನ್ನು ಖಾಸಗಿ ಸಂಸ್ಥೆಗಳ ಬಗ್ಗೆ ಹೇಳಲಿಕ್ಕೆ ಏನಿದೆ ?

ಇದೇ ತರ ಇನ್ನೊಂದು ಊರು ಅಲ್ಲೊಂದು ಹೊಸ ಖಾಸಗಿ  ಕಾಲೇಜು ಪ್ರಾರಂಭ ಆಯಿತು ,ಆರಂಭದ ದಿನಗಳಲ್ಲಿ ಉಪನ್ಯಾಸಕ /ಉಪನ್ಯಾಸಕಿಯರು ಬೇರೆ ಬೇರೆ ಶಾಲೆಗಳಿಗೆ ಹೋಗಿ ತಮ್ಮ ಕಾಲೇಜ್ ಬಗ್ಗೆ ತಿಳಿಸಿ ,ಬಹಳ ಪರಿಶ್ರಮ ಪಟ್ಟು ಒಳ್ಳೆಯ ಫಲಿತಾಂಶ ತಂದು ಕೊಟ್ಟರು ,ಕಾಲ ಕ್ರಮೇಣ ಆ ಕಾಲೇಜ್ ಗೆ ವಿದ್ಯಾರ್ಥಿಗಳ ಸಂಖ್ಯೆ ಏರಿತು .ಆರಂಭದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ,ಆದ್ದರಿಂದ ಎಲ್ಲರಿಗೂ ಕಡಿಮೆ ವೇತನ ಇತ್ತು .ವಿದ್ಯಾರ್ಥಿಗಳ ಸಂಖ್ಯೆ ಏರಿದಂತೆ ಪುರುಷ ಉಪನ್ಯಾಸಕರ ವೇತನ ಏರುತ್ತಾ ಸಾಗಿತು .ಉಪನ್ಯಾಸಕಿಯರ ವೇತನ ಇದ್ದಲ್ಲೇ ಇತ್ತು ! ಈ ತಾರತಮ್ಯದ ಬಗ್ಗೆ ನೊಂದ ಉಪನ್ಯಾಸಕಿಯೊಬ್ಬರು ಒಂದಿನ ಎಲ್ಲ ಬರೆದಿಟ್ಟು ಆತ್ಮ ಹತ್ಯೆಗೆ ಯತ್ನಿಸಿದರು !

ಇನ್ನೊಂದೆಡೆ ಓರ್ವ ಮಹಿಳೆ , ಗಂಡ,  ಒಂದು ಮಗು ಇರುವ ಪುಟ್ಟ ಸಂಸಾರಅವರದು  .ಅವರಿಗೊಂದು  ಮನೆ ಮತ್ತು ಸ್ವಲ್ಪ ಜಾಗ ಇತ್ತು .ಬದುಕುವುದಕ್ಕೊಂದು ಉದ್ಯೋಗವೂ ಇತ್ತು .ಇವರ ಮನೆ ರಸ್ತೆಗೆ ಹೊಂದಿಕೊಂಡಂತಿತ್ತು, ಈ ಜಾಗದ ಮೇಲೆ ಒಬ್ಬ ಮರಿ ಪುಡಾರಿಯ ಕಣ್ಣು ಬಿತ್ತು .ಅದರ ಪಕ್ಕದ ಜಾಗವನ್ನಾತ ಖರೀದಿಸಿದ್ದ .ಇವರ ಮನೆ ಜಾಗವನ್ನು ನಂಗೆ ಕೊಡಿ ಖರೀದಿಸುತ್ತೇನೆ ಎಂದು ಹೇಳಿದ ,ಇವರು ಮಾರಲು ಒಪ್ಪಲಿಲ್ಲ !ಆಗ ಆತ ಇವರ ಮನೆ ಇರುವ ಜಾಗ ತನ್ನದು ಅಂತ ಸುಮ್ಮನೇ ಇವರ ಮೇಲೆ ಕೇಸು ಹಾಕಿ ಸತಾಯಿಸಲು ಆರಂಭಿಸಿದ .ಅದಕ್ಕೂ ಇವರು ಕ್ಯಾರೆ ಅನ್ನಲಿಲ್ಲ ಒಳ್ಳೆಯ ವಕೀಲರನ್ನು ಗೊತ್ತು ಮಾಡಿ ಹೋರಾಟ ಮಾಡಿದರು !ಇವರು ಸುಲಭಕ್ಕೆ ಬಗ್ಗುವವರಲ್ಲ ಅಂತ ಬೇರೆ ರೀತಿಯ ಕಿತಾಪತಿ ಶುರು ಮಾಡ ಹತ್ತಿದ , ಆ ಮಹಿಳೆ  ಮನೆಯಿಂದ ಹೊರ ಕಾಲಿಟ್ಟ ತಕ್ಷಣ ಕಾಡು ಕುಳಿತು ಮೈ ಕೈ ಸವರಿಕೊಂಡು ಹೋಗುವುದು ,ಅವಳಿಗೂ ತನಗೂ ಸಂಬಂಧ ಇದೆ ಎಂದು ಹೇಳುವುದು ಮಾಡ ತೊಡಗಿದ . ಈ ಬಗ್ಗೆ ಮಹಿಳೆ  ದೂರು ನೀಡಿದರು ,ಆದರೆ ಆತ ಹೇಳಿದ ಜಾಗದ ವಿಷಯದಲ್ಲಿ ಅವರ ಮೇಲೆ ಕೇಸ್ ಹಾಕಿದ್ದೇನೆ ,ಅದಕ್ಕೆ ಹಾಗೆ ದೂರು ನೀಡಿದ್ದಾರೆ ಎಂದ .ಜನ ಆತನನ್ನೇ ನಂಬಿದರು ,ಬೆಂಬಲಿಸಿದರು !ಕೆಲವರು ಸತ್ಯ ಗೊತ್ತಿರುವವರೂ ನಮಗೇಕೆ ಅಂತ ಸುಮ್ಮನಾದರು ,ಪರಿಣಾಮ ಘೋರವಾದುದು ! ಆ ಸಾತ್ವಿಕ ದಂಪತಿಗಳು ವಿಷ ಸೇವನೆ ಮಾಡಿ ಆತ್ಮ ಹತ್ಯೆ ಮಾಡಿ ಕೊಂಡರು!ಅವರ ಮಗು ಅನಾಥವಾಯಿತು !ಒಂದು ಕ್ಷಣ ಆ ಮಹಿಳೆ ಹೇಳುವುದೂ ಸತ್ಯವಿರ ಬಹುದೆಂದು ಯೋಚಿಸಿದ್ದರೆ ,ಆತ ಕೇಸ್ ಹಾಕಿರುವುದೂ ಸತಾಯಿಸುವ ಸಲುವಾಗಿಯೇ  ಎಂದು  ಗೊತ್ತಾಗುತ್ತಿತ್ತು !ಒಂದಿನಿತು ಬೆಂಬಲ ಸಿಕ್ಕಿದ್ದರೆ ಅವರು ಚೆನ್ನಾಗಿ ಬದುಕಿ ಬಾಳುತ್ತಿದ್ದರು ಅವರು !
ಇಂತಹ ಅನೇಕ ಸುದ್ಧಿಗಳನ್ನು ನಾವು ದಿನ ನಿತ್ಯ ಕೇಳುತ್ತೇವೆ.ನೋಡುತ್ತೇವೆ ,ನೋಡಿಯೂ ಸುಮ್ಮನಾಗುತ್ತೇವೆ !ಇವೆಲ್ಲ ಬೇರೆಯವರಿಗೆ ಸಣ್ಣ ಪುಟ್ಟ ವಿಷಯಗಳು. ಆದರೆ ಲಿಂಗ ತಾರತಮ್ಯ ಎದುರಿಸಿ ಅವಹೆಳನಕ್ಕೆ ಒಳಗಾದವರ ಪಾಲಿಗೆ ಇವು ಬದುಕನ್ನೇ ನುಂಗುವಷ್ಟು ಬಲವಾಗಿರುತ್ತವೆ. ಅನೇಕ ಸಂದರ್ಭಗಳಲ್ಲ್ಲಿ ಅತ್ಯಾಚಾರ ಎಸಗಿದ ವ್ಯಕ್ತಿ ಅದಕ್ಕೂ ಮೊದಲು ಬೇರೆವರ ಅತ್ಯಾಚಾರಕ್ಕೆ ಯತ್ನಿಸಿರುವುದು ,ಲೈಂಗಿಕ ಕಿರುಕುಳ ನೀಡಿರುವುದು ತಿಳಿದು ಬರುತ್ತದೆ .ಅಲ್ಲೇ ಅವರಿಗೆ ಸರಿಯಾದ ಶಿಕ್ಷೆ ಆಗುತ್ತಿದ್ದರೆ ಅವರು ಅಷ್ಟು ಮುಂದುವರಿಯುತ್ತಿರಲಿಲ್ಲ ಎಂಬುದು ಗಮನಾರ್ಹವಾದದ್ದು  . ಹಾಡು  ಹಗಲೇ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ ಕೊಂದು ಬಿಸಾಕುವ ವರೆಗೂ  ಯಾರೂ ಆ ಬಗ್ಗೆ ಸುದ್ಧಿ ಚಕಾರ ಎತ್ತುವುದಿಲ್ಲ. ಆ ಬಗ್ಗೆ ಮಹಿಳೆ ದೂರು ಏನಾದರೂ ಕೊಟ್ಟರೆ ಅವಳನ್ನೇ ಸಂಶಯದ ದೃಷ್ಟಿಯಿಂದ ನೋಡುತ್ತಾರೆ!ಒಂದಿನಿತಾದರೂ ಅನುಕಂಪ ಒಳ್ಳೆಯ ಮಾತುಗಳು ಬರಬೇಕಾದರೆ ಅವಳು ಸಾಯಲೇ ಬೇಕು !ಎನ್ನುವುದು ನಮ್ಮ ಸಮಾಜದ ದುರಂತ.
“.ಎಷ್ಟೋ ಜನರಿಗೆ ಹೆಂಗಸರಿಗೆ ಆ ಬಗ್ಗೆ ಮಾತನಾಡುವುದೇ ತಮ್ಮ ಘನತೆಗೆ ಕುಂದು ಬರುವ ವಿಚಾರ” ಎಂಬುದನ್ನು ನಾವು  ಅನೇಕ ಬಾರಿ ಗಮನಿಸುತ್ತೇವೆ . ಅದಕ್ಕೆ ಹೆಣ್ಣು ಮಕ್ಕಳ ವೇಷ ಭೂಷಣ ,ಹೊರಗೆ ಓಡಾಡುವುದೇ ಕಾರಣಗಳನ್ನು ಹೇಳಿ ಅದಕ್ಕೆ ಹೆಣ್ಣು ಮಕ್ಕಳೇ ಕಾರಣ ಎಂಬಂತೆ ಮಾತಾಡುತ್ತಾರೆ. ಹಾಗಿರುವಾಗ  ಅನುಭವಿಸುವ ಹೆಣ್ಣು ಮಕ್ಕಳ ಪಾಲಿಗೆ ಬೆಟ್ಟವಾಗಿ  ಕಾಡುವ ಸಣ್ಣ ಪುಟ್ಟ ವಿಚಾರಗಳ ಬಗ್ಗೆ ತಲೆ ಕೆಡಿಸುವರು ಯಾರಿದ್ದಾರೆ ?ಆದರೆ ಯಾರೂ ಇಂಥ ವಿಚಾರಗಳ ಬಗ್ಗೆ ಅನ್ಯಾಯಗಳ ಬಗ್ಗೆ ಪ್ರಶ್ನಿಸದೇ ಇರುವುದರಿಂದ ಇಂಥವೇ ಸಣ್ಣ ಪುಟ್ಟ ವಿಷಯಗಳು ಬೆಟ್ಟದಂತೆ ಬೆಳೆದು ಅನೇಕ ಹೆಣ್ಣು ಮಕ್ಕಳ  ಬದುಕನ್ನು ನುಂಗಿ ಹಾಕುತ್ತವೆ ,ಅವು ನಮ್ಮ ಮನೆಯ ಮಗಳು ,ತಾಯಿ ಹೆಂಡತಿ ಅಕ್ಕ ತಂಗಿಯರನ್ನೂ ಕೂಡಾ ನುಂಗ ಬಹುದು ಎನ್ನುವುದನ್ನು ಎಲ್ಲರೂ ನೆನಪಿನಲ್ಲಿಟ್ಟು ಕೊಳ್ಳ ಬೇಕಾಗಿದೆ

Wednesday 2 April 2014

ಸಾವಿರದೊಂದು ಗುರಿಯೆಡೆಗೆ :34 ಉಳ್ಳಾಯ -ಡಾ.ಲಕ್ಷ್ಮೀ ಜಿ ಪ್ರಸಾದ

ಉಳ್ಳಾಯ ಎಂದರೆ ಒಡೆಯ ಎಂದರ್ಥ ,ಸಾಮಾನ್ಯವಾಗಿ ಅರಸು ಬಲ್ಲಾಳರನ್ನು ಯಜಮಾನನನ್ನು ಉಳ್ಳಾಯ ಎಂದೇ ಕರೆಯುತ್ತಿದ್ದರು .
ಉಳ್ಳಾಯ /ಉಲ್ಲಾಕುಳು ತುಳುನಾಡಿನ ಪ್ರಸಿದ್ಧ ದೈವತ .ಉಳ್ಳಾಲ್ತಿ ಎಂಬ ಒಂದು ಹೆಸರಿನಲ್ಲಿ ಅನೇಕ ದೈವತಗಳಿಗೆ ಆರಾಧನೆ ಇರುವಂತೆ ಉಳ್ಳಾಯ /ಉಲ್ಲಾಕುಳು ಎಂಬ ಒಂದೇ ಹೆಸರಿನಲ್ಲಿ ಅನೇಕ ಶಕ್ತಿಗಳ ಆರಾಧನೆ ಇರುವ ಸಾಧ್ಯತೆ ಇದೆ .ಉಳ್ಳಾಲ್ತಿ ಬಗ್ಗೆ ಡಾ.ಕಿಶೋರ್ ರೈ ಶೇಣಿಯವರು ಸಂಶೋಧನಾ ಅಧ್ಯಯನ ಮಾಡಿರುವುದರಿಂದ ಉಳ್ಳಾಲ್ತಿ ಕುರಿತಾದ ಅಂಕ ವಿಚಾರಗಳು ತಿಳಿದು ಬಂದಿವೆcopy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ಉಲ್ಲಾಕುಳು ಬಗ್ಗೆ ಡಾ.ಪೂವಪ್ಪ ಕಣಿಯೂರು ಅಧ್ಯಯನ ಮಾಡಿದ್ದಾರಾದರೂ ಆ ಕೃತಿ ಇನ್ನು ಪ್ರಕಟವಾಗಿಲ್ಲ .ಹಾಗಾಗಿ ಉಲ್ಲಕುಳು ಸಂಬಂಧಿ ಭಿನ್ನ ಭಿನ್ನ ಐತಿಹ್ಯ ಪಾದ್ದನಗಳ ಕಥೆಗಳು ಇನ್ನೂ ಲಭ್ಯವಾಗಿಲ್ಲ
ಸಾಮಾನ್ಯವಾಗಿ ಕಿನ್ನಿ ಮಾಣಿ ಪೂಮಾಣಿಯರನ್ನೇ ಉಲ್ಲಾಕುಳು ಎಂದು ಕರೆಯುತ್ತಾರೆ .

ಇವರು ಅವಳಿದೈವಗಳೆಂದು ಭಾವಿಸಲಾಗಿದೆ. ಪೂಮಾಣಿ ಎಂದರೆ ರಾಮನ ಅಂಶವೆಂದೂ ಕಿನ್ನಿಮಾಣಿ ಲಕ್ಷ್ಮಣನ ಅಂಶವೆಂದೂ ಪರಿಭಾವಿಸುತ್ತಾರೆ. ಈ ಎರಡು ದೈವಗಳನ್ನು ಕರಿಯ ಸಂಕಪಾಲ ಮತ್ತು ಬಿಳಿಯ ಸಂಕಪಾಲರೆಂಬ ನಾಗರಾಜರುಗಳೆಂದೂ ಹೇಳುತ್ತಾರೆ. ಇನ್ನು ಕೆಲವರು ಧೂಮಾವತಿ ಮತ್ತು ದುರ್ಗೆಯರೆಂದೂ ಭಾವಿಸುತ್ತಾರೆ. ಈ ಅರಸು ದೈವಗಳ ವಾಹನ ಕುದುರೆ ಮತ್ತು ಕಾಡುಹಂದಿ. ಇವರ ಆಯುಧ ಬಿಲ್ಲುಬಾಣಗಳು.copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ಕಿನ್ನಿಮಾಣಿ ಪೂಮಾಣಿಯರನ್ನು ಉಲ್ಲಾಕುಳು ಎಂದೂ, ಉಲ್ಲಾಯ ಎಂದು ಕರೆಯುತ್ತಾರೆ.  ಸಾಮಾನ್ಯವಾಗಿ ಬ್ರಹ್ಮಗುಡಿಯ ಬಲಭಾಗದಲ್ಲಿ ಉಲ್ಲಾಯನ ಮಾಡ ಇರುತ್ತದೆ. ಕಂಡೇವು ಬೀಡಿನ ಉಲ್ಲಾಯ ಬಿಲ್ಲು ಬಾಣವನ್ನು ಹಿಡಿದ ದೈವ. ಇಲ್ಲಿ ಈತನ ಲಿಂಗರೂಪವು ಸಮುದ್ರದಲ್ಲಿ ಬಿಲ್ಲು ಬಾಣಗಳೊಂದಿಗೆ ತೇಲಿಬಂದು ಉದ್ಭವವಾಯಿತು ಎಂಬ ಐತಿಹ್ಯವಿದೆ. ಕವತ್ತಾರು ಆಲಡೆಯಲ್ಲಿ ಬ್ರಹ್ಮಲಿಂಗೇಶ್ವರನ ಬಲಬದಿಯಲ್ಲಿ ಉಲ್ಲಾಯನ ಉದ್ಭವ ಕಂಬವಿದೆ. ಪುರಾತನ ಬ್ರಹ್ಮಸ್ಥಾನಗಳೊಂದಿಗೆ ಉಲ್ಲಾಕುಳುಗಳಿಗೆ ಮಾಡ ಇದ್ದುದು ತಿಳಿದುಬರುತ್ತದೆ. ಕೆಮ್ಮಲೆಯ ಆದಿಬ್ರಹ್ಮರ ಮಾಡದ ಸಮೀಪದಲ್ಲಿಯೇ ಉಲ್ಲಾಕುಳು ಮಾಡ ಇದೆ.copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ಉಲ್ಲಾಕುಳು ದೈವಗಳ ಬಗ್ಗೆ ಅಲೌಕಿಕ ಕಥೆಯೊಂದು ಹೀಗಿದೆ: ವಿಷ್ಣು ಸಂಕಲ್ಪದಂತೆ ಕಮಲದ ಹೂವಿನ ಎಸಳಿನಲ್ಲಿ ಸೃಷ್ಟಿಯಾಗಿ ತಲಕಾವೇರಿ ಅರ್ಚಕರಿಗೆ ಸಿಗುತ್ತಾರೆ ಎರಡು ಗಂಡು, ಒಂದು ಹೆಣ್ಣು ಮಗು, ಪೂಮಾಣಿ, ಕಿನ್ನಿಮಾಣಿ, ದೈಯಾರು. ಈ ಮೂವರು ಘಟ್ಟದಿಂದ ಇಳಿದುತುಳುನಾಡಿಗೆ ಬರುತ್ತಾರೆ. copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ ಕುಮಾರ ಪರ್ವತದ ಪಶ್ಚಿಮ ದಿಕ್ಕಿನಲ್ಲಿ ಸುಬ್ರಹ್ಮಣ್ಯಕ್ಷೇತ್ರದ ಧ್ವಜ ಅವರಿಗೆ ಕಾಣಿಸುತ್ತದೆ. ಬಿಲ್ಲು ಬಾಣಧಾರಿಗಳೆನಿಸಿದ ಉಲ್ಲಾಕುಳು ಬಾಣ ಬಿಟ್ಟು ಸುಬ್ರಹ್ಮಣ್ಯ ಧ್ವಜವನ್ನು ತುಂಡರಿಸುತ್ತಾರೆ. ಆಗ ಸುಬ್ರಹ್ಮಣ್ಯ ಕೋಪಗೊಂಡು ಯುದ್ಧಕ್ಕೆ ಬರುತ್ತಾನೆ. ಘೋರಯುದ್ಧದಲ್ಲಿ ಸುಬ್ರಹ್ಮಣ್ಯ ಸೋಲುತ್ತಾನೆ. ಸುಬ್ರಹ್ಮಣ್ಯನ ಮೇಲೆ ಪ್ರಯೋಗಿಸಲೆಂದು ಒಂದು ಕಲ್ಲನ್ನು ಉಲ್ಲಾಕುಳು ಎತ್ತಿ ಹಿಡಿಯುತ್ತಾರೆ. ಆಗ ಶಿವಪಾರ್ವತಿಯರು ಬಂದು ಅವರನ್ನು ಸಮಾಧಾನಪಡಿಸುತ್ತಾರೆ. ಧ್ವಜವನ್ನು ತುಂಡರಿಸಿರುವುದು ಉಲ್ಲಾಕುಳುಗಳ ತಪ್ಪು. ಆದ್ದರಿಂದ ಅವರು ಮಾಡಿದ ತಪ್ಪಿಗೆ ಹದಿನಾರು ಕೈಯ ಕೊಪ್ಪರಿಗೆಯನ್ನು ಅನ್ನದಾನಕ್ಕೋಸ್ಕರ ಒಪ್ಪಿಸುತ್ತಾರೆ. ಅವರ ತಂಗಿ ದೈಯಾರು (ಹೊಸಳಿಗಮ್ಮನಾಗಿ) ಸುಬ್ರಹ್ಮಣ್ಯದಲ್ಲಿ ನೆಲೆ ನಿಲ್ಲುತ್ತಾಳೆ. ಕತ್ತರಿಸಲ್ಪಟ್ಟ ಧ್ವಜ ಕುಕ್ಕಂದೂರು ಎಂಬಲ್ಲಿ ಬೀಳುತ್ತದೆ. ಮುಂದೆ ಯಬರಡದಲ್ಲಿ ಮೆಟ್ಟುಗಲ್ಲು ಏರಿದ ವೀರರು ದೀವಟಿಗೆ ಎಂಬಲ್ಲಿ ನೆಲೆಯಾಗುತ್ತಾರೆ.copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ಕುಮಾರ ಪರ್ವತದಲ್ಲಿ ಸುಬ್ರಹ್ಮಣ್ಯನಿಗೆ ಹೊಡೆಯಲು ಎತ್ತಿದ ಕಲ್ಲು ಕಿನ್ನಿಮಾಣಿಯ ಕಂಕುಳದಲ್ಲಿ ಉಳಿದಿತ್ತು. ಉಲ್ಲಾಕುಳುಗಳು ಸುಬ್ರಹ್ಮಣ್ಯದಿಂದ ಎಣ್ಮೂರಿಗೆ ಬಂದಾಗ ಈಗಿನ ‘ನಿಂತಿಗಲ್ಲು’ ಪ್ರದೇಶ ಪ್ರಶಾಂತವಾಗಿ ಕಂಡು ಆ ಕಲ್ಲನ್ನು ಗೋಳಿಮರದ ಬುಡದಲ್ಲಿ ಇಟ್ಟು ಸುತ್ತ ಕಣ್ಣು ಹಾಯಿಸಿದರು. ಇಲ್ಲಿ ಉಲ್ಲಾಕುಳು ನಿಂತು ಕಲ್ಲನ್ನು ಇಟ್ಟ ಕಾರಣದಿಂದ ಈ ಪ್ರದೇಶಕ್ಕೆ ನಿಂತಿಕಲ್ಲು ಎಂಬ ಹೆಸರು ಬಂತು. ಈ ಪ್ರದೇಶದ ಸಮೀಪದಲ್ಲಿ ಬಸಲೆತಡ್ಕದಲ್ಲಿ ಸತ್ಯಧರ್ಮದಲ್ಲಿ ಬಾಳುತ್ತಿದ್ದ ಒಂದು ಗೌಡರ ಮನೆ ಇತ್ತು. ಉಲ್ಲಾಕುಳು ಇಲ್ಲಿಗೆ ಬ್ರಾಹ್ಮಣ ಕುಮಾರರಂತೆ ಬರುತ್ತಾರೆ. ಗೌಡರು ಬ್ರಾಹ್ಮಣ ಕುಮಾರರನ್ನು ಆದರದಿಂದ copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ ಬರಮಾಡಿಕೊಂಡು, ಅವರ ಕೇಳಿಕೆಯಂತೆ ಒಂದು ದಿನದ ಮಟ್ಟಿಗೆ ಉಳಿದುಕೊಳ್ಳಲು ಆಸರೆ ನೀಡಿದರು. ಗೌಡರು ತನ್ನ ಮನೆಯ ಮಾಳಿಗೆಯನ್ನು ನೀಡಿ, ಎಳನೀರು, ಬಾಳೆಹಣ್ಣು, ಹಾಲು ಕೊಟ್ಟು ಸತ್ಕರಿಸಿದರು. ಹಾಲು ಹಣ್ಣು ಸೇವಿಸಿ, ವಿಶ್ರಮಿಸಿದ ಬ್ರಾಹ್ಮಣಕುಮಾರರು ಮರುದಿನ ನೋಡುವಾಗ ಕಾಣುವುದಿಲ್ಲ. ಅವರು ವಿಶ್ರಮಿಸಿದಲ್ಲಿ ಮೂರ್ಲೆಗಳು (ಮಣ್ಣಿನ ಮಡಿಕೆಗಳು) ಕಂಡುಬಂದವು. ಗೌಡರು ಆಶ್ಚರ್ಯಗೊಂಡು ಎಣ್ಮೂರು ಬಲ್ಲಾಳರ ಬೀಡಿನ ಅರಸರಿಗೆ ಈ ವಿಷಯ ತಿಳಿಸುತ್ತಾರೆ. ಕೊನೆಗೆ ಪ್ರಶ್ನೆಯಲ್ಲಿ ಅಲ್ಲಿ ಉಲ್ಲಾಕುಲು ನೆಲೆಯಾದುದು ತಿಳಿದುಬರುತ್ತದೆ. ಬಸಲೆತಡ್ಕದ ಗೌಡರ ಮನೆಯಲ್ಲಿ ಮೊದಲಿಗೆ ಉಲ್ಲಾಕುಳು ನೆಲೆಯಾದ ಕಾರಣ ಆ ಮನೆಯನ್ನು ಆರಂಭದ ಮನೆ ಎಂದೂ, ಆರೆಂಬಿ ಎಂದೂ ಕರೆಯುತ್ತಾರೆ.copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ಡಿ.ಜಿ. ನಡ್ಯ ಅವರು ಉಲ್ಲಾಕುಳು ದೈವಗಳ ಮೂಲವನ್ನು ಗಂಗರ ವಂಶಕ್ಕೆ ಅನ್ವಯಿಸಿ ಹೇಳುತ್ತಾರೆ. ಗಂಗವಂಶದಲ್ಲಿ ಕಂಪ ಮಹೀಪತಿ ಎಂಬುವನ ಮಗ ಪದ್ಮನಾಭ. ಅವನಿಗೆ ದೀರ್ಘಕಾಲ ಮಕ್ಕಳಲಿಲ್ಲದಿರಲು, ಪದ್ಮಪ್ರಭಾ ಎಂಬ ಶಾಸನ ದೇವತೆಯನ್ನು ಪೂಜಿಸಲು, ಅವಳ ಕೃಪೆಯಿಂದ ರಾಮ-ಲಕ್ಷ್ಮಣರೆಂಬ ಇಬ್ಬರು ಅವಳಿಮಕ್ಕಳು ಹುಟ್ಟುತ್ತಾರೆ. ಪದ್ಮನಾಭನ ರಾಜ್ಯದ ಮೇಲೆ ಉಜ್ಜಯನಿಯ ಅರಸ ಮಹೀಪಾಲ ದಂಡೆತ್ತಿ ಬಂದಾಗ, ಪದ್ಮನಾಭನು ತನ್ನ ಆಪ್ತರಲ್ಲಿ ಸಮಾಲೋಚನೆ ನಡೆಸಿ, ತನ್ನ ಮಕ್ಕಳ ಹೆಸರನ್ನು ದಡಿಗ, ಮಾಧವರೆಂದು ಬದಲಾಯಿಸಿ ದಕ್ಷಿಣಕ್ಕೆ ಕಳುಹಿಸಿಕೊಡುತ್ತಾನೆ. ಸೋದರಿ ಆಲಬ್ಬೆ ಹಾಗೂ 48 ಮಂದಿ ಬ್ರಾಹ್ಮಣರೊಂದಿಗೆ ರಾಜಕುಮಾರರುಪ್ರಯಾಣ ಮಾಡುತ್ತಾರೆ. ಈ ದಡಿಗ, ಮಾಧವರೇ ತಲಕಾಡಿನ ಪಶ್ಚಿಮ ಗಂಗ ರಾಜ್ಯ ಸ್ಥಾಪಕರು. ಜೈನ ಆಚಾರ್ಯ ಗುಣನಂದಿ ಹಾಗೂ ಪದ್ಮಾವತೀ ದೇವಿಯ ದಯೆಯಿಂದ ದಡಿಗ ಮಾಧವರು ಗಂಗವಾಡಿ ತೊಂಬತ್ತು ಸಾಸಿರಂ ಎಂಬ ರಾಜ್ಯವನ್ನು ಕಟ್ಟುತ್ತಾರೆ. ದಡಿಗ ಮಾಧವರನ್ನು ಇಕ್ಷ್ವಾಕು ವಂಶದ ರಾಜಕುಮಾರರೆಂದೂ, ಕ್ರಿ.ಶ.ನಾಲ್ಕನೆಯ ಶತಮಾನಕ್ಕೆ ಸೇರಿದವರೆಂದೂ ಮುಂದೆ ಇವರೇ ಉಲ್ಲಾಕುಳು ದೈವಗಳಾಗಿ ನೆಲೆಗೊಂಡಿದ್ದಾರೆ ಎಂದು ಡಿ.ಜಿ. ನಡ್ಕ ಹೇಳಿದ್ದಾರೆ.copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ
ಕಿನ್ನಿಮಾಣಿ ಪೂಮಾಣಿಯರನ್ನು ಆದಿಶೇಷ, ವಿಷ್ಣುವೆಂದು ನಾಗ-ಬೆರ್ಮೆರ್ ಎಂದೂ ಪರಿಗಣಿಸುತ್ತಾರೆ. ಬೆರ್ಮೆರ್ ಹಾಗೂ ಉಳ್ಳಾಯ-ಉಲ್ಲಾಕುಳುಗಳಿಗೆ ಅನೇಕ ವಿಷಯಗಳಲ್ಲಿ ತಾದಾತ್ಮ್ಯವಿದೆ. ಬೆರ್ಮೆರಂತೆ ಉಳ್ಳಾಯ ಕೂಡ ಕುದುರೆಯ ಮೇಲೆ ಕುಳಿತ ದೈವ ಬೆರ್ಮೆರಂತೆ ಉಲ್ಲಾಕುಳುಗಳ ಆಯುಧ ಕೂಡ ಬಿಲ್ಲುಬಾಣಗಳೇ ಆಗಿವೆ. ಪೂಕರೆಯ ಸಂದರ್ಭದಲ್ಲಿ ಕಟ್ಟುವ ನಾಗಮುಡಿಗಳು ಉಲ್ಲಾಕುಳುಗಳಿಗೆ ಸಂದಾಯವಾಗುತ್ತವೆ ಎಂದು ನಲಿಕೆಯವರು ಹೇಳುತ್ತಾರೆ.
ಪೂಮಾಣಿ-ಕಿನ್ನಿಮಾಣಿಗಳನ್ನು ಉಳ್ಳಾಕುಲು ಎಂದೂ ಅರಸು ದೈವಗಳೆಂದೂ ಹೇಳುತ್ತಾರೆ. ಈ ಅವಳಿದೈವಗಳನ್ನು ‘ಉಳ್ಳಾಯ’ ಎಂದೂ ಕರೆಯುತ್ತಾರೆ. ಬ್ರಹ್ಮ ಬಲವಂಡಿ ದೈವಸ್ಥಾನ, ಕವತ್ತಾರು ಆಲಡೆ, ಕಂಡೇವು ಬೀಡು ಮೊದಲಾದೆಡೆಗಳಲ್ಲಿ ಉಲ್ಲಾಕುಲುಗಳಿಗೆ ಆರಾಧನೆ ಇದೆ.copy rights reserved (c)ಡಾ.ಲಕ್ಷ್ಮೀ ಜಿ ಪ್ರಸಾದ


ಆದ್ರೆ ಇವರ ಆರಾಧನೆ ಇರುವಲ್ಲಿಯೇ ಉಳ್ಳಾಯ ನಿಗೆ ಬೇರೆಯೇ ನೇಮ ಇರುವುದುಂಟು .ಗುತ್ತಿಗಾರಿನಲ್ಲಿ ಉಲ್ಲಾಕುಳು ಅಲ್ಲದೆ ಕೋಡಂಚದ ಉಲ್ಲಾಕುಳು ಎಂಬ ಭೂತಕ್ಕೆ ಆರಾಧನೆ ಇದೆ .

ಬೆರ್ಮೆರ್ ಅನ್ನೂ ಉಲ್ಲಾಕುಳು ಎಂದು ಕರೆಯುತ್ತಾರೆ .(ಈ ಬಗ್ಗೆ ಮುಂದೆ ಬೆರ್ಮೆರ್ ಬಗ್ಗೆ ಬರೆಯುವಾಗ ಮಾಹಿತಿ ನೀಡಲಾಗುವುದು )

ಆಧಾರ :ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ: ಒಂದು ವಿಶ್ಲೇಷಣಾತ್ಮಕ ಅಧ್ಯಯನ




Tuesday 18 March 2014

ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು 27 ಮಂಗಳೂರಿನ ಅರಬ್ ಭೂತ © ಡಾ.ಲಕ್ಷ್ಮೀ ಜಿ ಪ್ರಸಾದ

                                   
                          ವಿಜಯ ಕರ್ನಾಟಕದಲ್ಲಿ ಇಂದು (18-03 -201 4 ) ರಂದು ಪ್ರಕಟವಾದ ನನ್ನ  ಲೇಖನ
ತುಳುವರ ಭೂತಾರಾಧನೆಯಲ್ಲಿ ಯಾವುದೇ ಜಾತಿ ಭೇದ  ಇರುವುದಿಲ್ಲ ಅಂತೆಯೇ ಧರ್ಮದ ಗಡಿ ಕೂಡಾ ಇದಕ್ಕಿಲ್ಲ .ಉಲ್ಲಾಳದಲ್ಲಿ ಭೂತ ಮಸೀದಿಗೆ ಭೇಟಿ ಕೊಡುವ ಸಂಪ್ರದಾಯ ಇದೆ. ಅದೇ ರೀತಿ ಕೆಲವೆಡೆ ಭೂತ ಮುಸ್ಲಿಂ ಕ್ರಿಸ್ಚಿ ಯನ್ ವ್ಯಕ್ತಿಗಳನ್ನು ಉದ್ದೇಶಿಸಿ ಕರೆದು ಗೌರವಿಸುವ ಪದ್ಧತಿ ಇದೆ .ತೋಕ್ಕೊಟು  ಸಮೀಪ ಭೂತ “ಅಂತಂತೋನಿ “ಎಂದು ಕರೆಯುವ ಬಗ್ಗೆ ಭೂತ ಕಟ್ಟುವ ಕಲಾವಿದರಾದ ಅಪ್ಪಣ್ಣ  ಅವರು ತಿಳಿಸಿದ್ದಾರ copy rights reserved  © ಡಾ.ಲಕ್ಷ್ಮೀ ಜಿ ಪ್ರಸಾದ
 ಅಂತೆಯೇ ತುಳುನಾಡಿನಲ್ಲಿ ದೈವತ್ವವನ್ನು ಪಡೆದವರೆಲ್ಲ ಹಿಂದುಗಳು, ತುಳುನಾಡಿನವರೇ ಆಗಬೇಕಿಲ್ಲ. .ತುಳುನಾಡಿನಲ್ಲಿ ದೈವತ್ವ ಪಡೆದು ಭೂತ ವಾಗಿ ಆರಾಧಿಸಲ್ಪಡುವುದು ಒಂದು ವಿಶಿಷ್ಟ ಸಂಸ್ಕೃತಿ .ಇಲ್ಲಿ ಭೂತತ್ವವನ್ನು ಪಡೆಯುವುದಕ್ಕೆ ಯಾವುದೇ  ದೇಶ ,ಜಾತಿ ಧರ್ಮದ ಮಿತಿ ಇಲ್ಲ.
 ಕೆಲವು ಹೊರದೇಶದ ಜನರೂ ಇಲ್ಲಿ ಬಂದು ದುರಂತವನ್ನಪ್ಪಿ ದೈವತ್ವಕ್ಕೇರಿ ಆರಾಧಿಸಲ್ಪಡುತ್ತಿದ್ದಾರೆ. ಅರಬ್ಬಿ ಭೂತ ಮತ್ತು ಚೀನೀ ಭೂತಗಳು ಅನ್ಯದೇಶೀಯ ಮೂಲದ ದೈವಗಳಾಗಿವೆ. . ಹೀಗೆ ನಾನಾ ಕಾರಣಗಳಿಂದ ಜೈನರು, ಮುಸ್ಲೀಮರು, ಕ್ರಿಶ್ಚಿಯನ್ನರು, ಅರಬಿಗಳು, ಚೀನಿ ವ್ಯಕ್ತಿಗಳು ಕೂಡ ದೈವತ್ವವನ್ನು ಪಡೆದಿದ್ದಾರೆ copy rights reserved  © ಡಾ.ಲಕ್ಷ್ಮೀ ಜಿ ಪ್ರಸಾದ
 ಭೂತಗಳಾದ ನಂತರ ಇವರು ಮೂಲತಃ ಯಾರಾಗಿದ್ದರು ಹೇಳುವ ವಿಚಾರ ಇಲ್ಲಿ ಬರುವುದೇ ಇಲ್ಲ! ಭೂತವಾದ ನಂತರ ಅವರು ನಮ್ಮನ್ನು ಕಾಯುವ ಶಕ್ತಿಗಳು. ಎಲ್ಲ ಭೂತಗಳು ಸಮಾನರು !.ಎಲ್ಲ ಭೂತಗಳಿಗೂ ಒಂದೇ ರೀತಿಯ ಭಕ್ತಿಯ ನೆಲೆಯಲ್ಲಿ ಆರಾಧನೆ ಇದೆ. ಇದು ನಮ್ಮ ತುಳು ಸಂಸ್ಕೃತಿಯ ವೈಶಿಷ್ಟ್ಯ ,



ತುಳು ನಾಡಿನಲ್ಲಿ ಯಾರಿಗೆ ಹೇಗೆ ಯಾವಾಗ ದೈವತ್ವ ಪ್ರಾಪ್ತಿಯಾಗುತ್ತದೆ ಹೇಳುವುದಕ್ಕೆ ಒಂದು ಸಿದ್ಧ ಸೂತ್ರವಾಗಲಿ ನಿಯಮವಾಗಲಿ ಏನೂ ಇಲ್ಲ .ದುರಂತವನ್ನಪ್ಪಿದ  ಅಸಹಾಯ ಶೂರರು ಮಾತ್ರ ಭೂತಗಳಾಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ .ಮನುಷ್ಯ ಮೂಲದಿಂದ ಭೂತ ಸ್ಥಿತಿಗೇರಿದವರು ಎಲ್ಲರೂ ಮೂಲತಃ ಸಾತ್ವಿಕರೂ, ಸದ್ಧರ್ಮಿಗಳೂ, ಸಾಧ್ವಿಗಳೂ, ಶೂರರೂ ಎನ್ನುವಂತಿಲ್ಲ. ಅಂಥಹ ಉದಾತ್ತ ಚರಿತರು ವಿರಳವಾಗಿ ಕೆಲವರಿರಬಹುದು. ವಿಶೇಷಗುಣಗಳಿಲ್ಲದ ತೀರಾ ಸಾಮಾನ್ಯರೂ ಬೇರೆಬೇರೆ ಕಾರಣಗಳಿಂದ ದೈವತ್ವವನ್ನು ಪಡೆದಿದ್ದಾರೆ. ಆಕಸ್ಮಿಕ ಮರಣಕ್ಕೆ ಗುರಿಯಾದವರು ದೈವಗಳ ಕಾರಣೀಕಗಳು ಸೇರಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾರೆ. copy rights reserved  © ಡಾ.ಲಕ್ಷ್ಮೀ ಜಿ ಪ್ರಸಾದ ಪ್ರಧಾನ ಭೂತ ಗಳಾದ ಉಲ್ಲಾಕುಳು ಶಿರಾಡಿ ,ಮಲರಾಯಿ ,ಬಬ್ಬರ್ಯ ,ಪಂಜುರ್ಲಿ ,ಮೊದಲಾದ ಭೂತ ಗಳ  ಅನುಗ್ರಹದಿಂದ ಅನೇಕರು ಸೇರಿಗೆ ದೈವಗಳಾಗಿದ್ದಾರೆ.ಅಂತೆಯೇ  ಈ ಭೂತ ಗಳ ಆಗ್ರಹಕ್ಕೆ ತುತ್ತಾಗಿಯೂ ಅನೇಕರಿಗೆ ದೈವತ್ವ ಲಭಿಸಿದೆ .ಮಲರಾಯಿ ದೈವದ ಕೋಪಕ್ಕೆ ತುತ್ತಾಗಿ ದೈವತ್ವ ಹೊಂದಿದ ಭೂತ ಅರಬ್ಬಿ ಭೂತ .

 ಮಂಗಳೂರಿನ ಉರ್ವ ಚಿಲಿಂಬಿಯ ಮಲರಾಯಿ ಧೂಮಾವತಿ ದೈವಸ್ಥಾನದಲ್ಲಿ ಪ್ರಧಾನ ದೈವ ಮಲರಾಯಿಯ ಸೇರಿಗೆಯ ದೈವವಾಗಿ ಅರಬ್ಬಿ ಭೂತ ಆರಾಧನೆ ಪಡೆಯುತ್ತಿದೆ . ಹೆಸರೇ ಸೂಚಿಸುವಂತೆ ಈ ದೈವತದ ಮೂಲ ಒಬ್ಬ ಅರಬ್ ವ್ಯಕ್ತಿ. ಈತನೊಬ್ಬ ಖರ್ಜೂರ ವ್ಯಾಪಾರಿ. ಒಂದು ದಿನ ಖರ್ಜೂರ ಮಾರಾಟ ಮಾಡಿಕೊಂಡು ಚಿಲಿಂಬಿಯ ಬಳಿಗೆ ಬರುತ್ತಾನೆ. ಅಲ್ಲಿ ಒಂದು ನೀರಿನ ಕಟ್ಟ ಇರುತ್ತದೆ. ಅಳಕೆ ಮೇಲ್ಮನೆಗೆ ಸೇರಿದ ಅವಿವಾಹಿತ ಹೆಣ್ಣು ಮಗಳು ತಿಂಗಳ ಸೂತಕ ಸ್ನಾನಕ್ಕೆ ಬಂದವಳು ಕಟ್ಟದ ನೀರಿಗಿಳಿದು ಸ್ನಾನ ಮಾಡುತ್ತಿರುತ್ತಾಳೆ. ಅವಳನ್ನು ನೋಡಿದ ಆ ಅರಬ್ ದೇಶದ ಖರ್ಜೂರ ವ್ಯಾಪಾರಿಯು ಅವಳಲ್ಲಿ ವ್ಯಾಮೋಹಗೊಂಡು ಅವಳ ಮೇಲೆ ಅತ್ಯಾಚಾರಕ್ಕೆ ಮಾಡಲು ಹೋಗುತ್ತಾನೆ. copy rights reserved  © ಡಾ.ಲಕ್ಷ್ಮೀ ಜಿ ಪ್ರಸಾದ ಆಗ ಅವಳು ತನ್ನ ಕುಲದೈವ ಮಲರಾಯಿ ಧೂಮಾವತಿಯಲ್ಲಿ ಮಾನರಕ್ಷಣೆ ಮಾಡುವಂತೆ ಕೇಳಿಕೊಳ್ಳುತ್ತಾಳೆ. ಆಗ ಮಲಾರಾಯಿ ಧೂಮಾವತಿ ದೈವ ಅವಳನ್ನು ಮಾಯ ಮಾಡಿ ಅವಳ ಮಾನರಕ್ಷಣೆ ಮಾಡಿದ್ದಲ್ಲದೆ ತನ್ನ ಸೇರಿಗೆ ದೈವವಾಗಿಸಿ ಆರಾಧನೆ ಹೊಂದುವಂತೆ ಮಾಡುತ್ತದೆ.ಅವಳು ಬ್ರಾಂದಿ (ಬ್ರಾಹ್ಮಣತಿ)ಭೂತವಾಗಿ ಅಲ್ಲಿ ಆರಾಧನೆ ಪಡೆಯುತ್ತಾಳೆ 
  .ಆ ಆರಬ್ ವ್ಯಾಪಾರಿಯನ್ನು ಶಿಕ್ಷಿಸುವ ಸಲುವಾಗಿ ಆತನನ್ನು ಮಾಯ ಮಾಡುತ್ತದೆ ಮಲರಾಯಿ ದೈವ . ದೈವದ ಆಗ್ರಹಕ್ಕೆ ತುತ್ತಾಗಿ ಮಾಯವಾದರೂ ದೈವದ ಸೇರಿಗೆಗೆ ಸೇರಿ ದೈವತ್ತ್ವ ಪಡೆಯುವುದು ತುಳುನಾಡಿನಲ್ಲಿ ಸಾಮಾನ್ಯವಾದ ವಿಚಾರವಾಗಿದೆ. ಅಂತೆಯೇ ಈ ಅರಬ್ ವ್ಯಾಪಾರಿ ಕೂಡ ದೈವತ್ತ್ವವನ್ನು ಪಡೆದು ಅರಬ್ಬಿ ಭೂತ ಎಂಬ ಹೆಸರಿನಲ್ಲಿ ಆರಾಧನೆ ಪಡೆಯುತ್ತಾನೆ. ಮಲರಾಯಿ ಧೂಮಾವತಿ ದೈವಸ್ಥಾನದಲ್ಲಿ ಅರಬ್ಬಿ ಭೂತದ ಕಲ್ಲು ಇದೆ. ಆ ಬ್ರಾಹ್ಮಣ ಹುಡುಗಿ ಸ್ನಾನ ಮಾಡಿದ ನೀರಿನ ಕಟ್ಟ ಈಗ ಕೂಡ ಅಲ್ಲ್ಲಿದೆ ಅವಳ ನೇವಳಡ ಗುರುತು ಎಂಬ ಒಂದು ಗೆರೆ ಅಲ್ಲಿನ ಪಾದೆಕಲ್ಲಿನ ಮೇಲೆ ಇದೆ .ಆ ಅರಬ್ ವ್ಯಾಪಾರಿಯ ಪಾದದ ಗುರುತು ಎಂದು ನಮ್ದಲಾಗುವ ಸಣ್ಣ ಸಣ್ಣ ಗುರುತುಗಳನ್ನ್ನು ಅಲ್ಲಿನ ಸ್ಥಳಿಯರು ತೋರುತ್ತಾರೆ
.              ಬ್ರಾಹ್ಮಣತಿ ಬೂತೋ ಚಿತ್ರ ಕೃಪೆ :ನಮ್ಮ ಸತ್ಯೊಲು
ಅರಬ್ಬಿ ಭೂತಕ್ಕೆ ಒಂದು ಕಲ್ಲು ಹಾಕಿ ಆರಾಧಿಸುತ್ತಾರೆ .ಬ್ರಾಹ್ಮಣತಿ (ಬ್ರಾಂದಿ )ಭೂತಕ್ಕೆ ಒಂದು ಕಟ್ಟೆ  ಇದೆ.ಆ ಕಟ್ಟೆ ಯ ಹತ್ತಿರ  ಈ ಭೂತಕ್ಕೆ ಕೋಲ ನೀಡಿ ಆರಾಧಿಸುತ್ತಾರೆ .ಮಲರಾಯಿ ಧೂಮಾವತಿ ದೈವದ ನೇಮಕ್ಕೆ ಮೊದಲು ಬ್ರಾಹ್ಮಣ ಕನ್ಯೆ(ಬ್ರಾಂದಿ ಭೂತ) ಮತ್ತು ಅರಬ್ಬಿ ಭೂತಕ್ಕೆ ನೇಮ ನೀಡುತ್ತಾರೆ. copy rights reserved  © ಡಾ.ಲಕ್ಷ್ಮೀ ಜಿ ಪ್ರಸಾದ ಅರಬ್ಬಿ ಭೂತವನ್ನು ಬಂಧಿಸಿ ಶಿಕ್ಷಿಸಿ ಮಾಯ ಮಾಡಿದ್ದರ ಸೂಚಕವಾಗಿ ಆತನಿಗೊಂದು ಬೆಳ್ಳಿಯ ಸರಿಗೆಯಬಂಧನ ಇರುತ್ತದೆ. ಅರಬ್ಬಿ ಭೂತಕ್ಕೆ ಒಂದು ಅರಬರ ಟೊಪ್ಪಿಗೆಯನ್ನು ಹೋಲುವ ಟೊಪ್ಪಿಗೆಯ(ಮುಂಡಾಸು ) ಅಲಂಕಾರ ಇರುತ್ತದೆ
.ವಾಸ್ತವಿಕ ನೆಲೆಯಿಂದ ಆಲೋಚಿಸುವುದಾದರೆ ಆ ಅರಬ್ ವ್ಯಾಪಾರಿಯಿಂದ ತಪ್ಪಿಸಿ ಕೊಳ್ಳುವುದಕ್ಕಾಗಿ ನೀರಿನಲ್ಲಿ ಮುಂದೆ ಮುಂದೆ ಸಾಗಿದ ಆ ಕನ್ಯೆ ದುರಂತವನ್ನಪ್ಪಿರಬಹುದು .ಅವಳನ್ನು ಹಿಂಬಾಲಿಸಿದ ಆ ಅರಬ್ ಖರ್ಜೂರ ವ್ಯಾಪಾರಿ ಕೂಡ ದುರಂತವನ್ನಪ್ಪ್ಪಿರಬಹುದು ಅಥವಾ ಆ ಹುಡುಗಿಯ ದುರಂತಕ್ಕೆ ಕಾರಣನಾದ ಅರಬ್ ವ್ಯಾಪಾರಿಯನ್ನು ಊರ ಜನರು ಸೇರಿ ಶಿಕ್ಷಿಸಿರಬಹುದು  .ಆಗ ಆತ ದುರಂತವನ್ನಪ್ಪಿರಬಹುದು .ಕಾಲಾಂತರದಲ್ಲಿ ಅವರಿಬ್ಬರೂ ದೈವತ್ವವನ್ನು ಪಡೆದು ಆರಾಧಿಸಲ್ಪಟ್ಟಿರಬೇಕು copy rights reserved  © ಡಾ.ಲಕ್ಷ್ಮೀ ಜಿ ಪ್ರಸಾದ

                                                   ಅರಬ್ಬಿ ಭೂತ (ಹಳೆಯ ಫೋಟೋ )

Monday 10 March 2014

ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು -18 ಅರಮನೆ ಜಟ್ಟಿಗ © ಡಾ.ಲಕ್ಷ್ಮೀ ಜಿ ಪ್ರಸಾದ

                         
© copy rights reserved

ಸುಳ್ಯ ,ಪುತ್ತೂರು ,ಕಾರ್ಕಳ ಉಡುಪಿ ಸರಿದಂತೆ ತುಳುನಾಡಿನಾದ್ಯಂತ ಜಟ್ಟಿ ಭೂತಕ್ಕೆ ಆರಾಧನೆ ಇದೆ .ಅರಮನೆ ಜಟ್ಟಿಗ ,ಕೋಟೆ ಜಟ್ಟಿಗ ,ಬೂಡು ಜಟ್ಟಿಗ ಇತ್ಯಾದಿ ಅನೇಕ ಹೆಸರುಗಳಿವೆ.ಇವೆಲ್ಲ ಒಂದೇ ದೈವ ಜತಿಗನ ಬೇರೆ ಬೇರೆ ಹೆಸರುಗಳೋ ಅಥವಾ ಬೇರೆ ಬೇರೆ ದೈವತಗಳೋ ಎಂಬ ಬಗ್ಗೆ ಇದಮಿಥ್ಹಂ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ .ಹೆಸರೇ ಸೂಚಿಸುವಂತೆ ಈತ ಮೂಲತಃ ಪೈಲ್ವಾನ ,ಕುಸ್ತಿ ಪಟು ಆಗಿರಬೇಕು
ವೀರ ಆರಾಧನೆ ಎಲ್ಲೆಡೆ ಕಂಡು ಬರುವ ವಿದ್ಯಮಾನ.ಹೊನ್ನಾವರ ,ಭಟ್ಕಳ ,ಗೇರುಸೊಪ್ಪೆ ಮೊದಲಾಡೆಗೆ ಜಟ್ಟಿಗನನ್ನು ಆರಾಧಿಸುತ್ತಾರೆ .ಈ ಬಗ್ಗೆ ಡಾ,ರಹಮತ್ ತರಿಕೆರೆ ಅವರು ಗೇರುಸೊಪ್ಪೆ ಬಸದಿಯ ಸಮೀಪವೇ ಬಯಲಿನಲ್ಲಿ ಇರುವ ಅನೇಕ ಜಟ್ಟಿಗನ ಕಲ್ಲುಗಳ ಬಗ್ಗೆ  " ಬುಡಕಟ್ಟು ಜನರಾದ ಗೊಂಡರ ದೈವಗಳು ಈ ಕಲ್ಲುಗಳು" ಎಂದು ಹೇಳಿದ್ದಾರೆ 

"ಗೇರುಸೋಪ್ಪೆಯನ್ನು ಆಳಿದ ಮೆಣಸಿನ ಚೆನ್ನ ಭೈರಾ ದೇವಿಯು ಅರಮನೆ ಕೋಟೆ ಗಳನ್ನು ಕಾಯಲು ದೂರದ ಆಂಧ್ರದ ಗೊಂಡ ಸಮುದಾಯದ ವೀರ ಜಟ್ಟಿಗಳನ್ನು ಕರೆಸಿದಳೆಂದು ಐತಿಹ್ಯವಿದೆ .ಕೋಟೆ ಜಟ್ಟಿ ,ಅರಮನೆ ಜಟ್ಟಿ ಹೆಸರುಗಳು ಇದ ನ್ನು  ದೃಡೀಕರಿಸುತ್ತವೆ.ಅರಮನೆಯ ಜಟ್ಟಿ ಅರಮನೆ ಕಾದವನು ಇರಬಹುದು ,ಕೋಟೆ ಕಾಯುವ ಜಟ್ಟಿ ಕೋಟೆ ಜಟ್ಟಿ ಇರಬಹುದು" ಎಂದು ರಹಮತ್ ತರಿಕೆರೆಯವರು ಅಭಿಪ್ರಾಯ ಪಟ್ಟಿದ್ದಾರೆ .

ಮೆಣಸಿನ ಯುದ್ಧದಲ್ಲಿ ಇವರೆಲ್ಲ ಸ್ವಾಮಿ ನಿಷ್ಠೆಯನ್ನು ಮೆರೆದು ಯುದ್ಧ ಮಾಡಿ ದುರಂತವನ್ನಪ್ಪಿರಬಹುದು .ಇವರ ಸಾಹಸ ಸ್ವಾಮಿ ನಿಷ್ಠೆ ಯಿಂದಾಗಿ ಇವರು ಜನ ಮಾನಸದಲ್ಲಿ ನಿಂತು ಆರಾಧನೆ ಪಡೆದಿರ ಬಹುದು .

ಹಗರಣ (ಒಂದು ದೃಶ್ಯ ಕಾವ್ಯ )ದ ಆರಂಭದಲ್ಲಿ ಜಟ್ಟಿಗರ ಪೂಜೆ ಮಾಡುವ ಸಂಪ್ರದಾಯವಿದೆ.

ಅಲ್ಲಿ ಆರಾಧಿಸಲ್ಪಡುವ ಜಟ್ಟಿಗರೇ ತುಳು ಪರಂಪರೆಯ ಜಟ್ಟಿ ದೈವವಾದರೆ ?ವೀರಾರಾಧನೆಯ ಪ್ರಸರಣ ಇಲ್ಲಿಯವರೆಗೆ ಹಬ್ಬಿ ಇಲ್ಲಿನ ಸಂಸ್ಕೃತಿಯಂತೆ ದೈವಗಳ ನೆಲೆಯಲ್ಲಿ ಆರಾಧಿಸಲ್ಪಟ್ಟಿರುವ ಸಾಧ್ಯತೆ ಇದೆ .

ಆದ್ರೆ ಇಲ್ಲಿ ಪ್ರಚಲಿತವಿರುವ ಐತಿಹ್ಯದ ಪ್ರಕಾರ ಜಟ್ಟಿ ಭೂತ ಮೂಲತಃ ಒಬ್ಬ ತಂತ್ರಿ .ಚೌಂಡಿ ಆರಾಧನೆಯನ್ನು ಮಾಡುವಾಗ ಓರ್ವ ತಂತ್ರಿ ದ್ರೋಹವನ್ನು ಮಾಡುತ್ತಾರೆ .ಆಗ ಕೋಪಗೊಂಡ ಚೌಂಡಿ /ಚಾಮುಂಡಿ ದೈವ ಆತನನ್ನು ಮಾಯ ಮಾಡಿ ಜಟ್ಟಿಗ ಎಂಬ ಹೆಸರಿನಲ್ಲಿ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತದೆ.

 ಈ ಬಗ್ಗೆ ಶಶಾಂಕ ನೆಲ್ಲಿತ್ತಾಯರು ನೀಡಿದ ಒಂದು ಮದಿಪಿನಲ್ಲೂ ಮಾಹಿತಿ ಇದೆ 
 
ಸ್ವಾಮಿ ಅಪ್ಪೆ ಚೌoಡಿ...........
ಆನಿದ ಕಾಲೋಡ್ ಗಟ್ಟದ ರಾಜ್ಯೋಡ್ ಬೀಮರಾಯೇ ತೋಟದ ಕಾರಂಬಡೆ ಮರತ ಮುದೆಲ್ ಪೊಟ್ಟು ಕಲ್ಲುಡ್ ನಿಲೆಯದ್ ಬೀಮರಾಯೇ ಚೌoಡಿ ಪಂಡುದ್ ಗೋಚರ ಮಲ್ಪಯಿ ದೈವದು ಉಲ್ಲ .
ಅನಿದ ಕಾಲೋಡ್ ನಿನನ್ ನಿಲೆ ಮಲ್ಪರೆ ಬತ್ತಿನ ತಂತ್ರಿಲು ಮೋಸ ಮಲ್ತೆರುಂದು ಪನ್ಪಿನೈಕದ್ ಅರೆನ್ ಮಾಯಾ ಮಲ್ತದು ಜಟ್ಟಿಗರಾಯೆ ಪನ್ಪಿನ ದೈವ ಸಗ್ತಿಯಾದ್ ನಿನ ಮರ್ಗಿಲ್ದ್ ನಂಬೊಂದು ಬರ್ಪಿಲೆಕ್ಕ ಮಲ್ತೊಂದು , ತುಳುನಾಡ ಪಂಚ ವರ್ಣದ ಪುಣ್ಯ ಬೂಮಿಡ್ ಬಡಕಾಯಿ ಅಂಕೋಲಾ ಗಡಿದುರ್ದ್ ತೆಂಕಾಯಿ ರಾಮೆಸರ ಗಡಿ ಮುಟ್ಟ ಜಾಗ್ ಜಾಗೆಡ್ ಸಂಚಾರೋಗ್ ಪಿದದೊಂಡ..

ಇಲ್ಲಿ ಚಾಮುಂಡಿ ದೈವದ ಆರಾಧನೆಯಲ್ಲಿ ದ್ರೋಹ ಮಾಡಿದ ತಂತ್ರಿ ಜಟ್ಟಿಯೂ ಆಗಿದ್ದನೇ?ಎಂಬ ಸಂದೇಹ ಉಂಟಾಗುತ್ತದೆ .ಚಾಮುಂಡಿದೈವದಆಗ್ರಹಕ್ಕೆತುತ್ತಾಗಿಮಾಯವಾಗಿ  ದೈವತ್ವ ಪಡೆದ ತಂತ್ರಿ ಗೆ ಜಟ್ಟಿಗ ಎಂದು ಹೆಸರು ಬರಬೇಕಿದ್ದರೆ ಆತ ಜಟ್ಟಿ ಕೂಡಾ ಆಗಿದ್ದಿರಬೇಕು .

ಇಲ್ಲಿ ಇನ್ನೊಂದು ಸಾಧ್ಯತೆ ಕೂಡ ಇದೆ .ಯಾರೋ ಒಬ್ಬ ಜಟ್ಟಿ ತನ್ನನ್ನು ಪೊರೆದ ರಾಣಿ ಅಥವಾ ರಾಜನಿಗೆ ದ್ರೋಹ ಮಾಡಿದ್ದು ಇದು ಗೊತ್ತಾಗಿ ಆತನನ್ನು ಪರಿವಾರದವರು  ದುರಂತಕ್ಕೀದು ಮಾಡಿರಬಹುದು .ಕಾಲಾಂತರದಲ್ಲಿ ದೈವತ್ವ ಪ್ರಾಪ್ತಿಯಾದಾಗ ಆತ ಚಾಮುಂಡಿ ದೈವಕ್ಕ್ಕೆ ದ್ರೋಹ ಮಾಡಿದ್ದು ಎಂಬ ಪರಿಕಲ್ಪನೆ ಸೇರಿರ ಬಹುದು .

ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆದರೆ ಸ್ಪಷ್ಟ ಮಾಹಿತಿ ತಿಳಿದು ಬರಬಹುದು 

ಜಟ್ಟಿ /ಜಟ್ಟಿಗ /ಅರಮನೆ ಜಟ್ಟಿಗ /ಕೋಟೆ ಜಟ್ಟಿಗ ದೈವದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದವರು ತಿಳಿಸಬೇಕಾಗಿ ವಿನಂತಿ 

ಅರಮನೆ ಜಟ್ಟಿಗನ ಅಪರೂಪದ ಸುಂದರ ಫೋಟೋ ಒದಗಿಸಿದ ಧರ್ಮ ದೈವ ಅಂತರ್ಜಾಲ ಪುಟದ 

ಶ್ರೀ ನಾಗ ರಾಜ ಭಟ್ ಬಂಟ್ವಾಳ ಇವರಿಗೆ ಕೃತಜ್ಞತೆಗಳು.
Please note: copying of this blog article is strictly prohibited .If you like the article then please share it at Facebook
 (  Dont copy my articles and photos)

Sunday 16 February 2014

ಬರ್ನೆಲ್ ಮೇನ್ನರ್ ತೋರಿಸಿದ ಹಾದಿಯಲ್ಲಿ ಸಾವಿರದೊಂದು ಗುರಿಯೆಡೆಗೆ-ಡಾ.ವಾಮನ ನಂದಾವರ ,ಖ್ಯಾತ ಸಂಶೋಧಕರು

ಡಾ. ಲಕ್ಷ್ಮೀ  ವಿ. ಅವರ ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ:  ಒಂದು ವಿಶ್ಲೇಷಣಾತ್ಮಕ ಅಧ್ಯಯನವು  ಡಾ. ಎಸ್. ನಾಗರಾಜು ಅವರ ಮಾರ್ಗದರ್ಶನದಲ್ಲಿ ಹಂಪಿ ಕನ್ನಡ ವಿಶ್ವ ವಿದ್ಯಾಲಯಕ್ಕೆ 2009ರ ಸಾಲಿನ ಪಿಎಚ್.ಡಿ. ಪದವಿಗಾಗಿ, ಬೆಂಗಳೂರಿನ ಬಿ. ಎಂ. ಶ್ರೀ ಸ್ಮಾರಕ  ಪ್ರತಿಷ್ಠಾನದ ಎಂ. ವಿ. ಸೀ. ಸ್ನಾತಕೋತ್ತರ ಸಂಶೋಧನ ಕೇಂದ್ರದ ಮೂಲಕ ಸಲ್ಲಿಸಿದ ಸಂಪ್ರಬಂಧವಾಗಿದೆ. ಜನಪದ ಸಂಸ್ಕೃತಿ ಸಂಶೋಧನೆಯಲ್ಲಿ ಇದೊಂದು ಮಹತ್ವದ ಮಹಾ ಪ್ರಬಂಧವಾಗಿದ್ದು ಇದೀಗ ಅದು ಪ್ರಕಟವಾಗಿ ಬರುತ್ತಿರುವುದು ಅತ್ಯಂತ ಶ್ಲಾಘನೀಯವಾದುದು

ಇದರಲ್ಲಿ ಹತ್ತು ಅಧ್ಯಾಯಗಳು ಮತ್ತು ಅನುಬಂಧದ ಪುಟಗಳಿವೆ. ಪ್ರಸ್ತಾವನೆಯ ಮೊದಲನೆಯ  ಅಧ್ಯಾಯಲ್ಲಿ ತುಳುನಾಡಿನ ಭೌಗೋಳಿಕ ಎಲ್ಲೆಗಳ ಮತ್ತು ತುಳುನಾಡಿನ ಸಂಸ್ಕೃತಿಯ ಕುರಿತು ಹೇಳಲಾಗಿದೆ. ಈ ಕ್ಷೇತ್ರದಲ್ಲಿ ಈ ತನಕ ನಡೆದಿರುವ ಕೆಲಸ, ಅಧ್ಯಯನದ ವ್ಯಾಪ್ತಿ, ಉದ್ದೇಶ, ವಿಧಾನಗಳ ಕುರಿತು ತಿಳಿಸಲಾಗಿದೆ. ನಾಗಬ್ರಹ್ಮ ಪರಿಕಲ್ಪನೆಯ ಎರಡನೆಯ ಅಧ್ಯಾಯದಲ್ಲಿ ತುಳುವರ ಆರಾಧ್ಯ ದೈವ ಬೆರ್ಮೆರ್ ಪ್ರಾಚೀನತೆ, ಸ್ವರೂಪ, ಮಹತ್ವ, ಬೆರ್ಮೆರ್ ಪದದ ಅರ್ಥ ಪರಿಕಲ್ಪನೆ, ಬೆರ್ಮೆರ್ ಸೃಷ್ಟಿಯ ಮೂಲ ಮತ್ತು ವೈಶಿಷ್ಟ್ಯ, ಸೃಷ್ಟಿಕರ್ತ ಬೆರ್ಮೆರ್, ಆಲಡೆ ಮತ್ತು ಗರಡಿ ಬೆರ್ಮೆರ್, ಭೂತಬ್ರಹ್ಮ, ಯಕ್ಷಬ್ರಹ್ಮ ಮತ್ತು ನಾಗಬ್ರಹ್ಮ ಪರಿಕಲ್ಪನೆಯ ಮೂರ್ತಿಗಳು ಮೊದಲಾದುವುಗಳ ಕುರಿತು ಸಾಕಷ್ಟು ಅಧ್ಯಯನ ನಡೆದಿದೆ. ಭೂತಾರಾಧನೆಯ ಪ್ರಾಚೀನತೆಗೆ ಕಾರ್ಕಳದ ಕಾಂತೇಶ್ವರ ದೇವಾಲಯದ ಕ್ರಿ.ಶ. 1379ರ ಶಾಸನದಲ್ಲಿರುವ ದೈವಕ್ಕೆ ತಪ್ಪಿದವರುಎಂದಿರುವ  ದಾಖಲೆಯನ್ನು ಅಧ್ಯಯನಕಾರರು ಇಲ್ಲಿ ಉಲ್ಲೇಖಿಸಿದ್ದಾರೆ.
 
 

ನಾಗಬ್ರಹ್ಮ ಸೇರಿಗೆಯ ಮೂರನೆಯ ಅಧ್ಯಾಯದಲ್ಲಿ ಆಲಡೆ ಸಂಕೀರ್ಣದ ದೈವಗಳಾದ ಬ್ರಹ್ಮ ಲಿಂಗೇಶ್ವರ, ರಕ್ತೇಶ್ವರಿ, ನಾಗ, ನಂದಿಗೋಣ, ಉಲ್ಲಾಯ, ಖಡ್ಗೇಶ್ವರಿ, ಸಿರಿಗಳು, ಕುಮಾರ, ಪಂಜುರ್ಲಿ, ಅಡ್ಕತ್ತಾಯ, ಧೂಮವತಿ, ಗೆಜ್ಜೆಕತ್ತಿರಾವಣ, ಬ್ರಹ್ಮಸ್ಥಾನದಲ್ಲಿ ಆರಾಧನೆಗೊಳ್ಳುವ ದೈವಗಳಾದ ಬೆರ್ಮೆರ್, ನಂದಿಗೋಣ, ರಕ್ತೇಶ್ವರಿ, ನಾಗ, ಭೈರವ, ಗರಡಿ ಸಂಕೀರ್ಣದ ದೈವಗಳಾದ ಬ್ರಹ್ಮ, ಕೋಟಿಚೆನ್ನಯ, ಕಿನ್ನಿದಾರು, ಮಾಯಂದಾಲ್, ಕುಜುಂಬಕಾಂಜ, ಒಕ್ಕುಬಲ್ಲಾಳ, ಜೋಗಿಪುರುಷ, ಶಕ್ತಿ ದೇವತೆಗಳು, ಮುಗೇರ್ಲು ಸಂಕೀರ್ಣ ದೈವಗಳಾದ ಎಣ್ಮೂರು ದೆಯ್ಯು, ಕೆಲತ ಪೆರ್ನಲೆ, ತನ್ನಿಮಾಣಿಗ ದೈವಗಳಬಗೆಗೆ ಅಧ್ಯಯನ ನಡೆದಿದೆ.  ಇಲ್ಲಿ ಡಾ. ಲಕ್ಷ್ಮೀ  ವಿ. ಅವರು ಪ್ರಾದೇಶಿಕ ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ಗುರುತಿಸಿದ್ದಾರೆ. ಮುದ್ದ ಕಳಲ ಮತ್ತು ಮಾನ್ಯಲೆ ಪೆರ್ನಲೆ ಎನ್ನುವುದು ಎಣ್ಮೂರು ದೆಯ್ಯು ವೀರರಿಗಿರುವ ಪ್ರಾದೇಶಿಕ ಹೆಸರುಗಳು.
 
ನಾಗಬ್ರಹ್ಮ ಆರಾಧನಾ ಪ್ರಕಾರಗಳ ನಾಲ್ಕನೆಯ ಅಧ್ಯಾಯದಲ್ಲಿ ವೈದಿಕ ಮೂಲ ಪ್ರಕಾರಗಳನ್ನು ಮತ್ತು ತಾಂತ್ರಿಕ ಮೂಲ ಪ್ರಕಾರಗಳನ್ನು, ಜನಪದ ಮೂಲ ಪ್ರಕಾರಗಳನ್ನು ದಾಖಲಿಸುತ್ತಾ ಸರ್ಪ ಸಂಸ್ಕಾರ, ನಾಗಪ್ರತಿಷ್ಟಾಪನೆ, ಬ್ರಹ್ಮ ಸಮಾರಾಧನೆ, ಸುಬ್ರಹ್ಮಣ್ಯ, ಮೂರಿಳು, ಸರ್ಪಂತುಳ್ಳಲ್, ಸರ್ಪಂಕಳಿ ಮೊದಲಾದ ಮೂವತ್ತೊಂದು ವಿಧದ ಆರಾಧನಾ ವೈವಿಧ್ಯ ಲೋಕವನ್ನು ಪರಿಚಯಿಸಿರುವುದು ಈ ಅಧ್ಯಯಯನದ ಹೆಚ್ಚುಗಾರಿಕೆ. ವೇದೇತಿಹಾಸ ಪುರಾಣಗಳ ನಾಗಬ್ರಹ್ಮ ಎಂಬ ಐದನೆಯ ಅಧ್ಯಾಯದಲ್ಲಿ  ನಾಗ-ಗರುಡಾವತಾರ, ಜರತ್ಕಾರು ವಿವಾಹ ಮೊದಲಾದುವುಗಳನ್ನು ಚರ್ಚಿಸಿದ್ದಾರೆ.
ತುಳು ಜನಪದ ಸಾಹಿತ್ಯದ ನಾಗಬ್ರಹ್ಮ ಎನ್ನುವ ಆರನೆಯ ಅಧ್ಯಾಯದಲ್ಲಿ  ಸಿರಿ ಪಾಡ್ದನದಲ್ಲಿ ಬರುವ ಲಂಕೆ ಲೋಕನಾಡಿನ ಬೆರ್ಮೆರ್, ಕೋಟಿಚೆನ್ನಯ ಪಾಡ್ದನದಲ್ಲಿ ಬರುವ ಬೆರ್ಮೆರ್, ಮುಗೇರ್ಲು ಪಾಡ್ದನದಲ್ಲಿ ಬರುವ ಬೆರ್ಮೆರ್ ಮೊದಲಾದ ಬ್ರಹ್ಮರ ಪರಿಕಲ್ಪನೆಗಳ ಕುರಿತು ಅಧ್ಯಯನ ನಡೆಸಿದ್ದಾರೆ.
 

 
 
ಅಧ್ಯಾಯ ಏಳರಲ್ಲಿ ಕಂಬಳದ ಪ್ರಾಚೀನತೆ, ಕಂಬಳ ಪದದ ನಿಷ್ಪತ್ತಿ, ಕಂಬಳದ ಮಹತ್ವ ಮೌಖಿಕ ಪರಂಪರೆಯಲ್ಲಿ ಕಂಬಳ, ಕಂಬಳದ ಪ್ರಕಾರಗಳು, ಕಂಬಳದಲ್ಲಿ ದೈವಾರಾಧನೆ ಮೊದಲಾದುವುಗಳ ಕುರಿತ ಅಧ್ಯಯನವಿದೆ.
ಅಧ್ಯಾಯ ಎಂಟರಲ್ಲಿ ಕಂಬಳಕೋರಿ ನೇಮ ಮತ್ತು ಆ ಹೊತ್ತು ಅಲ್ಲಿ ನಡೆಯುವ ಒಂದು ಕುಂದು ನಲುವತ್ತು ದೈವಗಳು’, ಕಿನ್ನಿಮಾಣಿ ಪೂಮಾಣಿ, ಕೋಮರಾಯ, ಬಬ್ಬರ್ಯ, ಪಂಜುರ್ಲಿ, ಕಲ್ಕುಡ-ಕಲ್ಲುರ್ಟಿ, ರಕ್ತೇಶ್ವರಿ ಮೊದಲಾದ ದೈವಗಳ ವೈವಿಧ್ಯ ವೈಶಿಷ್ಟ್ಯಗಳ ನಿರೂಪಣೆಯಿದೆ. 
 
 
ಬೆರ್ಮೆರ್ ಆರಾಧನೆಯ ಮೇಲೆ ಇತರ ಸಂಪ್ರದಾಯಗಳ ಪ್ರಭಾವ ಎನ್ನುವ  ಒಂಬತ್ತನೆಯ ಅಧ್ಯಾಯದಲ್ಲಿ  ಬೆರ್ಮೆರ್ ಆರಾಧನೆಯ ಮೇಲೆ ಯಕ್ಷಾರಾಧನೆಯ ಪ್ರಭಾವ, ಬ್ರಹ್ಮಯಕ್ಷ-ಬೆರ್ಮೆರ್, ಅರಸು ಆರಾಧನೆ, ವೀರ ಆರಾಧನೆ, ನಾಥ ಸಂಪ್ರದಾಯ ಮತ್ತು ನಾಗ ಬ್ರಹ್ಮ ಹಾಗು ಇವುಗಳ ಮೇಲೆ ಬೇರೆ ಬೇರೆ ಸಂಪ್ರದಾಯಗಳ ಪ್ರಭಾವಗಳ  ವಿವರಗಳನ್ನು  ನೀಡಿದ್ದಾರೆ.
ಹತ್ತನೆಯ ಅಧ್ಯ್ಯಾಯ ಉಪಸಂಹಾರದಲ್ಲಿ ತಮ್ಮ ಅಧ್ಯಯನದ ನಿಲುವನ್ನು ಮಂಡಿಸಿ ಸಮರ್ಥನೆ ನೀಡಿದ್ದಾರೆ. ಪೆರಿಯಾರ್>ಬೆರ್ಮೆರ್> ಬೆರ್ಮೆ>ಬ್ರಮ್ಮೆ>ಬ್ರಹ್ಮ ಆಗಿರಬಹುದಾದುದನ್ನು ಗುರುತಿಸುವ ಕೆಲಸ ಆಗಬೇಕಾಗಿದೆ.
ಮಹಾಬಲಿ, ಬಲೀಂದ್ರ, ಮಹಿಷಾಸುರ, ಭರಮ, ಸುಬ್ರಹ್ಮಣ್ಯ, ಸುಬ್ಬಯ, ಕಾಡ್ಯನಾಟದ ಸ್ವಾಮಿ, ಮಡಿಕೆಯಲ್ಲಿ ಬೆರ್ಮೆರ್, ಕಾಳಭೈರವ,  ಕುಂಡೋದರ  ಭೂತ, ತುಳುನಾಡನ್ನು ಆಳಿದ ಪ್ರಾಚೀನ ಅರಸ, ಪೆರುಮಾಳ, ಪುರಾತನ ಹಿರಿಯ, ಬೆರ್ಮೆರ್ ರಾಜನಾಗಿದ್ದನೇ ?, ‘ಒಂಜಿಕುಂದು ನಲ್ಪ, ಸಾರತ್ತೊಂಜಿ ದೈವೊಲು ಇದೊಂದು ನೆಲೆ, ಸ್ತರ, ಪರಿಪೂರ್ಣತೆಯ ಹಂತ. ಅದು 39 ಏಕೆ? 1001 ಏಕೆ? ಅಧ್ಯಯನ ಆಗಬೇಕು.
ಡಾ. ಲಕ್ಷ್ಮೀ  ವಿ. ತಮ್ಮ ಅಧ್ಯಯನದ ಕ್ಷೇತ್ರಕಾರ್ಯ ವಿವರಗಳನ್ನು ಸಮಗ್ರವಾಗಿ ನೀಡಿದ್ದಾರೆ. ವಿಸ್ತೃತ ಓದಿನ ಆಕರ ಸೂಚಿಯನ್ನು ಮುಂದಿಟ್ಟಿದ್ದಾರೆ. ಸಾಕಷ್ಟು ನೆರಳು ಬೆಳಕಿನ ವರ್ಣಚಿತ್ರಗಳನ್ನು ಹಾಗೂ 38 ಆಚರಣೆಗಳ ಆಡಿಯೋ-ವೀಡಿಯೋ ಸಂಗ್ರಹ ಮಾಹಿತಿ ಒದಗಿಸಿದ್ದಾರೆ. ನಾಗ ಬೆರ್ಮೆರ್ ಪಾಡ್ದನದ ಮೂರು ಪಾಠಗಳನ್ನು ಹಾಗು ಕಂಬಳ ಸಂಬಂಧಿ ಈಜೊ ಮಂಜೊಟ್ಟಿ ಗೋಣಪಾಡ್ದನಪಠ್ಯ ಸಂಗ್ರಹಿಸಿ ಅದರ ಕನ್ನಡ ಅನುವಾದವನ್ನೂ ಕೊಟ್ಟಿದ್ದಾರೆ. ಪೂಕರೆ ನೇಮ ಒಂದೆಡೆಯಲ್ಲ ಕೋಳ್ಯೂರು, ನಡಿಬೈಲು, ಅನಂತಾಡಿ, ಬಂಟ್ವಾಳದ ಬೀರೂರು, ಕೊಡ್ಲಮೊಗರು, ಅರಿಬೈಲು, ಕಾಸರಗೋಡಿನ ಚೌಕಾರು(ಅದೂ ಮೂರು ದಿನಗಳಲ್ಲಿ ಒಂದೇ ಊರಲ್ಲಿ).  ಹಾಗೆಯೇ ನಿಡಿಗಲ್ ಲೋಕನಾಡು ಮೊದಲಾದ ಹತ್ತು ಹದಿನಾಲ್ಕು ಬ್ರಹ್ಮ ಆಲಡೆಗಳನ್ನು ಸಂದರ್ಶನ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಹತ್ತಾರು ಗರೊಡಿಗಳನ್ನು ಭೇಟಿಮಾಡಿದ್ದಾರೆ. ಹೀಗೆ ಆಸಕ್ತಿ, ಕುತೂಹಲ ಮತ್ತು ಹುಡುಕಾಟದ ಬೆನ್ನು ಹತ್ತುವ ಚಪಲದ ನೆಲೆಗಳನ್ನು ಮೀರಿ ಡಾ. ಲಕ್ಷ್ಮೀ  ಅವರು ತಮ್ಮ ಅಧ್ಯಯನದ ಒಳನೋಟಗಳನ್ನು ನೀಡುವ ಪ್ರಯತ್ನ ನಡೆಸಿದ್ದಾರೆ.
ಅರಸು ಆರಾಧನೆ, ಪಿತೃ ಆರಾಧನೆ, ಭೂತಾರಾಧನೆ, ನಾಗಾರಾಧನೆ, ಯಕ್ಷಾರಾಧನೆ ಹಾಗೂ ಬಲೀಂದ್ರ ಅರಾಧನೆಗಳ ಸಮನ್ವಯ ನಾಗಾರಾಧನೆಯಲ್ಲಿ ಕಾಣಿಸುತ್ತದೆ ಎನ್ನುವ ನಿಲುವು ತಳೆದಿದ್ದಾರೆ. ಇಲ್ಲೆಲ್ಲ ಎಲ್ಲೂ ಬೆರ್ಮೆರ್ ಯಾರು ಏನು, ನಾಗ ಬೆರ್ಮೆರ್ ಯಾರು? ಭೂತಗಳ ಅಧಿಪತಿಯೇ ? ಎಂದೆಲ್ಲ ಅಂತಿಮ ನಿಲುವಿಗೆ ಅವರು ಬಂದಿಲ್ಲ. ಅದು ದೋಷ ಅಲ್ಲ, ಸಂಶೋಧನೆಯ ಗುಣ.ಅವಸರಿಸದಿರುವುದು  ಚರ್ಚೆಗಳಿಗೆ ಆಹ್ವಾನ ನೀಡಿದಂತೆ. ಜನಪದ ಸಂಸ್ಕೃತಿಯ ಅಧ್ಯಯನಾಂಶಗಳನ್ನು ಸೋಜಿಗಪಡುವ ಹಾಗೆ ಒಂದೆಡೆ ರಾಶಿ ಹಾಕಿ ಸಂಶೋಧನಾ ಸಾಧ್ಯತೆಗಳನ್ನು ತೆರೆದು ತೋರಿಸಿದ್ದಾರೆ.ಇದೇ ಕಾಲಕ್ಕೆ ಇಲ್ಲಿ ಡಾ. ಲಕ್ಷ್ಮೀ  ಅವರಿಗೆ ತಮ್ಮ ಸಂಪ್ರಬಂಧದ ಸಂರಚನೆಗೆ ಬೇಕಾದ ಚೌಕಟ್ಟು ಈ ಮೊದಲೇ ಸಿದ್ಧವಾಗಿತ್ತು ಎನ್ನುವ ಇನ್ನೊಂದು ಬಹು ಮುಖ್ಯವಾದ ಅಂಶದ ಕಡೆಗೆ ಗಮನ ಕೊಡಬೇಕಾಗಿದೆ.
ನೂರಕ್ಕೂ ಹೆಚ್ಚು ಕಥೆ, ವೈಚಾರಿಕ ಲೇಖನಗಳು, ಅಂಕಣ ಬರಹಗಳು ಮೊದಲಾದ ಸಾಹಿತ್ಯ ಮತ್ತು ಸಂಶೋಧನ ಪ್ರವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ. ಲಕ್ಷ್ಮಿ ವಿ. ಅವರು ಅರಿವಿನಂಗಳದ ಸುತ್ತ(ಶೈಕ್ಷಣಿಕ ಬರೆಹಗಳು), ಮನೆಯಂಗಳದಿ ಹೂ(ಕಥಾಸಂಕಲನ), ದೈವಿಕ ಕಂಬಳ ಕೋಣ (ತುಳು ಜಾನಪದ ಸಂಶೋಧನೆ), ಸುಬ್ಬಿ ಇಂಗ್ಲೀಷ್ ಕಲ್ತದು(ಮಹಿಳೆ ಬರೆದ ಮೊದಲ ಹವಿಗನ್ನಡ ನಾಟಕ), ತುಂಡುಭೂತಗಳು: ಒಂದು ಅಧ್ಯಯನ, ಕನ್ನಡ-ತುಳು ಜನಪದ ಕಾವ್ಯಗಳಗಳಲ್ಲಿ ಸಮಾನ ಆಶಯಗಳು, ತುಳು ಪಾಡ್ದನಗಳಲ್ಲಿ ಸ್ತ್ರೀ, ಪಾಡ್ದನಸಂಪುಟ,  ತುಳುವ ಸಂಸ್ಕಾರಗಳು ಮತ್ತು ವೃತ್ತಿಗಳು ಎಂಬ ಐದು ಕೃತಿಗಳನ್ನು ಏಕಕಾಲಕ್ಕೆ ಪ್ರಕಟಿಸುವ ಸಾಹಸ ಮಾಡಿದವರು. 
ಹಾಗೆಯೇ ಮುಂದಿನ ಸರದಿಯಲ್ಲಿ, ತುಳುನಾಡಿನ ಅಪೂರ್ವ ಭೂತಗಳು, ಬೆಳಕಿನೆಡೆಗೆ ಸಂಶೋಧನಾ ಲೇಖನಗಳು. ತುಳು ಜನಪದ ಕವಿತೆಗಳು ಚಂದಬಾರಿ ರಾಧೆ ಗೋಪಾಲ ಮತ್ತು ಇತರ ಅಪೂರ್ವ ಪಾಡ್ದನಗಳು, ಕಂಬಳ ಕೋರಿ ನೇಮ(ತುಳು ಜಾನಪದ ಸಂಶೋಧನೆ)  ಮತ್ತೊಂದು ಕಂತಿನ ಐದು ಪುಸ್ತಕಗಳನ್ನು ಪ್ರಕಟಿಸುವ ಧೈರ್ಯ ಮಾಡಿದವರು. ಹೀಗೆ ಒಟ್ಟು  ಹದಿನಾಲ್ಕು  ಕೃತಿಗಳು (ಮತ್ತೆ ಐದು ಕೃತಿಗಳು ಅಚ್ಚಿನಲ್ಲಿವೆ)  ಇವರ ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ: ಒಂದು ವಿಶ್ಲೇಷನಾತ್ಮಕ ಅಧ್ಯಯನಕ್ಕೆ ದೊಡ್ಡ ಗಂಟಿನ ಮೊದಲ ಬೌದ್ಧಿಕ ಬಂಡವಾಳವಾಗಿರುವುದು ನಿಜ.
 ವಾಸ್ತವವಾಗಿ ಭೌತಿಕ ಶರೀರಕ್ಕೆ ಎರಡೆರಡು ಕೈಕಾಲುಗಳು ಹೇಗೋ, ಹಾಗೆ ಇವರು ಗಟ್ಟಿಯಾಗಿದ್ದಾರೆ.  ಹಾಗೆಯೇ ಅಂಗೈಗೆ ಐದು ಬೆರಳುಗಳ ಹಾಗೆ ಒಂದು ಹಿಡಿಗೆ ಹದವಾಗಿದ್ದಾರೆ. ಹೇಗೆ ಅಂಗೈಗೆ ಐದು ಬೆರಳುಗಳ ಸಂಯೋಜನೆಯ ಸಹಕಾರ ಒಂದು ಹಿಡಿತಕ್ಕೆ ಕಾರಣವಾಗುವುದೋ ಹಾಗೆ  ಇಲ್ಲಿ ಒಂದೊಂದು ಹಿಡಿಯಷ್ಟು ಕೆಲಸಗಳು ಸಾಧ್ಯವಾಗಿದೆ. ಇದು ನಿಜಕ್ಕೂ ಈ ಹೆಣ್ಣುಮಗಳ ಸಾಹಸವೇ ಸರಿ. ಇಂತಹ ಸಂಶೋಧನೆಯ ಮತ್ತು ಗ್ರಂಥಗಳ ಪ್ರಕಟಣೆಯ ಕೆಲಸಗಳಿಗೆ ಕೇವಲ ಅಧ್ಯಯನ ಆಸಕ್ತಿ ಮಾತ್ರ ಇದ್ದರೆ ಸಾಕಾಗುವುದಿಲ್ಲ  ಜೊತೆಗೆ ಉತ್ಸಾಹ ಮತ್ತು ಛಲಗಳ ಮನೋಧರ್ಮದ ದೃಢ ಸಂಕಲ್ಪವೂ ಬೇಕು. ಜೊತೆಗೆ ಧೈರ್ಯವೂ ಬೇಕು. ಇರುವ ಮತ್ತು ಸಿಗುವ ಅವಕಾಶಗಳ ಸದುಪಯೋಗಕ್ಕಾಗಿ ಅವರ ಮನಸ್ಸು ಸದಾ ತುಡಿಯುತ್ತಲೂ ಇರಬೇಕು. ಇಲ್ಲದೆ ಹೋದರೆ ಬೌದ್ಧಿಕ ರಂಗದಲ್ಲಿ ಅಧ್ಯಯನ ಸಾಧನೆಯ ಉತ್ಪನ್ನಗಳು, ಸಾರಸ್ವತಲೋಕದಲ್ಲಿ ಸಾಧನೆಗಳು ಲಭ್ಯವಿರುವುದಿಲ್ಲ. 
ತರಗತಿಯಲ್ಲಿ ಕಲಿಸುವ ಜೊತೆಯಲ್ಲೇ ಅಧ್ಯಾಪನ. ಪ್ರಾಧ್ಯಾಪನ ಕಾಯಕದಲ್ಲಿ ಕಲಿಯುವ ಅವಕಾಶಗಳೂ ಹೇರಳ. ಇಂತಹ ಸಂದರ್ಭಗಳನ್ನು ಹಗುರವಾಗಿ ಕಾಣದೆ ಲಕ್ಷ್ಮೀಯಂತಹವರು ಗಂಭೀರವಾಗಿ ತೆಗೆದುಕೊಳ್ಳವುದರಿಂದಲೇ ಈ ತರದ ಕೆಲಸಗಳು ಸಾಧನೆಯಾಗಿ ಪರಿವರ್ತನೆಗೊಳ್ಳುತ್ತವೆ. ಇಲ್ಲಿ ಕೆಲಸ ಮತ್ತು ಬಿಡುವು ಪರಸ್ಪರ ಹೊಂದಾಣಿಕೆಯಲ್ಲೇ ಸಾಗುತ್ತಿರುತ್ತವೆ. ಹಾಗಿದ್ದಾಗಲೇ ಕಟ್ಟುವ ಕೆಲಸ ನಡೆದು ಉತ್ಪನ್ನದ ಸಾಧನೆಯಾಗಿ ಸಿದ್ಧಿಸುತ್ತದೆ. ಹೀಗೆ ಒಂದೊಂದು ಹಂತಗಳಲ್ಲಿ ಒಂದೊಂದು ಹಿಡಿಯಷ್ಟು ಹೊತ್ತಗೆಗಳನ್ನು ಪ್ರಕಟಿಸಿ ಇವರು ನಿಜ ಅರ್ಥದಲ್ಲಿ ಪ್ರಕಟವಾಗಿದ್ದಾರೆ ಮತ್ತು ಈ ವರೆಗೆ ಅಧ್ಯಯನ ನಡೆಯದ ಕ್ಷೇತ್ರಗಳಲ್ಲಿ ಸಾಕಷ್ಟು ಕೈಯಾಡಿಸಿದ್ದಾರೆ.
ಯಾವಾಗ ಇಂತಹ ಕೈಯಾಡಿಸುವ ಕೆಲಸ ಸಾಧ್ಯವಾಗುತ್ತದೆ ಎಂದರೆ ಅಲ್ಲೆಲ್ಲ ಹಾಗೆಯೇ ಅಧ್ಯಯನ - ಸಂಶೋಧನ ಕ್ಷೇತ್ರಕಾರ್ಯಗಳಲ್ಲಿ ಕಾಲಾಡಿಸುವ ಕಾಯಕವೂ ನಡೆಯುತ್ತಿರಬೇಕಾಗುತ್ತದೆ.  ಇದು ಇವರಿಂದ ಬಹುಪಾಲು ಸಾಧ್ಯವಾಗಿದೆ.
ಈಗಿನ ಕಾಸರಗೋಡು ಜಿಲ್ಲೆಯ ಕೋಳ್ಯೂರು ಎಂಬ ಸಾಂಸ್ಕೃತಿಕ ಹಳ್ಳಿಯಲ್ಲಿ ಹುಟ್ಟಿಬಳೆದ ಇವರು ಬಾಲ್ಯದಿಂದಲೇ ಸ್ಥಳೀಯ ಸಂಸ್ಕೃತಿಯ ಸೊಗಡಿನ ಜಾಡಿನಲ್ಲಿ ಅನುಭವಗಳನ್ನು ಮೈಗೂಡಿಸಿಕೊಂಡವರು. ವಿಜ್ಞಾನ ಪದವೀಧರೆಯಾಗಿ  ಮುಂದಿನ ಅಧ್ಯಯನಗಳಲ್ಲಿ ಸಂಸ್ಕೃತ, ಕನ್ನಡ, ಹಿಂದಿ ಹೀಗೆ ಮೂರು ಸ್ನಾತಕೋತ್ತರ ಪದವಿಗಳನ್ನು ಹೇಗೆ ಮತ್ತು ಏಕೆ ಪಡೆಯಲು ಸಾಧ್ಯವಾಯಿತು? ಅಷ್ಟು ಮಾತ್ರವಲ್ಲ, ರಾಷ್ಟ್ರಭಾಷಾ ಪ್ರವೀಣ, ಎಂ.ಫಿಲ್, ಪಿಎಚ್.ಡಿ. ಕನ್ನಡದಲ್ಲಿ ಎರಡನೆಯ ಪಿಹೆಚ್. ಡಿ.  ಮುಂದೆ ಎನ್.ಇ. ಟಿ(ಕನ್ನಡ) ಯು.ಜಿ.ಸಿ.ಗಳಂತಹ ಶೈಕ್ಷಣಿಕ ಅರ್ಹತೆಗಳನ್ನು ಪಡೆದುಕೊಳ್ಳವ ದಾರಿಗಳನ್ನೂ ಹೇಗೆ ಏಕೆ ಕಂಡುಕೊಂಡರು ಎಂಬುದು ಕುತೂಹಲದ ವಿಷಯವಾಗಿದೆ. ಇವರಿಗೆ ತಮ್ಮ ಅಪೇಕ್ಷೆಯ ಗುರಿಯೆಡೆಗೆ ತುಡಿಯುವ ಹಾಗೆ ಮುಂದೆ ಸಾಗುವ ಜ್ಞಾನದಾಹದ ಅದಮ್ಯ ಉತ್ಸಾಹದ ಜೊತೆಯಲ್ಲೇ ಚೈತನ್ಯದ ಸಿದ್ಧಿಯೂ ಇರುವುದು ಇಲ್ಲಿ ಸ್ಪಷ್ಟವಿದೆ. ಅರಿವಿನಂಗಳದ ಸುತ್ತಮತ್ತು ಮನೆಯಂಗಳದಿ ಹೂಎನ್ನುವ ಮೊದಲ ಎರಡು ಕೃತಿಗಳ ಶೀರ್ಷಿಗಳೇ ಇವರ ಮುನ್ನೋಟದ ಸುಳುಹುಗಳನ್ನು ಮೂಡಿಸುತ್ತವೆ.
ಜನಪದ ಸಂಸ್ಕೃತಿಯಲ್ಲಿ ಅಧ್ಯಯನ ಮಾಡಬಹುದಾದ  ಜನಪದ ಅಂಶ(ಈoಟಞ  Iems)ಗಳಿರುತ್ತವೆ. ಅವನ್ನು ಗಮನಿಸಿ ಗುರುತಿಸಿಕೊಳ್ಳುವ ಮನಸ್ಸು ಅಧ್ಯಯನಕಾರರಿಗೆ ಇರಬೇಕಾಗುತ್ತದೆ. ಹಾಗೆ ನೋಡಿದಾಗ ಗಮನಿಸುವುದು ಮತ್ತು ಗುರುತಿಸುವುದಕ್ಕೆ ಬಹಳಷ್ಟು ಅಂತರವಿರುತ್ತದೆ. ಸಾಮಾನ್ಯವಾಗಿ ಅಂತಹ ಅಂಶಗಳನ್ನು ಎಲ್ಲರೂ ಗಮನಿಸುತ್ತಾರೆ. ಆದರೆ ಗುರುತಿಸುವ ಮನಸ್ಸು ಎಲ್ಲರಿಗಿರುವುದಿಲ್ಲ. ಸಂಶೋಧಕನೊಬ್ಬನ ಕಣ್ಣಿಗೆ ಅಂತಹ ಆಂಶವೊಂದು ಬಿದ್ದಾಗ ಅದು ಅಧ್ಯಯನ ವಸ್ತುವಾಗುತ್ತದೆ. ಮನಸ್ಸಿದ್ದರೆ ಮಾರ್ಗಎನ್ನುವ ಹಾಗೆ ಇಂತಹ ಜನಪದ ಅಂಶಗಳು ಸಂಶೋಧಕರಿಗೆ ಅಧ್ಯಯನ ವಸ್ತುಗಳಾಗಿ ಆ ಕುರಿತು ಮತ್ತೆ ಆ ಕಡೆಗೆ ಆಸಕ್ತಿ ತಳೆದು ಆಯಾ ವಿಷಯಗಳ ಕುರಿತು ಮಾಹಿತಿ ಪಡೆಯುವ ಸಂಗ್ರಹಕಾರ್ಯ ಮೊದಲಾಗುತ್ತದೆ.  
ಜಾತೆರಯಂತಹ ಸಂದರ್ಭದಲ್ಲಿ ಪಲ್ಲಕಿಒಂದು ಜನಪದ ಅಂಶವಾದರೆ ಅಡ್ಡಪಲ್ಲಕಿಎನ್ನುವುದು ಇನ್ನೊಂದು ಜನಪದ ಅಂಶವಾಗುವುದು. ನಮ್ಮನ್ನು ನಾವು ಗಂಭೀರವಾಗಿ ತೊಡಗಿಸಿಕೊಳ್ಳಬೇಕಾದ್ದೇ ಇಲ್ಲಿ.
ಹಾಗಾಗಿ ಡಾ. ಲಕ್ಷ್ಮೀ  ವಿ. ಅವರ ಬರವಣಿಗೆಯಲ್ಲಿ ವ್ಯಾಪಕವಾದ ಕ್ಷೇತ್ರಕಾರ್ಯವನ್ನು ಕಾಣಲು ಸಾಧ್ಯವಾಗುತ್ತದೆ. ದಾರಿಯಲ್ಲಿ ಹೋಗಿಬರುತ್ತಿರಬೇಕಾದರೆ ಗಮನಕ್ಕೆ ಬರುವ ಒಂದು ಕಲ್ಲು ಅವರಿಗೆ ಜನಪದ ಅಂಶವಾಗಿ ಅಧ್ಯಯನಾಸಕ್ತಿಗೆ ಕಾರಣವಾಗುತ್ತದೆ.
 ಹಾಗಾಗಿಯೇ ತುಳುವರ ಆರಾಧನೆಯ ಸಾರತ್ತೊಂಜಿ ದೈವಗಳಿಗೆ(ಸಾವಿರದೊಂದು ದೈವಗಳಿಗೆ) ಹೊಸ ಭಾಷ್ಯ ಬರೆಯಲು ಅರ್ಹತೆಗಳಿಸಿಕೊಂಡಿದ್ದಾರೆ. ಎ. ಮೇನ್ನರ್(1897) ನೀಡಿರುವ ಭೂತಗಳ ಸಂಖ್ಯೆ: 133. ಡಾ. ಬಿ. ಎ. ವಿವೇಕ ರೈ(1885) ನೀಡಿರುವ ಸಂಖ್ಯೆ: 274, ಡಾ.ಕೆ. ಚಿನ್ನಪ್ಪ ಗೌಡರು(1990) ನೀಡಿರುವ ಪರಿಷ್ಕೃತ ಪಟ್ಟಿಯಂತೆ: 360 ರಘುನಾಥ ಎಂ. ವರ್ಕಾಡಿ(2011) ಅವರ ಕಡಂಬಾರ ಮಲ್ರಾಯೆಕೃತಿಯಲ್ಲಿ ಪುನಾರಚಿಸಿದ ಹೊಸ ಪಟ್ಟಿಯಲ್ಲಿ 407 ದೈವಗಳನ್ನು ಹೆಸರಿಸಿದ್ದಾರೆ. 
ಇವೆಲ್ಲವನ್ನೂ ಮೀರಿ ನಿಲ್ಲುವ ಯಾದಿಯೊಂದು ಡಾ. ಲಕ್ಷ್ಮೀ  ವಿ. ಅವರಿಂದ ಸಾಧ್ಯವಾಗಿದೆ. ಇದರ ಸಾಧ್ಯತೆಗೆ ಎರಡು ಉದಾಹರಣೆಗಳನ್ನು  ಅವರ ಮಾಹಿತಿ ಕೋಶದಿಂದಲೇ ಎತ್ತಿಕೊಳ್ಳಬಹುದು. ಈ ಶೋಧಕಿ ಕಂಡುಕೊಂಡ ಉರವ’, ‘ಎರುಬಂಟೆ’, ‘ಅಕ್ಕ ಬೋಳಾಂಗ’, ‘ಅಜ್ಜ ಬಳಯಮೊದಲಾದ 50ರಷ್ಟು ಅಪೂರ್ವ ಭೂತಗಳು ಅವರ ಸಾಧನೆಯ ಫಲವಾಗಿವೆ. ಹಾಗೆಯೇ ಕುಕ್ಕೆತ್ತಿ-ಬಳ್ಳು’, ‘ಪರವ ಭೂತ’, ‘ಕನ್ನಡ ಬೀರ’, ‘ಕುಂಡ-ಮಲ್ಲು’, ‘ಕುಲೆಮಾಣಿಗ’, ‘ಅಚ್ಚು ಬಂಗೇತಿಮೊದಲಾದ 82ರಷ್ಟು ತುಂಡು  ಭೂತಗಳು ಈ ಸಾಧಕಿಯ ಸೇರಿಗೆಯಲ್ಲಿವೆ. ಇದು ಹೇಗೆ ಸಾಧ್ಯವಾಯಿತು ಎಂದು ಅಚ್ಚರಿ ಪಡಬೇಕಾಗಿಲ್ಲ. ಬಾಸೆಲ್ ಮಿಶನ್ ಪರಂಪರೆಯ ಬರ್ನೆಲ್, ಮೇನ್ನರ್‍ಮೊದಲಾದವರು ತೋರಿಸಿಕೊಟ್ಟ ಹಾದಿಯಿದೆ.
1872, ಮಾರ್ಚ್ ತಿಂಗಳ23ನೆಯ ತಾರಿಕಿನಂದು ತೊಡಗಿ ನಾಲ್ಕು ದಿವಸ ಮಂಗಳೂರಿನ ದೂಮಪ್ಪ ಎಂಬವರ ಮನೆಯಲ್ಲಿನಡೆದ ಇಲ್ಲೆಚ್ಚಿದ ನೇಮ(ಮನೆಯಲ್ಲಿ ನಡೆಯುವ ವಿಶಿಷ್ಟ ದೈವಾರಾಧನೆ)ವನ್ನು ನೋಡಿ ಅಧ್ಯಯನ ಮಾಡಿರುವ ಪರಂಪರೆಯದು. ಹಾಗೆ ಎ.ಸಿ ಬರ್ನೆಲ್ ನಡೆಸಿದ ಅಧ್ಯಯನದ ಫಲವಾಗಿ ಖಿhe eviಟ ತಿoಡಿshiಠಿ oಜಿ  he ಖಿuuvಚಿs(ಎ.ಸಿ ಬರ್ನೆಲ್: 1894-1897) ಈ ಸಂಶೋಧನ ಪ್ರಬಂಧ ಮಾಲಿಕೆಯಲ್ಲಿ ಪ್ರಮುಖ ಭೂತಗಳ ಒಂದು ಪಟ್ಟಿಯಿದೆ. ಈ ಪಟ್ಟಿಯನ್ನು ಸಿದ್ಧಮಾಡಿ ಗ್ರಂಥದಲ್ಲಿ ಸೇರಿಸಿದವರು  ಎ. ಮೇನ್ನರ್. ಈ ಪಟ್ಟಿಯಲ್ಲಿ 133 ಭೂತಗಳ ಹೆಸರುಗಳಿವೆ. ಡಾ. ಬಿ. ಎ. ವಿವೇಕ ರೈ(1985) ಅವರ ತುಳು ಜನಪದ ಸಾಹಿತ್ಯಕೃತಿಯಲ್ಲಿ274(ಪು.35-38)  ಭೂತಗಳ ಹೆಸರುಗಳಿವೆ. ಡಾ. ಕೆ. ಚಿನ್ನಪ್ಪ ಗೌಡ ಕೆ.(1990)ಅವರ ಭೂತಾರಾಧನೆ ಜಾನಪದೀಯ ಅಧ್ಯಯನ ಗ್ರಂಥದಲ್ಲಿ 360 ಭೂತಗಳ ಪರಿಷ್ಕೃತ ಪಟ್ಟಿಯಿದೆ(ಪು.34-39). ‘ಸಾವಿರದೊಂದು ಭೂತಗಳ ಬೆನ್ನು ಹಿಡಿದಾಗಎನ್ನುವ ಲೇಖನದಲ್ಲಿ ರಘುನಾಥ ಎಂ. ವರ್ಕಾಡಿ(2011, ಪು.65-79) ಅವರ ಕಡಂಬಾರ ಮಲ್ರಾಯೆಕೃತಿಯಲ್ಲಿ 407 ಭೂತಗಳ ಹೆಸರುಗಳು ದಾಖಲಾಗಿವೆ. ಈ ಲೆಕ್ಕಾಚಾರ ತೀರ ಈಚೆಗಿನದು.
 ನಾನು ನನ್ನ ಜನಪದ ಸುತ್ತಮುತ್ತ ಕೃತಿಯಲ್ಲಿ ದಾಖಲಿಸಿರುವಂತೆ ಮತ್ತು ಕಂಡುಕೊಂಡಂತೆ ಕಂಡಿಗೆತ್ತಾಯ’(ಬಜ್ಪೆ-ಕೊಳಂಬೆ),  ನಡ್ಡೊಡಿತ್ತಾಯ’(ಕಾರಿಂಜೆ), ‘ಮುಕುಡಿತ್ತಾಯಿಈ ಮೂರು ಭೂತಗಳ  ಹೆಸರುಗಳು ಈಗಾಗಲೇ ಮಾಡಿರುವ ಪಟ್ಟಿಯಲ್ಲಿ ಇಲ್ಲ. ಹಾಗಾಗಿ ಅವು ಸೇರಿದಾಗ: 407+3=410 ಭೂತಗಳ ಲೆಕ್ಕ ಸಿಗುತ್ತದೆ.
ತುಳುವರು ಸಾವಿರದೊಂದು(ಸಾರತ್ತೊಂಜಿ) ಭೂತಗಳನ್ನು ನಂಬಿಕೊಂಡು ಬಂದ ಪರಂಪರೆಯವರು. ಇಲ್ಲೀಗ 133 ಭೂತಗಳ ಈ ಸಂಖ್ಯೆ ಹೆಚ್ಚಾಗುತ್ತಿರುವುದೆಂದರೆ ಭೂತಗಳ ಸಂತಾನ ಅಭಿವೃದ್ಧಿಯಾಗಿದೆ ಎಂದರ್ಥವಲ್ಲ. ಒಂದಾನೊಂದು ಕಾಲದಲ್ಲಿ ಸಾವಿರದೊಂದು ದೈವಗಳನ್ನು ನಂಬಿಕೊಂಡು ಬರುತಿದ್ದರೂ ಕಾಲಕ್ರಮೇಣ ಈ ನಂಬಿಕೆ ಸಡಿಲಾಗಿ ಅವುಗಳ ಸಂಖ್ಯೆ ಜನಮಾನಸದ ನೆನಪಿನಲ್ಲಿ ಕಡಿಮೆಯಾಗಿರಬಹುದು. ಅಧ್ಯಯನ ಮತ್ತು ಸಂಶೋಧನೆಗಳಿಂದಾಗಿ ಅವುಗಳ ಹೆಸರುಗಳು ಮತ್ತೆ ಬೆಳಕಿಗೆ ಬಂದುವು. 
ಹಾಗೆ ಇದೀಗ ಡಾ. ಲಕ್ಷ್ಮೀ  ವಿ. ಅವರ ಈ ಸ್ವರೂಪದ ಶೋಧನೆಯಿಂದಾಗಿ 132 ದೈವಗಳು ನಮ್ಮ ತಿಳುವಳಿಕೆಯ ಮಜಲಿಗೆ ಬಂದಿವೆ. ಆಗ 410+132=542 ಎಂದಾಗುವುದು. ಇನ್ನು ಮುಂದೆ ಅವುಗಳ ಲೆಕ್ಕಕೊಡುವಾಗ 542ಕ್ಕಿಂತ ಕುಂದು ಬರಬಾರದು.  ಶೋಧನೆಗೆ ಇನ್ನೂ ಎಡೆಯಿದೆ. ಸಾವಿರದೊಂದು ಗುರಿಯೆಡೆಗೆ ಸಾಗುವ ಹಾದಿಯಿದೆ.
ತುಳುನಾಡಿನ ನಾಗಬ್ರಹ್ಮ ಮತ್ತು ಕಂಬಳ: ಒಂದು ವಿಶ್ಲೇಷಣಾತ್ಮಕ ಅಧ್ಯಯನವಿಷಯದಲ್ಲಿ   ಸಂಶೋಧನೆ ನಡೆಸಿ ಪಿಎಚ್.ಡಿ ಪದವಿ ಪಡೆದ ತಮ್ಮ ಸಂಪ್ರಬಂಧವನ್ನು ಪರಿಷ್ಕರಿಸಿ ಪ್ರಕಟಿಸಿರುವ         ಡಾ. ಲಕ್ಷ್ಮೀ ವಿ. ಅವರನ್ನು ನಾನು ಹಾರ್ದಿಕವಾಗಿ ಅಭಿನಂದಿಸುತ್ತಿದ್ದೇನೆ.
                                                                ಡಾ. ವಾಮನ ನಂದಾವರ, ಮಂಗಳೂರು,









ಲಕ್ಷ್ಮೀ ಜಿ ಪ್ರಸಾದರ ಕಿರು ಪರಿಚಯ
 
ಪಿ ಎಚ್ ಡಿ ಪದವಿ ಪುರಸ್ಕೃತ ಹಾಗೂ ಕನ್ನಡ ,ಸಂಸ್ಕೃತ ಮತ್ತು ಹಿಂದಿ ಭಾಷೆಗಳಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಕಾಸರಗೋಡಿನ ಕೋಳ್ಯೂರು ಮೂಲದ ಗಡಿನಾಡ ಕನ್ನಡತಿ ಲಕ್ಷ್ಮೀ ಜಿ ಪ್ರಸಾದ ಅವರು ಮೀಯಪದವುನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮತ್ತು ಕೊಡ್ಲಮೊಗರಿನ ವಾಣಿವಿಜಯ ಪ್ರೌಢ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ತಮ್ಮ ಶಿಕ್ಶಣವನ್ನು ಪಡೆದರು. ಡಾ.ಲಕ್ಷ್ಮೀ ಜಿ ಪ್ರಸಾದ ಅವರು ಈಗ ತಮ್ಮ ಎರಡನೆಯ ಪಿಎಚ್.ಡಿ ಪದವಿಗಾಗಿ ಸಂಶೋಧನಾ ಮಹಾ ಪ್ರಬಂಧವನ್ನು ದ್ರಾವಿಡ ವಿಶ್ವ ವಿದ್ಯಾಲಯಕ್ಕೆ ಸಲ್ಲಿಸಿದ್ದಾರೆ.
ನಾಡಿನ ಜಾನಪದ ಇತಿಹಾಸ ಸಂಸ್ಕೃತಿ ಕುರಿತು ಸಂಶೋಧನೆ ನಡೆಸಿದ ಡಾ.ಲಕ್ಷ್ಮೀ ಜಿ ಪ್ರಸಾದ ಅವರು ತುಳುನಾಡಿನ ಅಪೂರ್ವ ಭೂತಗಳು ,ಕನ್ನಡ ತುಳು ಜಾನಪದ ಕಾವ್ಯಗಳಲ್ಲಿ ಸಮಾನ ಆಶಯಗಳು ,ದೈವಿಕ ಕಂಬಳ ಕೋಣ ,ತುಂಡು ಭೂತಗಳು -ಒಂದು ಅಧ್ಯಯನ ,ತುಳು ಪಾದ್ದನಗಳಲ್ಲಿ ಸ್ತ್ರೀ ,ಅರಿವಿನಂಗಳದ ಸುತ್ತ (ಶೈಕ್ಷಣಿಕ ಲೇಖನಗಳು ),ಕಂಬಳ ಕೋರಿ ನೇಮ ,ಬೆಳಕಿನೆಡೆಗೆ ,ಪಾಡ್ದನ ಸಂಪುಟ ,ತುಳು ಜನಪದ ಕವಿತೆಗಳು,ತುಳುವ ಸಂಸ್ಕಾರಗಳು ಮತ್ತು ವೃತ್ತಿಗಳು ,ಭೂತಗಳ ಅದ್ಭುತ ಜಗತ್ತು ಮೊದಲಾದ 20 ಕೃತಿಗಳನ್ನು ರಚಿಸಿದ್ದಾರೆ.
------
ಪುಸ್ತಕದ ವಿವರ:
 
ಪುಸ್ತಕದ ಹೆಸರು : ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ -ಒಂದು ವಿಶ್ಲೇಷಣಾತ್ಮಕ ಅಧ್ಯಯನ (ಪಿಎಚ್.ಡಿ ಮಹಾ ಪ್ರಬಂಧ)
ಲೇಖಕರು : ಡಾ.ಲಕ್ಷ್ಮೀ ಜಿ ಪ್ರಸಾದ , 
                ಕನ್ನಡ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜ್ ಬೆಳ್ಳಾರೆ , 
ಸುಳ್ಯ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಪ್ರಕಾಶಕರು : ಪ್ರಚೇತ ಬುಕ್ ಹೌಸ್ , 
ಹೋಟೆಲ್ ಶಾಂತಿಸಾಗರ ನೆಲ ಮಾಳಿಗೆ,
ಬಸವನ ಗುಡಿ ರಸ್ತೆ ,ಬೆಂಗಳೂರು - 560 019 ,
ಫೋನ್ :080 26602530 , ಮೊಬೈಲ್ :94485 05732
ಮೊದಲ ಮುದ್ರಣ : 2013
ಪುಸ್ತಕದ ಅಳತೆ : 1/8 ಡೆಮ್ಮಿ , ಪುಟಗಳು : 336 ಪುಟ , ಮೌಲ್ಯ : ರೂಪಾಯಿ 300/=
ಕೃತಿ ಲಭ್ಯವಿರುವ ಪುಸ್ತಕ ಮಳಿಗೆಗಳು :1  ಪ್ರಚೇತ ಬುಕ್ ಹೌಸ್ ಬೆಂಗಳೂರು, 
2 ಸಾಹಿತ್ಯ ಕೇಂದ್ರ ಮಂಗಳೂರು , 
3 ಯುನಿವರ್ಸಲ್ ಬುಕ್ ಸೆಲ್ಲೆರ್ಸ್ ಉಡುಪಿ , 
4 ಸೀತಾ ಬುಕ್ ಹೌಸ್ ಉಡುಪಿ ಹಾಗೂ
                                                 5 ನವಕರ್ನಾಟಕ 
                                               6 ,ಸಪ್ನಾ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ.