Saturday 11 October 2014

ತುಳು ಪಾಡ್ದನಲೆಡ್ ಪೊಣ್ಣು(ರೇಡಿಯೋ ಸಾರಂಗ್ 107.8 FMನಲ್ಲಿ ) -ಡಾ.ಲಕ್ಷ್ಮೀ ಜಿ ಪ್ರಸಾದ(28-09-14ರಂದು ಸಮಗ್ರ ಗ್ರಾಮೀಣ ಆಶ್ರಯದಲ್ಲಿ ಮಾಡಿದ ಪ್ರಬಂಧ ಮಂಡನೆ )http://yourlisten.com/thimmappavk/-29



to listen         pls click here



28-09 -2014 ರಂದುಮಂಗಳೂರಿನ ಸಮಗ್ರ ಗ್ರಾಮೆನ ಆಶ್ರಯದಲ್ಲಿ ನಡೆದ ವಿಚಾರ ಸಂಕ್ರದಲ್ಲಿ ಮಂಡಿಸಿದ ಸಂಪ್ರಬಂಧ       copy rights reserved
ಮಗಳಾದ್, ಬುಡೆದಿಯಾದ್, ಸವತಿಯಾದ್, ಮರ್ಮಾಳಾದ್, ಮಾಮಿಯಾದ್ ತನ್ನೊಂಜಿ ಕರ್ತವ್ಯನು ಮಣ್ಪಿನ ಪೊಣ್ಣನ ನಾನಾವಿಧತ್ತ ಚಿತ್ರಣಳು, ಕಲ್ಪನೆಳು ಪಾಡ್ದನೊಲೆಡ್ ತಿಕ್ಕುಂಡ್.
ಮಗಳಾದ್ ಪೊಣ್ಣ ಸ್ಥಾನ ಎಂಚ ಇತ್ತುಂದು ಪಂಡುದು ಚಿಂತನೆ ಮಣ್ಪುನಗ ಸುರುಟ್ಟೆ ಸಮಾಧಾನದ ವಿಚಾರÉೂಂಜಿ ತಿಕ್ಕುಂಡ್. ಪುಟ್ಟಿ ಬಾಲೆ ಪೊಣ್ಣುಂದು ಬೇಜಾರ ಮಣ್ತಿನ ವಿಚಾರ ಪಾಡ್ದುನೊಲೆಡ್ ತೋಜುಜ್ಜಿ ಓಲ್‍ಲ. ಬದಲಾದು ಪುಟ್ಟಿನ ಪೊಣ್ಣು ಬಾಲೆನು ಮೋಕೆಡ್ ಬುಳೆಪ್ಪಾವೆರ್ ಪಣ್ಪಿನ ವಿಚಾರ ಪಾಡ್ದೊನೊಲೆಡ್ ತಿಕ್ಕುಂಡ್. ಬೆರ್ಮೆರ್ ವರಪ್ರಸಾದವಾದ್ ಸಿಂಗಾರದ ಪಾಳೆಡ್ ಪುಟ್ಟಿನ ಪೊಣ್ಣು ಬಾಲೆ ಸಿರಿನು ಅಜ್ಜೆರ್ ಬೆರ್ಮೆರ್ ಕೊಂಡಾಟೊಡು ತಾಂಕಿನ ವಿಚಾರ ಸಿರಿ ಪಾಡ್ದನೊಡು ಉಂಡು. ನೀರ್‍ಡ್ ತೇಲ್ದ್ ಬತ್ತಿನ ಲಿಂಬೆ ಪುಳಿ ಪೊಣ್ಣಾದ್ ಪುಟ್ಟಿನ ಬಾಲೆ ಕೇದಗೆನ್ ಬಾರಿ ಮೋಕೆಡ್ ತಾಂಕುವೆರ್ ಓಪೆತ್ತಿ ಪೆದುನಾರ್ ದಂಪತಿಳು.
ಬಾಲ್ಯವಿವಾಹ ಪ್ರಚಲಿತ ಇತ್ತಿನ ವಿಚಾರ ಪಾಡ್ದನೊಲೆಡ್ ತೆರಿದು ಬರ್ಪುಂಡ್. ಆಣಕೊಡಿತ್ತಾಕ್ಳು ಪೊಣ್ಣನು ಕೇನೊಂದು ಬರೋಂದಿತ್ತೆರ್. ಎಲ್ಯ ಪೋದು ಮಲ್ಲ ಆಪುನೆಡ್ದ್ ದುಂಬು ಮದಿಮೆ ಆಯಿಜ್ಜಾಂಡ ಕಣ್ಣ್‍ಗ್ ಕುಂಟು ಕಟ್ಟ್‍ದ್ ಕಾಡ್‍ಗ್ ಬುಡ್ಪಿನ ಸಂಪ್ರದಾಯ ಬ್ರಾಣೆರ ಜಾತಿಡು ಇತ್ತಿನ ಬಗ್ಗೆ ದೇಯಿ ಬೈದೆತಿ ಪಾಡ್ದನಡು ತೆರಿದು ಬರ್ಪುಂಡು. ಬಾಲೆ ಕೇದಗೆ ಮದಿಮೆಡ್ದ್ ದುಂಬು ಮೈನೆರೆಯಿನೆಕ್ಕು ಆಳೆನ ಕಣ್ಣ್‍ಗು ಕುಂಟು ಕಟ್ಟುದು ಕಾಡುಗ್ ಬುಡ್ತಿನ ಬಗ್ಗೆ ದೇಯಿ ಬೈದೆತಿ ಪಾಡ್ದನೊಡು ವರ್ಣನೆ ಉಂಡು. ಎಲ್ಯಡೇ ಪೊಣ್ಣುಗು ಮದಿಮೆ ಆಂಡಲ ಆಳೆಗ್ ರಕ್ಷಣೆ ಇತ್ತುಂಡಾ? ಕಂಡನಿ ದೂರ ಉಪ್ಪುನಗ ಆಳೆಗ್ ಸರಿಯಾದ ರಕ್ಷಣೆ ತಿಕ್ಕಂದೆ, ಪುರುಷ ದೌರ್ಜನ್ಯಗ್ ತುತ್ತಾಯಿನ ವಿಚಾರ ಮುಕಾಂಬಿ ಜೇವು, ಮದನಗ, ಹೊನ್ನಮ್ಮ ಜೇವು ಇತ್ಯಾದಿ ಪಾಡ್ದನೊಳೆಡ್ ತೋಜುದು ಬರ್ಪುಂಡು.
ಮುಕಾಂಬಿ ಜೇವುನು ಮದಿಮೆಯಾಯಿನ ಕಾಲೊಡು ಜಂತ್ರಿ ಪಡ್ವನೆರ್‍ಗು ಬಾರಿ ಬಡತನ ಬರ್ಪುಂಡು. ಅಯಿಕ್ ಶಾಂತಿಪೂಜೆ ಮಣ್ಪ್ಯರ ತೆಂಕಾಯಿಗ್ ಪೋಯೆರ ನಿರ್ಧಾರ ಮಣ್ತುದ್ ಪಡ್ವನೆರ್ ಮುಕಾಂಬಿ ಜೇವುನ ಅಪ್ಪೆ ಇಲ್ಲುಗು ಪೋಯರ ಪಣ್ಪೆರ್. ಅಪಗ ಆಳ್
    ‘ಮದಿಮೆ ಆಪಿನೊಟ್ಟ ಅಪ್ಪೆ ಇಲ್ಲುದ ಪೇರ್‍ಗಂಜಿ ಆವು
    ಮದಿಮೆ ಆಯಿನೆಡ್ದ್ ಬುಕ್ಕ ಕಂಡನಿ ಇಲ್ಲುದ ಕಣ್ಣ ನೀರು ಆವು
    ಯಾನು ಪೋವಯೆ ಮದಿಮಯ ಕೇಂಡಾರಾ
ಪಂಡ್‍ದ್ ಯಾನ್ ಒಟ್ಟಿಗೆ ಬರ್ಪೆ ಪಂಡ್‍ದ ಹಠ ಕಟ್ಟುವಾಳ್. ಅಂಚ ಆಳೆನ್ ಒಟ್ಟಿಗೆ ಲೆತ್ತೊಂದು ಪೋನಗ ಸಾದಿಡ್ ಕಡಂಬಾರು ಮಯ್ಯ ತಿಕ್ಕುದ್, ಎಂಕ್ ಏಳು ಜನ ಮರ್ಮಳಡಿಕ್ಳು ಉಳ್ಳೇರ್. ಎಣ್ಮ ಕಲ್ಲುದ ಗುಂಡದ ಅರಮನೆ ಉಂಡು. ಎಣ್ಮನೆದ ಕಲ್ಲಗುಂಡಡು ಮುಕಾಂಬಿ ಜೇವು ಉಪ್ಪಡ್ ಪಂಡುದು ಪಡ್ವನೆರ್‍ನು ನಂಬಿಸಾದ್ ಕಡಪ್ಪುಡುವೆ ಕಡಂಬಾರ ಮಯ್ಯೆ. ಪಡ್ವನೆರು ಅಂಚಿ ಪೋಯಿಲೆಕ್ಕ ಇಂಚಿ ಮುಕಾಂಬಿಕ ಜೇವುನು ಬಲತ್ಕಾರ ಮಣ್ಪುವೆ ಕಡಂಬಾರ ಮಯ್ಯೆ. ಮುಕಾಂಬಿ ಜೇವು ಗುಳಿಗನು ನೆನೆತ್ತೊಂದು ಕಡಂಬಾರ್‍ದ ಕಟ್ಟಗು ಲಾಗಿದು ಪ್ರಾಣ ಬುಡ್ಪುವಳ್. ಗುಳಿಗನ ಸೇರಿಗೆಡ್ ಮುಕಾಂಬಿ ಗುಳಿಗೆಯಾದ್ ಸಂದ್‍ದು ಪೋಪಾಳು.
ಇಂಚಿತ್ತನವೆ ಕಥೆ ಮದನಗ ಪಾಡ್ದನೊಡು ಉಂಡು. ಮದನಗನ ಕಂಡನಿ ಕುಂಞಣಪ್ಪೆರ್ ದಂಡುಡುಪ್ಪುನಗ ರಾಜ್ಯಗು ಭಾರಿ ಬಂಡಾರಿ ಬತ್ತುದ್ ಬಲತ್ಕಾರಡ್ದು ಮದನಗನ ಸಂಗ ಮಣ್ಪುವೆ. ಇಂದೆನ್ ದೈವ ಜುಮಾದಿ ಕುಂಞಣಪ್ಪೆರುಗು ಕನಕಟ್ಟಾದ್ ತೆರಿಪ್ಪಾವುಂಡ್. ಕುಂಞಣ್ಣಪ್ಪೆರ್ ಪಾರ್‍ದ್ ಬನ್ನಗ ಮದನಗ ಪೇರು ಕೊರ್ಪಾಳು. ಅಪಗ ಜುಮಾದಿ ದೈವದ ಎದುರು ಪ್ರಮಾಣ ಮಣ್ಪೊಡೊಂದು ಮಣ್ಪೆರು ಕುಂಞಣಪ್ಪೆರ್. ಕಂಡನಿ ಎದುರುಗು ಸತ್ಯ ಪಣ್ಪಿನ ಧೈರ್ಯ ಇದ್ಯಾಂದಿನ ಮದನಗ ಯಾನ್ ಕಂಡನಿ ಬುಡ್ದು ಬೇತೆ ಏರ್ನಲ ಮೈ ಮುಟ್ಟುದಿಜ್ಜಿ ಪಂಡ್‍ದ್ ಪ್ರಮಾಣ ಮಣ್ಪಳು. ಅಪಗ ಕೋಪಿತ್ತಿನ ಜುಮಾದಿ ದೈವ ಆಳ್ ನೆತ್ತೆರ್ ಕಕ್ಕ್‍ದ್ ಸೈಪುಲೆಕ್ಕ ಮಣ್ಪುಂಡ್. ಸುಳ್ಳು ಪಂಡಿನೈಕ್ ಶಿಕ್ಷೆ ಕೊರ್ತಿನ ದೈವ ಆಳೆನು ರಾಜ್ಯಬಾರಿ ಬಂಡಾರಿ ಬಲಾತ್ಕಾರ ಮಣ್ಪುನಗ ದಾಯೆಗ್ ರಕ್ಷಣೆ ಕೊರ್ತುದಿಜ್ಜಿ ಪಣ್ಪಿ ಪ್ರಶ್ನೆಗ್ ಉತ್ತರ ತಿಕ್ಕುಜ್ಜಿ. ಅಂಚನೇ ಮುಕಾಂಬಿಜೇವುನ್ ತನ್ನ ಸೇರಿಗೆಗ್ ದೆತ್ತೊಂಡಿನ ಗುಳಿಗೆ ದೈವ ಆಳೆನ ರಕ್ಷಣೆ ದಾಯೆಗ್ ಮಣ್ತುದುಜ್ಜೆ? ಇಂಜಿಕ್ಕ್‍ಲ ಉತ್ತರ ತಿಕ್ಕುಜ್ಜಿ.
ಮದಿಮೆ ಆಯಿನೆಡ್ದ್ ಬುಕ್ಕ ಕಂಡನಿನಾಕ್ಳು ಪೊಣ್ಣ ಮಿತ್ ಶೋಷಣೆ ಮಣ್ತೊಂದಿತ್ತಿನ ಅನೇಕ ವೃತ್ತಾಂತೊಳು ಪಾಡ್ದೊನೊಲೆಡ್ ತೋಜುಂಡು. ಬಳಜೇಯಿ ಮಾಣಿಗ ಪಾಡ್ದನೊದ ಮಾಣಿಗ ಸ್ವಾಭಿಮಾನದ ಪೊಣ್ಣು. ಕಂಡನಿ ಪೆರುಮಲೆ ಬಲ್ಲಾಳೆಲ ಮಾಣಿಗಲ ಚೆನ್ನೆಮಣೆ ಗೊಬ್ಬುನಗ ಮಾಣಿಗೆಡ ಬಾಜೇಲುಗು ನೀರು ಕೊಂಡರ್ಯರ ಪಂಡುದು ಆಳ್ ಉಳಾಯೀ ಪೋಯಿಲೆಕ್ಕ ಚೆನ್ನೆಮಣೆನು ತಿರ್ಗಾದ್ ದೀದ್ ಆಟನ್ ತಪ್ಪಾವೆ. ಅಪಗ ಕೋಪಡು ಮಾಣಿಗ ಚೆನ್ನೆಮಣೆಕ್ ತೊರಿತ್ತುದ್ ಕಂಕಣ ಪಾಡುವಳ್. ಅಪಗ ಬಲ್ಲಾಳೆ ಕೈ ಬಚ್ಚ್ಚುನಾತ್ ನೋಪುವೆ, ಕಾರ್ ಬಚ್ಚುನಾತ್ ತೊರಿಪ್ಪುವೆ. ಆಳ್ ಕೋಪಡು ಕತ್ತಲು ಕೋಣೆಡು ಜೆಪ್ಪುವಳು, ಒಣಸು ತಯಾರಿ ಮಣ್ಪುಜ್ಜಾಳು. ಅಪಗ ಬಲ್ಲಾಳೆ ಪೋದು ನೆರೆಕರೆತ್ತ ಪೊಣ್ಣುನಾಕ್ಲೆಡ ಮಾಣಿಗಗು ಬುದ್ದಿ ಪಣಿಯರ ಪಣ್ಪೆ. ಅಕುಳ್ ಬತ್ತ್‍ದು ``ಲಕ್ಕ್‍ಲ ಮಾಣಿಗ. ನಿಕ್ಕು ಮಾತ್ರ ಕಂಡನಿ ಆಕುನೆನ ಎಂಕ್ಲೆಗು ಕಂಡನ್ಯಾಕ್ಳು ಆಕುಜ್ಜೆರ’’ ಪಂಡುದು ಸಮಧಾನ ಮಣ್ಪ್ಯುರ ಪ್ರಯತ್ನ ಮಣ್ಪೆರ್. ಮೂಳು ಕಂಡನ್ಯಾಕ್ಳು ಬುಡೆದಿನಾಕ್ಳೆಗು ನೋಪುನವು ಸಾಮಾನ್ಯ ವಿಚಾರ ಆದುತ್ತುಂಡು ಪಂಡ್‍ದತೆರಿದ್ ಬರ್ಪುಂಡ್. ಬುಕ್ಕ ಮಾಣಿಗ ತನ್ನ ಸಮ್ಮಾಲೆ ಇಲ್ಲ್‍ಗ್ ಪೋಪಳು. ಅಪಗ ಮಾಣಿಗನು ಲೆತ್ತೊಂದ್ ಬತ್ತ್‍ಂಡಾಂಡ ಆಳೆನ ಮೈಮುಟ್ಟುನೆಡು ದುಂಬು ನೇಮ ಕೊರ್ಪೆ ಪಂಡ್‍ದ ಜುಮಾದಿಗ್ ಅರಿಕೆ ಮಣ್ಪುವೆ ಪರಿಮಾಳೆ ಬಲ್ಲಾಳೆ. ಅಂಚನೇ ಆಳೆನ್ ಕಣ್‍ಕಟ್ಟಾದ್ ಲೆತ್ತೊಂದು ಬರ್ಪುಂಡು ಜುಮಾದಿ ದೈವೊ. ಮಾಣಿಗನ ದಂಡಿಗೆ ಬತ್ತುನೆನು ತೂದು ಸಂಭ್ರಮಡು ಆಳೆನು ದೇರ್ತುದ್ ದಂಡಿಗೆಡ್ದ್ ಜಪ್ಪಾವೆ ಬಲ್ಲಾಳೆ. ಆಯಗ್ ಪಂಡಿನ ಪರಕೆ ಮರತ್ತುಪೋದುಪ್ಪುಂಡು. ಅಪಗ ಜುಮಾದಿ ದೈವ ಕೋಪಿತ್ತದ್ ಮಾಣಿಗ ಬೊಳಿನೊರೆ ಕಕ್ಕುದ್ ಸೈಪ್ಪುಲೆಕ್ಕ ಮಣ್ಪುಂಡ್. ಪರಿಕೆ ಪಂಡುನೆ ಬಲ್ಲಾಳೆ ಶಿಕ್ಷೆ ಮಾಣಿಗಗ್. ಉಂದು ದೈವೊಳೆನ ವಾ ನ್ಯಾಯ ಎಂಕು ಅರ್ಥಾಪ್ಪುಜ್ಜಿ. ಇಂದೆಕ್ ಉತ್ತರವಾದ್ ಸಂಸ್ಕøತ ಸುಭಾಷಿತ ಒಂಜಿ ಎಂಕ್ ನೆನಪಾಪ್ಪುಂಡ್.
    ಅಶ್ವಂ ನೈವ ಗಜಂ ನೈನ ವ್ಯಾಘ್ರಂ ನೈವಚ ನೈವಚ |
    ಅಜಾ ಪುತ್ರಂ ಬಲಿಂ ದದ್ಯಾತ್ ದೈವೋ ದುರ್ಬಲ ಘಾತಕ |
ಕುದುರೆನ್ ಬಲಿಕೊರ್ಪುಜ್ಜೇರ್, ಆನೆನು ಬಲಿಕೊರ್ಪುಜ್ಜೇರ್, ಪಿಲಿನು ಕೊರ್ಪುಜ್ಜೇರ್, ಕುರಿನ್ ಬಲಿಕೊರ್ಪೇರ್. ದೈವದೇವೆರುಲ ಅಂಚನೆ ದುರ್ಬಲರೆಗೆ ಘಾತಕ ಮಣ್ಪುಂಡ್. ಬಹುಷಃ ನಮ್ಮ ತುಳುನಾಡುಡುಲ ಪೊಣ್ಣುನಾಕ್ಳು ದುರ್ಬಲೆರ್ ಆಯಿನೆಡ್ದಾವರ ದೈವೊಳುಲ ಪೊಣ್ಣನಾಕ್ಳೆಗೆ ಶಿಕ್ಷೆ ಕೊರ್ತೆರೆಂದೆ ತೋಜೊಡು.
ಮಾತೃಪ್ರಧಾನ ಕುಟುಂಬ ವ್ಯವಸ್ಥೆ, ಅಳಿಯ ಸಂತಾನ ಕಟ್ಟ್ ಇತ್ತುಂಡಲ ತುಳುನಾಡ್‍ದ ಪೊಣ್ಣ ಮಿತ್ತಿನ ಶೋಷಣೆಗ್ ಇತಿಮಿತಿ ಇತ್ತುದುಜ್ಜಿ ಪಣ್ಪಿನವು ಪಾಡ್ದೊನೊಳೆಡ್ ತೋಜುದ್ ಬರ್ಪುಂಡು. ಮೈನೆರೆಯಿನೆಡ್ದ್ ದುಂಬು ಮದಿಮೆ ಆಂಡಲಾ ಮದಿಮೆ ಆಯಿನೆಡ್ದ್ ಬುಕ್ಕಲ ದೀರ್ಘಕಾಲ ಮೈನೆರೆಯಿಜ್ಜಾಂಡ ಆಥವಾ ಆಳೆಗ್ ಸಂತಾನ ಆಯಿಜ್ಜಾಂಡ ಆಳೆನ ಸ್ಥಿತಿ ಭಾರೀ ಹೀನಾಯವಾದುತ್ತುಂಡು ಪಣ್ಪುನವು ಸತ್ಯನಾಪುರತ ಸಿರಿ ಪಾಡ್ದನಡ್ದು ತೆರಿದು ಬರ್ಪುಂಡು. ಸಿರಿತ್ತ ಮಗಳು ಸೊನ್ನೆನು ಗುರುಮಾರ್ಲಗ್ ಮದಿಮೆ ಮಣ್ತುದು ಕೊರ್ಪೆರು. ಸೊನ್ನೆ ಎಲ್ಯ ಪೋದು ಮಲ್ಲ ಆದಿತ್ತುಜಾಳು. ಆಳೆನೆ ಮೆಗ್ದಿ ಗಿಂಡೆ ಮೈನಿರೆಯುವಳು. ಅಪಗ ಆಳೆನ ನೀರು ಪರ್ಬಗು ತಯಾರಿ ಆಪುಂಡು. ಸೊನ್ನೆಗ್ ಏಳಿಕೆ ಕೊರ್ಪುಜೇರ್. ಆಂಡಲ ಸೊನ್ನೆ ಮೆಗ್ದಿ ಪಣ್ಪಿನ ಪಿರ್ತಿಡ್ ``ಎನ್ನ ಉರ್ಕಿ ತೋಟದ ಮಾನ ಮರ್ಯಾದಿ ಎಂಕ್‍ಕೊರೊಡು. ಆವೊಂಜಿ ತುರಿ ಒಂಜಿ ಕೆಲಸ ಎಂಕು ಕೊರೊಡೊಂದು’’ ಪಣ್ಪಳು. ಅಪಗ ಗುತ್ತ್‍ನ ಪೊಣ್ಜೋವುನಕ್ಳು ಇಂಚ ಪಣ್ಪೆರ್
‘ಅಂದಯ ಸೊನ್ನೆ ನಿಕ್ಕ್ ಮಾನ ಮರ್ಯಾದಿ ಕೊರಿಯೆರೆ
ಈ ಪೊಣ್ಣು ಪೋದು ಪೊಣ್ಜೋವು ಆತನ ಸೊನ್ನೆ
ನಿನ್ನ ಅಲೆಪಿಲೆ ಕಳಂತ್‍ಂಡಯಾ ಸೊನ್ನೆ
ನಿಕ್ಕ್ ಕೆನ್ನಿಡ್ ಪನ್ನೆ ನೆರೆ ಬೈದ್‍ಂಡ್‍ಯ ಸೊನ್ನೆ
ಈಯಾಂಡ ಪಂಡ್‍ಂಡ ಸೊನ್ನೆ ಕೇನಿದನ
ಈ ಮರಮಂಜ ಗೋಣಿಗೊಡ್ಡು
ಆಣ್‍ಗ್ ಆಣ್‍ಲ ಅತ್ತು ಪೊಣ್ಣಗ್ ಪೊಣ್ಣುಲ ಅತ್ತುಯಾ
ನಿಕ್ಕ್ ಎಂಕಲೆನ ಕೂಟ ಎಂಕ್ಲೆನ ಕಳ ತಿಕ್ಕಾಂದ್
ನಿಕ್ಕ್ ಮಾನಲ ಇದ್ದಿ ಮರ್ಯಾದಿಲ ಇದ್ದಿ ಸೊನ್ನೆ
ಈ ಎಂಕ್ಲೆನ ಕೂಟೊದ ಕಲಡ್ದ್ ಜತ್ತ್ ಪೋಲಯ ಸೊನ್ನೆ
ಎಂದುದ್ ಸೊನ್ನೆನ ಮಾನೊಗು ಹೀನದ ಪಾತೆರ ಪಂಡೆರ್
ಎಲ್ಯಜ್ಜರೆ ಎರಮನೆಡ್ದು ಕಲಡ್ದ್ ಜಪುಡಾದೆರ್
ಪೊಣ್ಣೇ ಪೊಣ್ಣೆನ ಶೋಷಣೆ ಮಣ್ತಿನ ವಿಚಾರಲ ಪಾಡ್ದೊನೊಲೆಡು ತೋಜುದ್ ಬರ್ಪುಂಡ್. ಬಾಲೆ ಕಾಂತಗೆ ಪಾಡ್ದನಡ್ ಮಾಮಿ ಮರ್ಮಾಳ್ ಮೂಜಿ ದಿನತ್ತ ಬಾಣಂತಿ ಕಾಂತಗೆಗ್ ನೆರ್ಪುನ ನೋಪುನ ವಿಚಾರ ಉಂಡು. ವಿೂಪ್ಪುನಗ ನೀರು ಪೊತ್ತೊಂಡು ಪಂಡುದ್ ಪಣ್‍ನೈಕ್ಕು ಮಾಮಿ ನೋಪುವೆರ್. ಆಯ್ತ ವಿವರ ಬಾಲೆ ಕಾಂತಗೆ ಪಾಡ್ದನಡು ಇಂಚ ಉಂಡು
ಏರ್‍ಯೆ ಮಾಮಿನಾರೆ ಕೇಂಡಾರ
ಬೆಂದುರ್ ಎಂಕಾಂಡ ಪೊತ್ತುಂಡ್‍ಯೇ
ಯಾನ್ ಸೈತೇಂದ್ ಪಣ್ಪಾಲ್
ಬಾಲೇನೆ ಕಾಂತಗ ಪಂಡಲ್ಯೊ
ಕಾರ್‍ದ ಕರ್ಕಡೋಡ್ ಕೆಬಿತಕುಂಡಲೋಡು
ಈತೆಲ್ಲ್ಯ ಮಗಲ್ ಬೈದಲ್‍ಯೇ
ಎಲ್ಯ ಪೋದು ಪುಲ್ಲನೆ ಆಯೆನೆ ಕಾಂತಗ
ಒಂಜತ್ತ್ ರಡ್ಡಾಂಡು ಪೆದ್ದಲ್‍ಯೇ
ನಿನ್ನಾನೆ ತೂದುಲ ಕುಟುಮ್ಮ ಕೇಂಡಾನ
ನಾಯಿನ ಕಿನ್ಯ ಪುಚ್ಚೆದ ಕಿನ್ಯಾಂದು ತೂತಿಜ್ಜೆರು
ಇನಿ ನಿಕ್ಕ್ ಬೆಂದುರ್ ಪೊತ್ತುಂಡಾಂಡ್ ಪಂಡೆರ್
ರೊಂಕದ ಕರೆ ಕೊಡಿನು ಪಿಜಿರ್ತುದ್ ನೋತೆರುಯೇ
ಮರ್ಮಾಳೆಗ್ ಪೆದುಪ್ಪಿನ ಬೇನೆ ಬನ್ನಗ ಮರಿನು ಕಟ್ಟುದ್ ಜೋರು ಮಣ್ಪಿನ ಒಂಜಿ ವರ್ಣನೆ ಡಾ| ಸುಶೀಲ ಉಪಾಧ್ಯಾಯರು ಸಂಗ್ರಹ ಮಣ್ತಿನ ಪಾಡ್ದೊನಡು ಉಂಡು. ಆ ಪಾಡ್ದನೊದ ಭಾಗಡು ವರ್ಣನೆ ಇಂಚ ಉಂಡು
ಕಾಡ್‍ಗು ಪೋಯಾಲು ಕಾಡ ಮರಿ ಕನದೊಲು
ಬೇಲಿಗು ಪೋಯಲ್ ಬಿಲ್ಲಮರಿ ಕನದೊಲು
ಬೆರಿಕ್ ಜಿಡೆನ್ ಎನ ಮಾಮಿ ಕಟ್ಯೆರ
ಬಿಲ್ಲಮರಿ ಜೆಡ್ಡೆಗ್ ಬಿಗ್ತೆರ್ ಎನ ಮಾಮಿ
ಮಾಮಿ ಬಿರ್ತಿ ಪೆರ್ನೆದಿಗೊ
ಎನ ಮಗ ಬೆರಿ ಪತ್ತೊಂದು
ಪಾರ್‍ಬತ್ತಿ ರಂಡೇಂದು
ದಡೀಲ ಮುಚ್ಯೇರು ಜಬರದಸ್ತ ಪಾಡ್ದೇರು
ಮಾಮಿ ಬಿತ್ರ್ತಿ ಪೆರ್ನೆದಿಗೆನಾ
ಮಾರ್ಮಾಳೆನು ಎಡ್ಡೆ ರೀತಿಡು ಮಗಳ್ ಲೆಕ್ಕ ತೂಯಿನ ಮಾಮಿ-ಸಮ್ಮಲೆನಾಕ್ಳೆನ ಚಿತ್ರಣಲ ಪಾಡ್ದನೊಲೆಡು ತಿಕ್ಕುಂಡು. ಮುಂಡ್ಯಾಪು ಬಂಜಿನಾಳು ಆನಗ ಆಳೆನ ಮಾಮಿ-ಸಮ್ಮಳೆಲೆನಾಕ್ಳು ಬಾರಿ ಪ್ರೀತಿಡು ತೂವೊಣ್ಣುವೆರ್. ಮುಂಡ್ಯಾಪು ಪಾಡ್ದೊನಡ್ ಇಂಚ ವರ್ಣನೆ ಉಂಡ್.
ಓ..... ಏರ್ಯ ಮದಿಮಾಲೆ ಕೇಂಡನಯೋ
ಭೂಮಿ ಅರ್ದ್‍ನೆಂಗ ನಡಪಡವೋ
ತುತ್ತದ್ ಕುಂಟಾಂಡೊ ಅರ್ಧವಡಂದ್ ಸಮ್ಮಾಲೆ ಪನ್ಪೆರ್‍ಯೋ
ಬಯಕೆ ಸಮ್ಮನಡ್ದ್ ಬುಕ್ಕ ಅಪ್ಪೆ ಇಲ್ಲೆಗು ಪೋನಗ ಮುಂಡ್ಯಾಪು ದುಃಖ ದುಃಖಿತು ಬುಳಿಪ್ಪಾಳು. ಅಪಗ ಮಾಮಿ
ಪೋಯಿ ಪೋಪುನೆಕೊರ ಪೋಲ ಮಗೊ
ಪೋಯಿ ದಂಡಿಗೇಡೆ ಬಲ್ಲಮಗೊ ಪಣ್ಪೇರ್
ದೌರ್ಜನ್ಯದ ವಿರುದ್ಧ ಉಂತುಡ್ ಪ್ರತಿಭಟನೆ ಮಣ್ತಿನ ಪೊಣ್ಣಳ ಬಗ್ಗೆಲ ಪಾಡ್ದನೊಲೆಡು ವರ್ಣನೆ ಉಂಡು. ತೊಟ್ಟಿಲ ಬಾಲೆ ಒಟ್ಟುಗು ಬಾಕಿಲ್ಗ್ ಬತ್ತಿನ ಬುಡೆದಿಗು ಅವಮಾನ ಮಣ್ತಿನ ಕಂಡನಿ ಕಾಂತು ಪೂಜೆಡ ಬರ ಕೇಣುನ ದಿಟ್ಟತನನು ತೋಜಾಯಿನ ಸತ್ಯನಾಪುರತ ಬಾಲೆಕ್ಕೆ ಸಿರಿ ಬರಿ ತುಳುನಾಡ್‍ಗು ಮಾತ್ರ ಅತ್ತು ಜಗತ್‍ಗೇ ಮಾದರಿಯಾಯಿನ ಪೊಣ್ಣ್. ಬರಕೇಂಡುನೆ ಮಾತ್ರ ಅತ್ ರಡ್ದನೆದ ಮದಿಮೆ ಆಯಿನ ಸಿರಿ ಸಮಸ್ತ ಪೊಣ್ಣನಾಕ್ಳೆಗ್ ಮಾದರಿ ಪೊಣ್ಣು.
ಅನ್ಯಾಯ ಮಣ್ತಿನ ಬಲ್ಲಾಳೆಗ್ ಪ್ರತೀಕಾರ ಮಣ್ತಿನ ಪೊಣ್ಣು ಪರತಿ ಮಂಗಣೆಲ ಅಭಿಮಾನಗ್ ಪಾತ್ರವಾಯಿನ ಪೊಣ್ಣು. ಪರತಿ ಮಂಗಣೆಲ ಅತಿಶಯ ಸೌಂದರ್ಯನು ತೂದು ಆಳೆನು ಕೈವಶ ಮಣ್ಪ್ಯೆರ ಬೊಟ್ಟಿಪ್ಪಾಡಿ ಬಲ್ಲಾಳೆ ಪ್ರಯತ್ನ ಮಣ್ಪುವೆ. ಬಲ್ಲಾಳೆ ಬಜ್ಜೆಯಿ ಇರೆ ಕೊರ್ನಗ ಪರತಿ ಮಂಗಣೆ `ಯಾನು ಕಂಡನಿ ಕೊರ್ಪಿ ಇರೆನು ಮಾತ್ರ ತಿನ್ಪುನೆ’ ಪಂಡ್‍ದು ಬಲ್ಲಾಳನ ಆಶೆನು ತಿರಸ್ಕಾರ ಮಣ್ಪುವಳು. ಆಳೆನ ಕಂಡನನ್ ಕೆರುಂಡ ಆಳು ಒಲಿಯುವಳು ಎಂದ್‍ದು ಬೊಟ್ಟಪ್ಪಾಡಿ ಬಲ್ಲಾಳೆ, ಪರತಿ ಮಂಗಣೆನಕಂಡನಿ ಪರವ ಮೈಂದನು ಕೆರ್ಪೆ. ಆ ವೊಂಜಿಗಳಿಗೆಡ್ ದಿಕ್ಕೆಟ್ಟು ಪೋಯಿ ಮಂಗಣೆ ಬೊಬ್ಬೆ ಪಾಡುವಳ್. ಆಂಡಲಾ ತನ್ನ ಮಾನನೇ ಅಪಾಯಡು ಉಂಡೊಂದು ತೆರಿದು ಸಮಯ ಪ್ರಜ್ಞೆ ಮೆರೆಪಳು. ಬಲ್ಲಾಳಗ್ ಒಲಿಯಿಲೆಕ್ಕ ಅಭಿನಯ ಮಣ್ಪುವಳು. ಕಂಡನಿನ ಶವಸಂಸ್ಕಾರ ಆವೊಡುಂದು ಪಣ್ಪಾಳು. ಬಲ್ಲಾಳೆನ ಬೊಳ್ಳಿಕಟ್ಟುದ ಬೆತ್ತ, ಪಟ್ಟದ ಕತ್ತಿ, ಬೂಡ್ದ ಸಮಸ್ತ ಸಿರಿನ್ ಸಂಪತ್ತುನು ಕಾಟಗ್ ಪಾಡುಲೆಕ್ಕ ಮಣ್ಪುವಳು, ಬಲ್ಲಾಳೆನ ಬುಡೆದಿನ ಪಟ್ಟೆ ಸೀರೆ, ಕರಿಮಣಿ, ಬಂಗಾರು ಪಡ್ಡೊಯಿ ಪಾಡೊಣುವಾಳು, ಪರವನ ದೇಹನು ಚಿತೆಗು ದೀಯಿ ಲೆಕ್ಕ `ಕಂಡನಿಯೇ ಇದ್ಯಾಂದಿ ಬುಕ್ಕ ಯಾನು ದಾಯೆಗು ಉಪ್ಪುನೆ’ ಪಂಡ್‍ದ್ ಕಾಷ್ಟಗು ಲಾಗುವಳ್ ಪರತಿ ಮಂಗಣೆ. ಒಂಜಿ ಕಡೆಟ್ಟ್ ತನ್ನ ಮಾನ ರಕ್ಷಣೆ ಮಣ್ತೊಣ್ಣುವಾಳು ಒಟ್ಟುಗೆ ಬಲ್ಲಾಳನ ಸಮಸ್ತ ಸಿರಿ ಸಂಪತ್ತಿನು ಕಾಷ್ಟಗು ಪಾಡುಲೆಕ್ಕ ಮಣ್ತುದು ಕಂಡನಿನು ಕೆರ್ನಕ್ಕು ಪ್ರತೀಕಾರಲ ಮಣ್ಪುವಾಳು.
ಸ್ವಾಭಿಮಾನ ಮೆರೆಯಿನ ಸಿರಿ, ಸಮಯಪ್ರಜ್ಞೆ ಮೆರೆಯಿನ ಪರತಿ ಮಂಗಣೆ ಪಾಡ್ದನೊಲೆಡ್ದ್ ಮೂಡಿಬತ್ತಿನ ಈ ರಡ್ಡ್ ಸ್ತ್ರೀ ಪಾತ್ರೊಳ್ ಮನಸ್ಸುದುಳಾಯಿಗ್ ಜತ್ತುದ್ ದೀರ್ಘಕಾಲ ಉಂತುಂಡು. ಅಂಚನೇ ಅನಾಥೆಬಾಲೆ ಕಚ್ಚೂರ ಮಾಲ್ದಿ ಬುಕ್ಕ ಆಳೆನ ಮಗೆ ಬಬ್ಬುನು ಅರ್ತಿ ಪಿರ್ತಿಡ್ ತಾಂಕಿನ ಸಿರಿಕೊಂಡೆ ಉಳ್ಳಾಲ್ತಿಲ, ಅನಾಥ ಬಾಲೆ ಕೊರಗ ತನಿಯಗು ಆಶ್ರಯ ಕೊರ್ತಿನ ಬೀರಕ್ಕೆ ಬೈದ್ಯೆತಿಲ, ಮೈಸಗೆನು ಮೆಗ್ದಿಯಾದು   ಸ್ವೀಕಾರ ಮಣ್ತಿನ ಮೆಚ್ಚುಗೆಗು ಪಾತ್ರವಾಪೆರ್. ಪಾರ್ವತಿಲ ಈಶ್ವರ ದೇವೆರೊಟ್ಟುಗು ಮೈಸಗ ಬರ್ಪುನೆನು ತೊಯಿನ ಪಾರ್ವತಿ ದೇವಿ ದುಂಬೆ ಪೋದು ಸವತಿಯೊದು ಬೈದಿನ ಮೈಸಗೆನು ಮೆಗ್ದಿಯಾದು ಸ್ವೀಕಾರ ಮಣ್ಪುವಳ ಆ ಸಂದರ್ಭದ  ವರ್ಣನೆ ಇಂಚ ಉಂಡು.
“ಈ ಸ್ವರೆಲ ಮಯಿಸಗೆಲ ಸಿರಿಕುಳೆ ನಾಡು ಬುಡಿಯೆರು
ಮಿತ್ತ್ ಮಿರಿ ಲೋಕೊಗು ಈಸ್ವರ ನಾಡುಗ್ ಬತ್ತೇರು
ಆಡೆ ಬನ್ನಗ ಪಾರ್ವತಿ ತೂಯೆರು
ಎದುರ್‍ಗು ಬತ್ತುದು ಬಲಯ ತಂಗಡಿಯೆ
ಈಯೇ ತಂಗಡಿ ಯಾನೇ ಪಳಿ ನಮ ಒಪ್ಪ ತಪ್ಪ ಇಪ್ಪುಗ ಪಂಡುದ್ ಮೇಲ್ ಮೆಂಚಿಗು ಲೆತ್ತೆರು.
ಪಾರ್ವತಿ ದೇವಿನ ಈ ಪಾತೆರ ತುಳುನಾಡ ಪೊಣ್ಜೋವುಳೆನ ಹೃದಯ ವೈಶಾಲ್ಯತೆಗು ಉದಾರತೆಗು ಸಾಕ್ಷಿಯಾದು ಚಿರಕಾಲ ಉಂತುಂಡು.
- - - -
ಡಾ.ಲಕ್ಷ್ಮೀ ಜಿ ಪ್ರಸಾದ
ಉಪನ್ಯಾಸಕರು ಸರಕಾರಿ ಪದವಿ ಪೂರ್ವ ಕಾಲೇಜ್ ಬೆಳ್ಳಾರೆ ,ಸುಳ್ಯ ತಾಲೂಕು ದ ಕ ಜಿಲ್ಲೆ
e mail ;samagramahithi@gmail.com

Wednesday 8 October 2014

ನನ್ನ ಅನುಭವಗಳ ಪ್ರಾಮಾಣಿಕ ಅಭಿವ್ಯಕ್ತಿ :ರೇಡಿಯೋ ಸಾರಂಗ್ 107.8 FM ಸಂದರ್ಶನ

Vocaroo Voice Message 

To listen pls click here

http://yourlisten.com/thimmappavk/binnere-paterakate-dr-laxmi-g-prasad


ನನ್ನ ಸಂಶೋಧನಾ ಅನುಭವ ,ಅಭಿವ್ಯಕ್ತಿಯ ಅಡಚಣೆಗಳ ಭಾವಗಳ ಅಭಿವ್ಯಕ್ತಿ :ಸಂದರ್ಶಕರು ತಿಮ್ಮಪ್ಪ ಕೆ (v.K Kadaba)
ಧ್ವನಿ ಮತ್ತು ಚಿತ್ರ ಕೃಪೆ ;ಸಾರಂಗ್ ರೇಡಿಯೋ ,ತಿಮ್ಮಪ್ಪ ಕೆ

Friday 3 October 2014

ನನ್ನ ಕ್ಯಾಮರಾದ ಕನವರಿಕೆ -ಡಾ.ಲಕ್ಷ್ಮೀ ಜಿ ಪ್ರಸಾದ


 ಮೊನ್ನೆ ಶಿರ್ವದಲ್ಲಿ ಹಿಡಿದ  ನರಸಣ್ಣ ವೇಷದ ಫೋಟೋ ವನ್ನು ಫೇಸ್ ಬುಕ್ ಗೆ ಹಾಕುತ್ತಿದ್ದಾಗ ಪಕ್ಕನೆ ನನ್ನ ಕ್ಯಾಮರದ ಕನವರಿಕೆ ಬಗ್ಗೆ ನೆನಪಾಯಿತು.
ಯಾಕೋ ಏನೋ ನಾನು ಸಣ್ಣಾಗಿನಿಂದ ಎಲ್ಲ ಹುಡುಗಿಯರ ಹಾಗೆ ಇರಲಿಲ್ಲ  .ಸಾಮಾನ್ಯಾವಾಗಿ  ಹುಡುಗಿಯರಿಗೆ ಬಣ್ಣ ಬಣ್ಣದ ಬಳೆಗಳು,ಲಂಗ ರವಕೆ ಅಂತ ಆಸಕ್ತಿ ಇರ್ತದೆ .ಅವರ ಆಟಗಳಲ್ಲಿ ಕೂಡ ಅಡುಗೆ ಮಾಡುದು ,ರಂಗೋಲಿ ಹಾಕುದು ,ಅಮ್ಮ ಮಗುವಿನ ಅಭಿನಯ ಇತ್ಯಾದಿ ಇರುತ್ತದೆ.
ಆದರೆ ನನಗೆ ಬಳೆ ಲಂಗ ರವಿಕೆಗಳ ಬಗ್ಗೆ ಏನೇನೂ ಆಸಕ್ತಿ ಇರಲಿಲ್ಲ .ಬಹುಶ ನಮ್ಮ ಕೋಳ್ಯೂರು ದೇವರ ಮಂಡಲ ಪೂಜೆಗೆ ಬಂದ ಜಾತ್ರೆಯಲ್ಲಿಯೂ ಕೂಡ ನಾನು ಬಳೆ ಗಿಳೆ ಆಟದ ಸಾಮಾನುಗಳನ್ನು ತೆಗೆದ ನೆನಪು ನನಗಿಲ್ಲ .ನಾನು ದಂಬಾರು ತೊಟ್ಟಿಲ್ ನಲ್ಲಿ ಕುಳಿತು ಕೊಳ್ಳುತ್ತಾ ಇದ್ದುದು ಮಾತ್ರ ನನಗೆ ನೆನಪಿದೆ .ಶೆಟ್ಟಿ ಐಸ್ ಕ್ರೀಂ ಕೂಡ ನನಗೆ ಆಗ ಅಷ್ಟೇನೂ ರುಚಿಕರ ಎನಿಸಿರಲಿಲ್ಲ.ಆದರೂ ಎಲ್ಲರೂ ತಿನ್ನುವಾಗ ನಾನು ತಿನ್ನದಿದ್ದರೆ ಹೇಗೆ ಎಂದು ನಾನೂ ಐಸ್ ಕ್ರೀಂ ತಿನ್ನುತ್ತಿದ್ದೆ !
ನನಗೆ ಚಿಕ್ಕಂದಿನಲ್ಲಿ ವಿಪರೀತ ಸಾಹಸ ಪ್ರವೃತ್ತಿ ಇತ್ತು !
ನನಗೆ ಚಿಕ್ಕಂದಿನಲ್ಲಿಯೇ ಕ್ಯಾಮರ ಬೇಕು ಫೋಟೋ ಹಿಡಿಯಬೇಕು ಎಂಬ ಹಂಬಲ ಇತ್ತು !

.ಇದಕ್ಕೆ ಒಂದು ಕಾರಣವೂ ಇದೆ .ಸುಮಾರು ಮೂವತ್ತು ಮೂವತ್ತೆರಡು ವರ್ಷ ಮೊದಲು ನಾನು ನಾಲ್ಕನೇ ತರಗತಿ ಓದುತ್ತಿರುವ ಸಮಯದಲ್ಲಿ ನಾನು ಜಾತ್ರೆಯಂದು ಸಂತೆಗೆ ಹೋದಾಗ ಮೊದಲ ಬಾರಿಗೆ ಕ್ಯಾಮೆರಾವನ್ನು ನೋಡಿದೆ .ಆಗ ಯಾರ ಕೈಯಲ್ಲೂ ಕ್ಯಾಮರ ಇರುತ್ತಿರಲಿಲ್ಲ ಈಗಿನಂತೆ .
ಆ ದಿನ ಅಪರೂಪಕ್ಕೆ ಯಾರೋ ಒಬ್ಬರು ಸಂತೆಯ ಫೋಟೋ ತೆಗೆಯುತ್ತಿದ್ದರು.ನನಗೆ ಅವರು ಫೋಟೋ ತೆಗೆಯುವ ಸಂಗತಿ ಗೊತ್ತಿರಲಿಲ್ಲ ,ನಾನು ಅವರನ್ನು ಗಮನಿಸದೆ ಕ್ಯಾಮೆರಾ ದ ಎದುರಿನಿಂದ ಮುಂದೆ ಹೋದೆ .ನಾನು ಹೋಗುವುದೂ ಕ್ಯಾಮರ ಕ್ಲಿಕ್ ಮಾಡುವುದೂ  ಒಟ್ಟಿಗೆ ಆಯಿತು.ಅಲ್ಲಿದ್ದವರೆಲ್ಲ ಏ ಏ ..ಎಂದು ಬೊಬ್ಬೆ ಹೊಡೆದರು ."ಎಂತ ಸಂಗತಿ ಅಂತ ಗೊತ್ತಿಲ್ಲದ ನನಗೆ ಒಂದು ಕ್ಷಣ ಗಾಬರಿ ಆಯ್ತು .ಅಷ್ಟರಲ್ಲಿ ಫೋಟೋ ತೆಗೆಯುತ್ತಿದ್ದಾತ ಇರಲಿ ಬಿಡಿ ಸಣ್ಣ ಹುಡುಗಿ ಅವಳಿಗೇನು ಗೊತ್ತಾಗುತ್ತೆ ಎಂದು ಹೇಳಿ ನನ್ನಲ್ಲಿ ನೀನು ಈ ಕ್ಯಾಮೆರ ದೊಳಗೆ ಬಿದ್ದಿದ್ದೀಯಾ ಗೊತ್ತಾ ಎಂದು ಕೇಳಿ ತಮಾಷೆ ಮಾಡಿದರು .ಆಗ ನನಗೆ ಅವರು ಏನು ಹೇಳಿದ್ದು ಅಂತ ಗೊತ್ತಾಗಲಿಲ್ಲ .ಅವರಲ್ಲಿದ್ದ ವಸ್ತು ಕ್ಯಾಮರ ಅದರಲ್ಲಿ ನಮ್ಮ ಫೋಟೋ ಬರುತ್ತೆ ಅಂತಾನೂ ಅಗ ಗೊತ್ತಿರಲಿಲ್ಲ .
ಆದರೆ ಸ್ಟೈಲ್  ಆಗಿ ನಿಂತು ಆ ತರ ಬೆಳಕು ಹಾಯಿಸುವ ಆ ವಸ್ತು ಹಿಡಿದ ವ್ಯಕ್ತಿಗೆ ತುಂಬಾ ಗೌರವ ಇದೆ ,ಆ ವಸ್ತುವಿಗೆ ತುಂಬಾ ಬೆಲೆ ಇದೆ ಅಂತ ಗೊತ್ತಾಯ್ತು .ಆಗಲೇ ಅಂದು ಕೊಂಡೆ ನಾನು ದೊಡ್ಡವಳಾದ ಆ ವಸ್ತುವನ್ನು ತಗೊಂಡು ಅದೇ ತರ ಮೂರು ಕೋಲು ಮೇಲೆ ನಿಲ್ಲಿಸಿ ಮಿಂಚು ಹೊಡಿಸಿ ಮಿಂಚ ಬೇಕು  ಅಂತ !
ಮತ್ತೆ ಒಂದೆರಡು ವರ್ಷ ಕಳೆಯುವಾಗ ನನಗೆ ಕ್ಯಾಮರ ಬಗ್ಗೆ ತುಸು ಮಾಹಿತಿ ತಿಳಿಯಿತು .ಕ್ಯಾಮರ ತುಂಬಾ ಬೆಲೆ ಬಾಳುವ ವಸ್ತು  ಶ್ರೀಮಂತರ ಕೈಯಲ್ಲಿ ಮಾತ್ರ ಇರುತ್ತದೆ .ಅಂತ ತಿಳಿದಾಗಲೂ ನನಗೆ ಒಂದು ಕ್ಯಾಮರ ಬೇಕು ,ಕಂಡ ಕಂಡದ್ದನ್ನೆಲ್ಲ ಫೋಟೋ ತೆಗೆಯಬೇಕು ಎಂಬ ಆಸೆ ಮಾತ್ರ ದೂರವಾಗಲಿಲ್ಲ.

ವರುಷಗಳು ಕಳೆದರೂ ನನ್ನ ಮೆದುಳು ಹೆಚ್ಚೇನೂ ಬೆಳೆಯಲಿಲ್ಲ,(ಈಗಲೂ ಹಾಗೆ ಇದೆ ಅದು .ಮುಂದಕ್ಕೆ ಬೆಳೆಯಲ್ಲ ಅಂತ ಹಠ ಮಾಡಿ ಕೂತಿದೆ ತಣ್ಣನೆ !!)ಕ್ಯಾಮರದ ಹುಚ್ಚು ಹಾಗೆಯೆ ಇತ್ತು  ಡಿಗ್ರೀ ಎರಡನೇ ವರ್ಷ ಓದುವಾಗ ಮದುವೆ ಆಯಿತು .ಪ್ರಸಾದ್ ಸಮೀಪದ  ಸಂಬಂಧಿಯೊಬ್ಬರ ಕೈಯಲ್ಲಿ ಕ್ಯಾಮರ ಇತ್ತು .ಆಗಿನ ಕಾಲಕ್ಕೆ ಕೊಡಕ್ ರೀಲ್ ಹಾಕುವ ಕ್ಯಾಮರ ವೆ ಒಂದು ಸೋಜಿಗದ ವಸ್ತು ನನ್ನ ಪಾಲಿಗೆ .
ಪ್ರಸಾದ್ ತಂಗಿ ನನ್ನದೇ ವಯಸ್ಸಿನ ಹುಡುಗಿ .ಒಂದು ದಿನ ಅವರ ಸಂಬಂಧಿಕರಲ್ಲಿದ್ದ ಆ ಕ್ಯಾಮರ ವನ್ನು ತಂದು ಮನೆ ಮಂದಿಯ ಎಲ್ಲರ ಫೋಟೋಗಳನ್ನು ತೆಗೆದಳು .ಮನೆಯಲ್ಲಿದ್ದ ಜನರು ನಾಯಿ ಬೆಕ್ಕು ಮರ ಗಿಡ ಎಲ್ಲವುಗಳ ಮೇಲೂ ಮಿಂಚು ಬಿತ್ತು.(ನನ್ನ ಮತ್ತು ಪ್ರಸಾದ್ ಹೊರತಾಗಿ !) ನನಗೆ ನನ್ನ ಫೋಟೋ ತೆಗೆಯದ್ದು ಏನೂ ಬೇಸರ ಇರಲಿಲ್ಲ !ಆದರೆ ಒಮ್ಮೆಯಾದರೂ ಕ್ಲಿಕ್ ಮಾಡಲು ನನ್ನ ಕೈಗೆ ಕೊಟ್ಟಿದ್ದರೆ ಎಂದು ಆಸೆಯಾಗಿತ್ತು !ಏನು ಮಾಡುದು !ಅದು ತಂದೆ ಮನೆಯಲ್ಲ ವಲ್ಲ ,ಆಶಿಸಿದ್ದೆಲ್ಲ ಸಿಗಲು !
ಆಗ ನಾನು ಅಂದು ಕೊಂಡೆ ನಾನು ಮುಂದೆ ಓದಿ ಕೆಲಸಕ್ಕೆ ಸೇರಿದ ನಂತರ ಮೊದಲ ತಿಂಗಳ ಸಂಬಳದಲ್ಲಿಯೇ ಒಂದು ಕ್ಯಾಮರ ತೆಗೆದುಕೊಳ್ಳಬೇಕು ಎಂದು.
ಆದರೆ ಡಿಗ್ರೀ ಆಗಿ ಎಂ. ಎ ಓದಿ ಕೆಲಸಕ್ಕೆ ಸೇರುವಷ್ಟರಲ್ಲಿ ಕ್ಯಾಮೆರಕ್ಕಿಂತ ಹೆಚ್ಚು ಮನೆ, ಬದುಕಿನ ಅಗತ್ಯತೆಗಳು ಖರ್ಚಿನ ಸರಮಾಲೆಗಳು ಎದುರಾದವು .ನನ್ನ ಕ್ಯಾಮರದ ಕನವರಿಕೆ ಅಲ್ಲಿಯೇ ಕಮರಿತ್ತು .
ಒಂದೆರಡು ವರ್ಷ ಹೀಗೆ ಕಳೆಯಿತು...
1997ರ ಅಕ್ಟೋಬರ್ 29 ರಂದು ಪ್ರಸಾದ್ "ನಿನ್ನ ಬರ್ತ್ ಡೇ ಗೆ ಒಂದು ಸಣ್ಣ ಆದರೆ ಸ್ಪೆಷಲ್ ಗಿಫ್ಟ್" ಅಂತ ನನ್ನ ಕೈಗೆ ಒಂದು ಪೊಟ್ಟಣ ನೀಡಿದರು .
ನಾವಿಬ್ಬರೂ ಸಿಹಿ ಪ್ರಿಯರು ,ಹಾಗಾಗಿ ಯಾವುದಾದರೂ ವಿಶೇಷ ಸ್ವೀಟ್ ಇರಬಹುದೆಂದು ತೆರೆದು ನೋಡಿದರೆ ನನ್ನೆದುರು ಕೊಡಕ್ ಕ್ಯಾಮರ ಇತ್ತು !
ನಾನು ಸಣ್ಣ ಹುಡುಗಿಯಂತೆ ಕುಣಿದು ಸಂಭ್ರಮಿಸಿದೆ !ನನ್ನ ಅಂದಿನ ಸಂಭ್ರಮ ನೆನೆದರೆ ಈಗ ನನಗೆ ನಗು ಬರುತ್ತದೆ !ಎಂಥ ಹುಚ್ಚು ಅಂತ !
ಅಂದಿನಿಂದ ಶುರು ಸಿಕ್ಕಿದ್ದನ್ನು ಫೋಟೋ ತೆಗೆಯುವ ಹುಚ್ಚು !ಇಂದಿನವರೆಗೂ  ಮುಂದುವರೆದಿದೆ .

2004ರಲ್ಲಿ ನನ್ನ ಭೂತಾರಾಧನೆ ಕುರಿತಾದ ಸಂಶೋಧನ ಕಾರ್ಯಕ್ಕೆ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ಅಣ್ಣ ಕೃಷ್ಣಭಟ್ ವಾರಾಣಾಸಿನನಗೆ ಒಂದು ಒಳ್ಳೆಯ ಕ್ಯಾನನ್ ಡಿಜಿಟಲ್ ಕ್ಯಾಮರ ಮತ್ತು ಒಂದು ಹಾಂಡಿಕಾಮ್ ಅನ್ನು ಒದಗಿಸಿಕೊಟ್ಟರು .ಅಲ್ಲಿಂದ ಫೋಟೋ ತೆಗೆಯುದಕ್ಕೆ ಇರುವ ಎಲ್ಲ ಅಡ್ಡಿಗಳೂ ನಿವಾರಣೆಯಾದವು.ರೀಲ್ ಕ್ಯಾಮರದಲ್ಲಿ ಫೋಟೋ ಹೇಗೆ ಬಂತು ಎಂದು ನೋಡಿ ಪುನಃ ಕ್ಲಿಕ್ಕಿಸುವ ಅವಕಾಶ ಇಲ್ಲ ,ಜೊತೆಗೆ ಅದರ ಸ್ಟುಡಿಯೋ ಕ್ಕೆ ಕೊಟ್ಟು photos ಆಗಿ ಕನ್ವರ್ಟ್ ಮಾಡಿ ತರಲು ಸಾಕಷ್ಟು ದುಡ್ಡು ವ್ಯಯವಾಗುತ್ತಿತ್ತು .ಗುಣ ಮಟ್ಟ ಕೂಡ ಅಷ್ಟಕ್ಕಷ್ಟೇ !.

ಅಣ್ಣ ಕೊಟ್ಟ ಕ್ಯಾಮರದಲ್ಲಿ ಸುಮಾರು ವರ್ಷ ಭೂತಾರಾಧನೆ ಬಗ್ಗೆ ಫೀಲ್ಡ್ ವರ್ಕ್ ಮಾಡಿ ರೆಕಾರ್ಡ್ ಮಾಡಿ ಫೋಟೋ ಹಿಡಿದು ಅಧ್ಯಯನ ಮಾಡಿದೆ ನನ್ನ ಹೆಚ್ಚಿನ ಸಂಶೋಧನೆ ಅಣ್ಣನ ಕಾಮರದಲ್ಲಿಯೇ ಆಗಿದೆ ಅದರಲ್ಲಿ ತೆಗೆದ ಫೋಟೋ ತುಂಬಾ ಗುಣ ಮತದಲ್ಲಿ ಬರುತ್ತಿತ್ತು .ಆದರೂ ತುಂಬಾ ಕಾಲ (ಸುಮಾರು ಎಂಟು-ಒಂಬತ್ತು  ವರ್ಷ ) ಕೆಲಸ ಮಾಡಿದಾಗ .ಅದು ಹಾಳಾಗತೊಡಗಿತು , ಅದರ ಕಾರ್ಯ ಕ್ಷಮತೆ ಕುಗ್ಗಿದಾಗ ಒಂದುಒಳ್ಳೆಯ  ಕ್ಯಾಮರ ಖರೀದಿಸಬೇಕು ಎಂದು ಕೊಂಡೆ .ಅಷ್ಟರಲ್ಲಿ ಚಿಕಾಗೊದಲ್ಲಿ ಕೆಲಸ ಮಾಡುತ್ತಿರುವ ತಮ್ಮ ಈಶ್ವರ ಭಟ್ ವಾರಾಣಸಿ ಒಂದು ಪನಸೋನಿಕ್ ಡಿಜಿಟಲ್ ಕ್ಯಾಮರವನ್ನು ಗಿಫ್ಟ್ ಆಗಿ ಕೊಟ್ಟರು.
ಪ್ರಸ್ತುತ ಅದರಲ್ಲಿಯೇ ಸಿಕ್ಕಿದ್ದನ್ನು ಫೋಟೋ ಹಿಡಿಯುವ ಕಾಯಕ ಮುಂದುವರಿಸಿದ್ದೇನೆ !ಹಾಗಂತ ನನ್ನನ್ನು ದೊಡ್ಡ ಫೋಟೋಗ್ರಾಫರ್ ಎಂದು ಕೊಳ್ಳಬೇಡಿ. ಇಂದಿಗೂ ಫೋಟೋಗ್ರಫಿ ಬಗ್ಗೆ ನನ್ನ ಜ್ಞಾನ ದೊಡ್ಡ ಸೊನ್ನೆಗೆ ಹತ್ರದಲ್ಲಿಯೇ ಇದೆ !

ಈಗ ಮತ್ತೆ ಪುನಃ ತಮ್ಮ ಈಶ್ವರ ಭಟ್  ತುಂಬಾ ಬೆಲೆ ಬಾಳುವ ಡಿಎಸ್ ಎಲ್ ಆರ್ ಕ್ಯಾಮರ ತಂದುಕೊಟ್ಟಿದ್ದಾರೆ.ಕನಸು ಈಡೇರಿದೆ..ಇನ್ನಾದರೂಸ್ವಲ್ಪಫೋಟೋಗ್ರಫಿಬಗ್ಗೆಕಲಿಯಬೇಕೆಂದುಕೊಂಡಿದ್ದೇನೆ

ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕರು
ಸರ್ಕಾರಿ ಪದವಿ ಪೂರ್ವ ಕಾಲೇಜ್ ನೆಲಮಂಗಲ
ಬೆಂಗಳೂರು ಗ್ರಾಮಂತರ ಜಿಲ್ಲೆ


Tuesday 30 September 2014

ಬಡಪಾಯಿ ಉಪನ್ಯಾಸಕರ ಬಿ.ಎಡ್ ಬವಣೆ -ಡಾ .ಲಕ್ಷ್ಮೀ ಜಿ ಪ್ರಸಾದ



ಮೊನ್ನೆ ನನ್ನ ಸಹದ್ಯೋಗಿ ಮಿತ್ರರೊಬ್ಬರು ಪೇಟೆಯಲ್ಲಿ ಅಕಸ್ಮಾತ್ ಆಗಿ ಕಾಣ ಸಿಕ್ಕಿದರು .ಗುಂಡು ಗುಂಡಾಗಿ ಕಟ್ಟು ಮಸ್ತಾಗಿ ಚೆನ್ನಾಗಿದ್ದ ಅವರು ಇಳಿದು ಹೋಗಿ ರೋಗ ಪೀಡಿತರಂತೆ ತುಂಬಾ ವಯಸ್ಸಾದವರಂತೆ ಕಾಣುತ್ತಿದ್ದರು.ಕಣ್ಣಿನ ಸುಟ್ಟ ಕಪ್ಪು ಗೆರೆ ಮೂಡಿತ್ತು .ಅನೇಕ ದಿನಗಳಿಂದ ನಿದ್ರೆ ಗೆಟ್ಟವರಂತೆ ಮುಖ ಪೇಲವವಾಗಿತ್ತು  “.ಏನ್ ಸರ್ ಹೇಗಿದ್ದೀರಿ ?ಆರೋಗ್ಯ ಸರಿ ಇಲ್ವಾ ?ಎಂದು ಕಕ್ಕುಲಾತಿಯಿಂದ ಕೇಳಿದೆ .”ಅಯ್ಯೋ ದೇವರೇ  ಈ ಬಿಎಡ್ ಮುಗಿದು ಪುನಃ ಕಾಲೇಜ್ ಸೇರ್ಕೊಳ್ತೀನೋ ಇಲ್ವೋ ಅಂತ ಅನಿಸ್ತಿದೆ ಮೇಡಂ ,ಹಗಲು ಕ್ಲಾಸ್ ಗೆ ಹಾಜರಾಗಬೇಕು. ರಾತ್ರಿ ಇಡೀ ಪಾಠ ಯೋಜನೆ ಬರಿಯೋದು ,ಬೋಧನೋಪಕರಣಗಳ ತಯಾರಿ ಆಯ್ತು .ಇಷ್ಟಾದರೂ ತಿಂಗಳ ಕೊನೆಗೆ ಸರಿಯಾಗಿ ಹಾಜರಾತಿ ಪ್ರಮಾಣ ಪತ್ರ ಸಿಗದೆ ಒದ್ದಾಟ !ಜೊತೆಗೆ ಸಾವಿರ ಕಿರಿ ಕಿರಿ ಬೇರೆ ಸಾಕಾಗೊಯ್ತು !ಯಾವ ಜನ್ಮದಲ್ಲಿ ಪಾಪ ಮಾಡಿದ್ದಕ್ಕೆ ಈ ಶಿಕ್ಷೆ ಎಂದು ಗೊತ್ತಾಗುತ್ತಿಲ್ಲ.ಈ ವಯಸ್ಸಿನಲ್ಲಿ ಓದುವುದೇ ಒಂದು ಹಿಂಸೆ ಅದರಲ್ಲಿ ಈ ಬಾರಿ ಸಿಕ್ಕಿದ್ದೇ ಚಾನ್ಸ್ ಅಂತ ನಮ್ಮನ್ನ ಹುರಿದು ಮುಕ್ಕುತ್ತಿದ್ದಾರೆ  “ಎಂದು ಹೇಳಿ ನಿಟ್ಟುಸಿರು ಬಿಟ್ಟರು !
2009 ನೆ ಇಸವಿಯಲ್ಲಿ ಇನ್ನೇನು ವಯೋಮಿತಿ ಮೀರುತ್ತದೆ ಎನ್ನುವಷ್ಟರಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆಯಾಗಿ ಸರಕಾರಿ ಪದವಿಪೂರ್ವ  ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿದ ಅನೇಕರ ಸಮಸ್ಯೆ ಇದು .ಅರ್ಜಿ ಆಹ್ವಾನಿಸುವಾಗ ಬಿಎಡ್ ಬೇಕು ಎಂದಿರಲಿಲ್ಲ .ಅನಂತರ ನಾಲ್ಕು ವರ್ಷದ ಒಳಗೆ ಬಿಎಡ್ ಮಾಡಬೇಕು ಎಂಬ ಶರತ್ತಿನೊಂದಿಗೆ ಉದ್ಯೋಗಕ್ಕೆ ಆದೇಶ ಪಡೆದಾಗ ಮುಂದೊಂದು ದಿನ ಇಂಥಹ ಪರಿಸ್ಥಿತಿ ಎದುರಾಗುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ .
ಖಾಸಗಿಯಾಗಿ ಬಿಎಡ್ ಓದುವುದು ಸುಲಭದ ಮಾತಲ್ಲ .

ಇಡೀ ರಾಜ್ಯದಲ್ಲಿ ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯ ಹಾಗೂ ಇಂದಿರಾ ಗಾಂಧಿ ಮುಕ್ತ ವಿಶ್ವ ವಿದ್ಯಾಲಯದಲ್ಲಿ ಮಾತ್ರ ಬಿಎಡ್ ಓದಲು ಅನುಮತಿ ಇದೆ .ಇತರ ಎಂ ಎ ,ಬಿ ಎ ಪದವಿಗೆ ಸೇರುವಂತೆ ಎಲ್ಲರಿಗೆ ಸೇರಲು ಅವಕಾಶವಿಲ್ಲ .ಒಟ್ಟು ಒಂದೂವರೆ ಸಾವಿರ (499 +1000)ಜನರಿಗೆ ಮಾತ್ರ ಬಿಎಡ್ ಓದಲು ಅವಕಾಶ ಇರುತ್ತದೆ. ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ಬಿಎಡ್ ಸೀಟ್ ಗಳನ್ನು ಹಂಚಲಾಗುತ್ತದೆ .ಇದಕ್ಕೆ ಪ್ರತಿವರ್ಷ ಲಕ್ಷಕ್ಕಿಂತ ಹೆಚ್ಚು ಮಂದಿ ಅರ್ಜಿ ಸಲ್ಲಿಸುತ್ತಾರೆ.ಹಾಗೆ ಒಂದು ವೇಳೆ ಆಯ್ಕೆಯಾದರೂ ಎರಡು ವರ್ಷ ಓದಬೇಕು.ಪರೀಕ್ಷೆ ಆಗಿ ಫಲಿತಾಂಶ ಬರುಷ್ಟರಲ್ಲಿ ಮೂರು ಮೂರುವರೆ ವರ್ಷ ಕಳೆಯುತ್ತದೆ .
ಈ ಕಾರಣಕ್ಕೆ 2009ರಲ್ಲಿ ಆಯ್ಕೆ ಆದ ಎರಡೂವರೆ ಸಾವಿರ ಉಪನ್ಯಸಕರಲ್ಲಿ ಸಾವಿರದ ನಾನ್ನೂರರಷ್ಟು ಮಂದಿ ಉಪನ್ಯಾಸಕರಿಗೆ ನಾಲ್ಕು ವರ್ಷದ ಒಳಗೆ ಬಿಎಡ್ ಪದವಿ ಪಡೆಯಲು ಸಾಧ್ಯವಾಗಲಿಲ್ಲ .ಕೊನೆಗೆ ಸಹೃದಯಿಗಳಾದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ ಅವರು ನಿಯೋಜನೆ ಮೂಲಕ ಬಿಎಡ್ ಓದಲು ಅವಕಶ ನೀಡಿದರು.
“ಇಲ್ಲಿಗೆ ಎಲ್ಲ ಸಮಸ್ಯೆ ಮುಗಿಯಿತು” ಎಂದು ಕೊಂಡು ದೊಡ್ಡದಾದ ಉಸಿರು ಬಿಟ್ಟಿದ್ದರು ಉಪನ್ಯಾಸಕರು .ಆದರೆ ಈ ಉಪನ್ಯಾಸಕರ ಕಷ್ಟ ಪರಂಪರೆಗಳು ಇಲ್ಲಿಗೆ ನಿಲ್ಲಲಿಲ್ಲ . ವೇತನ ಬರುತ್ತದೆ ಹೇಳುವ ಒಂದು ಸಮಾಧಾನ ಬಿಟ್ಟರೆ ಬೇರೆಲ್ಲಾ ತಾಕಲಾಟ ಪೇಚಾಟ ಹೇಳಿ ಪ್ರಯೋಜನವಿಲ್ಲ .

ಬಿಎಡ್ ಶಿಕ್ಷಣದಲ್ಲಿ ಪ್ರಾಜೆಕ್ಟ್ ವರ್ಕ್ ,ಅಸ್ಸೈನ್ಮೆಂಟ್ ,ಪಾಠ ಯೋಜನೆ ತಯಾರಿ ,ಬೋಧನೋಪಕರಣಗಳ ತಯಾರಿ ,ಪ್ರಾಯೋಗಿಕ ಪಾಠ ,ಇತ್ಯಾದಿ ತುಂಬಾ ಕೆಲಸಗಳಿರುತ್ತವೆ.ಮೊದಲ ಸೆಮಿಸ್ಟರ್ ನಲ್ಲಿ ಅಣು ಪಾಠ ಬೋಧನೆ ,ಮತ್ತೆ ಅಸ್ಸೈನ್ಮೆಂಟ್ ,ಕ್ಷೇತ್ರ ಕಾರ್ಯ ಮೊದಲಾದವುಗಳು ಇರುತ್ತವೆ .ಇದು ಅಷ್ಟು ಕಷ್ಟಕರ ಎನಿಸುವುದಿಲ್ಲ
.ಎರಡನೇ ಸೆಮಿಸ್ಟರ್ ನಲ್ಲಿ ಅತಿಯಾದ ಕೆಲಸ ವಿದೆ  ಪ್ರಾಯೋಗಿಕ ಪಾಠ ತರಬೇತಿಗಾಗಿ 24 (.12 +12) ಪಾಠ ಯೋಜನಗೆಗಳನ್ನು ಬರೆಯಬೇಕು .ಒಂದು ಪಾಠ ಯೋಜನೆ ಸುಮಾರು 8-10 ಪುಟಗಳಷ್ಟಿದ್ದು ಬರೆಯಲು ಏನಿಲ್ಲವೆಂದರೂ 5-6 ಗಂಟೆ ಬೇಕಾಗುತ್ತದೆ .ಇಲ್ಲಿ ಹತ್ತು ಪುಟ ಬರೆಯುದಕ್ಕಿಂತ ಹೆಚ್ಚು ಬೋಧನೋದ್ದೇಶಗಳ ಗುರುತಿಸುವಿಕೆ ಹಂಚಿಕೆಗೆ ತುಂಬಾ ಸಾಕಷ್ಟು ಯೋಚಿಸಬೇಕು . ಇದಕ್ಕೆ ಸುಮಾರು ಹೊತ್ತು ಹಿಡಿಯುತ್ತದೆ .ಒಂದು ಪಾಠ ಯೋಜನೆಗೆ ಕನಿಷ್ಠ ನಾಲ್ಕು ಬೋಧನೋಪಕರಣಗಳ ತಯಾರಿ ಮಾಡಲೇ ಬೇಕಾಗುತ್ತದೆ .ಇದರಲ್ಲಿ ಅಂತರ್ಜಾಲದ ಸಹಾಯ ತೆಗೆದುಕೊಳ್ಳಬಾರದು .ಚಿತ್ರಗಳನ್ನು ಸ್ವತಹ ಕೈಯಿಂದಲೇ ಬಿಡಿಸಬೇಕು ಎಂಬ ಅಲಿಖಿತ ನಿಯಮ ಬೇರೆ ಇದೆ .(ಆರ್ಟಿಸ್ಟ್ ಗಳಿಗೆ ಚಿತ್ರವೊಂದಕ್ಕೆ 40 -50 ರು  ಕೊಟ್ಟು  ಚಿತ್ರ ಬರೆಯಿಸಿ ತರಬಹುದು !)

ಬೋಧನೋಪಕರಣಗಳ ತಯಾರಿಗೆ ಒಂದು ಪಾಠ ಯೋಜನೆಗೆ ಏನಿಲ್ಲವೆಂದರೂ 5-6 ಗಂಟೆ ಬೇಕೇ ಬೇಕು .ಒಟ್ಟಿನಲ್ಲಿ ಒಂದು ಪಾಠ ಯೋಜನೆಗೆ ಸುಮಾರು 12 ಗಂಟೆಯಂತೆ 24 ಪಾಠ ಯೋಜನೆಗಳಿಗೆ 288 >300 ಗಂಟೆಗಳಷ್ಟು  ಸಮಯ ಬೇಕು  .ಆಮೇಲೆ  ಪಾಠ ಯೋಜನೆಯನ್ನು ನೇರವಾಗಿ ಸಿದ್ಧ ಪುಸ್ತಕದಲ್ಲಿ ಬರೆಯುವಂತಿಲ್ಲ .ಮೊದಲಿಗೆ ಬಿಳಿ ಹಳೆಯ ಮೇಲೆ ಬರೆದು ಆಯಾಯ ಉಪನ್ಯಾಸಕರಿಗೆ ತೋರಿಸಿ ಅವರು ಹೇಳಿದ ತಿದ್ದು ಪಡಿಗಳನ್ನು ಮಾಡಿ ಮತ್ತೊಮ್ಮೆ ಬಿಳಿ ಹಾಳೆಗಳಲ್ಲಿ ಬರೆದು ಅಪ್ರೋವಲ್ ತೆಗೆದುಕೊಳ್ಳಬೇಕು.ಕೆಲವೊಮ್ಮೆ 4-5 ಬಾರಿ ತಿದ್ದು ಪಡಿ ಮಾಡಿ ಬರೆದ ನಂತರ  ಮೇಲೆ ಅಪ್ರೋವಲ್ ಸಿಗುತ್ತದೆ .ಅಪ್ರೋವಲ್ ಸಿಕ್ಕ ನಂತರ ಅದನ್ನು ಸಿದ್ಧ ಚೌಕಟ್ಟಿನ ಪುಸ್ತಕದಲ್ಲಿ ಬರೆಯಬೇಕು!ಇದಕ್ಕೆ ಮತ್ತೆ ಕಡಿಮೆ ಎಂದರೂ 90 -100 ಗಂಟೆ ಸಮಯ ಬೇಕು.
ಇದಲ್ಲದೆ ನೀಲ ನಕ್ಷೆ ಹಾಕಿ ಎರಡು ಪ್ರಶ್ನೆ ಪತ್ರಿಕೆ ತಯಾರಿಸಿ ಪರೀಕ್ಷೆ ನಡೆಸಿ ಮೌಲ್ಯ ಮಾಪನ ನಡೆಸಿ ಅದನ್ನೆಲ್ಲ ನೀಲ ನಕ್ಷೆಯಲ್ಲಿ ನಮೂದಿಸಿ ಮದ್ಯಮ ಕ್ರಮಾಂಕ ಕಂಡು ಹಿಡಿದು ಗ್ರಾಫ್ ಮೂಲಕ ರೇಖಿಸಬೇಕು .ಇದರೊಂದಿಗೆ ಕ್ಷೇತ್ರ ಕಾರ್ಯ ಆಧಾರಿತ ವಿಷಯಗಳಲ್ಲಿ ಐದು ಪ್ರಬಂಧ ಮಂಡನೆ ಮಾಡಬೇಕು .ಇದರ ತಯಾರಿಗೆ ಏನಿಲ್ಲವೆಂದರೂ  ಒಂದು ಪ್ರಬಂಧಕ್ಕೆ ಎರಡು ದಿನ ಕ್ಷೇತ್ರ ಕಾರ್ಯ ಮಾಡಿ 10 ಗಂಟೆ ತಗೊಂಡು ಬರೆದರೂ ಐದು ಪ್ರಬಂಧಗಳಿಗೆ ಹತ್ತು ದಿನ ಕ್ಷೇತ್ರ ಕಾರ್ಯ ಹಾಗೂ ಬರೆಯಲು ಸುಮಾರು 100 ಗಂಟೆ ಸಮಯ ಬೇಕಾಗುತ್ತದೆ 

.ಒಟ್ಟಾರೆಯಾಗಿ ಪ್ರಬಂಧಗಳ ಸಿದ್ಧತೆಗೆ ಕಡಿಮೆ ಎಂದರೆ 220 ಗಂಟೆಗಳಷ್ಟು ಸಮಯಬೇಕೇ  ಬೇಕಾಗುತ್ತದೆ .ಒಟ್ಟಾರೆಯಾಗಿ ದ್ವಿತೀಯ ಸೆಮಿಸ್ಟರ್ ನ ಮೊದಲ ನಾಲ್ಕು ತಿಂಗಳಿನಲ್ಲಿ ಹಗಲು ತರಗತಿಗೆ ಹಾಜರಾಗುವುದರೊಂದಿಗೆ ಸುಮಾರು   650 -700 ಗಂಟೆಗಳ ಕೆಲಸವಿರುತ್ತದೆ!.ಅಂದರೆ 120 ದಿನಗಳಲ್ಲಿ ಹಗಲು 9.30-5.30 ತನಕ 8 ಗಂಟೆ ಕಾಲ ಕಾಲೇಜ್ ಗೆ ಹೋಗಿ ಪಾಠ ಕೇಳಿಕೊಂಡು  ಮನೆಗೆ ಬಂದು ದಿನಕ್ಕೆ ಕಡಿಮೆ ಎಂದರೆ ಆರು-ಏಳು ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ಇದರ ನಡುವೆ ಶೈಕ್ಷಣಿಕ ಪ್ರವಾಸ ಹಾಗೂ ಬೇರೆ ಬೇರೆ ಕಾರ್ಯಕ್ರಮಗಳು ಇರುತ್ತವೆ .ಈ ಎಲ್ಲ ಕೆಲಸಗಳನ್ನು ಒಂದಿನಿತೂ ವಿಶ್ರಾಂತಿಯಿಲ್ಲದೆ ಮಾಡುತ್ತಿರುವ ಉಪನ್ಯಾಸಕರಿಗೆ ಒಮ್ಮೆ ಈ ಬಿಎಡ್ ಮುಗಿದು ಹೋದರೆ ಸಾಕಪ್ಪಾ ದೇವರೇ ಎಂದು ಎನಿಸಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ .
“ಅದು ಎಲ್ಲ ಸರಿ  ಇಷ್ಟು ಜನ ವಿದ್ಯಾರ್ಥಿಗಳು ಪ್ರತಿ ವರ್ಷ ಬಿಎಡ್ ಮಾಡುತ್ತಾರಲ್ಲ !ಅದೇನು ಮಹಾ !ಉಪನ್ಯಾಸಕರಿಗೆ ಮಾತ್ರ ಯಾಕೆ ಇದು ಕಷ್ಟ ಅನಿಸುತ್ತದೆ? ಎಂಬ ಪ್ರಶ್ನೆ ಈಗ ಏಳಬಹುದು.

ಹೌದು.ಸಮಸ್ಯೆ ಇರುವುದೇ ಇಲ್ಲಿ . ನಿಯೋಜನೆ ಮೇರೆಗೆ ಬಿ ಎಡ್  ಓದುವ ಪಿಯು ಕಾಲೇಜ್ ಉಪನ್ಯಾಸಕರಿಗೆ ಇಡೀ ವರ್ಷಕ್ಕೆ ಸಿಗುವುದು ಹದಿನೈದು ರಜೆ ಮಾತ್ರ (ಸಿ ಎಲ್) ಮಾತ್ರ . ಉಳಿದ ವಿದ್ಯಾರ್ಥಿಗಳಿಗೆ 60% -75 % ಹಾಜರಾತಿ ಇದ್ದರೆ ಸಾಕು.ಇದು ವಿಶ್ವ ವಿದ್ಯಾಲಯದಿಂದ ವಿಶ್ವ ವಿದ್ಯಾಲಯಕ್ಕೆ ತುಸು ಭಿನ್ನವಾಗಿದೆ ,ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಕನಿಷ್ಠ 60 % ಕಡ್ಡಾಯ ಹಾಜರಾತಿ ಬೇಕಾಗಿದ್ದರೆ ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ 75 % ರಬೇಕು .ಹಾಗಿದ್ದರೂ ವಿದ್ಯಾರ್ಥಿಗಳಿಗೆ 25% -40 % ರಜೆ ಹಾಕಲು ಅವಕಾಶವಿರುತ್ತದೆ.ಎಂದರೆ ಆದಿತ್ಯವಾರ ಮತ್ತು ಸಾರ್ವಜನಿಕ ರಜೆಗಳನ್ನು ಹೊರತು ಪಡಿಸಿ ಇವರಿಗೆ ವರ್ಷಕ್ಕೆ 75 -120ದಿವಸಗಳು ರಜೆ ಹಾಕಲು ಅನುಮತಿ ಇರುತ್ತದೆ

.ಆದ್ದರಿಂದ ಸಾಮಾನ್ಯವಾಗಿ ಬಿಎಡ್ ವಿದ್ಯಾರ್ಥಿಗಳು ಥಿಯರಿ ತರಗತಿಗಳಿಗೆ ಗೈರು ಹಾಜರಾಗಿ  ಈ ಪ್ರಾಜೆಕ್ಟ್ ವರ್ಕ್ ,ಪಾಠ ಯೋಜನೆ ಬರಹ ,ಪ್ರಬಂಧ ಸಿದ್ಧತೆ,ಬೋಧನೋಪಕರಣಗಳ ಸಿದ್ಧತೆ ಮಾಡಿ ಕೊಳ್ಳುತ್ತಾರೆ.ಇಷ್ಟು ಇತರೆ ಕಾರ್ಯಗಳು ಇರುವ ಕಾರಣವೇ ಬಿಎಡ್ ಗೆ ಕನಿಷ್ಠ ಹಾಜರಾತಿಯನ್ನು ಬೇರೆ  ಪಿಯುಸಿ ,ಪದವಿ,ಸ್ನಾತಕೋತ್ತರ ಪದವಿಗಳಿಗೆ ನಿಗದಿಯಾಗಿರುವಂತೆ 85 -90 % ಹಾಜರಾತಿಯ ನಿಯಮ ಇರುವುದಿಲ್ಲ ಬದಲಿಗೆ ಕಡ್ಡಾಯ ಹಾಜರಾತಿ ಪ್ರಮಾಣವನ್ನು ಕಡಿಮೆ ಎಂದರೆ  60 %-75 %  ಮಾತ್ರ ಇಟ್ಟು ಇತರೆ ಕಾರ್ಯ ಮಾಡಿಕೊಳ್ಳಲು ಸಮಯ ಕೊಡುತ್ತಾರೆ .
ಆದರೆ ನಿಯೋಜನೆ ಮೇಲೆ ಬಿಎಡ್  ಓದುತ್ತಿರುವ ಪದವಿಪೂರ್ವ ಕಾಲೇಜ್ ಉಪನ್ಯಾಸಕರಿಗೆ ಈ ನಿಯಮ ಅನ್ವಯ ವಾಗುವುದಿಲ್ಲ .ಅವರಿಗೆ ವರ್ಷಕ್ಕೆ 15 ರಜೆ (ಸಿ ಎಲ್ ) ಮಾತ್ರ ಸಿಗುತ್ತದೆ .ಎಂದರೆ ಇವರು 96 % ಹಾಜರಾತಿಯನ್ನು ಪಡೆಯಬೇಕಾಗುತ್ತದೆ !ಇದರಿಂದಾಗಿ ಹಗಲು ತರಗತಿಗೆ ಹಾಜರಾಗಿ ಬಂದು ಮನೆಯಲ್ಲಿ ಕುಳಿತು 7-8 ಗಂಟೆ ಕೆಲಸ ಬೇಕಾಗಿ ಬರುತ್ತದೆ .ದಿನನಿತ್ಯ ತಡ ರಾತ್ರಿ 2 -3 ಗಂಟೆ ತನಕ ಕೆಲಸ ಮಾಡಿದರೆ ಅರೋಗ್ಯ ಹಾಳಾಗದೆ ಇರಲು ಸಾಧ್ಯವೇ ?!
ಸಾಮಾನ್ಯ ವಿದ್ಯಾರ್ಥಿಗಳಿಗೆ ಸಮಯ ಸಮಯಕ್ಕೆ ಊಟ ತಿಂಡಿ ಮಾಡಿಕೊಡಲು ತಂದೆ ತಾಯಿಯರಿರುತ್ತಾರೆ .ಉಪನ್ಯಾಸಕಿಯರು ಅಡುಗೆ ಕೆಲಸ ಮನೆ ಕೆಲಸ ,ಮಕ್ಕಳಿದ್ದರೆ ಅವರ ಕೆಲಸ ಮಾಡಿಕೊಂಡು ಬಿಎಡ್ ನ ಕೆಲಸಗಳನ್ನೂ ಮಾಡಿಕೊಳ್ಳಬೇಕು.ಜೊತೆಗೆ ಸ್ವಂತ ಅಭಿಪ್ರಾಯಗಳನ್ನು ಗಳಿಸಿ ಕೊಂಡು ಪ್ರೌಧತೆ ಪಡೆದ ಉಪನ್ಯಾಸಕ ವಿದ್ಯಾರ್ಥಿಗಳಿಗೂ ಬಿಎಡ್ ನ ಉಪನ್ಯಾಸಕರಿಗೂ ಅನೇಕ ಅಭಿಪ್ರಾಯ ಬೇಧಗಳಿವೆ. ದಿನ ನಿತ್ಯ ಸಮಯಕ್ಕೆ ಸರಿಯಾಗಿ ಹಾಜರಾಗಿಯೂ ದುಡ್ಡಿಗಾಗಿ ಪ್ರತಿ ತಿಂಗಳು ಹಾಜರಾತಿ ಪ್ರಮಾಣ ಪತ್ರ ಕೊಡದೆ ಕಾಡುವ ,ದುಡ್ಡು ಕೀಳುವ ಕೆಲವು ಕಾಲೇಜ್ ಗಳೂ ಇವೆಎಂಬುದು ಕೂಡ ಗಮನಿಸಬೇಕಾದ ವಿಚಾರ . ಕೇಳಿದಷ್ಟು /ನಿರೀಕ್ಷಿಸಿದಷ್ಟು ದುಡ್ಡು ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಕೆಲವು ಕಾಲೇಜ್ ಗಳಲ್ಲಿ  ಮೊದಲ ಸೆಮಿಸ್ಟರ್ ನಲ್ಲಿ  ಅಂತರ್ ಮೌಲ್ಯ ಮಾಪನ ಅಂಕಗಳನ್ನು ತೀರ ಕಡಿಮೆ ಕೊಟ್ಟಿದ್ದಾರೆ .ಹೆಚ್ಚಿನ ಉಪನ್ಯಾಸಕ ಬಿಎಡ್ ವಿದ್ಯಾರ್ಥಿಗಳು  ಸ್ನಾತಕೋತ್ತರ ಪದವಿಯಲ್ಲದೆ  ಎಂಫಿಲ್, ಪಿ ಎಚ್ ಡಿ ಯಂಥಹ ಉನ್ನತ ಪದವಿಗಳನ್ನು ಗಳಿಸಿದ್ದು , ಈಗಾಗಲೇ ಸಂಶೋಧಕರಾಗಿ .ಲೇಖಕರಾಗಿ .ಪ್ರೌಢಿಮೆ ಗಳಿಸಿದ್ದು ,ಆಗಷ್ಟೇ ಪದವಿ ಮುಗಿಸಿ ಬಂದ ಎಳೆಯ ವಿದ್ಯಾರ್ಥಿಗಳಿಗೆ ಅವರ ಜ್ಞಾನದ ಮಟ್ಟಕ್ಕೆ ಅನುಗುಣವಾಗಿ ಸಿದ್ಧ ಪಡಿಸಿದ ಪಾಠ ಕ್ರಮ ರವಷ್ಟೂ ಒಗ್ಗುತ್ತಿಲ್ಲ ಎನ್ನುವುದು ವಾಸ್ತವ.
ಆಯ್ತು ಇಷ್ಟೆಲ್ಲಾ ಕಷ್ಟ ಪಟ್ಟು ಓದಿ ಪಡೆಯುವ ಬಿಎಡ್ ಪದವಿಯಿಂದ ಪಿಯು ಉಪನ್ಯಾಸಕರಿಗೆ ಏನಾದರೂ ಮಹತ್ವದ ಜ್ಞಾನ ಸಿಕ್ಕಿತೇ ಕೇಳಿದರೆ ಉತ್ತರ ಹೇಳುವುದು ಕಷ್ಟ .ಯಾಕೆಂದರೆ ಬಿಎಡ್ ಪಾಠ ಕ್ರಮ ವರ್ತಮಾನಕ್ಕೆ  ಸೂಕ್ತವಾಗಿಲ್ಲ .ಆಳವಾದ ಜ್ಞಾನ.ಅಧ್ಯಯನಕ್ಕೆ ಅವಕಾಶ  ಇಲ್ಲವೇ ಇಲ್ಲ .ಶಾಲಾ ಆಡಳಿತ ,ಉದಯೋನ್ಮುಖ ಭಾರತದಲ್ಲಿ ಶಿಕ್ಷಣ,ಭಾರತದಲ್ಲಿ ಪ್ರೌಢ ಶಿಕ್ಷಣ  ಈ ಮೂರೂ ಪತ್ರಿಕೆಗಳಲ್ಲಿ ಎಲ್ಲ ಚರ್ವಿತ ಚರಣ ವಿಚಾರಗಳು ಇವೆ.ಈ ಮೂರನ್ನು ಬೇರೆ ಬೇರೆ ಪತ್ರಿಕೆ ಮಾಡುವ ಬದಲು ಒಂದು ಪತ್ರಿಕೆಯಲ್ಲಿ ಅಡಕ ಮಾಡಬಹುದಿತ್ತು 

.ಕನ್ನಡ ,ಇತಿಹಾಸ ಮೊದಲಾದ ಐಚ್ಚಿಕ ವಿಷಗಳಲ್ಲೂ ಮತ್ತೆ ಮತ್ತೆ ಬೋಧನೋಪಕರಣಗಳು ,ಪಾಠ ಮಾಡುವ ವಿಧಾನಗಳು ಚರ್ವಿತ ಚರಣಗಳಾಗಿವೆಯೇ ಹೊರತು ಆಳವಾದ ಜ್ಞಾನಕ್ಕೆ ಪೂರಕವಾದ ಮಾಹಿತಿ ಏನೊಂದೂ ಇಲ್ಲ .ಅನೇಕ ಬೋಧನೋಪಾಯಗಳ ಬಗ್ಗೆ ಪಾಠ ಮಾಡುವರೇ ಹೊರತು ಅದನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸುವುದು ,ಅಭ್ಯಾಸ ಮಾಡಿಸುವುದು ಇಲ್ಲವೇ ಇಲ್ಲ .ಪರ ಮತ್ತು ಪೂರಕ ಪಟ್ಯ ಗಳ ವಿಷಯವೇ ಇಲ್ಲ 
.ಇಲ್ಲಿ ನೀಡುವ ಶಿಕ್ಷಣ ಪ್ರೌಢ ಶಾಲೆಯಲ್ಲಿ ಸಿಗುವ ಶಿಕ್ಷಣದಷ್ಟು ಕೂಡ ಪ್ರೌಢವಾಗಿಲ್ಲ ಎನ್ನುವುದು ಖೇದದ ವಿಚಾರ !ಪ್ರೌಢ ಶಾಲೆಗಳಲ್ಲಿ ಛಂದಸ್ಸನ್ನು ಗುರುತಿಸುವಾಗ ಮೂಲ ನಿಯಮಗಳನ್ನೂ ಹೇಳಿ ಕೊಡುತ್ತಾರೆ.ಉದಾಹರಣೆಗೆ ಉತ್ಪಲ ಮಾಲಾ ವೃತ್ತದ ಲಕ್ಷ್ಮಣವನ್ನು “ಉತ್ಪಲ ಮಾಲೆಯಪ್ಪುದು ಭರಂನಭಭಂರಲಗಂ ನೆಗಳ್ದಿರಲ್” ಎಂದು ಲಕ್ಷ್ಯ ಲಕ್ಷ್ಮಣ ಪದ್ಯವನ್ನು ಹೇಳಿ ಭ ರ ನ ಭ ಭ ರ ಗಣಗಳು ಮತ್ತು ಒಂದು ಲಘು ಒಂದು ಗುರು ಇರುತ್ತದೆ ಎಂದು ಹೇಳಿಕೊಡುತ್ತಾರೆ .ಪರೀಕ್ಷೆಯಲ್ಲಿ ಗಣಗಳ ಹೆಸರು ಮಾತ್ರ ಬರೆದು ವಿವರಿಸಿದರೂ ಅಂಕಗಳನ್ನು ಕೊಡುತ್ತಾರೆ .ಆದರೆ ಹೇಳಿ ಕೊಡುವಾಗ ಸರಿಯಾಗಿಯೇ ಲಕ್ಷ್ಯ ಲಕ್ಷ್ಮಣ ಸಮೇತ ಹೇಳಿ ಕೊಡುತ್ತಾರೆ .ಆದರೆ ಹೆಚ್ಚಿನ ಬಿಎಡ್ ಕಾಲೇಜ್ ಗಳಲ್ಲಿ  ಲಕ್ಷ್ಯ ಲಕ್ಷ್ಮಣವನ್ನು ಹೇಳದೆ ಕೇವಲ ಗಣಗಳ ಅನುಕ್ರಮ ಮತ್ತು ವಿವರಣೆಯನ್ನು ಮಾಡುತ್ತಾರೆ .ಇಷ್ಟು ಮಾತ್ರ ಬರೆದರೂ ಅಂಕಗಳನ್ನು ಕೊಡುತ್ತಾರೆ .

ಬಿಎಡ್ ಶಿಕ್ಷಣವು ಪ್ರೌಢ ಶಾಲೆಯ ಮಕ್ಕಳಿಗೆ ಪಾಠ ಮಾಡುವ ಕರ್ಮವನ್ನು ಹೇಳಿಕೊಡುವ ಉದ್ದೇಶ ಹೊಂದಿರುವುದು ಸರಿ .ಹಾಗಂತ ಪಾಠ ಕ್ರಮದ ಮಟ್ಟವೂ ಪ್ರೌಢ ಶಾಲೆ ಮಕ್ಕಳ ಮಟ್ಟಕ್ಕೆ ಸಮನಾಗಿರಿಸುವುದು ಸರಿಯೇ ?ಶಿಕ್ಷಕರಿಗೆ ಹೆಚ್ಚು ಜ್ಞಾನ ಇದ್ದರೆ ಏನಾದರೂ ತೊಂದರೆ ಇದೆಯಾ ?ಇದೇಕೆ ಹೀಗೆ ಎಂದು ಅರ್ಥವಾಗುತ್ತಿಲ್ಲ !
ಇನ್ನು ಪಾಠ ಯೋಜನೆ ,ಮಾಡುವ ಕೆಲವು ಹಂತಗಳು ,ಬೋಧನೋಪಕರಣಗಳ ತಯಾರಿ ಮತ್ತು ಉಪಯೋಗ ಮುಂದೆಯೂ ಅಳವಡಿಸಿಕೊಳ್ಳುವುದಾದರೆ ನಿಜಕ್ಕೂ ಪ್ರಯೋಜಕಾರಿಯಾದುದಾಗಿದೆ.ಆದರೆ ಬಿಎಡ್ ಮಾಡಿಯೇ ಶಿಕ್ಷಕರಾಗಿರುವ ಪ್ರೌಢ ಶಾಲೆ ಮತ್ತು ಪ್ರಾಥಮಿಕ ಶಾಲೆಯ ಹೆಚ್ಚಿನ ಶಿಕ್ಷಕರು ತಮ್ಮ ಶಿಕ್ಷಕ ವೃತ್ತಿಯಲ್ಲಿ  ಅಳವಡಿಸಿಕೊಂಡದ್ದು ಕಂಡು ಬರುತ್ತಾ ಇಲ್ಲ .ಎಲ್ಲೋ ಅಲ್ಲೊಬ್ಬ ಇಲ್ಲೊಬ್ಬರು ಬಿಎಡ್ ಶಿಕ್ಷಣದ ನಂತರವೂ ತಮ್ಮ ಶಿಕ್ಷಕ ವೃತ್ತಿಯಲ್ಲಿ ಅಳವಡಿಸಿಕೊಂಡವರು ಇದ್ದಾರೆ ಅಷ್ಟೇ .ಇದೊಂದು ವಿಚಾರವನ್ನು ಪಿಯು ಉಪನ್ಯಾಸಕರು ಅಳವಡಿಸಿಕೊಂಡರೆ ವಿದ್ಯಾರ್ಥಿಗಳಿಗೆ ಸಾಕಷ್ಟು ಪ್ರಯೋಜನವಾಗಬಹುದು .ಇಷ್ಟು ಕಷ್ಟ ಪಟ್ಟು ಬಿಎಡ್ ಮಾಡಿದ್ದು ತುಸುವಾದರೂ ಸಾರ್ಥಕವಾಗಬಹುದು

Sunday 21 September 2014

ಬರ್ನೆಲ್ ಮೇನ್ನರ್ ತೋರಿಸಿದ ಹಾದಿಯಲ್ಲಿ ಸಾವಿರದೊಂದು ಗುರಿಯೆಡೆಗೆ-ಡಾ.ವಾಮನ ನಂದಾವರ ,ಹಿರಿಯ ಸಂಶೋಧಕರು

ಬರ್ನೆಲ್ ಮೇನ್ನರ್ ತೋರಿಸಿದ ಹಾದಿಯಲ್ಲಿ
                                                                    ಸಾವಿರದೊಂದು ಗುರಿಯೆಡೆಗೆ
ಡಾ. ಲಕ್ಷ್ಮೀ ವಿ. ಅವರ ‘ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ: ಒಂದು ವಿಶ್ಲೇಷಣಾತ್ಮಕ ಅಧ್ಯಯನ’ವು ಡಾ. ಎಸ್. ನಾಗರಾಜು ಅವರ ಮಾರ್ಗದರ್ಶನದಲ್ಲಿ ಹಂಪಿ ಕನ್ನಡ ವಿಶ್ವ ವಿದ್ಯಾಲಯಕ್ಕೆ 2009ರ ಸಾಲಿನ ಪಿಎಚ್.ಡಿ. ಪದವಿಗಾಗಿ, ಬೆಂಗಳೂರಿನ ಬಿ. ಎಂ. ಶ್ರೀ ಸ್ಮಾರಕ ಪ್ರತಿಷ್ಠಾನದ ಎಂ. ವಿ. ಸೀ. ಸ್ನಾತಕೋತ್ತರ ಸಂಶೋಧನ ಕೇಂದ್ರದ ಮೂಲಕ ಸಲ್ಲಿಸಿದ ಸಂಪ್ರಬಂಧವಾಗಿದೆ. ಜನಪದ ಸಂಸ್ಕೃತಿ ಸಂಶೋಧನೆಯಲ್ಲಿ ಇದೊಂದು ಮಹತ್ವದ ಮಹಾ ಪ್ರಬಂಧವಾಗಿದ್ದು ಇದೀಗ ಅದು ಪ್ರಕಟವಾಗಿ ಬರುತ್ತಿರುವುದು ಅತ್ಯಂತ ಶ್ಲಾಘನೀಯವಾದುದು.
ಇದರಲ್ಲಿ ಹತ್ತು ಅಧ್ಯಾಯಗಳು ಮತ್ತು ಅನುಬಂಧದ ಪುಟಗಳಿವೆ. ಪ್ರಸ್ತಾವನೆಯ ಮೊದಲನೆಯ ಅಧ್ಯಾಯಲ್ಲಿ ತುಳುನಾಡಿನ ಭೌಗೋಳಿಕ ಎಲ್ಲೆಗಳ ಮತ್ತು ತುಳುನಾಡಿನ ಸಂಸ್ಕೃತಿಯ ಕುರಿತು ಹೇಳಲಾಗಿದೆ. ಈ ಕ್ಷೇತ್ರದಲ್ಲಿ ಈ ತನಕ ನಡೆದಿರುವ ಕೆಲಸ, ಅಧ್ಯಯನದ ವ್ಯಾಪ್ತಿ, ಉದ್ದೇಶ, ವಿಧಾನಗಳ ಕುರಿತು ತಿಳಿಸಲಾಗಿದೆ. ನಾಗಬ್ರಹ್ಮ ಪರಿಕಲ್ಪನೆಯ ಎರಡನೆಯ ಅಧ್ಯಾಯದಲ್ಲಿ ತುಳುವರ ಆರಾಧ್ಯ ದೈವ ಬೆರ್ಮೆರ್ ಪ್ರಾಚೀನತೆ, ಸ್ವರೂಪ, ಮಹತ್ವ, ಬೆರ್ಮೆರ್ ಪದದ ಅರ್ಥ ಪರಿಕಲ್ಪನೆ, ಬೆರ್ಮೆರ್ ಸೃಷ್ಟಿಯ ಮೂಲ ಮತ್ತು ವೈಶಿಷ್ಟ್ಯ, ಸೃಷ್ಟಿಕರ್ತ ಬೆರ್ಮೆರ್, ಆಲಡೆ ಮತ್ತು ಗರಡಿ ಬೆರ್ಮೆರ್, ಭೂತಬ್ರಹ್ಮ, ಯಕ್ಷಬ್ರಹ್ಮ ಮತ್ತು ನಾಗಬ್ರಹ್ಮ ಪರಿಕಲ್ಪನೆಯ ಮೂರ್ತಿಗಳು ಮೊದಲಾದುವುಗಳ ಕುರಿತು ಸಾಕಷ್ಟು ಅಧ್ಯಯನ ನಡೆದಿದೆ. ಭೂತಾರಾಧನೆಯ ಪ್ರಾಚೀನತೆಗೆ ಕಾರ್ಕಳದ ಕಾಂತೇಶ್ವರ ದೇವಾಲಯದ ಕ್ರಿ.ಶ. 1379ರ ಶಾಸನದಲ್ಲಿರುವ ‘ದೈವಕ್ಕೆ ತಪ್ಪಿದವರು’ ಎಂದಿರುವ ದಾಖಲೆಯನ್ನು ಅಧ್ಯಯನಕಾರರು ಇಲ್ಲಿ ಉಲ್ಲೇಖಿಸಿದ್ದಾರೆ.
ನಾಗಬ್ರಹ್ಮ ಸೇರಿಗೆಯ ಮೂರನೆಯ ಅಧ್ಯಾಯದಲ್ಲಿ ಆಲಡೆ ಸಂಕೀರ್ಣದ ದೈವಗಳಾದ ಬ್ರಹ್ಮ ಲಿಂಗೇಶ್ವರ, ರಕ್ತೇಶ್ವರಿ, ನಾಗ, ನಂದಿಗೋಣ, ಉಲ್ಲಾಯ, ಖಡ್ಗೇಶ್ವರಿ, ಸಿರಿಗಳು, ಕುಮಾರ, ಪಂಜುರ್ಲಿ, ಅಡ್ಕತ್ತಾಯ, ಧೂಮವತಿ, ಗೆಜ್ಜೆಕತ್ತಿರಾವಣ, ಬ್ರಹ್ಮಸ್ಥಾನದಲ್ಲಿ ಆರಾಧನೆಗೊಳ್ಳುವ ದೈವಗಳಾದ ಬೆರ್ಮೆರ್, ನಂದಿಗೋಣ, ರಕ್ತೇಶ್ವರಿ, ನಾಗ, ಭೈರವ, ಗರಡಿ ಸಂಕೀರ್ಣದ ದೈವಗಳಾದ ಬ್ರಹ್ಮ, ಕೋಟಿಚೆನ್ನಯ, ಕಿನ್ನಿದಾರು, ಮಾಯಂದಾಲ್, ಕುಜುಂಬಕಾಂಜ, ಒಕ್ಕುಬಲ್ಲಾಳ, ಜೋಗಿಪುರುಷ, ಶಕ್ತಿ ದೇವತೆಗಳು, ಮುಗೇರ್ಲು ಸಂಕೀರ್ಣ ದೈವಗಳಾದ ಎಣ್ಮೂರು ದೆಯ್ಯು, ಕೆಲತ ಪೆರ್ನಲೆ, ತನ್ನಿಮಾಣಿಗ ದೈವಗಳಬಗೆಗೆ ಅಧ್ಯಯನ ನಡೆದಿದೆ. ಇಲ್ಲಿ ಡಾ. ಲಕ್ಷ್ಮೀ ವಿ. ಅವರು ಪ್ರಾದೇಶಿಕ ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ಗುರುತಿಸಿದ್ದಾರೆ. ಮುದ್ದ ಕಳಲ ಮತ್ತು ಮಾನ್ಯಲೆ ಪೆರ್ನಲೆ ಎನ್ನುವುದು ಎಣ್ಮೂರು ದೆಯ್ಯು ವೀರರಿಗಿರುವ ಪ್ರಾದೇಶಿಕ ಹೆಸರುಗಳು.
ನಾಗಬ್ರಹ್ಮ ಆರಾಧನಾ ಪ್ರಕಾರಗಳ ನಾಲ್ಕನೆಯ ಅಧ್ಯಾಯದಲ್ಲಿ ವೈದಿಕ ಮೂಲ ಪ್ರಕಾರಗಳನ್ನು ಮತ್ತು ತಾಂತ್ರಿಕ ಮೂಲ ಪ್ರಕಾರಗಳನ್ನು, ಜನಪದ ಮೂಲ ಪ್ರಕಾರಗಳನ್ನು ದಾಖಲಿಸುತ್ತಾ ಸರ್ಪ ಸಂಸ್ಕಾರ, ನಾಗಪ್ರತಿಷ್ಟಾಪನೆ, ಬ್ರಹ್ಮ ಸಮಾರಾಧನೆ, ಸುಬ್ರಹ್ಮಣ್ಯ, ಮೂರಿಳು, ಸರ್ಪಂತುಳ್ಳಲ್, ಸರ್ಪಂಕಳಿ ಮೊದಲಾದ ಮೂವತ್ತೊಂದು ವಿಧದ ಆರಾಧನಾ ವೈವಿಧ್ಯ ಲೋಕವನ್ನು ಪರಿಚಯಿಸಿರುವುದು ಈ ಅಧ್ಯಯಯನದ ಹೆಚ್ಚುಗಾರಿಕೆ. ವೇದೇತಿಹಾಸ ಪುರಾಣಗಳ ನಾಗಬ್ರಹ್ಮ ಎಂಬ ಐದನೆಯ ಅಧ್ಯಾಯದಲ್ಲಿ ನಾಗ-ಗರುಡಾವತಾರ, ಜರತ್ಕಾರು ವಿವಾಹ ಮೊದಲಾದುವುಗಳನ್ನು ಚರ್ಚಿಸಿದ್ದಾರೆ.
ತುಳು ಜನಪದ ಸಾಹಿತ್ಯದ ನಾಗಬ್ರಹ್ಮ ಎನ್ನುವ ಆರನೆಯ ಅಧ್ಯಾಯದಲ್ಲಿ ಸಿರಿ ಪಾಡ್ದನದಲ್ಲಿ ಬರುವ ಲಂಕೆ ಲೋಕನಾಡಿನ ಬೆರ್ಮೆರ್, ಕೋಟಿಚೆನ್ನಯ ಪಾಡ್ದನದಲ್ಲಿ ಬರುವ ಬೆರ್ಮೆರ್, ಮುಗೇರ್ಲು ಪಾಡ್ದನದಲ್ಲಿ ಬರುವ ಬೆರ್ಮೆರ್ ಮೊದಲಾದ ಬ್ರಹ್ಮರ ಪರಿಕಲ್ಪನೆಗಳ ಕುರಿತು ಅಧ್ಯಯನ ನಡೆಸಿದ್ದಾರೆ.
ಅಧ್ಯಾಯ ಏಳರಲ್ಲಿ ಕಂಬಳದ ಪ್ರಾಚೀನತೆ, ಕಂಬಳ ಪದದ ನಿಷ್ಪತ್ತಿ, ಕಂಬಳದ ಮಹತ್ವ ಮೌಖಿಕ ಪರಂಪರೆಯಲ್ಲಿ ಕಂಬಳ, ಕಂಬಳದ ಪ್ರಕಾರಗಳು, ಕಂಬಳದಲ್ಲಿ ದೈವಾರಾಧನೆ ಮೊದಲಾದುವುಗಳ ಕುರಿತ ಅಧ್ಯಯನವಿದೆ.
ಅಧ್ಯಾಯ ಎಂಟರಲ್ಲಿ ಕಂಬಳಕೋರಿ ನೇಮ ಮತ್ತು ಆ ಹೊತ್ತು ಅಲ್ಲಿ ನಡೆಯುವ ‘ಒಂದು ಕುಂದು ನಲುವತ್ತು ದೈವಗಳು’, ಕಿನ್ನಿಮಾಣಿ ಪೂಮಾಣಿ, ಕೋಮರಾಯ, ಬಬ್ಬರ್ಯ, ಪಂಜುರ್ಲಿ, ಕಲ್ಕುಡ-ಕಲ್ಲುರ್ಟಿ, ರಕ್ತೇಶ್ವರಿ ಮೊದಲಾದ ದೈವಗಳ ವೈವಿಧ್ಯ ವೈಶಿಷ್ಟ್ಯಗಳ ನಿರೂಪಣೆಯಿದೆ.
ಬೆರ್ಮೆರ್ ಆರಾಧನೆಯ ಮೇಲೆ ಇತರ ಸಂಪ್ರದಾಯಗಳ ಪ್ರಭಾವ ಎನ್ನುವ ಒಂಬತ್ತನೆಯ ಅಧ್ಯಾಯದಲ್ಲಿ ಬೆರ್ಮೆರ್ ಆರಾಧನೆಯ ಮೇಲೆ ಯಕ್ಷಾರಾಧನೆಯ ಪ್ರಭಾವ, ಬ್ರಹ್ಮಯಕ್ಷ-ಬೆರ್ಮೆರ್, ಅರಸು ಆರಾಧನೆ, ವೀರ ಆರಾಧನೆ, ನಾಥ ಸಂಪ್ರದಾಯ ಮತ್ತು ನಾಗ ಬ್ರಹ್ಮ ಹಾಗು ಇವುಗಳ ಮೇಲೆ ಬೇರೆ ಬೇರೆ ಸಂಪ್ರದಾಯಗಳ ಪ್ರಭಾವಗಳ ವಿವರಗಳನ್ನು ನೀಡಿದ್ದಾರೆ.
ಹತ್ತನೆಯ ಅಧ್ಯ್ಯಾಯ ಉಪಸಂಹಾರದಲ್ಲಿ ತಮ್ಮ ಅಧ್ಯಯನದ ನಿಲುವನ್ನು ಮಂಡಿಸಿ ಸಮರ್ಥನೆ ನೀಡಿದ್ದಾರೆ. ಪೆರಿಯಾರ್>ಬೆರ್ಮೆರ್> ಬೆರ್ಮೆ>ಬ್ರಮ್ಮೆ>ಬ್ರಹ್ಮ ಆಗಿರಬಹುದಾದುದನ್ನು ಗುರುತಿಸುವ ಕೆಲಸ ಆಗಬೇಕಾಗಿದೆ.
ಮಹಾಬಲಿ, ಬಲೀಂದ್ರ, ಮಹಿಷಾಸುರ, ಭರಮ, ಸುಬ್ರಹ್ಮಣ್ಯ, ಸುಬ್ಬಯ, ಕಾಡ್ಯನಾಟದ ಸ್ವಾಮಿ, ಮಡಿಕೆಯಲ್ಲಿ ಬೆರ್ಮೆರ್, ಕಾಳಭೈರವ, ಕುಂಡೋದರ ಭೂತ, ತುಳುನಾಡನ್ನು ಆಳಿದ ಪ್ರಾಚೀನ ಅರಸ, ಪೆರುಮಾಳ, ಪುರಾತನ ಹಿರಿಯ, ಬೆರ್ಮೆರ್ ರಾಜನಾಗಿದ್ದನೇ ?, ‘ಒಂಜಿಕುಂದು ನಲ್ಪ, ಸಾರತ್ತೊಂಜಿ ದೈವೊಲು ಇದೊಂದು ನೆಲೆ, ಸ್ತರ, ಪರಿಪೂರ್ಣತೆಯ ಹಂತ. ಅದು 39 ಏಕೆ? 1001 ಏಕೆ? ಅಧ್ಯಯನ ಆಗಬೇಕು.
ಡಾ. ಲಕ್ಷ್ಮೀ ವಿ. ತಮ್ಮ ಅಧ್ಯಯನದ ಕ್ಷೇತ್ರಕಾರ್ಯ ವಿವರಗಳನ್ನು ಸಮಗ್ರವಾಗಿ ನೀಡಿದ್ದಾರೆ. ವಿಸ್ತೃತ ಓದಿನ ಆಕರ ಸೂಚಿಯನ್ನು ಮುಂದಿಟ್ಟಿದ್ದಾರೆ. ಸಾಕಷ್ಟು ನೆರಳು ಬೆಳಕಿನ ವರ್ಣಚಿತ್ರಗಳನ್ನು ಹಾಗೂ 38 ಆಚರಣೆಗಳ ಆಡಿಯೋ-ವೀಡಿಯೋ ಸಂಗ್ರಹ ಮಾಹಿತಿ ಒದಗಿಸಿದ್ದಾರೆ. ನಾಗ ಬೆರ್ಮೆರ್ ಪಾಡ್ದನದ ಮೂರು ಪಾಠಗಳನ್ನು ಹಾಗು ಕಂಬಳ ಸಂಬಂಧಿ ‘ಈಜೊ ಮಂಜೊಟ್ಟಿ ಗೋಣ’ಪಾಡ್ದನಪಠ್ಯ ಸಂಗ್ರಹಿಸಿ ಅದರ ಕನ್ನಡ ಅನುವಾದವನ್ನೂ ಕೊಟ್ಟಿದ್ದಾರೆ. ಪೂಕರೆ ನೇಮ ಒಂದೆಡೆಯಲ್ಲ ಕೋಳ್ಯೂರು, ನಡಿಬೈಲು, ಅನಂತಾಡಿ, ಬಂಟ್ವಾಳದ ಬೀರೂರು, ಕೊಡ್ಲಮೊಗರು, ಅರಿಬೈಲು, ಕಾಸರಗೋಡಿನ ಚೌಕಾರು(ಅದೂ ಮೂರು ದಿನಗಳಲ್ಲಿ ಒಂದೇ ಊರಲ್ಲಿ). ಹಾಗೆಯೇ ನಿಡಿಗಲ್ ಲೋಕನಾಡು ಮೊದಲಾದ ಹತ್ತು ಹದಿನಾಲ್ಕು ಬ್ರಹ್ಮ ಆಲಡೆಗಳನ್ನು ಸಂದರ್ಶನ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಹತ್ತಾರು ಗರೊಡಿಗಳನ್ನು ಭೇಟಿಮಾಡಿದ್ದಾರೆ. ಹೀಗೆ ಆಸಕ್ತಿ, ಕುತೂಹಲ ಮತ್ತು ಹುಡುಕಾಟದ ಬೆನ್ನು ಹತ್ತುವ ಚಪಲದ ನೆಲೆಗಳನ್ನು ಮೀರಿ ಡಾ. ಲಕ್ಷ್ಮೀ ಅವರು ತಮ್ಮ ಅಧ್ಯಯನದ ಒಳನೋಟಗಳನ್ನು ನೀಡುವ ಪ್ರಯತ್ನ ನಡೆಸಿದ್ದಾರೆ.
ಅರಸು ಆರಾಧನೆ, ಪಿತೃ ಆರಾಧನೆ, ಭೂತಾರಾಧನೆ, ನಾಗಾರಾಧನೆ, ಯಕ್ಷಾರಾಧನೆ ಹಾಗೂ ಬಲೀಂದ್ರ ಅರಾಧನೆಗಳ ಸಮನ್ವಯ ನಾಗಾರಾಧನೆಯಲ್ಲಿ ಕಾಣಿಸುತ್ತದೆ ಎನ್ನುವ ನಿಲುವು ತಳೆದಿದ್ದಾರೆ. ಇಲ್ಲೆಲ್ಲ ಎಲ್ಲೂ ಬೆರ್ಮೆರ್ ಯಾರು ಏನು, ನಾಗ ಬೆರ್ಮೆರ್ ಯಾರು? ಭೂತಗಳ ಅಧಿಪತಿಯೇ ? ಎಂದೆಲ್ಲ ಅಂತಿಮ ನಿಲುವಿಗೆ ಅವರು ಬಂದಿಲ್ಲ. ಅದು ದೋಷ ಅಲ್ಲ, ಸಂಶೋಧನೆಯ ಗುಣ.ಅವಸರಿಸದಿರುವುದು ಚರ್ಚೆಗಳಿಗೆ ಆಹ್ವಾನ ನೀಡಿದಂತೆ. 



ಜನಪದ ಸಂಸ್ಕೃತಿಯ ಅಧ್ಯಯನಾಂಶಗಳನ್ನು ಸೋಜಿಗಪಡುವ ಹಾಗೆ ಒಂದೆಡೆ ರಾಶಿ ಹಾಕಿ ಸಂಶೋಧನಾ ಸಾಧ್ಯತೆಗಳನ್ನು ತೆರೆದು ತೋರಿಸಿದ್ದಾರೆ.ಇದೇ ಕಾಲಕ್ಕೆ ಇಲ್ಲಿ ಡಾ. ಲಕ್ಷ್ಮೀ ಅವರಿಗೆ ತಮ್ಮ ಸಂಪ್ರಬಂಧದ ಸಂರಚನೆಗೆ ಬೇಕಾದ ಚೌಕಟ್ಟು ಈ ಮೊದಲೇ ಸಿದ್ಧವಾಗಿತ್ತು ಎನ್ನುವ ಇನ್ನೊಂದು ಬಹು ಮುಖ್ಯವಾದ ಅಂಶದ ಕಡೆಗೆ ಗಮನ ಕೊಡಬೇಕಾಗಿದೆ.
ನೂರಕ್ಕೂ ಹೆಚ್ಚು ಕಥೆ, ವೈಚಾರಿಕ ಲೇಖನಗಳು, ಅಂಕಣ ಬರಹಗಳು ಮೊದಲಾದ ಸಾಹಿತ್ಯ ಮತ್ತು ಸಂಶೋಧನ ಪ್ರವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ. ಲಕ್ಷ್ಮಿ ವಿ. ಅವರು ಅರಿವಿನಂಗಳದ ಸುತ್ತ(ಶೈಕ್ಷಣಿಕ ಬರೆಹಗಳು), ಮನೆಯಂಗಳದಿ ಹೂ(ಕಥಾಸಂಕಲನ), ದೈವಿಕ ಕಂಬಳ ಕೋಣ (ತುಳು ಜಾನಪದ ಸಂಶೋಧನೆ), ಸುಬ್ಬಿ ಇಂಗ್ಲೀಷ್ ಕಲ್ತದು(ಮಹಿಳೆ ಬರೆದ ಮೊದಲ ಹವಿಗನ್ನಡ ನಾಟಕ), ತುಂಡುಭೂತಗಳು: ಒಂದು ಅಧ್ಯಯನ, ಕನ್ನಡ-ತುಳು ಜನಪದ ಕಾವ್ಯಗಳಗಳಲ್ಲಿ ಸಮಾನ ಆಶಯಗಳು, ತುಳು ಪಾಡ್ದನಗಳಲ್ಲಿ ಸ್ತ್ರೀ, ಪಾಡ್ದನಸಂಪುಟ, ತುಳುವ ಸಂಸ್ಕಾರಗಳು ಮತ್ತು ವೃತ್ತಿಗಳು ಎಂಬ ಐದು ಕೃತಿಗಳನ್ನು ಏಕಕಾಲಕ್ಕೆ ಪ್ರಕಟಿಸುವ ಸಾಹಸ ಮಾಡಿದವರು.
 

ಹಾಗೆಯೇ ಮುಂದಿನ ಸರದಿಯಲ್ಲಿ, ತುಳುನಾಡಿನ ಅಪೂರ್ವ ಭೂತಗಳು, ಬೆಳಕಿನೆಡೆಗೆ ಸಂಶೋಧನಾ ಲೇಖನಗಳು. ತುಳು ಜನಪದ ಕವಿತೆಗಳು ಚಂದಬಾರಿ ರಾಧೆ ಗೋಪಾಲ ಮತ್ತು ಇತರ ಅಪೂರ್ವ ಪಾಡ್ದನಗಳು, ಕಂಬಳ ಕೋರಿ ನೇಮ(ತುಳು ಜಾನಪದ ಸಂಶೋಧನೆ) ಮತ್ತೊಂದು ಕಂತಿನ ಐದು ಪುಸ್ತಕಗಳನ್ನು ಪ್ರಕಟಿಸುವ ಧೈರ್ಯ ಮಾಡಿದವರು. ಹೀಗೆ ಒಟ್ಟು ಹದಿನಾಲ್ಕು ಕೃತಿಗಳು (ಮತ್ತೆ ಐದು ಕೃತಿಗಳು ಅಚ್ಚಿನಲ್ಲಿವೆ) ಇವರ ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ: ಒಂದು ವಿಶ್ಲೇಷನಾತ್ಮಕ ಅಧ್ಯಯನಕ್ಕೆ ದೊಡ್ಡ ಗಂಟಿನ ಮೊದಲ ಬೌದ್ಧಿಕ ಬಂಡವಾಳವಾಗಿರುವುದು ನಿಜ.
 

ವಾಸ್ತವವಾಗಿ ಭೌತಿಕ ಶರೀರಕ್ಕೆ ಎರಡೆರಡು ಕೈಕಾಲುಗಳು ಹೇಗೋ, ಹಾಗೆ ಇವರು ಗಟ್ಟಿಯಾಗಿದ್ದಾರೆ. ಹಾಗೆಯೇ ಅಂಗೈಗೆ ಐದು ಬೆರಳುಗಳ ಹಾಗೆ ಒಂದು ಹಿಡಿಗೆ ಹದವಾಗಿದ್ದಾರೆ. ಹೇಗೆ ಅಂಗೈಗೆ ಐದು ಬೆರಳುಗಳ ಸಂಯೋಜನೆಯ ಸಹಕಾರ ಒಂದು ಹಿಡಿತಕ್ಕೆ ಕಾರಣವಾಗುವುದೋ ಹಾಗೆ ಇಲ್ಲಿ ಒಂದೊಂದು ಹಿಡಿಯಷ್ಟು ಕೆಲಸಗಳು ಸಾಧ್ಯವಾಗಿದೆ. ಇದು ನಿಜಕ್ಕೂ ಈ ಹೆಣ್ಣುಮಗಳ ಸಾಹಸವೇ ಸರಿ. ಇಂತಹ ಸಂಶೋಧನೆಯ ಮತ್ತು ಗ್ರಂಥಗಳ ಪ್ರಕಟಣೆಯ ಕೆಲಸಗಳಿಗೆ ಕೇವಲ ಅಧ್ಯಯನ ಆಸಕ್ತಿ ಮಾತ್ರ ಇದ್ದರೆ ಸಾಕಾಗುವುದಿಲ್ಲ ಜೊತೆಗೆ ಉತ್ಸಾಹ ಮತ್ತು ಛಲಗಳ ಮನೋಧರ್ಮದ ದೃಢ ಸಂಕಲ್ಪವೂ ಬೇಕು. ಜೊತೆಗೆ ಧೈರ್ಯವೂ ಬೇಕು. ಇರುವ ಮತ್ತು ಸಿಗುವ ಅವಕಾಶಗಳ ಸದುಪಯೋಗಕ್ಕಾಗಿ ಅವರ ಮನಸ್ಸು ಸದಾ ತುಡಿಯುತ್ತಲೂ ಇರಬೇಕು. ಇಲ್ಲದೆ ಹೋದರೆ ಬೌದ್ಧಿಕ ರಂಗದಲ್ಲಿ ಅಧ್ಯಯನ ಸಾಧನೆಯ ಉತ್ಪನ್ನಗಳು, ಸಾರಸ್ವತಲೋಕದಲ್ಲಿ ಸಾಧನೆಗಳು ಲಭ್ಯವಿರುವುದಿಲ್ಲ.
 

ತರಗತಿಯಲ್ಲಿ ಕಲಿಸುವ ಜೊತೆಯಲ್ಲೇ ಅಧ್ಯಾಪನ. ಪ್ರಾಧ್ಯಾಪನ ಕಾಯಕದಲ್ಲಿ ಕಲಿಯುವ ಅವಕಾಶಗಳೂ ಹೇರಳ. ಇಂತಹ ಸಂದರ್ಭಗಳನ್ನು ಹಗುರವಾಗಿ ಕಾಣದೆ ಲಕ್ಷ್ಮೀಯಂತಹವರು ಗಂಭೀರವಾಗಿ ತೆಗೆದುಕೊಳ್ಳವುದರಿಂದಲೇ ಈ ತರದ ಕೆಲಸಗಳು ಸಾಧನೆಯಾಗಿ ಪರಿವರ್ತನೆಗೊಳ್ಳುತ್ತವೆ. ಇಲ್ಲಿ ಕೆಲಸ ಮತ್ತು ಬಿಡುವು ಪರಸ್ಪರ ಹೊಂದಾಣಿಕೆಯಲ್ಲೇ ಸಾಗುತ್ತಿರುತ್ತವೆ. ಹಾಗಿದ್ದಾಗಲೇ ಕಟ್ಟುವ ಕೆಲಸ ನಡೆದು ಉತ್ಪನ್ನದ ಸಾಧನೆಯಾಗಿ ಸಿದ್ಧಿಸುತ್ತದೆ. ಹೀಗೆ ಒಂದೊಂದು ಹಂತಗಳಲ್ಲಿ ಒಂದೊಂದು ಹಿಡಿಯಷ್ಟು ಹೊತ್ತಗೆಗಳನ್ನು ಪ್ರಕಟಿಸಿ ಇವರು ನಿಜ ಅರ್ಥದಲ್ಲಿ ಪ್ರಕಟವಾಗಿದ್ದಾರೆ ಮತ್ತು ಈ ವರೆಗೆ ಅಧ್ಯಯನ ನಡೆಯದ ಕ್ಷೇತ್ರಗಳಲ್ಲಿ ಸಾಕಷ್ಟು ಕೈಯಾಡಿಸಿದ್ದಾರೆ.
 

ಯಾವಾಗ ಇಂತಹ ಕೈಯಾಡಿಸುವ ಕೆಲಸ ಸಾಧ್ಯವಾಗುತ್ತದೆ ಎಂದರೆ ಅಲ್ಲೆಲ್ಲ ಹಾಗೆಯೇ ಅಧ್ಯಯನ - ಸಂಶೋಧನ ಕ್ಷೇತ್ರಕಾರ್ಯಗಳಲ್ಲಿ ಕಾಲಾಡಿಸುವ ಕಾಯಕವೂ ನಡೆಯುತ್ತಿರಬೇಕಾಗುತ್ತದೆ. ಇದು ಇವರಿಂದ ಬಹುಪಾಲು ಸಾಧ್ಯವಾಗಿದೆ.
ಈಗಿನ ಕಾಸರಗೋಡು ಜಿಲ್ಲೆಯ ಕೋಳ್ಯೂರು ಎಂಬ ಸಾಂಸ್ಕೃತಿಕ ಹಳ್ಳಿಯಲ್ಲಿ ಹುಟ್ಟಿಬಳೆದ ಇವರು ಬಾಲ್ಯದಿಂದಲೇ ಸ್ಥಳೀಯ ಸಂಸ್ಕೃತಿಯ ಸೊಗಡಿನ ಜಾಡಿನಲ್ಲಿ ಅನುಭವಗಳನ್ನು ಮೈಗೂಡಿಸಿಕೊಂಡವರು. ವಿಜ್ಞಾನ ಪದವೀಧರೆಯಾಗಿ ಮುಂದಿನ ಅಧ್ಯಯನಗಳಲ್ಲಿ ಸಂಸ್ಕೃತ, ಕನ್ನಡ, ಹಿಂದಿ ಹೀಗೆ ಮೂರು ಸ್ನಾತಕೋತ್ತರ ಪದವಿಗಳನ್ನು ಹೇಗೆ ಮತ್ತು ಏಕೆ ಪಡೆಯಲು ಸಾಧ್ಯವಾಯಿತು? ಅಷ್ಟು ಮಾತ್ರವಲ್ಲ, ರಾಷ್ಟ್ರಭಾಷಾ ಪ್ರವೀಣ, ಎಂ.ಫಿಲ್, ಪಿಎಚ್.ಡಿ. ಕನ್ನಡದಲ್ಲಿ ಎರಡನೆಯ ಪಿಹೆಚ್. ಡಿ. ಮುಂದೆ ಎನ್.ಇ. ಟಿ(ಕನ್ನಡ) ಯು.ಜಿ.ಸಿ.ಗಳಂತಹ ಶೈಕ್ಷಣಿಕ ಅರ್ಹತೆಗಳನ್ನು ಪಡೆದುಕೊಳ್ಳವ ದಾರಿಗಳನ್ನೂ ಹೇಗೆ ಏಕೆ ಕಂಡುಕೊಂಡರು ಎಂಬುದು ಕುತೂಹಲದ ವಿಷಯವಾಗಿದೆ.


 ಇವರಿಗೆ ತಮ್ಮ ಅಪೇಕ್ಷೆಯ ಗುರಿಯೆಡೆಗೆ ತುಡಿಯುವ ಹಾಗೆ ಮುಂದೆ ಸಾಗುವ ಜ್ಞಾನದಾಹದ ಅದಮ್ಯ ಉತ್ಸಾಹದ ಜೊತೆಯಲ್ಲೇ ಚೈತನ್ಯದ ಸಿದ್ಧಿಯೂ ಇರುವುದು ಇಲ್ಲಿ ಸ್ಪಷ್ಟವಿದೆ. ‘ಅರಿವಿನಂಗಳದ ಸುತ್ತ’ ಮತ್ತು ‘ಮನೆಯಂಗಳದಿ ಹೂ’ ಎನ್ನುವ ಮೊದಲ ಎರಡು ಕೃತಿಗಳ ಶೀರ್ಷಿಗಳೇ ಇವರ ಮುನ್ನೋಟದ ಸುಳುಹುಗಳನ್ನು ಮೂಡಿಸುತ್ತವೆ.
 

ಜನಪದ ಸಂಸ್ಕೃತಿಯಲ್ಲಿ ಅಧ್ಯಯನ ಮಾಡಬಹುದಾದ ಜನಪದ ಅಂಶ(ಈoಟಞ Iಣems)ಗಳಿರುತ್ತವೆ. ಅವನ್ನು ಗಮನಿಸಿ ಗುರುತಿಸಿಕೊಳ್ಳುವ ಮನಸ್ಸು ಅಧ್ಯಯನಕಾರರಿಗೆ ಇರಬೇಕಾಗುತ್ತದೆ. ಹಾಗೆ ನೋಡಿದಾಗ ಗಮನಿಸುವುದು ಮತ್ತು ಗುರುತಿಸುವುದಕ್ಕೆ ಬಹಳಷ್ಟು ಅಂತರವಿರುತ್ತದೆ. ಸಾಮಾನ್ಯವಾಗಿ ಅಂತಹ ಅಂಶಗಳನ್ನು ಎಲ್ಲರೂ ಗಮನಿಸುತ್ತಾರೆ. ಆದರೆ ಗುರುತಿಸುವ ಮನಸ್ಸು ಎಲ್ಲರಿಗಿರುವುದಿಲ್ಲ. ಸಂಶೋಧಕನೊಬ್ಬನ ಕಣ್ಣಿಗೆ ಅಂತಹ ಆಂಶವೊಂದು ಬಿದ್ದಾಗ ಅದು ಅಧ್ಯಯನ ವಸ್ತುವಾಗುತ್ತದೆ. ‘ಮನಸ್ಸಿದ್ದರೆ ಮಾರ್ಗ’ ಎನ್ನುವ ಹಾಗೆ ಇಂತಹ ಜನಪದ ಅಂಶಗಳು ಸಂಶೋಧಕರಿಗೆ ಅಧ್ಯಯನ ವಸ್ತುಗಳಾಗಿ ಆ ಕುರಿತು ಮತ್ತೆ ಆ ಕಡೆಗೆ ಆಸಕ್ತಿ ತಳೆದು ಆಯಾ ವಿಷಯಗಳ ಕುರಿತು ಮಾಹಿತಿ ಪಡೆಯುವ ಸಂಗ್ರಹಕಾರ್ಯ ಮೊದಲಾಗುತ್ತದೆ. 
‘ಜಾತೆ’್ರಯಂತಹ ಸಂದರ್ಭದಲ್ಲಿ ‘ಪಲ್ಲಕಿ’ ಒಂದು ಜನಪದ ಅಂಶವಾದರೆ ‘ಅಡ್ಡಪಲ್ಲಕಿ’ ಎನ್ನುವುದು ಇನ್ನೊಂದು ಜನಪದ ಅಂಶವಾಗುವುದು. ನಮ್ಮನ್ನು ನಾವು ಗಂಭೀರವಾಗಿ ತೊಡಗಿಸಿಕೊಳ್ಳಬೇಕಾದ್ದೇ ಇಲ್ಲಿ.
ಹಾಗಾಗಿ ಡಾ. ಲಕ್ಷ್ಮೀ ವಿ. ಅವರ ಬರವಣಿಗೆಯಲ್ಲಿ ವ್ಯಾಪಕವಾದ ಕ್ಷೇತ್ರಕಾರ್ಯವನ್ನು ಕಾಣಲು ಸಾಧ್ಯವಾಗುತ್ತದೆ. ದಾರಿಯಲ್ಲಿ ಹೋಗಿಬರುತ್ತಿರಬೇಕಾದರೆ ಗಮನಕ್ಕೆ ಬರುವ ಒಂದು ಕಲ್ಲು ಅವರಿಗೆ ಜನಪದ ಅಂಶವಾಗಿ ಅಧ್ಯಯನಾಸಕ್ತಿಗೆ ಕಾರಣವಾಗುತ್ತದೆ.
ಹಾಗಾಗಿಯೇ ತುಳುವರ ಆರಾಧನೆಯ ಸಾರತ್ತೊಂಜಿ ದೈವಗಳಿಗೆ(ಸಾವಿರದೊಂದು ದೈವಗಳಿಗೆ) ಹೊಸ ಭಾಷ್ಯ ಬರೆಯಲು ಅರ್ಹತೆಗಳಿಸಿಕೊಂಡಿದ್ದಾರೆ. ಎ. ಮೇನ್ನರ್(1897) ನೀಡಿರುವ ಭೂತಗಳ ಸಂಖ್ಯೆ: 133. ಡಾ. ಬಿ. ಎ. ವಿವೇಕ ರೈ(1885) ನೀಡಿರುವ ಸಂಖ್ಯೆ: 274, ಡಾ.ಕೆ. ಚಿನ್ನಪ್ಪ ಗೌಡರು(1990) ನೀಡಿರುವ ಪರಿಷ್ಕೃತ ಪಟ್ಟಿಯಂತೆ: 360 ರಘುನಾಥ ಎಂ. ವರ್ಕಾಡಿ(2011) ಅವರ ‘ಕಡಂಬಾರ ಮಲ್ರಾಯೆ’ ಕೃತಿಯಲ್ಲಿ ಪುನಾರಚಿಸಿದ ಹೊಸ ಪಟ್ಟಿಯಲ್ಲಿ 407 ದೈವಗಳನ್ನು ಹೆಸರಿಸಿದ್ದಾರೆ. ಇವೆಲ್ಲವನ್ನೂ ಮೀರಿ ನಿಲ್ಲುವ ಯಾದಿಯೊಂದು ಡಾ. ಲಕ್ಷ್ಮೀ ವಿ. ಅವರಿಂದ ಸಾಧ್ಯವಾಗಿದೆ. ಇದರ ಸಾಧ್ಯತೆಗೆ ಎರಡು ಉದಾಹರಣೆಗಳನ್ನು ಅವರ ಮಾಹಿತಿ ಕೋಶದಿಂದಲೇ ಎತ್ತಿಕೊಳ್ಳಬಹುದು. ಈ ಶೋಧಕಿ ಕಂಡುಕೊಂಡ ‘ಉರವ’, ‘ಎರುಬಂಟೆ’, ‘ಅಕ್ಕ ಬೋಳಾಂಗ’, ‘ಅಜ್ಜ ಬಳಯ’ ಮೊದಲಾದ 50ರಷ್ಟು ಅಪೂರ್ವ ಭೂತಗಳು ಅವರ ಸಾಧನೆಯ ಫಲವಾಗಿವೆ. ಹಾಗೆಯೇ ‘ಕುಕ್ಕೆತ್ತಿ-ಬಳ್ಳು’, ‘ಪರವ ಭೂತ’, ‘ಕನ್ನಡ ಬೀರ’, ‘ಕುಂಡ-ಮಲ್ಲು’, ‘ಕುಲೆಮಾಣಿಗ’, ‘ಅಚ್ಚು ಬಂಗೇತಿ’ ಮೊದಲಾದ 82ರಷ್ಟು ತುಂಡು ಭೂತಗಳು ಈ ಸಾಧಕಿಯ ಸೇರಿಗೆಯಲ್ಲಿವೆ. ಇದು ಹೇಗೆ ಸಾಧ್ಯವಾಯಿತು ಎಂದು ಅಚ್ಚರಿ ಪಡಬೇಕಾಗಿಲ್ಲ. ಬಾಸೆಲ್ ಮಿಶನ್ ಪರಂಪರೆಯ ಬರ್ನೆಲ್, ಮೇನ್ನರ್ಮೊಕದಲಾದವರು ತೋರಿಸಿಕೊಟ್ಟ ಹಾದಿಯಿದೆ.
1872, ಮಾರ್ಚ್ ತಿಂಗಳ23ನೆಯ ತಾರಿಕಿನಂದು ತೊಡಗಿ ನಾಲ್ಕು ದಿವಸ ಮಂಗಳೂರಿನ ದೂಮಪ್ಪ ಎಂಬವರ ಮನೆಯಲ್ಲಿನಡೆದ ಇಲ್ಲೆಚ್ಚಿದ ನೇಮ(ಮನೆಯಲ್ಲಿ ನಡೆಯುವ ವಿಶಿಷ್ಟ ದೈವಾರಾಧನೆ)ವನ್ನು ನೋಡಿ ಅಧ್ಯಯನ ಮಾಡಿರುವ ಪರಂಪರೆಯದು. ಹಾಗೆ ಎ.ಸಿ ಬರ್ನೆಲ್ ನಡೆಸಿದ ಅಧ್ಯಯನದ ಫಲವಾಗಿ ಖಿhe ಆeviಟ ತಿoಡಿshiಠಿ oಜಿ ಣhe ಖಿuಟuvಚಿs(ಎ.ಸಿ ಬರ್ನೆಲ್: 1894-1897) ಈ ಸಂಶೋಧನ ಪ್ರಬಂಧ ಮಾಲಿಕೆಯಲ್ಲಿ ಪ್ರಮುಖ ಭೂತಗಳ ಒಂದು ಪಟ್ಟಿಯಿದೆ. ಈ ಪಟ್ಟಿಯನ್ನು ಸಿದ್ಧಮಾಡಿ ಗ್ರಂಥದಲ್ಲಿ ಸೇರಿಸಿದವರು ಎ. ಮೇನ್ನರ್. ಈ ಪಟ್ಟಿಯಲ್ಲಿ 133 ಭೂತಗಳ ಹೆಸರುಗಳಿವೆ. ಡಾ. ಬಿ. ಎ. ವಿವೇಕ ರೈ(1985) ಅವರ ‘ತುಳು ಜನಪದ ಸಾಹಿತ್ಯ’ ಕೃತಿಯಲ್ಲಿ274(ಪು.35-38) ಭೂತಗಳ ಹೆಸರುಗಳಿವೆ. ಡಾ. ಕೆ. ಚಿನ್ನಪ್ಪ ಗೌಡ ಕೆ.(1990)ಅವರ ಭೂತಾರಾಧನೆ ಜಾನಪದೀಯ ಅಧ್ಯಯನ ಗ್ರಂಥದಲ್ಲಿ 360 ಭೂತಗಳ ಪರಿಷ್ಕೃತ ಪಟ್ಟಿಯಿದೆ(ಪು.34-39). ‘ಸಾವಿರದೊಂದು ಭೂತಗಳ ಬೆನ್ನು ಹಿಡಿದಾಗ’ ಎನ್ನುವ ಲೇಖನದಲ್ಲಿ ರಘುನಾಥ ಎಂ. ವರ್ಕಾಡಿ(2011, ಪು.65-79) ಅವರ ‘ಕಡಂಬಾರ ಮಲ್ರಾಯೆ’ ಕೃತಿಯಲ್ಲಿ 407 ಭೂತಗಳ ಹೆಸರುಗಳು ದಾಖಲಾಗಿವೆ. ಈ ಲೆಕ್ಕಾಚಾರ ತೀರ ಈಚೆಗಿನದು.
ನಾನು ನನ್ನ ಜನಪದ ಸುತ್ತಮುತ್ತ ಕೃತಿಯಲ್ಲಿ ದಾಖಲಿಸಿರುವಂತೆ ಮತ್ತು ಕಂಡುಕೊಂಡಂತೆ ‘ಕಂಡಿಗೆತ್ತಾಯ’(ಬಜ್ಪೆ-ಕೊಳಂಬೆ), ‘ನಡ್ಡೊಡಿತ್ತಾಯ’(ಕಾರಿಂಜೆ), ‘ಮುಕುಡಿತ್ತಾಯಿ’ ಈ ಮೂರು ಭೂತಗಳ ಹೆಸರುಗಳು ಈಗಾಗಲೇ ಮಾಡಿರುವ ಪಟ್ಟಿಯಲ್ಲಿ ಇಲ್ಲ. ಹಾಗಾಗಿ ಅವು ಸೇರಿದಾಗ: 407+3=410 ಭೂತಗಳ ಲೆಕ್ಕ ಸಿಗುತ್ತದೆ.
ತುಳುವರು ಸಾವಿರದೊಂದು(ಸಾರತ್ತೊಂಜಿ) ಭೂತಗಳನ್ನು ನಂಬಿಕೊಂಡು ಬಂದ ಪರಂಪರೆಯವರು. ಇಲ್ಲೀಗ 133 ಭೂತಗಳ ಈ ಸಂಖ್ಯೆ ಹೆಚ್ಚಾಗುತ್ತಿರುವುದೆಂದರೆ ಭೂತಗಳ ಸಂತಾನ ಅಭಿವೃದ್ಧಿಯಾಗಿದೆ ಎಂದರ್ಥವಲ್ಲ. ಒಂದಾನೊಂದು ಕಾಲದಲ್ಲಿ ಸಾವಿರದೊಂದು ದೈವಗಳನ್ನು ನಂಬಿಕೊಂಡು ಬರುತಿದ್ದರೂ ಕಾಲಕ್ರಮೇಣ ಈ ನಂಬಿಕೆ ಸಡಿಲಾಗಿ ಅವುಗಳ ಸಂಖ್ಯೆ ಜನಮಾನಸದ ನೆನಪಿನಲ್ಲಿ ಕಡಿಮೆಯಾಗಿರಬಹುದು. 


ಅಧ್ಯಯನ ಮತ್ತು ಸಂಶೋಧನೆಗಳಿಂದಾಗಿ ಅವುಗಳ ಹೆಸರುಗಳು ಮತ್ತೆ ಬೆಳಕಿಗೆ ಬಂದುವು. ಹಾಗೆ ಇದೀಗ ಡಾ. ಲಕ್ಷ್ಮೀ ವಿ. ಅವರ ಈ ಸ್ವರೂಪದ ಶೋಧನೆಯಿಂದಾಗಿ 132 ದೈವಗಳು ನಮ್ಮ ತಿಳುವಳಿಕೆಯ ಮಜಲಿಗೆ ಬಂದಿವೆ. ಆಗ 410+132=542 ಎಂದಾಗುವುದು. ಇನ್ನು ಮುಂದೆ ಅವುಗಳ ಲೆಕ್ಕಕೊಡುವಾಗ 542ಕ್ಕಿಂತ ಕುಂದು ಬರಬಾರದು. ಶೋಧನೆಗೆ ಇನ್ನೂ ಎಡೆಯಿದೆ. ಸಾವಿರದೊಂದು ಗುರಿಯೆಡೆಗೆ ಸಾಗುವ ಹಾದಿಯಿದೆ.
‘ತುಳುನಾಡಿನ ನಾಗಬ್ರಹ್ಮ ಮತ್ತು ಕಂಬಳ: ಒಂದು ವಿಶ್ಲೇಷಣಾತ್ಮಕ ಅಧ್ಯಯನ’ ವಿಷಯದಲ್ಲಿ ಸಂಶೋಧನೆ ನಡೆಸಿ ಪಿಎಚ್.ಡಿ ಪದವಿ ಪಡೆದ ತಮ್ಮ ಸಂಪ್ರಬಂಧವನ್ನು ಪರಿಷ್ಕರಿಸಿ ಪ್ರಕಟಿಸಿರುವ ಡಾ. ಲಕ್ಷ್ಮೀ ವಿ. ಅವರನ್ನು ನಾನು ಹಾರ್ದಿಕವಾಗಿ ಅಭಿನಂದಿಸುತ್ತಿದ್ದೇನೆ.
 

                                                                    ಡಾ. ವಾಮನ ನಂದಾವರ, ಮಂಗಳೂರು,

Friday 12 September 2014

ಜೈನ ಮುಸ್ಲಿಂ ಬಾಂಧವ್ಯ ಬೆಸೆದ ಬಬ್ಬರ್ಯ ಭೂತ-ಡಾ.ಲಕ್ಷ್ಮೀ ಜಿ ಪ್ರಸಾದ



ತುಳು ನಾಡಿನ ಪ್ರಸಿದ್ಧ ಭೂತ ಬಬ್ಬರ್ಯ ಮೂಲತ ಮುಸ್ಲಿಂ ಮೂಲದ ದೈವತ .ಈತನ ತಂದೆ  ಮಾದವ ಸುಲಿಕಲ್ಲ ಬ್ಯಾರಿ ಸಮುದ್ರ ತೀರದಲ್ಲಿ ಉಪ್ಪು ಮೆಣಸಿನ ಅಂಗಡಿ ಹಾಕಿ ವ್ಯಾಪಾರ ಮಾಡುತ್ತಿದ್ದ ಈತನ ತಾಯಿ ಜೈನರ ಹುಡುಗಿ
 ಮುಹಮ್ಮದ್ >ಮೊಮ್ಮದ್ >ಮಾದವ ಆಗಿರಬೇಕೆಂದು ಡಾ.ಅಮೃತ ಸೋಮೇಶ್ವರರು ಅಭಿಪ್ರಾಯ ಪಟ್ಟಿದ್ದಾರೆ 

  .ಒಂದು ದಿನ ಕಡಲು ಉಕ್ಕ್ಕಿ ಮಾದವ ಸುಲಿಕಾಲ ಬ್ಯಾರಿಯ   ಅಂಗಡಿ ಮುಗ್ಗಟ್ಟು ಎಲ್ಲ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗುತ್ತದೆ .ಆಗ ಅವನು ತಲೆಯಲ್ಲಿ ಮೆಣಸು ಬೆಲ್ಲ ಕಟ್ಟು ಹೊತ್ತುಕೊಂಡು ಊರೂರು ತಿರುಗುತ್ತ ವ್ಯಾಪಾರ ಮಾಡುತ್ತಾ ಇದ್ದ .
ಹೀಗೆ ವ್ಯಾಪಾರ ಮಾಡುತ್ತಾ ಮಲಯ ದೇಶಕ್ಕೆ ಬರುತ್ತ್ತಾನೆ ಅಲ್ಲಿ ಮುತ್ತು ಸೆಟ್ಟಿ ,ರತನ್ ಸೆಟ್ಟಿ ಮೊದಲಾದ ಏಳು ಜನ ಜೈನ ಸಹೋದರರು ಇದ್ದರು .ಆ  ಜೈನ ಮಡಸ್ತಾನದ ಏಳು ಜನ ಅಣ್ಣಂದಿರಿಗೆ ಒಬ್ಬಳು ತಂಗಿ. ಅವಳನ್ನು ಮದುವೆಯಾದವರೆಲ್ಲ ಅದೇ ರಾತ್ರಿ ಸಾಯುತ್ತಾರೆ. ಇರುವ ಒಬ್ಬ ತಂಗಿಯ ಬದುಕು ಹೀಗಾಯ್ತಲ್ಲ? ಎಂಬ ಚಿಂತೆಯಲ್ಲಿರುವಾಗ ವ್ಯಾಪಾರಕ್ಕೆಂದು ಬಂದ  ಈ ಮುಸ್ಲಿಂ ಹುಡುಗ ಸುಲಿಕಲ್ಲ ಮಾಧವ ಬ್ಯಾರಿ ಇವರ ದುಃಖದ ಕಾರಣವನ್ನು ಕೇಳುತ್ತಾನೆ. ನಮ್ಮ ತಂಗಿಯನ್ನು ಮದುವೆಯಾದವರಿಗೆ ಅರ್ಧರಾಜ್ಯ ಕೊಡುತ್ತೇವೆಎಂದು ಅಣ್ಣಂದಿರು ಹೇಳುತ್ತಾರೆ. 

ಮಾಧವ ಬ್ಯಾರಿ ನಾನು ಪ್ರಯತ್ನ ಮಾಡುತ್ತೇನೆ ಎಂದ. ಒಂದು ದೊಡ್ಡ ಮನುಷ್ಯರೂಪವನ್ನು ಅಕ್ಕಿಯಲ್ಲಿ ಕಡೆದು ಮಾಡುತ್ತಾರೆ. ಆ ಅಕ್ಕಿಯ ಮನುಷ್ಯ ರೂಪವನ್ನು ರಾತ್ರಿ ಮಲಗುವಾಗ ಅವಳ ಜೊತೆಯಲ್ಲಿ ಮಲಗಿಸಿದರು. ಮಧ್ಯರಾತ್ರಿಯ ಹೊತ್ತು ಅವಳ ಮೂಗಿನಿಂದ ಎರಡು ಸರ್ಪಗಳು ಹೊರಬಂದು ಮಲಗಿದ್ದ ಬೊಂಬೆಯನ್ನು ಕಚ್ಚುತ್ತವೆ. ಆಗ ಬದಿಯಲ್ಲೇ ಅಡಗಿ ನಿಂತಿದ್ದ ಬ್ಯಾರಿ ತನ್ನ ಕತ್ತಿಯಿಂದ ಸರ್ಪಗಳನ್ನು ತುಂಡರಿಸುತ್ತಾನೆ. ಮೊದಲು ಕೊಟ್ಟ ಮಾತಿನಂತೆ ಅವನಿಗೆ ಅರ್ಧ ರಾಜ್ಯ ಹಾಗೂ ತಂಗಿಯನ್ನು ಕೊಡುತ್ತಾರೆ. (C).ಡಾ.ಲಕ್ಷ್ಮೀ ಜಿ ಪ್ರಸಾದ

ಆದರೆ ಆತ ಮದುವೆಗೆ ಒಪ್ಪುವುದಿಲ್ಲ. ಅವಳು ಚಂದ್ರನಾಥ ದೇವರ ಕೆರೆಗೆ ಸ್ನಾನಕ್ಕೆ ಹೋಗುತ್ತಾಳೆ. ಕೆರೆಯಿಂದ ಮೇಲೆ ಬರುವಾಗ ಮಾಯದ ಬಸಿರನ್ನು ಪಡೆಯುತ್ತಾಳೆ. ಬಬ್ಬರ್ಯನನ್ನು ಹೆರುತ್ತಾಳೆ. ಅವನಿಗೆ ಮಸೀದಿಯಲ್ಲಿ ಬಪ್ಪ ಎಂದು ಹೆಸರಿಡುತ್ತಾರೆ  ಆಗ ಜೈನರಿಗೂ ಮುಸ್ಲಿಮರಿಗೂ ವಿವಾದ ಉಂಟಾಗಿ ಅವರು ಊರು ಬಿಟ್ಟು ಹೋಗುವ ಕಾಲ ಬರುತ್ತದೆ. ಅಮಾವಾಸ್ಯೆಯ ದಿನ ಚಂದ್ರನನ್ನು ಕಂಡರೆ ಊರು ಬಿಟ್ಟು ಹೋಗುತ್ತೇವೆ ಎಂದು ಜೈನರು ಹೇಳುತ್ತಾರೆ. ನಾವು ಚಂದ್ರನನ್ನು ಕಂಡರೆ ಚಂದ್ರನನ್ನು ನಂಬುತ್ತೇವೆ ಎನ್ನುತ್ತಾರೆ ಮುಸ್ಲಿಮರು. ಚಂದ್ರ ಕಾಣಿಸಿದ್ದರಿಂದ ಜೈನರು ಚಂದ್ರನನ್ನು ತುಳಿದು ಊರುಬಿಟ್ಟು ಹೋಗುತ್ತಾರೆ. ಮುಸ್ಲಿಮರು ಚಂದ್ರನನ್ನು ನಂಬಿದರು. 

 ಬಬ್ಬರ್ಯ ನೀನು ಏನು ಮಾಡುತ್ತಿ? ಎಂದು ಕೇಳಿದಾಗ ಬಬ್ಬರ್ಯ ನೀವು ಮುಂದಿನಿಂದ ಹೋಗಿ, ನಾನು ಹಿಂದಿನಿಂದ ಬರುತ್ತೇನೆ ಎಂದು ಹೇಳುತ್ತಾನೆ. ದೇವರ ವರ ಪಡೆದು ಬರುತ್ತೇನೆ ಎಂದು ಹೇಳುತ್ತಾನೆ. ಮುಂದೆ ಹಡಗು ಕಟ್ಟಿಸಿ ಸಮುದ್ರಕ್ಕೆ ಇಳಿಸಿ ದುರಂತವನ್ನಪ್ಪುತ್ತಾನೆ
 ಬಬ್ಬರ್ಯ ಭೂತದ ಪಾಡ್ದನದ ಇನ್ನೊಂದು ಪಾಠದ ಪ್ರಕಾರ ಆ ಹುಡುಗಿಯನ್ನು ಮದುವೆಯಾಗಿ ಮಸೀದಿಗೆ ಕರೆ ತಂದು ಬೊಲ್ಯ ಬೀಬಿ ಫಾತಿಮಾ ಎಂದು ಹೆಸರಿಸುತ್ತಾನೆ .ನಂತರ ಅವಳು ಗರ್ಭ ಧರಿಸುತ್ತಾಳೆ .ಒಂಬತ್ತು ತಿಂಗಳಾಗುವಾಗ  ಆ ಮಗು ಬಂಗಾರದ ದುಂಬಿಯಾಗಿ ತಾಯಿಯ ಬಲದ ಮೊಲೆಯನ್ನು ಒಡೆದು ಹೊರ ಬರುತ್ತಾನೆ . 

ಅಂತು ಅವಳು ಹೇಗೋ ಒಂದು ಗಂಡು ಮಗುವಿಗೆ ಜನ್ಮ ಕೊಡುತ್ತಾಳೆ  ಮುಂದೆ.ಸಾಹಸಿಯಾದ ಆ ಹುಡುಗ ಬಪ್ಪ ತನ್ನ ಓರಗೆ ಹುಡುಗರನ್ನು ಆಟದಲ್ಲಿ ಸೋಲಿಸುತ್ತಾನೆ .ಆಗ ಸೋತ ಹುಡುಗರು ಹಾದರಕ್ಕೆ “ಹುಟ್ಟಿದ ಮಗು ಒಳ್ಳೆಯದು ತುಳುವ ಹಲಸಿನ ಹಣ್ಣಿನ ಬೀಜ ಒಳ್ಳೆಯದು “ಎಂದು ಇವನನ್ನು ಗೇಲಿ ಮಾಡಿ ನಗುತ್ತಾರೆ 
ಆಗ ಅಲ್ಲಿಂದ ಬಂದು ಅವನು ಒಂದು ಕೋಟೆ ಕಟ್ಟಿ ಅದನ್ನು ಮಾಯ ಮಾಡುತ್ತಾನೆ. . ಬಬ್ಬರ್ಯ  ವ್ಯಾಪಾರ ಮಾಡುವ ಮತ್ತು ಹಡಗು ಕಟ್ಟಿಸುವ ವಿಚಾರ ಪಾಡ್ದನದಲ್ಲಿದೆ.
                ನನ ಇಂಚ ಕುಲ್ಲುಂಡ ಜೈತ್ ಬರಾಂದ್
                ಅಂಗಾಡಿ ದಿಡೋಡು ಯಾಪಾರ ಮಲ್ಪೊಡುಂದೆ
                ಕಡಲ ಬರಿಟ್ ಮಡಲ್‍ದ ಅಂಗಾಡಿ ಕಟ್ಯೆ
                ಯಾಪಾರ ಮಲ್ತೊಂಡೆ
                ಪಣವು ಎಚ್ಚೊಂಡು ಬತ್ತ್‍ಂಡ್‍ಯೆ
                ಅಪಗಾಂಡ ಪಣ್ಪೆ ಬಬ್ಬರಿಯೆ
                ಎಂಕ್ ಪಡಾವುದ ಬೇಲೆ ಪತ್ತೊಡು
                ಪಡಾವುದ ಯಾಪಾರ ಮಲ್ಪೊಡು
ಕನ್ನಡ ರೂಪ :
                ಇನ್ನು ಹೀಗೆ ಕುಳಿತರ ಏನೂ ಬರದು
                ಅಂಗಡಿ ಇಡಬೇಕು ವ್ಯಾಪಾರ ಮಾಡಬೇಕೆಂದ
                ಕಡಲಿನ ಬದಿಯಲ್ಲಿ ತೆಂಗಿನ ಗರಿಯಿಂದ ಅಂಗಡಿ ಕಟ್ಟಿದ
         ವ್ಯಾಪಾರ ಮಾಡಿದ
       ದುಡ್ಡು ತುಂಬಿಕೊಂಡು ಬಂದಿತು
       ನನಗೆ ಹಡಗಿನ ಕೆಲಸ ಹಿಡಿಯಬೇಕು
        ಹಡಗಿನ ವ್ಯಾಪಾರ ಮಾಡಬೇಕು


ಅಲ್ಲಿಂದ ಮಲಯ ದೇಶಕ್ಕೆ ಬರುತ್ತಾನೆ ಅಲ್ಲಿ ಒಂದು ಬಿಳಿಯ ಬಣ್ಣದ ಶಾಂತಿ ಮರ ಕಾಣಿಸುತ್ತದೆ ಅದನ್ನು ನೋಡಿ ಇದರಿಂದ ಹಡಗು ಕಟ್ಟಿಸಬೇಕೆಂದು ಕೊಳ್ಳು ತ್ತಾನೆ  ಅದಕಾಗಿ ಆಚಾರಿಗಳನ್ನು ಕರೆಸುತ್ತಾನೆ
     ಆ ವೊಂಜಿ ಮರನು ಕಡ್ಪೊಡಾಂಡೆ
                ಮರೊನು ಕಡ್ಪೆರೆ ಮಲೆನಾಡ್ ತಚ್ಚವೆ
                ತುಳುನಾಡ ಆಚಾರ್ಲೆನು ಲೆಪ್ಪುಡಾಯೆರ್
                ಮರತ್ತಡೆ ಪೋದು ತೂಪೆರ್ ಆಚಾರಿಳ್ 
                ನೆಲಪೂಜಿಯೆರ್ ದೇಬೆರೆಗ್ ದಿಡ್ಯೆರ್
                ಆನೆ ಬಾರಸದ ಗಡಿ ಪಾಡ್ಯೆರ್”79
                ಆ ಒಂದು ಮರವನ್ನು ಕಡಿಯಬೇಕೆಂದ
                ಮರವನ್ನು ಕಡಿಯಲು ಮಲೆನಾಡ ತಚ್ಚವೆ
                ತುಳುನಾಡ ಆಚಾರಿಗಳನ್ನು ಕರೆಸಿದರು
                ಮರದ ಹತ್ತಿರಕ್ಕೆ ಹೋಗಿ ನೋಡುತ್ತಾರೆ ಬಡಗಿಗಳು
                ಆನೆ ಗಾತ್ರದ ಗಾಯ ಮಾಡುತ್ತಾರೆ
ನಂತರ ಬಡಗಿಗಳು ಹಡಗನ್ನು ನಿರ್ಮಿಸಿದರು ಎಂದು ಪಾಡ್ದನದಲ್ಲಿ ಹೇಳಿದೆ. ಕೆಲವೆಡೆ ಹಡಗು ತಯಾರಿಯ ಮರ ಕಡಿಯಲು ಮರಕಾಲರನ್ನು ಬರಹೇಳಿದರೆಂದು ಹೇಳಿದೆ. ಮುಗೇರರು, ಮರಕಾಲರು ಹಾಗೂ ಮೊಗವೀರರು ಒಂದೇ ವರ್ಗದವರು ಎಂದು ವಿವೇಕ ರೈ ಅಭಿಪ್ರಾಯಪಟ್ಟಿದ್ದಾರೆ.(C).ಡಾ.ಲಕ್ಷ್ಮೀ ಜಿ ಪ್ರಸಾದ

     ಇನ್ನೊಂದು ಪಾದ್ದನದಲ್ಲಿ      ತ್ರೇತಾಯುಗದ ರಾಮದೇವರ ಕಿರೀಟ, ಕೃಷ್ಣನ ಚಕ್ರ, ಜಗದೀಶ್ವರನ ತ್ರಿಶೂಲ, ದೇವೇಂದ್ರನ ವಜ್ರಾಯುಧ ಹಿಡಿದುಕೊಂಡು ಮಾಯಕದ ಹಡಗನ್ನು ಬ್ರಹ್ಮರು ನಿರ್ಮಾಣ ಮಾಡಿದರು ಎಂದು ಹೇಳಿದೆ
  ಆ ಹಡಗು ನೀರಿಗಿಳಿಯುವ ಮುನ್ನ  ಬಪ್ಪ ತನ್ನ ತಂದೆತಾಯಿರನ್ನು ಕಂಡು “ಇಂದಿನ ತನಕ ನಾನು ಜೋಗದಲ್ಲಿ ನಿಮ್ಮ ಮಗನಾಗಿದ್ದೆ .ಇಂದು ಜೋಗ ಬಿಟ್ಟು ಮಾಯಕಕ್ಕೆ ಸಂದು  ಬಿಡುತ್ತೇನೆ ಎಂದು ಹೇಳುತ್ತಾನೆ. ಆ ಹಡಗಿನಲ್ಲಿ ಕುಳಿತು ಮೂಳೂರ ಕರಿಯಕ್ಕೆ ಬರುವಾಗ ಬಿರುಗಾಳಿ ಏಳುತ್ತದೆ. ಹಡಗಿನಲ್ಲಿದ್ದ ಹಾಯಿ ಹರಿಯುತ್ತದೆ. ಕೊಂಬು ತುಂಡಾಗುತ್ತದೆ. ಹಡಗು ಬದಿಗೆ ಬರುವಾಗ ಮುಳೂರಿನ ಮುನ್ನೂರು ಜನ, ಕಾಪುವಿನ ಸಾವಿರ ಜನ ಕೂಡಿ ಹತ್ತಿರ ಹೋಗುವಾಗ, ಕಣ್ಣಿಗೆ ಕಂಡರೂ ಕೈಗೆ ಸಿಗುವುದಿಲ್ಲ. ಬಬ್ಬರ್ಯ ಹಡಗನ್ನು ಪಡುಗಂಗೆಗೆ ಕಳುಹಿಸುತ್ತಾನೆ. ಮಾಯದಲ್ಲಿ ಬಂದು ಮೂಳೂರು ಉಳ್ಳಂಗಾಯ ಕಟ್ಟೆಯಲ್ಲಿ ಜೋಗದಲ್ಲಿ ಆಗುತ್ತಾನೆ. ಸೊಲ್ಮೆ ಸಂದಾಯ ಮಾಡುತ್ತಾನೆ. ನೀನು ಯಾರಿಗೆ ಸೊಲ್ಮೆ ಸಂದಾಯ ಮಾಡುವುದು ಎಂದು ಕೇಳಲು ನನ್ನನ್ನು ಬಿಟ್ಟು ಉಳ್ಳಾಯ ರಾಯಭಾರಿ ಇದ್ದಾನೆ. ಅವನಿಗೆ ನಾನು ರಾಜ್ಯಭಾರಿ ನಾನು ನಿಮ್ಮನ್ನು ಅನುಗ್ರಹ ಮಾಡಲು ಬಂದ ಶಕ್ತಿ ಎನ್ನುತ್ತಾನೆ. ಪೊಂಗ ಬೈದ್ಯನಿಗೆ ಅಭಯ ಕೊಟ್ಟು ಒಂದು ತೊಟ್ಟು ಕಳ್ಳು ಬೀಳುವಲ್ಲಿ ಸಾವಿರ ತೊಟ್ಟು ಬೀಳುವ ಹಾಗೆ ಮಾಡುತ್ತಾನೆ.

 ಈ ಗುಟ್ಟನ್ನು ಅವನು ಅವನ ಹೆಂಡತಿಗೆ ಹೇಳಿದ ನಂತರ ಒಂದು ತೊಟ್ಟು ಕೂಡ ಬೀಳುವುದಿಲ್ಲ. ಕೊನೆಗೆ ಪೊಂಗ ಬೈದ್ಯನನ್ನು ನೀರಿನಲ್ಲಿ ಮುಳುಗಿಸುತ್ತಾನೆ. ಅವನ ಹೆಂಡತಿ ಮೂಳೂರಿನ ಮುನ್ನೂರು ಒಕ್ಕಲು, ಕಾಪುವಿನ ಸಾವಿರ ಒಕ್ಕಲು ಕೂಡಿಸಿ ದೇವರಾದರೆ ದೇವಸ್ಥಾನ, ಬ್ರಹ್ಮರಾದರೆ ಬ್ರಹ್ಮಸ್ಥಾನ, ಭೂತಗಳಾದರೆ, ಭೂತಸ್ಥಾನ ಕಟ್ಟಿಸುತ್ತೇನೆ. ನನ್ನ ಗಂಡನನ್ನು ಉಳಿಸಿಕೊಡಬೇಕು ಎಂದು ಪ್ರಾರ್ಥನೆ ಮಾಡುತ್ತಾಳೆ. ಆಗ ಪೊಂಗ ಬೈದ್ಯ ನೀರಿನಿಂದ ಎದ್ದು ಬರುತ್ತಾನೆ. ಪ್ರಾರ್ಥನೆ ಪ್ರಕಾರ ಬ್ರಹ್ಮಗುಂಡ ಮತ್ತು ಕೊಂಬಿನ ಮರ ಸ್ಥಾಪನೆ ಮಾಡುತ್ತಾರೆ. 

ಊರಿನ ಜನ ಸೇರಿ ಧ್ವಜಸ್ತಂಭ ಮಾಡಿಸುತ್ತಾರೆ. ಆಗ ಬಬ್ಬರ್ಯ ಜೋಗ ಬರುತ್ತಾನೆ. ನಾನು ದೇವರಾಗಿ ನಿಮಗೆ ಅನುಗ್ರಹ ಮಾಡುತ್ತೇನೆ ಎನ್ನುತ್ತಾನೆ. ನಾಗಬ್ರಹ್ಮ ಉಳ್ಳಾಯ ಬಬ್ಬರ್ಯ ನಾನು. ಅಂಕೋಲಕ್ಕೆ ಹೋಗಿ ಲಿಂಗರೂಪದಿಂದ ಮೂಡಿ ಬರುತ್ತೇನೆ. ಅಲ್ಲಿ ಆದಿನಾಥ ಎಂದು ಕರೆಸಿಕೊಂಡು ನೀಲೇಶ್ವರಕ್ಕೆ ಹೋಗಿ ನೀಲಕಂಠನೆಂದು ಕರೆಸಿಕೊಂಡಿದ್ದೇನೆಎಂದು ಹೇಳುತ್ತಾನೆ.
ಜೈನರಿಗೆ ಬಬ್ಬರ್ಯ ಮನೆದೈವ. ಕರಾವಳಿಯಲ್ಲಿ ಬಬ್ಬರ್ಯ ಕುಲದೈವ. ಬಬ್ಬರ್ಯ ಬೆರ್ಮರಂತೆ ಸಸ್ಯಾಹಾರಿ. ಮಾಂಸಾಹಾರ ಇಲ್ಲ. ಹಾಲು ಮತ್ತು ಸೀಯಾಳ ಆತನ ಆಹಾರ. ದೇವಸ್ಥಾನದಲ್ಲಿ ಬಬ್ಬರ್ಯ ಕ್ಷೇತ್ರಪಾಲನೆಂದು ಪಾಡ್ದನ ತಿಳಿಸುತ್ತದೆ. ಇಲ್ಲಿ ಬಬ್ಬರ್ಯ ಮತ್ತು ಬೆರ್ಮರ್ ಒಬ್ಬನೇ ಎಂಬಂತೆ ವರ್ಣಿಸಲಾಗಿದೆ.
ವಾಸ್ತವದಲ್ಲಿ ಆತ  ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಹಡಗು ಮುರಿದು ದುರಂತಕ್ಕೀದಾಗಿರ ಬಹುದು ಅಥವಾ ಕಡಲು ಗಳ್ಳರ ದಾಳಿಗೆ ಸಿಲುಕಿ ದುರಂತವನ್ನಪ್ಪಿರಬಹುದು .ದುರನತವನ್ನಪ್ಪಿದ ಅಸಾಮಾನ್ಯ ಶೂರರು ಭೂತಗಳಾಗಿ ಆರಾಧಿಸಲ್ಪಡುವುದು ತುಳು ಸಂಸ್ಕೃತಿಯಲ್ಲಿ ಸಾಮಾನ್ಯವಾದ ವಿಚಾರವಾಗಿದೆ .ಅಂತೆಯೇ ಬಪ್ಪ ಬ್ಯಾರಿ  ಬಬ್ಬರಿ ಭೂತ ವಾಗಿ ಆರಾಧಿಸಲ್ಪಟ್ಟಿರ ಬಹುದು (C).ಡಾ.ಲಕ್ಷ್ಮೀ ಜಿ ಪ್ರಸಾದ


ಈತನನ್ನು ಎಲ್ಯ ಬಬ್ಬರ್ಯ, ಮಲ್ಲ ಬಬ್ಬರ್ಯ ,ಬಾಕಿಲು ಬಬ್ಬರ್ಯ ಇತ್ಯಾದಿ ಹೆಸರಿನಿಂದ ಕೋಲ ನೀಡಿ ಆರಾಧಿಸುತ್ತಾರೆ ಬಬ್ಬರ್ಯ ಮುಸ್ಲಿಂ ಮೂಲವನ್ನು ಹೊಂದಿದ್ದರೂ ಆತನ ಆರಾಧನೆಯಲ್ಲಿ ಮಾಂಸಾಹಾರ ನಿಷಿದ್ಧ . ಬಬ್ಬರ್ಯನಿಗೆ ಸಪ್ಪೆ ಹಾಗು ಬೆಲ್ಲದ ಕಡುಬನ್ನು ಆಹಾರವಾಗಿ ನೀಡುತ್ತಾರೆ .ಬಹುಶ ಆತನ ತಾಯಿ ಜೈನ ಸ್ತ್ರೀಯಾಗಿದ್ದರಿಂದ ಬಪ್ಪ ಕೂಡ ಜೈನರಂತೆ ಸಸ್ಯಾಹಾರಿಯಾಗಿದ್ದಿರ ಬಹುದು. ಅಥವಾ ಈತನ ಆರಾಧನೆಯನ್ನು ಆತನ ತಾಯಿಯ ಕಡೆಯವರು ಆರಂಭಿಸಿರಬಹುದು .ತುಳುನಾಡಿನಲ್ಲಿ ಭೂತಾರಾಧನೆಯ ಬೆಳವಣಿಗೆಯಲ್ಲಿ ಜೈನರ ಪ್ರೋತ್ಸಾಹ ಗಣನೀಯವಾದದ್ದು ಎಂಬುದನ್ನು ಗಮನಿಸಿದರೆ ಈ ಊಹೆಗೆ ಬಲ ಸಿಗುತ್ತದೆ . ಏನೇ ಆದರು ಬಬ್ಬರ್ಯನ ಆರಾಧನೆ  ಜೈನರನ್ನು ಮತ್ತು ಮುಸ್ಲಿಮರನ್ನು ಬೆಸೆದು ಸಾಮರಸ್ಯಕ್ಕೆ ಭದ್ರ ಬುನಾದಿ ಹಾಕಿದೆ ಎಂಬುದರಲ್ಲಿ ಎರಡು ಮಾತಿಲ್ಲ
ಆಧಾರ ಗ್ರಂಥಗಳು
1 ಡಾ.ಅಮೃತ ಸೋಮೇಶ್ವರ –ತುಳು ಪಾಡ್ದನ ಸಂಪುಟ   
2 ಡಾ.ಚಿನ್ನಪ್ಪ ಗೌಡ –ಭೂತಾರಾಧನೆ –ಒಂದು ಜಾನಪದೀಯ ಅಧ್ಯಯನ
3 ಡಾ.ಬಿ ಎ ವಿವೇಕ ರೈ-ತುಳು ಜನಪದ ಸಾಹಿತ್ಯ
4 ಡಾ.ಲಕ್ಷ್ಮೀ ಜಿ ಪ್ರಸಾದ –ಭೂತಗಳ ಅದ್ಭುತ ಜಗತ್ತು



 ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕರು