Sunday, 9 November 2025

232 ಸೂರ್ಯ ನಾರಾಯಣ ಮಂಗಳೂರು: ನಮ್ಮ ಹೆಮ್ಮೆಯ ಓದುಗ ಮಿತ್ರರು : ಕರಾವಳಿಯ ಸಾವಿರದೊಂದು ದೈವಗಳು: ಡಾ.ಲಕ್ಷ್ಮೀ ಜಿ ಪ್ರಸಾದ್ ,ಮೊಬೈಲ್ 9480516684


 “ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು” ಪುಸ್ತಕವು ಕರಾವಳಿಯ ದೈವಗಳ ಹಿನ್ನೆಲೆಯನ್ನು ಅರಿಯಲು ಉತ್ಸಾಹಿ ಓದುಗರಿಗೆ ಅತ್ಯಂತ ಉಪಯುಕ್ತವಾದ  ಗ್ರಂಥ. ದೈವಾರಾಧನೆ, ಅದರ ಹಿನ್ನೆಲೆಗಳು ಹಾಗೂ ಸಂಪ್ರದಾಯಗಳ ಕುರಿತಾಗಿ ಶೋಧನಾತ್ಮಕವಾಗಿ ವಿಶ್ಲೇಷಣೆ ನೀಡಿರುವ ಈ ಗ್ರಂಥವು, ಕರಾವಳಿಯ ಶ್ರದ್ಧಾ, ಸಂಸ್ಕೃತಿ, ಮತ್ತು ಜನಪದ ವಾಡಿಕೆಗಳ ಸರಳ ಕಲಿಕೆಗಾಗಿ ಅತ್ಯುತ್ತಮ ಮಾರ್ಗದರ್ಶಿಯೂ ಆಗಿದೆ. ಓದುಗರ ಕುತೂಹಲ ಅಥವಾ ಸಂಶೋಧನ ಮನಸ್ಸಿಗೆ ಇದು ಖಚಿತವಾಗಿ ಪುಷ್ಠಿ ನೀಡುತ್ತದೆ.
ಧನ್ಯವಾದಗಳೊಂದಿಗೆ: ಸೂರ್ಯನಾರಾಯಣ ವಾಲ್ಪಾಡಿ

Friday, 7 November 2025

231 ಶ್ರೀ ಚನ್ನ ಕೇಶವ ಕಲ್ಮಾಡಿ : ನಮ್ಮ ಹೆಮ್ಮೆಯ ಓದುಗ ಮಿತ್ರರು: ಕರಾವಳಿಯ ಸಾವಿರದೊಂದು ದೈವಗಳು : ಡಾ.ಲಕ್ಷ್ಮೀ ಜಿ ಪ್ರಸಾದ್ ,


 ಆಕಸ್ಮಿಕವಾಗಿ ರೈಲಿನಲ್ಲಿ ಭೇಟಿಯಾದ  ಟೆಕ್ನಿಕಲ್ ಎಜುಕೇಶನ್ ಡಿಪಾರ್ಟ್ಮೆಂಟ್ ನಲ್ಲಿ ಜಾಯಿಂಟ್ ಡೈರೆಕ್ಟರ್ ಆಗಿ ನಿವೃತ್ತರಾದ ಶ್ರೀಯುತ  ಚನ್ನ ಕೇಶವ ಕಲ್ಮಾಡಿ..

227: ಪ್ರೀತಮ್ ಶೆಟ್ಟಿ ಕಟೀಲು : ನಮ್ಮ‌ಹೆಮ್ಮೆಯ ಪುಸ್ತಕ‌ ಮಿತ್ರರು: ಕರಾವಳಿಯ ಸಾವಿರದೊಂದು ದೈವಗಳು : ಡಾ.ಲಕ್ಷ್ಮೀ ಜಿ ಪ್ರಸಾದ್ : ಮೊಬೈಲ್ 9480516684


 ಮನೆ‌ಮನಗಳನ್ನು ತುಂಬುತ್ತಿರುವ ಕರಾವಳಿಯ ಸಾವಿರದೊಂದು ದೈವಗಳು ಕೃತಿ ತಲುಪಿದಾಗ ಪೋಟೋ ತೆಗೆದು ಸಂಭ್ರಮಿಸಿದವರು ಪ್ರೀತಮ್ ಕಟೀಲು

226 : ಪ್ರವೀಣ್ ಶೆಟ್ಟಿ ,ಬೆಂಗಳೂರು: ನಮ್ಮ ಹೆಮ್ಮೆಯ ಪುಸ್ತಕ ಮಿತ್ರರು: ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್


 ಪ್ರವೀಣ್ ಶೆಟ್ಟಿ ,ಬೆಂಗಳೂರು: ನಮ್ಮ ಹೆಮ್ಮೆಯ ಪುಸ್ತಕ ಮಿತ್ರರು

: ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ : 9480516684

Monday, 3 November 2025

224 ಶಾಂಭವಿ ಧರಣೀಶ್ ನಮ್ಮ‌ಪ್ರೀತಿಯ ಪುಸ್ತಕ‌ ಮಿತ್ರರು : ಕರಾವಳಿಯ ಸಾವಿರದೊಂದು ದೈವಗಳು- ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684


 ಈ ಯಾಂತ್ರಿಕ ಜಗತ್ತಿನಲ್ಲಿ ಜನರು ಗುರಿಯಿಲ್ಲದೆ ಸಾಗುತ್ತಿರುವ ಸಮಯದಲ್ಲಿ, ಡಾ. ಲಕ್ಷ್ಮಿ ಅವರ ಕರಾವಳಿಯ ಸಾವಿರದೊಂದು ದೈವಗಳು ಕೃತಿ ಓದುಗರನ್ನು ಆಧ್ಯಾತ್ಮಿಕ ಚಿಂತನೆಗಳ ದಾರಿಯಲ್ಲಿ ಸಾಗಿಸುವ ದೀಪದಂತಿದೆ.
ಕರಾವಳಿಯ ನಂಬಿಕೆಗಳು, ದೈವಸಂಸ್ಕೃತಿ ಮತ್ತು ಮಾನವ ಬದುಕಿನ ಅಂತರಂಗವನ್ನು ಅವರು ಅದ್ಭುತವಾಗಿ ಹೆಣೆದಿದ್ದಾರೆ. ಧರ್ಮ ಮತ್ತು ಜೀವನದ ನಿಜವಾದ ಅರ್ಥವನ್ನು ಹುಡುಕುವ ಈ ಕೃತಿ, ಓದುಗರ ಮನದಲ್ಲಿ ಶಾಂತಿ, ಭಕ್ತಿ ಮತ್ತು ಚಿಂತನೆಗೆ ಸ್ಪೂರ್ತಿ ನೀಡುತ್ತದೆ.

ಲೇಖಕಿ ದೇವರು ಎಷ್ಟು ನಿಜವೋ ಅಷ್ಟೇ ನಿಜ ದೈವಗಳು ಎಂಬ ಸತ್ಯವನ್ನು ನಾಜೂಕಾಗಿ ಅನಾವರಣಗೊಳಿಸಿದ್ದಾರೆ. ಪ್ರತಿಯೊಬ್ಬ ಮಾನವನ ಬದುಕು ಅರ್ಥಪೂರ್ಣವಾಗಬೇಕೆಂಬ ಸಂದೇಶವನ್ನು ಈ ಕೃತಿ ನಿಜವಾದ ಭಾವದೊಂದಿಗೆ ಸಾರುತ್ತದೆ. ಮೌಲ್ಯಗಳು ಕ್ಷೀಣಿಸುತ್ತಿರುವ ಇಂದಿನ ಯುಗದಲ್ಲಿ, ಕರಾವಳಿಯ ಸಾವಿರದೊಂದು ದೈವಗಳು ಓದುಗರಿಗೆ ಆತ್ಮಶಾಂತಿ ಮತ್ತು ಧಾರ್ಮಿಕ ಪ್ರಜ್ಞೆಯ ಹೊಸ ಬೆಳಕನ್ನು ತರುತ್ತದೆ.- ಶಾಂಭವಿ ಧರಣೀಶ್ 

Sunday, 2 November 2025

223 ನಮ್ಮ‌ಹೆಮ್ಮೆಯ ಪುಸ್ತಕ‌ ಮಿತ್ರರು


 #ನಮ್ಮ_ಹೆಮ್ಮೆಯ_ಓದುಗ_ಮಿತ್ರರು 

#ಕರಾವಳಿಯ_ಸಾವಿರದೊಂದು_ದೈವಗಳು 


ಕಳೆದ ವರ್ಷ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕ ಪ್ರಕಟಣೆಗೆ ಮೊದಲೇ ಮುಂಗಡ ಪಾವತಿಸಿ ಕಾದಿರಿಸಿ ಬೆಂಬಲಿಸಿದವರು ಯುವ ಬರಹಗಾರರಾದ  ದಯಾನಂದ ರೈ ಕಳ್ವಾಜೆಯವರು.


ಪುಸ್ತಕದ ಕುರಿತಾದ ಅವರ ಮೆಚ್ಚುಗೆಯ ಮಾತುಗಳು ಇಲ್ಲಿವೆ


"ಮೇಮ್ ನಮಸ್ಕಾರ...

ನಾನು ದಯಾನಂದ ರೈ ಕಳ್ವಾಜೆ.ನಿಮ್ಮ ಪುಸ್ತಕ ನನ್ನ ಕೈಸೇರಿ ವರುಷ ಸಂದರೂ, ಅಭಿಪ್ರಾಯ ಹೇಳಲು ಅನುವಾಗಿರಲಿಲ್ಲ. ದೈವಾರಾಧಾನೆಯ ನೆಲೆ ಮತ್ತು ಸಂಸ್ಕೃತಿಯ ಕೆಲವು ಮಜಲುಗಳನ್ನು ತಿಳಿಯಪಡಿಸುವ ಪ್ರಯತ್ನ ಶ್ಲಾಘನೀಯ. ಈ ಸಂಗ್ರಹಯೋಗ್ಯ ಹೊತ್ತಗೆಯ ಹಿಂದೆ ಅದೆಷ್ಟು ಶ್ರಮವಿದೆಯೋ ನಾನರಿಯೆ. ಆದರೆ ದೈವಿಕ ಸಂಪ್ರದಾಯಗಳನ್ನು ನಂಬುವವರು, ಮತ್ತು ಅಧ್ಯಯನ ನಡೆಸುವವರು ತಮ್ಮ ತಮ್ಮ ಮನೆಯಲ್ಲಿ ಸಂಗ್ರಹಿಸಿಡಲೇ ಬೇಕಾದ ಹೊತ್ತಗೆ ಇದು. ಮೇಲಾಗಿ ಸಾವಿರಕ್ಕಿಂತಲೂ ಮಿಗಿಲಾದ ವಿಭಿನ್ನ ಸಂಸ್ಕಾರ ವಿಶೇಷಗಳನ್ನು ಲೇಖನಿಯಲ್ಲಿಳಿಸಿ ಬಲ್ಲವರಲ್ಲಿ ಕೇಳಿತಿಳಿದ ನಿಮ್ಮ ಬಗೆ ಬಹುಮಾನ್ಯ. ಅಭಿನಂದನೆಗಳು ಮೇಮ್ ನಮಸ್ಕಾರ 🙏"

222 ನಮ್ಮ‌ಪ್ರೀತಿಯ ಓದುಗ ಮಿತ್ರರು


 ಭರವಸೆಯ ಯುವ ಸಂಶೋಧಕ ಸುರೇಶ್ ಮಂಗಲ್ಪಾಡಿಯವರ ಕೈಯಲ್ಲಿ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್  


ಸುಮಾರು 18 ವರ್ಷಗಳ ಮೊದಲು ನಾನು ಇಂಚಲಂಗೋಡಿನಲ್ಲಿ ನಡೆಯುವ ಸರ್ಪಕೋಲ/ ಬೆರ್ಮೆರ ನಲಿಕೆ ರೆಕಾರ್ಡ್ ಮಾಡಲು ಹೋದಾಗ ಮಾಹಿತಿ ನೀಡಿ ಪೂರ್ಣ ಬೆಂಬಲ ನೀಡಿದವರು ರತ್ನಾಕರ,ಸುರೇಶ ಮತ್ತು ಸತೀಶ ಎಂಬ ಮಂಗಲ್ಪಾಡಿಯ ಸಹೋದರರು.

ಇವರಲ್ಲಿ ವೃತ್ತಿಯಲ್ಲಿ ಶಿಕ್ಷಕರಾಗಿರುವ ಅರ್ಥ ಶಾಸ್ತ್ರ ಸ್ನಾತಕೋತ್ತರ ಪದವೀಧರರಾದ ಸುರೇಶ್ ಅವರು ಇತ್ತೀಚೆಗೆ ಬಾಕುಡ ಸಮುದಾಯದವರ ಸರ್ಪಕೋಲದ ಬಗ್ಗೆ ಅಧ್ಯಯನ ಮಾಡಿ ಹೊಸ ಹೊಳಹುಗಳ ಸಂಶೋಧನಾ ಗ್ರಂಥವನ್ನು ಪ್ರಕಟಿಸಿದ್ದಾರೆ.ಪ್ರಸ್ತುತ ನಮ್ಮ‌ಕರಾವಳಿಯ ಸಾವಿರದೊಂದು ದೈವಗಳು ಕೃತಿಯನ್ನು ಮಲೆಯಾಳ ಭಾಷೆಗೆ ಅನುವಾದಿಸಲು ಮುಂದಾಗಿದ್ದಾರೆ 

ಇವರಿಂದ ಇನ್ನಷ್ಟು ಅಧ್ಯಯನ ನಡೆಯಲಿ ಸಂಶೋಧನಾ ಕೃತಿಗಳು ಪ್ರಕಟವಾಗಲಿ ಎಂಬ ಹಾರೈಕೆ ನನ್ನದು

221 ನಮ್ಮ‌ಪ್ರೀತಿಯ ಓದುಗ ಮಿತ್ರರು


 ತುಳುನಾಡಿನ ದೈವಗಳು ಕಾಲ್ಪನಿಕ ಪಾತ್ರಗಳಲ್ಲ..


ಆರು ತಲೆಮಾರುಗಳ ಹಿಂದೆ ಕಾರಣಾಂತರಗಳಿಂದ ದೈವತ್ವ ಪಡೆದು ಅಜ್ಜೆರ್ ಭಟ್ರು ಎಂಬ ಹೆಸರಿನ ದೈವವಾಗಿ ಆರಾಧಿಸಲ್ಪಡುವ ನಾರಾಯಣ ಎಡವಟ್ನಾಯರ ವಂಶಜರಾದ ಗೀತ ಮತ್ತು ಅವರ ಪತಿ ರಾಘವೇಂದ್ರ ಅಸ್ರಣ್ಣರು ತುಳುವರ ದೈವಗಳ ಕಥಾನಕಗಳು ಊಹಾಪೋಹವಲ್ಲ ಕಪೋಲ ಕಲ್ಪತವಲ್ಲ.ನಡೆದು ಹೋದ ಅಲೌಕಿಕ,ಐತಿಹಾಸಿಕ  ಸಂಗತಿಗಳು ಎಂಬ ಬಗ್ಗೆ ಪ್ರತ್ಯಕ್ಷ ನಿದರ್ಶನವಾಗಿದ್ದಾರೆ


ಹೀಗೆಯೇ ಅಯ್ಯೆರ್ ಬಂಟೆರ್ ,ಕಚ್ಚೆ ಭಟ್ಟ ,ಬೀರ್ಣಾಳ್ಬ ,,ತಿಮ್ಮಣ್ಣ ನಾಯಕ ,ನೈದಾಲ ಪಾಂಡಿ ,ಮಂಡೆಕ್ಕಾರ ಕಲ್ಲುರ್ಟಿ ದೈವಗಳ ವಂಶಜರು ಈಗಲೂ ಇದ್ದಾರೆ ,ಮುಂದೆ ಸಮಯ ಸಿಕ್ಕಾಗ ಸಚಿತ್ರ ಮಾಹಿತಿ ನೀಡುವೆ ಹುಡುಕಾಡಿದರೆ ಇನ್ನಿತರ ದೈವತ್ವ ಪಡೆದು ಆರಾಧಿಸಲ್ಪಡುವ ಐತಿಹಾಸಿಕ ವ್ಯಕ್ತಿಗಳ ವಂಶಜರ ಬಗ್ಗೆಯೂ ಮಾಹಿತಿ ಸಿಗಬಹುದು

ಹೆಚ್ಚಿನ ಮಾಹಿತಿ  ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್  ಗ್ರಂಥದಲ್ಲಿದೆ mobile9480516684

220 ನಮ್ಮ‌ಹೆಮ್ಮೆಯ ಓದುಗ ಮಿತ್ರರು


 ನಮ್ಮ ಹೆಮ್ಮೆಯ ಓದುಗರು 

ಕರಾವಳಿಯ ಸಾವಿರದೊಂದು ದೈವಗಳು -


Pawan Naresh Bangera 


ಪ್ರಸ್ತುತ ದುಬೈ ಯಲ್ಲಿರುವ ಪವನ್ ನರೇಶ್ ಬಂಗೇರ ಅವರ  ಮತ್ತವರ ಮಡದಿ ಮಗಳ  ಕೈಯಲ್ಲಿ ಕರಾವಳಿಯ ಸಾವಿರದೊಂದು ದೈವಗಳು ಗ್ರಂಥ

219 ನಮ್ಮ‌ಹೆಮ್ಮೆಯ ಪುಸ್ತಕ ಮಿತ್ರರು : ಪದ್ಮಶ್ರೀ ಒಪುರಸ್ಕೃತ ಸಾಲು ಮರದ ತಿಮ್ಮಕ್ಕ


 ವೃಕ್ಷ ಮಾತೆ ಪದ್ಮಶ್ರೀ ಸಾಲು ಮರದ ತಿಮ್ಮಕ್ಕನವರ ಮಡಿಲಲ್ಲಿ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684

218 ನಮ್ಮ‌ಹೆಮ್ಮೆಯ ಪುಸ್ತಕ ಮಿತ್ರರು : ಅಶೋಕ್ ಶೆಟ್ಡಿ ದುಬೈ


 ಕರಾವಳಿಯ ಸಾವಿರದೊಂದು ದೈವಗಳು ಕೃತಿ ಅನೇಕ ದೇಶಗಳಿಗೆ ಹೋಗಿದೆ

ದುಬೈಯಿಂದ ಅಶೋಕ್ ಶೆಟ್ಟಿಯವರು ಪುಸ್ತಕವನ್ನು ಕೊಂಡು ಸಂಭ್ರಮಿಸಿದ್ದಾರೆ.

ಓದುಗರ ಸಂತೃಪ್ತಿಯೇ ನಮಗೆ ಮುಖ್ಯ..

217 ನಮ್ಮ ಪ್ರೀತಿಯ ಪುಸ್ತಕ‌ ಮಿತ್ರರು : ನೀತಾ ಶೆಟ್ಟಿ


 ನಮ್ಮ ಹೆಮ್ಮೆಯ ಓದುಗ ಮಿತ್ರರಲ್ಲಿ ಎಳೆಯ ವಯಸ್ಸಿನವರಾದ ನೀತಾ ಶೆಟ್ಟಿ ,ಈ ವರ್ಷ ಪಿಯುಸಿ ಓದಿ ಸಿಇಟಿ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿನಿ..

ಇಂದಿನ ಯುವಕರಿಗೆ ಓದುವ ಹವ್ಯಾಸ ಇಲ್ಲ ಎಂಬುದು ಬರಹಗಾರರ ಕೊರಗು..ಸದಾ ಮೊಬೈಲ್ ರೀಲ್ ಗೇಮ್ ಗಳನ್ನು ಆಡುವ ಯುವಕರ ನಡುವೆ ನೀತಾ ಶೆಟ್ಟಿ ವಿಶಿಷ್ಟರಾಗಿ ಕಾಣಿಸುತ್ತಾರೆ.

ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್

216 ನಮ್ಮ‌ಹೆಮ್ಮೆಯ ಪುಸ್ತಕ‌ಮಿತ್ರರು: ಜ್ಯೋತಿ ಕಾಮತ್


 ನಮ್ಮ ಹೆಮ್ಮೆಯ ಪ್ರೀತಿಯ ಓದುಗ ಮಿತ್ರರು : ಜ್ಯೋತಿ ಕಾಮತ್ 

ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್,ಮೊಬೈಲ್9480516684

215 : ನಮ್ಮ‌ಹೆಮ್ಮೆಯ ಪುಸ್ತಕ‌ಮಿತ್ರರು : ಕೃಷ್ಣ ಬೆಳ್ತಂಗಡಿ


 ಯುವ ನಿರ್ದೇಶಕರಾದ ಕೃಷ್ಣ ಬೆಳ್ತಂಗಡಿಯವರು ಕರಾವಳಿಯ ಸಾವಿರದೊಂದು ದೈವಗಳು (ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684 ) ಪುಸ್ತಕಕ್ಕಾಗಿ ಬಂದಿದ್ದರು.ಬಂದ ನಂತರ ನಮಗೆ ನೆಂಟರು ಎಂದು ತಿಳಿಯಿತು.ಸಿನೇಮ ಕಥೆಗಳ ಬಗ್ಗೆ ಒಂದಷ್ಟು ಪಟ್ಟಾಂಗ ಹೊಡೆದೆವು 

214 ನಮ್ನ ಹೆಮ್ಮೆಯ ಪುಸ್ತಕ ಮಿತ್ರರು : ಕರಾವಳಿಯ ಸಾವಿರದೊಂದು ದೈವಗಳು : ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684


 ನಮ್ಮ ಹೆಮ್ಮೆಯ ಓದುಗ ಮಿತ್ರರು: ಸಾಲಿಗ್ರಾಮ ಗುರು ನರಸಿಂಹ ದೇವಾಲಯದ ಚೇತನ್ ಐತಾಳರು 

ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684 

212 ನಮಮ್ಮ‌ಹೆಮ್ಮೆಯ ಪುಸ್ತಕ ಮಿತ್ರರು : ಪವನ್ ನರೇಶ್ ಬಂಗೇರ : ಕರಾವಳಿಯ ಸಾವಿರದೊಂದು ದೈವಗಳು: ಡಾ.ಲಕ್ಷ್ಮೀ ಜಿ ಪ್ರಸಾದ್


 ನಮ್ಮ ಹೆಮ್ಮೆಯ ಓದುಗರು 

ಕರಾವಳಿಯ ಸಾವಿರದೊಂದು ದೈವಗಳು.

Pawan Naresh Bangera 


ಪ್ರಸ್ತುತ ದುಬೈ ಯಲ್ಲಿರುವ ಪವನ್ ನರೇಶ್ ಬಂಗೇರ ಅವರ   ಕೈಯಲ್ಲಿ ಕರಾವಳಿಯ ಸಾವಿರದೊಂದು ದೈವಗಳು ಗ್ರಂಥ

209ನಮ್ಮ ಪ್ರೀತಿಯ ಓದುಗ‌ಮಿತ್ರರು : ಶ್ರೀಧರ್ : ಕರಾವಳಿಯ ಸಾವಿರದೊಂದು ದೈವಗಳು- ಡಾ.ಲಕ್ಷ್ಮೀ ಜಿ ಪ್ರಸಾದ್


 ಪುಸ್ತಕ ಸಂಭ್ರಮ


ಈವತ್ತು ಮಧ್ಯಾಹ್ನ ಊಟದ ಸಮಯದಲ್ಲಿ ಒಬ್ಬರ ಫೋನ್ ಬಂತು.ನೀವು ಲಕ್ಷ್ಮೀ ಜಿ ಪ್ರಸಾದರಾ? ನೀವು ಕಳುಹಿಸಿದ ಪಾರ್ಸೆಲ್ ಬಂದಿದೆ.ನಿಮಗೆ ನನ್ನ ವಿಳಾಸ ಯಾರು ಕೊಟ್ಟದ್ದು.ಈ ಪುಸ್ತಕ ನಮಗೆ ಬೇಕಾಗಿತ್ತು.ಆದರೆ ನಾನು ನಿಮಗೆ ಅಡ್ರೆಸ್ ಕೊಟ್ಟಿಲ್ಲ ,ನಿಮಗೆ ಹೇಗೆ ಪೇ ಮಾಡುದು ?" ಎಂದರು.ಆಗ ನನಗೆ ಅನೇಕರು ತಮ್ಮ ಹೆತ್ತವರಿಗಾಗಿ  ಆತ್ಮೀಯರಿಗಾಗಿ ಪುಸ್ತಕಕ್ಕೆ ಪೇ ಮಾಡಿ ಅವರವರ ವಿಳಾಸ ನೀಡಿ ಕಳುಹಿಸುವಂತೆ ಹೇಳಿದ್ದು ನೆನಪಾಯಿತು

ಹಾಗೆ ನನಗೆ ಫೋನ್ ಮಾಡಿದ ಶ್ರೀಧರ್ ಅವರ ವಿಳಾಸ ತಗೊಂಡು ಚೆಕ್ ಮಾಡಿದೆ..

ಹೌದು..ನನ್ನ ಅಂದಾಜು ಸರಿ ಇತ್ರು

ಪ್ರಸ್ತುತ ಚೆನ್ನೈಯಲ್ಲಿ ಸೀನಿಯರ್ ಬ್ಯಾಂಕ್ ಮ್ಯಾನೇಜರ್ ಆಗಿರುವ ನನ್ನ ಹಳೆಯ ವಿದ್ಯಾರ್ಥಿನಿ ಅನರೂಪಾ ಕಳೆದ ವಾರ ನನ್ನನ್ನು ಸಂಪರ್ಕಿಸಿ ಪುಸ್ತಕಕ್ಕೆ 2000₹ ಪೂರ್ಣ ಬೆಲೆ ಪಾವತಿಸಿ ಅವರ ತಂದೆಯ ಹೆಸರು ವಿಳಾಸ ನೀಡಿದ್ದರು


ಹಾಗೆ ಮತ್ತೆ ಫೋನ್ ಮಾಡಿ ಶ್ರೀಧರ್ ಅವರಿಗೆ ಅವರ ಮಗಳ ಉಡುಗೊರೆ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕ ಎಂದು ತಿಳಿಸಿದೆ.ಅವರಿಗೆ ತಮ್ಮ ಅಭಿರುಚಿ ಗಮನಿಸಿದ ಮಗಳು ಪುಸ್ತಕ  ಉಡುಗೊರೆ ನೀಡಿದ ಬಗ್ಗೆ ತಿಳಿದು ಬಹಳ ಸಂತಸಪಟ್ಟರು

(ಮೂರು ವರ್ಷದ ಹಿಂದೆ)

202 ನಮ್ಮ ಹೆಮ್ಮೆಯ ಪುಸ್ತಕ‌ಮಿತ್ರು: ಅಪರ್ಣಾ ಪ್ರಶಾಂತ್ : ಕರಾವಳಿಯ ಸಾವಿರದೊಂದು ದೈವಗಳು: ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684


 ಪುಸ್ತಕ ಸಂಭ್ರಮ


ಹವ್ಯಕರಲ್ಲಿ ಭೂತಾರಾಧನೆ ಬಗ್ಗೆ ಆಸಕ್ತಿ ಇರುವವರ ಸಂಖ್ಯೆ ಕಡಿಮೆ.ಅದರಲ್ಲೂ ಹವ್ಯಕ  ಸ್ತ್ರೀಯರಿಗೆ ಆಸಕ್ತಿ ಇಲ್ಲವೇ ಇಲ್ಲ ಎನುವಷ್ಟು ಕಡಿಮೆ

ಇಂತಹವರ ನಡುವೆ ನಮ್ಮ ಸಮೀಪದ ಸಂಬಂಧಿ( ನನ್ನ ಅಕ್ಕನ ಸಣ್ಣ ಮಾವನವರ ಮೊಮ್ಮಗಳು) ಅಪರ್ಣಾ Aparna Prashanth  ವಿಶಿಷ್ಟರಾಗಿ ಕಾಣ್ತಾರೆ.ಇವರಿಗೆ ದೈವಾರಾಧನೆ ಕನ್ನಡ ತುಳು ಸಂಸ್ಕೃತಿ ಕುರಿತು ಆಸಕ್ತಿ ಇದೆ.ಈ ಬಗ್ಗೆ ಮಾಹಿತಿ ಸಂಗ್ರಹಮಾಡುತ್ತಿದ್ದಾರೆ ಎಂಬುದು ಸಂತಸದ ಹೆಮ್ಮೆಯ ವಿಚಾರ .

ಮುಂದೆ ಇವರಿಂದ ಅಪರೂಪದ ಕೃತಿಗಳ ರಚನೆಯಾಗಲಿ ..ಸಮಾಜಕ್ಕೊಂದು ಕೊಡುಗೆಯಾಗಲಿ ಎಂದು ಹಾರೈಸುವೆ.

ನನ್ನನ್ನು ಚಿಕ್ಕಿ,ಚಿಕ್ಕಮ್ಮ ಎಂದು ತುಂಬು ಪ್ರೀತಿಯಿಂದ ಕರೆಯುವ ಅಪರ್ಣಾ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕವನ್ನು ಪೂರ್ಣ ಬೆಲೆ 2000₹ ಗೆ ಖರೀದಿಸಿ ಓದಿ ಸಂಭ್ರಮಿಸಿದ್ದಾರೆ.ಒಂದು ಚಂದದ ಪೋಟೊ ತೆಗೆದು ಕಳುಹಿಸಿದ್ದಾರೆ.

Thursday, 30 October 2025

201 ನಮ್ಮ‌ಹೆಮ್ಮೆಯ ಪುಸ್ತಕ‌ಮಿತ್ರರು : ಸೂರಜ್ ಕುಮಾರ್ ಕೊಠಾರಿ ದೈವ ಪಾತ್ರಿಗಳು: ಕರಾವಳಿಯ ಸಾವಿರದೊಂದು ದೈವಗಳು: ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684


 ನಾನೊಬ್ಬ ದೈವದ ಪಾತ್ರಿಯಾಗಿ ತುಂಬಾ ಸಂತೋಷ ಪಡುವಂತ ವಿಚಾರ 

 ನನ್ನ ತುಳುನಾಡಿನ ದೈವಾರಾಧನೆ ಬಗ್ಗೆ   21 ವರ್ಷ ಅಧ್ಯಯನ ಮಾಡಿ ಸಂಪೂರ್ಣವಾಗಿ ನಮಗೆ ಮಾಹಿತಿ ಕೊಟ್ಟಂತದ್ದು  ತುಂಬಾ ಸಂತೋಷದ ವಿಚಾರ: ಸೂರಜ್ ಕುಮಾರ್ ಕೊಠಾರಿ 

Tuesday, 28 October 2025

197 ನಮ್ಮ ಹೆಮ್ಮೆಯ ಪುಸ್ತಕ‌ಮಿತ್ರರು: ಡಾ.ಸುದರ್ಶನ ಚಿಪ್ಲುನ್ಕರ್ : ಕರಾವಳಿಯ ಸಾವಿರದೊಂದು ದೈವಗಳು: ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684


 ಶ್ರೀಮತೀ ಡಾ.ಲಕ್ಷ್ಮೀ ಜಿ. ಪ್ರಸಾದ್ ರವರ ಸಂಶೋಧನಾ ಪರಿಶ್ರಮದ ಫಲವಾಗಿ, ಸಾರಸ್ವತ ಕುಸುಮಾಂಜಲಿಯಾಗಿ ಮೂಡಿಬಂದ *ಕರಾವಳಿಯ ಸಾವಿರದೊಂದು ದೈವಗಳು* ಅನ್ನುವ ಉದ್ಗ್ರಂಥವು ಸರಸ್ವತೀ ಸಮಾರಾಧಕರಿಗೊಂದು ಅತ್ಯಮೂಲ್ಯ ಪ್ರಸಾದ. ನನ್ನ ಅನಿಸಿಕೆಯ ಪ್ರಕಾರ ದೇವರು, ದೈವಗಳು ಇತ್ಯಾದಿಯಾಗಿ ಎಲ್ಲವೂ ನಮ್ಮ ಜೊತೆಯಾಗಿದ್ದು ನಮ್ಮನ್ನು ಪೊರೆಯುವ ಒಂದು ಅಲೌಕಿಕ ಶಕ್ತಿ. ಈ ಕೆಲವೊಂದಷ್ಟು ವಿಚಾರಗಳಲ್ಲಿ ಯಾಕೆ? ಏನು? ಹೇಗೆ ಇತ್ಯಾದಿ ತರ್ಕ ವಿತರ್ಕಗಳು ಅನುಚಿತ. ಭಾರತೀಯರ ಭಾವತಂತುವೇ ಈ ಶಕ್ತಿಯ ವಿರಾಟ್ ಸ್ವರೂಪದ ಮೂಲಾಧಾರ. ಈ ಶಕ್ತಿಯ ಆರಾಧನೆಯಲ್ಲಿ ಸಗುಣಾರಾಧನೆ ಹಾಗೂ ನಿರ್ಗುಣಾರಾಧನೆ ಎಂಬೆರಡು ಪ್ರಧಾನ ಮಾರ್ಗಗಳು. ಇವೆರಡರಲ್ಲಿ ಹೆಚ್ಚಿನವರು ಆಶ್ರಯಿಸುವುದು ಸಗುಣಾರಾಧನೆಯನ್ನು. ವೇದಮೂಲವಾಗಿ ಹೊರಹೊಮ್ಮಿದ ಪುರಾಣಾದಿ ಅನೇಕ ವಾಙ್ಮಯಗಳ ಮೂಲಕ ಶ್ರೀರಾಮ, ಕೃಷ್ಣರೇ ಮೊದಲಾದ ದೇವತೆಗಳನ್ನು ವಿಗ್ರಹರೂಪವಾಗಿಯೋ ಚಿತ್ರರೂಪವಾಗಿಯೋ  ತಮ್ಮದೇ ನೆಲೆಯಲ್ಲಿ ಕಂಡುಕೊಳ್ಳುವ ಕಲೆ ಭಾರತೀಯರಾದ ನಮಗೆ ಸಹಜಸಿದ್ಧ. ಆದರೆ ಪ್ರಾಂತೀಯವಾಗಿ ಅಸ್ತಿತ್ವದಲ್ಲಿರುವ, ನಿತ್ಯಸತ್ಯವಾದ ದೈವಗಳ ಪ್ರಪಂಚವು ನೆಲೆಯಾಗಿರುವುದು ಸತ್ಯ, ಧರ್ಮ, ನ್ಯಾಯ, ನೀತಿಗಳ ಮೂಲಕವಾಗಿ. ಪೂರ್ಣಪ್ರಮಾಣದ ಸಗುಣಾರಾಧನೆಯೂ ಇಲ್ಲದೆ ನಿರ್ಗುಣಾರಾಧನೆಯೂ ಆಗಿರದೆ ದೈವಗಳು ಆರಾಧ್ಯವಾಗಿರುವುದು ಅನುಭವವೇದ್ಯ. ಹಾಗಾಗಿ ಕಾಲ ಬದಲಾದಂತೆ ದೈವಗಳ ಕುರಿತಾಗಿ ಪ್ರಶ್ನೆ ಎತ್ತುವುದು ದೂರದ ಮಾತಲ್ಲ. ಪ್ರಸ್ತುತ ಕಾಲಘಟ್ಟದಲ್ಲಿ ಹೆಚ್ಚಿನವರು ಜೀವನೋಪಾಯಗಳನ್ನು ಕಂಡುಕೊಳ್ಳುತ್ತಾ ದೂರದೂರುಗಳನ್ನು ಸೇರಿಕೊಂಡಾಗ ದೈವಾರಾಧನೆಯು ತಮ್ಮ ಮೂಲಸ್ಥಾನದಲ್ಲಿ ಮಾತ್ರವೇ ಆರಾಧನೆಯಾಗಿ ಉಳಿದಾಗ ಸಹಜವಾಗಿಯೇ ಮುಂದಿನ ತಲೆಮಾರಿಗೆ ದೈವಗಳ ಸತ್ತ್ವ, ಚೌಕಟ್ಟುಗಳು ಅಜ್ಞಾತವಾಗಿಯೇ ಉಳಿಯುವುದರಲ್ಲಿ ಆಶ್ಚರ್ಯವಿಲ್ಲ. ಆ ನಿಟ್ಟಿನಲ್ಲಿ ಮುಂದಿನ ತಲೆಮಾರಿಗೆ ಈ ಉದ್ಗ್ರಂಥವು ದಾರಿದೀಪ! ಸತ್ಯ, ಧರ್ಮಗಳಲ್ಲಿ ನಡೆದು ದೈವಗಳ ಸ್ವರೂಪ ಸಾಕ್ಷಾತ್ಕಾರಗೊಳಿಸುವಲ್ಲಿ ಅತ್ಯಮೂಲ್ಯ ಕಾಣಿಕೆ!


✍🏻 *ಡಾ.ಎಂ.ಸುದರ್ಶನ ಚಿಪಳೂಣಕರ್, ಮಾವಿನಮಲೆ, ದುರ್ಗ, ಕಾರ್ಕಳ*

*ಅಸೋಸಿಯೇಟ್ ಪ್ರೊಫೆಸರ್, ಚಿನ್ಮಯ ವಿಶ್ವವಿದ್ಯಾಪೀಠ, ಕೇರಳ*

197 ನಮ್ಮ ಹೆಮ್ಮೆಯ ಪುಸ್ತಕ‌ಮಿತ್ರರು: ಡಾ. ರಾಜೇಶ್ ರಾವ್ ಕೆಳರ್ಕಳಬೆಟ್ಟು ಉಡುಪಿ : ಕರಾವಳಿಯ ಸಾವಿರದೊಂದು ದೈವಗಳು: ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684


 ಹುಡುಕುವ ಬಳ್ಳಿ ಕಾಲಿಗೆ ಎಡರಿದಂತೆ ನಿಮ್ಮ ಪುಸ್ತಕವು ಬಹಳ ಚೆನ್ನಾಗಿದೆ ನಮಗೆ ಉಪಯುಕ್ತವಾದ ಮಾಹಿತಿ ಇದರಿಂದ ಸಿಕ್ಕಿದೆ ಇದರ ಪ್ರಸ್ತಾವನೆ ಬಾರಿ ಒಳ್ಳೆ ರೀತಿಯಲ್ಲಿ ಬಂದಿದೆ ನಮಗೆ ಬಹಳ ಉಪಯುಕ್ತವಾದ ಮಾಹಿತಿ ನಾವು ಬಹಳ ಸಮಯದಿಂದ ಈ ಪುಸ್ತಕಕ್ಕಾಗಿ ಹುಡುಕ್ತಾ ಇದ್ದೆವು  ಡಾಕ್ಟರ್ ಉಪಾಧ್ಯಾಯರು ತೀರಿ ಹೋದ ಬಳಿಕ ನಮಗೆ ದೈವಗಳ ಬಗ್ಗೆ ಮಾಹಿತಿ ಕೊಡುವವರು ಯಾರು ಇರಲಿಲ್ಲ. ನಿಮ್ಮಿಂದ ಇಂತಹ ಇನ್ನೂ ಅನೇಕ ಕೃತಿಗಳು ಬರಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ- ಡಾ

ರಾಜೇಶ್ ರಾವ್ ಕೆಳರ್ಕಳಬೆಟ್ಟು ಉಡುಪಿ 

195 ನಮ್ಮ ಹೆಮ್ಮೆಯ ಪುಸ್ತಕ ಮಿತ್ರರು : ಸುರೇಶ್ ಕೊಡಗು ದೈವಾರಾಧಕರು : ಕರಾವಳಿಯ ಸಾವಿರದೊಂದು ದೈವಗಳು- ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684


 ಮಾಯ ಮತ್ತು ಜೋಗದ ಬೆಳಕಿನಲ್ಲಿ, ಕರಾವಳಿಯ ಸಾವಿರದೊಂದು ದೈವಗಳು ಈ ಅದ್ಬುತ ಪುಸ್ತಕವನ್ನು ಅಧ್ಯಯನ ಮಾಡಿ ತುಂಬಾ ಭಯ ಭಕ್ತಿ  ಶ್ರದ್ಧೆಯಿಂದ ಶ್ರಮ ಪಟ್ಟು ಪುಸ್ತಕ ಮಿತ್ರರಿಗೆ ಅರ್ಪಿಸಿದ ಡಾ: ಲಕ್ಷ್ಮೀ ಜಿ ಪ್ರಸಾದ್ ರವರಿಗೆ ಹೃದಯ ತುಂಬಿದ ಧನ್ಯವಾದಗಳು, ಇನ್ನೂ ಹಲವಾರು ಪುಸ್ತಕಗಳು ನಿಮ್ಮಿಂದ ರಚನೆಯಾಗಲಿ ಎಂದು ಆಶಿಸುತ್ತೇನೆ, ನಾವು ನಂಬುವಂತಹ ದೈವ ದೇವರುಗಳು ನಿಮಗೆ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.- ಸುರೇಶ್ ದೈವಾರಾಧಕರು,ಅಣ್ಣಪ್ಪ ಪಂಜುರ್ಲಿ ಪಾಷಾಣ ಮೂರ್ತಿ ದೈವ ಸ್ಥಾನ Heggala  ಕೊಡಗು 

Monday, 27 October 2025

194 ನಮ್ಮ ಹೆಮ್ಮೆಯ ಪುಸ್ತಕ ಮಿತ್ರರು : ಅಮೃತ್ ಭಟ್ ಶಿವಮೊಗ್ಗ : ಕರಾವಳಿಯ ಸಾವಿರದೊಂದು ದೈವಗಳು


 ಡಾ.ಲಕ್ಷ್ಮೀ ಜಿ ಪ್ರಸಾದ್ ಇವರ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು ಎನ್ನುವಂತಹ ಗ್ರಂಥ ಬರಿಯ ಗ್ರಂಥವಲ್ಲ ಇದೊಂದು ತುಳುನಾಡಿನ ಉಸಿರಾದ ಕಾರಣಿಕ  ದೈವಗಳ ತಿಳಿಯ ಹೊರಟ ಎಲ್ಲಾ ಜಿಜ್ಞಾಸುಗಳಿಗೆ ಪವಿತ್ರ ದೀವಟಿಕೆ. ನ ಭೂತೋ ನ ಭವಿಷ್ಯತಿ ಎನ್ನುವಂತೆ ಹಿಂದೆ ಯಾರೂ ಮಾಡಿದ್ದಿಲ್ಲ ಮುಂದೆ ಯಾರು ಬಹುಶಃ ಇಂತಹ ಸಾಹಸ ಕಾರ್ಯ ಮಾಡಲಾರರು. ಈ ಗ್ರಂಥದಲ್ಲಿ ತುಳುನಾಡಿನಲ್ಲಿ ಹುಟ್ಟಿ ಮೆರೆದು ದೈವತ್ವಕ್ಕೇರಿದ ಅನೇಕ ಮಹಾಪುರುಷರ ಮತ್ತು ಸ್ತ್ರೀಯರ ಕಥಾನಕಗಳಿವೆ, ಪುಸ್ತಕ ತೆರೆದಷ್ಟು ಅನೇಕ ಆಶ್ಚರ್ಯಗಳಿವೆ. ಇಂತಹ ಹತ್ತು ಹಲವು ಮಾಹಿತಿಗಳನ್ನು ಒಳಗೊಂಡ ಈ ಗ್ರಂಥ ತುಳುನಾಡಿನ ದಾರಿದೀಪ ಎಂದರೆ ತಪ್ಪಾಗಲಾರದು. ಈ ಮಹತ್ಕಾರ್ಯವನ್ನು ತಪಸ್ಸೆನ್ನುವಂತೆ ಪುಸ್ತಕ ರೂಪವಾಗಿ ನೀಡಿದ ಡಾ. ಲಕ್ಷ್ಮೀ ಜಿ ಪ್ರಸಾದ್ ಇವರಿಂದ ಇನ್ನೂ ಹತ್ತು ಹಲವು ಸಮಾಜಮುಖಿ ಕಾರ್ಯಗಳು ನಡೆಯಲಿ ಎಂದು ನಾವು ಹಾರೈಸುತಿದ್ದೇವೆ.- ಅಮೃತ್ ಭಟ್ ಶಿವಮೊಗ್ಗ

193 ನಮ್ಮ‌ಹೆಮ್ನೆಯ ಪುಸ್ತಕ ಮಿತ್ರರು : ಪ್ರಜ್ಞೇಶ್ : ಕರಾವಳಿಯ ಸಾವಿರದೊಂದು ದೈವಗಳು


 ನಾನು “KOLA” ಎಂಬ ಡಾಕ್ಯುಮೆಂಟರಿ ನೋಡುತ್ತಿದ್ದಾಗ, ನೀವು ಅದರ ಬಗ್ಗೆ ವಿವರಿಸುತ್ತಿದ್ದುದು ಮತ್ತು ಪುಸ್ತಕದ ಕುರಿತೂ ಹೇಳಿದ್ದೀರಿ. ಆ ಡಾಕ್ಯುಮೆಂಟರಿಯಲ್ಲಿ ಕೊರಗಜ್ಜನ ಜನ್ಮಸ್ಥಳ ಹಾಗು ಇತರೆ ಕಥೆ ನಡೆದದು ಮುಳ್ಕಿಬೆಟ್ಟು/ಮೂಲ್ಕೋಟು ಎಂದು ಉಲ್ಲೇಖಿಸಿದೆ . ನಾವು ಕೂಡ ಬಾರ್ಕೆ ಮನೆಯವರು (ಮುಳ್ಕಿಬೆಟ್ಟು /ಮೂಲ್ಕೋಟು ಬಾರ್ಕೆ). ಕುತೂಹಲದಿಂದ ನಾನು ಆ ಪುಸ್ತಕವನ್ನು ಖರೀದಿಸಿ, ಕೆಲವು ಪುಟಗಳನ್ನು ಓದಿದ್ದೇನೆ — ತುಂಬಾ ಆಸಕ್ತಿದಾಯಕವಾಗಿದೆ. ನಮ್ಮಂತಹವರಿಗೆ ಆ ವಿಷಯವನ್ನು ಸುಲಭವಾಗಿ ತಿಳಿದುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಮ್ಯಾಡಮ್.-ಪ್ರಜ್ಞೇಶ್ 

189 ನಮ್ಮ‌ಹೆಮ್ಮೆಯ ಪುಸ್ತಕ‌ ಮಿತ್ರರು ಶ್ರೀ ಟಿ ಕೆ ಶೆಣೈ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್


 86 ವಯಸ್ಸಿನ ನಿವೃತ್ತ ಬ್ಯಾಂಕ್ ಮ್ಯಾನೇಜರ್  ಹಿರಿಯರಾದ ಟಿ ಕೆ ಶೆಣೈ ಅವರು ನನ್ನ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್  ಪುಸ್ತಕವನ್ನು ಓದಿರುವುದು ನಿಜಕ್ಕೂ ಹೆಮ್ಮೆಯ ವಿಷಯ 

https://laxmipras.blogspot.com/2025/10/189.html?m=1