Sunday, 6 April 2025

ಹೌಂದೇರಾಯ ಆರಾಧಿಸಿದ ಪಂಜುರ್ಲಿ

 ಹೌಂದೇರಾಯನ ವಾಲಗ ಎಂಬ ಜನಪದ ಕುಣಿತ ಒಂದು ಉಡುಪಿ ಕುಂದಾಪುರ ಕಡೆ ಪ್ರಚಲಿತವಿದೆ .ಈತ ಓರ್ವ ಅರಸ ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ .ಈ ಕುಣಿತ ಬಗ್ಗೆ 

ಹೌಂದೇರಾಯನ ಕುಣಿತಕ್ಕೆ ಪ್ರಾಚೀನ ಇತಿಹಾಸವಿದೆ. ಹೌಂದೇರಾಯ ಎಂಬ ತುಂಡರಸ ಜೈನರಾಜರಿಗೆ ಸಾಮಂತನಾಗಿ ಬಾರಕೂರು ಸಂಸ್ಥಾನ ಆಳುತ್ತಿದ್ದ. ಆತನ ಆಳ್ವಿಕೆ ಜನಪರವಾಗಿತ್ತು. ಕಲಾಪ್ರಿಯನಾದ ಆತನಿಗೆ ಹೊಗಳಿಕೆ ಅಂದ್ರೆ ತುಂಬಾ ಇಷ್ಟ. ಆತನ ಹೊಗಳುವಿಕೆಗೆ ಬುದ್ಧಿವಂತ ಕರಾವಳಿ ಜನ ರೂಪಿಸಿದ ಕುಣಿತವೇ ಹೌಂದೇರಾಯನ ಕುಣಿತ. ಹೊಗಳಿಕೆಯ ಹಾಡು ನತ್ಯ ನೋಡಿದ ಹೌಂದೇರಾಯ ಇದನ್ನು ಕಡ್ಡಾಯಗೊಳಿಸಿದ. ರಾಜನನ್ನು ದೇವರೆಂದು ಕಾಣುವ ಜನರಿಂದಾಗಿ ಹೌಂದೇರಾಯನ ಕಾಲಾನಂತರವು ಕಲಾಪ್ರಕಾರ ಮುಂದುವರಿದುಕೊಂಡು ಬಂತು. ಹೌಂದೇರಾಯನ ಓಲಗ ಎಂದು ಸಹ ಕರೆಯಲ್ಪಡುವ ಈ ಹಾಡು-ನತ್ಯದಲ್ಲಿ 6 ಭಾಗಗಳಿವೆ. ಓಲಗ ಸಂಧಿ, ಬ್ಯಾಂಟಿ ಸಂಧಿ(ಬೇಟೆಯ ಹಾಡು), ಕೋಡಂಗಿ ಸಂಧಿ, ಶಿವರಾಮ ಸಂಧಿ, ಕೋಲಾಟದ ಸಂಧಿ, ಅರ್ಪಿತ ಸಂಧಿ ಎಂದು ವಿಂಗಡಿಸಲಾಗಿದೆ. ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಈ ಅಪರೂಪದ ಕಲಾಪ್ರಕಾರ ಈಗ ಅವಸಾನದ ಅಂಚಿನಲ್ಲಿದೆ. ಇದನ್ನು ಉಳಿಸಿ ಬೆಳೆಸೆಬೇಕೆಂಬ ಆಶಯದಿಂದ ಸಂಸ್ಥೆಯನ್ನು ಹುಟ್ಟು ಹಾಕಿದ್ದೇವೆ. ಯೂತ್ ಹಾಸ್ಟೆಲ್ಸ್ ಆಫ್ ಇಂಡಿಯಾ ನಡೆಸಿದ ಐಲ್ಯಾಂಡ್ ಎಕ್ಸ್‌ಪಿಡಿಶನ್ 2009ರಲ್ಲಿ ಹೌಂದೇರಾಯನ ಕುಣಿತ ಪ್ರದರ್ಶನಗೊಂಡು ಸಾರ್ವತ್ರಿಕ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಗುರುಮಾರುತಿ ಹೌಂದೇರಾಯನ ಜಾನಪದ ನತ್ಯ ತಂಡದ ಅಧ್ಯಕ್ಷರಾದ ಗುಂಡು ಪೂಜಾರಿ ಹೇಳುತ್ತಾರೆ.

 

 ಈ ಹೌಂದೇರಾಯ  ಅರಸನಿಗೆ ಸಂಬಂಧಿಸಿದಂತೆ ಐತಿಹ್ಯವೊಂದು ಪಂಜುರ್ಲಿ ದೈವದ ಮೂಲಕ್ಕೆ  ಸಂಬಂಧಿಸಿ ಪ್ರಚಲಿತವಿದೆ.

ಉಡುಪಿ ಜಿಲ್ಲೆಯಲ್ಲಿ ಸೂರಾಲು ಅರಮನೆ ಈಗಲೂ ಇದೆ.ಇಲ್ಲಿಗೆ ಸಂಬಂಧಿಸಿದಂತೆ ಕಪ್ಪಣ್ಣ ಸ್ವಾಮಿ ಎಂಬ ದೈವಕ್ಕೂ ಈ ಪರಿಸರದಲ್ಲಿ ಆರಾಧನೆ ಇದೆ 

ಸೂರಾಲಿನಲ್ಲಿ ಸುರಪುರ ಅರಸರ ಒಂದು ಕವಲು ಸ್ಥಳೀಯವಾಗಿ ಆಡಳಿತ ನಡೆಸುತ್ತಿತ್ತು.ಇತಿಹಾಸದಲ್ಲಿ ಇವರನ್ನು ತೊಳಹರು ಎಂದು ಗುರುತಿಸಲಾಗಿದೆ 

 

ಸುರಪುರದ ಅರಸರು ತಿರುಪತಿಯನ್ನು ರಕ್ಷಣೆ ಮಾಡುವ ಜವಾಬ್ದಾರಿಯನ್ನು ಹೊತ್ತಿದ್ದರು
ಸುರಪುರ ಅರಸರ ಒಂದು ಕವಲು ಸುರಾಲ ಅರಸರಾಗಿದ್ದರು  .ಸುರಾಲಿನ ಅರಸರಲ್ಲಿ ಹೌಂದೇರಾಯನೆಂಬಾತ ತಿರುಪತಿಯ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತಿದ್ದನು

ಈ ಅರಸನ  ಕಾಲದಲ್ಲಿ ನಡೆದ    ವಿದ್ಯಮಾನವಿದು

 ಒಂದು ದಿನ ಹೌಂದೆರಾಯ ತಿರುಪತಿಯಿಂದ ಸುರಾಲಿಗೆ ಬರುತ್ತಾನೆ  

.ದಾರಿಮಧ್ಯೆ ವಿಶ್ರಾಂತಿಗಾಗಿ ಬೀಡು ಬಿಟ್ಟಿದ್ದಾಗ ಒಂದು ಬಿಳಿ ಹಂದಿಮರಿ ಕಾಣಿಸುತ್ತದೆ .ಹೌಂದೆರಾಯ ಮತ್ತವನ ಪರಿವಾರದವರು ಅದನ್ನು ಬೇಟೆಯಾಡಿ ಕೊಂದು ತಿನ್ನುತ್ತಾರೆ.

ನಂತರ ಅವರಿಗೆ ಅನೇಕ ಅನಿಷ್ಟಗಳಾಗುತ್ತದೆ.ಕಷ್ಟ ಕಾರ್ಪಣ್ಯಗಳನ್ನು ಎದುರಿಸುತ್ತಾರೆ 

.ಆಗ ಜ್ಯೋತಿಷರಲ್ಲಿ ಕೇಳಿದಾಗ ಆ ಬಿಳಿ ಹಂದಿ ಮರಿಯು ವರಾಹ ರೂಪಿ ವಿಷ್ಣುವಿನ ಅಂಶವನ್ನು ಪಡೆದಿದ್ದ ದೈವಿಕ ಶಕ್ತಿ.

 

ಅದನ್ನು ಕೊಂದದ್ದು ತಪ್ಪು.ಅದರ ಪರಿಹಾರಾರ್ಥವಾಗಿ ದೇವಾಲಯ ಕಟ್ಟಿಸಿ ಆರಾಧಿಸಬೇ ು ಎಂದು ಕಂಡು ಬರುತ್ತದೆ.ಹಾಗೆ 

ಹೌಂದೆ ರಾಯ ಸುರಾಲಿಗೆ ಬಂದ ನಂತರ ಮರವಂತೆಯಲ್ಲಿ ವರಾಹ ರೂಪಿ ದೇವರನ್ನು ಪ್ರತಿಷ್ಠಾಪಿಸಿ  ಆರಾಧನೆ ಮಾಡುತ್ತಾನೆ ಎಂಬ ಐತಿಹ್ಯವನ್ನು ಶ್ರೀವತ್ಸ ಪ್ರದ್ಯುಮ್ನ ಅವರು ತಿಳಿಸಿದ್ದಾರೆ.

ಹೌಂದೇರಾಯ ಓರ್ವ ತುಂಡರಸನಾಗಿದ್ದು ಜೈನರಸರ ಸಾಮಂತನಾಗಿ ಬಾರಕೂರನ್ನು ಆಳ್ವಿಕೆ ಮಾಡುತ್ತಿದ್ದ ಎಂಬ ಐತಿಹ್ಯವಿದೆ 

ಈತ ತಿರುಪತಿಗೆ ಹೋಗಿ ಹಿಂತಿರುಗಿ ಬರುವಾಗ ಈ ಘಟನೆ ನಡೆದಿರಬಹುದು.

ಪ್ರಸ್ತುತ ಮರವಂತೆಯಲ್ಲಿ ಒಂದು ವರಾಹ ದೇವಸ್ಥಾನ ಇದೆ ಇದನ್ನು ಓರ್ವ ಮಹಾರಾಜ ಯಾವುದೋ ಹತ್ಯೆಯ ದೋಷ ಪರಿಹಾರಕ್ಕಾಗಿ ಕಟ್ಟಿಸಿದ ಆದ್ದರಿಂದ ಇದನ್ನು ಮಹಾರಾಜ ಸ್ವಾಮಿ ವರಾಹ ದೇವಸ್ಥಾನ ಎಂದು ಕರೆಯುತ್ತಾರೆ 

ಬಹುಶಃ ಹಂದಿ ಮರಿಯ ಹತ್ಯೆ ಯ ನಂತರ ದೋಷಗಳು ಕಾಣಿಸಿದ್ದು ಅದರ ಪರಿಹಾರಕ್ಕಾಗಿ ಕಟ್ಟಿಸಿದ್ದು ಇರಬಹುದು 

 

 

ಪುರಾಣ ಮೂಲದ ಕಥಾನಕದಲ್ಲಿ ಈಶ್ವರ ದೇವರು ಹಂದಿ ಮರಿಯನ್ನು ಬೇಟೆ ಆಡಿದ ಕಥೆ ಇದೆ .ಕಾಂತಾರ ಪಂಜುರ್ಲಿ ಕಥೆಯಲ್ಲೂ ಹಂದಿ ಮರಿಯನ್ನು ಕೊಂದ ಕಥಾನಕ ಇದೆ ಸುರ ಪುರದ ಹೌಂದೇ ರಾಯನ ಕಥಾನಕದಲ್ಲು ಹಂದಿ ಬೇಟೆಯ ಕಥೆ ಇದೆ 

ಹಂದಿ ಮರಿಯನ್ನು ಕೊಂದ ನಂತರ ಕಷ್ಟಗಳು ಎದುರಾಗಿ ನಂತರ ಅದನ್ನು ದೈವವಾಗಿ ಆರಾಧನೆ ಮಾಡುದು ಕಂಡು ಬರುತ್ತದೆ 

ಡಾ.ಲಕ್ಷ್ಮೀ ಜಿ ಪ್ರಸಾದ 

ಲೇ : ಕರಾವಳಿಯ ಸಾವಿರದೊಂದು ದೈವಗಳು

Mobile  9480516684

ಹೌಂದೇರಾಯ ಆರಾಧಿಸಿದ ಪಂಜುರ್ಲಿ ಅಲ್ಲದೆ ಅನೇಕ ಪಂಜುರ್ಲಿ ದೈವಗಳಿವೆ

ನನಗೆ ಸಿಕ್ಕ ಪಂಜುರ್ಲಿ ಗಳ ಹೆಸರು ಮತ್ತು ಕಾಂತಾರ ಪಂಜುರ್ಲಿ ಯ ಕಥಾನಕವನ್ನು ನಾನು ಇಲ್ಲಿ ನೀಡಿರುವೆ

1 ಅಂಗಣತ್ತಾಯ ಪಂಜುರ್ಲಿ                   

 2 ಅಂಬುಟಾಡಿ ಪಂಜುರ್ಲಿ            ‌‌‌‌‌‌        

3 ಅಂಬೆಲ ಪಂಜುರ್ಲಿ 

4 ಅಣ್ಣಪ್ಪ ಪಂಜುರ್ಲಿ                        

5  ಅಬ್ಬಕ್ಕ ಪಂಜುರ್ಲಿ                            

6 ಅಬ್ಬೇಡಿ ಪಂಜುರ್ಲಿ.

7 ಅನಿತ್ತ ಪಂಜುರ್ಲಿ                   ‌‌‌‌‌‌           

8 ಅರದ್ದರೆ ಪಂಜುರ್ಲಿ    ‌‌‌‌                       

9 ಅಲೇರ ಪಂಜರ್ಲಿ.

10 ಉಂರ್ದರ ಪಂಜುರ್ಲಿ                  

 ‌11 ಉಡ್ಪಿದ ಪಂಜುರ್ಲಿ                          

12 ಉಬಾರ ಪಂಜುರ್ಲಿ

13  ಉರಿಮರ್ಲೆ ಪಂಜುರ್ಲಿ                    

14 ಎಣ್ಮಡಿತ್ತಾಯ ಪಂಜುರ್ಲಿ. ‌‌‌‌‌‌                   

 15 ಐನೂರ ಪಂಜುರ್ಲಿ 

16 ಒರ್ತೆ? ವರ್ತೆ ಪಂಜುರ್ಲಿ                                

17 ಒರಿ ಪಂಜುರ್ಲಿ   ‌‌‌‌‌‌                         ‌   ‌ ‌    ‌‌‌‌ 

 18 ಒರಿ ಮರ್ಲೆ ಪಂಜುರ್ಲಿ

19 ಒರಿ ಬಂಟೆ ಪಂಜುರ್ಲಿ 

 20  ಕಟ್ಟೆದಲ್ತಾಯ ಪಂಜುರ್ಲಿ. 

22 ಕಡಬದ ಪಂಜುರ್ಲಿ

22  ಕಡೆಕ್ಕಾರ ಪಂಜುರ್ಲಿ

 23 ಕರ್ಪುದ ಪಂಜುರ್ಲಿ  

25 ಕಲ್ಲುರ್ಟಿ ಪಂಜುರ್ಲಿ 

24 ಕಲ್ಯದ ಪಂಜುರ್ಲಿ 

26 ಕಾಡಬೆಟ್ಟುದ ಪಂಜುರ್ಲಿ

 27 ಕಾಡ್ಯ ಪಂಜುರ್ಲಿ

28 ಕುಂಜಿರಂಗರ ಪಂಜುರ್ಲಿ

29 ಕುಕ್ಕುಡು ಬೈದಿನ ಪಂಜುರ್ಲಿ 

30 ಕುಕ್ಕುಲ ಪಂಜುರ್ಲಿ

31  ಕುಂತಾ/ ಟಾಳ ಪಂಜುರ್ಲಿ 

32  ಕುಡುಮೊದ ಪಂಜುರ್ಲಿ 

33 ಕುಪ್ಪೆ ಪಂಜುರ್ಲಿ

34  ಕುಪ್ಪೆಟ್ಟು  ಪಂಜುರ್ಲಿ. 

 35  ಕುಮಾರೆ ಪಂಜುರ್ಲಿ  

 36 ಕೂಳೂರು ಪಂಜುರ್ಲಿ‌

  37 ಕೆಂಪರ್ನ ಪಂಜುರ್ಲಿ

 38 ಕೆಂಪೆರ್ಲ ಪಂಜುರ್ಲಿ 

  39  ಕೊಡ ಪಂಜುರ್ಲಿ

40 ಕೆಂಪೊಡಿ ಪಂಜುರ್ಲಿ 

41_ಕೊರಗ ಪಂಜುರ್ಲಿ

42  ಕೊರಿಯೆಲ ಪಂಜುರ್ಲಿ 

43  ಕೊಟ್ಯದ ಪಂಜುರ್ಲಿ

 44 ಕೋಟೆ ಪಂಜುರ್ಲಿ 

45ಕೋಡಿ ಪಂಜುರ್ಲಿ 

46ಕೋರೆದಾಂಡ್ ಪಂಜುರ್ಲಿ

47  ಗುತ್ತಿ ಪಂಜುರ್ಲಿ  

48  ಗೂಡು ಪಂಜುರ್ಲಿ.

 49 ಗ್ರಾಮ ಪಂಜುರ್ಲಿ

40   ಗಿಡಿರಾವಂತ ಪಂಜುರ್ಲಿ  

51 ಚಾವಡಿದ ಪಂಜುರ್ಲಿ 

52ಜಾಗೆದ ಪಂಜುರ್ಲಿ

53 ಜಾಲುದ ಪಂಜುರ್ಲಿ

‌54 ಜುಂಬುರ್ಲಿ 

55  ಜೋಡು ಪಂಜುರ್ಲಿ

 56 ತೆಳಾರ ಪಂಜುರ್ಲಿ ‌

57 ದಾಸಪ್ಪ ಪಂಜುರ್ಲಿ

‌58ದೆಂದೂರ ಪಂಜುರ್ಲಿ

59  ದೇವರ ಪೂಜಾರಿ ಪಂಜುರ್ಲಿ‌

 60 ನಾಂಜ ಪಂಜುರ್ಲಿ‌

61ನಾಗ ಪಂಜುರ್ಲಿ

62  ನಾಡ ಪಂಜುರ್ಲಿ

 63 ನೆಲಕ್ಕೈ ಪಂಜುರ್ಲಿ. 

64ಪಂಜಣತ್ತಾಯ ಪಂಜುರ್ಲಿ

65 ಪಂಜಿಕ್ಕಲ್ಲು ಪಂಜುರ್ಲಿ

‌‌66 ಪಂಜುರ್ಲಿ ಗುಳಿಗ

 67ಪಟ್ಟದ ಪಂಜುರ್ಲಿ.

68 ಪಣಂಬೂರು ಪಂಜುರ್ಲಿ

 ‌69 ಪ್ರಧಾನಿ ಪಂಜುರ್ಲಿ

 ‌70ಪಾತಾಳ ಪಂಜುರ್ಲಿ

71 ಪಾರೆಂಕಿ ಪಂಜುರ್ಲಿ  

72 ಪೊಟ್ಟ ಪಂಜುರ್ಲಿ  

73 ಬಗ್ಗು ಪಂಜುರ್ಲಿ

74ಬಂಟ ಪಂಜುರ್ಲಿ‌ 

75ಬಡ್ಡಗುಡ್ಡೆದ ಪಂಜುರ್ಲಿ

 76 ಬೂಡು ಪಂಜುರ್ಲಿ

77 ಬೋಳಾರ ಪಂಜುರ್ಲಿ‌‌

78 ಬೈಕಾಡ್ತಿ ಪಂಜುರ್ಲಿ  

79 ಬೈಲ ಪಂಜುರ್ಲಿ‌

80  ಭಂಡಾರದ ಪಂಜುರ್ಲಿ‌

 81 ಮಟ್ಟಾರು  ಪಂಜುರ್ಲಿ

  82 ಮನ ಪಂಜುರ್ಲಿ

83  ಮನಿಪ್ಪನ ಪಂಜುರ್ಲಿ‌

 84 ಮರಾಠ ಪಂಜುರ್ಲಿ  

85 ಮಿಂಚು ಕಣ್ಣಿನ ಪಂಜುರ್ಲಿ

86 ಮಿತ್ತೊಟ್ಟಿ ಪಂಜುರ್ಲಿ  

87ಮುಗೇರ ಪಂಜುರ್ಲಿ 

88 ಮುಳ್ಳು ಪಂಜುರ್ಲಿ

89  ಮೂಡ್ಕೆರಿ ಪಂಜುರ್ಲಿ  

90 ಮೈಯಾರ್ಗೆ ಪಂಜುರ್ಲಿ

 91 ರಕ್ತ ಪಂಜುರ್ಲಿ

92 ರುದ್ರ ಪಂಜುರ್ಲಿ 

93  ಲತ್ತಂಡೆ ಪಂಜುರ್ಲಿ

 ‌94  ವರ್ಣರ ಪಂಜುರ್ಲಿ

95  ವಿಷ್ಣು ಪಂಜುರ್ಲಿ ‌

96  ಶಗ್ರಿತ್ತಾಯ ಪಂಜುರ್ಲಿ  

97ಸ್ಪಟಿಕದ ಪಂಜುರ್ಲಿ

98  ಸಾನದ ಪಂಜುರ್ಲಿ

 99ಸಾರಾಳ ಪಂಜುರ್ಲಿ 

100  ಸುಳ್ಳಮಲೆ ಪಂಜುರ್ಲಿ

101ಸೇಮಿಕಲ್ಲ ಪಂಜುರ್ಲಿ

‌‌102  ಹುಮ್ಮದ ಪಂಜುರ್ಲಿ  

 103 ಕಾಂತಾರ ಪಂಜುರ್ಲಿ 

 


 

ಅನೇಕರು ಪಂಜುರ್ಲಿ ದೈವದ ಮೂಲದ  ಮಾಹಿತಿಯನ್ನು ಕೇಳ್ತಿದ್ದಾರೆ.ಮೂಲ ಪಂಜುರ್ಲಿ ಯಾವುದೆಂದು ಕೇಳಿದ್ದಾರೆ.ಅದಕ್ಕೆ ಉತ್ತರಿಸುವ ಯತ್ನ ಇಲ್ಲಿ ಮಾಡಿದ್ದೇನೆ.

 

ಪಂಜುರ್ಲಿ ಎಂಬುದು ಒಂದು ದೈವವಲ್ಲ.ಪಂಜುರ್ಲಿ ಹೆಸರಿನಲ್ಲಿ ಅನೇಕ ಶಕ್ತಿಗಳಿಗೆ ಆರಾಧನೆ ಇದೆ 

 

ಆಯಾಯ ಪ್ರದೇಶಕ್ಕೆ ಹೊಂದಿಕೊಂಡು ಅಣ್ಣಪ್ಪ ಪಂಜುರ್ಲಿ, ಮಲಾರ ಪಂಜುರ್ಲಿ, ಒರ್ತೆ  ಪಂಜುರ್ಲಿ, ವರ್ಣಾರ ಪಂಜುರ್ಲಿ, ಪೊಟ್ಟ  ಪಂಜುರ್ಲಿ ಇತ್ಯಾದಿ ಹೆಸರುಗಳನ್ನು ಪಡೆದು ಆರಾಧನೆ ಪಡೆಯುತ್ತದೆ

ಆದರೆ ಪಂಜುರ್ಲಿ ಎಂಬ ಒಂದು ಹೆಸರು ಇದ್ದ ಮಾತ್ರಕ್ಕೆ ಎಲ್ಲವೂ ಪಂಜುರ್ಲಿ ಆರಾಧನೆ ಎಂದು ಹೇಳಲು ಸಾಧ್ಯವಿಲ್ಲ .ಪಂಜುರ್ಲಿ ಎಂಬ ಹೆಸರು ಇದ್ದರೂ ಅದೇ ಹೆಸರಿನಲ್ಲಿ ಬೇರೆ ಬೇರೆ ದೈವಗಳಿಗೆ ಆರಾಧನೆ ನಡೆಯುತ್ತಿರುವುದು ಕಂಡು ಬರುತ್ತಿದೆ. ಉದಾಹರಣೆಗೆ ಹೇಳುದಾದರೆ ಅಣ್ಣಪ್ಪ   ಪಂಜುರ್ಲಿ ದೈವವಲ್ಲ ಪಂಜುರ್ಲಿ ಸೇರಿಗೆಗೆ ಸಂದ ಅಣ್ಣಪ್ಪ ಎಂಬಾತನೇ ಅಣ್ಣಪ್ಪ ದೈವವಾಗಿ ನೆಲೆ ನಿಂತಿದ್ದಾನೆ. ಸೇಮಿ ಕಲ್ಲ ಪಂಜುರ್ಲಿಕೂಡ ಪಂಜುರ್ಲಿ ದೈವವಲ್ಲ ಸಿರಿಯ ಶಾಪಕ್ಕೆ ಒಳಗಾಗಿ ದೈವತ್ವ ಪಡೆದಾತ ಸೇಮಿ ಕಲ್ಲ ಪಂಜುರ್ಲಿ ಎಂದು ಆರಾಧಿಸಲ್ಪಡುತ್ತಿರುವುದು ಕಂಡು ಬರುತ್ತಿದೆ. ಹೀಗೆ ಒಂದೇ ಪಂಜುರ್ಲಿ ಎಂಬಹೆಸರಿನಲ್ಲಿ ಅನೇಕ ದೈವಗಳು ಆರಾಧನೆ ಪಡೆಯುತ್ತಿವೆ.

 

ನೂರ ಮೂರು  ಪಂಜುರ್ಲಿ  ದೈವಗಳ ಹೆಸರುಗಳು ಸಿಕ್ಕಿವೆ. ಇವೆಲ್ಲ ಒಂದೇ ದೈವ ಪಂಜುರ್ಲಿಯ ಭಿನ್ನ ಭಿನ್ನ ಹೆಸರುಗಳಲ್ಲ. ಕೆಲವು ಪಂಜುರ್ಲಿಯ ಪ್ರಾದೇಶಿಕ ಹೆಸರುಗಳು. ಹಲವಾರು ಪಂಜುರ್ಲಿ ದೈವದ ಸೇರಿಗೆಗೆ ಸಂದ ದೈವಗಳು.ಅಣ್ಣಪ್ಪ ಪಂಜುರ್ಲಿ‌,ಉಂರ್ದರ ಪಂಜುರ್ಲಿ, ತೇಳಾರ ಪಂಜುರ್ಲಿ ,ಕುಪ್ಪೆಟ್ಟು ಪಂಜುರ್ಲಿ,ದೇವರ ಪೂಜಾರಿ ಪಂಜುರ್ಲಿ‌ ,ಶಗ್ರಿತ್ತಾಯ ಪಂಜುರ್ಲಿ ಮೊದಲಾದವು ಪಂಜುರ್ಲಿ ದೈವ ಹೆಸರುಗಳಲ್ಲ. ಇವು  ಕಾರಣಾಂತರಗಳಿಂದ ಪಂಜುರ್ಲಿ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧನೆ ಪಡೆಯುವ ದೈವಗಳು‌.

 

ಇಪ್ಪತ್ತು ಪಂಜುರ್ಲಿ ದೈವಗಳ ಮಾಹಿತಿ ನನ್ನ ಕರಾವಳಿಯ ಸಾವಿರದೊಂದು ದೈವಗಳು ಗ್ರಂಥದಲ್ಲಿದೆ 103 ಪಂಜುರ್ಲಿ ದೈವಗಳ ಹೆಸರು ಸಿಕ್ಕಿದೆ 

 

ತುಳುನಾಡಿನ ಕೆಲವು ಭೂತಗಳು ಪ್ರಾಣಿ ಮೂಲ ವನ್ನು ಹೊಂದಿವೆ. ಜಗತ್ತಿನಾದ್ಯಂತ ಪ್ರಾಣಿಗಳ ಆರಾಧನೆ (totemic/ totemism/worship ) ಪ್ರಚಲಿತವಿದೆ. ಕ್ರೂರ ಪ್ರಾಣಿಗಳಿಂದ ಪ್ರಾಣ ರಕ್ಷಣೆಗಾಗಿ  ಹಾಗೂ  ಬೆಳೆ ರಕ್ಷಣೆಗಾಗಿ, ಪ್ರಾಣಿ ಆರಾಧನೆ ಪ್ರಾರಂಭವಾಗಿರಬಹುದು ಎಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ.

ಪಂಜುರ್ಲಿ ಭೂತ ಮೂಲತಃ ಪ್ರಾಣಿ ಮೂಲ ದೈವ .ಇದು ವಿಶ್ವದೆಲ್ಲೆಡೆ ಇರುವ ಟೊಟಾಮಿಕ್ ವರ್ಶಿಪ್ 

ತುಳುನಾಡಿನಹೆಚ್ಚಿನ ಭಾಗವನ್ನು ಪಶ್ಚಿಮ ಘಟ್ಟ ಆವರಿಸಿಕೊಂಡಿದೆ. ಆದ್ದರಿಂದ ಇಲ್ಲಿ ಸಹಜವಾಗಿಯೇ ಹಂದಿಗಳ ಕಾಟ ಹೆಚ್ಚು. ಬೆಳೆಯನ್ನು ಹಾಳು ಮಾಡುವ ಹಂದಿಗಳಿಂದ ರಕ್ಷಣೆ ಪಡೆಯುವ ಸಲುವಾಗಿ ಪಂಜುರ್ಲಿ (ಪಂಜಿ(ಹಂದಿ ) ಕುರ್ಲೆ (ಮರಿ ) ಆರಾಧನೆ ಪ್ರಾರಂಭವಾಗಿದೆ.

 

ತುಳುನಾಡಿನ ಭೂತಾರಾಧನೆ ಮೇಲೆ ಪುರಾಣಗಳು ಅಪಾರವಾದ ಪ್ರಭಾವವನ್ನು ಬೀರಿವೆ. ಆದ್ದರಿಂದ ಹೆಚ್ಚಿನ ದೈವ ಕಥಾನಕಗಳು ಪುರಾಣದ ಕಥೆಗಳೊಂದಿಗೆ ಪುರಾಣದ ದೇವರುಗಳೊಂದಿಗೆ ತಳಕು ಹಾಕಿಕೊಂಡಿದೆ. ಅಂತೆಯೇ ಪಂಜುರ್ಲಿ ಭೂತಕ್ಕೆ ಕೂಡ  ಪುರಾಣ ಮೂಲದ ಕಥಾನಕ ಸೇರಿಕೊಂಡಿದೆ 

 

ಕಾಂತಾರ ಪಂಜುರ್ಲಿ 

 

ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಂತಾವರದಲ್ಲಿ ಕಾಂತಾರೇಶ್ವರ ದೇವಾಲಯ ಇದೆ ಇಲ್ಲಿ ದೇವರ ಬಲ ಭಾಗದಲ್ಲಿ ನೆಲೆಯಾಗಿರುವ ಎರಡು ಪಂಜುರ್ಲಿ ದೈವಗಳಿಗೆ ಆರಾಧನೆ ಇದೆ ಹಾಗಾಗಿ ಎರಡು ಮೊಗಗಳು ಇವೆ 

ಕಾಂತಾರ ಪಂಜುರ್ಲಿ ಕುರಿತು ವಿಶಿಷ್ಟ ಕಥಾನಕ ಇದೆ.

ಕಾಂತಾರೊಡು ಕಾಂತಾವರ ದೇವೆರೆ

ಬಲಭಾಗೊಡು ಕಲ್ಲ ಪಂಜಿಯಾದ್ ಉದ್ಯಬೆಂದೆ
ದೇವೆರೆಗ್ ರಥ ಇಜ್ಜಿಂದ್ ತೆರಿದು
ಪುತ್ತಿಗೆ ಸೋಮನಾಥೇಶ್ವರ ದೇವೆರೆನಾಡೆ ಪೋದೆ
ಸೋಮನಾಥೇಶ್ವರ ದೇವೆರೆ ರಥನು ಕೊಣತ್ತೆ
ಕಾಂತಾವರೊಡು ಕಾಂತೇಶ್ವರ ದೇವೆರೆನ
ರಥೋತ್ಸವದ ಪೊರ್ಲುನು ತೂವೊಂಡೆ


ಕನ್ನಡ ಅನುವಾದ 
ಕಾಂತಾರದಲ್ಲಿ ಕಾಂತಾವರ ದೇವರ
ಬಲ ಭಾಗದಲ್ಲಿ ಕಲ್ಲ ಹಂದಿಯಾಗಿ ಉದಿಸಿದೆ
ದೇವರಿಗೆ ರಥ ಇಲ್ಲವೆಂದು ತಿಳಿದು
ಪುತ್ತಿಗೆ ಸೋಮನಾಥ ದೇವರಲ್ಲಿಗೆ ಹೋದೆ
ಸೋಮನಾಥ ದೇವರ ರಥವನ್ನು ತಂದು
ಕಾಂತಾವರದಲ್ಲಿ ಕಾಂತೇಶ್ವರ ದೇವರ
ರಥೋತ್ಸವದ ಚೆಲುವನ್ನು ನೋಡಿಕೊಂಡೆ ..

ಕಾರ್ಕಳ ತಾಲೂಕಿನ ಕಾಂತಾವರದ ಕಾಂತಾರೇಶ್ವರ ದೇವರ ಬಲಭಾಗದಲ್ಲಿ  ಮಾಯವಾಗಿ    ಕಲ್ಲ ಹಂದಿಯಾಗಿ ನಿಂತ  ಕಾಂತಾರ ಪಂಜುರ್ಲಿ ದೈವದ ಬಗ್ಗೆ ವಿಶಿಷ್ಟವಾದ ಐತಿಹ್ಯವಿದೆ.ಈ ಪಾಡ್ದನದ ಕಥೆಯನ್ನು ಶೇಖರ ಪರವರು ತಿಳಿಸಿದ್ದಾರೆ
ಕಾರ್ಕಳ ತಾಲೂಕಿನ ಕಾಂತಾವರವನ್ನು ಆಡುಮಾತಿನಲ್ಲಿ ಕಾಂತಾರ ಎನ್ನುತ್ತಾರೆ.ಕಾಂತಾರ ಎಂದರೆ ಕಾಡು ಎಂದರ್ಥ ಮೊದಲು ಈ ಪ್ರದೇಶ ಕಾಡು ಆಗಿತ್ತು .ಈಗಲೂ ಇದು ಹಳ್ಳಿಯಾಗಿ ಉಳಿದಿದೆ
ಇಲ್ಲಿಗೆ ಸಮೀಪದಲ್ಲಿ ಕೊಂಚಾಡಿ ಎಂಬಲ್ಲಿ ಪ್ರತಿವರ್ಷ ಪಂಜುರ್ಲಿ ದೈವದ ಕೋಲ ನಡೆಯುತ್ತದೆ .
ಒಂದು ವರ್ಷ ಕೋಲ ನೋಡಲು ಕುರಿ ಗುತ್ತಿನ ಹಿರಿಯರು ಹೋಗುತ್ತಾರೆ.ಕೋಲ ನೋಡಿ ಹಿಂತಿರುಗುವಾಗ ದೈವವು ಓರ್ವ ಬ್ರಾಹ್ಮಣ ಮಾಣಿಯ ರೂಪದಲ್ಲಿ ಹಿಂಬಾಲಿಸುತ್ತದೆ.ಮನೆ ಸಮೀಪಿಸಿದಾಗ ಕಾಣದಾಗುತ್ತದೆ.ನಂತರ ಕುರಿ ಗುತ್ತಿನ ಹಿರಿಯರ  ಕನಸಿನಲ್ಲಿ ಕಾಣಿಸಿಕೊಂಡು ತನ್ನನ್ನು ಆರಾಧಿಸಬೇಕೆಂದು ಹೇಳುತ್ತದೆ.
ಎಚ್ಚರಗೊಂಡ ನಂತರ ಅವರು ತನಗೆ ದೈವವನ್ನು ಪಾಲಿಸಲು ಸಾಧ್ಯವಿಲ್ಲ.ಹಾಗಾಗಿ ಕಾಂತಾವರ ದೇವರಲ್ಲಿ ಜಾಗ ಕೇಳು ಎಂದು ಅರಿಕೆ ಮಾಡುತ್ತಾರೆ.ದೈವವು ಕಾಂತಾವರ ದೇವರ ಬಲಿ ಹೋಗದಂತೆ ದಕ್ಷಿಣ ದಿಕ್ಕಿನಲ್ಲಿ ತಡೆಯುತ್ತದೆ

.ನಂತರ ದೇವಾಲಯದ ಒಳಬಾಗದಲ್ಲಿ ಒಂದು ಹಂದಿ ಮರಿಯಾಗಿ ಕಾಣಿಸಿಕೊಳ್ಳುತ್ತದೆ.ಈ ಹಂದಿಮರಿಯನ್ನು ಸಾಕಲು ಒಂದು ಮೊಯಿಲಿಗಳ ಕುಟುಂಬಕ್ಕೆ ನೀಡುತ್ತಾರೆ.ಅ ಹಂದಿಮರಿ ದಟ್ಟ ಪುಷ್ಟವಾಗಿ ಬೆಳೆಯುತ್ತದೆ.ಅಕ್ಕ ಪಕ್ಕದವರ ಗದ್ದೆಗೆ ಹೋಗಿ ಕದ್ದು ಬೆಳೆಯನ್ನು ತಿಂದು ಹಾಳು ಮಾಡುತ್ತದೆ.ಆಗ ಕೋಪಗೊಂಡ ಮೊಯಿಲಿಯವರ ಕುಟುಂಬದವರು ಆ ಹಂದಿಮರಿಯನ್ನು ಕೊಂದು ತಿನ್ನುತ್ತಾರೆ.ಆಗ ಕೋಪಗೊಂಡ ದೈವವು ಎಂಟು ಜನ ಮೊಯಿಲಿ ಕಟುಂಬದ ಸಹೋದರರನ್ನು ಕೊಲ್ಲುತ್ತದೆ
ನಂತರ ಊರವರೆಲ್ಲ ಸೇರಿ ಕಾಂತಾವರ ದೇವರ ಬಲಭಾಗದಲ್ಲಿ ಸ್ಥಾನ ಕಟ್ಟಿಸಿ ದೈವಕ್ಕೆ ಕೋಲ ಕೊಟ್ಟು ಆರಾಧಿಸಿ ಕೋಪವನ್ನು ತಣಿಸುತ್ತಾರೆ.
ಹಾಗೆ ಇಲ್ಲಿ ಹಂದಿಮರಿಯ ರೂಪದಲ್ಲಿ ಕಾಣಿಸಿಕೊಂಡ ದೈವ ಕಾಂತಾರ ಪಂಜುರ್ಲಿ ಎಂದು ಕರೆಸಿಕೊಳ್ಳುತ್ತದೆ.ತಾನು ಕಲ್ಲ ಪಂಜಿ/ ಹಂದಿಯಾಗಿ ಕಾಂತಾವರ ಬಲ ಭಾಗದಲ್ಲಿ ನಿಂತೆ ಎಂದು ದೈವ ನುಡಿಯುತ್ತದೆ.

 

ಇಲ್ಲಿ ಆರಾಧಿಸಲ್ಪಡುವ ದೈವ ಅಣ್ಣಪ್ಪ ಪಂಜುರ್ಲಿ ಎಂದು ಇಲ್ಲಿನ ತಂತ್ರಿಗಳಾದ ಕೃಷ್ಣ ಮೂರ್ತಿ ಭಟ್ ತಿಳಿಸಿದ್ದಾರೆ.ಇಲ್ಲಿನ ಚಿತ್ರವನ್ನವರು ಕಳುಹಿಸಿದ್ದು ಅದರಲ್ಲಿ ಎರಡು ಹಂದಿಯ ಮೊಗಗಳಿವೆ.
ಹಾಗಾಗಿ ಇಲ್ಲಿ ಎರಡು ಪಂಜುರ್ಲಿ ದೈವಗಳಿಗೆ ಆರಾಧನೆ ಆಗುತ್ತಿದ್ದು ಕಾಲಾಂತರದಲ್ಲಿ ಒಂದರಲ್ಲಿಯೇ ಎರಡೂ ಶಕ್ತಿಗಳು ಸಮನ್ವಯಗೊಂಡಿರುವುದು ತಿಳಿದು ಬರುತ್ತದೆ 


ಒಂದು ಅಣ್ಣಪ್ಪ ದೈವವಾದರೆ  ಇನ್ನೊಂದು ಯಾವುದೆಂಬ ಸಂದೇಹ ಉಂಟಾಗುತ್ತದೆ.ಇಲ್ಲಿ ನುಡಿಗಟ್ಟಿನಲ್ಲಿ ದೈವವು ತಾನು ಕಲ್ಲ ಪಂಜಿಯಾಗಿ ನಿಂತೆ ಎಂದಿದೆ.ಆದರೆ ಇಲ್ಲಿ ಕಲ್ಲಿನ ಮೂರ್ತಿ ಇಲ್ಲ.
ಬಹುಶಃ ಅಕ್ಕ ಪಕ್ಕದ ಗದ್ದೆಗೆ ಹೊಕ್ಕು ಹಾನಿ ಮಾಡುವ ಕಳ್ಳ ಹಂದಿಯ ರೂಪದಲ್ಲಿ ಕಾಣಿಸಿಕೊಂಡ ದೈವ 

.ಕಳುವೆ ಪಂಜಿ > ಕಳ್ಳ ಪಂಜಿ ಎಂಬುದೇ ಮೂಲ ಅರ್ಥ ಕಳೆದು ಹೋದಾಗ ಆಡು ಮಾತಿನಲ್ಲಿ    ಕಲ್ಲ ಪಂಜಿ ಎಂದಾಗಿದೆ 

  ಡಾ.ಲಕ್ಷ್ಮೀ ಜಿ ಪ್ರಸಾದ್,

ಆಧಾರ  ಕರಾವಳಿಯ ಸಾವಿರದೊಂದು ದೈವಗಳು ,

 

ಪಂಜುರ್ಲಿ ದೈವದ ಮೂಲಕ್ಕೆ ಸಂಬಂಧಿಸಿದ ಎಲ್ಲ ಕಥಾನಕಗಳಲ್ಲಿಮೂ ಬೇಟೆ ಮತ್ತು ಹಂದಿ ಮರಿ ಸಾಯುವ ಕಥೆ ಇದೆ ಸತ್ತ ನಂತರ ಉಪದ್ರ ಕಾಣಿಸುತ್ತದೆ ಹಾಗಾಗಿ ಅದು ದೈವಿಕ ಶಕ್ತಿ ಎಂದು ತಿಳಿದು ಆರಾಧನೆ ಮಾಡುತ್ತಾರೆ 

ಹಾಗಾಗಿ ಇದು ಮೂಲ ಃ ಟೊಟಾಮಿಕ್ ವರ್ಶಿಪ್ ಎಂದರೆ ಪ್ರಾಣಿ ಮೂಲ ಆರಾಧನೆ ಆಗಿದೆ 

ನಂತರ ಈ ದೈವದ ಸೆರಿಗೆಗೆ ಸಂದವರೂ ಪಂಜುರ್ಲಿ ಹೆಸರಿನೊಂದಿಗೆ ಆರಾಧನೆ ಪಡೆಯುಯ್ತಾರೆ.ಅಣ್ಣಪ್ಪ ಪಂಜುರ್ಲಿ,ದೇವರ ಪೂಜಾರಿ ಪಂಜುರ್ಲಿ ಉಂರ್ದರ ಪಂಜುರ್ಲಿ ಮೊದಲಾದ ದೈವಗಳು ಪಂಜುರ್ಲಿ ದೈವದ ಸೇರಿಗೆಗೆ ಸಂದು ಆರಾಧನೆ ಪಡೆಯುವ ಶಕ್ತಿ ಗಳಾಗಿದ್ದಾರೆ 

 

 

ಕಾಂತಾರ ಫ್ರೀಕ್ವೆಲ್ ನಲ್ಲಿ ಕಾಂತಾರ ಪಂಜುರ್ಲಿ ಯ ಉದ್ಭವದ ಕಥೆ ಹೇಳ್ತಾರಂತೆ ,ಈ ಪಂಜುರ್ಲಿಯ ಕಥೆ ಏನು ಎಂದು ನನ್ನಲ್ಲಿ ಅನೇಕರು ಕೇಳಿದ್ದಾರೆ 

ದೈವಗಳಿಗೆ ಸಂಬಂಧಿಸಿದಂತೆ ಅನೇಕ ಕಥಾನಕಗಳು ಐತಿಹ್ಯಗಳು ಪ್ರಚಲಿತವರುತ್ತದೆ ಹಾಗಾಗಿ ರಿಷಭ್ ಶೆಟ್ಟಿಯವರು ಯಾವ ಕಥೆ ತೋರಿಸುತ್ತಾರೆ ಎಂದು ಹೇಳಲಾಗದು.

ಪಂಜುರ್ಲಿ ದೈವದ ಕುರಿತಾಗಿ ಅನೇಕ ಕಥಾನಕಗಳು ಇವೆ ‌ಆ ಕಥಾನಕಗಳಲ್ಲಿ ಕಾಂತಾರ ಪಂಜುರ್ಲಿ ಎಂಬ ದೈವದ ಕಥೆಯೂ ಇದೆ ಒಂದೊಂದಾಗಿ ಬರೆದು ತಿಳಿಸುವೆ


 

 

 1 ಗಣಾಮಣಿ ಮಂಜುರ್ಲಿ 

ಕೈಲಾಸ ಪರ್ವತದಲ್ಲಿ ಈಶ್ವರದೇವರು ಬೇಟೆಗೆ ಹೊರಡುವಾಗ ಪಾರ್ವತಿ ದೇವಿಯೂ ಹೊರಡುತ್ತಾರೆ. ಗಂಡಸರು ಹೋಗುವಲ್ಲಿ ಹೆಂಗಸರು ಬರಬಾರದು ಎಂದು ಹೇಳಿದರೂ ಪಾರ್ವತಿ ದೇವಿ ಹಠಮಾಡುತ್ತಾಳೆ. ಆಗ ಈಶ್ವರದೇವರು “ನೀನು ನೋಡಿದ್ದನ್ನು ನೋಡಿದೆ ಎನ್ನಬಾರದು ಕೈ ತೋರಿ ಕೇಳಬಾರದು” ಎಂಬ ಶರತ್ತು ವಿಧಿಸಿ ಕರೆದೊಯ್ಯುತ್ತಾರೆ. ಕಾಡಿನಲ್ಲಿ ಗುಜ್ಜಾರ ಮತ್ತು ಕಾಳಿ ಎಂಬ ಎರಡು ಹಂದಿಗಳ ಐದು ಮರಿಗಳು ಈಶ್ವರನ ನಂದನ ಕೆರೆಯಲ್ಲಿ ಹೊರಳಾಡುತ್ತಿರುತ್ತವೆ. ಈಶ್ವರ ಗುಜ್ಜಾರನಿಗೆ ಬಾಣ ಬಿಡುತ್ತಾನೆ. ಕಾಳಿ ಓಡುತ್ತದೆ. ಆ ಐದು ಮರಿಗಳಲ್ಲಿ ಒಂದನ್ನು ಹಠ ಮಾಡಿ ಪಾರ್ವತಿ ಕೈಲಾಸಕ್ಕೆ ತೆಗೆದುಕೊಂಡು ಹೋಗಿ ಪ್ರೀತಿಯಿಂದ ಸಾಕುತ್ತಾರೆ. ಅದನ್ನು ಮಾಳಿಗೆಯಲ್ಲಿ ದುಂಡು ಸಂಕೋಲೆಯಲ್ಲಿ ಕಟ್ಟಿ ಹಾಕುತ್ತಾರೆ. ಕೈಲಾಸದಲ್ಲಿ ಒಂದು ಸಮಾರಾಧನೆಯ ದಿವಸ ಈ ಹಂದಿಮರಿ ಬಿಡಿಸಿಕೊಂಡು ಊಟದ ಎಲೆಗಳಿಗೆ ಬಾಯಿ ಹಾಕುತ್ತದೆ. ಈಶ್ವರ ದೇವರಿಗೆ ಸಿಟ್ಟು ಬಂದು ‘ನೀನು ಕೈಲಾಸದಲ್ಲಿರಬಾರದು. ಭೂಮಿಗಿಳಿದು ದೈವವಾಗಿರಬೇಕು’ ಎಂದು ವರ ಕೊಡುತ್ತಾರೆ. 

ಬ್ರಾಹ್ಮಣರೂಪದಲ್ಲಿ ಭೂಮಿಗಿಳಿದು, ಗಣಾಮಣಿಯಾಗಿ, ಘಟ್ಟ ಇಳಿದು ನೆಲ್ಯಾಡಿ ಬೀಡಿಗೆ ಬರುತ್ತಾನೆ.ಅಣ್ಣಪ್ಪ ಪಂಜ ರ್ಲಿ ಎಂಬ ಹೆಸರಿನಲ್ಲಿ ಆರಾಧಾನೆ ಪಡೆಯುತ್ತದೆ ಇದು ಪಂಜುರ್ಲಿಯ ಪುರಾಣ ಮೂಲ ಕಥೆ. 

 

ಇದೇ ಕಥೆ ಯ ಇನ್ನೊಂದು ಪಾಠ ಹೀಗಿದೆ 

ಪಾರ್ವತಿ ದೇವಿಯು ಕಾಡಿನಿಂದ ತಂದು ಸಾಕಿದ ಹಂದಿ ಗುಜ್ಜಾರ ಬಹಳ ಬಲಿಷ್ಠ ವಾಗಿ ಬೆಳೆಯುತ್ತದೆ.ಕಟ್ಟಿ ಹಾಕಿದ ಸಂಕೋಲೆ ಕಡಿದುಕೊಂಡು ಊರವರ ತೋಟಕ್ಕೆ ನುಗ್ಗಿ ಬೆಳೆ ಹಾಳು ಮಾಡುತ್ತದೆ.ಆಗ ಊರವರು ಬಂದು ದೂರು ಹೇಳುತ್ತಾರೆ ಆಗ ಈಶ್ವರ ದೇವರು ಈ ಹಂದಿ ಮರಿಯನ್ನು ಬೇಟೆ ಆಡಲು ಹೋಗುತ್ತಾರೆ.ಎಷ್ಟೇ ಯತ್ನ ಮಾಡಿದರೂ ಅದು ಸಿಗುವುದಿಲ್ಲ.ಕೊನೆಗೆ ತಾನಾಗಿ ಬಂದು ಈಶ್ವರ ಧಳದೇವರ ಪಾದಕ್ಕೆ ಶರಣಾಗುತ್ತದೆ ಆಗ ಈಶ್ವರ ದೇವರು ಅದರ ಮೇಲೆ ಬಾಣ ಬಿಡುತ್ತಾರೆ 

ಆಗ ಅದು ನೋವಿನಿಂದ ಅತ್ತುಕೊಂಡುಪಾರ್ವತಿ ದೇವಿಯ ಬಳಿ ಬಂದು ಪ್ರಾಣ ಬಿಡುತ್ತದೆ.ಆಗ ಪಾರ್ವತಿ ದೇವಿ ದುಃಖ ಪಡುತ್ತಾರೆ ಆಗ ಈಶ್ವರ ದೇವರು ಆ ಹಂದಿ ಮರಿಗೆ ಜೀವ ಕಲೆ ಕೊಟ್ಟು ಗಣಾಮಣಿ ಯಾಗಿ ಭೂಲೋಕಕ್ಕೆ ಹೋಗಿ ಧರ್ಮ ರಕ್ಷಣೆ ಮಾಡು ಎಂದು ಹೇಳುತ್ತಾನೆಹಾಗೆ ಆ ಹಂದಿ ಮರಿ ಪಂಜುರ್ಲಿ ದೈವವಾಗಿ ಘಟ್ಟ ಇಳಿದು ತುಳುನಾಡಿಗೆ ಬಂದು  ದುಷ್ಟರನ್ನು ಶಿಕ್ಷಿಸಿ ಶಿಷ್ಟರ ರಕ್ಷಣೆ ಮಾಡಿ ಆರಾಧನೆಯನ್ನು ಪಡೆಯುತ್ತದೆ

 

ಅಣ್ಣಪ್ಪ ಪಂಜುರ್ಲಿ 
                                                    
              ತುಳು ನಾಡಿನಲ್ಲಿ ಅಣ್ಣಪ್ಪ ಬಹಳ ಪ್ರಸಿದ್ಧವಾದ ದೈವತ .ಅಣ್ಣಪ್ಪ ದೈವದ ಕುರಿತಾದ ಪಾಡ್ದನಗಳು ಲಭ್ಯವಿವೆ ಆದ್ರೆ ಅವುಗಳ ಸಮರ್ಪಕ ಅಧ್ಯಯನ ಇನ್ನೂ ಆಗಿಲ್ಲ .ಪಾಡ್ದನದ ಕಥಾನಕ ಹೀಗಿದೆ .
ದೇವಪುರದಲ್ಲಿ ದೇವ ಚಂದ್ರ ಬಾಳಿದ ಕಾಲದಲ್ಲಿ ಮೂಡನಕ್ಕೆಸೂರ್ಯನಾರಾಯಣ ದೇವರು ,ಪಡುವಣಕ್ಕೆ ಚಂದ್ರ ನಾಲ್ಕು ದಿಕ್ಕಿನಲಿ ನಾರಾಯಣ ದೇವರು ಮೂರೂ ಲೋಕದಲ್ಲಿ ಈಶ್ವರ ದೇವರು ಉದಿಸಿದ ಕಾಲದಲ್ಲಿ ನಾಲ್ಕು ಮಠ ಉಂಟಾಯಿತು .ನಾಲ್ಕು ಮಠಕ್ಕೆ ಒಬ್ಬ ಜೋಗಿ ಭಿಕ್ಷೆ ಬೇಡಿಕೊಂಡು ಇದ್ದನು .ನಾಲ್ಕು ಮಠಕ್ಕೆ ಮೀರಿದ ಸತ್ಯದರ್ಮ ಎಲ್ಲಿದೆ ಎಂದು ನೋಡಲು ನಾಲ್ಕು ಮಠ ಬಿಟ್ಟು ಮೂಡಣ ಕುಡುಮಕ್ಕೆ ಬರುತ್ತಾನೆ .ಅಲ್ಲಿ ಹಿಂದಿನ ನೆಲ್ಯಾಡಿ ಬೀಡು ಇತ್ತು ಅಲ್ಲಿ ಬಿರ್ಮಣ ಬಲ್ಲಾಳ ಅಮ್ಮು ಬಲ್ಲಾಳ್ತಿ ಇದ್ದರು .ಹನ್ನೆರಡು ವರ್ಷದ ಆಪತ್ತಿನಲ್ಲಿ ನಡೆಯಲು ನಿಲ್ಲಲೂ ಆಗದು ಬಿರ್ಮಣ ಬಲ್ಲಾಳರಿಗೆ .ಆಗ ತುಳಸಿ ಮಂಟಪದಲ್ಲಿ ನಿಂತ ಜೋಗಿ ಜಗನಂದ ಪುರುಷನು ಅಯ್ಯಾ ಅಮ್ಮು ಬಲ್ಲಾಳ್ತಿ ನನಗೆ ದಾನ ಕೊಡಿರಿ ಎಂದು ಕರೆದು ಹೇಳುತ್ತಾನೆ .
ಆಗ ಬಿರ್ಮಣ ಬಲ್ಲಾಳರಿಗೆ ಎದ್ದು ನಿಲ್ಲಲಾಗುವುದಿಲ್ಲ ಏನು ದಾನ ಕೊಡಲಿ ಎಂದು ಅಮ್ಮು ಬಲ್ಲಾಳ್ತಿ ಹೇಳಲು ನನಗೆ ದಾನ ಕೊಡಿ ಆಗ ನಿಮ್ಮ ಕಷ್ಟ ಕಳೆಯುತ್ತದೆ ಎಂದು ಹೇಳುತ್ತಾನೆ .ಅಂತೆ ಅವಳು ಅವನಿಗೆ ದಾನ ಕೊಡುತ್ತಾಳೆ.ಬಿರ್ಮಣ ಬಲ್ಲಾಳರ ಆಪತ್ತು ದೂರವಾಗಿ ಎದ್ದು ಬಂದು ಯಾರಯ್ಯ  ನೀನು? ಎಂದು ಕೇಳಲು “ಇದೊಂದು ಬೀಡಿನಲ್ಲಿ ದಾನ ಧರ್ಮ ನಡೆಯಬೇಕು ,ನಿಮ್ಮ ಧರ್ಮಕ್ಕೆ ನಾನು ಇಲ್ಲಿ ನಿಲ್ಲುವೆ ಎಂದು ಜೋಗಿ ಜಗನಂದ ಪುರುಷ ಹೇಳುತ್ತಾನೆ .

ಹೀಗೆ ಅಲ್ಲಿ ದಾನ ಧರ್ಮ ನಡೆಯುತ್ತಿರುವಾಗ ನಡು ಮಧ್ಯಾಹ್ನದ ಹೊತ್ತಿಗೆ  ಕಾಶಿ ಕದ್ರಿ ಮಠದಿಂದ ನಾಲ್ಕು ಒಕ್ಕಲು ಇಬ್ಬರು ಭಟ್ಟರು ಬರುತ್ತಾರೆ .ಇದೊಂದು ಬೀಡಿನಲ್ಲಿ ದಾನ ಧರ್ಮ ನಮ್ಮ ಅತಿಥ್ಯ ಸ್ವೀಕರಿಸಬೇಕು ಎಂದು ಹೇಳುವಾಗ ಮಧ್ಯಾಹ್ನ ದೇವರಿಗೆ ಪೂಜೆ ಆಗದೆ ನಾವು ಊಟ ಮಾಡಲಾರೆವು ,ದೇವರ ಶಿವ ಲಿಂಗ ಇಲ್ಲದೆ ನಾವು ಊಟ ಮಾಡೆವು ಎಂದು ಹೇಳುತ್ತಾರೆ .
ಅಯ್ಯಯೋ ದೋಷವೇ ಅಯ್ಯಯ್ಯೋ ಪಾಪವೇ ನಾನು ದೇವರನ್ನು ಎಲ್ಲಿಂದ ತರುವುದು ಎಂದು ದುಃಖಿಸಲು ಜೋಗಿ ಜಗನಂದ ಪುರುಷನು ನೀವು ಕೈಗೆ ನೀರು ಕೊಡಿರಿ ,ಎಲೆ ಹಾಕಿರಿ ಅಷ್ಟರಲ್ಲಿ ನಾನು ದೇವರನ್ನು ತರುವೆ ಎಂದು ಗಿಡುಗನ ರೂಪ ತಾಳಿ ಕದ್ರಿಗೆ ಬರುತ್ತಾನೆ .
ಅಲ್ಲಿ ಕದ್ರಿ ಮಂಜುನಾಥನಲ್ಲಿ ನಾನಿರುವ ಕುಡುಮಕ್ಕೆ ಬರಬೇಕು ಎಂದು ಕೇಳಿದಾಗ ಆತ ಬರುವುದಿಲ್ಲ ಎನ್ನುತಾನೆ .ಆಗ ಕೋಪ ಗೊಂಡ ಜೋಗಿ ಪುರುಷ ದೇವರ ಅರ್ಧ ಭಾಗ ಶಿವಲಿಂಗದಲ್ಲಿ ಹಿಡಿದು “ಅಯ್ಯಾ ಸ್ವಾಮಿ ಕೇಳಿರಿ ಅರ್ಧ ಜೀವ ಕದ್ರಿಯಲ್ಲಿ ಉಳಿದರ್ಧ ಮೂಡಣ ಕುಡುಮಕ್ಕೆ ಬರಬೇಕು ಎಂದು ಹೇಳಿ ದೇವರನ್ನು ತೆಗೆದುಕೊಂಡು ಕುಡುಮಕ್ಕೆ ತರುತ್ತಾನೆ ,ಇಲ್ಲಿ ದೇವರು ನಾನು ಬರಲಾರೆ ಆದ್ರೆ ನನ್ನ ಒಂದು ನಕ್ಷತ್ರ ಲಿಂಗ ಏಳನೆಯ ಕೆರೆಯಲ್ಲಿದೆ ಅಲ್ಲಿಂದ ತೆಗೆದುಕೊಂಡು ಆಣತಿ ಇಡುತ್ತಾನೆ ಅಲ್ಲಿಂದ ಮುಳುಗು ಹಾಕಿ ತೆಗದುಕೊಂಡು ಕುಡುಮಕ್ಕೆ ಹೋಗುತ್ತಾನೆ ಎಂಬ ಪಾಟಾಂತರ ಇದೆ
ಮುಂದೆ ಆತ ಅಣ್ಣಪ್ಪ ದೈವವಾಗಿ ಧರ್ಮವನ್ನು ನೆಲೆ ಗೊಳಿಸುತ್ತಾನೆ .
ಹೆಚ್ಚಾಗಿ ಅಣ್ಣಪ್ಪ ಪಂಜುರ್ಲಿಯೊಂದಿಗೆ ಸಮನ್ವಯ ಗೊಂಡು ಆರಾಧಿಸಲ್ಪಡುತ್ತಾನೆ.
ಅಲೌಕಿಕ ನೆಲೆಯನ್ನು ಹೊರತು ಪಡಿಸಿದರೆ ಅಣ್ಣಪ್ಪ ಯಾರು ?ಎಂಬ ಪ್ರಶ್ನೆಗೆ ಇದಮಿತ್ಥಂ ಎಂಬ ಉತ್ತರ ಸಿಗುವುದಿಲ್ಲ .
ಅನಾರೋಗ್ಯದಿಂದ ಆಶಕ್ತರಾಗಿದ್ದ ಬಲ್ಲಾಳರಲ್ಲಿ ನೆಲೆ ಪಡೆದ ಜೋಗಿ ಪುರುಷ ನಂತರ ಅವರಿಗೆ ಎಲ್ಲ ಕಾರ್ಯಗಳಲ್ಲಿಯೂ ಬಲ ಗೈ ಬಂಟನಂತೆ ಸಹಾಯಕನಾಗಿರ ಬಹುದು.ತ ಮ್ಮ ನೆಚ್ಚಿನ ಸಹಾಯಕ ನಾಥ ಸಂಪ್ರದಾಯದ ಅನುಯಾಯಿಯಾಗಿರುಅವ ಅಣ್ಣಪ್ಪನಿಗಾಗಿಯೇ ಆತನ ಇಷ್ಟ ದೈವ ಕದಿರೆಯಮಂಜುನಾಥನನ್ನು ಇಲ್ಲೂ ಪ್ರತಿಷ್ಟಾಪಿಸಿರ ಬಹುದು .
ಕನ್ನಡ ಯಾನೆ ಪುರುಷ ಭೂತ ಪಾದ್ದನದಲ್ಲಿ ಇಬ್ಬರು ಜೋಗಿ ಪುರುಷರು (ಜೋಗಿ ಜಗನಂದ ಪುರುಷರು )ಕಲ್ಲೆಂಬಿ ಪೆರ್ಗಡೆ ಬೀದಿಗೆ ಹೋಗಿ ಕಾರಣಿಕ ತೋರುವ ವಿಚಾರ ಇದೆ .ಇವರಿಬ್ಬರು ಉಲ್ಲಾಕುಳುಗಳ ಪ್ರಧಾನಿ ಎಂಬಂತೆ ಆರಧಿಸಲ್ಪಡುತ್ತಾರೆ.
ನೆಲ್ಯಾಡಿ ಜೈನ ಬೀಡು .ಅವರಲ್ಲಿ ಶಿವನನ್ನು ಆರಾಧಿಸುವ ಸುವ ಸಂಪ್ರದಾಯವಿಲ್ಲ .ಹಾಗಿದ್ದರೂ ಅಲ್ಲಿ ಪ್ರಸಿದ್ಧವಾದ ಶಿವನ /ಮಂಜುನಾಥನ ದೇವಾಲಯವಿದೆ .ಇದನ್ನು ಕಟ್ಟಿಸಿದವರಾರು?ಅಥವ ಅದಕ್ಕೆ ಪ್ರೇರಣೆ ಯಾರು ?ಎಂದು ಯೋಚಿಸಿದಾಗ “ಜೋಗಿಗಳು ಶೈವ ಮತಾವಲಂಭಿಗಳು ,ಪಾದ್ದನದಲಿ ಕೂಡ ಜೋಗಿ ಪುರುಷ ತಂದದ್ದೆಂದು ಇದೆಯಾದ್ದರಿಂದ ಆ ಜೋಗಿ ಪುರುಷಣೆ ಇದಕ್ಕೆ ಕಾರಣ ಕರ್ತ  ಅಥವಾ ಪ್ರೇರಕ ಆಗಿರಬಹುದು.ಮಂಜು ನಾಥ ಎಂಬ ಹೆಸರು ಕೂಡಾ ನಾಥ ಸಂಪ್ರದಾಯದ ಮತ್ಸ್ಯೆಂದ್ರ ನಾಥನನನ್ನು ದ್ಯೋತಿಸುತ್ತದೆ ಎಂದು ಕದವ ಶಂಭು ಶರ್ಮ ,ಡಾ.ಎಸ್ ನಾಗರಾಜು ಮೊದಲಾದ ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ .ದೇವಸ್ಥಾನವನ್ನು ಕಟ್ಟಿಸಿದ ಮಹತ್ಕಾರ್ಯ ಮಾಡಿದವರು ದೈವತ್ವವನ್ನು ಪಡೆದು ಆರಾಧಿಸಲ್ಪಡುವುದು ತುಳು ಸಂಸ್ಕೃತಿಯಲ್ಲಿ ಅಲ್ಲಲ್ಲಿ ಕಂಡು ಬರುವ ವಿಚಾರ /ಕಾರಿಂಜೆತ್ತಾಯ,ಚೆನ್ನಿಗರಾಯ ,ಅಚ್ಚು ಬಂಗೇತಿ,ಅಡ್ಕತ್ತಾಯ ಮೊದಲಾದವರು ದೇವಾಲಯ ಕಟ್ಟಿಸಿದ ಕಾರಣದಿಂದಲೇ ದೈವಾನುಗ್ರಹ ಪಡೆದು ದೈವಿಕತೆಯನ್ನು ಪಡೆದು ಆರಾಧಿಸಲ್ಪಡುತ್ತಿದ್ದಾರೆ.
ಅದೇ ರೀತಿ ಜೋಗಿ ಪುರಷ ಕೂಡ  ಅಣ್ಣಪ್ಪ ಎಂಬ ಹೆಸರಿನಲ್ಲಿ ದೈವತ್ವವನ್ನು ಪಡೆದಿರಬಹುದು.ಇದಲ್ಲದೆ ಅಣ್ಣಪ್ಪ ಮೂಲತಃ ಒಬ್ಬ ಸ್ಥಾನಿಕ ಬ್ರಾಹ್ಮಣ ಎಂಬ ಐತಿಹ್ಯ ಕೂಡ ಇದೆ.ಬಲ್ಲಾಳರಿಗೆ ಬಲ ಗೈಯಂತೆ/ ಮನೆಮಗನಂತೆ ಇದ್ದ  ಕೃಷ್ಣ ಭಟ್ಟ ಎಂಬಾತನನ್ನು ಹೊಟ್ಟೆಕಿಚ್ಚಿನಿಂದ ಯಾರೋ  ಅವಲಕ್ಕಿಯೊಂದಿಗೆ ಪೀಲೆಯನ್ನು ಬೆರೆಸಿ ನೀಡಿದರು .ದುರಂತವನ್ನಪ್ಪಿದ .ಆತನಿಗೆ ಕೂಡ ಅಣ್ಣಪ್ಪ ದೈವದೊಂದಿಗೆ ಆರಾಧನೆ ಇದೆ ಎಂಬ ಐತಿಹ್ಯ ಇರುವ ಬಗ್ಗೆ ಹಿರಿಯರಾದ ಶ್ರೀ ಆನಂದ ಕಾರಂತ ,ಶ್ರೀ ಪರಮೇಶ್ವರ ಭಟ್ ಮೊದಲಾದವರು ತಿಳಿಸಿದ್ದಾರೆ .ಕೃಷ್ಣ ಭಟ್ ಓರ್ವ ವೀರ ಸಂನ್ಯಾಸಿ ಅಣ್ಣಪ್ಪ ದೈವವನ್ನು ಜಲ ಸ್ಥಂಭನ ಮಾಡುವಾಗ ದುರಂತವನ್ನಪ್ಪಿದವರು .ಆತನೇ ಅಣ್ಣಪ್ಪ ದೈವವೇ ಅಥವಾ ಆತ ಅಣ್ಣಪ್ಪ ದೈವದ ಸನ್ನಿಧಿಗೆ ಸೇರಿರುವ ದೈವತವೆ ಎಂಬ ಬಗ್ಗೆ ಮಾಹಿತಿ ಇಲ್ಲ.ಅಣ್ಣಪ್ಪ ದೈವ ಕಾಯಂಬಾಡಿ ಕೃಷ್ಣ ಭಟ್ರೆಗ್ ಅಮೃತ ಪಡಿ ಸಂದುದುಂಡಾ ಎಂದು ಕೇಳುವ ಪದ್ದತಿ ಇದೆ ಎಂದು ಪರಮೇಶ್ವರ ಭಟ್ಟರು ತಿಳಿಸಿದ್ದಾರೆ ಹಾಗಾಗಿ ಅಣ್ಣಪ್ಪ ಮತ್ತು ಕೃಷ್ಣ ಭಟ್ಟರು ಬೇರೆ ಬೇರೆ ಇರುವ ಸಾಧ್ಯತೆ ಇದೆ ಧರ್ನಸ್ಥಳದಲ್ಲಿ ಕೃಷ್ಣ ಭಟ್ಟರನ್ನು ಆರಾಧಿಸುತ್ತಾರೆ ಅವರಿಗೊಂದು ಗುಡಿ ಇದೆ ಎಂದು ಹೇಳುತ್ತಾರೆ .

 ಸ್ಥಾನಿಕ ಬ್ರಾಹ್ಮಣರಲ್ಲಿ  ಅಣ್ಣಪ್ಪಯ್ಯ ಎಂಬ ವೀರ ಸಂನ್ಯಾಸಿ ಇದ್ದರು.ಕಾಲಾಂತರದಲ್ಲಿ ಅವರನ್ನು ಸ್ಥಾನಿಕ ಬ್ರಾಹ್ಮಣರು ಅಣ್ಣಪ್ಪ ಪಂಜುರ್ಲಿ ,ಇಷ್ಟ ದೇವತೆ ಸತ್ಯ ದೇವತೆ ಎಂಬ ಹೆಸರುಗಳಲ್ಲಿ ಆರಾಧನೆ ಮಾಡುತ್ತಾರೆ ಎಂಬ ಕಥಾನಕವೂ ಪ್ರಚಲಿತವಿದೆ 
ಧರ್ಮಸ್ಥಳದಲ್ಲಿ ಅಣ್ಣಪ್ಪ ಬೆಟ್ಟಕ್ಕೆ ಸ್ತ್ರೀಯರಿಗೆ ಪ್ರವೇಶವಿಲ್ಲ .ಬಹುಶ ಇದರ ಅನುಸರಣೆಯೋ ಏನೋ ?ಕೆಲವೆಡೆ ಅಣ್ಣಪ್ಪ ದೈವದ ನೇಮಕ್ಕೆ ಸ್ತ್ರೀಯರಿಗೆ ನಿಷೇಧ ಇದೆ ಆದರೆ ಕೆಲವೆಡೆ ಗಳಲ್ಲಿ ಅಣ್ಣಪ್ಪ ದೈವದ ಕೋಲ ಆಗುವಾಗ ಸ್ತ್ರೀಯರಿಗೆ ಪ್ರವೇಶ ಇದೆ .
ಜಾನಪದ ಕಥಾನಕಗಳು ಮೌಖಿಕ ಸಂಪ್ರದಾಯದಲ್ಲಿ ತಲೆಮಾರಿನಿಂದ ತಲೆಮಾರಿಗೆ ಹರಿದು ಬರುವಾಗ ಅನೇಕ ಪಾಠ ಭೇದ ಗಳು  ಉಂಟಾಗುತ್ತವೆ ,ಅದರಲ್ಲಿನ ಮೂಲ ಆಶಯ ವನ್ನು ಗುರುತಿಸಿ ಅಧ್ಯಯನ ಮಾಡಬೇಕಾಗಿದೆ .
ಆಧಾರ ಗ್ರಂಥಗಳು
1.ಡಾ,ಅಮೃತ ಸೋಮೇಶ್ವರ .ತುಳುಜಾನಪದ ಕೆಲವು ನೋಟಗಳು ,
                              ಮತ್ತು ತುಳು ಪಾಡ್ದನ ಸಂಪುಟ
2 ಡಾ..ವಿವೇಕ ರೈ,ತುಳುಜನಪದ ಸಾಹಿತ್ಯ (ಪಿಎಚ್,ಡಿ ಮಹಾ ಪ್ರಬಂಧ ).
                               ಮತ್ತು ಪುಟ್ಟು ಬಳಕೆಯ ಪಾಡ್ದನಗಳು
3 ಡಾ.ಚಿನ್ನಪ್ಪ ಗೌಡ ,ಭೂತಾರಾಧನೆ –ಒಂದು ಜಾನಪದೀಯ ಅಧ್ಯಯನ
4 ಡಾ.ಗಣೇಶ ಅಮೀನ್ ಸಂಕಮಾರ್ ,ನುಡಿಸಿಂಗಾರ
5 ಕಡವ ಶಂಭು ಶರ್ಮ  ನಾಥ ಸಂಪ್ರದಾಯ
5ಮೌಖಿಕ ಮಾಹಿತಿಗಳು ನೀಡಿದವರು 1 ಪರಮೇಶ್ವರ ಭಟ್ (ಸು 70 ವರ್ಷ ),ಕೆಯ್ಯೂರು2  ಶ್ರೀ ಆನಂದ ಕಾರಂತ (ಸು 75 ವರ್ಷ ) ಕೋಳ್ಯೂರು

ಈ ಬಗ್ಗೆ ಹೆಚ್ಚಿನ ಮಾಹಿತಿ ಇದ್ದವರು ತಿಳಿಸಬೇಕಾಗಿ ವಿನಂತಿ

ಒರಿ ಮರ್ಲ ಪಂಜುರ್ಲಿ 
ಧರ್ಮಸ್ಥಳದಲ್ಲಿ ಅಣ್ಣಪ್ಪ ದೈವದ ಪರಿವಾರ ದೈವ ಉರಿಮರ್ಲ. ಈ ದೈವವನ್ನು ಒರಿಮರ್ಲೆ (ಒಬ್ಬ ಮರುಳ) ಎಂದು ಕೂಡ ಕರೆಯುತ್ತಾರೆ.ನ್ಯಾಯಾನ್ಯಾಯದ ಪ್ರಶ್ನೆಯನ್ನು ಪರಿಹರಿಸಲು ಸಾಧ್ಯವಾಗದೆ ಇದ್ದಾಗ ಜನರು ದೇವರ ಮೊರೆ ಹೋಗುತ್ತಾರೆ .ಅನ್ಯಾಯಕ್ಕೊಳಗಾದವರು "ನ್ಯಾಯಾನ್ಯಾಯವನ್ನು ದೇವರು ನೋಡಿಕೊಳ್ಳಲಿ" ಎಂದು ಹರಿಕೆ ಹೇಳಿಕೊಳ್ಳುತ್ತಾರೆ  
 ಧರ್ಮಸ್ಥಳ ಮಂಜುನಾಥ ದೇವರಿಗೆ ಆಣೆ ಹಾಕುವುದು ಎಂಬ ಪದ್ಧತಿ ಪ್ರಚಲಿತ ಇದೆ .ಮಂಜುನಾಥ ಒಂದು ಆಣೆಯನ್ನು ಕೂಡಾ ಬಿಡಲಾರ ಎಂಬ ನಂಬಿಕೆ ಜನರಿಗಿದೆ.
ಧರ್ಮಸ್ಥಳದ ಮಂಜುನಾಥ ದೇವರ ಮೇಲೆ ಆಣೆ ಇಟ್ಟು ತಪ್ಪಿ ನಡೆದು, ವಾಕ್ ದೋಷಕ್ಕೆ ಒಳಗಾದವರಿಗೆ ಹುಚ್ಚು ಹಿಡಿಸಿ ಧರ್ಮಸ್ಥಳಕ್ಕೆ ಕರೆತರುವ ಕಾರ್ಯವನ್ನು ಉರಿಮರ್ಲ ದೈವ ಮಾಡುತ್ತದೆ. ಈ ದೈವಕ್ಕೆ ಎರಡು ಬೆಳ್ಳಿಯ ಕಣ್ಣು ಹಾಗೂ ಮೂಗು ಇರುವ ವಿಶಿಷ್ಟ ಮುಖವಾಡವಿದೆ. ಈ ದೈವವನ್ನು ಸ್ತ್ರೀರೂಪಿ ಎಂದು ಭಾವಿಸಲಾಗಿದೆ. ಈ ದೈವದ ಪಾಡ್ದನ, ಐತಿಹ್ಯಗಳು ಲಭ್ಯವಾಗಿಲ್ಲ.
ಆದರೆ ಒರಿ ಮರ್ಲ ಎಂದರೆ ಒಬ್ಬ ಹುಚ್ಚ ಎಂಬ ಅರ್ಥವನ್ನು ನೋಡುವಾಗ ವಾಸ್ತವದಲ್ಲಿ ಒಬ್ಬ ಮಾನಸಿಕ ಅಸ್ವಸ್ಥ (ಮರ್ಲ ?!) ಕಾರಣಾಂತರಗಳಿಂದ ದುಂತವನ್ನಪ್ಪಿ ದೈವತ್ವವನ್ನು ಪಡೆದು ಪಂಜುರ್ಲಿ ದೈವದ ಸೇರಿಗೆಗೆ ಸಂದು ಆರಧಿಸಲ್ಪತ್ತಿರುವ ಸಾಧ್ಯತೆ ಇದೆ ಎಂದು ತೋರುತ್ತದೆ .ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗದ ಕರಣ ಏನೊಂದೂ ಹೇಳುವುದು ಕಷ್ಟಕರ .ಈ ಬಗ್ಗೆ ಅಧ್ಯಯನ ನಡೆಯಬೇಕಾದ ಅಗತ್ಯವಿದೆ .

ಸೇಮಿ ಕಲ್ಲ ಪಂಜುರ್ಲಿ 

 


 

                                                ಚಿತ್ರ ಕೃಪೆ :ಧರ್ಮ ದೈವ


ಹೆಸರಿನಲ್ಲಿ ಪಂಜುರ್ಲಿ ಎಂದು ಇದ್ದರೂ ಕ್ಷೇಮಕಲ್ಲ /ಸೇಮಿ ಕಲ್ಲ ಪಂಜುರ್ಲಿ, ಪಂಜುರ್ಲಿ ದೈವವಲ್ಲ .ಪಂಜುರ್ಲಿಯ ಸೇರಿಗೆ ದೈವ ಕೂಡ ಅಲ್ಲ
ಪ್ರಧಾನ ದೈವದ ಸೇರಿಗೆಯಾಗಿ ಅನೇಕ ದೈವಗಳಿಗೆ ಆರಾಧನೆ ಇರುತ್ತದೆ .ಸಾಮಾನ್ಯವಾಗಿ ಸೇರಿಗೆ ದೈವಗಳು ಪ್ರಧಾನ ದೈವದ ಆಗ್ರಹ ಅಥವಾ ಅನುಗ್ರಹ ಪಡೆದು ದೈವತ್ವ ಪಡೆದ ಶಕ್ತಿಗಳಾಗಿರುತ್ತವೆ
ಹೀಗೆ ಸತ್ಯನಾಪುರದ ಸಿರಿಯ ಆಗ್ರಹಕ್ಕೆ ತುತ್ತಾಗೆ ದೈವತ್ವ ಪಡೆದ ದೈವ ಕ್ಷೇಮಿಕಲ್ಲ ಪಂಜುರ್ಲಿ .ಸತ್ಯನಾಪುರದ ರಾಜ ಬೆರ್ಮ ಆಳ್ವನಿಗೆ ಹುಟ್ಟಿದ ಮಗು ಸಾಯುತ್ತದೆ. ಹೆಂಡತಿಯೂ ಸಾಯುತ್ತಾಳೆ. ಬೇರೆ ಸಂತಾನವಿಲ್ಲದ ವೃದ್ಧ ಅರಸ ಬೆರ್ಮ ಆಳ್ವನಿಗೆ ‘ಮುಂದೆ ತನ್ನ ರಾಜ್ಯಕ್ಕೆ ದಿಕ್ಕಿಲ್ಲ’ ಎಂದು ಚಿಂತೆಯಾಗಿ ದುಃಖಿಸುತ್ತಾನೆ. ಅವನ ಕಣ್ಣೀರು ಅವನ ಕುಲದೈವ ಲಂಕೆಲೋಕನಾಡಿನ ಬೆರ್ಮರ ಪಾದಕ್ಕೆ ಸಂಪಿಗೆ ಹೂವಿನ ರಾಶಿಯಾಗಿ ಬೀಳುತ್ತದೆ.

ಆಗ ಬೆರ್ಮೆರ್ ಬಡಬ್ರಾಹ್ಮಣನ ರೂಪ ಧರಿಸಿ, ಬೆರ್ಮ ಆಳ್ವನಲ್ಲಿಗೆ ಬಂದು ‘ಲಂಕೆಲೋಕನಾಡಿನ ಆದಿ ಆಲಡೆ, ಕಾಡು-ಪೊದೆ ಬಳ್ಳಿಯಿಂದ ಸುತ್ತುವರಿದು ಪಾಳು ಬಿದ್ದಿದೆ. ಅದರ ಜೀರ್ಣೋದ್ಧಾರ ಮಾಡಿದರೆ ನಿನ್ನ ಸಮಸ್ಯೆ ಸರಿಹೋಗುತ್ತದೆ’ ಎಂದು ಹೇಳುತ್ತಾನೆ. ಅಂತೆಯೇ ಬೆರ್ಮ ಆಳ್ವ ಹೋಗಿ ಲಂಕೆಲೋಕನಾಡಿನ ‘ಬೆರ್ಮೆರ’ ಪ್ರಾರ್ಥನೆಯನ್ನು ಮಾಡಿ ಕಾಡಿನಲ್ಲಿರುವ ಬೆರ್ಮೆರನ್ನು ತಂದು ಏಳದೆ ಗುಂಡ ಗುಡಿ ಕಟ್ಟಿಸುತ್ತೇನೆ ಎಂದು ಹರಿಕೆ ಹೇಳುತ್ತಾನೆ. ಆಗ ಪ್ರಸಾದರೂಪದಲ್ಲಿ ಸಿಕ್ಕ ಹಿಂಗಾರದ ಹಾಳೆಯ ಮೇಲಿನ ಗಂಧದ ಗುಳಿಗೆ ಹೆಣ್ಣುಮಗುವಾಗುತ್ತದೆ.
ಆ ಮಗುವನ್ನು ದೇವರ ವರವೆಂದು ಭಾವಿಸಿ ಬೆರ್ಮ ಆಳ್ವ ಆ ಮಗುವಿಗೆ ‘ಬಾಲೆಕ್ಕೆ ಸಿರಿ’ ಎಂದು ಹೆಸರಿಟ್ಟು ಸಾಕುತ್ತಾನೆ. ಮುಂದೆ ಬಸ್ರೂರು ಬತ್ತಕೇರಿ ಅರಮನೆಯ ಕಾಂತುಪೂಂಜರ ಜೊತೆ ಅವಳ ಮದುವೆಯಾಗುತ್ತದೆ. ಮುಂದೆ ಕಾಂತುಪೂಂಜ ಸೂಳೆ ಸಿದ್ದುವಿನ ಸಹವಾಸ ಮಾಡುತ್ತಾನೆ. ಸಿರಿ ಗರ್ಭಿಣಿಯಾಗುತ್ತಾಳೆ. ಅವಳ ಸೀಮಂತಕ್ಕೆ, ತೆಗೆದ ಸೀರೆಯನ್ನು ಸೂಳೆ ಸಿದ್ದು ಉಟ್ಟು ನೆರಿಗೆ ಹಾಳು ಮಾಡುತ್ತಾಳೆ. ಈ ಬಗ್ಗೆ ಬೆರ್ಮೆರ್ ಸಿರಿಗೆ ಸೂಚನೆ ನೀಡಿರುತ್ತಾರೆ.

 ಆದ್ದರಿಂದ ಆ ಸೀರೆಯನ್ನು ತಿರಸ್ಕರಿಸಿ ತನ್ನ ಅಜ್ಜ ತಂದ ಸೀರೆಯನ್ನು ಉಡುತ್ತಾಳೆ. ಎಲ್ಲರ ಎದುರು ತನ್ನ ಮರ್ಯಾದೆ ತೆಗೆದಳೆಂದು ಕಾಂತುಪೂಂಜ ಸಿರಿಯೊಡನೆ ಕೋಪಿಸುತ್ತಾನೆ. ಮುಂದೆ ಅವಳು ಮಗುವನ್ನು ಹೆತ್ತಾಗಲೂ ನೋಡಲು ಬರುವುದಿಲ್ಲ. ಬೆರ್ಮ ಆಳ್ವ ಸತ್ತಾಗಲೂ ಬರುವುದಿಲ್ಲ. ಕಾಂತುಪೂಂಜನ ಪಿತೂರಿಯಿಂದಾಗಿ ಬೆರ್ಮ ಆಳ್ವನ ಅರಮನೆ, ರಾಜ್ಯ ದಾಯಾದಿಗಳ ಪಾಲಾಗುತ್ತದೆ.
 ಸಿರಿ ತನ್ನ ಮಗು ಕುಮಾರ ಹಾಗೂ ಕೆಲಸದ ಹೆಂಗಸು ದಾರುವಿನೊಂದಿಗೆ ಬಸ್ರೂರು ಬತ್ತಕೇರಿ ಅರಮನೆಗೆ ಬಂದು ಬರ (ವಿಚ್ಛೇದ)ವನ್ನು ಕೇಳುತ್ತಾಳೆ. ಮುಂದೆ ಅರಮನೆ ಉರಿದು ಹೋಗುವಂತೆ ಶಾಪ ಕೊಟ್ಟು ಅಲ್ಲಿಂದ ದೇಶಾಂತರ ಹೋಗುತ್ತಾಳೆ
ಸಂಜೆ ಹೊತ್ತು ಕಂತುವುದರ ಒಳಗೆ ತನ್ನ ರಾಜ್ಯದ ಗದುಯನ್ನು ದಾಟಿ ಹೋಗಬೇಕೆಂದು ಕಾಂತು ಪೂಂಜ ಹೇಳುತ್ತಾನೆ .
ಅಂತೆಯೇ ದಾರುವಿನೊಂದಿಗೆ ತೊಟ್ಟಿಲ ಮಗುವನ್ನು ಹಿಡಿದುಕೊಂಡು ಬರುವಾಗ ದಾರಿಯಲ್ಲಿ ಗಾಳಿ ಕೊಂತ್ಯಮ್ಮ ದೇವರು ಸಿಗುತ್ತಾರೆ .
ಸಿರಿಗೆ ರಸ ಬಾಲೆ ಹಣ್ಣು ಹಾಲು ತಂದು ಕೊಡುತ್ತಾಳೆ .ಮತ್ತೆ ಅವಳಲ್ಲಿ ನನ್ನ ಮಗ ವೀರ ಭದ್ರ ಕುಮಾರ ಬರುವ ಮೊದಲು ಇಲ್ಲಿಂದ ಹೋಗು ಅವನು ಕಂಡರೆ ನಿನ್ನನ್ನು ಬಿಡಲಾರ ,ಅವನು ಸಿಕ್ಕರೆ ಅವನನ್ನು ನಿನ್ನ ಮಗನ ಹಾಗೆ ಭಾವಿಸಿ ಅವನ ತಪ್ಪನ್ನು ಕ್ಷಮಿಸಬೇಕು ಎಂದು ಹೇಳುತ್ತಾರೆ .ಆಯಿತು ಎಂದು ಹೇಳುತ್ತಾಳೆ ಸಿರಿ
ಅಲ್ಲಿಂದ ಮುಂದೆ ಹೋಗುವಾಗ ವೀರ ಭದ್ರ ಕುಮಾರ ಹಿಮ್ಬಾಲಿಸ್ಕೊಂದು ಬಂದು ಅಡ್ಡ ಕಟ್ಟುತ್ತಾನೆ .ಅವಳತಲೆ ಕೂದಲಿಗೆ ಕೈ ಹಾಕುತ್ತಾನೆ .ಆಗ


ಓ ಮುಟ್ಟಡ ಮುಟ್ಟಡ ಪಂಡೆರ್ ಬಾಲೆಕ್ಕೆ ಸಿರಿಯೇ
ಓ ಪನ್ನಲ ಪತ್ತಿನಕೇಂಡಿಜೆ ಪಂಡೆರ್ ಆರಾಂಡ ಆನಿಗಯ್ ಯೇ
ಓ ಒಲಿಪ್ಪಾಲ ಉದೆಟ್ ಲ ನೆದಿಪ್ಪಾಲ ಕಲ್ಲುಲ ಪಾದೆಲ ನೆಗೆಪ್ಪುಲಾಯೆ

ನನ್ನನ್ನು ಮುಟ್ಟ ಬೇಡ ಮುಟ್ಟ ಬೇಡ ಎಂದು ಸಿರಿ ಹೇಳುತ್ತಾಳೆ .ಅವಳ ಮಾತನ್ನು ಲಕ್ಷಿಸದೆ ಮುಂದುವರಿದ ಅವನಿಗೆ ಶಾಪ ಕೊಟ್ಟು ಹೊಳೆಯಲ್ಲಿ ಪಾದೆ ಕಲ್ಲಾಗುವಂತೆಮಾಡುತ್ತಾಳೆ .ಮುಂದೆ ಅವನ ತಾಯಿಗೆ ಕೊಟ್ಟ ಮಾತು ನೆನಪಾಗಿ ಆತನಿಗೆ ದೈವತ್ವ ನೀಡಿ ಕ್ಷೇಮ ಕಲ್ಲು ಪಂಜುರ್ಲಿ ಎಂಬ ಹೆಸರಿನಲ್ಲಿ ಆರಾಧನೆ ಪಡೆ ಎಂದು ಹೇಳುತ್ತಾಳೆ .

ಹೀಗೆ ಸಿರಿರ್ಯ ಅನುಗ್ರಹದಿಂದ ದೈವತ್ವ ಪಡೆದ ವೀರ ಭದ್ರ ಕುಮಾರ ಕ್ಷೇಮ ಕಲ್ಲ ಪಂಜುರ್ಲಿ ದೈವವಾಗಿ ನೆಲೆ ನಿಲ್ಲುತ್ತಾನೆ .

ಡಾ.ಲಕ್ಷ್ಮೀ ಜಿ ಪ್ರಸಾದ 

ಲೇ : ಕರಾವಳಿಯ ಸಾವಿರದೊಂದು ದೈವಗಳು 

ಮಬೈಲ್ 9480516684:

 

 

Thursday, 20 March 2025

ದೊಡ್ಡವರ ದಾರಿ :76 : ಉದಾರಿ ದಕ್ಷ ಪ್ರಿನ್ಸಿಪಾಲ್ ಸಿಸ್ಟರ್ ನತಾಲಿಯಾ ಡಿ ಸೋಜ ..

 ದೊಡ್ಡವರ ದಾರಿ : ಉದಾರಿ ದಕ್ಷ ಪ್ರಿನ್ಸಿಪಾಲ್  ಸಿಸ್ಟರ್ ನತಾಲಿಯಾ ಡಿ ಸೋಜ 

ಇಲ್ಲಿ ಜಡೆಗಳು ಜಗಳವಾಡುವುದಿಲ್ಲ

ಜಗ ಮೆಚ್ಚುವಂತೆ ಕೆಲಸ ಮಾಡುತ್ತವೆ..



ಕಳೆದ ಇಪ್ಪತ್ತು ದಿನಗಳಿಂದ ನನಗೆ ಬೆಂಗಳೂರಿನ ಜ್ಯೋತಿ ನಿವಾಸ್ ಪಿಯು ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಸ್ಪೆಷಲ್ ಇನ್ವಿಜಿಲೇಟರ್ಸ್ ಸ್ಕ್ವಾಡ್ ಆಗಿ ಕರ್ತವ್ಯ..

ಇದು ಬಹಳ ದೊಡ್ಡ ಶಿಕ್ಷಣ ಸಂಸ್ಥೆ. ಪಿಯು ವಿಭಾಗದಲ್ಲಿಯೇ 2000 ವಿದ್ಯಾರ್ಥಿಗಳಿದ್ದಾರೆ.ಇಲ್ಲಿ ಅನೇಕ ಬಡ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಾರೆ ,ಬಡ ವಿದ್ಯಾರ್ಥಿನಿಯರಿಗೆ ಊಟ ತಿಂಡಿ ಕೂಡ ಉಚಿತವಾಗಿ ಕೊಡುವ ವ್ಯವಸ್ಥೆ ಇದೆ 

ಇಲ್ಲಿನ  ವಿದ್ಯಾರ್ಥಿಗಳಿಗೆ ಇದು ಪರೀಕ್ಷಾ ಕೇಂದ್ರವಲ್ಲ.ಬೇರೆ ಬೇರೆ ಕಾಲೇಜುಗಳ ಒಂದೂವರೆ ಸಾವಿರದಷ್ಟು ವಿದ್ಯಾರ್ಥಿಗಳಿಗೆ ಇಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದವು.

ಇದು ಸಿಸ್ಟರ್ಸ್ ನಡೆಸುವ ಮಹಿಳಾ  ಕಾಲೇಜು..ಹೆಚ್ಚಿನ ಉದ್ಯೋಗಿಗಳು ಕೂಡ ಮಹಿಳೆಯರೇ..ಇಲ್ಲಿನ  ಶಿಸ್ತು,ಸ್ವಚ್ಛತೆ, ಅಚ್ಚುಕಟ್ಟುತನ ಯಾರೂ ಕೂಡ ಮೆಚ್ಚಬೇಕಾದ್ದೇ..

ಅಷ್ಟು ದೊಡ್ಡ ಕಾಲೇಜಾದರೂ ಒಂದಿನಿತು ಗಲಭೆ ಇಲ್ಲ..ಸಿಟ್ಟು ಸೆಡವುಗಳಿಲ್ಲ..

ಚೀಫ್ ಎಕ್ಸಾಮಿನರ್ ಆಗಿರುವ ಪ್ರಿನ್ಸಿಪಾಲ್ ಸಿಸ್ಟರ್ ನತಾಲಿಯಾ ಡಿ ಸೋಜ  ಸಣ್ಣ ವಯಸ್ಸಿನವರು ಆದರೆ ಅವರ ನಿರ್ವಹಣಾ ಸಾಮರ್ಥ್ಯ ಅಸಾಧಾರಣವಾದುದು.ಹಾಗಾಗಿ ಪರೀಕ್ಷಾ ಕಾರ್ಯ ಯಾವುದೊಂದು ಸಣ್ಣ ಗೊಂದಲ ಸಮಸ್ಯೆ ಇಲ್ಲದೇ ನಡೆಯಿತು.

ಸದಾ ನಗು ಮುಖದಿಂದ ತಾಳ್ಮೆಯಿಂದ ಇರುವ ಅವರ ನಡೆ ನುಡಿ ನಿಜಕ್ಕೂ ಅನುಕರಣೀಯವಾಗಿದೆ ,ಇವರು ಫ್ರೆಂಚ್ ಭಾಷಾ ತಜ್ಞರೂ,ಪ್ರೆಂಚ ಉಪನ್ಯಾಸಕರೂ , ಸ್ತ್ರೀವಾದಿಗಳೂ ಆಗಿದ್ದಾರೆ .ಅನೇಕ ಪ್ರಬಂಧ ಗಳನ್ನು ಮಂಡಿಸಿದ್ದಾರೆ.ಸ್ತ್ರೀ ಸಂಬಂಧಿ ವಿಷಯದಲ್ಲಿ ಪಿ ಎಚ್ ಡಿ ಮಾಡ್ತಾ ಇದ್ದಾರೆ.

ಈವತ್ತು ಅಲ್ಲಿನ ಮೂವರು ಉಪನ್ಯಾಸಕಿಯರ ಹುಟ್ಟು ಹಬ್ಬ ಇತ್ತು ಅವರಿಗೆ ಶುಭ ಹಾರೈಸಿ ಉಡುಗೊರೆ ಯನ್ನು ಬಹಳ ಪ್ರೀತಿಯಿಂದ ಕೊಟ್ಟಿದ್ದಾರೆ.ಅದೇ ರೀತಿ ಅಲ್ಲಿನ ಕನ್ನಡ ಉಪನ್ಯಾಸಕಿ ಧನ ಲಕ್ಷ್ಮೀ ಯವರಿಗೆ ಅವರಿಗೆ ಒಂದು ಸಂಸ್ಥೆ ( ಹೆಸರು ಮರೆತೆ ) ಯಿಂದ ಉತ್ತಮ ಶಿಕ್ಷಕಿ ಪ್ರಶಸ್ತಿ ದೊರೆತಿತ್ತು.ಅದನ್ನು ಪಡೆದು ಅವರು ಕಾಲೇಜಿಗೆ ಬಂದಾಗ ಸ್ವತಃ ಪ್ರಾಂಶುಪಾಲರು ಅವರನ್ನು ಮುಕ್ತವಾಗಿ ಅಭಿನಂದಿಸಿ ನಮ್ಮ ಉಪನ್ಯಾಸಕಿ ಎಂದು ಹೆಮ್ಮೆ ಪಟ್ಟದ್ದನ್ನು ನಾನು ಕಣ್ಣಾರೆ ನೋಡಿದೆ .ತಮ್ಮ ಕೈ ಕೆಳಗಿನ ಅಧಿಕಾರಿಗಳನ್ನು ಮೆಚ್ಚಿ ಹೆಮ್ಮೆ ಪಡುವ ಉದಾರತೆ ಎಷ್ಟು ಪ್ರಾಂಶುಪಾಲರಿಗೆ  ಇದೆ ?  ನಮ್ಮ ಬ್ಯಾಟರಾಯನಪುರ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ದಯಾನಂದ ಸ್ವಾಮಿ ಬಿ ಎಂ ಎಸ್ ಅವರಿಗೆ ಇಂತಹ ಉದಾರತೆ ಇದೆ .ಇವರನ್ನು ಬಿಟ್ಟರೆ ಇಂತಹ ಉದಾತ್ತ ಮನೋಭಾವವನ್ನು ನಾನು ಕಂಡದ್ದು ಸಿಸ್ಟರ್ ನತಾಲಿಯಾ ಅವರಲ್ಲಿಯೇ..

ಅಲ್ಲಿನ ಎಲ್ಲ ಉದ್ಯೋಗಿಗಳ ಬಗ್ಗೆ ಕೂಡ ಅವರಿಗೆ ಅಪಾರ ಪ್ರೀತಿ ಅಭಿಮಾನ.‌.ಅದನ್ನು ಅವರ ನಡೆ ನುಡಿ ಆತ್ಮೀಯತೆ ತುಳುಕುವ ಕಣ್ಣಗಳಲ್ಲಿ ನಾವು ಕಾಣಬಹುದು. 

ಈವತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಗಿದವು.ನಾವು ಹಾಜರಾತಿ ಪ್ರಮಾಣ ಪತ್ರ ತಗೊಂಡು ಹೊರಡುವಾಗ   ಬೇಡ ಎಂದರೂ ಶಾಲು ಹೊದೆಸಿ ಸನ್ಮಾನಿಸಿ ಬಹಳ ಪ್ರೀತಿಯಿಂದ ಬೀಳ್ಕೊಟ್ಟರು 

ಎರಡು ಜಡೆಗಳು ಸೇರಿದರೆ ಜಗಳ ಆಗುತ್ತದೆ ಎಂಬ ನುಡಿಯನ್ನು ಈ ಮಹಿಳಾ  ಕಾಲೇಜಿನ ಪ್ರಿನ್ಸಿಪಾಲ್ ಉಪನ್ಯಾಸಕಿಯರು ಮತ್ತು ಮಹಿಳಾ ಸಿಬ್ಬಂದಿಗಳು ಸುಳ್ಳು ಎಂದು ಸಾಧಿಸಿ ತೋರಿಸಿದ್ದಾರೆ

ಇಲ್ಲಿ ಚೀಫ್ ಎಕ್ಸಾಮಿನರ್ (  ಪ್ರಿನ್ಸಪಾಲ್ ಸಿಸ್ಟರ್  ನತಾಲಿಯಾ ಡಿ ಸೋಜ  ,ಜಾಯಿಂಟ್ ಚೀಫ್ ಎಕ್ಸಾಮಿನರ್ ( ರಾಜಮ್ಮ ವಾಣಿಜ್ಯ ಶಾಸ್ತ್ರ ಉಪನ್ಯಾಸಕರು ರಾಣಿ ಸರಳಾದೇವಿ ಕಾಲೇಜು) Answer paper bundle custodian ( ಪ್ರೀತಿ ,ಅರ್ಥ ಶಾಸ್ತ್ರ ಉಪನ್ಯಾಸಕರು ಜ್ಯೋತಿ ನಿವಾಸ್ ಕಾಲೇಜು) ಸ್ಪೆಷಲ್ ಸ್ಕ್ವಾಡ್ ( ನಾನು) ಎಲ್ಲರೂ ಮಹಿಳೆಯರೇ ಆಗಿದ್ದು ಈ ಕೇಂದ್ರದಲ್ಲಿ  ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು  ಯಾವುದೇ ಒಂದು ಕಪ್ಪು ಚುಕ್ಕೆ ಇರದಂತೆ ನಿರ್ವಹಿಸಿದ ಬಗ್ಗೆ ನಮಗೆ ಹೆಮ್ಮೆ ಇದೆ .ಇದರ ಮೂಲ ಕಾರಣ ಕರ್ತರು ಜ್ಯೋತಿ ನಿವಾಸ ಪಿಯು ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ನತಾಲಿಯಾ( ಕುಳಿತವರಲ್ಲಿ ಎಡದಿಂದ ಮೊದಲಿನವರು)ಇನ್ನೋರ್ವ ಸಿಸ್ಟರ್ ( ಹೆಸರು ಕೇಳಲು ಮರೆತೆ) ಆಫೀಸ್ ನಲ್ಲಿ ಬಹಳ ಜವಾಬ್ದಾರಿ ಯಿಂದ ಕೆಲಸ ಮಾಡುತ್ತಿದ್ದು ನಮ್ಮನ್ನು ಬಹಳ ಪ್ರೀತಿ ಆತ್ಮೀಯತೆಯಿಂದ ನಡೆಸಿಕೊಂಡಿದ್ದಾರೆ.ಎಲ್ಲ ಉಪನ್ಯಾಸಕಿಯರೂ,ಉಪನ್ಯಾಸಕರೂ  ಇತರ ಸಿಬ್ಬಂದಿಗಳು ಕೂಡ ಬಹಳ ಸೌಜನ್ಯತೆ ತೋರಿದ್ದಾರೆ

ನಮ್ಮ ಹೆಮ್ಮೆಯ ಓದುಗರು ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ #ನಮ್ಮಹೆಮ್ಮೆಯಓದುಗರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಬೆಳ್ತಂಗಡಿ ಮೂಲದ ಅಶೋಕ್ ಅವರು ನಮ್ಮ ಮನೆಗೆ ಬಂದು ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕದ ಎರಡು ಪ್ರತಿಗಳನ್ನು ತಗೊಂಡು ಹೋಗಿದ್ದಾರೆ ನಮಗೆ ಓದುಗರದೇ ಶ್ರೀ ರಕ್ಷೆ..


 

Friday, 14 March 2025

ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಕರಾವಳಿಯ ಸಾವಿರದೊಂದು ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಪ್ರಶಾಂತ ಆಚಾರ್ಯ ಕುಳಾಯಿ ಮಂಗಳೂರು

 ನಮ್ಮ_ಹೆಮ್ಮೆಯ_ಓದುಗ_ಮಿತ್ರರು 

ಕರಾವಳಿಯ ಸಾವಿರದೊಂದು ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ


ಪ್ರಶಾಂತ ಆಚಾರ್ಯ ಕುಳಾಯಿ ಮಂಗಳೂರು


 


ಇವರ ಅಭಿಮಾನದ ನುಡಿಗಳು ಇಲ್ಲಿವೆ


"ನಮಸ್ತೇ ಮೇಡಮ್🙏🙏🙏


*ಕರಾವಳಿಯ ಸಾವಿರದೊಂದು ದೈವಗಳು* ಅತೀ ಅದ್ಭುತವಾದ ಗ್ರಂಥ..... 

ಇತ್ತೀಚಿಗೆ ಕೆಲವರು ತಮ್ಮ ವೈಯಕ್ತಿಕ ಕೀರ್ತಿ ಪ್ರತಿಷ್ಟೆಗಾಗಿ ಅಥವಾ ತಾವೇ ಎಲ್ಲಾ ತಿಳಿದವರು ಎಂಬಂತೆ ತೋರಿಸಿಕೊಳ್ಳಲು ದೈವಗಳ ಬಗ್ಗೆ ಅವರಿಗೆ ಬೇಕಾದ ಹಾಗೆ ಕಥೆಗಳನ್ನು ಹೆಣೆದುಕೊಂಡು ಮುಗ್ದ ಜನರ ಮನಸು ಹಾಗೂ ಹಣ ಹಾಳುಮಾಡುತಿದ್ದಾರೆ....... 

ನಿಮ್ಮ ಈ ಪುಸ್ತಕ ಅವರೆಲ್ಲರಿಗೂ ಸಮರ್ಥವಾಗಿ ಉತ್ತರಿಸಲು ಒಂದು ಅಸ್ತ್ರವಾಗಿದೆ... 

 ನಿಮಗೆ ಇನ್ನೂ ಹೆಚ್ಚಿನ ಸಂಶೋಧನೆ, ಅಧ್ಯಯನ ಮಾಡುವಂತ ಯೋಗವನ್ನೂ, ಅದನ್ನು ಓದುವಂತ ಭಾಗ್ಯವನ್ನು ನಮಗೂ ದೇವರು ಕರುಣಿಸಲಿ..... 

ಧನ್ಯವಾದಗಳು🙏🙏🙏"



#ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಕಳೆದ ವರ್ಷ ಪುಸ್ತಕ ಪ್ರಕಟಣೆಗೆ ಮೊದಲೇ ಪಾವತಿಸಿ ಪುಸ್ತಕ ಕಾದಿರಿಸಿದ್ದ ನಮ್ಮ ಊರಿನ ಪವನ್ ಕುಮಾರ್ ಬೂದಿಮೂಲೆ ಕೊಡ್ಲಮೊಗರು ಮಂಜೇಶ್ವರ

 


ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ನಮ್ಮ‌ಪುಟ್ಟ ಓದುಗ ಮಿತ್ರ ಎಡಮಂಗಲದ ಧನಂಜಯ ಮತ್ತು ಉಷಾ ಧನಂಜಯರ ಏಳು ವರ್ಷದ ಮಗ

 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು
ಮಾಯ ಮತ್ತು ಜೋಗದ ಬೆಳಕಿನಲ್ಲಿ
ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ 
ನಮ್ಮ‌ಪುಟ್ಟ ಓದುಗ ಮಿತ್ರ ಎಡಮಂಗಲದ ಧನಂಜಯ ಮತ್ತು ಉಷಾ ಧನಂಜಯರ ಏಳು ವರ್ಷದ ಮಗ


ನಮ್ಮ ಸಂಸ್ಕೃತಿಯ ಬಗ್ಗೆ ಮುಂದಿನ ಜನಾಂಗಕ್ಕೆ ತಿಳಿಸುವುದೇ ನನ್ನ ಅಧ್ಯಯನದ ಮುಖ್ಯ ಗುರಿ..ಈ ಎಳೆಯ ಓದುವದ್ದು ತಿಳಿದು ಸಾರ್ಥಕ ಭಾವ ಮೂಡಿತು

ಅವರ ಅಭಿಮಾನದ ಮಾತುಗಳು ಇಲ್ಲಿವೆ
.

"ನಮಸ್ತೆ ಮೇಡಂ ‌‌ .‌ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕವನ್ನು ನನ್ನ ೭ ವರ್ಷ ದ ಮಗ ತುಂಬಾ ಚೆನ್ನಾಗಿ ಅಕ್ಷರಗಳನ್ನು  ಜೋಡಿಸಿ ಓದುತ್ತಾ ದೈವಗಳ ಬಗೆಗೆ‌ ಸಾಕಷ್ಟು  ವಿಚಾರಗಳನ್ನು  ತಿಳಿದುಕೊಂಡಿದ್ದಲ್ಲದೆ , ನನಗೂ  ಅದರ ಬಗೆಗೆ ತಿಳಿಸುತ್ತಾನೆ .. ಅವನ ಅತ್ಯಂತ  ಮೆಚ್ಚಿನ  ಪುಸ್ತಕ.  ಅಷ್ಟೇ ಭಕ್ತಿ ಆ ಪುಸ್ತಕ ದ ಮೇಲಿದೆ. ಅವನ ಸ್ನೇಹಿತರಲ್ಲೂ ವಿಚಾರ ಹಂಚಿಕೊಳ್ಳುತ್ತಾನೆ .. ನನಗೆ ತುಂಬಾ ಹೆಮ್ಮೆ ಮತ್ತು  ಖುಷಿ . ಇದೆಲ್ಲ  ಸಾಧ್ಯ ವಾಗಿದ್ದು . ನಿಮ್ಮಿಂದ . 🙏🏻

Wednesday, 12 March 2025

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ,- ಡಾ.ಲಕ್ಷ್ಮೀ ಜಿ ಪ್ರಸಾದ್ ಶಿವರಾಮ ಗೌಡರು.,ಮಾಜಿ ಮುಖ್ಯ ಮಂತ್ರಿ ,ಕೇಂದ್ರ ಸಚಿವ ಸದಾನಂದ ಗೌಡರ ಸಹೋದರ.ಬಹಳ ಸಹೃದಯಿ.ದೈವ ಭಕ್ತರು,ನಮಗೆ ನಿರಂತ ಬೆಂಬಲ ನೀಡಿದವರು‌.ಕಳೆದ ವರ್ಷ ಮುಂಗಡ ಬುಕ್ ಮಾಡಿ ಪುಸ್ತಕ ತಗೊಂಡು ಪ್ರೋತ್ಸಾಹಿಸಿದ್ದರು.


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಕರಾವಳಿಯ ಸಾವಿರದೊಂದು ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಡಾ.ಲಕ್ಷ್ಮೀ ಜಿ ಪ್ರಸಾದ್ ,ಮೊಬೈಲ್ 9480516684 ಸಾವಿರದೊಂದು_ದೈವಗಳು ಹಿರಿಯ ವಿದ್ವಾಂಸರೂ ಸಾಹಿತಿಗಳೂ ಆದ ಮಂಗಳೂರು ಆಕಾಶವಾಣಿಯ ನಿವೃತ್ತ ಉದ್ಘೋಷಕರೂ ಆಗಿರುವ ಮುದ್ದು ಮೂಡು ಬೆಳ್ಳೆಯವರು ಎಳೆಯರನ್ನು ಬೆಳೆಸುವ ಸಹೃದಯಿ,ನನ್ನ ಅಧ್ಯಯನಕ್ಕೆ ನಿರಂತರ ಪ್ರೋತ್ಸಾಹ ನೀಡಿದ್ದಾರೆ ಕರಾವಳಿಯ ಸಾವಿರದೊಂದು ದೈವಗಳು ವಾಚನ ಮುದ್ದು ಮೂಡುಬೆಳ್ಳೆ


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಕರಾವಳಿಯ ಸಾವಿರದೊಂದು ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ - ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684 ಪ್ರಶಾಂತ್ ಮಂಡ್ಯ


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಕರಾವಳಿಯ ಸಾವಿರದೊಂದು ದೈವಗಳು -ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684 ವಿನುತಾ ಕೆ ಕುಲಕರ್ಣಿ ,ಬೆಂಗಳೂರು


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಕರಾವಳಿಯ ಸಾವಿರದೊಂದು ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ - ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684; ನನ್ನ ಅಧ್ಯಯನಕ್ಕೆ ನಿರಂತರ ಬೆಂಬಲ ನೀಡುತ್ತಿರುವ ಕನ್ನಡ ತುಳು ಸಂಘಟಕರೂ ಧ್ವನಿ ಕಲಾವಿದರೂ ಆಗಿರುವ ಕೆ ಎನ್ ಅಡಿಗರು Adiga K N Adoor


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಮಾಯ ಮತ್ತು ಜೋಗದ ಬೆಳಕಿನಲ್ಲಿ #ಕರಾವಳಿಯ_ಸಾವಿರದೊಂದು_ದೈವಗಳು ನಮಗೆ ನಿರಂತರ ಬೆಂಬಲ ನೀಡುತ್ತಿರುವ ತುಳುವೆರೆಂಕುಲು ಸಂಘಟನೆಯ ಅಧ್ಯಕ್ಷರಾದ ಜಯಂತಣ್ಣ( ಜಯಂತ್ ರಾವ್)


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಕರಾವಳಿಯ ಸಾವಿರದೊಂದು ದೈವಗಳು_ ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ - ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684: ಹರಿಣಾಕ್ಷ ಬಿ ಚಿಪ್ಪಾರು


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ,ಡಾ.ಲಕ್ಷ್ಮೀ ಜಿ ಪ್ರಸಾದ್, ಮೊಬೈಲ್ 9480516684 ವೆಂಕಪ್ಪ ಪುತ್ಯೆ ಕೊಕ್ಕಡ


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಈಶ್ವರ ಗೌಡ ಗೋಳ್ತಿಲ ಗುತ್ತು ಪುತ್ತೂರು


 

Monday, 10 March 2025

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ವಾಸುದೇವ ಭಟ್ ಶ್ರೀ ಮಹಾಗಣಪತಿ ಜೋತಿಷ್ಯಂ


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಡಾ.ವಿನಾಯಕ ಶೇಟ್


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಪೂರ್ಣಪ್ರಜ್ಞ, ಕೃಷ್ಣಾಪುರ, ಕೊಡಗು


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ನಮ್ಮ ಹೆಮ್ಮೆಯ ಓದುಗ ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು #ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಸಮಾಜ ಸೇವಕರೂ ಮಾಹಿತಿ ಹಕ್ಕು ಕಾರ್ಯಕರ್ತರೂ ದಾ ಧಾರ್ಮಿಕ ಮುಖಂಡರೂ ಆಗಿರುವ ಮಂಗಲ್ಪಾಡಿಯ ಯುವ ನಾಯಕ ಬ್ಯಾಂಕ್ ಉದ್ಯೋಗಿ ಗಿರಿಧರ ಎಸ್ ಅವರು YuviGiri Giri


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು- ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ರಾಘವೇಂದ್ರ ,ಉಡುಪಿ


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಶ್ರೀಮತಿ ವಿದ್ಯಾಸರಸ್ವತಿ. ಕೆ. , ಮೈಸೂರು


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಜಯರಾಜ್ ಎಂ್ ಪೂಜಾರಿ ಪಚಿನಡ್ಕ ಕಳ್ಳಿಗೆ ಬಂಟ್ವಾಳ


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ವಿದ್ವಾನ್ ಮಂಜುನಾಥ ಜೋಯಿಸರು ಅವರ ಅಭಿಮಾನ ನುಡಿಗಳು ಇಲ್ಲಿದೆ ಅತ್ಯುತ್ತವಾದ ಮಾಹಿತಿ ಸಂಗ್ರಹ ಹಾಗೂ ಪುಸ್ತಕ. ನಿಮ್ಮ ಶ್ರಮ ಗಣನೀಯ. ಇದೊಂದು ಇತಿಹಾಸ ಸಂಸ್ಕತಿಯ ದಾಖಲೆ ಆಗಿದೆ ನಿಮ್ಮ ಕೊಡುಗೆ ಅತ್ಯುತ್ತಮ- VIDWAN Manjunatha jois.H.S. JYOTHISHA CHATURVEDA ACHARYA ENVIRONMENTALIST UDUPI ಧನ್ಯವಾದಗಳು ಸರ್


 

#ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ #ನಮ್ಮ_ಹೆಮ್ಮೆಯ_ಓದುಗ_ಮಿತ್ರರು ನಮಗೆ ಮಾಹಿತಿ ಸಂಗ್ರಹದಲ್ಲಿ ಸಹಾಯ ಮಾಡಿದ್ದಲ್ಲದೆ ಪುಸ್ತಕ ಖರೀದಿಸಿ ನಿರಂತರ ಬೆಂಬಲ ನೀಡುತ್ತಿರುವ ದೇವಿಪ್ರಸಾದ್ ಶೆಟ್ಟಿ ಆಡಳಿತ ಮೊಕ್ತೇಸರರು ಶ್ರೀ ಅರಸು ಕುಂಜರಾಯ ದೈವಸ್ಥಾನ ಕೊಡೆತ್ತೂರು


 

#ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ #ನಮ್ಮ_ಹೆಮ್ಮೆಯ_ಓದುಗರ_ಮಿತ್ರರು ರಾಜಶೇಖರ ಭಟ್ ಬಾಳೆಗುಂಡಿ ಉಡುಪಿ


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಪ್ರಮೀಳಾ ಪೂಜಾರಿ #ಕರಾವಳಿಯ_ಸಾವಿರದೊಂದು_ದೈವಗಳು- ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ


 

ನಮ್ಮ ಹೆಮ್ಮೆಯ ಓದುಗ ಮಿತ್ರರು #ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು ಕನ್ನಡ ತುಳು ಸಂಸ್ಕೃತಿ ಸಾಹಿತ್ಯಗಳ ಬಗ್ಗೆ ಅತೀವ ಪ್ರೀತಿ ಅಭಿಮಾನ ಹೊಂದಿರುವ ಬೆಂಗಳೂರಿನ ಖ್ಯಾತ ಚರ್ಮರೋಗಚಿಕಿತ್ಸಾ ತಜ್ಞರಾದ ಡಾ.ಬಿ ಆರ್ ಸುಹಾಸ್


 

ನಮ್ಮ ಹೆಮ್ಮೆಯ ಓದುಗರು : ಪ್ರದೀಪ್ ಭಂಡಾರಿ

 


ನಮ್ಮ ಹೆಮ್ಮೆಯ_ಓದುಗ ಮಿತ್ರರು ಕರಾವಳಿಯ ಸಾವಿರದೊಂದು ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಪ್ರೊ ಬಿ ಸತ್ಯನಾರಾಯಣ ಶೆಟ್ಟಿ ಪ್ರಾಂಶುಪಾಲರು ಸುರಾನಾ ಕಾಲೇಜು ,ಬೆಂಗಳೂರು

 

#ನಮ್ಮ ಹೆಮ್ಮೆಯ_ಓದುಗ ಮಿತ್ರರು
ಕರಾವಳಿಯ ಸಾವಿರದೊಂದು ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ
ಪ್ರೊ ಬಿ ಸತ್ಯನಾರಾಯಣ ಶೆಟ್ಟಿ ಪ್ರಾಂಶುಪಾಲರು ಸುರಾನಾ ಕಾಲೇಜು ,ಬೆಂಗಳೂರು



ಇವರುನಮಗೆ ನಿರಂತರ  ಬೆಂಬಲ ನೀಡುತ್ತಿದ್ದು
ನಮ್ಮಿಂದ ಅನೇಕ ಪುಸ್ತಕಗಳನ್ನು ಖರೀದಿಸಿ ತಮ್ಮ ಸ್ನೇಹಿತರಿಗೆ ಉಡುಗೊರೆಯಾಗಿ ನೀಡಿ ನಮ್ಮ ಸಂಸ್ಕೃತಿಯನ್ನು ಹರಡುವ ಸ್ತುತ್ಯರ್ಹ ಕಾರ್ಯ ಮಾಡಿದ್ದಾರೆ,

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಕರಾವಳಿಯ ಸಾವಿರದೊಂದು ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ: ಸುಮಾ ಪ್ರಸಾದ್


 

ನಮ್ಮ‌ಹೆಮ್ಮೆಯ ಓದುಗ ಮಿತ್ರರು #ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಖ್ಯಾತ ಸಾಹಿತಿಗಳಾದ ಚಂದ್ರ ಹಾಸ ಕಣಂತೂರು


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಕರಾವಳಿಯ ಸಾವಿರದೊಂದು ದೈವಗಳು,- ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ದೀಪಾ, ಶಿಕ್ಷಕಿ, ಸಾಲಿಗ್ರಾಮ , ಉಡುಪಿ ಜಿಲ್ಲೆ


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು- ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ - ಡಾ.ಲಕ್ಷ್ಮೀ ಜಿ ಪ್ರಸಾದ್ ಉಷಾ ಧನಂಜಯ್ ಎಡಮಂಗಲ .


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ರಾಧಾಕೃಷ್ಣ ಉಳಿಯತ್ತಡ್ಕ,ಹಿರಿಯ ವಿದ್ವಾಂಸರು ,


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ನಮಗೆ ಅತ್ಯಪರೂಪದ ದೆಸಿಲು ಮತ್ತು ಕಿಲಮರಿತ್ತಾಯ ದೈವಗಳ ಚಂದದ ಫೋಟೋ ಒದಗಿಸಿದ್ದಲ್ಲದೆ ನಿರಂತರ ಬೆಂಬಲ ನೀಡುತ್ತಿರುವ ಗೋಪು ಗೋಖಲೆ ಶಿಶಿಲ,ಛಾಯಾಗ್ರಾಹಕರು


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಕರಾವಳಿಯ ಸಾವಿರದೊಂದು ದೈವಗಳು- ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಡಾ.ಕೇದಿಗೆ ಅರವಿಂದ ರಾವ್


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಕರಾವಳಿಯ ಸಾವಿರದೊಂದು ದೈವಗಳು -ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ - ಡಾ.ಲಕ್ಷ್ಮೀ ಜಿ ಪ್ರಸಾದ್ ಸಾವಿರದೊಂದು ದೈವಗಳು ಡಾ.ಅರವಿಂದ್ ಎನ್ ಪಿ ಸಿರ್ಸಿ


 

Sunday, 9 March 2025

ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕಕ್ಕೆ ಯಾವುದೇ ಅಪೇಕ್ಷೆ ಇಲ್ಲದೆ ಬಹಳ ಪ್ರೀತಿ ಅಭಿಮಾನದಿಂದ ಮುಖಪುಟ ವಿನ್ಯಾಸ ಮಾಡಿ ಕೊಟ್ಟ ಶ್ರೀವತ್ಸ ಪಿವಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು ಇವರು ಕಳೆದ ವರ್ಷ ಪ್ರಕಟಿತ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕವನ್ನು ತಗೊಂಡಿದ್ದು ಸೆಲ್ಫಿನಲ್ಲಿ ಚಂದಕ್ಕೆ ಜೋಡಿಸಿಟ್ಟಿರುವಲ್ಲಿ ಅವರ ಪುಸ್ತಕ ಪ್ರೀತಿ ಅಭಿಮಾನ ಎದ್ದು ಕಾಣ್ತಿದೆ


 

ನಮ್ಮ ಹೆಮ್ಮೆಯ ಓದುಗರು ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು: ದಯಾನಂದಸ್ವಾಮಿ ಬಿಎಂಎಸ್

 ನನ್ನ  ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು


ಪುಸ್ತಕದ ಬಗ್ಗೆ ಎರಡು ಒಳ್ಳೆ ಮಾತು ಬರೆದು ಶುಭ ಹಾರೈಸಿದ ನಮ್ಮ‌ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ದಯಾನಂದ ಸ್ವಾಮಿ ಬಿ ಎಂ ಎಸ್ ಅವರಿಗೆ ಇಂದು ಪುಸ್ತಕದ ಪ್ರತಿ ನೀಡಿದೆ 


ತಮ್ಮ ಸಹೋದ್ಯೋಗಿಗಳ ಏಳಿಗೆಯನ್ನು ಬಹುತೇಕರು ಸಹಿಸುವುದಿಲ್ಲ.ಮತ್ಸರದಿಂದ  ಬಹಳಷ್ಟು ಕಿರುಕುಳ ಕೊಡುವ ಮೇಲಧಿಕಾರಿಗಳು ಅನೇಕರಿದ್ದಾರೆ ..ಕೆಲವರು ಕಿರುಕುಳ ಕೊಡದೆ ಸುಮ್ಮನಿರುವವರೂ ಇರಬಹುದು.ಆದರೆ ಬೆಂಬಲ ಕೊಡುವವರು ಬಹಳ ಅಪರೂಪಕ್ಕೆ ಸಿಗುತ್ತಾರೆ.ಈ ನಿಟ್ಟಿನಲ್ಲಿ ನಿಮ್ಮ ಕಾಲೇಜು ಪ್ರಾಂಶುಪಾಲರು ಅಭಿನಂದನಾರ್ಹರು ಎಂದು ನನ್ನ ಪುಸ್ತಕದಲ್ಲಿ ಇವರ ಮಾತನ್ನು ಓದಿದ ಈ ಪುಸ್ತಕ ಬಿಡುಗಡೆ ಮಾಡಿದ್ದ ಡಾ.ಈಶ್ವರ ದೈತೋಟರು ಹೇಳಿದ್ದರು

ಇದು ನಿಜಕ್ಕೂ ನೂರಕ್ಕೆ ನೂರರಷ್ಟು ಸತ್ಯದ ಮಾತು..


ನಾನೇ ಸ್ವತಃ ಬೆಳ್ಳಾರೆ ಕಾಲೇಜಿನಲ್ಲಿದ್ದಾಗ  ಪ್ರಿನ್ಸಿಪಾಲರಾಗಿದ್ದ ಈಗ ದಿವಂಗತರಾಗಿರುವ ಸುಬ್ರಾಯ ಗೌಡರಿಂದ ದ್ವೇಷ ಮತ್ಸರದ ಜಾತಿ ಬೇಧ ಲಿಂಗ ತಾರತಮ್ಯದ ಬಿಸಿಯನ್ನು ಅನುಭವಿಸಿದ್ದೆನಲ್ಲ..


ಇಂಥಹವರ ನಡುವೆ ನಮ್ಮ‌ಬ್ಯಾಟರಾಯನಪುರ ಕಾಲೇಜಿನ ದಯಾನಂದ ಸ್ವಾಮಿಯಂಥಹವರು ನಿಜಕ್ಕೂ ವಿಶಿಷ್ಟರೆನಿಸುತ್ತಾರೆ..


ಇದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದು ಭಡ್ತಿಪಡೆದು ಈಗ ನಮ್ಮ‌ಪದವಿ ಪೂರ್ವ ಶಿಕ್ಷಣ ಇಲಾಖೆಯ  ಸಹ ನಿರ್ದೇಶಕರಾಗಿರುವ ಶೈಲಜಾ ಮೇಡಂ ಅವರು ಕೂಡ ನನಗೆ ತುಂಬು ಬೆಂಬಲವನ್ನು ನೀಡಿದ್ದನ್ನು ಕೂಡ ನಾನೆಂದಿಗೂ ಮರೆಯಲಾರೆ

ನಮ್ಮ ಹೆಮ್ಮೆಯ ಓದುಗರು # ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು- ರಾಘು ಪೂಜಾರಿ ಕಲ್ಮಂಜೆ

 #ನಮ್ಮ_ಹೆಮ್ಮೆಯ_ಓದುಗ_ಮಿತ್ರರು 

# ಮಾಯ ಮತ್ತು ಜೋಗದ ಬೆಳಕಿನಲ್ಲಿ  ಕರಾವಳಿಯ ಸಾವಿರದೊಂದು ದೈವಗಳು



 

ನಮ್ಮ ಆತ್ಮೀಯರಾದ ಸುಭಾಶ್ ಅವರು ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕವನ್ನು ಮಜೂರು ಗರೊಡಿಯ ಕೋಟಿ ಭೈದ್ಯರ ಪಾತ್ರಿಯಾಗಿರುವ ಹಿರಿಯರಾದ ರಾಘು ಪೂಜಾರಿ‌ ಕಲ್ಮಂಜೆಯವರಿಗೆ ಕಾಣಿಕೆಯಾಗಿ ನೀಡಿದ್ದಾರೆ .ಕಲ್ಕುಡ ದೈವದ ಮಧ್ಯಸ್ಥರೂ ಆಗಿರುವ  ಈ ಪುಸ್ತಕವನ್ನು ಮೆಚ್ಚಿದ ರಾಘು ಪೂಜಾರಿಯವರ ಅಂತರಂಗದ ಒಲುಮೆಯ ಮಾತುಗಳನ್ನು ಇಲ್ಲಿ ಕೇಳಬಹುದು ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು