ನಮ್ಮ ಹೆಮ್ಮೆಯ ಓದು ಮಿತ್ರರು
ವಿನಯ್ ಭಾಗವತ್ ಮತ್ತು ಪಾವನಾ ಭಾಗವತ್
ಭೂಮಿ ಉರುಟಾಗಿದೆ ..ಬದುಕಿನ ಕೆಲವು ಅಚ್ಚರಿಗಳ ಬಗ್ಗೆ ಸೋಜಿಗ ಉಂಟಾಗುತ್ತದೆ.
ಬರಹಗಾರರಿಗೆ ಸಹೃದಯಿ ಓದುಗರು ಬಹಳ ಆಪ್ತರು..ಇದಕ್ಕೆ ನಾನು ಕೂಡ ಹೊರತಲ್ಲ.ಇಂದು ಯುವ ಜನತೆ ಪುಸ್ತಕ ಕಡೆಗೆ ತಿರುಗಿಯೂ ನೋಡುದಿಲ್ಲ ಎಂಬ ಮಾತಿದೆ.ಆದರೆ ಇದನ್ನು ಪೂರ್ತಿಯಾಗಿ ಒಪ್ಪಲಾಗದು
ಒಳ್ಳೆಯ ಪುಸ್ತಕವನ್ನು ಓದುವವವರೂ ಇದ್ದಾರೆ ಎಂಬುದು ಸಮಾಧಾನದ ವಿಚಾರ ..
ಅದಿರಲಿ.ಈಗ ವಿಷಯಕ್ಕೆ ಬರುವೆ
ನನ್ನ ಅಣ್ಣನ ಒಂದು ಸೈಟ್ ಕೆಂಗೇರಿ ಶ್ರೀಧರ ಗುಡ್ಡದ ಸಮೀಪದ ಇದೆ.ಇದರ ಇ ಖಾತೆ ಮಾಡಿಸಲು ಸೈಟಿನ GPS location taged photo ಬೇಕಾಗಿತ್ತು .ಹಾಗೆ ಅಣ್ಣ ಕೊಟ್ಟ ಲೊಕೇಶನ್ ಆಧರಿಸಿ ಅ ಪರಿಸರಕ್ಕೆ ಮೊನ್ನೆ ಹೋಗಿದ್ದೆ.
ಆದರೆ ನಮಗೆ ಸೈಟ್ ಯಾವುದು ಎಂದು ಗೊತ್ತಾಗಲಿಲ್ಲ.ಅಣ್ಣ ಅಲ್ಲಿನ ವಿನಯ ಭಾಗವತ್ ಎಂಬವರ ನಂಬರ್ ಕೊಟ್ಟಿದ್ದು ಅವರಿಗೆ ಕರೆ ಮಾಡಿದೆ
ಅವರ ಮನೆ ಪಕ್ಕದ ಸೈಟ್ ಅಣ್ಣಂದು.ಅವರು ಕರೆ ಮಾಡಿದಾಗ ಮಾಹಿತಿ ಕೊಟ್ಟರು.ಅವರ ಮನೆಗೆ ಹೋದೆ ಅವರು ಮತ್ತು ಅವರ ಮಡದಿ ಪಾವನಾ ಅವರು ಹೊರಗಡೆ ಹೋಗಿದ್ದರು. ಹಿರಿಯರಾದ ಅವರ ತಂದೆ ತಾಯಿಯರು ಇದ್ದರು.ಅವರಲ್ಲಿ ಮಾತನಾಡಿ ಜ್ಯೂಸ್ ಕುಡಿದು ಅಣ್ಣನ ಸೈಟಿನ GPS location taged photo ತಗೊಂಡು ಹಿಂದೆ ಬಂದಿದ್ದೆ
ನಂತರ ಆ ಪರಿಸರದ ಸೈಟ್ ನ ಟ್ಯಾಕ್ಸ್ ಎಲ್ಲಿ ಕಟ್ಟುದು ಎಂಬ ಮಾಹಿತಿಯನ್ನು ವಿನಯ ಭಾಗವತ್ ಅವರಿಗೆ ವಾಟ್ಸಪ್ ಮೆಸೇಜ್ ಮೂಲಕ ಕೇಳಿದ್ದೆ .
ಫೋನ್ ಮಾಡಿದಾಗ ನಾನು ಲಕ್ಷ್ಮೀ ಜಿ ಪ್ರಸಾದ್, ಕೃಷ್ಣ ಭಟ್ ಅವರ ತಂಗಿ ಎಂದು ಹೇಳಿದ್ದೆ
ವಾಟ್ಸಪ್ ನೋಡಿದಾಗ ಬಹುಶಃ DP ಯಲ್ಲಿ ನನ್ನ ಅಧ್ಯಯನ ಕುರಿತಾದ ಒಂದು ಲೇಖನ ಇದೆ ಅದನ್ನು ಗಮನಿಸಿದಾಗ ಅವರ ಮಡದಿ ಪಾವನಾ ಅವರಿಗೆ ನಾನು ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕದ ಲೇಖಕಿ ಲಕ್ಷ್ಮೀ ಜಿ ಪ್ರಸಾದ್ ಎಂದು ಗೊತ್ತಾಯಿತು
ಪಾವನಾ ಅವರು ಕನ್ನಡ ಎಂಎ ಪದವೀಧರರಾಗಿದ್ದು ಅಲ್ಲಿಯೇ ಸಮೀಪದ ಚಿನ್ಮಯ ವಿದ್ಯಾಲಯದಲ್ಲಿ ಶಿಕ್ಷಕಿ ಆಗಿದ್ದು ಒಳ್ಳೆಯ ಪುಸ್ತಕಗಳನ್ನು ಓದುವ ಸದಭಿರುಚಿ ಹೊಂದಿದ್ದಾರೆ . ಅಂತೆಯೇ ಎರಡು ವರ್ಷಗಳ ಮೊದಲು ಮಂಗಳೂರಿಗೆ ಹೋಗಿದ್ದಾಗ ಅಲ್ಲಿನ ಪುಸ್ತಕ ಮಳಿಗೆಯಿಂದ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು ಗ್ರಂಥವನ್ನು ಖರೀದಿಸಿ ಓದಿದ್ದರು.
ಇದು ತಿಳಿದ ನಂತರ ಕರೆ ಮಾಡಿದ್ದರು,ನನಗೂ ಬಹಳ ಖುಷಿ ಆಯಿತು ಸುಮಾರು ಹೊತ್ತು ಮಾತನಾಡಿದೆವು
ನಂತರ ಅವರ ಅಭಿಪ್ರಾಯವನ್ನು ಬರೆದು ಕಳುಹಿಸಿದ್ದು ಅದನ್ನು ಇಲ್ಲಿ ಹಾಕಿದ್ದೇನೆ
ನಾನು ಡಾ. ಲಕ್ಷ್ಮಿ ಜಿ. ಪ್ರಸಾದ್ ರವರು ಬರೆದಂತಹ "ಕರಾವಳಿಯ ಸಾವಿರದೊಂದು ದೈವಗಳು" ಪುಸ್ತಕವನ್ನು ಖರೀದಿಸಿ ಓದಿರುವೆ. ಇದರಲ್ಲಿ ದೈವಗಳ ಬಗ್ಗೆ ಸವಿವರವಾದ ಮಾಹಿತಿ, ಅವುಗಳ ಇತಿಹಾಸ, ಚಿತ್ರಗಳೊಂದಿಗೆ ಪರಿಪೂರ್ಣವಾಗಿ ಮೂಡಿ ಬಂದಿದೆ. ಹಾಗೆಯೇ, ಈ ಪುಸ್ತಕವನ್ನು ಓದುವಾಗ ಲೇಖಕರು ದೈವಗಳ ಪರಿಶೋಧನೆಯಲ್ಲಿ ಪಟ್ಟಂತಹ ಪರಿಶ್ರಮ, ದೈವಗಳ ಬಗ್ಗೆ ಅವರಿಗಿರುವ ಆಸಕ್ತಿ ತಿಳಿದು ಬರುತ್ತದೆ ಹಾಗೂ ಓದುಗರಿಗೆ ಈ ಪುಸ್ತಕವನ್ನು ಓದುವಾಗ ಎಲ್ಲೂ ಸಹ ಬೇಜಾರಾಗದಂತೆ ಸಚಿತ್ರದೊಂದಿಗೆ ಬರೆದಿಟ್ಟು ಕೊಟ್ಟಿದ್ದಾರೆ. ಇಂತಹ ಒಳ್ಳೆಯ ಪುಸ್ತಕವನ್ನು ಕನ್ನಡನಾಡಿಗೆ ನೀಡಿದಂತಹ ಲೇಖಕರಾದ ಡಾ. ಲಕ್ಷ್ಮಿ ಜಿ. ಪ್ರಸಾದ್ ನನಗೆ ಬಗ್ಗೆ ಹೆಮ್ಮೆ ಅನ್ನಿಸಿತು.
ಹೀಗೆ ಇವರಿಂದ ಆಸಕ್ತಿದಾಯಕವಾದ ಮಾಹಿತಿಗಳು ಇನ್ನು ಹೆಚ್ಚು ಹೆಚ್ಚು ಓದುಗರಿಗೆ ದೊರಕುವಂತಾಗಲಿ ಎಂದು ಆಶಿಸುತ್ತೇನೆ.
- ಪಾವನಾ ಭಾಗವತ್