Sunday 1 October 2023

ಜನಪ್ರಿಯದೈವ ಕೊರಗ ತನಿಯ- © ಡಾ. ಲಕ್ಷ್ಮೀ ಜಿ. ಪ್ರಸಾದ(ಕರಾವಳಿಯ ಸಾವಿರದೊಂದು ದೈವಗಳು ಗ್ರಂಥದ ಆಯ್ದ ಭಾಗ )



ಜನಪ್ರಿಯದೈವ ಕೊರಗ ತನಿಯ- © ಡಾ. ಲಕ್ಷ್ಮೀ ಜಿ. ಪ್ರಸಾದ(ಕರಾವಳಿಯ ಸಾವಿರದೊಂದು ದೈವಗಳು ಗ್ರಂಥದ  ಆಯ್ದ ಭಾಗ )





(ಫೋಟೋಗಳು:ಲೇಖಕಿಯವು)
ವೃದ್ಧರಿಂದ ಹಿಡಿದು ಎಳೆಯ ಮಕ್ಕಳವರೆಗೆ ಎಲ್ಲರು ನೋಡಿರುವ ಇಷ್ಟ ಪಡುವ ದೈವ ಕೊರಗ ತನಿಯ .ಎಲ್ಲ ಭೂತಗಳು ತನ್ನ ಉಗ್ರ ಅಟ್ಟಹಾಸ ಕುಣಿತಗಳಿಂದ ಜನರ ಮನದಲ್ಲಿ ಭಯ ಬಿತ್ತಿ ನಡುಕ ಉಂಟು ಮಾಡಿದರೆ ಕೊರಗ ತನಿಯ ಹಾಸ್ಯದ ಅಭಿವ್ಯಕ್ತಿಯಿಂದ ಜನರಿಗೆ ಹತ್ತಿರವಾಗಿದ್ದಾನೆ.ಈತ ಬಹಳ ಸಾತ್ವಿಕ ಗುಣದ ದೈವತ.ಮಕ್ಕಳಿಗೆ ಈತ ಬಹಳ ಪ್ರಿಯನಾದವನು .ಮನೆಯಲ್ಲಿ ಯಾವುದಾದರೊಂದು ವಸ್ತು ಕಾಣೆಯಾದರೆ ,ಕಳ್ಳತನವಾದರೆ ಕೊರಗ ತನಿಯನನ್ನು ನೆನೆದು ಆತನಿಗೆ ಹರಿಕೆಯಾಗಿ ಒಂದು ಕುಪ್ಪಿ ಕಳ್ಳು ಅಥವಾ ಸಾರಾಯಿ ಕೊಡುತ್ತೇನೆ ಎಂದು ಹರಿಕೆ ಹೇಳಿದರೆ ಸಾಕು ಕಳ್ಳತನ ವಾದ ವಸ್ತುಗಳು, ಕಾಣೆಯಾದ ವಸ್ತುಗಳು ಪತ್ತೆಯಾಗಿ ಬಿಡುತ್ತವೆ .ದನ ಕರುಗಳಿಗೆ ಏನಾದರು ತೊಂದರೆ ಆದರು ಕೊರಗ ತನಿಯನಿಗೆ ಮೊರೆ ಹೋಗುತ್ತಾರೆ ತುಳುವರು.ಎಲ್ಲರ ದನ ಕರು ಬೆಳೆಗಳ ರಕ್ಷಣೆಯ ಕಾರ್ಯವನ್ನು ಕೊರಗತನಿಯ ಭೂತ ಮಾಡುತ್ತದೆcopy rights reserved © ಡಾ. ಲಕ್ಷ್ಮೀ ಜಿ. ಪ್ರಸಾದ(ಕರಾವಳಿಯ ಸಾವಿರದೊಂದು ದೈವಗಳು ಕೃತಿಯ ಆಯ್ದ ಭಾಗ )
ತುಳುನಾಡಿನ ಎಲ್ಲೆಡೆಗಳಲ್ಲಿ ಆರಾಧಿಸಲ್ಪಡುವ ಕೊರಗತನಿಯ ದೈವವನ್ನು ಅಗೇಲು ಹಾಗೂ ಕೋಲ ನೀಡಿ ಆರಾಧಿಸುತ್ತಾರೆ. ಕೊರಗತನಿಯ ಕೊರಗ ಜನಾಂಗದಲ್ಲಿ ಹುಟ್ಟಿ ಅಸಹಜ ಮರಣವನ್ನಪ್ಪಿದ ಅಸಾಮಾನ್ಯ ವೀರ. ಹಾಳೆಯ ಮುಟ್ಟಾಳೆ ಧರಿಸುವ ಈ ದೈವದ ವೇಷ ವಿಶಿಷ್ಟವಾದುದು.ಇತರ ಭೂತಗಳಂತೆ ಈತನಿಗೆ ದೊಡ್ಡದಾದ ಅಣಿ ಜಕ್ಕೆಳಣಿಗಳು ಇರುವುದಿಲ್ಲ.ಈತನ ಕುಣಿತದಲ್ಲಿ ಉಗ್ರತೆ ಇರುವುದಿಲ್ಲ .ಈತನ ಹುಟ್ಟು ಕೊರಗರ ಕೊಪ್ಪದಲ್ಲಿ ಆಗುತ್ತದೆ.
 ಕೊರಗೆರ್ ಪುಟ್ಯೇರ್‌ಯಾ ಓಲು ಪನ್ನಗ
ಕಾಂತಣ ಕದ್ರಡು, ಬೆಂದ್ರಣ ಬೆದ್ರಡು
ಜಪ್ಪು ಕರ್ನೂರು, ಮೂಲ್ಕಿ ಮುನ್ನೂರು . . .
ಕನ್ನಡ ಅನುವಾದ:







                                                           ಚಿತ್ರ ಕೃಪೆ :ತುಳುನಾಡ ಪೊರ್ಲು
ಕೊರಗರು ಹುಟ್ಟಿದರು, ಎಲ್ಲಿ ಎಂದು ಹೇಳುವಾಗ
ಕಾಂತಣ ಕದಿರೆಯಲ್ಲಿ, ಬೆಂದಣ ಬಿದರೆಯಲ್ಲಿ
ಜಪ್ಪು ಕರ್ನೂರು, ಮೂಲ್ಕಿ ಮುನ್ನೂರು . . .
ಎಂದು ಪ್ರಾರಂಭವಾಗುವ ಕೊರಗ ತನಿಯ ಪಾಡ್ದನವು ಕೊರಗ ಜನಾಂಗ ಹೆಚ್ಚಾಗಿ ವಾಸಿಸುತ್ತಿದ್ದ ಪ್ರದೇಶವನ್ನು ಅಂದರೆ ಕದ್ರಿ, ಮೂಡಬಿದ್ರೆ, ಜಪ್ಪು, ಮೂಲ್ಕಿ ಮುಂತಾದ ಪ್ರದೇಶಗಳನ್ನು ನಿರ್ದೇಶಿಸುತ್ತದೆ. ಇಂತಹ ಒಂದು ಕೊಪ್ಪದಲ್ಲಿ ಕೊರಗ ಮತ್ತು ಕೊರಪ್ಪೊಳುಗೆ ವುರವನ ಓಡಿ ಎಂಬ ಮಗ ಹುಟ್ಟುತ್ತಾನೆ. ಈತ ಹುಡುಗಾಟ ಬಿಟ್ಟು ದೊಡ್ಡವನಾದಾಗ ಈತನಿಗೊಂದು ಒಪ್ಪುವ ಹೆಣ್ಣನ್ನು ಹುಡುಕುತ್ತಾರೆ. ಅವನ ಸೋದರಮಾವ ತಿರ್ತಮಲೆ ಕೊಪ್ಪದಲ್ಲಿ ಹುಡುಗಿ ಇದ್ದಾಳೆ ಎನ್ನುತ್ತಾನೆ.

copy rights reserved © ಡಾ. ಲಕ್ಷ್ಮೀ ಜಿ. ಪ್ರಸಾದ(ಕರಾವಳಿಯ ಸಾವಿರದೊಂದು ದೈವಗಳು ಗ್ರಂಥದ  ಆಯ್ದ ಭಾಗ )
 ಅಲ್ಲಿ ಕಡ್‌ಮಮಲೆಕೊಪ್ಪದಲ್ಲಿ ಇದ್ದಾಳೆ ಎಂದು ಹೇಳುತ್ತಾರೆ. ಏಳುಮಲೆಯ ಕೊರಗರೆಲ್ಲ ಸೇರಿ ಅಲ್ಲಿಗೆ ಹೋದಾಗ ಕೊರಪಳು ಮೈರೆ ತಂದೆಯ ತಲೆಯ ಹೇನು ಹೆಕ್ಕಿ ಆಯಾಸಗೊಂಡು ಮೇಲೆ ನೋಡುತ್ತಾಳೆ. ಆಗ ಮನೆಗೆ ನೆಂಟರು ಬರುವುದನ್ನು ಕಂಡು ನಮ್ಮ ಮನೆಗೆ ನೆಂಟರು ಬರುವ ಚಂದ ನೋಡು ಎನ್ನುತ್ತಾಳೆ. ಆಗ ತಂದೆ ನೀನು ಇಷ್ಟು ಚಿಕ್ಕವಳು, ನಿನಗೆ ಗಂಡಿನ ನೆನಪಾಯಿತೆ? ನಿನ್ನ ಅಂಗೈಯ ಗೆರೆ ಮಾಸಿಲ್ಲ, ಕಂಕುಳಡಿಯ ಹುಟ್ಟುಕಂಪು ಅಡಗಲಿಲ್ಲ ಎಂದು ಹೇಳುತ್ತಾನೆ. ಆಗ ಅವಳು ಆಯಾಸವಾಗಿ ತಲೆ ಎತ್ತಿ ನೋಡಿದಾಗ ಕಂಡಿತೆಂದು ಹೇಳುತ್ತಾಳೆ.

ಒಳಗೆ ಹೋಗು, ಬಾಜಿರ ಉಜ್ಜಿ ಕಸ ಗುಡಿಸಿ, ಅತ್ತರು ಹಾಕು, ನೀರು ತಾ ಮಾಡಿನಡಿಯಲ್ಲಿ ಇಡು ಎಂದು ಆದೇಶಿಸಿದ ತಂದೆ, ಮನೆಗೆ ಬಂದವರನ್ನು ಸ್ವಾಗತಿಸಿ, ಮುಟ್ಟಾಳೆಯಲ್ಲಿ ಚಿಗುರು ವೀಳ್ಯ, ಎಲೆ ಅಡಿಕೆ ಹೋಳು, ಗಡಿಗೆಯ ಕಳ್ಳು ಕೊಟ್ಟು ಸತ್ಕರಿಸುತ್ತಾನೆ. ಬಂದ ನೆಂಟರು ಕೊಡುವ ಕೊರಪಳು ಉಂಟೋ ಮಾರುವ ಡೋಲು ಉಂಟೋ? ಎಂದು ಕೇಳುತ್ತಾರೆ.

ಕೊಡುವ ಹೆಣ್ಣನ್ನು ಕೊಟ್ಟು ಆಗಿದೆ, ಮಾರುವ ಡೋಲನ್ನು ಮಾರಿ ಆಗಿದೆ ಎಂದು ಮೈರೆ ತಂದೆ ಹೇಳುತ್ತಾನೆ. ಆಗ ಕೊಟ್ಟ ಹೆಣ್ಣಿನ ಬಗ್ಗೆ ಕೇಳುವುದಕ್ಕೆ ನಾವು ಬಂದಿಲ್ಲ. ಮಾರಿದ ಡೋಲಿನ ಕ್ರಯ ಕೇಳಲಾರೆವು. ಇರುವ ಹುಡುಗಿಯನ್ನು ಕೊಡುತ್ತೀರೊ? ಎಂದು ನೆಂಟರು ಕೇಳುತ್ತಾರೆ. ಆಗ ಇರುವ ಒಬ್ಬಳೆ ಹುಡುಗಿ ತೀರ ಚಿಕ್ಕವಳು, ಏನೊಂದೂ ಕೆಲಸ ಮಾಡಿ ಅಭ್ಯಾಸವಿಲ್ಲದವಳು, ನಾಲ್ಕು ಮೂಲೆಯ ಕಸವನ್ನು ಒಂದು ಕಡೆ ಮಾಡಲರಿಯದವಳು ಎನ್ನುತ್ತಾನೆ ತಂದೆ.

ಆಗ ನಮ್ಮ ಕೊಪ್ಪದಲ್ಲಿ ಮೊದಲು ಬಂದ ಕೊರಪ್ಪೊಳು ಇದ್ದಾರೆ. ಹೇಳಿ ಕಲಿಸುತ್ತಾರೆ. ನಮಗೆ ಕಾಲ ತಡವಾಗುತ್ತದೆ ಎಂದಾಗ ಒಪ್ಪಿದ ತಂದೆ ಮದುವೆಗೆ ದಿನ ನಿಶ್ಚಯ ಮಾಡಿ ಅಡಿಕೆ ವೀಳ್ಯ ಬದಲಿಸಿಕೊಳ್ಳುತ್ತಾರೆ. ಮದುವೆಯ ಸಿದ್ಧತೆ ಆರಂಭವಾಯಿತು. ಹೆಣ್ಣಿನ ಕಡೆಯಲ್ಲಿ ಬಾಳೆ ಕಡಿದು ಅಲಂಕಾರ ಮಾಡಿ ಚಪ್ಪರ ಹೊದಿಸಿದರು. ಎರಡೂ ಕಡೆಯ ನೆಂಟರು ಬಂದು ಸೇರಿದರು. ನಾನಾವಿಧದ ಅಡಿಗೆ ಮಾಡಿಸಿದರು. ಊಟ ಉಪಚಾರ ನಡೆಯಿತು. ಕ್ರೀಡೆ, ಹಾಸ್ಯಗಳು ನಡೆದವು. ಊಟದ ನಂತರ ವುರವನ ಓಡಿಯನ್ನು ಕೊರಪಳು ಮೈರೆಯನ್ನು ಅಲಂಕರಿಸಿ ಸೇಸೆಗೆ ಪ್ರದಕ್ಷಿಣೆ ಮಾಡಿಸಿ, ಧಾರೆಮಣೆಯಲ್ಲಿ ಕುಳ್ಳಿರಿಸಿ ಕೈಧಾರೆ ಪೂರೈಸಿದರು.

copy rights reserved © ಡಾ. ಲಕ್ಷ್ಮೀ ಜಿ. ಪ್ರಸಾದ(ಕರಾವಳಿಯ ಸಾವಿರದೊಂದು ದೈವಗಳು  ಕೃತಿಯ ಆಯ್ದ ಭಾಗ ) ಮದುವೆಯಾಗಿ ಕೆಲದಿನಗಳ ನಂತರ ಮೈರೆ ಋತುಸ್ನಾನ ಮಾಡಿದಳು. ತನ್ನ ಕೊಪ್ಪಕ್ಕೆ ಬಂದು ಇದೊಂದು ನೀರು ನಿಂತರೆ (ಗರ್ಭ ಧರಿಸಿದರೆ) ಕಾಂತಾವರ ದೇವರನ್ನು ನೋಡುವೆ, ಹಿಡಿ ಹಣ ಹರಕೆ ಹಾಕುವೆ, ಉಳ್ಳಾಯನನ್ನು ನೋಡಿ ಮೂಲಕ್ಕೆ ನೀರು ಹೊಯ್ಯುವೆ ಎಂದಳು. ಮೈರೆ ಚೊಚ್ಚಲ ಗರ್ಭ ಧರಿಸಿದಳು. ಏಳು ತಿಂಗಳಾದಾಗ ಬಯಕೆ ಸಮ್ಮಾನ ಮಾಡಿದರು.

 ಹತ್ತನೇ ತಿಂಗಳಿನಲ್ಲಿ ಬೆನ್ನಿನಲ್ಲಿ ಬ್ರಹ್ಮದೇವರ ಬೇನೆ, ಹೊಟ್ಟೆಯಲ್ಲಿ ಮಗುವಿನ ಬೇನೆ ಬರುತ್ತದೆ. ಕಂಡ ಬೇನೆಯಲ್ಲಿ ನಮ್ಮ ಕೊರಪಳು ಮೈರೆ ಮಗುವನ್ನು ಪಡೆದರೆ ನಾವು ನಂಬಿದ ಕುಲದೈವಗಳಿಗೆ ಕೋಳಿ ಅಟ್ಟು ಔತಣ ಕೊಡುತ್ತೇವೆ ಎಂದು ಹರಿಕೆ ಹೇಳಿದರು. ಗಂಡುಮಗುವಿಗೆ ಜನ್ಮವಿತ್ತಳು ಮೈರೆ. ಹನ್ನೊಂದನೆಯ ದಿನ ಅಮೆ ಮಾಡಿದರು.

 ಶನಿವಾರ ಹುಟ್ಟಿದ ಮಗುವಿಗೆ ತನಿಯ ಎಂದು ಹೆಸರಿಟ್ಟರು. ಮಗುವನ್ನು ನೋಡುವಾಗ ಈಶ್ವರ ದೇವರ ಶಾಪ ನೆನಪಾಗುತ್ತದೆ ಮೈರೆಗೆ. ಅವಳ ಮದುವೆಯಾದ ಹೊಸತರಲ್ಲಿ ಕಾಡಿಗೆ ಹೋಗಿ ಬಳ್ಳಿ ಹೆರೆಯುತ್ತಿರುವಾಗ ಲೋಕಬಾರಿ ಈಶ್ವರದೇವರು ಬಂದು, ಮೈರೆಯ ಮುಡಿ ನೋಡಿ ಪಾರ್ವತಿಯಂತೆ ಭಾಸವಾಗಿ ಅವಳಲ್ಲಿ ಮೋಹಗೊಳ್ಳುತ್ತಾರೆ. ಅವಳನ್ನು ಮೋಹಿಸಿ ಸೇರಲು ಬಂದ ಈಶ್ವರನನ್ನು ದೇವರೆಂದು ಉಪಚರಿಸಿ, ತಂದೆಯೆಂದು ಗೌರವ ತೋರಿ ದೂರ ಇರಿಸುತ್ತಾಳೆ. ಆ

ಗ ಈಶ್ವರ ದೇವರು ನಿನ್ನ ಹೊಟ್ಟೆಯಲ್ಲಿ ಗಂಡು ಹುಳ ಹುಟ್ಟಲಿ. ಅದು ಹುಟ್ಟಿದ ನಂತರ ನಿನ್ನ ಸಂತಾನ ನಾಶವಾಗಲಿ ಎಂದು ಶಾಪ ಕೊಟ್ಟಿರುತ್ತಾನೆ. ಈಶ್ವರದೇವರ ಶಾಪವೊ ಎಂಬಂತೆ ಕೊರಗ ತನಿಯ ಮೊಲೆ ಹಾಲು ಕುಡಿಯವ ಸಮಯದಲ್ಲಿ ತಾಯಿಗೆ ಅಳಿವಾಗುತ್ತದೆ. ಅಪ್ಪನ ಹಿಡಿಯೂಟ (ಗಂಜಿಯೂಟ) ತಿನ್ನುವ ಸಮಯದಲ್ಲಿ ತಂದೆ ಸಾಯುತ್ತಾನೆ. ಅತ್ತೆ ಅಕ್ಕರೆಯಿಂದ ಸಾಕಲು ಅತ್ತೆಯೂ ಅಳಿಯುತ್ತಾಳೆ. ಏಳು ಕೊಪ್ಪದ ಕೊರಗರಿಗೆ ನಾಲ್ಕು ದಿಕ್ಕಿನ ಮಾರಿ ತಂದು ಕೊರಗರೆಲ್ಲ ಅಳಿದು ಹೋಗುತ್ತಾರೆ.

ಕೊರಗ ತನಿಯನಿಗೆ ದಿಕ್ಕು ದೆಸೆ ತಪ್ಪಿತು. ಕೊರಗ ತನಿಯ ಒಂಟಿಯಾಗುತ್ತಾನೆ. ಇರಲು ಕೊಪ್ಪವಿಲ್ಲ.
ಊರು ಬಿಟ್ಟು ಹೊರಟ. ಬಡಗುದೇಶಕ್ಕೆ ಬಂದು ಕಲ್ಲಾಪು ಮುಟ್ಟಿದ. ನೂರಾರು ಜನರು ಹೋಗುವ ದಾರಿಯಲ್ಲಿ ಕುಳಿತ. ಬಿಳಿಯ ಮರಳನ್ನು ಅಕ್ಕಿಯಂತೆ ಪಸರಿಸಿದ. ದಡ್ಡಾಲದ ಕಾಯನ್ನು ತೆಂಗಿನಕಾಯಿಯೆಂದು ಇರಿಸಿದ. ಕಾಸರಕನ ಸೊಪ್ಪನ್ನು ವೀಳ್ಯದೆಲೆಯನ್ನು ಇಟ್ಟು ಬಾಲ್ಯಸಹಜ ಹುಡುಗಾಟದಿಂದ ನಗಾಡುತ್ತಿದ್ದ.

copy rights reserved © ಡಾ. ಲಕ್ಷ್ಮೀ ಜಿ. ಪ್ರಸಾದ(ಕರಾವಳಿಯ ಸಾವಿರದೊಂದು ದೈವಗಳು ಕೃತಿಯ ಆಯ್ದ ಭಾಗ )
ಒಂಟಿತನ ಆವರಿಸಿದಾಗ ಅಳುತ್ತಿದ್ದ. ಆ ಸಮಯದಲ್ಲಿ ಕದಿರೆಯ ಮಂಜದಿಂದ ಬಿದಿರೆಯಲ್ಲಿ ಕಳ್ಳನ್ನು ಹೇರಿಕೊಂಡು ಹೋಗುತ್ತಿದ್ದ ತಾಯಿ ಬೈರಕ್ಕೆ, ಮಗಳು ಮಂಜಕ್ಕೆ, ತಮ್ಮ ಚೆನ್ನಯರು ಇವನನ್ನು ನೋಡುತ್ತಾರೆ. ಒಮ್ಮೆ ನಗುವ ಒಮ್ಮೆ ಅಳುವ ಇವನ ಚಂದವನ್ನು ನೋಡಿ, ತಾಯಿ ಬೈರಕ್ಕೆಯು ಹತ್ತಿರ ಬಂದು ಹೇಳುತ್ತಾಳೆ. ಆಗ ಕೊರಗ ತನಿಯ ಓಡಿ ಹೋಗಿ ತಡಮೆಯಲ್ಲಿ ನಿಲ್ಲುತ್ತಾನೆ. ಬೈರಕ್ಕೆ ಬೈದ್ಯೆದಿ ಇವನನ್ನು ನೋಡಿ ಯಾರೋ ಮಗು ತಡಮೆ ಬಿಡು, ದಾರಿ ಬಿಡು ಎನ್ನುತ್ತಾರೆ. ತಡಮೆ ಬಿಡಲು, ಹಾದಿ ತೆರವು ಮಾಡಲು ನನಗೆ ಸೊಂಟಕ್ಕೆ ಬಟ್ಟೆ ಇಲ್ಲ ಎನ್ನುತ್ತಾನೆ ಕೊರಗ ತನಿಯ.

ಆಗ ಬೈರಕ್ಕೆ, ಕಳ್ಳಿನ ಗಡಿಗೆ ಇಳಿಸಿ ಸಿಂಬಿಯ ಬಟ್ಟೆ ತೆಗೆದು ಸೊಂಟಕ್ಕೆ ಬಟ್ಟೆ ನೀಡಿದಳು. ಸೊಂಟಕ್ಕೆ ಅರಿವೆ ಕಟ್ಟಿಕೊಂಡ ಕೊರಗ ಜೋರಾಗಿ ಅತ್ತ. ಆಗ ಮರುಕಗೊಂಡ ಬೈರಕ್ಕೆ ಆತನ ಬಗ್ಗೆ ವಿಚಾರಿಸಿದಾಗ ತನಗೆ ತಾಯಿ ಇಲ್ಲ. ತಂದೆ ಅಳಿದಿದ್ದಾನೆ. ಏಳು ಕೊಪ್ಪದ ಕೊರಗರೆಲ್ಲ ಅಳಿದು ಹೋದರು. ಕುಳ್ಳಿರುವೆನೆಂದರೆ ಕೊಪ್ಪವಿಲ್ಲ. ದಿಕ್ಕು ಬಿಟ್ಟು ದೇಶಾಂತರ ಹೋಗುವೆ, ದುಡಿಯಲು ಬೇಕಾದಷ್ಟು ಇರುವ ರಾಜ್ಯಕ್ಕೆ, ಉಣ್ಣಲು ಬೇಕಾದಷ್ಟು ಇರುವ ಸೀಮೆಗೆ ಹೋಗುವೆ ಎಂದು ಹೇಳುತ್ತಾನೆ.

ಅವನ ಮೇಲಿನ ಮರುಕ ಅಕ್ಕರೆಗೆ ತಿರುಗಿ ಹಾಗೆ ಹೋಗುವ ಮಗನಾದರೆ ನನ್ನೊಡನೆ ಬಾ, ನನಗೆ ಇಬ್ಬರು ಮಕ್ಕಳಿದ್ದಾರೆ. ನೀನು ಸೇರಿ ಮೂವರು ಆದಿರಿ ಎಂದು ಹೇಳುತ್ತಾಳೆ ಬೈರಕ್ಕೆ ಬೈದ್ಯೆದಿ. ಅನಂತರ ಅವನ ಬಳಿಯನ್ನು ಯಾವ ಮೂಲದವನು? ಯಾವ ಸಾಲದವನು? ಎಂದು ಕೇಳುತ್ತಾರೆ. ಆಗ ಆತ ನನಗೆ ಸಾಲವೆಂದರೆ ತಾಯಿ ಕದ್ರ ಕಾಂತಣದೇವರದು. ಮೂಲವೆಂದರೆ ಎಣ್‌ಸೂರ ಮೂಲ. ಬಳಿಯೆಂದರೆ ಸೋಮನತ್ತ ಬಳಿ ಎಂದು ಹೇಳುತ್ತಾಳೆ. ಹಾಗಾದರೆ ನೀನು ನಮ್ಮ ಬಳಿಯವನು ಬಾ ಹೋಗೋಣ ಎಂದು ಕರೆದುಕೊಂಡು ಹೋದಳು ಬೈರಕ್ಕೆ. ಅವನನ್ನು ಹೊರಗಿನ ಮಗನಂತೆ ಪ್ರೀತಿಯಿಂದ ಸಾಕಿದರು.
ಕೊರಗ ತನಿಯ ಬಂದ ಲಕ್ಷಣದಲ್ಲಿ ಸಿರಿ ಸಂಪತ್ತು ತುಂಬಿತು ಆ ಮನೆಯಲ್ಲಿ. ಕೊರಗ ತನಿಯ ತನ್ನ ಕುಲ ಕಸುಬನ್ನು ಕಲಿಯುತ್ತಾನೆ.
ಬಿದಿರಿನಿಂದ ಬುಟ್ಟಿ, ಕಣಜ, ಕೈಕುಡುಪು ಮಾಡಿ ಊರು ಕೇರಿಯಲ್ಲಿ ಮಾರಲು ತೊಡಗಿದ. ಹೀಗೆ ಹಲವು ದಿನ ಕಳೆಯಲು, ಅವರ ಮೂಲಸ್ಥಾನದಲ್ಲಿ ಮರ‍್ಲುಜುಮಾದಿ, ಮಾಡಮೈಸಂದಾಯ, ಕಿನ್ನಿಕೊಡಂಗೆದಾಯ, ಪದವು ಲೆಕ್ಕೇಸಿರಿಗಳಿಗೆ ಅಂಕ, ಅಯನ ಕೋಳಿಕಟ್ಟ, ಕಂಬಳ ನೇಮ ಸಿರಿ ಎಂದು ನಿರ್ಧಾರವಾಯಿತು. ಎಣಸೂರು ಬಾರಿಗೆಯಿಂದ ಏಳು ಜನ ಹೊರುವಷ್ಟು ತೆಂಗಿನ ಎಳೆಯ ಗರಿ, ಬಾಳೆ ಸೀಯಾಳ ಹೋಗಬೇಕು. ಎಳೆಯ ಗರಿ ಬಾಳೆ ಹೊರಲು ಬೈಲಬಾಕುಡ, ಓಣಿಯ ಮುಗ್ಗೇರ, ಹುಣೆಮಟ್ಟು ಮುಂಡಾಲದವರು ಯಾರೂ ಸಿಗಲಿಲ್ಲ.

ಆಗ ಚೆನ್ನಯ ಬೈದ್ಯರು ಹೊರಗಿನ ಆಳು ಬೇಡ ನಮಗೆ, ನಾವು ಸಾಕಿದ ಮಗ ಕೊರಗ ತನಿಯ ಇದ್ದಾನೆ. ಅವನಲ್ಲಿ ಎಳೆ ಗರಿ ಸೀಯಾಳ ಹೊರಿಸುವ ಎಂದು ಹೇಳುತ್ತಾರೆ. ಎಳೆ ಗರಿ ಸೀಯಾಳ ಹೊರುವೆಯಾ? ಎಂದು ತಾಯಿ ಕೇಳಿದಾಗ ಏಳು ಜನರ ಹೊರೆ ಒಬ್ಬನೇ ಹೊರುತ್ತೇನೆ. ಆದರೆ ಏಳು ಮಡಿಕೆ ಕಳ್ಳು ಕೊಡಬೇಕು. ಏಳು ಜನರ ಉಣಿಸು ಕೊಡಬೇಕು. ಮೂವತ್ತು ಬಂಗುಡೆಯ ಪಲ್ಯ ಬೇಕು. ಏಳು ಜನರ ಅಡಿಕೆ ವೀಳ್ಯ ಕೊಡಬೇಕು. ಏಳು ಜನರ ಭತ್ತ ಕೊಡಬೇಕು ಎಂದು ಹೇಳುತ್ತಾನೆ. ಹಾಗೆಯೇ ಆಗಲೆಂದು ತಾಯಿ ಒಪ್ಪುತ್ತಾರೆ. ಅಲ್ಲಿಂದ ಎದ್ದ ಕೊರಗ ತನಿಯ ತೆಂಗಿನಮರಕ್ಕೆ ಹತ್ತಿ ಎಪ್ಪತ್ತು ತೆಂಗಿನ ಎಳೆಯ ಗರಿ, ಸೀಯಾಳ ಎಪ್ಪತ್ತು ಸಿಂಗಾರ ಹೂವು ತೆಗೆದು, ಏಳು ಜನರ ಹೊರೆಯನ್ನು ಒಂದು ಹೊರೆಯಾಗಿ ಕಟ್ಟಿ ಎತ್ತಿ ಹೆಗಲಿಗೇರಿಸಿ ಎಣ್ಸೂರ ಅಂಗಳಕ್ಕೆ ತಂದು ಹಾಕಿದ. ತಾಯಿ ಕೊಟ್ಟ ಏಳು ಕುಡಿಕೆ ಕಳ್ಳು ಕುಡಿದು. ಏಳು ಜನರ ಉಣಿಸು ಉಂಡ. ಮೂವತ್ತು ಕಿರು ಬಂಗುಡೆ ಮೀನಿನ ಪಲ್ಯ ತಿಂದ.

copy rights reserved © ಡಾ. ಲಕ್ಷ್ಮೀ ಜಿ. ಪ್ರಸಾದ( ಕರಾವಳಿಯ ಸಾವಿರದೊಂದು ದೈವಗಳು ಕೃತಿಯ  ಕೃತಿಯ ಆಯ್ದ ಭಾಗ ) ಏಳು ಜನರ ವೀಳ್ಯ ಅಡಿಕೆ ತಿಂದ. ಏಳು ಜನರು ಹೊರುವ ಹೊರೆಯನ್ನು ಅಂಗಳದಿಂದ ಎತ್ತಿದ. ಪಾದದಿಂದ ಮೊಣಕಾಲಿಗಿಟ್ಟ. ಅಲ್ಲಿಂದ ಹೆಗಲಿಗೆ, ಹೆಗಲಿನಿಂದ ತಲೆಗೆ ಇಟ್ಟ.
ಅಂಗಳದಿಂದ ಕೆಳಗೆ ಇಳಿದು ತಿರುಗಿ ನೋಡಿ, ಬಿಕ್ಕಿ ಬಿಕ್ಕಿ ಅತ್ತ. ಈವರೆಗೆ ನನ್ನನ್ನು ಸೋಗದಲ್ಲಿ ಸಾಕಿಕೊಂಡು ಇದ್ದಿರಿ ತಾಯಿ, ಇವತ್ತು ಬೆನ್ನು ಹಾಕಿ ಹೋದವನು ಹೊಟ್ಟೆ ತೋರಿಸಿಕೊಂಡು ಬರುವೆನೆಂದು ನಂಬಬೇಡಿ ಎಂದು ಹೇಳುತ್ತಾನೆ. ಅಯ್ಯೋ ಮಗ, ನೀನು ಬಂದಾಗ ನಮಗೆ ದನಕರು ಹೆಚ್ಚಿ ಎಲ್ಲ ಸೌಭಾಗ್ಯ ಉಂಟಾಯಿತು. ಇವತ್ತು ಇಂಥಾ ಮಾತು ಹೇಳಿ ಹೋಗುತ್ತಿರುವೆಯಲ್ಲ! ನಿನಗೆ ಅವಮಾನ ಎನಿಸುವುದಾದರೆ, ಕುಟುಂಬಕ್ಕೆ ಅಪವಾದ ಬರುವುದಿದ್ದರೆ ನೀನು ಹೊರಬೇಡ ಎಂದಳು ತಾಯಿ ಬೈರಕ್ಕೆ ಬೈದ್ಯೆದಿ.

ತಲೆಗಿಟ್ಟ ಹೊರೆಯನ್ನು ಮತ್ತೆ ಕೆಳಗೆ ಇರಿಸಲಾರೆ ಎಂದು ಹೊರೆ ಹೊತ್ತುಕೊಂಡು ಕಿನ್ನಿಕೊಡಂಗೆದಾಯ, ಇಷ್ಟದೇವತೆ ಲೆಕ್ಕೇಸಿರಿಯ ಮಾಡದ ಹತ್ತಿರ ಮುಟ್ಟಿದ. ದೂರದಿಂದ ಇವನನ್ನು ನೋಡಿ ನೇಮದ ಮಂದಿ, ಕಾಡ ಕೊರಗರ ಹೈದ ಎಳೆಯ ಗರಿ ಬಾಳೆ ತರುವುದಿದ್ದರೆ ಮಾಡಕ್ಕೆ ಮುಟ್ಟಿಸಬಾರದು, ಮಾಡಕ್ಕೆ ದೂರದಲ್ಲಿ ಇಳಿಸಬೇಕು. ದೂರ ಕುಳಿತಿರಬೇಕು ಎಂದು ಹೇಳಿದರು. ನಾನು ತಂದ ತೆಂಗಿನ ಗರಿ ಬಾಳೆ ಆದೀತು. ಮಾಡಕ್ಕೆ ಮುಟ್ಟಿಸಲು ಯಾಕೆ ಆಗದು? ಎಂದು ಕೇಳಿದ. ಮಾಡಕ್ಕೆ ಸಮೀಪದಲ್ಲಿಯೇ ಕುಳಿತ. ಮಾಡದ ಮೇಲೆ ನೋಡುವಾಗ ಕೈಪುರದ ಹುಳಿ ಕಂಡಿತು. ಮನೆಯಲ್ಲಿ ಮಾವಿನ ಉಪ್ಪಿನಕಾಯಿ ಮುಗಿದಿದೆ ಎಂದು ಅಮ್ಮ ಹೇಳಿದ್ದು ನೆನಪಾಗಿ, ಅಮ್ಮನಿಗೆ ಇಷ್ಟವಾದ ಕೈಪುರದ ಹುಳಿಯನ್ನು ಕೊಯ್ಯಲು ಒಂದು ಕಾಲನ್ನು ಮಾಡದ ಕಲಶಕ್ಕೆ ಇಟ್ಟ. ಗೆಲ್ಲು ಬಗ್ಗಿಸಿ ಹುಳಿ ಕೊಯ್ಯುವಾಗ ಒಳಗೆ ತೂಗುಯ್ಯಾಲೆಯಲ್ಲಿ ಇದ್ದ ಮಾಡ ಮೈಸಂದಾಯ, ಕಿನ್ನಿಕೊಡಂಗೆದಾಯ, ಪದವು ಲೆಕ್ಕೇಸಿರಿ ಭೂತಗಳು ತುದಿಗಣ್ಣಿನಲ್ಲಿ ನೋಡಿ ಮಾಯಾಸ್ವರೂಪ ಮಾಡಿದರು. ಮುಂದೆ ಕೊರಗತನಿಯ ದೈವಗಳ ಸೇರಿಗೆಯಲ್ಲಿ ಸಂದು ಹೋಗಿ ಆರಾಧನೆ ಪಡೆಯುತ್ತಾನೆ.

copy rights reserved © ಡಾ. ಲಕ್ಷ್ಮೀ ಜಿ. ಪ್ರಸಾದಕರಾವಳಿಯ ಸಾವಿರದೊಂದು ದೈವಗಳು ಕೃತಿಯ ಆಯ್ದ ಭಾಗ )
ಕೊರಗ ತನಿಯ ಕಥಾನಕದಲ್ಲಿ ಪ್ರಾರಂಭದಿಂದ ಕೊನೆಯವರೆಗೂ ದುರಂತಗಳ ಸರಮಾಲೆಯನ್ನು ಕಾಣುತ್ತೇವೆ. ಕೊರಗ ತನಿಯನ ತಂದೆ-ತಾಯಿ ವುರವನ ಓಡಿ ಹಾಗೂ ಮೈರೆಯರು ವಿವಾಹವಾದ ಹೊಸತರಲ್ಲಿಯೇ ಈಶ್ವರ ದೇವರ ಆಗ್ರಹಕ್ಕೆ ತುತ್ತಾಗಬೇಕಾಗುತ್ತದೆ. ಕಾಡಿನಲ್ಲಿ ಬಳ್ಳಿಯನ್ನು ಹೆರೆಯಲು ಹೋದಾಗ ಬೇಟೆಗೆ ಬಂದ ಈಶ್ವರಬಾರಿದೇವರು ಮೈರೆಯ ಮುಡಿಯನ್ನು ನೋಡಿ, ಅವಳು ಪಾರ್ವತಿಯಂತೆ ಭಾಸವಾಗಿ ಅವಳನ್ನು ಮೋಹಿಸುತ್ತಾರೆ.

 ಅವಳು ನಿರಾಕರಿಸಿದಾಗ ಅವಳಿಗೆ ಗಂಡುಮಗು ಹುಟ್ಟಿದ ನಂತರ ಅವಳ ವಂಶ ನಿರ್ವಂಶವಾಗುವಂತೆ ಶಾಪ ಕೊಡುತ್ತಾರೆ. ಶಾಪ ಕೊಡಲು ಇಲ್ಲಿ ಮೈರೆಯ ತಪ್ಪಾದರೂ ಏನಿತ್ತು? ತನ್ನ ಪಾತಿವ್ರತ್ಯವನ್ನು ಕಾಪಾಡಿಕೊಂಡದ್ದು ಅವಳ ತಪ್ಪೇ? ತಾನೊಲಿದವಳು ತನಗೊಲಿಯಲಿಲ್ಲ ಎಂಬ ಕಾರಣಕ್ಕೆ ಮಗು ಹುಟ್ಟಿದ ನಂತರ ವಂಶ ಅಳಿಯುವಂತೆ ಶಾಪ ಕೊಟ್ಟರೆ, ಇದರಿಂದ ಈಶ್ವರದೇವರು ಸಾಧಿಸಿದ್ದಾದರೂ ಏನನ್ನು? ಎಂಬ ಪ್ರಶ್ನೆ ಉಂಟಾಗುತ್ತದೆ.

ಹುಟ್ಟಿದ ಮಗು ತಂದೆ-ತಾಯಿಯರನ್ನು, ಬಂಧು ಬಳಗವನ್ನು ಕಳೆದುಕೊಂಡು, ಅನಾಥನಾಗಿ ದಿಕ್ಕಿಲ್ಲದವನಾಗಿ ಬೆಳೆದರೆ, ಮೈರೆಯ ಮೇಲೆ ದ್ವೇಷ ಸಾಧಿಸಿದಂತೆ ಆಗುತ್ತದೆಯೇ? ಇಷ್ಟಕ್ಕೂ ಬಂದಾತ ಈಶ್ವರ ದೇವರು ಆಗಿರಲಾರ,ಹಿಂದೆ ನಮ್ಮಲ್ಲಿ ಆಳುವ ರಾಜರನ್ನು, ಅವರ ಪರಿವಾರದವರನ್ನು ದೇವರಿಗೆ ಸಮೀಕರಿಸುವ ಪರಿಪಾಠವಿತ್ತು. ಆದ್ದರಿಂದ ಬೇಟೆಗೆ ಬಂದವರು ಆಳುವ ವರ್ಗದವರು ಯಾರೋ ಇದ್ದಿರಬೇಕು. ಮೈರೆ ಆತನನ್ನು ತಿರಸ್ಕರಿಸಿದಾಗ ಅವಮಾನಗೊಂಡು ಹಿಂತಿರುಗಿದವರು ಸ್ವಲ್ಪ ಸಮಯದ ನಂತರ ಸೇನೆಯೊಂದಿಗೆ ಬಂದು ಆಕ್ರಮಣ ಮಾಡಿರಬಹುದು.

ಈ ಗಲಭೆಯಲ್ಲಿ ಕೊರಗರೆಲ್ಲ ಎಲ್ಲೆಲ್ಲೋ ಚದುರಿ ಹೋಗಿರಬಹುದು. ಕಷ್ಟಕ್ಕೀಡಾಗಿ ಅಜ್ಞಾತವಾಗಿ ಬದುಕಬೇಕಾಗಿ ಬಂದ ಮೈರೆ ಮತ್ತು ವುರವನ ಓಡಿಗಳಿಗೆ ಸರಿಯಾದ ಆಹಾರ, ಔಷಧಗಳು ಸಿಕ್ಕದೆ ಮರಣವನ್ನಪ್ಪಿರಬಹುದು. ಅಥವಾ ನೇರವಾಗಿ ಆಳುವ ವರ್ಗದ ಅಥವಾ ಮೇಲು ವರ್ಗದವರ ಆಕ್ರಮಣಕ್ಕೆ ಒಳಗಾಗಿ ಸಾವನ್ನಪ್ಪಿರಬಹುದು. ಎಳೆಯ ಮಗು ಕೊರಗತನಿಯ ಹೇಗೋ ಬದುಕಿ ಉಳಿದು, ಬೈರಕ್ಕೆಯ ಮಾತೃವಾತ್ಸಲ್ಯದಿಂದ ಬೆಳೆದು ದೊಡ್ಡವನಾಗಿ, ಅಪ್ರತಿಮ ಬಲಶಾಲಿಯೂ ವೀರನೂ ಸಾಹಸಿಯೂ ಆಗಿ ಬೆಳೆಯುತ್ತಾನೆ.

copy rights reserved © ಡಾ. ಲಕ್ಷ್ಮೀ ಜಿ. ಪ್ರಸಾದ(ಕತಾವಳಿಯ ಸಾವಿರದೊಂದು ದೈವಗಳು ಕೃತಿಯ  ಕೃತಿಯ ಆಯ್ದ ಭಾಗ )  ಕಾಡ ಕೊರಗರ ಹೈದ ಮಾಡವನ್ನು ಮುಟ್ಟಬಾರದು ಎಂದು ನೇಮದ ಮಂದಿ ಹೇಳಿದ್ದು, ಅವನ ಆತ್ಮಾಭಿಮಾನವನ್ನು ಕೆಣಕುತ್ತದೆ. ತಾನು ತಂದ ಗರಿ, ಬಾಳೆ, ಸೀಯಾಳ ಆಗುತ್ತದೆ ತಾನು ಆಗುವುದಿಲ್ಲವೇ ದೈವಕ್ಕೆ? ಎಂದು ಪ್ರಶ್ನಿಸಿ ದೂರದಿಂದಲೇ ಮಾಡದೊಳಕ್ಕೆ ಹೊರೆಯನ್ನು ಹಾಕುತ್ತಾನೆ. ಮಾಡದ ಸಮೀಪ ಬಂದು ಕುಳಿತುಕೊಳ್ಳುತ್ತಾನೆ. ಇವನ ಉದ್ಧಟತನ ಅಲ್ಲಿಯವರಿಗೆ ಹಿತವಾಗುವುದಿಲ್ಲ. ಬಹುಶಃ ಆತನ ದುರಂತ ಸಾವು ಈ ಸಂದರ್ಭದಲ್ಲಿಯೇ ಆಗಿರಬಹುದು. ಮೇಲ್ವರ್ಗದ ಆಗ್ರಹಕ್ಕೆ ತುತ್ತಾಗಿ ಆತ ದುರಂತ ಕ್ಕೀಡಾಗಿರಬೇಕು. ಅನಂತರ ಆತನ ಮರಣಕ್ಕೊಂದು ಸರಿಯಾದ ಕಾರಣದ ಕತೆಯ ಸೃಷ್ಟಿಯಾಗಿರಬಹುದು. ಮಾಡದ ಕಲಶವನ್ನು ಮೆಟ್ಟಿ ಕೈಪುರದ ಹುಳಿಯನ್ನು ಕೊಯ್ದಾಗ, ದೈವದ ಆಗ್ರಹಕ್ಕೊಳಗಾಗಿ ಮಾಯಾಸ್ವರೂಪ ಆದನು ಎಂಬ ಕತೆ ರೂಪಗೊಂಡಿರಬಹುದು.

 ಕೊರಗ ತನಿಯ ಅಸ್ಪೃಶ್ಯತೆಯ ವಿರುದ್ಧ ಧ್ವನಿಯೆತ್ತಿದ್ದರೂ ಕೂಡ ಆತ ಉದ್ಧಟನಲ್ಲ. ಬೀರಕ್ಕೆ ಬೈದಿತಿ ಹಾಗೂ ಬೆಳೆದ ಮನೆ ಊರಿನ ಮೇಲೆ ಅವನಿರಿಸಿದ ಪ್ರೀತಿ ಅಭಿಮಾನವೇ ಇದಕ್ಕೆ ಸಾಕ್ಷಿ. ಅಂತಹವನು ಮಾಡ ಭೂತ ಸ್ಥಾನ /ದೇವಾಲಯ ಕಳಸವನ್ನು ಮೆಟ್ಟಿ ಕೈಪುರದ ಹುಳಿಯನ್ನು ಕೊಯ್ದಿದ್ದಾನೆ ಎಂದು ನಂಬುವುದಕ್ಕಾಗುವುದಿಲ್ಲ. ಸಾಮಾನ್ಯವಾಗಿ ಯಾರೂ ದೈವ-ದೇವಸ್ಥಾನಗಳ ಕಳಸವನ್ನು ಮುಟ್ಟುವುದಿಲ್ಲ. ಹಾಗಿರುವಾಗ ಈತ ಮೆಟ್ಟಿದ್ದಾನೆ ಎನ್ನುವ ವಿಚಾರ ಸರಿ ಎನಿಸುವುದಿಲ್ಲ. ಇನ್ನು ಮಾಡಕ್ಕೆ ಮುಟ್ಟಿಕೊಂಡಿರುವ ಕೈಪುರದ ಹುಳಿಯನ್ನು ಕೊಯ್ದಿರುವ ಸಾಧ್ಯತೆ ಇದೆ.

copy rights reserved © ಡಾ. ಲಕ್ಷ್ಮೀ ಜಿ. ಪ್ರಸಾದ(ಭೂತಗಳ ಅದ್ಭುತ ಜಗತ್ತು ಕೃತಿಯ

 ಆಯ್ದ ಭಾಗ )
 ಆಗ ಮಾಡ ಅಶುದ್ಧವಾಯಿತೆಂದು ಮೇಲ್ವರ್ಗದವರು ಗಲಭೆ ಮಾಡಿ ಆಳುವ ಒಡೆಯನಿಗೆ ದೂರು ಹೋಗಿ, ಆ ಒಡೆಯ ಮೈರೆಯನ್ನು ಮೋಹಿಸಿದಾತನೇ ಆಗಿದ್ದು, ಈ ಕೊರಗ ತನಿಯನ ಮೇಲೆ ಸೇಡು ತೀರಿಸಿಕೊಂಡಿರುವ ಸಾಧ್ಯತೆ ಇದೆ. ಅಥವಾ ಮಾಡದ ಎದುರಿನಲ್ಲಿಯೇ ವರ್ಣವೈಷಮ್ಯದ ಗಲಭೆಯಾಗಿ ಕೊರಗ ತನಿಯ ದುರಂತವನ್ನಪ್ಪಿರುವ ಸಾಧ್ಯತೆ ಇದೆ. ಮರದಿಂದ ಅಥವಾ ಮಾಡದಿಂದ ಕಾಲುಜಾರಿ ಬಿದ್ದು ಸತ್ತಿರುವ ಸಾಧ್ಯತೆಯೂ ಇದೆ.

ತುಳುನಾಡಿನ ಸಂಪ್ರದಾಯದಂತೆ ಅಸಹಜ ಸಾವನ್ನಪ್ಪಿದ ಅಸಾಮಾನ್ಯ ಅಸಹಾಯ ಶೂರರು ದೈವತ್ವಕ್ಕೇರಿ ಆರಾಧಿಸಲ್ಪಡುವಂತೆ ಕೊರಗ ತನಿಯ ಕೂಡ ಆರಾಧಿಸಲ್ಪಡುತ್ತಿದ್ದಾನೆ. ತನಗೆ ಅನ್ಯಾಯ ಮಾಡಿದವರ ವಿರುದ್ಧ ಸೇಡು ತೀರಿಸುವ ಪ್ರಸ್ತಾಪ ಪಾಡ್ದನದಲ್ಲಿ ಎಲ್ಲಿಯೂ ಬರುವುದಿಲ್ಲ. ತಾನು ಮಾಯಾ ಸ್ವರೂಪ ಹೊಂದಿದ ನಂತರವೂ ಉಂಡ ಮನೆಗೂ ಊರಿಗೂ ಹಿತವನ್ನೇ ಮಾಡುತ್ತೇನೆ ಎಂಬ ಆತನ ಮಾತು ದೀರ್ಘಕಾಲ ಮನಸ್ಸಿನಲ್ಲಿ ನೆಲೆ ನಿಲ್ಲುತ್ತದೆ.

copy rights reserved © ಡಾ. ಲಕ್ಷ್ಮೀ ಜಿ. ಪ್ರಸಾದ(                                  ಕರಾವಳಿಯ ಸಾವಿರದೊಂದು ದೈವಗಳು  ಆಯ್ದ ಭಾಗ)ಈ ಪುಸ್ತಕದ ಮಾಹಿತಿಗಾಗಿ 9480516684 ಗೆ ಕರೆ ಅಥವಾ ವಾಟ್ಸಪ್ ಮೆಸೇಜ್ ಮಾಡಬಹುದು 



ಆಧಾರ : ತುಳು ಪಾಡ್ದನ ಸಂಪುಟ - ಡಾ ಅಮೃತ ಸೋಮೇಶ್ವರ,
ಭೂತಾರಾಧನೆ - ಒಂದು ಜಾನಪದೀಯ ಅಧ್ಯಯನ ಡ
- ಡಾ ಚಿನ್ನಪ್ಪ ಗೌಡ,
ತುಳು ಜನಪದ ಸಾಹಿತ್ಯ - ಡಾ ಬಿ ಎ ವಿವೆಕ ರೈ 


Saturday 30 September 2023

ನಾಗ / ಅರದರೆ ಚಾಮುಂಡಿ/ ಬೊಟ್ಟಿ ಭೂತ- ಡಾ.ಲಕ್ಷ್ಮೀ ಜಿ ಪ್ರಸಾದ್

                              


                                            ನಾಗ ಚಾಮುಂಡಿ /ಬೊಟ್ಟಿ ಭೂತ
ಸುಳ್ಯ ಪುತ್ತೂರು ಪರಿಸರದಲ್ಲಿ ಬೊಟ್ಟಿ ಭೂತಕ್ಕೆ ಆರಾಧನೆ ಇದೆ .ಇದು ಮೂಲತಃ ಜೈನ ಭೂತ .ಈ ದೈವ ಜೈನ ವ್ಯಕ್ತಿ ಎಂಬ ಬಗ್ಗೆ ಗುಲಾಬಿ ಅಜಲ್ತಿ ಅವರು ಸುಮಾರು ವರ್ಷ ಹಿಂದೆಯೇ ಮಾಹಿತಿ ನೀಡಿದ್ದರು .ಆದರೆ ಅದಕ್ಕಿಂತ ಹೆಚ್ಚಿನ ಮಾಹಿತಿ ಅವರಿಗೆ ತಿಳಿದಿರಲಿಲ್ಲ .ಹಾಗಾಗಿ ಈ ದೈವದ ಬಗ್ಗೆ ಮಾಹಿತಿ ಸಂಗ್ರಹಿಸಲು ಯತ್ನಿಸುತ್ತಾ ಇದ್ದೆ
ಇತ್ತೀಚಿಗೆ ಚೊಕ್ಕಾಡಿಗೆ ಆಟಿಡೊಂಜಿ ದಿನ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದಾಗ ಅಲ್ಲಿಗೆ ಹಿರಿಯ ಭೂತ ಕಟ್ಟುವ ಕಲಾವಿದರಾದ ಪೂವಪ್ಪ ಅಜಲರ ಪರಿಚಯವಾಯಿತು .
ಅವರು ಹೇಳುವಂತೆ ನಾಗ ಚಾಮುಂಡಿ ,ಗುಡ ಚಾಮುಂಡಿ ಮತ್ತು ಬೊಟ್ಟಿ ಭೂತ ಮೂರೂ ಒಂದೇ ದೈವದ ಬೇರೆ ಬೇರೆ ಹೆಸರುಗಳು.copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ
ಹಿಂದೆ ಮಾಣಿ ಯಲ್ಲಿ ಅಸಗಲರು/ ಅರದರರು ಎಂಬ ಜೈನ ಬಲ್ಲಾಳ ಅರಸರು ಇದ್ದರು .ಅವರು ಅವರ ಬೊಟ್ಟು ಗದ್ದೆಗೆ ಹುಲಿ ಮತ್ತು ಚಿರತೆಯನ್ನು ಕಟ್ಟಿ ಉಳುಮೆ ಮಾಡುತ್ತಾರೆ.ಆಗ ಅಲ್ಲಿ ಸುತ್ತು ಮುತ್ತ ಇದ್ದ ಮೂಲನಿವಾಸಿಗಳ ಗದ್ದೆಯಲ್ಲಿ ಉಳುಮೆ ಮಾಡುತ್ತಿದ್ದ ಎತ್ತು ಕೋನಗಳು ಹೆದರಿ ಓಡಿದವು .ಅಲ್ಲಿ ಮೂಲನಿವಾಸಿಗಳಾದ ಅಜಲರಿಗೂ ಜೈನ ಅರಸುಗಳಿಗೂ ವಿವಾದ ಉಂಟಾಗಿ ಹೋರಾಟವಾಯಿತು .© ಡಾ.ಲಕ್ಷ್ಮೀ ಜಿ‌ಪ್ರಸಾದ್ 
ಆಗ ಅಲ್ಲಿನ ಜೈನ ಅರಸು ನೆಲದಲ್ಲಿ ಹೂತು ಹೋದರು .ಆಗ ಅವರ ಬಲ ಗೈ ಬಂಟ ನಾಗಿದ್ದ ಕೋಚಾಳ್ವ ಬಂಟ ./ಕುಂಜಾಲ್ವ ಬಂಟ ಎಂಬಾತ ಅಯ್ಯೋ ನನಗಿನ್ನಾರು ಗತಿ ,ನನ್ನ ಹೊಟ್ಟೆ ಪಾಡು ಏನು ?ಎಂದು ದುಖಿಸುತ್ತಾನೆ .ಆಗ ನೆಲದ ಅಡಿಯಿಂದ ಗುಡ್ಡದ ತುದಿಯಲ್ಲಿರುವ ಕೊಪ್ಪರಿಗೆಯಲ್ಲಿರುವ ಚಿನ್ನ ಬೆಳ್ಳಿ ತೆಗೆದುಕೋ ಎಂದು ಅಶರೀರ ವಾಣಿ ಕೇಳಿಸಿತು .ಹಾಗೆ ಆಟ ಗುಡ್ಡದ ತುದಿಗೆ ಹೋಗಿ ಕೊಪ್ಪರಿಗೆ ಮುಟ್ಟಿದಾಗ ಅದು ಕಬ್ಬಿನವಾಗಿ ಬದಲಾಯಿತು .ಆಗ ಅವನು ಇನ್ನಷ್ಟು ರೋಧಿಸುತ್ತಾನೆ.ಆಗ ನಾನು ಅಲ್ಲಿ ಮಾಣಿಕ್ಯವಾಗಿ ಉದಿಸಿಬಂದಿದ್ದೇನೆ ನಂಬಿ ಆರಾಧಿಸು ಎಂದು ನುಡಿ ಕೇಳಿಸುತ್ತದೆ.ಅಂತೆ ಆತ ಅಲ್ಲಿ ದೈವತ್ವ ಪಡೆದ  ಜೈನ ಬಲ್ಲಾಳ ನನ್ನು ಆರಾಧಿಸುತ್ತಾನೆ .copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ
ಗುಡ್ಡೆಯ ಮೇಲೆ ಇರುವ ಕಾರಣ ಆ ದೈವಕ್ಕೆ ಗುಡ್ಡೆ ಚಾಮುಂಡಿ /ಗುಡ ಚಾಮುಂಡಿ ಎಂದು ಕರೆಯುತ್ತಾರೆ .ಗುಡ ಚಾಮುಂಡಿ ಸ್ತ್ರೀ ದೈವ್ತವಲ್ಲ ಪುರುಷ ರೂಪಿ ದೈವವೆಂದು ಈ ದೈವವನ್ನು ಆರಾಧಿಸುವ .  ಭರತ್ ಭಂಡಾರಿ ಪುತ್ತೂರು ಅವರು ಅಭಿಪ್ರಾಯಪಟ್ಟಿದ್ದಾರೆ © ಡಾ.ಲಕ್ಷ್ಮೀ ಜಿ‌ಪ್ರಸಾದ್ 
ನಾಗ ಚಾಮುಂಡಿ ದೈವಕ್ಕೆ ದೊಡ್ಡ ಮೀಸೆ ಇರುತ್ತದೆ ಇದು ಕೂಡ ಸ್ತ್ರೀ ದೈವವಲ್ಲ .
 ಬೊಟ್ಟಿ ಗದ್ದೆಯಲ್ಲಿ ಉದ್ಭವವಾದ ಕಾರಣ ಆತನನ್ನು ಬೊಟ್ಟಿ ಭೂತ ಎಂದು ಕರೆಯುತ್ತಾರೆ.ಇದನ್ನುನಾಗ ಭೂತ ಎಂದೂ ಕರೆಯುತ್ತಾರೆ ಎಂದು ಪೂವಪ್ಪ ಅವರು ಹೇಳಿದ್ದಾರೆ.ಅರದರೆ ಚಾಮುಂಡಿ ಎಂದೂ ಕರೆಯುತ್ತಾರೆ © ಡಾ.ಲಕ್ಷ್ಮೀ ಜಿ ಪ್ರಸಾದ್ 
ನಾಗ ಭೂತದ ಸಣ್ಣ ಸಂಧಿಯಲ್ಲಿ ಕೂಡ ಯಾರೋ ಐವರು ನೆಲದಲ್ಲಿ ಹೂತು ಹೋದ ಕಥಾನಕವಿದೆ .ಪಂಚ ಪಾಂಡವೆರ್ನೆಲಟ್ ತಾರಿಯೇರ್ ಐನು ಭೂತೊಳು ಮಿತ್ತು ಲಕ್ಕಿಯೇರ್ ಎಂಬಲ್ಲಿ ಸ್ಪಷ್ಟವಾಗುತ್ತದೆ .
ಒಂದು ಭೂತ ಇನ್ನೊಂದರೊಡನೆ ಸಮನ್ವಯ ಗೊಂದು ಆರಧಿಸ್ಸಲ್ಪದುವುದು ಸಾಮಾನ್ಯವಾದ ವಿಚಾರ ಅಂತೆಯೇ ಇಲ್ಲೂ ಆಗಿರಬಹುದು
ಕರಾವಳಿಯ ಸಾವಿರದೊಂದು ದೈವಗಳು ಗ್ರಂಥದ ಆಯ್ದ ಭಾಗ ,ಈ ಗ್ರಂಥದ ಮಾಹಿತಿಗಾಗಿ 9480516684 ಗೆ ಕರೆ ಅಥವಾ ವಾಟ್ಸಪ್ ಮೆಸೇಜ್ ಮಾಡಬಹುದು 
ಡಾ.ಲಕ್ಷ್ಮೀ ಜಿ ಪ್ರಸಾದ್ 

Friday 29 September 2023

Karavaliya saviradindu Daivagalu embodies very spirit of fascinating local culture*- Shloka Nayak


 *Karavaliya saviradindu  Daivagalu embodies very spirit of fascinating local culture*- Shloka Nayak 


Worshipping of daivas or spirits is at the heart of Tulunadu culture. Despite the passage of time and the introduction of the modern lifestyle, there lies an unwavering faith in these local deities amongst many. Dr. Lakshmi G. Prasad's book, 'Karavaliya saviradoñdu  Daivagalu' embodies the very spirit of this fascinating culture.


'Karavaliya saviradondu  Daivagalu' (Karavali's 1001 Deities) presents readers with an exhaustive list of the local spirits, deities and demigods along the coastal belt. The book also provides more information on each deity and includes pictures of the different daivas. "The book includes daivas ^ Karwar to Coorg to Kannur.

daivas. "The book includes daivas from Karwar to Coorg to Kannur. Since 60% of the daivas are from Tulunadu, I decided to use 'Karavali' in the book title, "Dr. Lakshmi G. Prasad, the author, said. Dr Lakshmi G. Prasad is a lecturer in Kannada at the Government Pre-University College in Byatarayanapura, Bengaluru. Dr .Lakshmi  has captured most of the photographs by herself.


Through the course of extensive research, Dr. Lakshmi has identified 2240 deities, many of which were unidentified and not found on record. Growing up in the village of Koliyoor in Kasaragod District, Kerala, Dr Prasad witnessed several Bhuta Kolas. Heavily interested in folklore, janapadas. A spirits, she leaned towards studying more about it while pursuing her M. Phil. "I came across two local deities from my hometown. But not many people knew much about these deities. Even my family members did not possess too much information about them. The books that I referred too did not include these local deities. This piqued my interest," Dr. Lakshmi narrated. Thus, what began as a study into local daivas spurred years-long research and the list of daivas kept adding up.


Starting in 2000, the book is Dr. Lakshmi's 20-year-long labour and intense efforts. Dr. Lakshmi  to juggle the full-time jobs of being a mother, a lecturer and a researcher. During this time, she also managed to finish two degrees. "Over 20 years, I have cont every spare moment working on this book. It has been a while since I last enjoyed a wedding or properly celebrated a holiday," said Dr. Lakshmi. "Despite the obstacles I had to overcome along this journey, it has still been a fruitful one. It has given me much joy and satisfaction. I am proud to have put the history down of Karavali on paper," she added.


Karavaliya 1001 Daivagalu embodies very spirit of fascinating local culture 1


Apart from 20 years of research and fieldwork, Dr.  Lakshmi spent a year writing the book itself. She also edited the book herself. The lockdown lent a helping hand in the completion of the book. "I decided to write this book for the purpose of knowledge gaining, not personal gain," she said. Dr.Prasad has also worked on a blog where she would share snippets of knowledge. She has not updated the blog for a year since she started working on the book. However, the blog still holds a wealth of information on Tulunadu culture.Speaking on the challenges she faced, Dr. Prasad said, "Compiling all the information and putting the names down in alphabetical order was a challenge. There are several divisions and subgroups, akin to the branches of a large tree. Describing these spirits individually is more convenient, but grouping them is no easy task." While she had to refer to several books and inscriptions throughout her time gathering information for the book, she also highlighted the lack of prior information on these local deities. "A majority of these daivas were unknown in general knowledge. Now, new researchers have a book for reference. "Another downside of research is that it doesn't pay and requires capital to carry out. "I would spend every earned leave, every holiday on research. Every year during mer vacation, I would go out summer vacation, I would go out with my camera and do fieldwork. The expenses are many including travel, stay and camera expenses. I am fortunate for the support of my family," she said.


Dr.Lakshmi commends the support of her family through her research. "My husband, son and brothers have helped me greatly in the completion of this book. My brothers helped me acquire the cameras I needed. My son would accompany me at 3 years of age and even help record information during my fieldwork."


"Although this has been largely a solo journey, by the grace of God, I have had assistance at every step of the way. Acquiring permission to record information, getting help from various people along this journey to carry out this labour- intensive research has shown me that the daivas' blessings are with me," said Dr. Prasad.

Thursday 28 September 2023

ನಾಗ ಮತ್ತು ಬೆರ್ಮೆರ್ ಬೇರೆ ಬೇರೆ ಶಕ್ತಿಗಳು: ಡಾ.ಲಕ್ಷ್ಮೀ ಜಿ ಪ್ರಸಾದ


 

ನಾಗ ಮತ್ತು ಬೆರ್ಮೆರ್ ಬೇರೆ ಬೇರೆ ಶಕ್ತಿಗಳು: ಡಾ.ಲಕ್ಷ್ಮೀ ಜಿ ಪ್ರಸಾದ ‌
ಬೆರ್ಮೆರ್ ತುಳುನಾಡಿನ ಅಧಿದೈವ ಆದ್ದರಿಂದಲೇ ತುಳುನಾಡಿನ ಆರಾಧನಾ ಸಂಕೀರ್ಣ ಗಳಾದ ಗರಡಿಗಳಲ್ಲಿ ಮುಗೇರ್ಕಳ ತಾಣಗಳಲ್ಲಿ ಆಲಡೆಗಳಲ್ಲಿ ಬೆರ್ಮೆರ್ ಗೆ‌ ಆರಾಧನೆ ಇದೆ.


ಹಿರಿಯ/ಪೆರಿಯ ಎಂಬ ಶಬ್ದ ಕಾಲಾಂತರದಲ್ಲಿ ಬೆರ್ಮೆರ್/ಬೆರ್ಮೆರ್ ಆಗಿದೆ .ಸುಬ್ರಹ್ಮಣ್ಯ ನಿಗೆ ಮಲೆಯಾಳದಲ್ಲಿ‌ ಹಿರಿಯ ಎಂಬರ್ಥ ಕೊಡುವ ಪೆರುಮಾಳ ಎಂದು ಕರೆಯುತ್ತಾರೆ. ಬೆರ್ಮೆರ್ ಶಬ್ದ ಸಂಸ್ಕೃತೀಕರಣಕ್ಕೆ ಒಳಗಾಗಿ ಬ್ರಹ್ಮ ಆಯಿತು .ಶೈವಾರಾಧನೆಯ ಪ್ರಭಾವ ದಿಂದ ಬ್ರಹ್ಮ ಲಿಂಗೇಶ್ವರ ಆಯಿತು - ಡಾ.ಲಕ್ಷ್ಮೀ ಜಿ ಪ್ರಸಾದ್ 

.ನಾಗಾರಾಧನೆ ವಿಶ್ವದ ಎಲ್ಲೆಡೆ ಇದೆ.ಕಾಡಿನಲ್ಲಿ ಬೆರ್ಮೆರ ತಾಣ/ಬ್ರಹ್ಮ ಸ್ಥಾನ ದಲ್ಲಿ ನಾಗನ ಆರಾಧನೆ ಯೂ ಆರಂಭವಾಯಿತು.ಕಾಲಾಂತರದಲ್ಲಿ ನಾಗ ಮತ್ತು ಬ್ರಹ್ಮ ರ ಸಮನ್ವಯವಾಗಿ ಈ ಎರಡೂ ಶಕ್ತಿ ಗಳನ್ನು ಒಟ್ಟಾಗಿ ಆರಾಧಿಸುವ ಸಂಪ್ರದಾಯ ಬೆಳೆಯಿತು- ಡಾ.ಲಕ್ಷ್ಮೀ ಜಿ ಪ್ರಸಾದ್ 

Friday 4 August 2023

ಆತ್ಮ‌ಕಥೆಯ ಬಿಡಿ ಭಾಗಗಳು ಅನುಭವ ಆಗಲು ಏನು ಮಾಡಬೇಕು ?

 ಆತ್ಮ‌ಕಥೆಯ ಬಿಡಿ ಭಾಗಗಳು 


ಅನುಭವ ಆಗಲು ಏನು ಮಾಡಬೇಕು ?


ಹೌದು..ಹೀಗೊಂದು ತಲೆಬಿಸಿ ಮಾಡ್ತಾ ಇದ್ದ ಕಾಲ ಒಂದಿತ್ತು..


ನಾನು ಎರಡನೆಯ ವರ್ಷ ಬಿಎಸ್ ಸಿ ಪದವಿ ಓದುತ್ತಿರುವಾಗಲೇ ನನಗೆ ಮದುವೆಯಾಯಿತು..ಚಿಕ್ಕಂದಿನಿಂದಲೂ ಬರವಣಿಗೆಯ ಹವ್ಯಾಸ ಇದ್ದ ನನ್ನ ಬರಹಗಳು ಒಂದೊಂದಾಗಿ ಹೊಸ ದಿಗಂತ ಉದಯವಾಣಿ ಮಂಗಳ ಮೊದಲಾದ ಪತ್ರಿಕೆಗಳಲ್ಲಿ ಪ್ತಕಟವಾಗತೊಡಗಿದ್ದವು..


ದಕ್ಷಿಣ ಕನ್ನಡದ ಹಿರಿಯ ಸಾಹಿತಿ ಗಂಗಾ ಪಾದೇಕಲ್ಲು ನನ್ನ ಗಂಡ ಪ್ರಸಾದರ ಸಂಬಂಧಿ..ಒಂದು ದಿನ ಯಾವುದೋ ಕೌಟುಂಬಿಕ ಕಾರ್ಯಕ್ರಮದಲ್ಲಿ ಭೇಟಿಯಾದವರು ನನ್ನ ಬರವಣಿಗೆಗೆ ಮೆಚ್ಚುಗೆ ಸೂಸಿ ಬರಹಕ್ಕೆ ಅನುಭವದ ತಳಹದಿ ಇದ್ದರೆ ಇನ್ನಷ್ಡು ಗಟ್ಟಿಯಾಗುತ್ತದೆ ಎಂದಿದ್ದರು


ಈ ಅನುಭವವನ್ನು ಪಡೆಯುವುದು ಹೇಗೆ ಎಂಬುದೊಂದು ತಲೆಬಿಸಿ ಶುರು ಆಯಿತು ನನಗೆ.ಚಿಕ್ಕಂದಿನಲ್ಲಿ ಶಾಲಾ ಪ್ರಬಂಧದಲ್ಲಿ  ಪ್ರವಾಸ ಮಾಡಿದರೆ ಬೇರೆ ಬೇರೆ ಊರಿನ ಜನರ ಸಂಸ್ಕೃತಿಯ ಪರಿಚಯ ಆಗುತ್ತದೆ.ಅನುಭವ  ದೊರೆಯುತ್ತದೆ ಎಂದು ಬರೆದಿದ್ದೆ.ಅದು ನೆನಪಾಯಿತು.


ನೆನಪಾಗಿಯೂ ಏನೂ ಪ್ರಯೋಜನವಿಲ್ಲದಾಯಿತು..

ಮೊದಲಿಗೆ ಪ್ರವಾಸ ಮಾಡುವಷ್ಟು ದುಡ್ಡು ನಮ್ಮಲ್ಲಿ ಇರಲಿಲ್ಲ.ಅಲ್ಲದೆ ನಾನು ವಿದ್ಯಾರ್ಥಿಯಾಗಿದ್ದು ಪ್ರವಾಸ ಹೋಗಲು ರಜೆಯದ್ದೂ ಸಮಸ್ಯೆಯೇ..ಎಲ್ಲಕ್ಕಿಂತ ಹೆಚ್ಚು ಟ್ರಾವೆಲಿಂಗ್ ಸಿಕ್ ನೆಸ್ ಇರುವ ನನಗೆ ಪ್ರವಾಸ ಬಹಳ ಪ್ರಯಾಸವಾಗಿ ಪರಿಣಮಿಸುತ್ತದೆ.ಹಾಗಾಗಿ ಪ್ರವಾಸದತ್ತ ನನಗೆ ಒಲವಿರಲಿಲ್ಲ..


ಆದರೆ ಹಿರಿಯ ಸಾಹಿತಿ ಗಂಗಾ ಪಾದೇಕಲ್ಲು ಅವರು ಹೇಳಿದ  ಮಾತು ಸದಾ ಕೊರೆಯುತ್ತಿತ್ತು.ಅನುಭವ ಇಲ್ಲದೆ ಬರಹ ಗಟ್ಟಿತನ ಹೊಂದುದಿಲ್ಲ ಎಂದು..


ಹಾಗೆಂದು ನಾನು ಪ್ರವಾಸ ಹೋಗಿಯೇ ಇಲ್ಲವೆಂದಲ್ಲ..ಸುಮಾರು 25-26 ವರ್ಷಗಳ ಮೊದಲು ನಿಜಾಮುದ್ದೀನ್ ನಲ್ಲಿ ನಡೆದ ರಾಷ್ಟ್ರ ಸೇವಿಕ ಸಂಘದ ಸಮ್ಮೇಳನದಲ್ಲಿ ಭಾಗವಹಿಸಲು ಹೋಗಿದ್ದೆ.ಹಾಗೆ ಹೋದವರೆಲ್ಲ ಅಗ್ರ ಡೆಲ್ಲಿ ಹರಿದ್ವಾರ ಹೃಷಿಕೇಶ ಕಾಶಿ ಮೊದಲಾದೆಡೆ ಮೂರು ನಾಲ್ಕು ದಿನ ಸುತ್ತಾಡಿ ಬಂದಿದ್ದೆವು


ಅಂತೆಯೇ ಬೆಂಗಳೂರಿನ ಎಪಿಎಸ್ ಕಾಲೆಜಿನಲ್ಲಿ ಉಪನ್ಯಾಸಕಿಯಾಗಿದ್ದಾಗ ಡಿಡಿ 1 ಚಾನೆಲ್ ನವರು ಆಯೋಜಿಸಿದ್ದ ಖೇಲ್ ಖೇಲ್ ಮೇ ಬದಲೋ ದುನಿಯ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಡೆಲ್ಲಿಗೆ ಕರೆದುಕೊಂಡು ಹೋಗಿದ್ದೆ.ಆಗಲೂ ಒಂದಿನಿತು ಸುತ್ತಾಡಿದ್ದೆವು


ನಂತರವೂ ಪ್ರಬಂಧ ಮಂಡನೆಗೆ ಅಹ್ವನಿತಳಾಗಿ ಭಾರತೀಯಾರ್ ಯೂನಿವರ್ಸಿಟಿ,ಗಾಂಧಿ ಗ್ರಾಮ ? ಕೊಯಂಬತ್ತೂರು ಏಲಾಗಿರಿ ಮೊದಲಾದೆಡೆ ಹೋಗಿದ್ದು ಅಲ್ಲೂ ಸುತ್ತ ಮುತ್ತ ಸ್ವಲ್ಪ ತಿರುಗಾಡಿ ಬಂದಿರುವೆ


ಆದರೆ ಈ ಪ್ರವಾಸಗಳು ಯಾವುವೂ ನನಗೆ ಅಂಥಹ ದೊಡ್ಡ ಅನುಭವವನ್ನು ತುಂಬಿ ಕೊಡಲಿಲ್ಲವೇನೋ ಎಂದೆನಿಸ್ತದೆ


ಪ್ರವಾಸಗಳು ಅನುಭವವನ್ನು ತುಂಬಿ ಕೊಡದಿದ್ದರೂ ಬದುಕು ಮೂಟೆ ಮೂಟೆಯಾಗಿ ನಾನಾವಿಧವಾದ ಅನುಭವಗಳನ್ನು ತುಂಬಿಕೊಟ್ಟಿದೆ.

ಒಂದೊಂದು ಯೂನಿವರ್ಸಿಟಿಗೆ ಸಂದರ್ಶನಕ್ಕೆ ಹೋದಾಗ ಒಂದೊಂದು ಅನುಭವ..ನನಗೆ ಪರಿಚಯವೇ ಇಲ್ಲದವರೂ ವಿನಾಕಾರಣ ದ್ವೇಷ ಕಾರುವ ಪರಿಯಂತೂ ನನಗೆ ಅಚ್ಚರಿ ತಂದಿದೆ


ನಾನು ಯಾರ ಸುದ್ದಿಗೂ ಹೋಗದೆ ನನ್ನದೇ ವೃತ್ರಿ ಪ್ರವೃತ್ತಿ ಯಾಗಿ ಬರವಣಿಗೆಯ ಲೋಕದಲ್ಲಿ ಇರುವವಳು


ಆದರೆ ಅದೇ ಕಾರಣಕ್ಕೆ ಸ್ವಕೀಯರಿಂದ ಹಾಗೂ ಪರಕೀಯರಿಂದ ಮತ್ಸರದ ನಡೆಯನ್ನು ಎದುರಿಸಿದೆ..


ಇನ್ನು ಪುಸ್ತಕ ಬರೆಯುವುದು ಪ್ರಕಟಿಸುವುದು ಒಂದು ಚಾಲೆಂಜ್ ಅಗಿದ್ದರೆ ಬಿಡುಗಡೆಯದೇ ಒಂದು ಅನುಭವ


ಕೆಲವರಿಗೆ ಬರಹಗಾರರ ಬಗ್ಗೆ ಎಷ್ಟು ಮತ್ಸರ ಅಹಸನೆ ಇದೆ ಎಂಬುದರ ಅರಿವಾಗ ಬೇಕಾದರೆ ಪುಸ್ತಕ ಬರೆದೇ ಆಗಬೇಕು..

ಬೆಂಗಳೂರು ಹವ್ಯಕ ಸಭೆಯ ಸಂಸ್ಥಾಪಕರಾದ ಮೇಣ ರಾಮಕೃಷ್ಣ ಭಟ್ ಅವರ ಸಂಸ್ಮರಣಾ ಸಮಾರಂಭದಲ್ಲಿ ನನ್ನ ದೈವಿಕ ಕಂಬಳ ಕೋಣ ಎಂಬ ಪುಸ್ತಕ ಮಲ್ಲೇಪುರಂ ವೆಂಕಟೇಶ್ ಅವರಿಂದ ಬಿಡುಗಡೆಯಾಯಿತು..ಇಲ್ಲಿನದೊಂದು ದೊಡ್ಡ ಕಥೆಯೇ ಇದೆ


ಇದಾದ ನಂತರ ಚೊಕ್ಕಾಡಿಯಲ್ಲಿ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳ ಹಸ್ತದಿಂದ ನನ್ನ ಐದು ಪುಸ್ತಕಗಳು ಬಿಡುಗಡೆಯಾದವು..ಇಲ್ಲಿನದು ಮತ್ತೊಂದು ಕಥೆ

ಈ ನಡುವೆ ನನ್ನ ಎರಡು ಪುಸ್ತಕಗಳು ತುಳು ಅಕಾಡೆಮಿಯಲ್ಲಿ ಕಲ್ಲಡ್ಕ ಡಾ.ಕಮಲಾ ಭಟ್ ಅವರಿಂದ ಬಿಡುಗಡೆಯಾದವು..ಅಲ್ಲಿನದೂ ಮತ್ತೊಂದು ಕಥೆ


2021 ರಲ್ಲಿ ನನ್ನ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕ ಮತ್ತೆ ಬೆಂಗಳೂರಿನಲ್ಲಿ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಯವರ ದಿವ್ಯ ಹಸ್ತದಿಂದ ಬಿಡುಗಡೆಯಾಯಿತು..ಈ ಬಗ್ಗೆ ಕನ್ನಡ ಪ್ರಭ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ವರದಿ ಪ್ರಕಟವಾಯಿತು.ಇಲ್ಲಿ ಸಭೆಯಲ್ಲಿದ್ದ ಯಾರೋ ಒಬ್ಬ ಮತ್ಸರಿಯ ಕುತಂತ್ರದಿಂದ ತಪ್ಪೇ ಮಾಡದ ಓರ್ವ  ಪತ್ರಕರ್ತರಿಗೆ ತುಂಬಾ ತೊಂದರೆ ಆಯಿತು..


ಇನ್ನು ವೃತ್ತಿ ಜೀವನದಲ್ಲೂ ನಾನಾ ಅನುಭವಗಳು..ಸಿಹಿ ಕಹಿ ಎರಡೂ ಅನುಭವಗಳೇ..

ಓದುವಾಗಲೂ ಒಂದೊಂದು ಅನುಭವ..


ನಾನು ಕಾಲೇಜಿಗೆ ಸೇರುವ ವರೆಗೆ ಪೋಲೀಸರನ್ನು ನೋಡಿರಲಿಲ್ಲ‌‌.ಸಿನೇಮವನ್ನೂ ಆ ವರೆಗೆ ನೋಡಿರದ ಕಾರಣ  ಪೋಲೀಸರ ಬಗ್ಗೆ ತಿಳಿದೇ ಇರಲಿಲ್ಲ..ಬೆಂಗಳೂರಿಗೆ ಬರುವವರೆಗೆ ಎಂದರೆ ನನಗೆ 35 ವರ್ಷ ಆಗುವವರೆಗೆ ನನಗೆ ಪೊಲೀಸ್ ಸ್ಟೇಶನ್ ,ಹೇಗಿರುತ್ತದೆ  ಕೋರ್ಟು ಹೇಗಿರುತ್ತದೆ ? ನ್ಯಾಯಾಧೀಶರು ಹೇಗಿರ್ತಾರೆ ಎಂಬ ಕಲ್ಪನೆಯೂ ಇರಲಿಲ್ಲ..


ನಿದಾನಕ್ಕೆ ಬದುಕು ಎಲ್ಲವನ್ನೂ ತೋರಿಸಿಕೊಟ್ಟಿತು. ಉಡುಪಿಯ ಬಹುಜನ ಹಿತಾಯ ವೇದಿಕೆಯ ಡಾ.ರವೀಂದ್ರನಾಥ ಶಾನುಭಾಗರಿಂದ ಅನ್ಯಾಯದ ವಿರುದ್ದ ನ್ಯಾಯಯುತವಾಗಿ ಹೋರಾಡಲು ಪ್ರೇರಣೆ ಪಡೆದೆ..

ಜಗತ್ತಿಡೀ ಅನ್ಯಾಯಕ್ಕೊಳಗಾದವರು ತುಂಬಾ ಜನ ಇದ್ದಾರೆ.ಅವರೆಲ್ಲರ ಪರ ಹೋರಾಡಲು ಸಾಧ್ಯವಿಲ್ಲದಿದ್ದರೂ ಕೊನೆಯ ಪಕ್ಷ ನನಗೆ ಕಿರುಕುಳ ಕೊಟ್ಟವರ ವಿರುದ್ಧ ಹೋರಾಡಲು ಕಲಿತೆ..

ಪೋಲೀಸರ ಭ್ರಷ್ಟಾಚಾರದ ಅರಿವಾಯಿತು..ರಕ್ಷಕರೇ ಭಕ್ಷಕರಾದರೆ ಸಾಮಾನ್ಯ ಜನರಿಗೆ ಬದುಕು ಬಹಳ ಕಷ್ಟಕರ ಎಂದೆನಿಸ್ತದೆ

ಬಸವಣ್ಣನವರು ಒಲೆ ಹತ್ತಿ ಉರಿದರೆ ನಿಲಲುಬಹುದಲ್ಲದೆ ಧರೆ ಹತ್ತಿ ಉರಿದರೆ ನಿಲಲು ಬಾರದು ಎಂದು 12 ನೆಯ ಶತಮಾನದಲ್ಲಿ ಹೇಳಿದ್ದರ ನಿಜವಾದ ಅರ್ಥ ಗೊತ್ತಾಯಿತು


ಆದರೆ ಕೊಲ್ಲುವ ಪಿಶಾಚಿಗಳಿಗಿಂತ ಕಾಯುವ ದೇವರು ದೊಡ್ಡವನು..ಇನ್ನೇನು ಸೋತು ಹೋಗುವೆ ಎನ್ನುವಷ್ಟರಲ್ಲಿ ಏನೋ ಒಂದು ಬೆಳಕು ಎಲ್ಲಿಂದಲೋ  ಬಂದು ರಕ್ಷಿಸುತ್ತದೆ 


ಭವಿತವ್ಯಾಣಿ ದ್ವಾರಾಣಿ ಭವಂತಿ ಸರ್ವತ್ರ..ಆಗಲೇ ಬೇಕಾದವುಗಳಿಗೆ ಎಲ್ಲೆಡೆ ಬಾಗಿಲುಗಳು ಇರುತ್ತವೆ ಎಂದು ಕಾಳಿದಾಸ ಹೇಳಬೇಕಾಗಿದ್ದರೆ ಅವನಿಗೂ ಬದುಕಿನಲ್ಲಿ ಇಂತಹ  ಅಪಾರ ಅನುಭವಗಳು ಆಗಿದ್ದಿರಬೇಕು.


ಈಗ ಅಂದು ಗಂಗಾ ಪಾದೇಕಲ್ಲು ಅವರು ಹೇಳಿದ ಅನುಭವ ಆಗಬೇಕು ಆಗ ಬರಹ ಗಟ್ಟಿಯಾಗುತ್ತದೆ ಎಂದ ಮಾತಿನ ಸರಿಯಾದ ಅರ್ಥ ಆಗುತ್ತಿದೆ


ಅನುಭವ  ಎಲ್ಲೋ ಎಲ್ಲಿಂದಲೋ ಆಗುವದಲ್ಲ..ಬದುಕಿಗೆ ನಾವು ತೆರೆದುಕೊಂಡರೆ ಅದಾಗಿಯೇ ಆಗುತ್ತದೆ 

ಇನ್ನೂ ಆಗುವದ್ದು ತುಂಬಾ ಇರಬಹುದು


ನನ್ನ ಅನುಭವಗಳೆಲ್ಲವೂ ಕಹಿಯಾದುದಲ್ಲ..ಅದರಲ್ಕಿ ಕಹಿಗಿಂತ ಸಿಹಿಯಾದ ಸಂಭ್ರಮವೇ ಹೆಚ್ಚಿದೆ.ಕೆಲವು ಕಹಿ ಅನುಭವಗಳೂ  ಇವೆ


ನಾನು ಉಪನ್ಯಾಸಕಿಯಾದ ಕಾರಣ ಇರಬೇಕು..ನಾನು ಸದಾ ವಿದ್ಯಾರ್ಥಿಗಳ ಗೆಲುವನ್ನು ಸಂಭ್ರಮಿಸುತ್ತೇನೆ.ಅವರಿಗೆ ಬಾಷಣ ಪ್ರಬಂಧ ನಾಟಕ ಹೇಳಿಕೊಟ್ಟು ವೇದಿಕೆಯಲ್ಲಿ ಪ್ರಸ್ತುತ ಪಡಿಸಿ ಅವರ ಜೊತೆ ನಾನೂ ಸಂಭ್ರಮಿಸುತ್ತೆವೆ.ಪ್ರರಿ ವರ್ಷ ಹೊಸ ಹೊಸ ವಿದ್ಯಾರ್ಥಿಗಳು..ಹೊಸ ಹೊಸ ಅನುಭವಗಳು..ಇವರಿಗಾಗಿಯೇ ನಾಟಕ ಬರೆದು ನಾಟಕಗಾರ್ತಿ ಎನಿಸಿಕೊಂಡೆ..ನಾಟಕ ರಚನೆಯ ಬಗ್ಗೆ ಏನೊಂದೂ ಮಾಹಿತಿ ಇರದಿದ್ದರೂ ಏನೋ ನನಗರಿತಂತೆ ಬರೆದೆ .ನಿರ್ದೇಶನದ ಗಂಧ ಗಾಳಿ‌ಇರದಿದ್ದರೂ ಏನೋ ಒಂದು ನನಗರಿತಂತೆ ಮಕ್ಕಳಿಗೆ ಹೇಳಿಕೊಟ್ಟೆ..ಕೆಲವು ಬಹುಮಾನಗಳೂ ಬಂದವು..


ನನಗನಿಸಿದ್ದನ್ನು ಬರೆದು ಪತ್ರಿಕೆಗೆ ಕಳುಹಿಸಿ ಪ್ರಕಟವಾಗಿ ನಾನೂ ಒಬ್ಬ ಲೇಖಕಿ ಎನಿಸಿಕೊಂಡೆ.ನನ್ನ ಬ್ಲಾಗ್ ಬರಹಗಳ ಹೊರತಾಗಿಯೂ   ಮುನ್ನೂರರಷ್ಟು ನನ್ನ ಬರಹಗಳು ಬೇರೆ ಬೇರೆ ಪತ್ರಿಕೆಗಳಲ್ಲಿ  ವೆಬ್ ಪೋರ್ಟರ್ ಗಳಲ್ಲಿ  ಪ್ರಕಟವಾಗಿವೆ 25 ಪುಸ್ತಕಗಳೂ ಪ್ರಕಟವಾಗಿವೆ .ಬ್ಲಾಗ್ ನಲ್ಲಿ ಸಾವಿರಕ್ಕಿಂತ ಹೆಚ್ಚು ಬರಹಗಳಿವೆ

ಸುಮಾರು ಐದೂವರೆ ಲಕ್ಷ ಓದುಗರೂ ಇದ್ದಾರೆ 

ಕಣ್ಣಿಗೇ ಕಾಣಿಸದ ಸಾವಿರಾರು ಮಂದಿ ಹಿತೈಷಿಗಳಿದ್ದಾರೆ.ಅಂತೆಯೇ ಪರಿಚಯವೇ ಇಲ್ಲದಿದ್ದರೂ ದ್ವೇಷ ಸಾಧಿಸುವ ಕೆಲ ಜನರೂ ಇದ್ದಾರೆ.

ಡಾ

ಗಣೇಶಯ್ಯನರ ಕಾದಂಬರಿ ಬಳ್ಳಿ ಕಾಳಬೆಳ್ಳಿಯಲ್ಲಿ ಒಮದು ಪ್ರಮುಖ ಪಾತ್ರವಾಗಿ ಲಕ್ಷ್ಮೀ ಪೋದ್ದಾರ್ ಹೆಸರಿನ ನಿಜ ಪಾತ್ರವಾಗಿ ನನ್ನದೇ ತುಳು ಅಧ್ಯಯನದ ವಿಚಾರಗಳನ್ನು ಪ್ರಸ್ತುತ ಪಡಿಸುವ ವಿಶಿಷ್ಟ ಅನುಭವ ನನ್ನದಾಗಿದೆ 


ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕದ ಸಾವಿರಕ್ಕಿಂತ ಹೆಚ್ಚಿನ ಪುಟಗಳನ್ನು ತಿರುವಿ ಹಾಕುವಾಗ ಇದೆಲ್ಲ ನಾನು ಬರೆದದ್ದಾ ಎಂಬ ಅಚ್ಚರಿ ನನಗಾಗುತ್ತದೆ


ದೈವ ಕೃಪೆ ಎಂದರೆ ಇದೇ ಇರಬೇಕೆನಿಸುತ್ತದೆ..

ಮನುಷ್ಯ ಪ್ರಯತ್ನವನ್ನೇ ನಂಬಿದ್ದವಳು ನಾನು..ಆದರೂ ಮಂಗಳೂರು ಯೂನಿವರ್ಸಿಟಿಯ ಕನ್ನಡ ವಿಭಾಗದಲ್ಲಿ ನಡೆದ ನೇಮಕಾತಿಯ ಅಕ್ರಮ ಅನ್ಯಾಯದ ವಿರುದ್ದ ಸುಪ್ರೀಂ ಕೋರ್ಟಿನ ವರೆಗೂ ಹೋಗಿ ಸ್ಪಷ್ಟ ದಾಖಲೆ ಇದ್ದಾಗಲೂ ಸೋತ ನಂತರ ಮನುಷ್ಯ ಯತ್ನವನ್ನು ಮೀರಿದ ಏನೋ ಒಂದು ಇದೆ ಎಂಬುದು ನನ್ನ ಅರಿವಿಗೆ ಬಂದಿದೆ.ಅದು ತನಕ ನಾನು ಅದೃಷ್ಟ ದುರದೃಷ್ಟ ಎಂಬುದನ್ನು ಒಪ್ಪಿದವಳೇ ಅಲ್ಲ

ತೇನ ವಿನಾ ತೃಣಮಪಿ ನ ಚಲತಿ ಎಂಬಂತೆ ಎಲ್ಲವೂ ಅವನ ಅಣತಿಯಂತೆಯೇ ನಡೆಯುತ್ತದಾ ? 

ನನಗೆ ಗೊತ್ತಿಲ್ಲ..

ತೀರ ಸಣ್ಣ ವಯಸ್ಸಿನಲ್ಲಿಯೆ ಕ್ಯಾನ್ಸರ್ ನಂತಹ ಮಾರಕ ರೋಗಕ್ಕೆ ತುತ್ತಾಗಿ ಈ ಜಗತ್ತಿನಿಂದ ನಿರ್ಗಮಿಸಿದ ಸಹಪಾಠಿಗಳನ್ನು ಸಂಬಂಧಿಕರ  ನೆನಪಾದಾಗ ಐವತ್ತು ತಲುಪಿಸಿದ ದೇವರಿಗೆ ಕೃತಜ್ಞತೆಯನ್ನು  ಅರ್ಪಿಸಬೇಕು ಎಂದು  ನೆನಪಾಗುತ್ತದೆ 


ಹದಿನೈದು ವರ್ಷಗಳ ಹಿಂದೆ ನನಗೆ ಸರಿಯಾದ ಕೆಲಸವಿಲ್ಲ ಎಂದು ತಲೆಕೆಡಿಸಿಕೊಂಡಿದ್ದೆ.ವಯಸ್ಸು ಮೀರುತ್ತದೆ ಎಂಬ ಆತಂಕ ಕಾಡುತ್ತಿತ್ತು.ಅಂತೂ ನಾನು ಬಯಸಿದ ಸರ್ಕಾರಿ ಕಾಲೇಜು ಉಪನ್ಯಾಸಕ ಹುದ್ದೆ ದೊರೆತು ಹದಿನೈದು ವರ್ಷಗಳಾಗುತ್ತಾ ಬಂತು.ನನ್ನ ಕನಸಿನಂತೆ ಯಥೇಚ್ಛವಾಗಿ  ಭೂತ ಕೋಲ ರೆಕಾರ್ಡ್ ಮಾಡಿ ಅಧ್ಯಯನ ಮಾಡುದಕ್ಕಾಗಿಯೇ  ಬೆಳ್ಲಾರೆ ಕಾಲೇಜನ್ನು ಆಯ್ಕೆ ಮಾಡಿದೆ 

ಅದರ ಫಲ ರೂಪವಾಗಿ  ಕರಾವಳಿಯ ಸಾವಿರದೊಂದು ದೈವಗಳು ಗ್ರಂಥ ಯಶಸ್ವಿಯಾಗಿದೆ 


ಇನ್ನು ಹತ್ತು ವರ್ಷಗಳ ಸರ್ವಿಸ್ ಇದೆ ನಂತರ ಮತ್ತೆ ಭೂತಾರಾಧನೆಯ ಅದ್ಯಯನ ಮುಂದುವರಿಸಬೇಕೆಂದಿರುವೆ


ಮುಂದಿನದು ದೈವ ಚಿತ್ತ..


ಡಾ.ಲಕ್ಷ್ಮೀ ಜಿ ಪ್ರಸಾದ್

Tuesday 25 April 2023

ನನ್ನೊಳಗೂ ಒಂದು ಆತ್ಮವಿದೆ..3 ಮಾನವೀಯತೆ ಮೆರೆದ ಪ್ರೇಮನಾಥ್ -3

 ನನ್ನೊಳಗೂ ಒಂದು ಆತ್ಮವಿದೆ..3


ಮಾನವೀಯತೆ ಮೆರೆದ ಪ್ರೇಮನಾಥ್ -3


 ಬಜಾಜ್ ಸ್ಪಿರಿಟ್ ನಲ್ಲಿ ಒಂದು ತಿಂಗಳು ಒಬ್ಬಳೇ ಓಡಾಡಿ ಅಭ್ಯಾಸವಾದ ನಂತರ ‌ಮಗನನ್ನು ಕೂರಿಸಿಕೊಂಡು ಓಡಾಡಲು ಶುರು ಮಾಡಿದೆ‌‌.ನಿದಾನಕ್ಕೆ ಡಬಲ್ ರೈಡ್ ಕೂಡ ಅಭ್ಯಾಸವಾಯಿತು.

ಈ ನಡುವೆ ಮಗನನ್ನು ಸಂಜೆ ಬೇಬಿ ಸಿಟ್ಟಿಂಗ್ ಗೆ ಬಿಡುವ ಬದಲು ಒಬ್ಬ ಹುಡುಗಿಯನ್ನು ಮನೆಗೆ ಬಂದು ನೋಡಿಕೊಳ್ಳುವಂತೆ ವ್ಯವಸ್ಥೆ ಮಾಡಿದ್ದೆ.ಅವಳು ಮಗ ಹಗಲಿ‌ನ ಹೊತ್ತು ಇರುತ್ತಿದ್ದ ಬೇಬಿ ಸಿಟ್ಟಿಂಗ್ / ಪ್ರಿಸ್ಕೂಲ್ ನಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು.

ಹಾಗಾಗಿ  ಮೂರು ಗಂಟೆಗೆ ಚಿನ್ಮಯ ಶಾಲೆ ಬಿಟ್ಟ ನಂತರ ಮಗ ಮತ್ತು ಆ ಹುಡುಗಿ ಇಬ್ಬರನ್ನು ಗಾಡಿಯಲ್ಲಿ ಕೂರಿಸಿ ಮನೆಗೆ ಕರೆ ತರುತ್ತಾ ಇದ್ದೆ .

ಒಂದು ದಿನ ಹೀಗೆ  ಒಳಗಿನ  ಸಣ್ಣ ರಸ್ತೆಯಲ್ಲಿ  ಬರುತ್ತಿರುವಾಗ ಎದುರಿನಿಂದ  ಡ್ರೈವಿಂಗ್ ಕಲಿಯುತ್ತಿರುವವರ ಕಾರು ರಾಂಗ್ ಸೈಡಿನಿಂದ ಬಂತು.ಆಗ ಅದನ್ನು ತಪ್ಪಿಸುವ ಸಲುವಾಗಿ ತೀರಾ ಬದಿಗೆ ಹೋಗಿ ಸಮತೋಲನ ತಪ್ಪಿ ಬಿದ್ದೆ.ಮಗನನ್ನು ಮುಂದೆ ಕೂರಿಸಿದ್ದು ಅವನ ಎದುರುಗಡೆ ಅವನ ಊಟದ ಬ್ಯಾಗ್ ಇತ್ತು‌.ಅದು ಅವನ ಕಣ್ಣಿನ ಕೆಳಭಾಗಕ್ಕೆ ತಾಗಿ ದೊಡ್ಡ ಗಾಯವಾಗಿ ರಕ್ತ ಸುರಿಯತೊಡಗಿತು.ಮಗನ ತಲೆ ನನ್ನ ಹೊಟ್ಟೆಗ ತಾಗಿ ನನಗೂ ತುಂಬಾ ನೋವಾಗಿ ತಲೆ ಸುತ್ತುತ್ತಾ ಇತ್ತು.ಹಿಂದೆ ಕುಳಿತಿದ್ದ ಸಹಾಯಕಿ ಹುಡುಗಿಗೆ ಕಾಲಿಗೆ ಏಟು ಬಿದ್ದಿತ್ತು. ಆದರೆ ನನಗಿಂಗ ಒಳ್ಳೆಯ ಸ್ಥಿತಿ ಯಲ್ಲಿ ಇದ್ದಳು.ಅವಳು ಎದ್ದು ಮಗನನ್ನು ಎತ್ತಿಕೊಂಡಳು‌.ಕಾರಿನವರು ಹಿಂದೆ ನೋಡದೆ ಒಂದು ಕ್ಷಣ ಕೂಡ ನಿಲ್ಲಿಸದೆ ಹೊರಟು ಹೋಗಿದ್ದರು‌.ನಾವು ಬಿದ್ದಲ್ಲಿ ಸಮೀಪವೇ ಒಂದು ಸಣ್ಣ ತೊರೆ ಇತ್ತು.ಅದರ ಆ ಕಡೆಗೆ ಒಂದು ಮನೆ ಇತ್ತು.ನನ್ನ ‌ಮಗನ ಅಳು ಕೇಳಿದ ಅವರು ಕಾಲು ಪಾಪು( ಮರದ ಸಂಕ) ದಾಟಿ ಓಡಿ ಬಂದರು.ಅದು ತನಕ ಅವರ ಪರಿಚಯ ನನಗಿರಲಿಲ್ಲ.ಅವರು ಮಗನ ಕಣ್ಣಿನ ಕೆಳಭಾಗದ ಗಾಯ ನೋಡಿ ಕೂಡಲೇ ಹತ್ತಿರದ ವಿನಯ ಕ್ಲಿನಿಕ್ ಹಾಸ್ಪಿಟಲ್ ಗೆ ಹೋಗಲು ತಿಳಿಸಿದರು‌.ಆಗ ನಾನು ತುಸು ಹಿಂದೆ ಮುಂದೆ ನೋಡಿದೆ‌.ಯಾಕೆಂದರೆ ನನ್ನ ಬಳಿ ಹತ್ತು ಹದಿನೈದು ರುಪಾಯಿ ಮಾತ್ರ ಇತ್ತು ಅಷ್ಟೇ. ಅದನ್ನು ಅರ್ಥ ಮಾಡಕೊಂಡ ಪ್ರೇಮನಾಥ್ ( ಹೆಸರು ಸರಿಯಾಗಿ ನೆನಪಿಲ್ಲ, ಪ್ರೇಮನಾಥ್ ಎಂದು ನೆನಪು) ಅವರು ಅವರ ಮನೆಗೆ ಹೋಗಿ ಐದುನೂರು ರುಪಾಯಿ ನನಗೆ ತಂದು ಕೊಟ್ಟು ಒಂದು ಆಟೊ ತಂದು ನಮ್ಮ ಮೂವರನ್ನು ಆಟೊ ಹತ್ತಿಸಿ ಆಸ್ಪತ್ರೆಗೆ ಕಳಹಿಸಿಕೊಟ್ಟರು.

ಮಗನಿಗೆ ಸ್ಟಿಚ್ ಹಾಕಬೇಕಾಯಿತು‌.ನನಗೆ ಮತ್ತು ಸಹಾಯಕ ಹುಡುಗಿಗೆ ಪ್ರಥಮ ಚಿಕಿತ್ಸೆ ನೀಡಿದರು.ನಂತರ ಆಸ್ಪತ್ರೆ ಯಿಂದ ನಾನು ಹಸ್ಬೆಂಡ್ ಕೆಲಸ ಮಾಡುವ ಆಫೀಸಿಗೆ ಫೋನ್ ಮಾಡಿ ವಿಷಯ ತಿಳಿಸಿದೆ( ಆಗಿನ್ನೂ ಮೊಬೈಲ್ ನಮ್ಮ ಬಳಿ ಇರಲಿಲ್ಲ) ಅವರು ಬಂದರು .ಮತ್ತೆ ಮನೆಗೆ ಬಂದೆವು.ಮರುದಿನವೇ ಪ್ರೇಮನಾಥ್ ಅವರ ಮನೆಗೆ ಹೋಗಿ ಅವರು ಕೊಟ್ಟ ದುಡ್ಡನ್ನು ಹಿಂದಿರುಗಿಸಿ ಧನ್ಯವಾದಗಳನ್ನು ತಿಳಿಸಿದೆ.ಆಗ ಅವರು "ದುಡ್ಡನ್ನು ಇಷ್ಟು ಅರ್ಜೆಂಟಲ್ಲಿ ಕೊಡ ಬೇಕಾಗಿರಲಿಲ್ಲ, ಥ್ಯಾಂಕ್ಸ್ ಯಾಕೆ? ನಾವು ಮನುಷ್ಯರು ಪರಸ್ಪರ ಸಹಾಯಕ್ಕೆ ಬಾರದಿದ್ದರೆ ಮನುಷ್ಯರೆಂದು ಕರೆಯಲು ನಾಲಾಯಕ್ ಆಗಿ ಬಿಡುತ್ತೇವೆ‌‌.ಸಧ್ಯ  ನಿಮಗೆ‌ ಮೂವರಿಗೆ ದೊಡ್ಡ ಏಟೇನೂ ಬಿದ್ದಿಲ್ಲವಲ್ಲ ದೇವರ ದಯೆ.ಮುಂದೆ ಇನ್ನೂ ಜಾಗ್ರತೆಯಿಂದ ಗಾಡಿ ಓಡಿಸಿ "ಎಂದು ಹೇಳಿದರು‌.ಅವರ ಮನೆ ಮಂದಿ ಕೂಡ ನಮ್ಮ ಆರೋಗ್ಯ ವಿಚಾರಿಸಿ ಕಾಫಿ ಮಾಡಿ ಕೊಟ್ಟರು‌.ಅವರು ಕೊಟ್ಟ ಕಾಫಿ ಅವರ ಮನಸ್ಸಿನಂತೆಯೇ ತುಂಬಾ ರುಚಿಯಾಗಿತ್ತು.ಅದರ ಕೊನೆಯ ತೊಟ್ಟನ್ನು ಕೂಡ ಕುಡಿದು ಖಾಲಿ ಲೋಟ ಇಟ್ಟು ಮತ್ತೊಮ್ಮೆ ಧನ್ಯವಾದ ಹೇಳಿ ಕೈಮುಗಿದು ಹನಿ ಗಣ್ಣಿನಿಂದ ಹಿಂದಿರುಗಿದೆ.

ಅಂದಿನ ಐದುನೂರು ರುಪಾಯಿ ಇಂದಿನ ಹತ್ತು ಸಾವಿರ ರುಪಾಯಿಗಿಂತ ಹೆಚ್ಚಿನ ಮೌಲ್ಯ ಹೊಂದಿತ್ತು.ಅದು ತನಕ ನೋಡದ ತೀರಾ ಅಪರಿಚಿತಳಾದ ನನಗೆ  ಅವರಾಗಿಯೇ ತಂದು ಕೊಟ್ಟು ಆಟೋ ತಂದು ನಮ್ಮನ್ನು ಆಸ್ಪತ್ರೆ ಗೆ ಕಳಹಿಸಿಕೊಟ್ಟ ಅವರ ಮಾನವೀಯತೆಯನ್ನು ಬಣ್ಣಿಸಲು ನನ್ನಲ್ಲಿ ಪದಗಳಿಲ್ಲ .ಮುಂದಿನ ಬಾರಿ ಊರಿಗೆ ಹೋದಾಗ ಅವರ ಮನೆಗೆ ಹೋಗಿ ಬರಬೇಕು ಎಂದು ಕೊಂಡಿರುವೆ.ಅವರು ಅಲ್ಲೇ ಇದ್ದಾರಾ ? ಅದು ಅವರ ಸ್ವಂತ ಮನೆಯಾ ? ಬಾಡಿಗೆಗೆ ಇದ್ದರಾ ? ಯಾವುದೊಂದು ಮಾಹಿತಿಯೂ ನನಗೆ ತಿಳಿಯದು.ಆದರೂ ಅವರನ್ನು ಭೇಟಿ ಮಾಡಲು ಯತ್ನ ಮಾಡುವೆ‌.ಅವರು‌ ಮತ್ತು ಅವರ ಕುಟುಂಬದವರು ಎಲ್ಲೇ ಇದ್ದರೂ ಸುಖವಾಗಿರಲಿ ಎಂದು ಹಾರೈಸುವೆ

Thursday 6 April 2023

ಆತ್ಮ ಕಥೆ -20 ಝಾನ್ಸಿ ರಾಣಿ ಲಕ್ಷ್ಮೀ ಬಾಯಿಯಂತಾಗುವ ಕನಸು ನನಸಾಗದಿದ್ದರೂ ಡಾ.ಲಕ್ಷ್ಮೀ ಪೋದ್ದಾರ್ ಆದೆ

 ಝಾನ್ಸಿ  ರಾಣಿ ಲಕ್ಷ್ಮೀ ಬಾಯಿಯಂತಾಗುವ ಕನಸು ನನಸಾಗದಿದ್ದರೂ ಡಾ.ಲಕ್ಷ್ಮೀ ಪೋದ್ದಾರ್ ಆದೆ .


ಆತ್ಮ ಕಥೆ ಬರೆಯದೆ ತುಂಬಾ ದಿನ ಆಯಿತು.ಈವತ್ಯಾಕೋ‌ ನಾನು ಝಾನ್ಸಿರಾಣಿ ಲಕ್ಷ್ಮೀಬಾಯಿಯಾಗಿ ಮೆರೆದದ್ದು ನೆನಪಾಗಿ ಬರೆಯೋಣ ಎನಿಸಿತು

ನಾನು ಒಂದನೇ ತರಗತಿಯನ್ನು ಮೀಯಪದವಿನ ವಿದ್ಯಾವರ್ಧಕ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದ್ದೆ..ಆಗ ನಮ್ಮ ಹಿರಿ ಮನೆ ವಾರಣಾಸಿಯಲ್ಲಿ ಆಸ್ತಿ ಪಾಲಾಗಿ ಹಿರಿಯರಿಂದ ಬಂದ ಮೂಲ ಮನೆ ದೊಡ್ಡ ಚಿಕ್ಕಪ್ಪ ಕೇಶವ ಭಟ್ಟರ ಪಾಲಿಗೆ ಬಂದಿತ್ತು.


ಹಿರಿ ಮಗನಾದ ನನ್ನ ತಂದೆಯವರಿಗೆ ಆಗ ಸುಮಾರು ನಲುವತ್ತನಾಲ್ಕು ವರ್ಷ..ಅಜ್ಜ ತೀರಿ ಹೋಗುವಾಗ ತಂದೆಯವರಿಗೆ ಹದಿನೈದು ವರ್ಷ.ಹತ್ತನೆಯ ತರಗತಿಯಲ್ಲಿ ಓದುತ್ತಿದ್ದರು.ಆಗ ಮೆಟ್ರಿ್ಕ್ ಎಂದರೆ ಹನ್ನೊಂದನೆಯ ತರಗತಿ ಪಾಸಾಗಬೇಕಿತ್ತು ಮೆಟ್ರಿಕ ಪಾಸಾದವರಿಗೆ ಒಳ್ಳೆಯ ಉದ್ಯೋಗ ಸಿಗುತ್ತಾ ಇತ್ತು


ನನ್ನ ತಂದೆಯವರು ಕಲಿಕೆಯಲ್ಲಿ ತುಂಬಾ ಜಾಣರಿದ್ದರಂತೆ.ಈ ವಿಚಾರ ನಮಗೆ ತಂದೆಯವರು ತೀರಿ ಹೋದ ಮೇಲೆ ಅವರ ಸಹಪಾಠಿ ಕಿಟ್ಟಣ್ಣ ರೈ ಅವರ ಮೂಲಕ ತಿಳಿದದ್ದು.ತಂದೆಯವರು ತೀರಿ ಹೋದ ಸುದ್ದಿ ಕೇಳಿ ಬಾಲ್ಯದ ಗೆಳೆಯನ ಮನೆ ಹುಡುಕಿಕೊಂಡು ಬಂದು ತಂದೆಯವರ ಭಾವ ಚಿತ್ರಕ್ಕೆ ಹೂ ಹಾಕಿ ನಮಿಸಿ ತಮ್ಮ‌ಪ್ರೀತಿಯನ್ನು ತೋರಿದ್ದರು.ಆಗ ಮಾತನಾಡುತ್ತಾ ನನ್ನ ತಂದೆಯವರು ಅರ್ಧ ಮಾರ್ಕ್ ಕಡಿಮೆ ಬಂದರೆ ಅಳುತ್ತಿದ್ದ ವಿಚಾರವನ್ನವರು ತಿಳಿಸಿ ತಂದೆಯವರು ತರಗತಿಯಲ್ಲಿ ಸದಾ ಪ್ರಥಮ ಸ್ಥಾನವನ್ನು ಗಳಿಸಿಕೊಳ್ಳುತ್ತಿದ್ದ ವಿಚಾರವನ್ನು ಹೇಳಿದ್ದರು.


ಅಜ್ಜ ಕೃಷ್ಣ ಭಟ್ಟರು ತೀರಿ ಹೋಗುವಾಗ ಮೆಟ್ರಿಕ‌್ ಪಾಸಾಗಲು ಒಂದು ವರ್ಷ ತಂದೆಯವರು ಓದಬೇಕಾಗಿತ್ತು.ತಂದೆಯವರಿಗೆ ಓದಲು ತುಂಬಾ ಆಸೆ ಇತ್ತು.ಆದರೆ ಮನೆಯಲ್ಲಿ ಸಣ್ಣ ವಯಸ್ಸಿನ ತಮ್ಮ ತಂಗಿಯರ ಜವಾಬ್ದಾರಿ ಇತ್ತು‌ಅಜ್ಜ ತೀರಿ ಹೋಗುವಾಗ ಸಣ್ಣ ಚಿಕ್ಕಪ್ಪ ಸದಾಶಿವ ಭಟ್ಟರಿಗೆ ಮೂರು ವರ್ಷವಂತೆ.ಅವರ ಅಣ್ಣ ಕಾಶಿ ಚಿಕ್ಕಪ್ಪ ( ರಾಮ‌ಕೃಷ್ಣಭಟ್ಟರು ) ಒಂದೆರಡು ವರ್ಷ ದೊಡ್ಡವರಿದ್ದಿರಬಹುದು.ಇವರಿಗಿಂತ ಒಂದೆರಡುವರ್ಷ ಸೋದರತ್ತೆ ಪಾರ್ವತಿ ದೊಡ್ಡವರಿದ್ದಿರಬಹುದು.ಅವರಿಗಿಂತ ದೊಡ್ಡವರು ನನ್ನ ದೊಡ್ಡ ದೊಡ್ಡಪ್ಪ ಕೇಶವ ಭಟ್ಟರು ಇವರಿಗಾಗ ಹತ್ತು ಹನ್ನೆರಡು ವರುಷ ಇವರಿಗಿಂತ ಹಿರಿಯರಾದ ಇಬ್ಬರು ಅಕ್ಕಂದಿರಿದ್ದರು.ನಡುವೆ ಓರ್ವ ಇನ್ನೊಂದು  ತಂಗಿಯೂ ಇದ್ದು ಅವರು ಸಣ್ಣ ವಯಸ್ಸಿನಲ್ಲಿಯೇ ತೀರಿ ಹೋಗಿದ್ದು ಅವರನ್ನು ನಾನು ಬಹುಶಃ ನೋಡಿಲ್ಲ ಎಂದೆನಿಸ್ತದೆ.ಅಥವಾ ನೋಡಿದ್ದರೂ ನೋಡಿದ್ದರೂ ನೆನಪಿರದಷ್ಟು ಸಣ್ಣ ವಯಸ್ಸು ನನಗಿದ್ದಿರಬಹುದು


ಈ ಅತ್ತೆಯ ಹೆಸರೂ ನನಗೆ ಗೊತ್ತಿಲ್ಲ‌.ಪಂಜಕ್ಕೆ ಮದುವೆ ಮಾಡಿಕೊಟ್ಟಕಾರಣ ಪಂಜದ ಅತ್ತೆ ಎನ್ನುತ್ತಿದ್ದೆವು.ಕಂರ್ಬಿ ಎಂದೂ ಹೇಳುತ್ತಿದ್ದೆವು‌.ಕಂರ್ಬಿಯ ಮಾವ ಅತ್ತೆ ತೀರಿ ಹೋದ ಮೇಲೆ ಮತ್ತೆ ಮದುವೆಯಾಗಿದ್ದು ಅವರಿಗೆ ಮಕ್ಕಳಿದ್ದರು.ಅವರಲ್ಲಿ ಯಾರನ್ನೋ ಕಂರ್ಬಿ ಬಾವ ಎಂದು ಕರೆಯುತ್ತಿದ್ದ ನೆನಪು.


ನನ್ನ ಆ ಸೋದರತ್ತೆ ಬಹಳ ಜಾಣೆಯಂತೆ.ನನ್ನನ್ನು ಬಂಧು ಬಳಗದವರು ಅವರಿಗೆ ಹೋಲಿಸುತ್ತಿದ್ದರು.ಅವರ ಬಗ್ಗೆ ಎರಡು ವಿಚಾರ ಅಮ್ಮ ಹೇಳಿದ್ದು ನನಗೆ ನೆನಪಿದೆ.

ಒಬ್ಬರು ಆಗಾಗ ಊಟಕ್ಕೆ ಮನೆಗೆ ಬರ್ತಿದ್ದರಂತೆ.ಬಂದಾಗ ಮಜ್ಜಿಗೆ ನೀರು ಕೊಡುವ ಪದ್ದತಿ ನಮ್ಮಲ್ಲಿ.ಪ್ರತಿ ಬಾರಿ ಎಷ್ಟೇ ಉಪ್ಪು ಹಾಕಿ ಹದ ಮಾಡಿ ಕೊಡುತ್ತಿದ್ದರೂ ಸ್ವಲ್ಪ  ಉಪ್ಪು ಕಡಿಮೆ ಎಂದು ಕೊರತೆ ಹೇಳುತ್ತಿದ್ದರಂತೆ.


ಹೀಗೆ ಒಂದು ಬಾರಿ ಬಂದಾಗ ನನ್ನ ಅತ್ತೆ ಒಂದು ಲೋಟ ಮಜ್ಜಿಗೆಗೆ ಒಂದು ಕೋಟ ಉಪ್ಪು ಹಾಕಿ ಎಷ್ಟು ಕರಗುತ್ತದೋ‌ಅಷ್ಟು ಕರಗಿಸಿ ಅರಿವೆಯಲ್ಲಿ ಸೋಸಿ‌ ತಗೊಂಡು ಹೋಗಿ ಕೊಟ್ಟರಂತೆ.ಆ ಉಪ್ಪಿನ ಸಿಂಗಿಯನ್ನು ಕಣ್ಣು ಮುಚ್ಚಿ ಕುಡಿದ ಪುಣ್ಯಾತ್ಮ‌ಕಮಕ್ ಕಿಮ್ ಎನ್ನಲಿಲ್ಲವಂತೆ.ಅದೇ ಕೊನೆ ಅಂತೆ ಉಪ್ಪು ಕಡಿಮೆ ಎಂದು‌ ಕೊರತೆ ಹೇಳಿದ್ದು.ಅತ್ತೆಗೆ ಮಕ್ಕಳಾಟಿಗೆ ಮದುವೆಯಾಗುವ ಮೊದಲಿನ ಕಥೆ ಇದು.ಹೆಚ್ಚಂದರೆ ಹತ್ತು ಹನ್ನೊಂದು ವರ್ಷದ ಎಳೆಯ ಹುಡುಗು ಬುದ್ಧಿ.ಇದು ಗೊತ್ತಾದಾಗ ಅಜ್ಜಿ ಕೈಯಿಂದ ಬೈಗಳು ಸಿಕ್ಕರೂ ಎಲ್ಲರಿಗೂ ಇದು ನಗು ತರಿಸಿದ ವಿಚಾರ ಆಗಿತ್ತಂತೆ.


ಅದೇ ರೀತಿ‌ ಯಾರದೋ ಹತ್ತಿರದ ಸಂಬಂಧಿಕರ ಮದುವೆಯ ಸಮಯದಲ್ಲಿ ಸೀರೆ ತೆಗೆಯುವ ಮಾತು ಬಂದಾಗ ಕುಟುಂಬದಲ್ಲಿ ಪ್ರಭಾವಿಗಳಾಗಿದ್ದ ಸಂಬಂಧಿಯೊಬ್ಬರು  ಅಜ್ಜನ ಮೊದಲ ಹೆಂಡತಿಯಲ್ಲಿ ಹುಟ್ಟಿದ  ಮಗಳಿಗೆ ಸೀರೆ ತೆಗೆಯುವ "ತಾಯಿ ಇಲ್ಲದ ಮಗು ಅವಳು" ಎಂದರಂತೆ.ಆಗ ನನ್ನ ಈ ಸೋದರತ್ರೆ 'ಹೌದೌದು..ನಾನು ಮದುವೆ ದಿನ ನನ್ನ ತಾಯಿಯನ್ನೇ ಸೀರೆಯಂತೆ ಉಡುವುದು ಎಂದರಂತೆ'..ಮುಂದೆ ಇವರಿಗೂ ಸೀರೆ ತೆಗೆದರೋ ಇಲ್ಲವೋ ಏನಾಯಿತು ನನಗೆ ಗೊತ್ತಿಲ್ಲ.ಅಂತೂ ಇದೂ ಎಲ್ಲರಲ್ಲಿ ನಗು‌ಹುಟ್ಟಿಸಿದ ವಿಚಾರವಾಗಿತ್ತು‌ .


ಒಟ್ಟಿನಲ್ಲಿ ಬಡತನದ ಜೊತೆಗೆ ತಂದೆಯನ್ನೂ ಕಳೆದುಕೊಂಡ ಮಕ್ಕಳದು ಬಹಳ ಶೋಚನೀಯ ಪರಿಸ್ಥಿತಿ ಇದ್ದಿರಬಹುದು ಎಂದು‌ ಎನಿಸ್ತದೆ.ಮನೆ ಮಕ್ಕಳಿಗೆ ಸೀರೆ ತೆಗೆಯುವ ಬಗ್ಗೆ ನಿರ್ಧಾರ ತಗೊಳ್ಳುವವರು ಇನ್ಯಾರೋ..ತಂದೆ ಇದ್ದರೆ ಹೀಗಾಗಲುಂಟೇ?


ನನಗೆ ಮದುವೆಯಾಗಿ ಮಗ ಹುಟ್ಟಿ ಅವನ ಉಪನಯನವನ್ನೂ ಪುರೋಹಿತರಾಗಿ‌ ನನ್ನ ತಂದೆಯವರೃ  ಮುಂದಾಳತ್ವ ವಹಿಸಿ  ಮಾಡಿದ್ದರು.ಅವರ ಜವಾಬ್ದಾರಿ ಎಲ್ಲವನ್ನೂ ಕಳೆದುಕೊಂಡ ನಂತರ ಒಂದಿನ ಸುಖವಾಗಿ ಜೀವ ತ್ಯಜಿಸಿ ಇಹ ಲೋಕ ಬಿಟ್ಟು ಪರಲೋಕಕ್ಕೆ ತೆರಳಿದ್ದರು.ಆದರೂ ನಮಗೆ ತಂದೆಯ ಸಾವು ಬಹಳ ದುಃಖ ಉಂಟು ಮಾಡಿತ್ತು.ಹಾಗಿರುವಾಗ   ಅಕಾಲದಲ್ಲಿ ತಂದೆಯನ್ನು ಕಳೆದುಕೊಂಡ ಮಕ್ಕಳ ಪರಿಸ್ಥಿತಿಯನ್ನು ಊಹಿಸುವುದೂ ಕೂಡ ಕಷ್ಟ.


ನನ್ನ ಸ್ನೇಹಿತೆಯೊಬ್ಬಳ ತಂದೆ ಸಣ್ಣ ವಯಸ್ಸಿನಲ್ಲಿಯೇ ತೀರಿ ಹೋಗಿದ್ದರು.ಅವರು ಹೇಳ್ತಿದ್ದರು.ನಾವು ನೆಂಟರ ಮನೆಗೆ ಹೋದರೆ ಹೊಟ್ಟೆ ತುಂಬಾ ಊಟ ಮಾಡ್ತಿರಲಿಲ್ಲ.ಯಾಕೆಂದರೆ ತಂದೆ ಇಲ್ಲದ ಮಕ್ಕಳು ರಾವು ಕಟ್ಟಿ ತಿಂತಾರೆ ಎಂದು ಜನ ಆಡಿಕೊಳ್ಳಬಾರದಲ್ವ ಲಕ್ಷ್ಮೀ‌? ಎಂದಿದ್ದರು.


ನನ್ನ ತಂದೆಯವರಿಗೆ ಕೂಡ ಅವರ ತಂದೆ ಎಂದರೆ ನನ್ನ ಅಜ್ಜ ಅಕಾಲದಲ್ಲಿ ತೀರಿ ಹೋದದ್ದು ಬಹು ದೊಡ್ಡ ನಷ್ಟ ಉಂಟು ಮಾಡಿತ್ತು‌.ಮೆಟ್ರಿಕ್ ಓದುವಕನಸಿಗೆ ತಣ್ಣೀರು ಪಟ್ಟಿ ಹಾಕಬೇಕಾಯಿತು.ಕುಟುಂಬದ ಹಿರಿಯರು ಆಣತಿಯಂತೆ ಮಂತ್ರ ಕಲಿಯಲು ಕುಂಭ ಕೋಣಂ ಗೆ ಹೋಗಬೇಕಾಯಿತು

ಅಲ್ಲಿ ಕೆಲ ವರ್ಷ ಮಂತ್ರ ಕಲಿತು ಬಂದು ಹೊಟ್ಟೆಪಾಡಿಗಾಗಿ ಕುಲ ವೃತ್ತಿ ಪೌರೋಹಿತ್ಯ ಮಾಡಬೇಕಾಯಿತು.


ಹಗಲು ರಾತ್ರಿ ಪೌರೋಹಿತ್ಯ ಮಾಡುತ್ತಲೇ ಅಕ್ಕ ತಂಗಿಯರನ್ನೆಲ್ಲ ಮದುವೆ ಮಾಡಿ ಸಂಸಾರಸ್ಥರನ್ನಾಗಿಸಿದರು.ದೊಡ್ಡ ಚಿಕ್ಕಪ್ಪ ಮತ್ತು ಕಾಶಿ ಚಿಕ್ಕಪ್ಪ ಇಬ್ಬರನ್ನೂ ಮಂತ್ರ ಕಲಿಯಲು ಹಾಕಿದ್ದೇಕೆ ಎಂದು ನನಗೆ ಗೊತ್ತಿಲ್ಲ.ದೊಡ್ಡ ಚಿಕ್ಕಪ್ಪನಿಗೆ ಶಾಲೆಯ ವಿದ್ಯೆ ಅಷ್ಟಾಗಿ ಹಿಡಿಸಿರಲಿಲ್ಲವಂತೆ ಹಾಗಾಗಿ ಮಂತ್ರ ಕಲಿಯಲು ಹಾಕಿದರು.ಸಣ್ಣ ಚಿಕ್ಕಪ್ಪ ( ನಂತರ ಕಾಶಿಯಲ್ಲಿ ಓದಿ ಪ್ರೊಫೆಸರರಾದ ಕಾರಣ ಇವರನ್ನು ಕಾಶಿ ಅಪ್ಪಚ್ಚಿ ಎಂದು ಕರೆಯುತ್ತೇವೆ) ತಮ್ಮಣ್ಣ / ರಾಮ ಕೃಷ್ಣ ಭಟ್ಟರಿಗೆ ಶಾಲೆಗೆ ಹೊಗಿ ಕಲಿಯಲು ಆಸಕ್ತಿ ಇತ್ತಂತೆ.ಆದರೂ ಇವರನ್ನೇಕೆ ಮಂತ್ರ ಕಲಿಯಲು ಹಾಕಿದರು? ಇಲ್ಲಿ ಬಹುಶಃ ನನ್ನ ತಂದೆ ದುಡಿಯುವ ವ್ಯಕ್ತಿ ಮಾತ್ರ ಆಗಿದ್ದರು.ಬಹಳ ಸಜ್ಜನರಾದ ನನ್ನ ತಂದೆಯವರಿಗೆ ಕುಟುಂಬದ ಹಿರಿಯರ ಮಾತನ್ನು‌ ಮೀರುವ ಧೈರ್ಯ ಇದ್ದಿರಲಾರದು.ನನ್ನ ಅಜ್ಜಿ ಗಟ್ಟಿಗಿತ್ತಿಯೇ...ಅವರೂ ಯಾಕೆ ಸಣ್ಣ ಮಗನ ಪರವಾಗಿ ಧ್ವನಿ ಎತ್ತಲಿಲ್ಲ? ಬಹುಶಃ ಆಗಿನ ಪರಿಸ್ಥಿತಿ ಹಾಗೆಯೇ ಇತ್ತು ಕಾಣಬೇಕು.ಆದರೆ ನಮ್ಮಲ್ಲಿ ಅಜ್ಜಿಯ ಮಾತೇ ಅಂತಿಮವಾಗಿತ್ತುಆದರೂ ಯಾಕೆ ಅಜ್ಜಿ ಮಗನ ಪರ ಮಾತಾಡಲಿಲ್ಲ.?


 ನನ್ನ ತಂದೆಯವರಿಗೆ ಈ ತಮ್ಮನಲ್ಲಿ ಬಹಳ ಪ್ರೀತಿ.ತಮ್ಮಣ್ಣ ಎಂದವರನ್ನು ಕರೆಯುತ್ತಿದ್ದರು.ತಮ್ಮಣ್ಣ ಎಂದರೆ ಆಸರಿಗೆ ಬೇಡ ಎಂಬಷ್ಟು ಪ್ರೀತಿ ಅಭಿಮಾನ ನನ್ನ ತಂದೆಯವರಿಗೆ ಇತ್ತು.ನನ್ನ ಅಣ್ಣ ಅಕ್ಕನಿಗೂ ಈ ಚಿಕ್ಕಪ್ಪ ಎಂದರೆ ಬಹಳ ಪ್ರೀತಿ.


ಈ ಸಣ್ಣ ಚಿಕ್ಕಪ್ಪನಿಗೆ ಸಣ್ಣಾಗಿರುವಾಗ ಕ್ರಾಣಿ‌ ಎಂಬ ಆರೋಗ್ಯ ಸಮಸ್ಯೆ ಇತ್ತಂತೆ.ಮನೆ ಮಂದಿಯ ಭಯಕ್ಕೆ ಶಾಲೆಗೆ ಹೋದವರು ನಡುವೆ ಜ್ವರದಿಂದ ಎಚ್ಚರ ತಪ್ಪಿ ತೋಡಿನ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದವರನ್ನು ಯಾರೋ ನೋಡಿ ಎತ್ತಿ ಮನೆಗೆ ತಂದು ಬಿಟ್ಟರಂತೆ..ಇವೆಲ್ಲ ನಾನು ಹಿರಿಯರು ಮಾತನಾಡುವಾಗ ಓಂಗಿಕೊಂಡು ಕೇಳಿಸಿಕೊಂಡ ವಿಚಾರಗಳು.ಹಿರಿಯರ ಮಾತಿಗೆ ಕಿವಿ ಕೊಟ್ಟರೆ ನಮಗೆ ಪೆಟ್ಟು ಬೈಗಳು ಸಿಗುತ್ತಿತ್ತು.ಆದರೂ ನಾವು ಮಕ್ಕಳು ಬಾಲ ಸಹಜ ಕುತೂಹಲದಿಂದ  ಅಲ್ಲಿ ಇಲ್ಲಿ ಓಂಗಿ‌ ಸ್ವಲ್ಪ ಸ್ವಲ್ಪ ಕೇಳಿಸಿಕೊಳ್ತಿದ್ದೆವು


ಮತ್ತೆ ಹಿಂದಿನ ಕಥೆಗೆ ಬರುವೆ‌.ನನ್ನ ತಂದೆಯವರು ಹದಿನಾರು ವರ್ಷಕ್ಕೆ ಅಜ್ಜನನ್ನು ಕಳೆದುಕೊಂಡು ಮಂತ್ರ ಕಲಿತು ದುಡಿಯಲು ಶುರು ಮಾಡಿದವರು ತನಗಾಗಿ ಒಂದು ಪೈಸೆಯನ್ನೂ ಎತ್ತಿಡಲಿಲ್ಲ.ಎಲ್ಲವನ್ನೂಕುಟುಂಬಕ್ಕೇ ಕೊಡುತ್ತಿದ್ದರು.


ಮನೆಯಲ್ಲಿ‌ ನಾವು ಐದು ಜನ ಮಕ್ಕಳು ದೊಡ್ಡ ಚಿಕ್ಕಪ್ಪನ ಮಗಳು ನನ್ನ ವಯಸ್ಸಿನ ಸಂಧ್ಯಾ ಬೆಳೆಯಲಾರಂಭಿಸಿದಂತೆ‌ 

ಮನೆಯಲ್ಲಿ ಭಿನ್ನಾಭಿಪ್ರಾಯಗಳು ವ್ಯಾಜ್ಯ ಗಲಾಟೆ ಶುರು ಆಯಿತು.ಎಲ್ಲರ ಮನೆ ದೋಸೆಯೂ ತೂತೇ ಅಲ್ವೇ? 


ಅಂತೂ ಇಂತೂ ತಂದೆಯವರಿಗೆ ನಲುವತ್ತನಾಲ್ಕು ವಯಸ್ಸಾದಾಗ ಆಸ್ತಿ ಪಾಲಾಯಿತು.

ನಾನು ಒಂದನೇ ತರಗತಿಗೆ ಸೇರಿದ ಸಮಯದಲ್ಲಿ ಹಿರಿಯ ಮನೆ ಪಾಲಾಯಿತು ,ತಂದೆಯವರಿಗೆ ಆಗ ನಲುವತ್ತನಾಲ್ಕು ವರ್ಷ ಪ್ರಾಯ .

ಸ್ವಲ್ಪ ತೋಟ ,ಸ್ವಲ್ಪ ಗದ್ದೆ ತಂದೆಯವರ ಪಾಲಿಗೆ ಬಂತು.ಮನೆ ಕಟ್ಟಲು ಪುಡಿಕಾಸು ಕೈಯಲ್ಲಿ ಇರಲಿಲ್ಲ..ಪೂರ್ತಿಯಾಗಿ ಸಾಲ ಮಾಡಿ ಮನೆ ಕಟ್ಟಬೇಕಾಯಿತು.ಆಗಿನ ಕಾಲಕ್ಕೆ ಬಡ್ಡಿಗೆ ಸಾಲ ಕೊಡುತ್ತಿದ್ದ ಸಾವ್ಕಾರರಾಗಿದ್ದ ಸೊಂದಿ ಗಣಪಣ್ಣ ಅವರ ಬಳಿ 19,000₹ ಸಾಲ ಪಡೆದರೆಂದು ಹಿರಿಯರು ಮಾತನಾಡುವಾಗ ಕೇಳಿದ ನೆನಪು ನನಗೆ‌ .ಆಗಿನ ಕಾಲಕ್ಕೆ ದೊಡ್ಡ ಮೊತ್ತವೇ ಇರಬೇಕು ಅದು.

ತಾಯಿಯವರು ನನ್ನ ಸಣ್ಣ ತಮ್ಮ ಗಣೇಶನ ಬಸುರಿ.ಹೆರಿಗೆ ಮತ್ತು ಬಾಣಂತನಕ್ಕಾಗಿ ನನ್ನ‌ಮತ್ತುನ ತಮ್ಮ ಈಶ್ವರನ ಜೊತೆಗೆ ಅಮ್ಮ ಅಜ್ಜನ‌ ಮನೆಗೆ ಬಂದಿದ್ದರು ಅಣ್ಣ ಮತ್ತು ಅಕ್ಕ ಶಾಲೆಗೆ ಕೊಡ್ಲೊ ಮೊಗರಿನ ಶಾಲೆಗೆ ಹೋಗುತ್ತಿದ್ದ ಕಾರಣ ಹೋಗುತ್ತಿದ್ದ ಕಾರಣ ನನ್ನ‌ ದೊಡ್ಡಮ್ಮನ ಮನೆ ಕತ್ತೆರಿ ಮೂಲೆಯಿಂದ ಶಾಲೆಗೆ ಹೋಗುತ್ತಿದ್ದರು.

ಈ ಸಮಯದಲ್ಲಿಯೇ ಉಕ್ಕಿ ಹರಿಯುವ ತೋಡಿನ ನೀರಿಗೆ ಬಿದ್ದು ಬೆಳ್ಳಕ್ಕೆ ಹೋಗಿ‌ ಪವಾಡ ಸದೃಶವಾಗ ಬದುಕುಳಿದದ್ದು ನಾನು 

ಅಂತೂ ತಮ್ಮ‌ಪಾಲಿಗೆ ಬಂದಿದ್ದ ಅಂಗೈ ಅಗಲದ ಗುಡ್ಡವನ್ನು ಕಡಿದು ಮಣ್ಣಿನ ಮನೆ ಕಟ್ಟಿದರು.ಸಾರಣೆ ಇಲ್ಲದ ಮಣ್ಣಿನ‌‌ಮನೆಯಲ್ಲಿ ಎಲ್ಲೆಡೆ ನೀರು ಒಸರುತ್ತಿತ್ತು.ಆದರೂ ನಮಗೆ ಹೊಸ ಮನೆಗೆ ಬಂದ ಸಂಭ್ರಮ ,ಹೊಸ ಮನೆ ಒಕ್ಕಲಾಗುವಾಗ ಸಣ್ಣ ತಮ್ಮ ಗಣೇಶ ಎರಡು ತಿಂಗಳ ಮಗು.ನಾವು ಕೊಂಡಾಟದಿಂದ ಗಂಚ ಎಂದು ಕರೆಯುತ್ತಿದ್ದೆವು.

ಮನೆ ಏನೋ ಆಯಿತು‌ ಮನೆಗಾಗಿ‌ ಮಾಡಿದ ಸಾಲವನ್ನು ಹಿಂದೆ ಕೊಡಬೇಕಲ್ಲ..ಗಾಣದೆತ್ತಿನಂತೆ ಹಗಲು ರಾತ್ರಿ ತಂದೆ ತಾಯಿ ದುಡಿದು ಪೈಸೆಗೆ ಪೈಸೆ ಕೂಡಿಸಿ ತಾಯಿ ತನಗಾಗಿ ಒಂದು ಸೀರೆಯನ್ನಾಗಲೀತಂದೆಯವರು ತಮಗಾಗಿ  ಅಂಗಿಯನ್ನಾಗಲೀ ತೆಗೆಯದೆ ತಮಗಾಗಿ ಏನೊಂದೂ ಖರ್ಚು ಮಾಡದೆ ಸಾಲ ಬೂಟಿದರು.

ನಮಗೂ ಲಂಗಕ್ಕೆ ಹೊರಗಿನಿಂದ ಬಟ್ಟೆ ತರುತ್ತಿರಲಿಲ್ಲ.ತಂದೆ ಪುರೋಹಿತರಾದ ಕಾರಣ ಮುಂಡು ಎಂಬ ಬಿಳಿ ಬಟ್ಟೆ ದಕ್ಷಿಣೆಯಾಗಿ ಸಿಗುತ್ತಿತ್ತು.ಆಗ ಬಣ್ಣದ ಪುಡಿಗಳು ಸಿಗುತ್ತಿದ್ದವು.ಈಗಲೂ ಸಿಗಬಹುದೋ ಏನೋ..ಹಸಿರು ನೀಲಿ ಕೆಂಪು ಕಾಪಿ ಪುಡಿ ರಂಗಿನ ಪುಡಿಯನ್ನು ತಂದು ಪ್ರತ್ಯ ಪ್ರತ್ಯೇಕವಾಗಿ ಪಾತ್ರೆಯ ನೀರಿಗೆ ಹಾಕಿ ಕುದಿಸಿ ಅದರಲ್ಲಿ ಬಿಳಿ ಮುಂಡನ್ನು ಮುಳುಗಿಸಿ ತೆಗೆದು ಒಣಗಿಸುತ್ತಿದ್ದರು.ಹೀಗೆ ತಯಾರಾದ ಮೂರು‌ನಾಕು ಬಗೆಯ ಬಣ್ಣದ ಬಟ್ಟೆಯಲ್ಲಿಯಲ್ಲಿ ನನಗೆ ಅಕ್ಕನಿಗೆ  ಲಂಗ ರವಿಕೆ ಅಣ್ಣ ತಮ್ಮಂದಿರಿಗೆ ಅಂಗಿ ಚಡ್ಡಿ ಹೊಲಿಸುತ್ತಿದ್ದರು.ಅಮ್ಮನ ಅಕ್ಕ ದೊಡ್ಡಮ್ಮನ ಮಕ್ಕಳಿಗೂ ಇದರದ್ದೇ ಬಟ್ಟೆ ಬರೆ.ಅವರ ಪರಿಸ್ಥಿತಿಯೂ ನಮಗಿಂತ ಭಿನ್ನವಾಗಿ ಏನೂ ಇರಲಿಲ್ಲ.

ಬಹುಶಃ ಅಕ್ಕ ಇದೇ ಲಂಗ ರವಿಕೆ ತೊಟ್ಟೇ ಬೆಳೆದಳು.ಅಂಗಡಿಯಿಂದ  ತಂದ ಬಣ್ಣ ಬಣ್ಣದ ಹೂವು ಬಳ್ಳಿಗಳ ಚಿತ್ತಾರದ ಬಟ್ಟೆಯ ಲಂಗ ರವಿಕೆಯನ್ನು ಅವಳು ತೊಟ್ಟೇ ಇಲ್ಲ ಎಂದು ನೆನಪು.ನನಗೆ ನಾಲ್ಕನೆಯ ತರಗತಿಯಲ್ಲಿದ್ದಾಗ ಕೋಳ್ಯೂರಾಯನಕ್ಕೆ ಒಂದು ಬಣ್ಣ ಬಣ್ಣದ ಹೂವಿನ ಚಿತ್ತಾರದ ಬಟ್ಟೆ ತಂದು ಸ್ಕರ್ಟ್ ಹೊಲಿಸಿದ್ದು ನೆನಪಿದೆ

ನಂತರ ಐದನೆಯ ತರಗತಿಗೆ ಮತ್ತೆ ನಾನು ಅಜ್ಜನ‌ಮನೆ ಸೇರಿ ಮೀಯಪದವಿನ ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿದೆ

ಅಜ್ಜ ಒಂದೆರಡು ಹಸಿರು ಕೆಂಪು ಗುಲಾಬಿ‌ ಬಣ್ಣ ಬಣ್ಣದ ಡಿಸೈನಿನ ಬಟ್ಟೆ ಯನ್ನು ದಿನಕರಣ್ಣನ ಅಂಗಡಿಯಿಂದ ತೆಗೆದು ಅಲ್ಲಿಯೇ ನನಗೆ ಹೊಲಿಸಿಕೊಟ್ಟಿದ್ದರು.

ಈ ಮೀಯಪದವಿನ ವಿದ್ಯಾವರ್ಧಕ ಶಾಲೆ ನನ್ನ ಬದುಕಿಗೆ ಬಣ್ಣವನ್ನು ತುಂಬುವ ಕೆಲಸ ಮಾಡಿತ್ತು.ಎಲ್ಲೋ ಒಂದು ಮೂಲೆಯಲ್ಲಿ ನನ್ನಷ್ಟಕ್ಕೆ ಇದ್ದ ಕಲಿಯುವುದರಲ್ಲಿಯೂ ಅಷ್ಟಕಷ್ಟೇ ಇದ್ದ ನನ್ನನ್ನು ಗುರುತಿಸಿ ಮುಂದೆ ತಂದವರು ಇಲ್ಲಿನ ಶಿಕ್ಷಕರು.ಈ ಶಾಲೆಯಲ್ಲಿ‌ ಬಹಳ‌ ಕ್ರಿಯಾಶೀಲ‌ ಶಿ‌ಕ್ಷಕರಿದ್ದರು.ಮಕ್ಕಳನ್ನು ಬಾಲಕಲೋತ್ಸವಕ್ಕೆ ತಯಾರು ಮಾಡಿ ಬಹುಮಾನವನ್ನು ಬಾಚಿಕೊಂಡು ಬರುತ್ತಿದ್ದರು‌ಅಂತೆಯೇ ಆಟೋಟ ಸ್ಪರ್ಧೆಗಳಲ್ಲೂ ಮುಂಚೂಣಿಯಲ್ಲಿತ್ತು.

ಈ ಶಾಲೆಯಲ್ಲಿ ನಾನು ತರಗತಿಯ ಒಳಗೆ ಇದ್ದದ್ದಕ್ಕಿಂತ ಹೆಚ್ಚು ಹೊರಗೆ ಗ್ರೌಂಡಿನಲ್ಲಿ ಇದ್ದದ್ದೇ ಹೆಚ್ಚು.

ಸದಾ ಡ್ಯಾನ್ಸ್ ನಾಟಕ ಸ್ಪೋರ್ಟ್ಸ್..ಇದರ ತರಬೇತಿ ಸ್ಪರ್ಧೆಗೆ ಹೋಗುದು ಬಹುಮಾನ ತರುದು..ಹೆಚ್ಚು ಪಾಯಿಂಟ್ಸ್ ಯಾರಿಗೆ ಮೀಯ ಪದವು ಶಾಲೆಗೆ ಹೆಚ್ಚು ಶೀಲ್ಡ್ ಯಾರಿಗೆ ಮೀಯಪದವು ಶಾಲೆಗೆ ಎಂದು ಊರಿಡೀ ಪ್ರಶಸ್ತಿ ಫಲಕಗಳನ್ನು ಹಿಡಿದುಕೊಂಡು ಮೆರವಣಿಗೆ ಮಾಡುತ್ತಿದ್ದುದರಪಥ ಸಂಚಲನದ ವೈಭವದ ಹೆಮ್ಮೆಯ ನೆನಪು ಈಗಲೂ ರೋಮಾಂಚನ ಉಂಟು ಮಾಡುತ್ತದೆ.

ಜೊತೆಗೆ ಡ್ಯಾನ್ಸ್ ನಾಟಕ ಪ್ರಾಕ್ಟೀಸ್ ಮುಗಿಸಿ ತರಗತಿಗೆ ಹೋದಾಗ ಶಂಕರ ಶೆಟ್ಟಿ ಮಾಸ್ಟ್ರು ಈಗ್ಯಾಕೆ ಬಂದದ್ದು? ಕ್ಲಾಸು ನೆನಪಾಯ್ತಾ? ಇನ್ನೇನೂ ತಿರುಗಲಿಕ್ಕೆ ಇಲ್ವ ಎಂದು ಬೈದಾಗ ನಾನು ಮತ್ತು  ಮಾಲಿನಿ‌ ಮುಖ ಮುಖ ನೋಡಿಕೊಂಡು ಬೆಪ್ಪಾಗಿ ನಿಂತದ್ದು ನನಗೆ ಈಗಲೂ ನೆನಪಿದೆ 

ಶಾಲಾ ಕಾಲೇಜುಗಳಲ್ಲಿ‌‌ ಇಂಥಹ‌ ಒಂದು ಸಣ್ಣ ಕಾಗೆ ಜಗಳ‌ ವಿವಾದ ಅಂದಿನಿಂದ ಇಂದಿನವರೆಗೂ ಇದೆ ಮುಂದೆಯೂ ಇರುತ್ತದೆ.

ಯಾವುದೇ ಶಾಲಾ ಕಾಲೇಜಿನಲ್ಲಿ ಒಬ್ಬಿಬ್ಬರು ನಾಟಕ ಡ್ಯಾನ್ಸ್ ಭಾಷಣ ಮೊದಲಸದ್ದರಲ್ಲಿ ನಿಷ್ಣಾತ ಉಪನ್ಯಾಸಕರಿರುತ್ತಾರೆ.ಇವರು ವಿದ್ಯಾರ್ಥಿಗಳಿಗೆ ಈ ಬಗ್ಗೆ ತರಬೇತಿ ನೀಡಲು ತಮ್ಮ‌  ಬಿಡುವಿನ‌ ಸಮಯದಲ್ಲಿ‌ಕೆಲವು‌ವಿದ್ಯಾರ್ಥಿಗಳನ್ನು  ಕರೆಯುತ್ತಾರೆ.ಆಗ ಇತರರು ಕಳುಹಿಸದೆ ತಕರಾರು ಮಾಡುದು ಇರ್ತದೆ‌.ಶಾಲೆಯ ಸಮಯದ ನಂತರ ಮಾಡಿ ಎನ್ನುದು..ಶಾಲಾ ಸಮಯದ ನಂತರ ಈ ಮಕ್ಕಳು ನಿಲ್ಲಬೇಕಲ್ಲ..

ನಾವು ಸಣ್ಣಗಿದ್ದಾಗ ಈ ದೊಡ್ಡವರ ಸಂಗತಿ ನಮಗೆ ಗೊತ್ತಾಗದೆ ಪೆಚ್ಚಾಗುತ್ತಿದ್ದೆವು.ದೊಡ್ಡವರಾಗಿ ಶಿಕ್ಷಕರಾದಾಗ ಇವನ್ನೆಲ್ಲ ಹೊಂದಾಣಿಕೆ ಮಾಡಿಕೊಂಡು ಬದುಕಲು ಕಲಿತೆ ನಾನು‌.

ನಮ್ಮ‌ ಮೀಯಪದವು ಶಾಲೆಯಲ್ಲಿ ಪ್ರತಿಯೊಂದು ಕೆಲಸವನ್ನು ಬಹಳ ಶ್ರದ್ಧೆಯಿಂದ ಅಚ್ಚುಕಟ್ಟಾಗಿ‌ ಮಾಡುತ್ತಿದ್ದರು.ಅದರಲ್ಲಿ ಬಹಳ ನೆನಪಿಡುವಂತಹದ್ದು‌ ಶಾಲೆಯ ಅಸೆಂಬ್ಲಿ.

ಅಸೆಂಬ್ಲಿಗೆ ಶಾಲಾನಾಯಕ/ಕಿ ನಡುವೆ ಧ್ವಜಸ್ಥಂಭದ ಬಳಿ‌ ನಿಲ್ತಾರೆ

ಅವರ ಎಡಬದಿನಗೆ ನಾಲ್ಕು ಐದು ಸಾಲು ಹುಡುಗರು.ಬಲಬದಿಗೆ ನಾಲ್ಕು ಸಾಲು ಹುಡುಗಿಯರು

ಪ್ರತಿ ಸಾಲನ್ನು ಒಂದು ತಂಡವಾಗಿ ಪರಿಗಣಿಸುತ್ತಿದ್ದರು ಪ್ರತಿ ತಂಡಕ್ಕೆ ಓರ್ವ ಸ್ವಾಂತಂತ್ರ್ಯ ಹೋರಾಟಗಾರರ ಹೆಸರು ಇರುತ್ತಿತ್ತು‌ಉದಾಹರಣೆಗೆ ಸುಭಾಷ್  ಚಂದ್ರ ಭೋಸ್ ಬಾಲಗಂಗಾಧರ ತಿಲಕ್ ,ಹುಡುಗಿಯರ ತಂಡಕ್ಕೆ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ,ಕಿತ್ತೂರ ರಾಣಿ ಚೆನ್ನಮ್ಮ‌,ಉಳ್ಳಾಲ ರಾಣಿ ಅಬ್ಬಕ್ಕ ಇತ್ಯಾದಿ.

ಸಾಮಾನ್ಯವಾಗಿ ಕಲಿಕೆಯಲ್ಲಿ‌ಮುಂದೆ ಇರುವವರು ಈ ತಂಡಗಳ ನಾಯಕರಾಗಿರುತ್ತಿದ್ದರು.ಅಸೆಂಬ್ಲಿ‌‌ಆಗುವಾಗ ಬಾಲ ಗಂಗಾಧರ ತಿಲಕ್ ಎಂದು ಒಂದು ಹೆಜ್ಜೆ ಮುಂದೆ ಹೋಗಿ ಅಟೆಂನ್ಷನ್ ಎಂದು ಹೇಳಿ ಸೆಲುಟ್ ಎಂದು ಸೆಲುಟ್ ಹೊಡೆದು ಸ್ಡ್ಟಾಂಡ್ ಇಟಗ ಈಸ್  ಎಂದು ಮತ್ತೆ ಸ್ವಸ್ಥಾನಕ್ಕೆ ತಂಡದ ನಾಯಕ ಬರುವ ಕ್ರಮ ಇತ್ತು

ಇದೊಂದು ತಂಡದ ನಾಯಕನಿಗೆ ಬಹಳ ಗೌರವ ಹೆಮ್ಮೆಯ ವಿಚಾರ ಆಗಿತ್ತು 

ನಾನು ಹುಡುಗಿಯರ ಮೊದಲ ತಂಡದ ನಾಯಕಿ ಆಗಿದ್ದೆ.ಈ ತಂಡದ ಹೆಸರು ಝಾಂಸಿರಾಣಿ ಲಕ್ಷ್ಮೀ .

ಝಾಂಸಿರಾಣಿ ಲಕ್ಷ್ಮೀಬಾಯಯಿಯ ಕಥೆಯನ್ನು ನಾನು ಯಾರಿಂದ ಕೇಳಿದ್ದೆ ಎಂದು ನನಗೆ ನೆನಪಿಲ್ಕ‌ನನಗೆ ಚಂದಮಾಮ ಬಾಲಮಿತ್ರ ಓದುವ ಹವ್ಯಸ ಇತ್ತು‌ಬಹುಶಃ ಅಜ್ಜ ಇವನ್ನು ನಮಗೆ ತಂದು ಕೊಡುತ್ತಿದ್ದರು.ಅಥವಾ ಕೋಳ್ಯೂರು ಗ್ರಂಥಾಲಯದಿಂದ ತಂದು ಓದುತ್ತಿದ್ದೆವು.ಅದರಲ್ಲಿ ಝಾಂಸಿರಾಣಿಯ ಕೆಚ್ಚೆದೆಯ ಸಾಹವನ್ನು ಓದಿ ತಿಳಿದಿದ್ದೆ.ಭಾರತವನ್ನು ಬ್ರಿಟಿಷರ ಕಪಿಮುಷ್ಠಿತಿಂದ ಬಿಡಿಸಿ ಸ್ವತಂತ್ರವಾಗಿಸಲು ಝಾಂಸಿರಾಣಿ‌ ಎಲ್ಲ ವೀರರನ್ನು ಕಲೆಹಾಕಿ ಹುರಿದುಂಬಿಸಿದ್ದಳು.ದತ್ತು ಪುತ್ರನಿಗೆ ರಾಜ್ಯದ ಹಕ್ಕಲ್ಲ ಎಂಬ ಡಾಲ್ ಹೌಸಿಯ ನಿರ್ಬಂಧವನ್ನು ಮೀರಿ ಕೇವಲ ತನ್ನ ರಾಜ್ಯ ಝಾಂಸಿಯ ಉಳಿವಿಗಾಗಿ ಮಾತ್ರವಲ್ಲದೆ ಇಡೀ ದೇಶವನ್ನು ಸ್ವತಂತ್ರಗೊಳಿಸಬೇಕೆಂಮ ಕನಸನ್ನು ಬಿತ್ತಿದ ವೀರ ಮಹಿಳೆ ಅವಳು.ಎಂಟು ವರ್ಷದ ಮಗನನ್ನು ಬೆನ್ನಿಗೆ ಕಟ್ಟಿಕೊಂಡೇ ಕತ್ತಿ ಹಿರಿದು ಬ್ರಿಟಿಷರೊಡದೆ ಹೋರಾಡಿದ ಧೀರೆ ಅವಳು

ಇನ್ನೇನು ಬ್ರಿಟಿಷರ ಕೈ ಮೇಲಾಗುತ್ತದೆ ಎಂದರಿವಾದಾಗ ಶತ್ರುಗಳಿಗೆ ಶರಣಾಗಲಾರೆ ಎಂದು ಕಠಾರಿಯಿಂದ ತನ್ನ ಎದೆಗೆ ಇರಿದುಕೊಂಡು ತನ್ನ ಸ್ವತಂತ್ರ ನೆಲದಲ್ಲಿಯೇ ಪ್ರಾಣತ್ಯಾಗ ಮಾಡಿದ ಸಾಹಸಿ ಅವಳು

.ಈ ಕಥೆ ಚಿಕ್ಕಂದಿನಲ್ಲಿಯೇ ನನ್ನ‌ಮನಸಿಗೆ ಬಹಳಷ್ಟಿ ನಾಟಿತ್ತು.ನಾನೂ ಝಾನ್ಸಿರಾಣಿಯಂತೆ ಆಗಬೇಕು ಎಂದುಕೊಂಡಿದ್ದೆ.

ಐದನೆಯ ತರಗತಿಯಲ್ಲಿರುವಾಗಲೇ ಏಳನೆಯ ತರಗತಿಯ ಜಾಣ ವಿದ್ಯಾರ್ಥಿನಿಯರು ಈ ಝಾನ್ಸಿರಾಣಿ ಲಕ್ಷ್ಮೀ ಬಾಯಿ ತಂಡದ ನಾಯಕಿಯರಾಗಿದ್ದುದನ್ನು ಗಮನಿಸಿದ್ದೆ.ಝಾನ್ಸಿ ರಾಣಿ ತಂಡದ ನಾಯಕಿಯಾಗಬೇಕಿದ್ದರೆ ತರಗತಿಯಲ್ಲಿ ಮೊದಲ ಸ್ಥಾನ ಗಳಿಸಬೇಕೆಂದು ನನಗೆ ಗೊತ್ತಾಗಿತ್ತು.

ಅಲ್ಲಿಂದ ನಾನು ಪ್ರಥಮ ಸ್ಥಾನ ಗಳಿಸುವುದಕ್ಕಾಗಿ ಓದಲು ಶುರು ಮಾಡಿದೆ.

ಏಳನೆಯ ತರಗತಿಗೆ ಬಂದಾಗ ಕಲಿಕರಯಲ್ಲಿ ಕೋಡಿಯಡ್ಕ ಮಾಸ್ಟ್ರ ಮಗಳು ಶೈಲಜಾ ನನಗೆ ಪ್ರತಿಸ್ಪರ್ಧಿಯಾಗಿದ್ದಳು.ನನಗಿಂತ ಒಂದೆರಡು ಅಂಕ ಅವಳಿಗೆ ಹೆಚ್ಚಿರುತ್ತಿತ್ತು.ಎಷ್ಟಾದರೂ‌ಮಾಸ್ಟ್ರ ಮಗಳಲ್ವಾ? ಮಾಸ್ಟ್ರಿಗೆ ಹೇಳಿ ಕೊಡಲು ಬರುತ್ತದೆ ಮಗಳನ್ನು ಪರೀಕ್ಷೆಗೆ ತಯಾರು ಮಾಡಿ ಕಳುಹಿಸ್ತಾರೆ.ಹೇಗೆ ಪ್ರಶ್ನೆಗಳುಬರುತ್ತವೆ ಹೇಗೆ ಉತ್ತರಿಸವೇಕೆಂಬ ತರಬೇತಿ ಕೊಟ್ಟಿರ್ತಾರೆ

ಮನೆಯಲ್ಲಿ ಹೇಳಿಕೊಡುವವರಿಲ್ಲ‌ದ ನಾನು ನಾನೇ ಓದಿ ತಯಾರಾಗಬೇಕಿತ್ತು.  

ಅಥವಾ ಶೈಲಜಾ ನನಗಿಂತ ಜಾಣೆ ಇದ್ದಿರಬಹುದು‌ ಒಟ್ಟಿನಲ್ಲಿ ಶೈಲಜಾಳಿಗೆ ನನಗಿಂತ ಒಂದೆರಡು ಅಂಕ ಹೆಚ್ಚು ಬರ್ತಿತ್ತು 

 ಹಾಗಾಗಿ ನನ್ನ ಕನಸಿನ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ತಂಡದ ನಾಯಕಿ ಆಗುವುದು ಸುಲಭವಿರಲಿಲ್ಲ

ಆದರೆ ನನ್ನ ಅದೃಷ್ಟಕ್ಕೆ ಅವಳು ಶಾಲಾ ನಾಯಕ ಸ್ಥಾನದ ಚುನಾವಣೆಗೆ ನಿಂತು ಗೆದ್ದು ಶಾಲಾ ನಾಯಕಿಯಾಗಿ ಅಸೆಂಬ್ಲಿಯಾಗುವಾಗ ಧ್ವಜಸ್ಥಂಭದ ಬಳಿ ನಿಂತಳು‌

ನನಗೆ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ತಂಡದ ನಾಯಕಿಯಾಗುವ ಅವಕಾಶ ಸಿಕ್ಕಿತ್ತು.ಅಂದು ಎದೆಯುಬ್ಬಿಸಿ‌  ಝಾನ್ಸಿರಾಣಿ  ಲಕ್ಷ್ಮೀ ಬಾಯಿಯ ಹೆಸರಿನಲ್ಲಿ‌ ಸೆಲ್ಯೂಟ್ ಹೊಡೆಯುತ್ತಿದ್ದಾಗ ಉಂಟಾಗುತ್ತಿದ್ದ ರೋಮಾಂಚನ ಇಂದಿಗೂ ನೆನಪಾದಾಗ ಆಗುತ್ತದೆ ನನಗೆ‌

ಝಾನ್ಸಿ ರಾಣಿಯಂತೆ ವೀರ ಸೇನಾನಿಯಾಗಲು ನನಗೆ ಸಾಧ್ಯವಾಗಿಲ್ಲ.ಮಿಲಿಟರಿಗೆ ಸೇರುದು ಹೇಗೆಂದೇ ಗೊತ್ತಿಲ್ಲದ ಕಾಲದಲ್ಲಿ ನಾನು ಕಾಲೇಜು ಓದಿದ್ದೇ ದೊಡ್ಡ ಸಾಧನೆ.

ಕೂಸು ಎಂತ ಓದಿದರೆಂತ ಒಲೆ ಬೂದಿ ಒಕ್ಕುದು ತಪ್ಪ( ಹುಡುಗಿ‌ ಏನು‌ ಓದಿದರೇನು‌ ಒಲೆಯ ಬೂದಿ ಗೋರುವುದು ತಪ್ಪದು)ಎಂಬ ಮಾತು ಪ್ರಚಲಿತವಿದ್ದ ಕಾಲದಲ್ಲಿ ಹುಟ್ಟಿ ಬೆಳೆದ ನಾನೀಗ ಉಪನ್ಯಾಸಕಿಯಾಗಿದ್ದೇನೆ ಕೆಲವು ಪುಸ್ತಕ ಲೇಖನ ಬರೆದು ಲೇಖಕಿ ಎಂದೆನಿಸಿಕೊಂಡಿದ್ದೇನೆ ಎಂಬುದೇ ಒಂದು ಸೋಜಿಗದ ವಿಚಾರ....ಇದು ನಿಜವೋ ಭ್ರಮೆಯೋ‌ಎಂದು ಚಿವುಟಿ ನೋಡಿಕೊಳ್ಳುವ ಹಾಗೆ ಆಗುತ್ತದೆ ಕೆಲವೊಮ್ಮೆ..ಆದರೆ ಈ ಹಂತ ಮುಟ್ಟಲು‌ನಡೆದ ದಾರಿ ಹುಲ್ಲು‌‌ ಹಾಸಿನದಾಗಿರಲಿಲ್ಲ..ಹಿಡಿಯಷ್ಟು ಪಡೆಯಲು‌ ಮುಡಿಯಷ್ಟು‌ ಕಳೆದುಕೊಂಡೆನೋ ಏನೋ‌ಎಂದು‌ ಕೆಲವೊಮ್ಮೆ ಅನಿಸಿದ್ದಿದೆ..ಆದರೆ ಹಿಂದೆ ಮತ್ತೆ ನಡೆಯಲಾಗದು..ಮುಂದೆ ನಡೆಯುವುದೊಂದೇ ಇರುವ ದಾರಿ...ಅಂತಿಮ ಗುರಿ ಯಾವುದು ? ನನಗೂ ಗೊತ್ತಿಲ್ಲ‌..

ತೇ ನ ವಿನಾ ತೃಣಮಪಿ ನ ಚಲತಿ..

ಎಲ್ಲವೂ ಭಗವಂತನ ಆಣತಿಯಂತೆಯೇ ನಡೆಯುತ್ತದೆ.ಅವನ ಆಣತಿಯ ಹೊರತಾಗಿ ಹುಲು ಕಡ್ಡಿ ಕೂಡ ಅಲುಗಾಡುವುದಿಲ್ಲ..ಮತ್ತೆ ನಮ್ಮದೇನಿದೆ ಮಹಾ.

ನಾನು ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಆಗದಿದ್ದರೂ ಡಾ.ಕೆ ಎನ್ ಗಣೇಶಯ್ಯರ ಪ್ರಸಿದ್ದ ಕಾದಂಬರಿ ಬಳ್ಳಿ ಕಾಳ ಬೆಳ್ಳಿಯ ಜೀವಂತ ಪ್ರಮುಖ ಪಾತ್ರ ಡಾ.ಲಕ್ಷ್ಮೀ ಪೋದ್ದಾರ್ ಆಗಿರುವೆ.ಇಲ್ಲೂ ನಾನು ತುಳು ಸಂಶೋಧಕಿಯಾಗಿಯೇ ಕಾಣಿಸಿಕೊಂಡಿರುವೆ.

ಈ ಕಾದಂಬರಿಯ ಬಿಡುಗಡೆಗೆ ಬಂದಿದ್ದ ಈಗಿನ ಬ್ರಿಟನ್ ಪ್ರಧಾನಿಯ ಅತ್ತೆ ಇನ್ಫೋಸಿಸ್ ನ ಸುಧಾ ಮೂರ್ತಿಯವರ ಜೊತೆ ಕುಳಿತಿದ್ದಾಗ ಒಂದು ಸೆಲ್ಫಿ‌ತಗೊಂಡಿದ್ದು‌ಅದನ್ನಿಲ್ಲಿ‌ ಹಾಕಿದ್ದೇನೆ..

ಡಾ.ಲಕ್ಷ್ಮೀ‌ ಜಿ‌ ಪ್ರಸಾದ್