ಭರವಸೆಯ ಯುವ ಸಂಶೋಧಕ ಸುರೇಶ್ ಮಂಗಲ್ಪಾಡಿಯವರ ಕೈಯಲ್ಲಿ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್
ಸುಮಾರು 18 ವರ್ಷಗಳ ಮೊದಲು ನಾನು ಇಂಚಲಂಗೋಡಿನಲ್ಲಿ ನಡೆಯುವ ಸರ್ಪಕೋಲ/ ಬೆರ್ಮೆರ ನಲಿಕೆ ರೆಕಾರ್ಡ್ ಮಾಡಲು ಹೋದಾಗ ಮಾಹಿತಿ ನೀಡಿ ಪೂರ್ಣ ಬೆಂಬಲ ನೀಡಿದವರು ರತ್ನಾಕರ,ಸುರೇಶ ಮತ್ತು ಸತೀಶ ಎಂಬ ಮಂಗಲ್ಪಾಡಿಯ ಸಹೋದರರು.
ಇವರಲ್ಲಿ ವೃತ್ತಿಯಲ್ಲಿ ಶಿಕ್ಷಕರಾಗಿರುವ ಅರ್ಥ ಶಾಸ್ತ್ರ ಸ್ನಾತಕೋತ್ತರ ಪದವೀಧರರಾದ ಸುರೇಶ್ ಅವರು ಇತ್ತೀಚೆಗೆ ಬಾಕುಡ ಸಮುದಾಯದವರ ಸರ್ಪಕೋಲದ ಬಗ್ಗೆ ಅಧ್ಯಯನ ಮಾಡಿ ಹೊಸ ಹೊಳಹುಗಳ ಸಂಶೋಧನಾ ಗ್ರಂಥವನ್ನು ಪ್ರಕಟಿಸಿದ್ದಾರೆ.ಪ್ರಸ್ತುತ ನಮ್ಮಕರಾವಳಿಯ ಸಾವಿರದೊಂದು ದೈವಗಳು ಕೃತಿಯನ್ನು ಮಲೆಯಾಳ ಭಾಷೆಗೆ ಅನುವಾದಿಸಲು ಮುಂದಾಗಿದ್ದಾರೆ
ಇವರಿಂದ ಇನ್ನಷ್ಟು ಅಧ್ಯಯನ ನಡೆಯಲಿ ಸಂಶೋಧನಾ ಕೃತಿಗಳು ಪ್ರಕಟವಾಗಲಿ ಎಂಬ ಹಾರೈಕೆ ನನ್ನದು

No comments:
Post a Comment