Monday 13 November 2023

ಕರಾವಳಿಯ ಸಾವಿರದೊಂದು ದೈವಗಳು- ಉದಯ ಬಿರ್ಮುಕಜೆ ಪೆರ್ಲಂಪಾಡಿ

 



ಕರಾವಳಿಯ ಸಾವಿರದೊಂದು ದೈವಗಳು  - ಉದಯ ಗೌರಿ ಬಿರ್ಮುಕಜೆ ,ಪೆರ್ಲಂಪಾಡಿ 


ಡಾ.ಲಕ್ಷ್ಮೀ ಜಿ.ಪ್ರಸಾದ್ ರವರು ಸಂಪಾದಿಸಿದ 'ಕರಾವಳಿಯ ಸಾವಿರದೊಂದು ದೈವಗಳು' ಕೃತಿಯನ್ನು ಲೇಖಕಿಯವರು ಕಳುಹಿಸಿಕೊಟ್ಟಿದ್ದು ಇಂದು( 21-09-2021) ಕೈ ಸೇರಿತು.ಕೊಡಗು ಸೇರಿದಂತೆ ಕಾರವಾರದಿಂದ ಕೊಟ್ಟಾಯಂವರೆಗಿನ ತುಳು,ಕನ್ನಡ,ಮಲಯಾಳ,ಕೊಡವ ಪರಿಸರದ ಇನ್ನೂರ ಇಪ್ಪತ್ತೆಂಟು ದೈವಗಳ ಮಾಹಿತಿಯುಳ್ಳ ಅಪರೂಪದಲ್ಲಿ ಅಪರೂಪವೆನಿಸುವ ಕೃತಿ ಇದಾಗಿದೆ. ವೃತ್ತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿರುವ ಇವರು ಸಂಸ್ಕ್ರತ, ಕನ್ನಡ,ಹಿಂದಿ ಭಾ಼ಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಒಂದು ಎಂ.ಫೀಲ್,ಎರಡು ಪಿ ಹೆಚ್.ಡಿ ಪಡೆದವರು.ಬಿ.ಎಸ್ಸಿ,ಬಿ.ಇಡಿ,ಲಿಪಿ ಶಾಸ್ತ್ರ ದಲ್ಲಿ ಡಿಪ್ಲೊಮ ಹೀಗೆ ಹಲವು ಶೈಕ್ಷಣಿಕ ಅರ್ಹತೆಯನ್ನು ಹೊಂದಿದವರು.ಬುದ್ಧಿ ಬಂದಾಗಿನಿಂದ ಬರೀ ಓದು,ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಗಟ್ಟಿಗಿತ್ತಿ .ಹೀಗೆ ಅವರ ಬಗ್ಗೆ ಬರೆಯುವುದು ಬಹಳಷ್ಟಿದೆ.ಅಂತಹ ಅಪ್ರತಿಮ ಫ್ರತಿಭೆ ಸರಳ ಸಜ್ಜನರಾದ ಲಕ್ಷ್ಮೀ ಜಿ.ಪ್ರಸಾದ್ ರವರ ಇಪ್ಪತ್ತು ವರ್ಷ ಗಳ ಅವಿರತ ಪರಿಶ್ರಮದ ಫಲವನ್ನು ಸಮಾಜದ ಮುಂದಿಟ್ಟಿದ್ದಾರೆ. ರಾಮಚಂದ್ರಾಪುರ ಮಠದ ಶ್ರೀಗಳ ಅಮೃತ ಹಸ್ತದಿಂದ ಲೋಕಾರ್ಪಣೆಗೊಂಡ ಕೃತಿ ಅತ್ಯಂತ ಸುಂದರವಾಗಿದೆ ಮೂಡಿ ಬಂದಿದೆ.130 gsm art paper ಬಳಸಲಾಗಿದೆ.ವರ್ಣ ಚಿತ್ರಗಳು ಮತ್ತು ಕಪ್ಪಬಿಳುಪು ಚಿತ್ರಗಳು ಅತ್ಯಂತ ಸ್ಪಷ್ಟವಾಗಿ ಬಂದಿವೆ.                     ಕರಾವಳಿಗರ ಪ್ರತಿ ಮನೆಯಲ್ಲೂ ಇರಲೇ ಬೇಕಾದ ಸಂಗ್ರಹಯೋಗ್ಯ ಕೃತಿ.ದೈವಗಳ ಆರಾಧಕರು ನಾವಾಗಿದ್ದರೂ ನಸವು ಆರಾಧಿಸುವ ದೈವಗಳ ಮಾಹಿತಿ ನಮಗೆ ಸ್ಪಷ್ಟವಾಗಿರುವುದಿಲ್ಲ ಅದಕ್ಕೆ ಪರಿಹಾರ ಕೃತಿ. ಜಾಸ್ತಿ ಬರೆಯುವುದಿಲ್ಲ ವನಿತೆಯೊಬ್ಬಳ ಸಾಹಸಕ್ಕೆ ಎಲ್ಲರೂ ಕೈ ಜೋಡಿಸಿ ಅವರ ಶ್ರಮವನ್ನು ಸಾರ್ಥಕಗೊಳಿಸೋಣ. ಈ ಕೃತಿಯನ್ನು ಕೊಂಡು ಓದೋಣ.ನಮ್ಮ ದೈವಗಳ ಬಗ್ಗೆ ತಿಳಿದುಕೊಳ್ಳೋಣ.ಭಕ್ತಿಯ ದೀವಟಿಕೆಗೆ ಮತ್ತಷ್ಟು ತೈಲ ಎರೆಯುವ ಕಾರ್ಯವಾಗಲಿ.                             ಈ ಕೃತಿಗಾಗಿ ಲಕ್ಷ್ಮೀ ಜಿ.ಪ್ರಸಾದ್ ರವರನ್ನು ಸಂಪರ್ಕಿಸಿ. ಮೊ.ಸಂಖ್ಯೆ.9480516684.

No comments:

Post a Comment