Tuesday 14 November 2023

ರಾಧು- ಡಾ.ಲಕ್ಷ್ಮೀ ಜಿ ಪ್ರಸಾದ್

 ರಾದು


ತುಳುನಾಡು ಹೆಣ್ಣು ಮಕ್ಕಳ ದಿಟ್ಟತನಕ್ಕೆಸಾಕ್ಷಿಯಾಗಿ ನಿಲ್ಲುವ ಪಾತ್ರ ರಾದುವಿನದು. ಶಾರದಾ ಜಿ. ಬಂಗೇರ ನಿರೂಪಿಸಿದ ಚಿಕ್ಕದೊಂದು ತುಳು ಕವಿತೆ ರಾದು.


ಹಾಡಿನಲ್ಲಿ ಹೇಳಿರುವಂತೆ ರಾದು ಬಹಳ ಒಳ್ಳೆಯ ಹೆಣ್ಣು ರಾದು ಅತ್ತೆಗೆ ಮೆಚ್ಚಿನ ಸೊಸೆ ಕೂಡ ನಾವು ಹೋಗುತ್ತೇವೆ’ ಎಂದು ರಾದು ಕೇಳಿದಾಗ ಹಾಗೆ ಯಾಕೆ ಹೇಳುತ್ತಿ ಮಗ ಎಂದುಅತ್ತೇ ಕೇಳುತ್ತಾರೆ. ಆಗ ಅವಳು ``ನಿಮ್ಮ ಮೊಮ್ಮಗ ಅಚ್ಯುತನಿಗೆ ಆಟವಾಡಲೆಂದು ಬುಗುರಿ ತರಲು ಹೋಗುವಾಗ ವಾಸ ಇಲ್ಲದ ಮನೆಯಲ್ಲಿ ನಿಮ್ಮ ಮಗ ಬಂಗೇರ ಮತ್ತು ನಡೆತೆಗೆಟ್ಟ ಹೆಣ್ಣು ಒಟ್ಟಿಗೆ ಇದ್ದರು. ನಾನು ಅಲ್ಲಿಗೆ ಹೋದದಕ್ಕೆ ನಿಮ್ಮ ಮಗ ಕೈಸೋಲುವಷ್ಟು ಹೊಡೆದರು. ಕಾಲು ಸೋಲುವಷ್ಟು ತುಳಿದರು. ಆದ್ದರಿಂದ ನಾನು ಮತ್ತು ಮಗ ಅಚ್ಯುತ ನನ್ನ ತವರಿಗೆ ಹೋಗುತ್ತೇನೆ’ ಎಂದು ಹೇಳುತ್ತಾಳೆ.© ಡಾ.ಲಕ್ಷ್ಮೀ ಜಿ ಪ್ರಸಾದ್


ಇಲ್ಲಿ ರಾದುವಿನ ದೃಢನಿರ್ಧಾರ ಪ್ರಕಟವಾಗುತ್ತದೆ. ತವರಿಗೆ ಹೊರಟ ಸೊಸೆಯಲ್ಲಿ ಅತ್ತೆ `ಹಾಗೆ ಹೋದರೆ ರಾದು ನೀನು ಮತ್ತೆ ಯಾವಾಗ ಬರುವೆ?’ ಎಂದು ಕೇಳುತ್ತಾರೆ. ಆಗ `ನಿಮ್ಮ ಮಗ ಸತ್ತಾಗ ಬಾರದಿದ್ದರೆ ಬೊಜ್ಜುಕ್ಕಾದರೂ ಬರುತ್ತೇನೆ’ ಎಂದು ಹೇಳುತ್ತಾರೆ ರಾದು. ಆದರೆ ಆ ಕ್ಷಣಕ್ಕೆ ಅವಳ ಕಣ್ಣಿನಲ್ಲಿ ನೀರು ಬರುತ್ತದೆ.© ಡಾ.ಲಕ್ಷ್ಮೀ ಜಿ ಪ್ರಸಾದ್


ತನ್ನ ಸಂಸಾರ ಹಾಳಾದ ಬಗ್ಗೆ ರಾದುವಿಗೆ ದುಃಖವಾಗುತ್ತದೆ. ಆದರೂ ಬೇರೆ ಹೆಣ್ಣಿನ ಸಹವಾಸ ಮಾಡಿದ್ದಲ್ಲದೆ ಅದನ್ನು ನೋಡಿದ್ದಕ್ಕಾಗಿ ಹೊಡೆದ ತುಳಿದ ಗಂಡನ ಜೊತೆ ಸಂಸಾರ ಮಾಡಲು ಅವಳ ಸ್ವಾಭಿಮಾನ ಒಪ್ಪುವುದಿಲ್ಲ. ಮಗನ ಕೈ ಹಿಡಿದು ಇಳಿದು ಹೋಗಿಯೇ ಬಿಡುತ್ತಾಳೆ ರಾದು. ಗಂಡನಾದವನು ಮಾಡುವ ಶೋಷಣೆಯ ಚಿತ್ರಣ ಇಲ್ಲಿದೆ. ತಪ್ಪುದಾರಿ ಹಿಡಿದು ತನ್ನ ಮೇಲೆ ದೌರ್ಜನ್ಯವೆಸಗಿದ ಗಂಡನನ್ನು ತಿರಸ್ಕರಿಸಿ ಹೊರ ನಡೆಯುವ ಧೈರ್ಯವನ್ನು ತೋರುತ್ತಾಳೆ ರಾದು.


ತುಳು ಜನಪದಕವಿತೆಗಳ ಕನ್ನಡ ಅನುವಾದಿತ ರೂಪ ಇಲ್ಲಿ ನೀಡಿರುವೆ 

4. ರಾದು




ನಾವು ಹೋಗುತ್ತೇವೆ ಅತ್ತೆ ಸೊಸೆ ಬರುವಳು


ಕಪ್ಪುರೂಪದಲ್ಲಿ ಒಳ್ಳೆ ಹೆಣ್ಣು ರಾಧು

 ಬಟ್ಟೆಯ ಗಂಟು ಕೊಡಿರಿ ಅತ್ತೆ


ಕುಟುಂಬದ ಮನೆಗೆ ಹೋಗುವೆ ನಾನು


ಹಾಗೆ ಯಾಕೆ ಹೇಳುತ್ತಿ ಮಗಳು ಆ ರಾದು 

ಎಂದು ಕೇಳುವಳು ಅತ್ತೆ


ನಿಮ್ಮ ಮೊಮ್ಮಗ ಅಚ್ಯುತನಿಗೆ ಆಡಲೆಂದು


ಎರಡು ಬುಗರಿ ತೆಗೆದುಕೊಂಡು ಬರುವಾಗ ಅತ್ತೆ


ಒಕ್ಕಲು ಇಲ್ಲದ ಮನೆಯಲ್ಲಿ ಅತ್ತೆಯವರೆ


ನಡತೆಗೆಟ್ಟ ಸರಸದಿಂದ ಇದ್ದರು


ವೀಳ ಎಲೆ ಅಡಿಕೆ ತಿನ್ನುತ್ತಿದ್ದರು ಅತ್ತೆಯವರೆ


ನಾನು ಅಲ್ಲಿಗೆ ಹೋದೆ  ಅತ್ತೆ


ನೋಡುವಾಗ ಅತ್ತೆಯವರ ಕೈ ಸುಸ್ತಾಗುವಷ್ಟು ಹೊಡೆದರು 

ಕಾಲು ಸೋಲುವಷ್ಟು ತುಳಿದರು ಅತ್ತೆ © ಡಾ.ಲಕ್ಷ್ಮೀ ಜಿ ಪ್ರಸಾದ್ 


ಅದÀಕ್ಕಾಗಿಯೇ ನಾನು ಹೋಗುವೆ ಹೋಗುವೆ ಅತ್ತೆ


ಎಂದು ಹೇಳಿದಳು ರಾದು


ಹಾಗೆ ಹೋದರÉ ರಾದುಹೋಗಿ ಇಂದು ಹೋದ ರಾದು ಮಗಳೇ


ಇನ್ನು ಯಾವಾಗ ಬರುವಿ ಮಗಳ ಎಂದು ಕೇಳಿದರು ಅತ್ತೆಯವರು


ನಿಮ್ಮ ಮಗ ಸತ್ತಾಗೊಂದು ಸಾವಿಗೆ ಬರದಿದ್ದರೆ ಇರುವ ಬೊಜ್ಜಕ್ಕೆ 


ಬರುವೆ ಎಂದು ಕಣ್ಣನೀರು ಸುರಿಸಿದಳು ಇಳಿದು ಹೋದಳು ರಾದು

© ಡಾ.ಲಕ್ಷ್ಮೀ ಜಿ ಪ್ರಸಾದ್ 

*****

No comments:

Post a Comment