Tuesday 14 November 2023

ನೆತ್ತೆರ್ ಮುಗುಳಿ ( ಪಾಪೆಲು ಚಾಮುಂಡಿ ) - ಡಾ.ಲಕ್ಷೀ ಜಿ ಪ್ರಸಾದ್

 ಪಾಪೆಲು ಚಾಮುಂಡಿ : 

       ಪಾಪೆಲು ಚಾಮುಂಡಿ ಅನ್ಯಾಯ ಮಾಡಿದವನನ್ನು ರಕ್ತಕಾರಿ ಸಾಯುವಂತೆ ಮಾಡುತ್ತದೆ. ಆದ್ದರಿಂದ ಪಾಪೆಲು ಚಾಮುಂಡಿ ದೈವವು ನೆತ್ತರ ಮುಗುಳಿ ಎಂದೇ ಪ್ರಸಿದ್ಧವಾಗಿದೆ. ಪಾಪೆಲು ಚಾಮುಂಡಿ ದೈವದ ಪಾಡ್ದನದ ಪ್ರಕಾರ ಸಾವಿರ ವರ್ಷಗಳ ಹಿಂದೆ ಘಟ್ಟದ ಮೇಲಿನಿಂದ ಚಾರ್ಮಾಡಿ (ಬಂಗಾಡಿ) ಘಾಟಿಯ ಮೂಲಕ ವ್ಯಾಘ್ರವಾಹಿನಿ ರಕ್ತ ಚಾಮುಂಡಿ ದೈವವು ಇಳಿದು ಬರುತ್ತದೆ. ಲಿಂಗಾಯತ ಮತಕ್ಕೆ ಸೇರಿದ್ದ ರಾಮಸೆಟ್ಟಿ ಎಂಬುವರು ರುದ್ರಾಂಶ ಸಂಭೂತರಾಗಿದ್ದರು. ಅವರ ಜೊತೆಗೆ ವ್ಯಾಘ್ರವಾಹಿನಿ ರಕ್ತ ಚಾಮುಂಡಿಯು ಕಾವು ತ್ರಿಮೂರ್ತಿ ದೇವಸ್ಥಾನಕ್ಕೆ ಬಂದು ತ್ರಿಮೂರ್ತಿಗಳಲ್ಲಿ ತನಗೆ ನೆಲೆಸಲು ಯಾವ ಸ್ಥಳ ಯೋಗ್ಯವಾದುದುಎಂದು ಕೇಳುತ್ತದೆ. ಆ ಕಾಲದಲ್ಲಿ ಅಪ್ಪೆಟ್ಟಿ ಈರೆಟ್ಟಿ ಒಡೆಯರುಗಳು ಧರ್ಮಿಷ್ಠರಾಗಿದ್ದುಸತ್ಯ-ಧರ್ಮ-ನ್ಯಾಯ ನೀತಿಗಳ ಸಾಕಾರ ಮೂರ್ತಿಗಳಾಗಿದ್ದರು.© ಡಾ.ಲಕ್ಷ್ಮೀ ಜಿ‌ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು,ಮೊಬೈಲ್ 9480516684  ಆದ್ದರಿಂದ ದೇವರು ವ್ಯಾಘ್ರವಾಹಿನಿ ರಕ್ತಚಾಮುಂಡಿಗೆ ಅಪ್ಪೆಟ್ಟಿ ಒಡೆಯರುಗಳಿಂದ ಕಟ್ಟೆ ಗುಡಿಗಳನ್ನು ನಿರ್ಮಿಸಿಕೊಂಡು ಕಾವು ದೇವರುಗಳಿಗೆ ಪ್ರಧಾನ ಬಂಟರಂತೆ ಇದ್ದು ಗ್ರಾಮಕ್ಕೆ ಗ್ರಾಮಾಧಿ ದೇವತೆ ಎನಿಸಿಕೊಂಡಿರಲು ಆದೇಶವೀಯುತ್ತಾರೆ. © ಡಾ.ಲಕ್ಷ್ಮೀ ಜಿ ಪ್ರಸಾದ್ 
ವ್ಯಾಘ್ರವಾಹಿನಿ ರಕ್ತಚಾಮುಂಡಿಯ ಜೊತೆಗೆ ಬಂದ ದೈವಾಂಶ ಸಂಭೂತರಾದ ರಾಮಸೆಟ್ಟಿ ತಮ್ಮ ಯೋಗ ಶಕ್ತಿಯಿಂದ ಮನುಷ್ಯ ರೂಪವನ್ನು ಬಿಟ್ಟು ಬೈರವ ದೇವತೆಯಾಗಿ ವ್ಯಾಘ್ರವಾಹಿನಿ ರಕ್ತಚಾಮುಂಡಿ ದೈವದೊಂದಿಗೆ ಸೇರುತ್ತಾರೆ. ರಾಮಶೆಟ್ಟಿ ಭೈರವ ದೇವತೆಯಾಗಿ ರಕ್ತಚಾಮುಂಡಿ ಸೇರಿಗೆಗೆ ಸಂದು ಪಾಪೆಲು ಚಾಮುಂಡಿ ಎಂಬ ದೈವವಾಗಿ ಆರಾಧನೆ ಪಡೆಯುತ್ತಾರೆ. ಕೊಕ್ಕಡ, ಕಾವು, ಬೆಳ್ತಂಗಡಿ, ಪರಿಸರದಲ್ಲಿ ಪಾಪೆಲು ಚಾಮುಂಡಿ (ನೆತ್ತರು ಮುಗುಳಿ) ದೈವಕ್ಕೆ ಆರಾಧನೆ ಇದೆ.© ಡಾ.ಲಕ್ಷ್ಮೀ ಜಿ ಪ್ರಸಾದ್
ಹೆಚ್ಚಿನ ಮಾಹಿತಿಗಾಗಿ ಕರಾವಳಿಯ ಸಾವಿರದೊಂದು ದೈವಗಳು ಗ್ರಂಥ ನೋಡಬಹುದು 

No comments:

Post a Comment