Sunday 12 November 2023

ತುಳು ಜನಪದ ಕವಿತೆಗಳು

 ಶ್ರೀಮತಿ ಶಾರದಾ ಜಿ. ಬಂಗೇರರು ಹಾಡಿದ ತುಳು ಜನಪದ  ಕವಿತೆಗಳು 






1.ಪುಕ್ಕೇದಿ


 




ಲೇಲ ಲೇಲೆ ಲೇಲೇ ಲಾ ಪುಕ್ಕೇದಿ


ಲೇಲ ಲೇಲೆ ಲೇಲೇ ಲಾ ಪುಕ್ಕೇದಿ


ಮೇಲಿನ ಕೇರಿ ಕೋಡಂಗನಿಗೆ ಕೋಡಂಗ


ಲೇಲ ಲೇಲೆ ಲೇಲೇ ಲಾ ಲಾ ಪುಕ್ಕೇದಿಗ


ಕೆಳಗಿನ ಕೇರಿಪುಕ್ಕೇದಿಗೆ ಕೋಡಂಗ


ಬೆಳಗ್ಗಿನ ಜಾವ ಎದ್ದನೇ ಕೋಡಂಗ


ಹಾಕಿ ಗುದ್ದಲಿ ಹಿಡಿದುಕೊಂಡನೇ ಕೋಡಂಗ


ಒಡೆಯನ ಮನೆಗೆ ಹೋದನೇ ಕೋಡಂಗ


ಲೇಲ ಲೇಲೆ ಲೇಲೇ ಲಾ ಕೋಡಂಗ


ಬೆಳಗ್ಗಿನ ಜಾವದಲ್ಲಿ ಎದ್ದುಕೊಂಡಾಳೇ ಪುಕ್ಕೇದಿ


ಕುಡ್ಪುಕರಗಟೇ (?) ಹಿಡಿದುಕೊಂಡಾಳೇ ಪುಕ್ಕೇದಿ


ಒಡೆಯನ ಮನೆ ಹೋದಳೇ ಪುಕ್ಕೇದಿ


ಲೇಲ ಲೇಲೆ ಲೇಲೇ ಲಾ ಕೋಡಂಗ


ಮುದ್ದುಕರುಗಳನ್ನು ಸೇರಿಸಿಕೊಂಡಳೇ ಪುಕ್ಕೇದಿ


ಹಟ್ಟಿಯೊಳಗೆ ಹೋದಾಳೇ ಪುಕ್ಕೇದಿ


ಲೇಲ ಲೇಲೆ ಲೇಲೇ ಲಾ ಪುಕ್ಕೇದಿ


ಮುದ್ದುಕರುಗಳನ್ನು ಸೇರಿಸಿಕೊಂಡಳೇ ಪುಕ್ಕೇದಿ


ಹಟ್ಟಿಯೊಳಗೆ ಹೋದಾಳೇ ಪುಕ್ಕೇದಿ


ಲೇಲ ಲೇಲೆ ಲೇಲೇ ಲಾ ಪುಕ್ಕೇದಿ


ಬೆಳಗ್ಗಿನ ಜಾವದಲ್ಲಿ ಎದ್ದುಕೊಂಡಾಳೇ ಪುಕ್ಕೇದಿ


ಮುದ್ದು ಕರುಗಳನ್ನು ಮೇಯಿಸುವಳೇ ಪುಕ್ಕೇದಿ


ಸೆಗಣಿ ಹಿಡಿದುಕೊಂಡಾಳೇ ಪುಕ್ಕೇದಿ


ಅಂಗಳವನ್ನು ಗುಡಿಸಿದಳೇ ಪುಕ್ಕೇದಿ


ಲೇಲ ಲೇಲೆ ಲೇಲೇ ಲಾ ಪುಕ್ಕೇದಿ


ಸೆಗಣಿಹಾಕಿ ಸಾರಿಸಿಕೊಂಡಾಳೇ ಪುಕ್ಕೇದಿ


ಮೇಲು ಹೊದಿಕೆ ಹಾಕಿಕೊಂಡಾಳೇ ಪುಕ್ಕೇದಿ


ಅಕ್ಕಚ್ಚನ್ನು ಕಲಿಸಿಕೊಂಡಾಳೇ ಪುಕ್ಕೇದಿ


ಮುದ್ದು ಕರುಗಳಿಗೆ ಕೊಟ್ಟುಕೊಂಡಾಳೇ ಪುಕ್ಕೇದಿ


ಲೇಲ ಲೇಲೆ ಲೇಲೇ ಲಾ ಪುಕ್ಕೇದಿ


ಸಿರಿ ಗಿಂಡಿ ಹಿಡಿದುಕೊಂಡಾಳೇ ಪುಕ್ಕೇದಿ


ಕಪಿಲೇ ಹಸು ಕಟ್ಟಿದಾಳೇ ಪುಕ್ಕೇದಿ


ಸೊರಸೊರ ಹಾಲು ಹಿಡಿದುಕೊಂಡಾಳೇ ಪುಕ್ಕೇದಿ


ಗಿಂಡಿ ಹಾಲು ಹಿಡಿದುಕೊಂಡಾಳೇ ಪುಕ್ಕೇದಿ


ಒಡೆಯನಲ್ಲಿಗೆ ಹೋದಾಳೇ ಪುಕ್ಕೇದಿ


ಕಾಫಿ ತಿಂಡಿ ಮಾಡಿಕೊಂಡಾಳೇ ಪುಕ್ಕೇದಿ


ಲೇಲ ಲೇಲೆ ಲೇಲೇ ಲಾ 


ಒಡೆಯ ಕೂಡ ಬಂದರು ಪುಕ್ಕೇದಿ


ಯಾರೇ ಪುಕ್ಕೇದಿ ಹೇಳಿದರು


ಒಳಗೆ ಹೊರಗೆ ಹೋಗಬೇಕು ಪುಕ್ಕೇದಿ


ಜಾತಿಯಲ್ಲಿ ನಾನು ಕೆಳಗೆ ಆಗಿದ್ದೇನೆ ಬಲ್ಲಾಳರೆ


ನಾನು ಒಳಗೆ ಬರುವುದಿಲ್ಲ ಹೇಳಿದಳು




ಯಾರೇ ಪುಕ್ಕೆದಿಯೇ ಕೇಳಿದೆಯ


ಒಳಗೆ ಹೊರಗೆ ಹೋಗಬೇಕಮ್ಮ 


ಅಡಿಗೆ ಎಲ್ಲ ಮಾಡಿಕೊ ಪುಕೇದಿ




ಒಡೆಯನ ಮನೆ ಹೋಗಿಕೊಂಡಾಳೇ ಪುಕ್ಕೇದಿ


ಶುದ್ಧ ಮುದ್ರಿಕೆ ಮಾಡಿಕೊಂಡಳೇ ಪುಕ್ಕೇದಿ


ಮನೆಗೆ ಹೊರಡುವ ಪುಕ್ಕೇದಿಯೇ ಪುಕ್ಕೇದಿಯನ್ನು




ಯಾರೇ ಇವಳೇ ಪುಕ್ಕೇದಿಯೇ ಪುಕ್ಕೇದಿ


ಇಲ್ಲಿಗೊಮ್ಮೆ ಬಾ ಎಂದು ಹೇಳಿದ ಬಲ್ಲಾಳರು


ಲೇಲ ಲೇಲೆ ಲೇಲೇ ಲಾ ಕೋಡಂಗ


ನನಗೊಬ್ಬ ಕೋಡಂಗ ಇದ್ದಾನೆ ಬಲ್ಲಾಳರೆ


ಹೋಗಬೇಕು ಮನೆಗೆ ನನಗೆ ಎಂದಳು ಪುಕ್ಕೇದಿ


ಒಂದು ಮುಷ್ಠಿ ಮದ್ದು ಕೊಡುವೆನು ಪುಕ್ಕೇದಿ


ದಟ್ಟ ಪುಷ್ಪ ಬೆಳೆದ ಕೆಸುವು ತೆಗೆದುಕೋ ಪುಕ್ಕೇದಿ


ಸಾಂಬಾರು ಮಾಡಿ ಇಟ್ಟುಬಿಡು ಎಂದರು ಬಲ್ಲಾಳರು




ಅಷ್ಟು ಮಾತು ಕೇಳಿದಳು ಪುಕ್ಕೇದಿ


ಅಂಗಳದ ಕೆಳಗೆ ಇಳಿದುಕೊಂಡಳು ಪುಕ್ಕೇದಿ


ಕೆಳಗಿನ ಗದ್ದೆಗೆ ಹೋದಳು ಪುಕ್ಕೇದಿ


ಕೆಸುವು ಕೊಯ್ದುಕೊಂಡಳು ಪುಕ್ಕೇದಿ




ಮನೆಗೆ ಬಂದಳು ಪುಕ್ಕೇದಿ


ಅವಸರವಸರದಿಂದ ಕೊಯ್ದಳು ಪುಕ್ಕೇದಿ


ಹುಳಿಹಾಕಿ ಸಾಂಬಾರು ಮಾಡಿದಳು ಪುಕ್ಕೇದಿ


ಒಂದು ಹಾಕಿ ಮಾಡುವಾಗ ಪುಕ್ಕೇದಿ


ಏನೇನೇ ಪುಕ್ಕೇದಿ ಹೇಳಿದನು


ಲೇಲ ಲೇಲೆ ಲೇಲೇ ಲಾ ಕೋಡಂಗ


ಯಾರಯ್ಯ ಕೋಡಂಗಾನ ಕೋಡಂಗ


ಸಾಂಬಾರೆಲ್ಲ ಮಾಡಿದ್ದೇನೆ ಕೋಡಂಗ


ಒಳಗಿನ ಸುತ್ತಿಗೆ ಹೋಗುವಳು ಪುಕ್ಕೇದಿ


ಒಂದು ಪಾತ್ರೆ ಸಾಂಬಾರು ಹಾಕಿದಳು ಪುಕ್ಕೇದಿ


ಲೇಲ ಲೇಲೆ ಲೇಲೇ ಲಾ ಪುಕ್ಕೇದಿ


ಊಟವನ್ನು ಮಾಡುವಿಯಂತೆ ಕೋಡಂಗ


ಕೆಸುವಿನ ಸಾಂಬಾರನ್ನು ಕೊಡುತ್ತಾಳವಳು


ಅವಸರವಸರದಿಂದ ತಿಂದುಕೊಂಡಳು ಕೋಡಂಗ


ಲೇಲ ಲೇಲೆ ಲೇಲೇ ಲಾ ಕೋಡಂಗ


ಸ್ವಲ್ಪ ಸ್ವಲ್ಪ ಸಂಕಟವಾಗುತ್ತದೆ ಪುಕ್ಕೇದಿ


ಒಂದು ಮುದ್ದೆ ಹುಳಿ ಹಾಕಿದ್ದೇನೆ ಕೋಡಂಗ


ಅಡ್ಡ ನೀಟ ಬಿದ್ದುಕೊಂಡನು ಕೋಡಂಗ


ಲೇಲ ಲೇಲೆ ಲೇಲೇ ಲಾ ಪುಕ್ಕೇದಿ


ಕೈಬಿಟ್ಟು ಕೈಲಾಸ ಸೇರಿಕೊಂಡನು ಕೋಡಂಗ


ದೇಹಬಿಟ್ಟು ವೈಕುಂಠ ಸೇರಿಕೊಂಡನು ಕೋಡಂಗ


ಲೇಲ ಲೇಲೆ ಲೇಲೇ ಲಾ ಕೋಡಂಗ


ಅರಸನ ಮನೆ ಹೋದಳು ಪುಕ್ಕೇದಿ


ಯಾರಯ್ಯ ಒಡೆಯ ಬಲ್ಲಾಳರೇ


ಒಂದು ಜೀವ ಹೋಗಿದೆ ಬಲ್ಲಾಳರೇ


ಕೈಬಿಟ್ಟು ಕೈಲಾಸ ಸೇರಿಕೊಂಡನು


ದೇಹಬಿಟ್ಟು ವೈಕುಂಠ ಸೇರಿದನು


ನನ್ನ ಕೋಡಂಗ ತಪ್ಪಿ ಹೋದನು ಬಲ್ಲಾಳರೆ




ಹೋದರೆ ಹೋಗಲಿ ಪುಕ್ಕೇದಿಯೇ


ನಾನು ನಿನ್ನನ್ನು ಇಟ್ಟುಕೊಳ್ಳುತ್ತೇನೆ ಎಂದರು ಬಲ್ಲಾಳರು




ಶುದ್ಧ ಮುದ್ರಿಕೆ ಮಾಡಿಕೋ ಪುಕ್ಕೇದಿ


ಚಿನ್ನದೊಡವೆ ಇಟ್ಟುಕೋ ಎಂದರು ಬಲ್ಲಾಳರು




ಆ ಕಡೆಯ ಮಾವಿನ ಮರ ಕಡಿಸಿದರು


ಈ ಕಡೆಯ ಹಲಸಿನ ಮರ ಕಡಿಸಿದರು


ಆಸನದಿಂದ ಕೊಡಿಯಲ್ಲಿ ಕೋಡಂಗನಿಗೆ


ಮಸಣಕ್ಕೆ ಜಾಗ ಮಾಡಿದರು




ಸ್ನಾನ ಮಾಡಿಸಿ ತಂದರು ಕೋಡಂಗನನ್ನು


ಕಾಷ್ಯಕ್ಕೆ ಇಡುವಾಗ ಒಡೆಯರು


ಏನೇ ಪುಕ್ಕೇದಿ ನಿನಗೆ ಯಾರು ಇಲ್ಲ


ಒನ್ನ ಬೇಡ ನಾನು ಇದ್ದೇನೆಂದು ಹೇಳಿದರು ಬಲ್ಲಾಳರು


ಒಳಗೆ ಕರೆದರು ಬಲ್ಲಾಳರು




ಒಳಗೆ ಬರುವುದಿಲ್ಲ ಬಲ್ಲಾಳರೆ


ನಾನು ಕೆಳಗಿನ ಜಾತಿ ಎಂದು ಹೇಳಿದಳು ಪುಕ್ಕೇದಿ


ಜಾತಿಗಾದರು ಜನಿವಾರ ಪುಕ್ಕೇದಿ


ನೀನು ಬಾ ಎಂದರು ಬಲ್ಲಾಳರು




ಕೈಯಲ್ಲಿ ಹಿಡಿದುಕೊಂಡಾಗ ಹೇಳಿದಳು


ಹೀಗೆ ಬರಲಾರೆ ಎಂದಳು ಪುಕ್ಕೇದಿ


ರೇಷ್ಮೆ ಸೀರೆ ಕೊಡಿ ಎಂದಳು ಪುಕ್ಕೇದಿ


ಕೈಗೆ ಬಳೆ ಕೊಡಿ ಎಂದಳು ಪುಕ್ಕೇದಿ


ಹಣೆಗೆ ಬೊಟ್ಟು  ಇಟ್ಟುಕೊಂಡಳು ಪುಕ್ಕೇದಿ




ಇನ್ನೇನುಬೇಕು ಕೇಳಿದ ಬಲ್ಲಾಳ


ನಿಮ್ಮ ಹೆಂಡತಿಯ ತಾಳಿ ಕೂಡಿ ಬಲ್ಲಾಳರೆ


ನಾನು ಹೊಸಿಲು ದಾಟಬೇಕಾದರೆ ಎಂದಳು ಪುಕ್ಕೇದಿ


ಲೇಲ ಲೇಲೆ ಲೇಲೇ ಲಾ ಪುಕ್ಕೇದಿ


ತಾಳಿಯನ್ನು ಕೂಡ ತಂದನು ಬಲ್ಲಾಳ


ಪುಕ್ಕೇದಿ ಕೈಗೆ ಕೊಟ್ಟಾಗ ಹೇಳುವಳು


ಇನ್ನು ಒಂದಾಗಬೇಕಾದರೆ ಬಲ್ಲಾಳ


ಕೈಕೈ ಹಿಡಿದು ಮೂರು ಸುತ್ತು ಕಾಷ್ಠಕ್ಕೆ


ಮೂರು ಬಾರಿ ಸುತ್ತು ಬರುವ ಎಂದು ಹೇಳಿದಳು


ಲೇಲ ಲೇಲೆ ಲೇಲೇ ಲಾ ಪುಕ್ಕೇದಿ


ಮೂರು ಸುತ್ತು ಬಲಿ ಬಂದಳು ಪುಕ್ಕೇದಿ


ಕಾಷ್ಯಕ್ಕೆ ಹಾರಿದಳು ಪುಕ್ಕೇದಿ


ಕೈಬಿಟ್ಟು ಕೈಲಾಸ ಸೇರಿದಳು ಪುಕ್ಕೇದಿ


ದೇಹ ಬಿಟ್ಟು ವೈಕುಂಠ ಸೇರಿದಳು ಪುಕ್ಕೇದಿ


ಲೇಲ ಲೇಲೆ ಲೇಲೇ ಲಾ ಪುಕ್ಕೇದಿ




2 ರಾಮಚಂದಿರ ಮರಲ ನಿಮ್ರ್ಯಾರೇ




ರಾಮಚಂದಿರ ಮರವ ನಿರ್ಮಿಸಿದರು


ಅಯ್ಯೊ ಸ್ವಾಮಿ ಮುತ್ತಿನೊಂದು ಕೆರೆಯ ನಿರ್ಮಿಸಿದರು


ಬೆಣ್ಣೆ ಮಾರುವ ಗೊಲ್ಲರ ಹುಡುಗಿಯರು


ಓ ಬೆಣ್ಣೆ ಮಾರಿಕೊಂಡು ಹೋಗುವಾಗ


ದಾರಿಯಲ್ಲಿ ಅಡ್ಡಕಟ್ಟಿದರು.


ಅಯ್ಯೊ ಸ್ವಾಮಿ ಬೆಣ್ಣೆಯ ಬುಟ್ಟಿ ಎಳೆದು ಹಾಕಿದರು


ಓ ಗೋಪ್ಯಮ್ಮ ನಿಮ್ಮ ಮಗ ತಂಟೆ ಮಾಡುತ್ತಾನೆ


ಎಂದು ಹೇಳಿದರುಗೊಲ್ಲರ ಹುಡುಗಿಯರು




ರಾಮಚಂದಿರ ಮರವ ನಿರ್ಮಿಸಿದರು


ಅಯ್ಯೊ ಸ್ವಾಮಿ ಮುತ್ತಿನೊಂದು ಕೆರೆಯ ನಿರ್ಮಿಸಿದರು


ನೀರಿಗೆಂದು ಹೋಗುವಳುವಳು ಮೋಹಿನಿ ಮಗಳು


ದಾರಿಗೆ ಅಡ್ಡ ನಿಂತು ಕೊಡವನ್ನು ಎಳೆದರು


ಕೊಡವನ್ನೆಳೆದು ಒಡೆದು ಹಾಕಿದರು


ಅಯ್ಯೊ ಸ್ವಾಮಿ ಕೊಡವನ್ನು ಒಡೆದು ಹಾಕಿದರು


ಅಯ್ಯೊ ಸ್ವಾಮಿ ಉಟ್ಟ ಸೀರೆ ಹರಿದು ಹಾಕಿದರು


ಉಟ್ಟ ಸೀರೆ ಹರಿದು ಹಾಕಿದರು


ಅಯ್ಯೊ ಸ್ವಾಮಿ ಹಾಕಿದ ರವಿಕೆ ಬಿಚ್ಚಿ ಹಾಕಿದರು 


ಕೈಯ ಬಳೆ ಒಡೆದು ಹಾಕಿದರು


ಅಯ್ಯೊ ಸ್ವಾಮಿ ಎಂದು ಹೇಳಿದಳು ಮೋಹಿನಿ ಮಗಳು




ಮಣ್ಣಿನ ಕೊಡ ಒಡೆದು ಹೋಯಿತೇನೇ


ಓ ಮೋಹಿನಿ ಮಗಳೇತಾಮ್ರದ ಕೊಡ ತರಿಸಿಕೊಡುವೆನು




ಉಟ್ಟು ಸೀರೆ ಹರಿದುಹೋಯ್ತೇನೇ


ಓ ಮೋಹಿನಿ ಮಗಳೇಹೊಸ ರವಿಕೆ ಹೊಲಿಸಿ ಕೊಡುವೆ




ಕೈಯ ಬಳಿ ಒಡೆದು ಹೋಯ್ತೇನೇ


ಓ ಮೋಹಿನಿ ಮಗಳೇ


ಚಿನ್ನದ ಬಳೆ ಮಾಡಿಸಿ ಕೊಡುವೆನು


ಹೇಳಿದವರು ಅಯ್ಯೊ ಸ್ವಾಮಿನಿಯೇ




ರಾಮ ಚಂದಿರ ಮರವ ನಿರ್ಮಿಸಿದರು


ಅಯ್ಯೊ ಸ್ವಾಮಿ ಮುತ್ತಿನೊಂದು ಕೆರೆಯ ನಿರ್ಮಿಸಿದರು


ಬೆಣ್ಣೆ ಮಾರುವ ಗೊಲ್ಲರ ಹುಡುಗಿಯರು


ಬೆಣ್ಣೆ ಮಾರಿ ಬರುವಾಗಲ್ಲಿ


ಯಾರಮ್ಮ ಗೋಪ್ಯಮ್ಮ


ದಾರಿಯಲ್ಲಿ ನಿಂತಿದ್ದಾರೆ ಅಯ್ಯೊ ಸ್ವಾಮಿ


ಬುಟ್ಟಿ ತೆÉಗೆದು ಸೊಂಟ ಹಿಡಿದರು


ಬೆಣ್ಣೆಮಾರುವ ಗೊಲ್ಲರ ಹುಡುಗಿಯರು


ಹಾರಿಕೊಂಡು ಓಡಿಕೊಂಡು ಮನೆಗೆ ಬಂದರು


ಯಾರಮ್ಮಾ ಗೋಪ್ಯಮ್ಮಾ ಯಾರಮ್ಮಾ ಗೋಪ್ಯಮ್ಮಾ


ನಿಮ್ಮ ಮಗ ದಾರಿಯಲ್ಲಿ ನಿಂತು ಬುಟ್ಟ್ಟಿ ಹಿಡಿದರು


ನಾವು ಓಡಿಕೊಂಡು ಬಂದೆವೆಂದು


ಹೇಳಿದರು ಗೊಲ್ಲರ ಹುಡುಗಿಯರು




ನನ್ನ ಕೃಷ್ಣ ಬಾಲಕೃಷ್ಣನು


ತೊಟ್ಟಿಲಿನಲ್ಲಿ ಆಡುತ್ತಿದ್ದಾನೆ ಬಟ್ಟಿಲಿನಲ್ಲಿ ಆಡುತ್ತಿದ್ದಾನೆ


ಚೆಂಡಿನಲ್ಲಿ ಆಡುತ್ತಾನೆ ಬಾಲಕೃಷ್ಣನೆಂದು


ಹೋಗಿ ಎಂದು ಜೋರು ಮಾಡಿದರು




ತೊಟ್ಟಿಲ ಹತ್ತಿರಹೋಗಿ ಇಣುಕಿ ನೋಡುವಾಗ


ನಗಾಡಿಕೊಂಡು ಇದ್ದಾರೆ ಬಾಲಕೃಷ್ಣನು


ರಾಮ ಚಂದಿರ ಮರವ ನಿರ್ಮಿಸಿದರು


ಅಯ್ಯೊ ಸ್ವಾಮಿ ಮುತಿನೊಂದು ಕೆರೆಯ ನಿರ್ಮಿಸಿದರು




3.ಬಂಗರಾಳ್ವಾಗ


ನೀರುಗೆಂದು ಹೋಗುವಳವಳು ಬಂಗರಾಳ್ವಾಗ


ನೀರಿಗೆಂದು ಹೋಗುವಳವಳು ಬಂಗರಾಳ್ವಾಗ


ನೀರಿಗೆಂದುಹೋಗುವಾಗ ದಾರಿ ಗಡ್ಡ


ತಡಮೆಯಲ್ಲಿ ನಿಂತಿದ್ದಾನೆ ದೇರೆ ಮುಂಡೋರಿ




ದಾರಿ ಬಿಡು ತಡಮೆ ಸರಿ ದೇರೆ ಮುಂಡೋರಿ


ದಾರಿ ಬಿಡಲು ತಡಮೆ ಸರಿಸಲು


ನನಗೊಂದು ಮಾತುಹೇಳಬೇಕೆಂದನು ದೇರೆ ಮುಂಡೋರಿ


ನೀರು ತೆಗೆದುಕೊಂಡು ಬರುವಾಗ ದಾರಿಗಡ್ಡ


ತಡಮೆಯಲ್ಲಿ ನಿಂತಿದ್ದಾನೆ ಬೇರೆ ಮುಂಡೋರಿ




ದಾರಿ ಬಿಡು ತಡಮೆ ಸರಿಸು


ನಿನಗೊಂದು ಮಾತು ನಾಳೆ ಹೇಳುವೆ ಎಂದು ಅವಳು ಹೇಳಿದಳು


ದಾರಿಬಿಟ್ಟು ತಡಮೆ ಸರಿಸಿ ನಿಂತನು ದೇರೆ ಮುಂಡೋರಿ


ಆ ದಿನ ಹೋಯಿತಪ್ಪ ಬಂಗರಾಳ್ವಾಗನಿಗೆ




ಮರುದಿನ ಬಂದಳವಳು ಬಂಗರಾಳ್ವಾಗ


ನೀರಿಗೆಂದು ಹೋಗುವಾಗ ನಿನ್ನೆ ಹೇಳಿದ


ಮಾತಿಗೆ ಉತ್ತರ ಕೊಡು ಬಂಗರಾಳ್ವಾಗ


ಎಂದು ಹೇಳವನು ದೇರೆ ಮುಂಡೋರಿ




ದಾರಿ ಬಿಡದಿದ್ದರೆ ತಡಮೆ ಸರಿಸದಿದ್ದರೆ


ನಾನು ಈಗ ಬೊಬ್ಬೆ ಹಾಕುವೆ ಎಂದು ಅವಳು ಹೇಳಿದಳು


ಬೊಬ್ಬೆ ಹಾಕಿ ಕರೆಯುವರು ಒಂದು ಮಾಡುವರು




ನಿನ್ನನ್ನು ಬಿಟ್ಟು ಬೇರೆ ನನಗೆ ಸಿಗುವುದಿಲ್ಲ


ಕೈಯಲ್ಲಿ ಹಿಡಿದು ಬಳೆ ಒಡೆಯುತ್ತಾನೆ ದೇರೆ ಮುಂಡೋರಿ


ಹಿಡಿದು ನಾಲ್ಕು ಏಟು ಇಕ್ಕುತ್ತಾರವರು ದೇರ ಮುಂಡೋರಿ




ಹಾದಿ ಬಿಟ್ಟು ತಡಮೆ ಸರಿಸಿದ ದೇರೆ ಮುಂಡೋರಿ


ನೀರು ತೆಗೆದುಕೊಂಡು ಹೋದಳವಳು ಬಂಗರಾಳ್ವಾಗ




ರಾತ್ರಿಯ ಹೊತ್ತಿನಲ್ಲಿ ಸ್ನಾನಕ್ಕೆ ಹೋಗುವಾಗ


ದಾರಿಗಡ್ಡ ತಡಮೆಯಲ್ಲಿ ನಿಂತಿದ್ದಾನೆ ದೇರೆ ಮುಂಡೋರಿ


ದಾರಿಬಿಡು ತಡಮ್ಮೆ ಸರಿಸು ಎಂದಳು




ಹಿಡಿದ ಕೊಡವನ್ನು ಎತ್ತಿ ಒಂದು ಏಟು ಹಾಕುತ್ತಾಳೆ


ಓಡಿಕೊಂಡು ಹೋದನಾತ ದೇರೆ ಮುಂಡೋರಿ




ಅಷ್ಟು ಹೊತ್ತಿಗೆ ಹೇಳುತ್ತಾಳವಳು ಬಂಗರಾಳ್ವಾಗ


ಊರಿಗೆ ಬಂದ ಮಾರಿ ಆ ಕಡೆ ಹೋಯಿತು


ಎಂದು ಹೇಳಿದಳು ಬಂಗರಾಳ್ವಾಗ








4. ರಾದು




ನಾವು ಹೋಗುತ್ತೇವೆ ಅತ್ತೆ ಸೊಸೆ ಬರುವಳು


ಕಪ್ಪುರೂಪದಲ್ಲಿ ಒಳ್ಳೆ ಹೆಣ್ಣು ಬಟ್ಟೆಯ ಗಂಟು ಕೊಡಿರಿ ಅತ್ತೆ


ಕುಟುಂಬದ ಮನೆಗೆ ಹೋಗುವೆ ನಾನು


ಹಾಗೆ ಯಾಕೆ ಹೇಳುತ್ತಿ ಮಗಳು ಆ ರಾದು ಎಂದು ಕೇಳುವಳು ಅತ್ತೆ


ನಿಮ್ಮ ಮೊಮ್ಮಗ ಅಚ್ಯುತನಿಗೆ ಆಡಲೆಂದು


ಎರಡು ಬುಗರಿ ತೆಗೆದುಕೊಂಡು ಬರುವಾಗ ಅತ್ತೆ


ಒಕ್ಕಲು ಇಲ್ಲದ ಮನೆಯಲ್ಲಿ ಅತ್ತೆಯವರೆ


ನಡತೆಗೆಟ್ಟ ಸರಸದಿಂದ ಇದ್ದರು


ವೀಳ ಎಲೆ ಅಡಿಕೆ ತಿನ್ನುತ್ತಿದ್ದರು ಅತ್ತೆಯವರೆ


ನಾನು ಅಲ್ಲಿಗೆ ಹೋದೆ  ಅತ್ತೆ


ನೋಡುವಾಗ ಅತ್ತೆಯವರ ಕೈ ಸುಸ್ತಾಗುವಷ್ಟು ತುಳಿದರು ಅತ್ತೆ


ಅದÀಕ್ಕಾಗಿಯೇ ನಾನು ಹೋಗುವೆ ಹೋಗುವೆ ಅತ್ತೆ


ಎಂದು ಹೇಳಿದಳು ರಾದು


ಹಾಗೆ ಹೋದರÉ ರಾದುಹೋಗಿ ಇಂದು ಹೋದ ರಾದು ಮಗಳೇ


ಇನ್ನು ಯಾವಾಗ ಬರುವಿ ಮಗಳ ಎಂದು ಕೇಳಿದರು ಅತ್ತೆಯವರು


ನಿಮ್ಮ ಮಗ ಸತ್ತಾಗೊಂದು ಸಾವಿಗೆ ಬರದಿದ್ದರೆ ಇರುವ ಬೊಜ್ಜಕ್ಕೆ 


ಬರುವೆ ಎಂದು ಕಣ್ಣನೀರು ಸುರಿಸಿದಳು ಇಳಿದು ಹೋದಳು ರಾದು


*****


 5. ಕಲ್ಜಿಗದ ಕಥೆಪಣ್ಣೆ ನಲಿಪು ತೂಕ ಮಾದಿರ




ಕಲಿಯುಗದ ಕಥೆ ಹೇಳುವೆ ಕುಣಿ ನೋಡುವ ಮಾದಿರ


ಇರುವುದನ್ನು ಇರುವಹಾಗೆ ಹೇಳುವೆನು ಕೇಳು ಮಾದಿರ


ಇನ್ನು ನಮ್ಮ ಜೀವನವು ಹೇಗೆ ಸಾಗುತ್ತದೆ ಮಾದಿರ


ಲೇಲೆ ಲೇಲೆ ಲೇಲೇ ಲಾ




ಕಳ್ಳು ಗಂಗಸರ ಸತ್ತುಹೋಯಿತು ಮಾದಿರ


ಇನ್ನು ನಮ್ಮ ಜೀವನವು ಹೇಗೆ ಸಾಗುತ್ತದೆ


ಲೇಲೆ ಲೇಲೆ ಲೇಲೇಲಾ




ಕಲಿಯುಗದ ಕಥೆ ಹೇಳುವೆ ಕುಣಿ ನೋಡುವ ಮಾದಿರ


ಇರುವುದನ್ನು ಇರುವ ಹಾಗೆ ಹೇಳುವೆನು ಕೇಳು ಮಾದಿರ


ಲೇಲೆ ಲೇಲೆ ಲೇಲೇಲಾ




ಕಲಿಯುಗದ ಕಥೆ ಹೇಳುವೆ ಕುಣಿ ನೋಡುವ ಮಾದಿರ


ಇರುವುದನ್ನು ಇರುವ ಹಾಗೆ ಹೇಳುವೆನು ಕೇಳು ಮಾದಿರ


ಕಳ್ಳು ಗಂಗಸರ ಎಲ್ಲಿ ಹೋಯಿತು ಮಾದಿರ 


ಇನ್ನುಮು



9

No comments:

Post a Comment