Wednesday 20 May 2015

ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು:216 ಬಸ್ತಿ ನಾಯಕ (ಬಾಲ ಬಂಟ ಬಸಪ್ಪ ನಾಯಕ )(c)ಡಾ.ಲಕ್ಷ್ಮೀ ಜಿ ಪ್ರಸಾದ



             
   
               ಚಿತ್ರ ಕೃಪೆ :ಧರ್ಮ ದೈವ
copy rights reservedತುಳುವರ  ಪಾಡ್ದನ ಹಾಗೂ ಭೂತಾರಾಧನೆಯಲ್ಲಿ ಅನೇಕ ಇತಿಹಾಸದ ಎಳೆಗಳು ಅಡಕವಾಗಿವೆ ಅಂತೆಯೇ ಬಸ್ತಿನಾಯಕ ದೈವ ಕಥಾನಕವು ಕೆಳದಿಯ ಇತಿಹಾಸದೊಂದಿಗೆ ತಳಕು ಹಾಕಿಕೊಂಡಿದೆ ಬಸ್ತಿ ನಾಯಕ ಸಾಕಷ್ಟು ಪ್ರಸಿದ್ಧ ದೈವತ .copy rights reserved (c) Dr.Laxmi g Prasad ಈ ದೈವ ಕನ್ನಡದಲ್ಲಿ ನುಡಿ ಕೊಡುವುದು ಈ ದೈವ ಮೂಲತ ಕನ್ನಡಿಗ ಎಂಬುದನು ಸಮರ್ಥಿಸುತ್ತದೆ .ಈ ದೈವ ನುಡಿಯಲ್ಲಿ ತನ್ನನ್ನು ತಾನು ಬಾಲ ಬಂಟ ಬಸಪ್ಪ ನಾಯಕ ಎಂದು ಕರೆದುಕೊಳ್ಳುತ್ತದೆ.ಬಸಪ್ಪನಾಯಕ ಎಂಬುದೇ ಆಡು ಮಾತಿನಲ್ಲಿ ಬಸ್ತಿ ನಾಯಕ ಆಗಿದೆcopy rights reserved (c) Dr.Laxmi g Prasad 
ಈತನೋರ್ವಅರಸು ಆಗಿದ್ದ ಬಗ್ಗೆ ಇಲ್ಲಿ ಮಾಹಿತಿ ದೊರೆಯುತ್ತದೆ .ತಾನು ಮಂಗಳೂರು ಸೀಮೆಯನ್ನು ಹಿಡಿದು ಕೊಂಡೆ ಕಾಲ ಮೇಲೆ ಕಾಲು ಕೈ ಮೇಲೆ ಕೈ ಮೀಸೆ ಮೇಲೆ ಕೈ ಹಾಕಿ ಕೊಂಡೆ ಎಂಬಲ್ಲಿ ಇದು copy rights reserved (c) Dr.Laxmi g Prasad ಸ್ಪಷ್ಟವಾಗುತ್ತದೆ /
ತುಳುನಾಡನ್ನು ಆಳಿದ ಕೆಳದಿ ಸಂಸ್ಥಾನದಲ್ಲಿ ಬಸಪ್ಪ ನಾಯಕ ,ಇಮ್ಮಡಿ ಬಸಪ್ಪ ನಾಯಕ ಮತ್ತು ಚೆನ್ನ ಬಸವ ನಾಯಕ ಎಂಬ ಅರಸುಗಳು ಇದ್ದ ಬಗ್ಗೆ ಇತಿಹಾಸದಿಂದ ತಿಳಿದು ಬರುತ್ತದೆ ಈ ಬಗ್ಗೆ ಅರಿಯಲು ಕೆಳದಿಯ ಇತಿಹಾಸವನ್ನು ಗಮನಿಸಬೇಕಾಗುತ್ತದೆ .copy rights reserved
ಶಿವಮೊಗ್ಗ ಜಿಲ್ಲೆಯ ಸಾಗರದಿಂದ  ಸುಮಾರು  8 ಕಿ.ಮೀ. ದೂರದಲ್ಲಿರುವ ಪುಟ್ಟ ಗ್ರಾಮ ಕೆಳದಿ ಸಂಸ್ಥಾನವಾಗಿ ಬೆಳೆದ ಪರಿ ಅನನ್ಯವಾದುದು .ಹನ್ನೆರಡನೆಯ ಶತಮಾನದಲ್ಲಿ ಈ ಊರು ಸಾಂತರಸರ ಅಧೀನದಲ್ಲಿತ್ತು. ಪೊಂಬುಚ್ಚ ಪುರವರಾಧೀಶ್ವರನಾಗಿದ್ದ ಮಹಾಮಂಡಳೇಶ್ವರ ತ್ರಿಭುವನಮಲ್ಲ ಭುಜಬಲ ಪ್ರತಾಪ ಶಾಂತರಸನ ತೃಟಿತ ಶಾಸನವೊಂದು ಇಲ್ಲಿ ದೊರೆತಿದೆ.


 ಲ್ಲಿಯೇ ಹುಟ್ಟಿ ಬೆಳೆದ ಸಾಮಾನ್ಯ ಮನೆತನವೊಂದಕ್ಕೆ ಸೇರಿದ್ದ ಚೌಡಗೌಡನೆಂಬ ರೈತನಿಗೆ ನಿಕ್ಷೇಪವೊಂದು ದೊರೆತಿದ್ದು ಅದರ ಸಹಾಯದಿಂದ ಅಥವ ತನ್ನ ಸ್ವ ಸಾಮರ್ಥ್ಯದಿಂದ  ಸಣ್ಣ ಪಾಳೆಯಪಟ್ಟೊಂದನ್ನು ಅವನು ಕಟ್ಟಿಕೊಂಡು ಮುಂದೆ ತನ್ನ ಪ್ರಭಾವವನ್ನು ಬೆಳೆಸಿಕೊಂಡನೆಂದೂ ಐತಿಹ್ಯವಿದೆ. ಇವನ ಪರಾಕ್ರಮಕ್ಕೆ ಮೆಚ್ಚಿ ಕೃಷ್ಣದೇವರಾಯ ಎಂಟು ಮಾಗಣೆಗಳ ನಾಯಕತ್ವವನ್ನು ಕೊಟ್ಟು ಇವನನ್ನು ನಾಯಕನನ್ನಾಗಿ ಮಾಡಿದ. ಹೀಗೆ ಕೆಳದಿ ಸು.160೦ರಲ್ಲಿ ಒಂದು ಪುಟ್ಟ ಸಂಸ್ಥಾನದ ರಾಜಧಾನಿಯಾಯಿತು.copy rights reserved (c) Dr.Laxmi g Prasad 

ಚೌಡಗೌಡನ ಕಾಲ  ಸುಮಾರು ಕ್ರಿಸ್ತಶಕ 1500ರಿಂದ 1530.ಇವನ ನಂತರ ಇವನ ಹಿರಿಯ ಮಗ ಸದಾಶಿವ ನಾಯಕನು ವಿಜಯನಗರದ ವಿರೋಧಿಗಳನ್ನು ಹಿಮ್ಮೆಟ್ಟಿಸಿ ಕೇರಳ ರಾಜ್ಯದ ಹಲವು ಭಾಗಗಳನ್ನು ವಶಪಡಿಸಿಕೊಳ್ಳುತ್ತಾನೆ. ಸದಾಶಿವ ನಾಯಕನಿಗೆ ಮೂವರು ಮಕ್ಕಳಿದ್ದು ಅವರುಗಳು ತಂದೆಯ ನಂತರ ಸುಮಾರು ಮೂವತ್ತು ವರುಷಗಳ ರಾಜ್ಯಭಾರ ಮಾಡುತ್ತಾರೆ.ಶಿವಪ್ಪ ನಾಯಕ ವೆಂಕಪ್ಪ ನಾಯಕ ಎರಡನೇ ವೆಂಕಪ್ಪ ನಾಯಕ ಮೊದಲಾದವರು ಸಂಸ್ಥಾನವನ್ನು ಗಟ್ಟಿ ಗೊಳಿಸುತ್ತಾರೆ

ಮುಂದೆ ಇವರ ವಂಶದ ಹಿರಿಯ ಸೋಮಶೇಖರ ನಾಯಕ ಆಳ್ವಿಕೆ ನಡೆಸುತ್ತಾನೆ ಆತನ ಮಡದಿ ಚನ್ನಮ್ಮ ದಿಟ್ಟ ರಾಣಿ ಶಿವಾಜಿಯ ಮಗ ಸಂಭಾಜಿಗೆ ಆಶ್ರಯ ಕೊಟ್ಟ ಕಾರಣ ಔರಂಗ ಜೇಬನ ವಿರೋಧ ಎದುರಾಗಿ ಆತ ದಾಳಿ ಮಾಡುತ್ತಾನೆ copy rights reserved (c) Dr.Laxmi g Prasad ಆತನ ದಾಳಿಯನ್ನು ದಿಟ್ಟವಾಗಿ ಎದುರಿಸಿ ಹಿಮ್ಮೆಟ್ಟಿಸುತ್ತಾಳೆ ಅವಳು .’ಇದಾಗಿ ಸ್ವಲ್ಪ ಸಮಯದಲ್ಲೇ ಬಿಜಾಪುರದ ಸುಲ್ತಾನನು ಕೆಳದಿಗೆ ಮುತ್ತಿಗೆ ಹಾಕಲು ಬಂದನುಶತ್ರುಗಳು ರಾಜ್ಯವನ್ನು ಸುತ್ತುವರಿದಿದ್ದರು ರಾಣಿಗೆ ಯಾವುದೇ ದಾರಿ ತೋಚದೆ ತಾನೆ ಖುದ್ದಾಗಿ ನಿಂತು ಖಡ್ಗವನ್ನು ಹಿಡಿದು ಸೇನೆ ಮುನ್ನೆಡೆಸುವ ಸಂದರ್ಭ ಬಂದಾಗ ಅವರ ರಾಜ್ಯದವರೇ ಅದ ಹಲವರ ವಿರೋಧ ಎದುರಿಸಬೇಕಾಯಿತು.

ಹಲವರು ನಾವು ಹೇಳಿದ ವ್ಯಕ್ತಿಯನ್ನೇ ಪಟ್ಟಕ್ಕೆ ತರಬೇಕು, ಇಲ್ಲವಾದರೆ ನಾವೇ ಜನರನ್ನು ನಿಮ್ಮ ವಿರುದ್ದ ದಂಗೆ ಎಬ್ಬಿಸುತ್ತೇವೆ ಎಂದು ಎಚ್ಚರಿಸಿದರು. copy rights reserved (c) Dr.Laxmi g Prasad ಅತ್ತ ಕಡೆ ಧರಿ ಇತ್ತ ಕಡೆ ಪುಲಿ ಎರಡು ಅಪಾಯವೇ ಸರಿ ಎಂದು ಯೋಚಿಸಿ ತಮಗೆ ಮಕ್ಕಳು ಇಲ್ಲದೆ ಇದ್ದುದರಿಂದ ಬಸಪ್ಪ ನಾಯಕ ಎಂಬ ಹುಡುಗನನ್ನು ದತ್ತು ತಗೆದು ಕೊಂಡಳು.

ಚೆನ್ನಮ್ಮ ತನ್ನ ಜನರನ್ನು ಉದ್ದೇಶಿಸಿ ವೀರ ಕನ್ನಡಿಗರೇ, ಶೂರ ಸೈನಿಕರೇ ಇಂದು ಈ ರಾಜ್ಯದ ಅಳಿವು ಉಳಿವು ನಿಮ್ಮ ಕೈಯಲ್ಲಿದೆ.  ಗೆದ್ದರೆ ರಾಜ್ಯ, ಸತ್ತರೆ ಸ್ವರ್ಗ ಎಂಬ ಅಮರವಾಣಿಯೊಂದಿಗೆ  ಹುರಿದುಂಬಿಸಿದಳು. ಬಿಜಾಪುರದ ಸೈನ್ಯದ ಮೇಲೆ ಶೌರ್ಯದಿಂದ ಹೋರಾಡಿದರು ಜಯ ಲಭಿಸಲಾರದು ಎಂದು ಚೆನ್ನಮ್ಮ ಬಿದನೂರನ್ನು ಬಿಡಬೇಕಾಯಿತು. ಬೇರೆ ಮಾರ್ಗವಿಲ್ಲದೆ, ರಾಜ್ಯ ಭಂಡಾರದ ಸಂಪತ್ತನ್ನು, ಬೆಲೆಯುಳ್ಳ ವಸ್ತುಗಳನ್ನು ಭುವನಗಿರಿಗೆ ಸಾಗಿಸಿದಳು  ಶತ್ರುಗಳು ಬಂದಾಗ ಅವರು ಖಾಲಿಯಾದ ಭಂಡಾರವನ್ನು ಕಂಡು ನಿರಾಸೆಯಾದರು.copy rights reserved (c) Dr.Laxmi g Prasad 

ದತ್ತು ಪ್ರಕರಣದ ಸಮಯದಲ್ಲಿ ರಾಣಿಗೂ ಅವರ ಪ್ರಧಾನಿಗೂ ವಿರಸವಾಗಿ ಪ್ರಧಾನಿ ತಿಮ್ಮಣ್ಣ ನಾಯಕ ರಾಣಿಯನ್ನು ಬಿಟ್ಟು ಹೋಗಿದ್ದನು. ಬಿದನೂರು ಸುಲ್ತಾನ ವಶವಾಯಿತು ಎಂದು ಅರಿತ ದೇಶಾಭಿಮಾನಿ ತಿಮ್ಮಣ್ಣ ರಾಣಿಯನ್ನು ಭೇಟಿ ಮಾಡಿ  ತನ್ನ ತಪ್ಪನ್ನು ಮನ್ನಿಸಬೇಕೆಂದು ಬಿನ್ನಹವಿತ್ತು ರಾಣಿಯ ಜೊತೆ ಕೊಡಿಕೊಂಡು ಮತ್ತೆ ಬಿದನೂರು ಕೋಟೆಗೆ ಮುತ್ತಿಗೆ ಹಾಕಿದರು. ದಟ್ಟವಾದ ಕಾಡಿನಲ್ಲಿ ಚೆನ್ನಮ್ಮನ ಕೈಗೆ ಸಿಕ್ಕ ಸುಲ್ತಾನನ ಸೈನ್ಯ ನುಚ್ಚು ನೊರಾಯಿತು. ಬಿದನೂರು ಮತ್ತೆ ಚೆನ್ನಮ್ಮರ ವಶವಾಯಿತು. ಸರ್ವಾನುಮತದಿಂದ ಕೆಳದಿಯ ಪ್ರಜೆಗಳು ರಾಣಿಯ ಆಡಳಿತವನ್ನು ಒಪ್ಪಿಕೊಂಡರು

ಹೀಗೆ 1670ರಿಂದ 1696ರವರೆಗೆ ಧರ್ಮದಿಂದ ದಕ್ಷತೆಯಿಂದ ರಾಜ್ಯವಾಳಿ, ಕೀರ್ತಿ ವೈಭವಗಳಿಂದ ಬಾಳಿ  ಕಡೆಗೆ ರಾಜ್ಯವನ್ನು ದತ್ತು ಪುತ್ರನಿಗೆ ಒಪ್ಪಿಸಿ  ಶಿವ ಚಿಂತನೆಯಲ್ಲಿ ತೊಡಗಿದರು.ಇಲ್ಲಿಂದ ಮುಂದೆ ಕೆಳದಿ ಸಂಸ್ಥಾನವನ್ನು ಮುನ್ನಡೆಸಿದವನು ಬಸವಪ್ಪ ನಾಯಕ copy rights reserved

ಇವನು ಮಂಗಳೂರು ಸೀಮೆ ಸೇರಿದಂತೆ ಕೆಳದಿಯ ಅಲ್ಲ ಪ್ರದೇಶಗಳ ಆಳ್ವಿಕೆಯನ್ನು ದಕ್ಷವಾಗಿ ಮಾಡಿದ್ದನು .

ಕೆಳದಿಯನ್ನು ಆಳಿದ ಕೊನೆಯ ರಾಣಿ ವೀರಮ್ಮಾಜಿ. ಅವಳ ದತ್ತು ಪುತ್ರ ಚೆನ್ನ ಬಸವ .ಆತನಿಗೆ ಆಕೆ ಪಟ್ಟ ಕಟ್ಟದೆ ಅಧಿಕಾರ ಕೊಡದೆ ಸತಾಯಿಸಿದಳು ಎಂಬ ಅಭಿಪ್ರಾಯವೂ ಇದೆ .ಆತನೊಂದಿಗೆ ಸೇರಿಕೊಂಡು ಆತನಿಗೆ ಕೆಳದಿ ರಾಜ್ಯ ಕೊಡಿಸುತ್ತೇನೆಂದು ಹೇಳಿ ಆತನ ಸಹಾಯದಿಂದ ಮದಕರಿ ನಾಯಕ ಹಾಗೂ ಹೈದರಾಲಿ ಕೆಳದಿಯನ್ನು ವಶಪಡಿಸಲು ಯತ್ನಿಸಿದರೆಂದೂ ಐತಿಹ್ಯವಿದೆcopy rights reserved (c) Dr.Laxmi g Prasad 

.

     ಚೆನ್ನಬಸವಪ್ಪನಾಯಕನ ಅಂತ್ಯದ ಕುರಿತು ಆತ ರೋಗಬಾಧೆಯಿಂದ ತನ್ನ 14ನೆಯ ವಯಸ್ಸಿನಲ್ಲೇ ಮೃತನಾದನೆಂದು ಕೆಳದಿ ಸಂಸ್ಥಾನದ ಇತಿಹಾಸವನ್ನು ಎಳೆ ಎಳೆಯಾಗಿ ವಿವರಿಸುವ ಕೆಳದಿನೃಪ ವಿಜಯದಲ್ಲಿ ಈ ರೀತಿ ಹೇಳಿದೆ:

ಇರುತಿರುತುಂ ತದ್ಧರಣೀ

ಶ್ವರನುರುವಿಧಿವಶದೆ ತಾಂ ಚತುರ್ದಶವರ್ಷಾಂ

ತರದೊಳ್ ಪರಿಣಯಮಿಲ್ಲದೆ

ನೆರೆ ರೋಗಾರ್ತಿಯೊಳ್ ಶಿವನೊಳೈಕ್ಕಂಬಡೆದಂ || (ಕೆ.ನೃ.ವಿ. ೧೧.೫೨)

     ಆದರೆ ಕೆಲವು ಇತಿಹಾಸಕಾರರು (ಡಿ ಲಾ ಟೂರ್, ರೋಬ್ಸನ್, ಕಿರ್ಮಾನಿ, ವಿಲ್ಕ್ಸ್) ಚೆನ್ನಬಸವನಾಯಕನನ್ನು ರಾಣಿ ವೀರಮ್ಮಾಜಿಯೇ ಕೊಲ್ಲಿಸಿದಳೆಂದು ಹೇಳುತ್ತಾರೆ.copy rights reserved (c) Dr.Laxmi g Prasad 

ಒಟ್ಟಿನಲ್ಲಿ ಕೆಳದಿಯ ಇತಿಹಾಸದಲ್ಲಿ ಚೆನ್ನ ಬಸವನಾಯಕ ಓರ್ವ ದುರಂತ ನಾಯಕನಾಗಿ ಕಂಡು ಬರುತ್ತಾನೆ

ಇಲ್ಲಿ ಇಬ್ಬರು ಬಸವಪ್ಪ ನಾಯಕರು ಒಬ್ಬ ಚೆನ್ನ ಬಸವನಾಯಕ ರೂ ಆಳ್ವಿಕೆ ನಡೆಸಿರುವುದು ಕಂಡು ಬರುತ್ತದೆ

ಬಸ್ತಿ ನಾಯಕ ನೇಮದಲ್ಲಿ ದೈವವು ತನ್ನನ್ನು ಬಾಲ ಬಂಟ ಬಸಪ್ಪ ನಾಯಕ ಎಂದು ಕರೆದು ಕೊಳ್ಳುತ್ತದೆ.ತಾನು ಮಂಗಳೂರು ಸೀಮೆ ಹಿಡಿದು ಕೊಂಡೆ ಎಂದೂ ಹೇಳುತ್ತದೆ.   

ಸಾಮಾನ್ಯವಾಗಿ ಮೊದಲ ಅರಸ ಅಥವಾ ಕೊನೆಯ ಅರಸು ದೈವತ್ವ ಪಡೆದು ಆರಾಧಿಸಲ್ಪಡುವುದು ತುಳುನಾಡಿನಲ್ಲಿ ಕಂಡು ಬರುತ್ತದೆ.ಅಲ್ಲದೆ ದುರಂತ ಮತ್ತು ದೈವತ್ವ ಇಲ್ಲಿನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. copy rights reserved (c) Dr.Laxmi g Prasad ಇಲ್ಲಿ ಬಸವಪ್ಪ ನಾಯಕ ಮೊದಲ ಅರಸನಲ್ಲ.

ಚೆನ್ನ ಬಸವ ಕೆಳದಿಯ ಕೊನೆಯಅರಸ ಜೊತೆಗೆ ತಾಯಿಯಿಂದಲೇ ಕಿರುಕುಳಕ್ಕೆ ಒಳಗಾದವನು .ಕೇವಲ ಹದಿನಾಲ್ಕು ಅಥವಾ ಹತ್ತೊಂಬತ್ತು ವರ್ಷಕ್ಕೆ ಮರಣವಪ್ಪಿದವನು.ಹಾಗಾಗಿ ಈತ ಬಾಲಕನೇ ಆಗಿರುವುದರಿಂದ ಬಾಲ ಬಂಟ ಬಸಪ್ಪ ನಾಯಕ ಎಂದು ಕರೆಸಿಕೊಳ್ಳುವ ಬಸ್ತಿ ನಾಯಕ ಹೆಸರಿನ ದೈವ ಮೂಲತ ಈತನೇ ಆಗಿರಬಹುದು.ಈ ದೈವದ ಕೈಯಲ್ಲಿನ ಕಟ್ಟಿ ಗುರಾಣಿ ಕಿರೀಟವನ್ನು ಹೋಲುವ ತಲೆ ಪಟ್ಟ ಮೀಸೆ ಗಾಂಭೀರ್ಯಗಳು ಈತನ ಅರಸು ಮೂಲವನ್ನು ಸಮರ್ಥಿಸುತ್ತದೆ ಅದೇ ರೀತಿ ಆಡುವ ಭಾಷೆ ಕನ್ನಡವಾಗಿದ್ದು ಈತ ಮೂಲತ ತುಳುಭಾಷಿಗನಲ್ಲ ಎಂದು ತಿಳಿಸುತ್ತದೆ .ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆದರೆ ಇದಮಿತ್ಥಂ ಎಂದು ಹೇಳಲು ಸಾಧ್ಯವಾಗಬಹುದು copy rights reserved

No comments:

Post a Comment