Friday 6 March 2020

ಸಾವಿರದೊಂದು ಗುರಿಯೆಡೆಗೆ: ತುಳು ನಾಡ ದೈವಗಳು: 471- ನಾಡು ಬೈದ್ಯ - ಡಾ.ಲಕ್ಷ್ಮೀ ಜಿ ಪ್ರಸಾದ

ದೇವಾಲಯವನ್ನು ಕಟ್ಟಿಸಿದವರು, ಪ್ರಧಾನ ದೈವಗಳ ಆರಾಧನೆಯನ್ನು ಆರಂಭ ಮಾಡಿದವರಲ್ಲಿ ಅನೇಕರು ಅದೇ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧನೆ ಪಡೆಯುವ ವಿಚಾರ ತುಳು ನಾಡಿನಲ್ಲಿ ಅಲ್ಲಲ್ಲಿ ಕಂಡು ಬರುತ್ತದೆ.ಬದಿಯಡ್ಕ ಸೂರಂಬೈಲು ಸಮೀಪದ ಕಾರಿಂಜೇಶ್ವರ ದೇವಸ್ಥಾನ ಕಟ್ಟಿಸಿದ ಬ್ರಾಹ್ಮಣ ಅಲ್ಲಿ ಕಾರಿಂಜೆತ್ತಾಯ ದೈವವಾಗಿ ಆರಾಧನೆ ಪಡೆಯುತ್ತಾನೆ‌
ಹಿರಿಯಡ್ಕದಲ್ಲಿ ವೀರ ಭದ್ರನನ್ನು ಪ್ರತಿಷ್ಠಾಪನೆ ಮಾಡಿದ ಅಡ್ಕತ್ತಸಯ ಎಂಬ ಬ್ರಾಹ್ಮಣ ಅಡ್ಕತ್ತಾಯ ದೈವ ಆಗಿದ್ದಾನೆ‌
ಸುಜೀರ್ ನಲ್ಲಿ ವೈದ್ಯ ನಾಥ ದೈವ ಆರಾಧನೆ ಆರಂಭಿಸಿದ ಜಾನು ಬೈದ್ಯ ಪ್ರಧಾನ ದೈವದ ಸೇರಿಗೆಗೆ ಸಂದು ಆರಾಧನೆ ಪಡೆಯುತ್ತಾನೆ
ಹಾಗೆಯೇ ಕೊಡಮಂದಾಯ ದೈವವನ್ನು ತಂದು ಆರಾಧನೆ ಮಾಡಿದ ನಾಡು ಬೈದ್ಯ ಎಂಬವರು ಕೂಡ ದೈವತ್ವ ಪಡೆದು ಆರಾಧನೆ ಪಡೆಯುವ ಬಗ್ಗೆ ಯೋಗೇಶ ಅಂಚನ್ ಅವರು ಮಾಹಿತಿ ನೀಡಿದ್ದಾರೆ‌
ಬಂಟ್ವಾಳ ತಾಲೂಕಿನ ಕಾರೆಬೆಟ್ಡು ಜೈನರ ಗುತ್ತಿನ ಮನೆಯಲ್ಲಿ
ಈ ದೈವದ ಮರದ ಮೂರ್ತಿ ಇದೆ.ಇಲ್ಲಿ ಕೊಡಮಂದಾಯ ಮತ್ತು ಪಂಜುರ್ಲಿ ಬೂತಗಳಿಗೆ ಆರಾಧನೆ ಇದೆ.ಇವರ ಜೊತೆಯಲ್ಲಿ ನಾಡು ಬೈದ್ಯನಿಗೆ ಕೂಡ ಸಾಂಕೇತಿಕವಾಗಿ ಆರಾಧನೆ ನಡೆಯುತ್ತದೆ.

ಈ ಬಗ್ಗೆ ಮಾಹಿತಿ ನೀಡಿದ ಯೋಗೇಶ್ ಅಂಚನ್ ಅವರಿಗೆ ಹೃತ್ಪೂರ್ವಕ ಕೃತಜ್ಞತೆ ಗಳು