Sunday, 22 February 2026

ಬಾಗಿಲು ಬೊಬ್ಬರ್ಯ - ಕರಾವಳಿಯ ಸಾವಿರದೊಂದು ದೈವಗಳು


 ಬಾಗಿಲು ಬಬ್ಬರ್ಯ..


ಉಡುಪಿ ಕುಂದಾಪುರ ಕಡೆ ಬಾಗಿಲು ಬಬ್ಬರ್ಯ ಎಂಬ ದೈವವಿದೆ.ಈತ ದೈವಸ್ಥಾನವನ್ನು ಕಾಯುವ ಕೆಲಸವನ್ನು ಮಾಡುವ ದೈವ

ಇಲ್ಲಿ ಈ ದೈವದ ವೇಷ ಭೂಷಣ ವಿಶಿಷ್ಟವಾಗಿವೆ 

ಮುಸ್ಲಿಮರು ಧರಿಸುವ ಟೊಪ್ಪಿ ಗಡ್ಡ ಇದ್ದು ಮೂಲತಹ ಮುಸ್ಲಿಂ ಮೂಲದ ವ್ಯಕ್ತಿ ಎಂಬುದನ್ನು ಇದು ದ್ಯೋತಿಸುತ್ತದೆ  


ಇದು ನಮ್ಮ‌ಕಡೆ ರೆಂಕೆ ಅಣಿ ಕಟ್ಟಿ ಆರಾಧನೆ ಆಗುವ ಬಬ್ಬರ್ಯನಿಗೂ ಮುಸ್ಲಿಂ ಮೂಲದ ಕಥಾನಕವಿದೆ

 

ಈ ದೈವಗಳನ್ನು ಆರಾಧನೆ ಮಾಡುದು ಹಿಂದುಗಳೇ. 


ಈತ ಮಾದವ ಸುಲಿಕಲ್ಲಬ್ಯಾರಿಯ ಮಗ‌,ಜೈನ ಮಡಸ್ತಾನದ ಹುಡುಗಿಯನ್ನು ಮದುವೆ ಅಗುತ್ತಾನೆ.ರಾತ್ರಿ ಅಕೆಯ ಮೂಗಿನಿಂದ ಹೊರಬರುವ ಸರ್ಪಗಳನ್ನು ಕೊಲ್ಲುತ್ತಾನೆ.


ತಮ್ಮ ತಂಗಿಯನ್ನು ಮದುವೆಯಾದ ಕಾರಣಕ್ಕಾಗಿ ಇವನಿಗೆ ಸ್ಥಳೀಯ ಜೈನ ಮಡಸ್ಥಾನದವರ ವ್ಯಾಪ್ತಿಯಲ್ಲಿದ್ದ ಪ್ರದೇಶದ  ಆಳ್ತನ ಸಿಕ್ಕಿರುವ ಸಾಧ್ಯತೆ ಇದೆ 

ಈತ ನಂತರ ಜೈನನಾಗಿಯೇ ಬದುಕಿರಬೇಕು ಯಾಕೆಂದರೆ ಬಬ್ಬರ್ಯ ನಿಗೆ ಸಪ್ಪೆ ಕಡುಬಿನ ಸಸ್ಯಾಹಾರ ನೀಡುತ್ತಾರೆ 

ನಂತರ ಕಡಲಿಗೆ ವ್ಯಾಪಾರಕ್ಕೆ ಹೋಗಿ ದುರಂತವನ್ನಪ್ಪಿ ದೈವತ್ವ ಪಡೆಯುತ್ತಾನೆ


ಈತನೆಲ್ಲೂ ಕಾಯುವ ಕಾಯಕವನ್ನು ಮಾಡುದಿಲ್ಲ.ಮತ್ತು ಈ ದೈವದ ವೇಷ ಭೂಷಣಗಳಲ್ಲಿ‌ ಮುಸ್ಲಿಂರ ವೇಷಭೂಷಣ ದ ಛಾಯೆ ಇಲ್ಲ


ಹಾಗಾಗಿ ಬಾಗಿಲ ಬಬ್ಬರ್ಯ ಮತ್ತು ರೆಂಕೆ ಅಣಿ ಕಟ್ಟಿ ಕೋಲ ಅಗುವ ಸಸ್ಯಹಾರ ಸೇವಿಸುವ ಬಬ್ಬರ್ಯ ಬೇರೆ ಬೇರೆ ದೈವಗಳಾಗಿವೆ ಎಂದು ಹೇಳಬಹುದು ,ಬಬ್ಬರ್ಯನ ರೆಂಕೆ ಅಣಿ ಆತ ಕಡಲಿನಲ್ಲಿ ಸಾಗುವಾಗ ಹಡಗಿಗೆ ? ದೋಣಿಗೆಕಟ್ಟಿದ ಹಾಯಿಯ ಪ್ರತೀಕವಾಗಿದೆ ,ಬಬ್ಬರ್ಯ ನಿಗೆ ಬಿಟ್ಟರ ಕಿನ್ನಿ ಮಾಣಿಗೂ ರೆಂಕೆ ಅಣಿ ಕಟ್ಟುವ ಪದ್ದತಿ ಇದೆ ಇವರೂ ದೋಣಿ ಮೂಲಕ ಪ್ರಯಾಣಿಸಿದ ಉಲ್ಲೇಖವಿದೆ 

ಬಾಗಿಲ ಬಬ್ಬರ್ಯ ನ ಬಗ್ಗೆ ಹೆಚ್ಚಿನ ಮಾಹಿತಿ ಇದ್ದವರು ತಿಳಿಸಿ ಎಂದು ಕೋರಿಕೆ 

ಬಬ್ಬರ್ಯ ಪಂಜುರ್ಲಿ ಗುಳಿಗ ಸೇರಿದಂತೆ 1253 ದೈವಗಳ ಮಾಹಿತಿಗಾಗಿ ಮಾಯ ಮತ್ತು ಜೋಗದ ಬೆಳಕಿನಲ್ಲಿ

ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ 

The Thousand and One Daivas of Karavali-Dr Lakshmi G Prasad,mob 9480516684 

Translated by Ashwini Bhat 


ಕ್ಷೇತ್ರ ಕಾರ್ಯದಲ್ಲಿ ಮಾರ್ಗ ದರ್ಶನ ನೀಡಿದ್ದಲ್ಲದೆ ಜೊತೆಗೆ ಬಂದು ಮಾಹಿತಿ ಸಂಗ್ರಹದಲ್ಲಿ ಸಹಾಯ ಮಾಡಿದ ಹಿರಿಯ ವಿದ್ವಾಂಸರಾದ ಚಂದ್ರ ಶೇಖರ ನಾವಡ ಮತ್ತು ಗೆಳತಿ ನೀತಾರಿಗೆ ಧನ್ಯವಾದಗಳು

Saturday, 21 February 2026

226 daiva book daiva research book ನಮ್ಮ ಹೆಮ್ಮೆಯ ಓದುಗ ಮಿತ್ರರು ಭರತ್ ಕುಮಾರ್


 ತಲೆಮಾರುಗಳಿಂದ ದೈವಾರಾಧನೆ (ಭೂತಾರಾಧನೆ) ಕುರಿತು ಸಮರ್ಪಕವಾದ ಮಾಹಿತಿ ವರ್ಗಾವಣೆ ಆಗದೇ ಇದ್ದುದರಿಂದಲೋ ಅಥವಾ ಇನ್ಯಾವುದೋ ಕಾರಣಗಳಿಂದಲೋ ಮನಸಿನಲ್ಲಿ ಮೂಡಿದ ಪ್ರಶ್ನೆಗಳಿಗೆ ಉತ್ತರವಿಲ್ಲದೆ ಅಲೆದಾಡುತ್ತಿರುವಾಗ ನಿಮ್ಮ ಕೃತಿಯು ಒಂದು ಆಶಾಕಿರಣವಾಗಿ ಹೊರಹೊಮ್ಮಿದೆ.

ದೇವರು ಸದಾ ನಿಮಗೆ ಆಯುರಾರೋಗ್ಯ, ಐಶ್ವರ್ಯ,ಸುಖ, ಶಾಂತಿ,ನೆಮ್ಮದಿಯನ್ನು ಕರುಣಿಸಲಿ ಎಂದು ಹಾರೈಸುತ್ತೇನೆ.

 ಹೃತ್ಪೂರ್ವಕ ಧನ್ಯವಾದಗಳು.

ಇತಿ 

ಭರತ್ ಕುಮಾರ್.

ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ 

The Thousand and One Daivas of Karavali-Dr Lakshmi G Prasad,mob 9480516684

Monday, 16 February 2026

255 stephen and liew daiva book The thousand and one daivas of karavali


 ಇದು ನಿಜಕ್ಕೂ ದೈವಗಳ ಕಾರಣಿಕವೇ ಸರಿ


ಈವತ್ತು ಸಂಜೆ ಕಾಪು ಬೀಚ್ ನಲ್ಲಿ ನಡೆದ ಶಿವರಾತ್ರಿ ಕಾರ್ಯಕ್ರಮಕ್ಕೆ ಆಹ್ವಾನಿತ ಮುಖ್ಯ ಅತಿಥಿಯಾಗಿ ಹೋಗಿದ್ದೆ.


ಸಭಾ ಕಾರ್ಯಕ್ರಮಕ್ಕೆ ಮೊದಲು ಇಬ್ಬರು ವಿದೇಶೀ ಭಕ್ತರು ಬಂದದ್ದನ್ನು ಗಮನಿಸಿದೆ.


ಹಾಗೆ ಅವರಲ್ಲಿ ಮಾತನಾಡಿದೆ ಮಾತಿನ ನಡುವೆ ನಾನು ದೈವಗಳ ಬಗ್ಗೆ ಅಧ್ಯಯನ ಮಾಡಿದ್ದನ್ನು ತಿಳಿದು ನನ್ನ ಕೈಯಲ್ಲಿ ಇದ್ದ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು ಚಿತ್ರಗಳನ್ನೆಲ್ಲ ನೋಡಿ ಈ ಪುಸ್ತಕದ ಬೆಲೆ ಎಷ್ಟು ಕೇಳಿದರು. ಹೇಳಿದೆ ತಕ್ಷಣವೇ ದುಡ್ಡು ಕೊಟ್ಟು  ನಮಗೆ ಈ ಪುಸ್ತಕ ಕೊಡಿ ಎಂದು ಎಂದರು


 ಆಗ ನಾನು ಇದರ ಇಂಗ್ಲಿಷ್ ಆವೃತ್ತಿ ಇದೆ ಎಂದಾಗ ಅವರಿಗೆ ಬಹಳ ಖುಷಿ ಅಯಿತು.

ಕಾರಿನಲ್ಲಿರಿಸಿದ್ದ  ಇಂಗ್ಲಿಷ್ ಆವೃತ್ತಿ The Thousand and One Daivas of Karavali-Dr Lakshmi G Prasad,mob 9480516684 translated by Ashwini Bhat  ಪುಸ್ತಕ ನೋಡಿ ಮಕ್ಕಳಂತೆ ಸಂಭ್ರಮಿಸಿದರು

ಸಹಿ ಮಾಡಿ ಕೊಡಿ ಎಂದು ಕೇಳಿ ಪಡೆದರು 

ಇಂಗ್ಲೆಂಡ್ ನಿಂದ ಬಂದ ಇವರಿಗೆ ನಮ್ಮ ಸಂಸ್ಕೃತಿ ಬಗ್ಗೆ ಅತೀವ ಪ್ರೀತಿ ಅಭಿಮಾನ..ಇದನ್ನು ಕಂಡು ನನಗೆ ಹೃದಯ ತುಂಬಿ ಬಂತು.

Thursday, 12 February 2026

254 ನಮ್ಮ‌ಪ್ರೀತಿಯ ಪುಸ್ತಕ ಮಿತ್ರರು - ರುಕ್ಮಿಣಿ ಮಾಲಾ


 ನಮ್ಮ ಪ್ರೀತಿಯ ಪುಸ್ತಕ ಮಿತ್ರರು

ರುಕ್ಮಿಣಿ ಮಾಲಾ ,ಮೈಸೂರು

ಮಾಯ ಮತ್ತು ಜೋಗದ ಬೆಳಕಿನಲ್ಲಿ 

ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ .t

The Thousand and One Daivas of Karavali-Dr Lakshmi G Prasad,mob 9480516684 

Translated by Ashwini Bhat

ಮಾತೃಶ್ರೀ ಪ್ರಕಾಶನ ಪ್ರಕಾಶನ 

Aravinda Bhat 

Govinda Prasad 

J M Rajashekhara 

Rachan Ghoshal Budnar 

ದೈವಾರಾಧನೆ

#daiva_book 

#daiva

Wednesday, 11 February 2026

253 daiva book daiva research book ,ನಮ್ಮ ಹೆಮ್ಮೆಯ ಓದುಗರು : ರಾಜೇಶ್ ಶೆಟ್ಟಿ


 #ನಮ್ಮ_ಹೆಮ್ಮೆಯ_ಓದುಗ_ಮಿತ್ರರು 

#ಕರಾವಳಿಯ_ಸಾವಿರದೊಂದು_ದೈವಗಳು 

ಪ್ರಸ್ತುತ ಮಹಾರಾಷ್ಟ್ರದಲ್ಲಿ ನೆಲೆಸಿರುವ ರಾಜೇಶ್ ಶೆಟ್ಟಿ

252 Daiva book daiva research book ನಮ್ಮ‌ಹೆಮ್ಮೆಯ ಓದುಗ ಮಿತ್ರರು : ಪ್ರಶಾಂತ್ ಆಚಾರ್ಯ


 ನಮ್ಮ‌ ಹೆಮ್ಮೆಯ ಓದುಗ ಮಿತ್ರರು..

ಮಂಗಳೂರು ಎಡಪದವಿನ ಪ್ರಶಾಂತ್ ಎಸ್ ಆಚಾರ್ಯರ ಕೈಯಲ್ಲಿ ನಮ್ಮ‌ಪುಸ್ತಕ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ - ಡಾ.ಲಕ್ಷ್ಮೀ ಜಿ ಪ್ರಸಾದ್

251 daiva book daiva research book - ನಮ್ಮ ಹೆಮ್ಮೆಯ ಓದುಗರು


 ನಮ್ಮ ಹೆಮ್ಮೆಯ ಓದುಗ ಮಿತ್ರರು..

ಸ್ವತಃ ಲೇಖಕರೂ ಉತ್ತಮ ಗಾಯಕರೂ ಆಗಿರುವ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಮ್ಯಾನೇಜರರಾದ ರಘುಪತಿ ತಾಮ್ಹನ್ ಕರ್ ಅವರು ಸದಾ ನನ್ನ ಅಧ್ಯಯನ ಮತ್ತು ಬರವಣಿಗೆಗೆ ಪ್ರೋತ್ಸಾಹ ಕೊಡುವವರು.


ಅವರು ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕವನ್ನು ತಗೊಂಡು ಓದಿ ಶುಭ ಹಾರೈಸಿದ್ದಾರೆ 

 ಧನ್ಯವಾದಗಳು ಸರ್ Raghupathi Thamankar  


""ಡಾ. ಶ್ರೀಮತಿ ಲಕ್ಷ್ಮೀ ಪ್ರಸಾದ್ ರವರೆ.. 

ನೀವು ಬರೆದ ಕರಾವಳಿಯ ಸಾವಿರ ದೊಂದು ದೈವಗಳು ಎಂಬ ಬೃಹತ್  ಗ್ರಂಥ ತಲುಪಿದೆ.


.ನಮ್ಮ ಕರಾವಳಿಯ ಐತಿಹಾಸಿಕ ,ಸಾಂಸ್ಕೃತಿಕ ವಿಶ್ಲೇ ಷಣಾ ತ್ಮಕ  ನೋಟವುಳ್ಳ ದೈವಗಳ ಬಗ್ಗೆ  ಇನ್ನೂ  ಚಾಲ್ತಿ ಯಲ್ಲಿ ಇರುವ ಪ್ರಾಚೀನ ಸಂಸ್ಕೃತಿಯ ಅನಾವರಣ ಇಲ್ಲಿ ಇದೆ..ನಿಮ್ಮ ಸಂಶೋಧನಾ ಗ್ರಂಥಗಳ ಪಟ್ಟಿಯೇ ಈಗಲೇ 21 ದಾಟಿದ್ದು ಇನ್ನೂ ಐದು ಗ್ರಂಥಗಳ ರಚನೆಯಲ್ಲಿ 

ತೊಡಗಿದ್ದೀರೆಂದು ತಿಳಿಯಿತು . ಇವುಗಳೆಲ್ಲವನ್ನೂ ಇಂಗ್ಲಿಷ್ ಸಹಿತ ದೇಶದ ಎಲ್ಲಾ ಭಾಷೆ ಗಳಲ್ಲಿ ತರ್ಜುಮೆ ಯಾಗಿ ದೇಶದ ಹಾಗೂ ಪರದೇಶದ ಜನರೂ ಓದುವಂತೆ   ಆಗಲಿ ಎಂದು ಹಾರೈಸುವೆ .ನೀವು ಬರೆದ ಪುಸ್ತಕವನ್ನು ಪ್ರೀತಿಯಿಂದ ಎತ್ತಿಕೊಂಡ ಫೋಟೋ ವನ್ನು ಕಳುಹಿಸಿದ್ದೇನೆ.. 

- ರಘುಪತಿ ತಾಮ್ಹನ್ ಕರ್ ಮೈಸೂರು