Sunday 2 June 2019

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು : 438 ಪೊನ್ನು ಕುಂದಾಡ್ದಿ - ಡಾ.ಲಕ್ಷ್ಮೀ ಜಿ ಪ್ರಸಾದ

ಪೊಣ್ಣು ಕುಂದಾಡ್ದಿ ದೈವ
ಪುತ್ತೂರು ಸಮೀಪದ ಪುಳಿತ್ತೂರು ಕುತ್ತೆತ್ತೂರಿನಲ್ಲಿ ಆರಾಧನೆ ಪಡೆವ ದೈವ ಪೊಣ್ಣು ಕುಂದಾಡ್ದಿ.
ಸಾಮಾನ್ಯವಾಗಿ ಪ್ರಧಾನ ದೈವಗಳ ಅತೀವ ಭಕ್ತರು, ಪ್ರಧಾನ ದೈವಗಳ ಆರಾಧನೆಯನ್ನು ಪ್ರಾರಂಭ ಮಾಡಿದವರು ಅದೇ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧನೆ ಪಡೆಯುತ್ತಾರೆ.ರಕ್ತೇಶ್ವರಿ ದೈವದ ಭಕ್ತೆಯಾಗಿದ್ದು ದಿನಾಲು ದೈವಕ್ಕೆ ನೀರು ಬೆಳಕು ಇಟ್ಟು ಆರಾಧನೆ ಮಾಡುತ್ತಿದ್ದ ಅಕ್ಕಚ್ಚು ( ಅಕ್ಕ ಅರಸು) ಎಂಬ ಜೈನ ಮಹಿಳೆ ರಕ್ತೇಶ್ವರಿ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧನೆ ಪಡೆಯುತ್ತಾರೆ.ಅದೇ ರೀತಿಯಲ್ಲಿ ಹಿರಿಯಡ್ಕದಲ್ಲಿ ವೀರಭದ್ರೇಶ್ವರ ನನ್ನು ಪ್ರತಿಷ್ಠಾಪನೆ ಮಾಡಿದ ಅಡ್ಕತ್ತಾಯ ಎಂಬ ಬ್ರಾಹ್ಮಣ  ಅರ್ಚಕರೊಬ್ಬರು ಅಡ್ಕತ್ತಾಯ ಎಂಬ ದೈವವಾಗಿ ಆರಾಧನೆ ಪಡೆಯುತ್ತಾರೆ.
ಬದಿಯಡ್ಕ ಸಮೀಪದ ಕಾರಿಂಜೇಶ್ವರ ದೇವಾಲಯವನ್ನು ಕಟ್ಟಿಸಿದ ಕಾರಿಂಜೆತ್ತಾಯ ಎಂಬ ಬ್ರಾಹ್ಮಣ ಕಾರಿಂಜೆತ್ತಾಯ ದೈವವಾಗಿ ಆರಾಧನೆ ಪಡೆಯುತ್ತಾನೆ.ಹಾಗೆಯೇ ಜುಮಾದಿ ದೈವದ ಅನನ್ಯ ಭಕ್ತೆಯಾದ ಪೊನ್ನು ಕುಂದಾಡ್ದಿ ಎಂಬ ಹೆಣ್ಣು ಮಗಳು ಪಾದೆ ಎಂಬಲ್ಲಿ ಬುನಾದಿಯನ್ನು ಭೇಟಿ ಆಗುತ್ತಾಳೆ.ಅಲ್ಲಿ ಜುಮಾದಿ ದೈವ ತನಗೆ ಸ್ಥಾನ ಕಟ್ಟಿಸಿಕೊಡಲು ಹೇಳುತ್ತದೆ. ಹಾಗೆಯೇ ಪೊನ್ನು ಕುಂದಾಡ್ದಿ ಜುಮಾದಿ ದೈವಕ್ಕೆ ಸ್ಥಾನ ಕಟ್ಟಿಸಿ ಆರಾಧನೆ ಮಾಡುತ್ತಾಳೆ.ಆ ಪಾದೆಯಲ್ಲಿ ಅವಳು ಮಾಯಕಹೊಂದಿ ಜುಮಾದಿಯ ಸಾನ್ನಿಧ್ಯವನ್ನು ಸೇರಿ ದೈವತ್ವ ಪಡೆದು ಆರಾಧನೆ ಹೊಂದುತ್ತಾಳೆ.ಅಲ್ಲಿ ಪಾದೆಯಲ್ಲಿ ನೆಲೆ ನಿಂತ ಜುಮಾದಿ ದೈವವನ್ನು ಪಾದೆ ಜುಮಾದಿ ಎಂದು ಕರೆಯುತ್ತಾರೆ.
ಹಿರಿಯರ ಪ್ರಕಾರ ಆ ಪಾದೆಯಲ್ಲಿ ಒಂದು ಹೆಣ್ಣು ಮತ್ತು ಒಂದು ಬುಟ್ಟಿಯ ಚಿತ್ರ ಇತ್ತು.ಅದು ಪೊನ್ನು ಕುಂದಾಡ್ದಿ ಯ ಸಮಾಧಿ ಎಂದು ಹೇಳುತ್ತಾರೆ.
ಮಾಹಿತಿ ಮೂಲ Beauty of Tulunadu ಸಾವಿರದೊಂದು ಗುರಿಯೆಡೆಗೆ : ಗುರಿಯೆಡೆಗೆ : ತುಳುನಾಡ ದೈವಗಳು 438 ಪೊನ್ನು ಕುಂದಾಡ್ದಿ 

ಸಾವಿರದೊಂದು ಗುರಿಯೆಡೆಗೆ : ತುಳುನಾಡ ದೈವಗಳು 436-437 ಸತ್ಯಮಾಗಣ್ತಿ ಮತ್ತು ಕರಿಕಲ್ಲು ದೈವಗಳು © ಡಾ.ಲಕ್ಷ್ಮೀ ಜಿ ಪ್ರಸಾದ

ಸತ್ಯಮಾಗಣ್ತಿ ಮತ್ತು ಕರಿಕಲ್ಲು ದೈವಗಳು
ತುಳುವರ  ಭೂತಾರಾಧನೆ ಬಹಳ ವಿಶಿಷ್ಠವಾದ ಆರಾಧನಾ ಪದ್ಧತಿ. ಇಲ್ಲಿ ಯಾರು ಯಾಕೆ ಹೇಗೆ ದೈವತ್ವ ಪಡೆಯುತ್ತಾರೆ ಎಂಬುದಕ್ಕೆ ಒಂದು ಇತಮಿತ್ಥಂ ಎಂದು ಹೇಳುವ ಸಿದ್ಧ ಸೂತ್ರವಿಲ್ಲ.ಸಾಮಾನ್ಯವಾಗಿ ಅಸಾಧಾರಣ ಕಾರ್ಯ ಮಾಡಿದ ಅಸಹಜ ಮರಣವನ್ನಪ್ಪಿದವರು ದೈವಗಳಾಗಿ ನೆಲೆ ನಿಲ್ಲುತ್ತಾರೆ.ಅದೇ ರೀತಿಯಲ್ಲಿ ಪ್ರಧಾನ ದೈವದ ಅನುಗ್ರಹ ಅಥವಾ ಆಗ್ರಹಕ್ಕೆ ತುತ್ತಾಗಿ ಕೂಡ ಅದೇ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧನೆ ಹೊಂದುತ್ತಾರೆ.ಇವೆಲ್ಲಕ್ಕೂ ಮೀರಿ ಕೆಲವರು ದೈವ ಗಳಾಗಿ ಆರಾಧನೆ ಪಡೆಯುವುದು ಕಂಡು ಬರುತ್ತದೆ. ಇಂತಹ ಎರಡು ದೈವಗಳು ಸತಗಯಮಾಗಣ್ತಿ ಮತ್ತು ಕರಿಕಲ್ಲು ದೈವಗಳು.
ಪ್ರಚಲಿತ ಐತಿಹ್ಯದ ಪ್ರಕಾರ ಕುಂಬಳೆ ಪರಿಸರದಲ್ಲಿ ಒಂದು ಬ್ರಾಹ್ಮಣ ದಂಪತಿಗಳು ಇರುತ್ತಾರೆ.ಮಡತಿ ತುಂಬಾ ಸತ್ಯವತಿ, ಮಹಾನ್ ಪತವ್ರತೆಯಾಗಿದ್ದಳು.ಅವಳು ಗರ್ಭಿಣಿ ಆಗುತ್ತಾಳೆ
ಒಂದು ಶುಭ ಮುಹೂರ್ತದಲ್ಲಿ ಅವಳಿಗೆ ಸೀಮಂತ ಮಾಡಿ ಅವಳನ್ನು ಪ್ರಸವಕ್ಕಾಗಿ ತಂದೆ‌ಮನೆಗೆ ಬಿಡ್ಟು ಬರಲು ಗಂಡ ಹೊರಡುತ್ತಾನೆ.ಗಂಡ ಹೆಂಡತಿ ಇಬ್ಬರೂ ಕಾಲು ದಾರಿಯಲ್ಲಿ ತಂದೆ‌ಮನೆಗೆ ಹೋಗುತ್ತಾರೆ.ದಾರಿ ನಡುವೆ‌ ಮಡದಿಯನ್ನು ಒಂದು ಮರದ ಅಡಿಯಲ್ಲಿ ಕುಳ್ಳಿರಿಸಿ ಈಗ ಬರುತ್ತೇನೆ ಎಂದು ಹೇಳಿ ಗಂಡ ಎಲ್ಲಿಗೋ ಹೋಗುತ್ತಾನೆ
ಸುಮಾರು ಹೊತ್ತು ಕಳೆದರೂ ಗಂಡ ಬರುವುದಿಲ್ಲ. ಆತಂಕಕ್ಕೆ ಒಳಗಾದ ತುಂಬು ಗರ್ಭಿಣಿ ಅಳತೊಡಗುತ್ತಾಳೆ.ಆಗ ಅಲ್ಲಿ ಸಮೀಪದ ಗುಡಿಸಲಿನಲ್ಲಿದ್ದ ಓರ್ವ  ವೃದ್ಧ ದಲಿತಹಿಳೆ ಮಹಿಳೆ ಅವಳಿಗೆ ಅವಳ ಗಂಡನನ್ನು ತೋರಿಸಿತ್ತಾಳೆ.ಅವಳ ಗಂಡ ಓರ್ವ ಜೈವ ಹೆಂಗಸಿನೊಂದಿಗೆ ಸರಸವಾಡುತ್ರ ಇರುತ್ತಾನೆ.ಇದನ್ನು ನೋಡಿದ ಮುಗ್ಧೆ ಪತವ್ರತಾ ಹೆಣ್ಣಿಗೆ ಆಘಾತವಾಗುತ್ತದೆ
ಅವಳು ತನ್ನ ಹೊಟ್ಟೆಯಲ್ಲಿ ಇರುವ ಮಗುವಿನೊಂದಿಗೆ ಆತ್ಮಾರ್ಪಣೆ ಮಾಡಿಕೊಳ್ಳುತ್ತಾಳೆ
ನಂತರ ದೈವತ್ವ ಪಡೆದು ಒಂಜಿ‌ ಕುಂದು ನಲ್ಪ ದೈವಗಳೊಡನೆ ಸೇರಿಕೊಂಡು ಸತ್ಯ ಮಾಗಣ್ತಿ ( ಸತ್ಯ ಮಹಾಸತಿ?) ದೈವವಾಗಿ ಆರಾಧನೆ ಪಡೆಯುತ್ತಾಳೆ.ಇವರೊಂದಿಗೆ ಇವಳಿಗೆ ಸಹಾಯ ಮಾಡಿದ ಆ ದಲಿತ ಮಹಿಳೆ‌ ಕೂಡ ಕರಿಕಲ್ಲು ದೈವವಾಗಿ ಆರಾಧನೆ ಪಡೆಯುತ್ತಾಳೆ.ಸತ್ಯ ಮಾಗಣ್ತಿ ದೈವಕ್ಕಳನ್ನು ಬಾಣಂತಿಯರನ್ನು ರಕ್ಷಿಸುವ ದೈವ ಹಾಗಾಗಿ ಬಾಣಂತಿ ದೈವ ಎಂದು ಕೂಡ ಕರೆಯುತ್ತಾರೆ
ಮಾಹಿತಿ ನೀಡಿದ ಶ್ರೀವತ್ಸ ಪ್ರದೀಪರಿಗೆ ಧನ್ಯವಾದಗಳು
© ಡಾ.ಲಕ್ಷ್ಮೀ ಜಿ ಪ್ರಸಾದ