Sunday, 16 February 2014

ಬರ್ನೆಲ್ ಮೇನ್ನರ್ ತೋರಿಸಿದ ಹಾದಿಯಲ್ಲಿ ಸಾವಿರದೊಂದು ಗುರಿಯೆಡೆಗೆ-ಡಾ.ವಾಮನ ನಂದಾವರ ,ಖ್ಯಾತ ಸಂಶೋಧಕರು

ಡಾ. ಲಕ್ಷ್ಮೀ  ವಿ. ಅವರ ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ:  ಒಂದು ವಿಶ್ಲೇಷಣಾತ್ಮಕ ಅಧ್ಯಯನವು  ಡಾ. ಎಸ್. ನಾಗರಾಜು ಅವರ ಮಾರ್ಗದರ್ಶನದಲ್ಲಿ ಹಂಪಿ ಕನ್ನಡ ವಿಶ್ವ ವಿದ್ಯಾಲಯಕ್ಕೆ 2009ರ ಸಾಲಿನ ಪಿಎಚ್.ಡಿ. ಪದವಿಗಾಗಿ, ಬೆಂಗಳೂರಿನ ಬಿ. ಎಂ. ಶ್ರೀ ಸ್ಮಾರಕ  ಪ್ರತಿಷ್ಠಾನದ ಎಂ. ವಿ. ಸೀ. ಸ್ನಾತಕೋತ್ತರ ಸಂಶೋಧನ ಕೇಂದ್ರದ ಮೂಲಕ ಸಲ್ಲಿಸಿದ ಸಂಪ್ರಬಂಧವಾಗಿದೆ. ಜನಪದ ಸಂಸ್ಕೃತಿ ಸಂಶೋಧನೆಯಲ್ಲಿ ಇದೊಂದು ಮಹತ್ವದ ಮಹಾ ಪ್ರಬಂಧವಾಗಿದ್ದು ಇದೀಗ ಅದು ಪ್ರಕಟವಾಗಿ ಬರುತ್ತಿರುವುದು ಅತ್ಯಂತ ಶ್ಲಾಘನೀಯವಾದುದು

ಇದರಲ್ಲಿ ಹತ್ತು ಅಧ್ಯಾಯಗಳು ಮತ್ತು ಅನುಬಂಧದ ಪುಟಗಳಿವೆ. ಪ್ರಸ್ತಾವನೆಯ ಮೊದಲನೆಯ  ಅಧ್ಯಾಯಲ್ಲಿ ತುಳುನಾಡಿನ ಭೌಗೋಳಿಕ ಎಲ್ಲೆಗಳ ಮತ್ತು ತುಳುನಾಡಿನ ಸಂಸ್ಕೃತಿಯ ಕುರಿತು ಹೇಳಲಾಗಿದೆ. ಈ ಕ್ಷೇತ್ರದಲ್ಲಿ ಈ ತನಕ ನಡೆದಿರುವ ಕೆಲಸ, ಅಧ್ಯಯನದ ವ್ಯಾಪ್ತಿ, ಉದ್ದೇಶ, ವಿಧಾನಗಳ ಕುರಿತು ತಿಳಿಸಲಾಗಿದೆ. ನಾಗಬ್ರಹ್ಮ ಪರಿಕಲ್ಪನೆಯ ಎರಡನೆಯ ಅಧ್ಯಾಯದಲ್ಲಿ ತುಳುವರ ಆರಾಧ್ಯ ದೈವ ಬೆರ್ಮೆರ್ ಪ್ರಾಚೀನತೆ, ಸ್ವರೂಪ, ಮಹತ್ವ, ಬೆರ್ಮೆರ್ ಪದದ ಅರ್ಥ ಪರಿಕಲ್ಪನೆ, ಬೆರ್ಮೆರ್ ಸೃಷ್ಟಿಯ ಮೂಲ ಮತ್ತು ವೈಶಿಷ್ಟ್ಯ, ಸೃಷ್ಟಿಕರ್ತ ಬೆರ್ಮೆರ್, ಆಲಡೆ ಮತ್ತು ಗರಡಿ ಬೆರ್ಮೆರ್, ಭೂತಬ್ರಹ್ಮ, ಯಕ್ಷಬ್ರಹ್ಮ ಮತ್ತು ನಾಗಬ್ರಹ್ಮ ಪರಿಕಲ್ಪನೆಯ ಮೂರ್ತಿಗಳು ಮೊದಲಾದುವುಗಳ ಕುರಿತು ಸಾಕಷ್ಟು ಅಧ್ಯಯನ ನಡೆದಿದೆ. ಭೂತಾರಾಧನೆಯ ಪ್ರಾಚೀನತೆಗೆ ಕಾರ್ಕಳದ ಕಾಂತೇಶ್ವರ ದೇವಾಲಯದ ಕ್ರಿ.ಶ. 1379ರ ಶಾಸನದಲ್ಲಿರುವ ದೈವಕ್ಕೆ ತಪ್ಪಿದವರುಎಂದಿರುವ  ದಾಖಲೆಯನ್ನು ಅಧ್ಯಯನಕಾರರು ಇಲ್ಲಿ ಉಲ್ಲೇಖಿಸಿದ್ದಾರೆ.
 
 

ನಾಗಬ್ರಹ್ಮ ಸೇರಿಗೆಯ ಮೂರನೆಯ ಅಧ್ಯಾಯದಲ್ಲಿ ಆಲಡೆ ಸಂಕೀರ್ಣದ ದೈವಗಳಾದ ಬ್ರಹ್ಮ ಲಿಂಗೇಶ್ವರ, ರಕ್ತೇಶ್ವರಿ, ನಾಗ, ನಂದಿಗೋಣ, ಉಲ್ಲಾಯ, ಖಡ್ಗೇಶ್ವರಿ, ಸಿರಿಗಳು, ಕುಮಾರ, ಪಂಜುರ್ಲಿ, ಅಡ್ಕತ್ತಾಯ, ಧೂಮವತಿ, ಗೆಜ್ಜೆಕತ್ತಿರಾವಣ, ಬ್ರಹ್ಮಸ್ಥಾನದಲ್ಲಿ ಆರಾಧನೆಗೊಳ್ಳುವ ದೈವಗಳಾದ ಬೆರ್ಮೆರ್, ನಂದಿಗೋಣ, ರಕ್ತೇಶ್ವರಿ, ನಾಗ, ಭೈರವ, ಗರಡಿ ಸಂಕೀರ್ಣದ ದೈವಗಳಾದ ಬ್ರಹ್ಮ, ಕೋಟಿಚೆನ್ನಯ, ಕಿನ್ನಿದಾರು, ಮಾಯಂದಾಲ್, ಕುಜುಂಬಕಾಂಜ, ಒಕ್ಕುಬಲ್ಲಾಳ, ಜೋಗಿಪುರುಷ, ಶಕ್ತಿ ದೇವತೆಗಳು, ಮುಗೇರ್ಲು ಸಂಕೀರ್ಣ ದೈವಗಳಾದ ಎಣ್ಮೂರು ದೆಯ್ಯು, ಕೆಲತ ಪೆರ್ನಲೆ, ತನ್ನಿಮಾಣಿಗ ದೈವಗಳಬಗೆಗೆ ಅಧ್ಯಯನ ನಡೆದಿದೆ.  ಇಲ್ಲಿ ಡಾ. ಲಕ್ಷ್ಮೀ  ವಿ. ಅವರು ಪ್ರಾದೇಶಿಕ ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ಗುರುತಿಸಿದ್ದಾರೆ. ಮುದ್ದ ಕಳಲ ಮತ್ತು ಮಾನ್ಯಲೆ ಪೆರ್ನಲೆ ಎನ್ನುವುದು ಎಣ್ಮೂರು ದೆಯ್ಯು ವೀರರಿಗಿರುವ ಪ್ರಾದೇಶಿಕ ಹೆಸರುಗಳು.
 
ನಾಗಬ್ರಹ್ಮ ಆರಾಧನಾ ಪ್ರಕಾರಗಳ ನಾಲ್ಕನೆಯ ಅಧ್ಯಾಯದಲ್ಲಿ ವೈದಿಕ ಮೂಲ ಪ್ರಕಾರಗಳನ್ನು ಮತ್ತು ತಾಂತ್ರಿಕ ಮೂಲ ಪ್ರಕಾರಗಳನ್ನು, ಜನಪದ ಮೂಲ ಪ್ರಕಾರಗಳನ್ನು ದಾಖಲಿಸುತ್ತಾ ಸರ್ಪ ಸಂಸ್ಕಾರ, ನಾಗಪ್ರತಿಷ್ಟಾಪನೆ, ಬ್ರಹ್ಮ ಸಮಾರಾಧನೆ, ಸುಬ್ರಹ್ಮಣ್ಯ, ಮೂರಿಳು, ಸರ್ಪಂತುಳ್ಳಲ್, ಸರ್ಪಂಕಳಿ ಮೊದಲಾದ ಮೂವತ್ತೊಂದು ವಿಧದ ಆರಾಧನಾ ವೈವಿಧ್ಯ ಲೋಕವನ್ನು ಪರಿಚಯಿಸಿರುವುದು ಈ ಅಧ್ಯಯಯನದ ಹೆಚ್ಚುಗಾರಿಕೆ. ವೇದೇತಿಹಾಸ ಪುರಾಣಗಳ ನಾಗಬ್ರಹ್ಮ ಎಂಬ ಐದನೆಯ ಅಧ್ಯಾಯದಲ್ಲಿ  ನಾಗ-ಗರುಡಾವತಾರ, ಜರತ್ಕಾರು ವಿವಾಹ ಮೊದಲಾದುವುಗಳನ್ನು ಚರ್ಚಿಸಿದ್ದಾರೆ.
ತುಳು ಜನಪದ ಸಾಹಿತ್ಯದ ನಾಗಬ್ರಹ್ಮ ಎನ್ನುವ ಆರನೆಯ ಅಧ್ಯಾಯದಲ್ಲಿ  ಸಿರಿ ಪಾಡ್ದನದಲ್ಲಿ ಬರುವ ಲಂಕೆ ಲೋಕನಾಡಿನ ಬೆರ್ಮೆರ್, ಕೋಟಿಚೆನ್ನಯ ಪಾಡ್ದನದಲ್ಲಿ ಬರುವ ಬೆರ್ಮೆರ್, ಮುಗೇರ್ಲು ಪಾಡ್ದನದಲ್ಲಿ ಬರುವ ಬೆರ್ಮೆರ್ ಮೊದಲಾದ ಬ್ರಹ್ಮರ ಪರಿಕಲ್ಪನೆಗಳ ಕುರಿತು ಅಧ್ಯಯನ ನಡೆಸಿದ್ದಾರೆ.
 

 
 
ಅಧ್ಯಾಯ ಏಳರಲ್ಲಿ ಕಂಬಳದ ಪ್ರಾಚೀನತೆ, ಕಂಬಳ ಪದದ ನಿಷ್ಪತ್ತಿ, ಕಂಬಳದ ಮಹತ್ವ ಮೌಖಿಕ ಪರಂಪರೆಯಲ್ಲಿ ಕಂಬಳ, ಕಂಬಳದ ಪ್ರಕಾರಗಳು, ಕಂಬಳದಲ್ಲಿ ದೈವಾರಾಧನೆ ಮೊದಲಾದುವುಗಳ ಕುರಿತ ಅಧ್ಯಯನವಿದೆ.
ಅಧ್ಯಾಯ ಎಂಟರಲ್ಲಿ ಕಂಬಳಕೋರಿ ನೇಮ ಮತ್ತು ಆ ಹೊತ್ತು ಅಲ್ಲಿ ನಡೆಯುವ ಒಂದು ಕುಂದು ನಲುವತ್ತು ದೈವಗಳು’, ಕಿನ್ನಿಮಾಣಿ ಪೂಮಾಣಿ, ಕೋಮರಾಯ, ಬಬ್ಬರ್ಯ, ಪಂಜುರ್ಲಿ, ಕಲ್ಕುಡ-ಕಲ್ಲುರ್ಟಿ, ರಕ್ತೇಶ್ವರಿ ಮೊದಲಾದ ದೈವಗಳ ವೈವಿಧ್ಯ ವೈಶಿಷ್ಟ್ಯಗಳ ನಿರೂಪಣೆಯಿದೆ. 
 
 
ಬೆರ್ಮೆರ್ ಆರಾಧನೆಯ ಮೇಲೆ ಇತರ ಸಂಪ್ರದಾಯಗಳ ಪ್ರಭಾವ ಎನ್ನುವ  ಒಂಬತ್ತನೆಯ ಅಧ್ಯಾಯದಲ್ಲಿ  ಬೆರ್ಮೆರ್ ಆರಾಧನೆಯ ಮೇಲೆ ಯಕ್ಷಾರಾಧನೆಯ ಪ್ರಭಾವ, ಬ್ರಹ್ಮಯಕ್ಷ-ಬೆರ್ಮೆರ್, ಅರಸು ಆರಾಧನೆ, ವೀರ ಆರಾಧನೆ, ನಾಥ ಸಂಪ್ರದಾಯ ಮತ್ತು ನಾಗ ಬ್ರಹ್ಮ ಹಾಗು ಇವುಗಳ ಮೇಲೆ ಬೇರೆ ಬೇರೆ ಸಂಪ್ರದಾಯಗಳ ಪ್ರಭಾವಗಳ  ವಿವರಗಳನ್ನು  ನೀಡಿದ್ದಾರೆ.
ಹತ್ತನೆಯ ಅಧ್ಯ್ಯಾಯ ಉಪಸಂಹಾರದಲ್ಲಿ ತಮ್ಮ ಅಧ್ಯಯನದ ನಿಲುವನ್ನು ಮಂಡಿಸಿ ಸಮರ್ಥನೆ ನೀಡಿದ್ದಾರೆ. ಪೆರಿಯಾರ್>ಬೆರ್ಮೆರ್> ಬೆರ್ಮೆ>ಬ್ರಮ್ಮೆ>ಬ್ರಹ್ಮ ಆಗಿರಬಹುದಾದುದನ್ನು ಗುರುತಿಸುವ ಕೆಲಸ ಆಗಬೇಕಾಗಿದೆ.
ಮಹಾಬಲಿ, ಬಲೀಂದ್ರ, ಮಹಿಷಾಸುರ, ಭರಮ, ಸುಬ್ರಹ್ಮಣ್ಯ, ಸುಬ್ಬಯ, ಕಾಡ್ಯನಾಟದ ಸ್ವಾಮಿ, ಮಡಿಕೆಯಲ್ಲಿ ಬೆರ್ಮೆರ್, ಕಾಳಭೈರವ,  ಕುಂಡೋದರ  ಭೂತ, ತುಳುನಾಡನ್ನು ಆಳಿದ ಪ್ರಾಚೀನ ಅರಸ, ಪೆರುಮಾಳ, ಪುರಾತನ ಹಿರಿಯ, ಬೆರ್ಮೆರ್ ರಾಜನಾಗಿದ್ದನೇ ?, ‘ಒಂಜಿಕುಂದು ನಲ್ಪ, ಸಾರತ್ತೊಂಜಿ ದೈವೊಲು ಇದೊಂದು ನೆಲೆ, ಸ್ತರ, ಪರಿಪೂರ್ಣತೆಯ ಹಂತ. ಅದು 39 ಏಕೆ? 1001 ಏಕೆ? ಅಧ್ಯಯನ ಆಗಬೇಕು.
ಡಾ. ಲಕ್ಷ್ಮೀ  ವಿ. ತಮ್ಮ ಅಧ್ಯಯನದ ಕ್ಷೇತ್ರಕಾರ್ಯ ವಿವರಗಳನ್ನು ಸಮಗ್ರವಾಗಿ ನೀಡಿದ್ದಾರೆ. ವಿಸ್ತೃತ ಓದಿನ ಆಕರ ಸೂಚಿಯನ್ನು ಮುಂದಿಟ್ಟಿದ್ದಾರೆ. ಸಾಕಷ್ಟು ನೆರಳು ಬೆಳಕಿನ ವರ್ಣಚಿತ್ರಗಳನ್ನು ಹಾಗೂ 38 ಆಚರಣೆಗಳ ಆಡಿಯೋ-ವೀಡಿಯೋ ಸಂಗ್ರಹ ಮಾಹಿತಿ ಒದಗಿಸಿದ್ದಾರೆ. ನಾಗ ಬೆರ್ಮೆರ್ ಪಾಡ್ದನದ ಮೂರು ಪಾಠಗಳನ್ನು ಹಾಗು ಕಂಬಳ ಸಂಬಂಧಿ ಈಜೊ ಮಂಜೊಟ್ಟಿ ಗೋಣಪಾಡ್ದನಪಠ್ಯ ಸಂಗ್ರಹಿಸಿ ಅದರ ಕನ್ನಡ ಅನುವಾದವನ್ನೂ ಕೊಟ್ಟಿದ್ದಾರೆ. ಪೂಕರೆ ನೇಮ ಒಂದೆಡೆಯಲ್ಲ ಕೋಳ್ಯೂರು, ನಡಿಬೈಲು, ಅನಂತಾಡಿ, ಬಂಟ್ವಾಳದ ಬೀರೂರು, ಕೊಡ್ಲಮೊಗರು, ಅರಿಬೈಲು, ಕಾಸರಗೋಡಿನ ಚೌಕಾರು(ಅದೂ ಮೂರು ದಿನಗಳಲ್ಲಿ ಒಂದೇ ಊರಲ್ಲಿ).  ಹಾಗೆಯೇ ನಿಡಿಗಲ್ ಲೋಕನಾಡು ಮೊದಲಾದ ಹತ್ತು ಹದಿನಾಲ್ಕು ಬ್ರಹ್ಮ ಆಲಡೆಗಳನ್ನು ಸಂದರ್ಶನ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಹತ್ತಾರು ಗರೊಡಿಗಳನ್ನು ಭೇಟಿಮಾಡಿದ್ದಾರೆ. ಹೀಗೆ ಆಸಕ್ತಿ, ಕುತೂಹಲ ಮತ್ತು ಹುಡುಕಾಟದ ಬೆನ್ನು ಹತ್ತುವ ಚಪಲದ ನೆಲೆಗಳನ್ನು ಮೀರಿ ಡಾ. ಲಕ್ಷ್ಮೀ  ಅವರು ತಮ್ಮ ಅಧ್ಯಯನದ ಒಳನೋಟಗಳನ್ನು ನೀಡುವ ಪ್ರಯತ್ನ ನಡೆಸಿದ್ದಾರೆ.
ಅರಸು ಆರಾಧನೆ, ಪಿತೃ ಆರಾಧನೆ, ಭೂತಾರಾಧನೆ, ನಾಗಾರಾಧನೆ, ಯಕ್ಷಾರಾಧನೆ ಹಾಗೂ ಬಲೀಂದ್ರ ಅರಾಧನೆಗಳ ಸಮನ್ವಯ ನಾಗಾರಾಧನೆಯಲ್ಲಿ ಕಾಣಿಸುತ್ತದೆ ಎನ್ನುವ ನಿಲುವು ತಳೆದಿದ್ದಾರೆ. ಇಲ್ಲೆಲ್ಲ ಎಲ್ಲೂ ಬೆರ್ಮೆರ್ ಯಾರು ಏನು, ನಾಗ ಬೆರ್ಮೆರ್ ಯಾರು? ಭೂತಗಳ ಅಧಿಪತಿಯೇ ? ಎಂದೆಲ್ಲ ಅಂತಿಮ ನಿಲುವಿಗೆ ಅವರು ಬಂದಿಲ್ಲ. ಅದು ದೋಷ ಅಲ್ಲ, ಸಂಶೋಧನೆಯ ಗುಣ.ಅವಸರಿಸದಿರುವುದು  ಚರ್ಚೆಗಳಿಗೆ ಆಹ್ವಾನ ನೀಡಿದಂತೆ. ಜನಪದ ಸಂಸ್ಕೃತಿಯ ಅಧ್ಯಯನಾಂಶಗಳನ್ನು ಸೋಜಿಗಪಡುವ ಹಾಗೆ ಒಂದೆಡೆ ರಾಶಿ ಹಾಕಿ ಸಂಶೋಧನಾ ಸಾಧ್ಯತೆಗಳನ್ನು ತೆರೆದು ತೋರಿಸಿದ್ದಾರೆ.ಇದೇ ಕಾಲಕ್ಕೆ ಇಲ್ಲಿ ಡಾ. ಲಕ್ಷ್ಮೀ  ಅವರಿಗೆ ತಮ್ಮ ಸಂಪ್ರಬಂಧದ ಸಂರಚನೆಗೆ ಬೇಕಾದ ಚೌಕಟ್ಟು ಈ ಮೊದಲೇ ಸಿದ್ಧವಾಗಿತ್ತು ಎನ್ನುವ ಇನ್ನೊಂದು ಬಹು ಮುಖ್ಯವಾದ ಅಂಶದ ಕಡೆಗೆ ಗಮನ ಕೊಡಬೇಕಾಗಿದೆ.
ನೂರಕ್ಕೂ ಹೆಚ್ಚು ಕಥೆ, ವೈಚಾರಿಕ ಲೇಖನಗಳು, ಅಂಕಣ ಬರಹಗಳು ಮೊದಲಾದ ಸಾಹಿತ್ಯ ಮತ್ತು ಸಂಶೋಧನ ಪ್ರವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ. ಲಕ್ಷ್ಮಿ ವಿ. ಅವರು ಅರಿವಿನಂಗಳದ ಸುತ್ತ(ಶೈಕ್ಷಣಿಕ ಬರೆಹಗಳು), ಮನೆಯಂಗಳದಿ ಹೂ(ಕಥಾಸಂಕಲನ), ದೈವಿಕ ಕಂಬಳ ಕೋಣ (ತುಳು ಜಾನಪದ ಸಂಶೋಧನೆ), ಸುಬ್ಬಿ ಇಂಗ್ಲೀಷ್ ಕಲ್ತದು(ಮಹಿಳೆ ಬರೆದ ಮೊದಲ ಹವಿಗನ್ನಡ ನಾಟಕ), ತುಂಡುಭೂತಗಳು: ಒಂದು ಅಧ್ಯಯನ, ಕನ್ನಡ-ತುಳು ಜನಪದ ಕಾವ್ಯಗಳಗಳಲ್ಲಿ ಸಮಾನ ಆಶಯಗಳು, ತುಳು ಪಾಡ್ದನಗಳಲ್ಲಿ ಸ್ತ್ರೀ, ಪಾಡ್ದನಸಂಪುಟ,  ತುಳುವ ಸಂಸ್ಕಾರಗಳು ಮತ್ತು ವೃತ್ತಿಗಳು ಎಂಬ ಐದು ಕೃತಿಗಳನ್ನು ಏಕಕಾಲಕ್ಕೆ ಪ್ರಕಟಿಸುವ ಸಾಹಸ ಮಾಡಿದವರು. 
ಹಾಗೆಯೇ ಮುಂದಿನ ಸರದಿಯಲ್ಲಿ, ತುಳುನಾಡಿನ ಅಪೂರ್ವ ಭೂತಗಳು, ಬೆಳಕಿನೆಡೆಗೆ ಸಂಶೋಧನಾ ಲೇಖನಗಳು. ತುಳು ಜನಪದ ಕವಿತೆಗಳು ಚಂದಬಾರಿ ರಾಧೆ ಗೋಪಾಲ ಮತ್ತು ಇತರ ಅಪೂರ್ವ ಪಾಡ್ದನಗಳು, ಕಂಬಳ ಕೋರಿ ನೇಮ(ತುಳು ಜಾನಪದ ಸಂಶೋಧನೆ)  ಮತ್ತೊಂದು ಕಂತಿನ ಐದು ಪುಸ್ತಕಗಳನ್ನು ಪ್ರಕಟಿಸುವ ಧೈರ್ಯ ಮಾಡಿದವರು. ಹೀಗೆ ಒಟ್ಟು  ಹದಿನಾಲ್ಕು  ಕೃತಿಗಳು (ಮತ್ತೆ ಐದು ಕೃತಿಗಳು ಅಚ್ಚಿನಲ್ಲಿವೆ)  ಇವರ ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ: ಒಂದು ವಿಶ್ಲೇಷನಾತ್ಮಕ ಅಧ್ಯಯನಕ್ಕೆ ದೊಡ್ಡ ಗಂಟಿನ ಮೊದಲ ಬೌದ್ಧಿಕ ಬಂಡವಾಳವಾಗಿರುವುದು ನಿಜ.
 ವಾಸ್ತವವಾಗಿ ಭೌತಿಕ ಶರೀರಕ್ಕೆ ಎರಡೆರಡು ಕೈಕಾಲುಗಳು ಹೇಗೋ, ಹಾಗೆ ಇವರು ಗಟ್ಟಿಯಾಗಿದ್ದಾರೆ.  ಹಾಗೆಯೇ ಅಂಗೈಗೆ ಐದು ಬೆರಳುಗಳ ಹಾಗೆ ಒಂದು ಹಿಡಿಗೆ ಹದವಾಗಿದ್ದಾರೆ. ಹೇಗೆ ಅಂಗೈಗೆ ಐದು ಬೆರಳುಗಳ ಸಂಯೋಜನೆಯ ಸಹಕಾರ ಒಂದು ಹಿಡಿತಕ್ಕೆ ಕಾರಣವಾಗುವುದೋ ಹಾಗೆ  ಇಲ್ಲಿ ಒಂದೊಂದು ಹಿಡಿಯಷ್ಟು ಕೆಲಸಗಳು ಸಾಧ್ಯವಾಗಿದೆ. ಇದು ನಿಜಕ್ಕೂ ಈ ಹೆಣ್ಣುಮಗಳ ಸಾಹಸವೇ ಸರಿ. ಇಂತಹ ಸಂಶೋಧನೆಯ ಮತ್ತು ಗ್ರಂಥಗಳ ಪ್ರಕಟಣೆಯ ಕೆಲಸಗಳಿಗೆ ಕೇವಲ ಅಧ್ಯಯನ ಆಸಕ್ತಿ ಮಾತ್ರ ಇದ್ದರೆ ಸಾಕಾಗುವುದಿಲ್ಲ  ಜೊತೆಗೆ ಉತ್ಸಾಹ ಮತ್ತು ಛಲಗಳ ಮನೋಧರ್ಮದ ದೃಢ ಸಂಕಲ್ಪವೂ ಬೇಕು. ಜೊತೆಗೆ ಧೈರ್ಯವೂ ಬೇಕು. ಇರುವ ಮತ್ತು ಸಿಗುವ ಅವಕಾಶಗಳ ಸದುಪಯೋಗಕ್ಕಾಗಿ ಅವರ ಮನಸ್ಸು ಸದಾ ತುಡಿಯುತ್ತಲೂ ಇರಬೇಕು. ಇಲ್ಲದೆ ಹೋದರೆ ಬೌದ್ಧಿಕ ರಂಗದಲ್ಲಿ ಅಧ್ಯಯನ ಸಾಧನೆಯ ಉತ್ಪನ್ನಗಳು, ಸಾರಸ್ವತಲೋಕದಲ್ಲಿ ಸಾಧನೆಗಳು ಲಭ್ಯವಿರುವುದಿಲ್ಲ. 
ತರಗತಿಯಲ್ಲಿ ಕಲಿಸುವ ಜೊತೆಯಲ್ಲೇ ಅಧ್ಯಾಪನ. ಪ್ರಾಧ್ಯಾಪನ ಕಾಯಕದಲ್ಲಿ ಕಲಿಯುವ ಅವಕಾಶಗಳೂ ಹೇರಳ. ಇಂತಹ ಸಂದರ್ಭಗಳನ್ನು ಹಗುರವಾಗಿ ಕಾಣದೆ ಲಕ್ಷ್ಮೀಯಂತಹವರು ಗಂಭೀರವಾಗಿ ತೆಗೆದುಕೊಳ್ಳವುದರಿಂದಲೇ ಈ ತರದ ಕೆಲಸಗಳು ಸಾಧನೆಯಾಗಿ ಪರಿವರ್ತನೆಗೊಳ್ಳುತ್ತವೆ. ಇಲ್ಲಿ ಕೆಲಸ ಮತ್ತು ಬಿಡುವು ಪರಸ್ಪರ ಹೊಂದಾಣಿಕೆಯಲ್ಲೇ ಸಾಗುತ್ತಿರುತ್ತವೆ. ಹಾಗಿದ್ದಾಗಲೇ ಕಟ್ಟುವ ಕೆಲಸ ನಡೆದು ಉತ್ಪನ್ನದ ಸಾಧನೆಯಾಗಿ ಸಿದ್ಧಿಸುತ್ತದೆ. ಹೀಗೆ ಒಂದೊಂದು ಹಂತಗಳಲ್ಲಿ ಒಂದೊಂದು ಹಿಡಿಯಷ್ಟು ಹೊತ್ತಗೆಗಳನ್ನು ಪ್ರಕಟಿಸಿ ಇವರು ನಿಜ ಅರ್ಥದಲ್ಲಿ ಪ್ರಕಟವಾಗಿದ್ದಾರೆ ಮತ್ತು ಈ ವರೆಗೆ ಅಧ್ಯಯನ ನಡೆಯದ ಕ್ಷೇತ್ರಗಳಲ್ಲಿ ಸಾಕಷ್ಟು ಕೈಯಾಡಿಸಿದ್ದಾರೆ.
ಯಾವಾಗ ಇಂತಹ ಕೈಯಾಡಿಸುವ ಕೆಲಸ ಸಾಧ್ಯವಾಗುತ್ತದೆ ಎಂದರೆ ಅಲ್ಲೆಲ್ಲ ಹಾಗೆಯೇ ಅಧ್ಯಯನ - ಸಂಶೋಧನ ಕ್ಷೇತ್ರಕಾರ್ಯಗಳಲ್ಲಿ ಕಾಲಾಡಿಸುವ ಕಾಯಕವೂ ನಡೆಯುತ್ತಿರಬೇಕಾಗುತ್ತದೆ.  ಇದು ಇವರಿಂದ ಬಹುಪಾಲು ಸಾಧ್ಯವಾಗಿದೆ.
ಈಗಿನ ಕಾಸರಗೋಡು ಜಿಲ್ಲೆಯ ಕೋಳ್ಯೂರು ಎಂಬ ಸಾಂಸ್ಕೃತಿಕ ಹಳ್ಳಿಯಲ್ಲಿ ಹುಟ್ಟಿಬಳೆದ ಇವರು ಬಾಲ್ಯದಿಂದಲೇ ಸ್ಥಳೀಯ ಸಂಸ್ಕೃತಿಯ ಸೊಗಡಿನ ಜಾಡಿನಲ್ಲಿ ಅನುಭವಗಳನ್ನು ಮೈಗೂಡಿಸಿಕೊಂಡವರು. ವಿಜ್ಞಾನ ಪದವೀಧರೆಯಾಗಿ  ಮುಂದಿನ ಅಧ್ಯಯನಗಳಲ್ಲಿ ಸಂಸ್ಕೃತ, ಕನ್ನಡ, ಹಿಂದಿ ಹೀಗೆ ಮೂರು ಸ್ನಾತಕೋತ್ತರ ಪದವಿಗಳನ್ನು ಹೇಗೆ ಮತ್ತು ಏಕೆ ಪಡೆಯಲು ಸಾಧ್ಯವಾಯಿತು? ಅಷ್ಟು ಮಾತ್ರವಲ್ಲ, ರಾಷ್ಟ್ರಭಾಷಾ ಪ್ರವೀಣ, ಎಂ.ಫಿಲ್, ಪಿಎಚ್.ಡಿ. ಕನ್ನಡದಲ್ಲಿ ಎರಡನೆಯ ಪಿಹೆಚ್. ಡಿ.  ಮುಂದೆ ಎನ್.ಇ. ಟಿ(ಕನ್ನಡ) ಯು.ಜಿ.ಸಿ.ಗಳಂತಹ ಶೈಕ್ಷಣಿಕ ಅರ್ಹತೆಗಳನ್ನು ಪಡೆದುಕೊಳ್ಳವ ದಾರಿಗಳನ್ನೂ ಹೇಗೆ ಏಕೆ ಕಂಡುಕೊಂಡರು ಎಂಬುದು ಕುತೂಹಲದ ವಿಷಯವಾಗಿದೆ. ಇವರಿಗೆ ತಮ್ಮ ಅಪೇಕ್ಷೆಯ ಗುರಿಯೆಡೆಗೆ ತುಡಿಯುವ ಹಾಗೆ ಮುಂದೆ ಸಾಗುವ ಜ್ಞಾನದಾಹದ ಅದಮ್ಯ ಉತ್ಸಾಹದ ಜೊತೆಯಲ್ಲೇ ಚೈತನ್ಯದ ಸಿದ್ಧಿಯೂ ಇರುವುದು ಇಲ್ಲಿ ಸ್ಪಷ್ಟವಿದೆ. ಅರಿವಿನಂಗಳದ ಸುತ್ತಮತ್ತು ಮನೆಯಂಗಳದಿ ಹೂಎನ್ನುವ ಮೊದಲ ಎರಡು ಕೃತಿಗಳ ಶೀರ್ಷಿಗಳೇ ಇವರ ಮುನ್ನೋಟದ ಸುಳುಹುಗಳನ್ನು ಮೂಡಿಸುತ್ತವೆ.
ಜನಪದ ಸಂಸ್ಕೃತಿಯಲ್ಲಿ ಅಧ್ಯಯನ ಮಾಡಬಹುದಾದ  ಜನಪದ ಅಂಶ(ಈoಟಞ  Iems)ಗಳಿರುತ್ತವೆ. ಅವನ್ನು ಗಮನಿಸಿ ಗುರುತಿಸಿಕೊಳ್ಳುವ ಮನಸ್ಸು ಅಧ್ಯಯನಕಾರರಿಗೆ ಇರಬೇಕಾಗುತ್ತದೆ. ಹಾಗೆ ನೋಡಿದಾಗ ಗಮನಿಸುವುದು ಮತ್ತು ಗುರುತಿಸುವುದಕ್ಕೆ ಬಹಳಷ್ಟು ಅಂತರವಿರುತ್ತದೆ. ಸಾಮಾನ್ಯವಾಗಿ ಅಂತಹ ಅಂಶಗಳನ್ನು ಎಲ್ಲರೂ ಗಮನಿಸುತ್ತಾರೆ. ಆದರೆ ಗುರುತಿಸುವ ಮನಸ್ಸು ಎಲ್ಲರಿಗಿರುವುದಿಲ್ಲ. ಸಂಶೋಧಕನೊಬ್ಬನ ಕಣ್ಣಿಗೆ ಅಂತಹ ಆಂಶವೊಂದು ಬಿದ್ದಾಗ ಅದು ಅಧ್ಯಯನ ವಸ್ತುವಾಗುತ್ತದೆ. ಮನಸ್ಸಿದ್ದರೆ ಮಾರ್ಗಎನ್ನುವ ಹಾಗೆ ಇಂತಹ ಜನಪದ ಅಂಶಗಳು ಸಂಶೋಧಕರಿಗೆ ಅಧ್ಯಯನ ವಸ್ತುಗಳಾಗಿ ಆ ಕುರಿತು ಮತ್ತೆ ಆ ಕಡೆಗೆ ಆಸಕ್ತಿ ತಳೆದು ಆಯಾ ವಿಷಯಗಳ ಕುರಿತು ಮಾಹಿತಿ ಪಡೆಯುವ ಸಂಗ್ರಹಕಾರ್ಯ ಮೊದಲಾಗುತ್ತದೆ.  
ಜಾತೆರಯಂತಹ ಸಂದರ್ಭದಲ್ಲಿ ಪಲ್ಲಕಿಒಂದು ಜನಪದ ಅಂಶವಾದರೆ ಅಡ್ಡಪಲ್ಲಕಿಎನ್ನುವುದು ಇನ್ನೊಂದು ಜನಪದ ಅಂಶವಾಗುವುದು. ನಮ್ಮನ್ನು ನಾವು ಗಂಭೀರವಾಗಿ ತೊಡಗಿಸಿಕೊಳ್ಳಬೇಕಾದ್ದೇ ಇಲ್ಲಿ.
ಹಾಗಾಗಿ ಡಾ. ಲಕ್ಷ್ಮೀ  ವಿ. ಅವರ ಬರವಣಿಗೆಯಲ್ಲಿ ವ್ಯಾಪಕವಾದ ಕ್ಷೇತ್ರಕಾರ್ಯವನ್ನು ಕಾಣಲು ಸಾಧ್ಯವಾಗುತ್ತದೆ. ದಾರಿಯಲ್ಲಿ ಹೋಗಿಬರುತ್ತಿರಬೇಕಾದರೆ ಗಮನಕ್ಕೆ ಬರುವ ಒಂದು ಕಲ್ಲು ಅವರಿಗೆ ಜನಪದ ಅಂಶವಾಗಿ ಅಧ್ಯಯನಾಸಕ್ತಿಗೆ ಕಾರಣವಾಗುತ್ತದೆ.
 ಹಾಗಾಗಿಯೇ ತುಳುವರ ಆರಾಧನೆಯ ಸಾರತ್ತೊಂಜಿ ದೈವಗಳಿಗೆ(ಸಾವಿರದೊಂದು ದೈವಗಳಿಗೆ) ಹೊಸ ಭಾಷ್ಯ ಬರೆಯಲು ಅರ್ಹತೆಗಳಿಸಿಕೊಂಡಿದ್ದಾರೆ. ಎ. ಮೇನ್ನರ್(1897) ನೀಡಿರುವ ಭೂತಗಳ ಸಂಖ್ಯೆ: 133. ಡಾ. ಬಿ. ಎ. ವಿವೇಕ ರೈ(1885) ನೀಡಿರುವ ಸಂಖ್ಯೆ: 274, ಡಾ.ಕೆ. ಚಿನ್ನಪ್ಪ ಗೌಡರು(1990) ನೀಡಿರುವ ಪರಿಷ್ಕೃತ ಪಟ್ಟಿಯಂತೆ: 360 ರಘುನಾಥ ಎಂ. ವರ್ಕಾಡಿ(2011) ಅವರ ಕಡಂಬಾರ ಮಲ್ರಾಯೆಕೃತಿಯಲ್ಲಿ ಪುನಾರಚಿಸಿದ ಹೊಸ ಪಟ್ಟಿಯಲ್ಲಿ 407 ದೈವಗಳನ್ನು ಹೆಸರಿಸಿದ್ದಾರೆ. 
ಇವೆಲ್ಲವನ್ನೂ ಮೀರಿ ನಿಲ್ಲುವ ಯಾದಿಯೊಂದು ಡಾ. ಲಕ್ಷ್ಮೀ  ವಿ. ಅವರಿಂದ ಸಾಧ್ಯವಾಗಿದೆ. ಇದರ ಸಾಧ್ಯತೆಗೆ ಎರಡು ಉದಾಹರಣೆಗಳನ್ನು  ಅವರ ಮಾಹಿತಿ ಕೋಶದಿಂದಲೇ ಎತ್ತಿಕೊಳ್ಳಬಹುದು. ಈ ಶೋಧಕಿ ಕಂಡುಕೊಂಡ ಉರವ’, ‘ಎರುಬಂಟೆ’, ‘ಅಕ್ಕ ಬೋಳಾಂಗ’, ‘ಅಜ್ಜ ಬಳಯಮೊದಲಾದ 50ರಷ್ಟು ಅಪೂರ್ವ ಭೂತಗಳು ಅವರ ಸಾಧನೆಯ ಫಲವಾಗಿವೆ. ಹಾಗೆಯೇ ಕುಕ್ಕೆತ್ತಿ-ಬಳ್ಳು’, ‘ಪರವ ಭೂತ’, ‘ಕನ್ನಡ ಬೀರ’, ‘ಕುಂಡ-ಮಲ್ಲು’, ‘ಕುಲೆಮಾಣಿಗ’, ‘ಅಚ್ಚು ಬಂಗೇತಿಮೊದಲಾದ 82ರಷ್ಟು ತುಂಡು  ಭೂತಗಳು ಈ ಸಾಧಕಿಯ ಸೇರಿಗೆಯಲ್ಲಿವೆ. ಇದು ಹೇಗೆ ಸಾಧ್ಯವಾಯಿತು ಎಂದು ಅಚ್ಚರಿ ಪಡಬೇಕಾಗಿಲ್ಲ. ಬಾಸೆಲ್ ಮಿಶನ್ ಪರಂಪರೆಯ ಬರ್ನೆಲ್, ಮೇನ್ನರ್‍ಮೊದಲಾದವರು ತೋರಿಸಿಕೊಟ್ಟ ಹಾದಿಯಿದೆ.
1872, ಮಾರ್ಚ್ ತಿಂಗಳ23ನೆಯ ತಾರಿಕಿನಂದು ತೊಡಗಿ ನಾಲ್ಕು ದಿವಸ ಮಂಗಳೂರಿನ ದೂಮಪ್ಪ ಎಂಬವರ ಮನೆಯಲ್ಲಿನಡೆದ ಇಲ್ಲೆಚ್ಚಿದ ನೇಮ(ಮನೆಯಲ್ಲಿ ನಡೆಯುವ ವಿಶಿಷ್ಟ ದೈವಾರಾಧನೆ)ವನ್ನು ನೋಡಿ ಅಧ್ಯಯನ ಮಾಡಿರುವ ಪರಂಪರೆಯದು. ಹಾಗೆ ಎ.ಸಿ ಬರ್ನೆಲ್ ನಡೆಸಿದ ಅಧ್ಯಯನದ ಫಲವಾಗಿ ಖಿhe eviಟ ತಿoಡಿshiಠಿ oಜಿ  he ಖಿuuvಚಿs(ಎ.ಸಿ ಬರ್ನೆಲ್: 1894-1897) ಈ ಸಂಶೋಧನ ಪ್ರಬಂಧ ಮಾಲಿಕೆಯಲ್ಲಿ ಪ್ರಮುಖ ಭೂತಗಳ ಒಂದು ಪಟ್ಟಿಯಿದೆ. ಈ ಪಟ್ಟಿಯನ್ನು ಸಿದ್ಧಮಾಡಿ ಗ್ರಂಥದಲ್ಲಿ ಸೇರಿಸಿದವರು  ಎ. ಮೇನ್ನರ್. ಈ ಪಟ್ಟಿಯಲ್ಲಿ 133 ಭೂತಗಳ ಹೆಸರುಗಳಿವೆ. ಡಾ. ಬಿ. ಎ. ವಿವೇಕ ರೈ(1985) ಅವರ ತುಳು ಜನಪದ ಸಾಹಿತ್ಯಕೃತಿಯಲ್ಲಿ274(ಪು.35-38)  ಭೂತಗಳ ಹೆಸರುಗಳಿವೆ. ಡಾ. ಕೆ. ಚಿನ್ನಪ್ಪ ಗೌಡ ಕೆ.(1990)ಅವರ ಭೂತಾರಾಧನೆ ಜಾನಪದೀಯ ಅಧ್ಯಯನ ಗ್ರಂಥದಲ್ಲಿ 360 ಭೂತಗಳ ಪರಿಷ್ಕೃತ ಪಟ್ಟಿಯಿದೆ(ಪು.34-39). ‘ಸಾವಿರದೊಂದು ಭೂತಗಳ ಬೆನ್ನು ಹಿಡಿದಾಗಎನ್ನುವ ಲೇಖನದಲ್ಲಿ ರಘುನಾಥ ಎಂ. ವರ್ಕಾಡಿ(2011, ಪು.65-79) ಅವರ ಕಡಂಬಾರ ಮಲ್ರಾಯೆಕೃತಿಯಲ್ಲಿ 407 ಭೂತಗಳ ಹೆಸರುಗಳು ದಾಖಲಾಗಿವೆ. ಈ ಲೆಕ್ಕಾಚಾರ ತೀರ ಈಚೆಗಿನದು.
 ನಾನು ನನ್ನ ಜನಪದ ಸುತ್ತಮುತ್ತ ಕೃತಿಯಲ್ಲಿ ದಾಖಲಿಸಿರುವಂತೆ ಮತ್ತು ಕಂಡುಕೊಂಡಂತೆ ಕಂಡಿಗೆತ್ತಾಯ’(ಬಜ್ಪೆ-ಕೊಳಂಬೆ),  ನಡ್ಡೊಡಿತ್ತಾಯ’(ಕಾರಿಂಜೆ), ‘ಮುಕುಡಿತ್ತಾಯಿಈ ಮೂರು ಭೂತಗಳ  ಹೆಸರುಗಳು ಈಗಾಗಲೇ ಮಾಡಿರುವ ಪಟ್ಟಿಯಲ್ಲಿ ಇಲ್ಲ. ಹಾಗಾಗಿ ಅವು ಸೇರಿದಾಗ: 407+3=410 ಭೂತಗಳ ಲೆಕ್ಕ ಸಿಗುತ್ತದೆ.
ತುಳುವರು ಸಾವಿರದೊಂದು(ಸಾರತ್ತೊಂಜಿ) ಭೂತಗಳನ್ನು ನಂಬಿಕೊಂಡು ಬಂದ ಪರಂಪರೆಯವರು. ಇಲ್ಲೀಗ 133 ಭೂತಗಳ ಈ ಸಂಖ್ಯೆ ಹೆಚ್ಚಾಗುತ್ತಿರುವುದೆಂದರೆ ಭೂತಗಳ ಸಂತಾನ ಅಭಿವೃದ್ಧಿಯಾಗಿದೆ ಎಂದರ್ಥವಲ್ಲ. ಒಂದಾನೊಂದು ಕಾಲದಲ್ಲಿ ಸಾವಿರದೊಂದು ದೈವಗಳನ್ನು ನಂಬಿಕೊಂಡು ಬರುತಿದ್ದರೂ ಕಾಲಕ್ರಮೇಣ ಈ ನಂಬಿಕೆ ಸಡಿಲಾಗಿ ಅವುಗಳ ಸಂಖ್ಯೆ ಜನಮಾನಸದ ನೆನಪಿನಲ್ಲಿ ಕಡಿಮೆಯಾಗಿರಬಹುದು. ಅಧ್ಯಯನ ಮತ್ತು ಸಂಶೋಧನೆಗಳಿಂದಾಗಿ ಅವುಗಳ ಹೆಸರುಗಳು ಮತ್ತೆ ಬೆಳಕಿಗೆ ಬಂದುವು. 
ಹಾಗೆ ಇದೀಗ ಡಾ. ಲಕ್ಷ್ಮೀ  ವಿ. ಅವರ ಈ ಸ್ವರೂಪದ ಶೋಧನೆಯಿಂದಾಗಿ 132 ದೈವಗಳು ನಮ್ಮ ತಿಳುವಳಿಕೆಯ ಮಜಲಿಗೆ ಬಂದಿವೆ. ಆಗ 410+132=542 ಎಂದಾಗುವುದು. ಇನ್ನು ಮುಂದೆ ಅವುಗಳ ಲೆಕ್ಕಕೊಡುವಾಗ 542ಕ್ಕಿಂತ ಕುಂದು ಬರಬಾರದು.  ಶೋಧನೆಗೆ ಇನ್ನೂ ಎಡೆಯಿದೆ. ಸಾವಿರದೊಂದು ಗುರಿಯೆಡೆಗೆ ಸಾಗುವ ಹಾದಿಯಿದೆ.
ತುಳುನಾಡಿನ ನಾಗಬ್ರಹ್ಮ ಮತ್ತು ಕಂಬಳ: ಒಂದು ವಿಶ್ಲೇಷಣಾತ್ಮಕ ಅಧ್ಯಯನವಿಷಯದಲ್ಲಿ   ಸಂಶೋಧನೆ ನಡೆಸಿ ಪಿಎಚ್.ಡಿ ಪದವಿ ಪಡೆದ ತಮ್ಮ ಸಂಪ್ರಬಂಧವನ್ನು ಪರಿಷ್ಕರಿಸಿ ಪ್ರಕಟಿಸಿರುವ         ಡಾ. ಲಕ್ಷ್ಮೀ ವಿ. ಅವರನ್ನು ನಾನು ಹಾರ್ದಿಕವಾಗಿ ಅಭಿನಂದಿಸುತ್ತಿದ್ದೇನೆ.
                                                                ಡಾ. ವಾಮನ ನಂದಾವರ, ಮಂಗಳೂರು,









ಲಕ್ಷ್ಮೀ ಜಿ ಪ್ರಸಾದರ ಕಿರು ಪರಿಚಯ
 
ಪಿ ಎಚ್ ಡಿ ಪದವಿ ಪುರಸ್ಕೃತ ಹಾಗೂ ಕನ್ನಡ ,ಸಂಸ್ಕೃತ ಮತ್ತು ಹಿಂದಿ ಭಾಷೆಗಳಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಕಾಸರಗೋಡಿನ ಕೋಳ್ಯೂರು ಮೂಲದ ಗಡಿನಾಡ ಕನ್ನಡತಿ ಲಕ್ಷ್ಮೀ ಜಿ ಪ್ರಸಾದ ಅವರು ಮೀಯಪದವುನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮತ್ತು ಕೊಡ್ಲಮೊಗರಿನ ವಾಣಿವಿಜಯ ಪ್ರೌಢ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ತಮ್ಮ ಶಿಕ್ಶಣವನ್ನು ಪಡೆದರು. ಡಾ.ಲಕ್ಷ್ಮೀ ಜಿ ಪ್ರಸಾದ ಅವರು ಈಗ ತಮ್ಮ ಎರಡನೆಯ ಪಿಎಚ್.ಡಿ ಪದವಿಗಾಗಿ ಸಂಶೋಧನಾ ಮಹಾ ಪ್ರಬಂಧವನ್ನು ದ್ರಾವಿಡ ವಿಶ್ವ ವಿದ್ಯಾಲಯಕ್ಕೆ ಸಲ್ಲಿಸಿದ್ದಾರೆ.
ನಾಡಿನ ಜಾನಪದ ಇತಿಹಾಸ ಸಂಸ್ಕೃತಿ ಕುರಿತು ಸಂಶೋಧನೆ ನಡೆಸಿದ ಡಾ.ಲಕ್ಷ್ಮೀ ಜಿ ಪ್ರಸಾದ ಅವರು ತುಳುನಾಡಿನ ಅಪೂರ್ವ ಭೂತಗಳು ,ಕನ್ನಡ ತುಳು ಜಾನಪದ ಕಾವ್ಯಗಳಲ್ಲಿ ಸಮಾನ ಆಶಯಗಳು ,ದೈವಿಕ ಕಂಬಳ ಕೋಣ ,ತುಂಡು ಭೂತಗಳು -ಒಂದು ಅಧ್ಯಯನ ,ತುಳು ಪಾದ್ದನಗಳಲ್ಲಿ ಸ್ತ್ರೀ ,ಅರಿವಿನಂಗಳದ ಸುತ್ತ (ಶೈಕ್ಷಣಿಕ ಲೇಖನಗಳು ),ಕಂಬಳ ಕೋರಿ ನೇಮ ,ಬೆಳಕಿನೆಡೆಗೆ ,ಪಾಡ್ದನ ಸಂಪುಟ ,ತುಳು ಜನಪದ ಕವಿತೆಗಳು,ತುಳುವ ಸಂಸ್ಕಾರಗಳು ಮತ್ತು ವೃತ್ತಿಗಳು ,ಭೂತಗಳ ಅದ್ಭುತ ಜಗತ್ತು ಮೊದಲಾದ 20 ಕೃತಿಗಳನ್ನು ರಚಿಸಿದ್ದಾರೆ.
------
ಪುಸ್ತಕದ ವಿವರ:
 
ಪುಸ್ತಕದ ಹೆಸರು : ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ -ಒಂದು ವಿಶ್ಲೇಷಣಾತ್ಮಕ ಅಧ್ಯಯನ (ಪಿಎಚ್.ಡಿ ಮಹಾ ಪ್ರಬಂಧ)
ಲೇಖಕರು : ಡಾ.ಲಕ್ಷ್ಮೀ ಜಿ ಪ್ರಸಾದ , 
                ಕನ್ನಡ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜ್ ಬೆಳ್ಳಾರೆ , 
ಸುಳ್ಯ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಪ್ರಕಾಶಕರು : ಪ್ರಚೇತ ಬುಕ್ ಹೌಸ್ , 
ಹೋಟೆಲ್ ಶಾಂತಿಸಾಗರ ನೆಲ ಮಾಳಿಗೆ,
ಬಸವನ ಗುಡಿ ರಸ್ತೆ ,ಬೆಂಗಳೂರು - 560 019 ,
ಫೋನ್ :080 26602530 , ಮೊಬೈಲ್ :94485 05732
ಮೊದಲ ಮುದ್ರಣ : 2013
ಪುಸ್ತಕದ ಅಳತೆ : 1/8 ಡೆಮ್ಮಿ , ಪುಟಗಳು : 336 ಪುಟ , ಮೌಲ್ಯ : ರೂಪಾಯಿ 300/=
ಕೃತಿ ಲಭ್ಯವಿರುವ ಪುಸ್ತಕ ಮಳಿಗೆಗಳು :1  ಪ್ರಚೇತ ಬುಕ್ ಹೌಸ್ ಬೆಂಗಳೂರು, 
2 ಸಾಹಿತ್ಯ ಕೇಂದ್ರ ಮಂಗಳೂರು , 
3 ಯುನಿವರ್ಸಲ್ ಬುಕ್ ಸೆಲ್ಲೆರ್ಸ್ ಉಡುಪಿ , 
4 ಸೀತಾ ಬುಕ್ ಹೌಸ್ ಉಡುಪಿ ಹಾಗೂ
                                                 5 ನವಕರ್ನಾಟಕ 
                                               6 ,ಸಪ್ನಾ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ.










Tuesday, 11 February 2014

12 ತಿಂಗಳುಗಳು, 120 ಬರಹಗಳು , 120 ದೇಶಗಳ 22,500 ಓದುಗರು !

                      


ಒಂದು ವರ್ಷದ ,ಬ್ಲಾಗ್ ಅಂದರೆ ಏನು?ಹೇಗೆ  ಎತ್ತ? ಯಾವುದೂ ನನಗೆ ತಿಳಿದಿರಲಿಲ್ಲ ..!

ಆದರೆ ನನಗೂ ಬ್ಲಾಗ್ ಬರೆಯ ಬೇಕು ಎನಿಸುತ್ತಿತ್ತು ಆದರೆ ಹೇಗೆ ಏನು ಎಂದು ಮಾಹಿತಿ ತಿಳಿದಿರಲಿಲ್ಲ !

ಒಂದು ವರ್ಷದ ಮೊದಲು ಆಕಸ್ಮಿಕವಾಗಿ ಗೋವಿಂದ ಪೈ ಸಂಶೋಧನಾ ಕೇಂದ್ರ ತುಳುವ ಪತ್ರಿಕೆಯಲ್ಲಿ ಬಂದ ನನ್ನ ಲೇಖನವನ್ನು ನಾನು ಪ್ರೊ| ಉಪಾಧ್ಯ ಹಿರಿಯಡಕ ಅವರ ಬ್ಲಾಗ್ ನಲ್ಲಿ  ನೋಡಿದೆ .ನನ್ನ ಬ್ಲಾಗ್ ಕನಸು ಮತ್ತೆ  ಗರಿಗೆದರಿತು..

ಮುರಳೀಧರ ಉಪಾಧ್ಯರಲ್ಲಿ ಮಾತನಾಡಿ ನನಗೆ ಪರಿಚಯ ಇರಲಿಲ್ಲ .ಆದರೂ ಅವರ ವಿದ್ವತ್ ಹಾಗೂ ಸಜ್ಜನಿಕೆಯ ಬಗ್ಗೆ ನನ್ನ ಗೆಳತಿ ವಿನುತಾರ ಮೂಲಕ ನನಗೆ ತಿಳಿದಿತ್ತು .ಹಾಗಾಗಿ ಧೈರ್ಯ ಮಾಡಿ ಉಡುಪಿ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಹೆರಂಜೆ ಕೃಷ್ಣ ಭಟ್ ಮೂಲಕ ಫೋನ್ ನಂಬರ್ ಪಡೆದು ಅವರನ್ನು ಸಂಪರ್ಕಿಸಿದೆ .

ಅವರು ಸೂಕ್ತ ಸಲಹೆ ಸೂಚನೆ ನೀಡಿದರು ಮತ್ತು ಬ್ಲಾಗ್ ಗೆ ಸುಂದರ ಆವರಣವನ್ನು ಹಾಕಿ ಕೊಟ್ಟರು .ಮತ್ತೆ ಗೊಂದಲ ಆದಾಗೆಲ್ಲ ಅವರಲ್ಲಿ ಕೇಳಿಕೊಂಡು ನಾನು ಬ್ಲಾಗ್ ನಲ್ಲಿ ಬರೆಯಲಾರಂಭಿಸಿದೆ ! ಈ ನಡುವೆ ಹವ್ಯಕ ಬ್ಲಾಗ್ ಒಂದನ್ನೂ ತೆರೆದೆ ಈ ಸಂದರ್ಭದಲ್ಲಿ ನನಗೆ ಪರಿಚಿತರಾಗಿ  ಪೂರ್ಣ ಬೆಂಬಲ/ಪ್ರೋತ್ಸಾಹ ನೀಡಿದವರು ಪದ್ಯಾಣ ರಾಮಚಂದ್ರಣ್ಣ  ಅವರು .

 ನೋಡ ನೋಡುತ್ತಾ ಒಂದು ವರ್ಷ ಕಳೆಯಿತು ,ಒಟ್ಟು 120 ಬರಹಗಳು ಪ್ರಕಟವಾದವು.ದೇಶ ವಿದೇಶಗಳ ಸಹೃದಯರು ನನ್ನ ಬ್ಲಾಗ್ ಬರಹಗಳನ್ನು ಇಷ್ಟ ಪಟ್ಟು  ಓದುತ್ತಿದ್ದಾರೆ ಎನ್ನುವುದು ನನಗೆ ತುಂಬಾ ಸಂತಸದ ವಿಚಾರ.ನಮ್ಮ ದೇಶ ಮಾತ್ರವಲ್ಲದೆ ಅಮೇರಿಕಾ ,ರಷ್ಯ ,ಅರಬ್ ,ಚೀನ .ಕೊರಿಯಾ ಅಫಾಘನಿಸ್ತಾನ ,ಪಾಕಿಸ್ತಾನ ಸೇರಿದಂತೆ ಸುಮಾರು 120 ದೇಶಗಳ  22500 ಕ್ಕಿಂತ ಜನರು ನನ್ನ ಬರಹಗಳನ್ನು ಬ್ಲಾಗ್  ಮೂಲಕ ಓದಿದ್ದಾರೆ.!

.
ನಾನು ಬ್ಲಾಗ್ ಬರೆಯಲು ಆರಂಭಿಸಿದಾಗ ಒಂದು ವರ್ಷದಲ್ಲಿ ಒಂದು ಸಾವಿರ ಜನರಾದರೂ ಓದಿದರೆ ನಾನು ಬರೆದದ್ದು ಸಾರ್ಥಕವಾಗುತ್ತದೆ ಎಂದು ಕೊಂಡಿದ್ದೆ.ಆದರೆ ತಿಂಗಳಿಗೆ ಒಂದು ಸಾವಿರದಷ್ಟು ಮಂದಿ ಓದಿದ್ದಾರೆ ಎಂಬುದು ನನಗೆ ಇನ್ನೂ ಇದು ಕನಸೋ ವಾಸ್ತವವೋ ಎಂದು ಅನಿಸುತ್ತಿದೆ !

 ಈ ಒಂದು ಹೆಮ್ಮೆಗೆ ಇಂಬು ಕೊಡುವಂತೆ 10-2 -2014 ವಿಜಯ ಕರ್ನಾಟಕ ಪತ್ರಿಕೆ ಎಲ್ಲ ಆವೃತ್ತಿಗಳಲ್ಲಿ ನನ್ನ ಬ್ಲಾಗ್ ಬರಹವನ್ನು ಪ್ರಕಟಿಸಿ ಲಕ್ಷಾಂತರ ಕನ್ನಡಿಗರಿಗೆ ನನ್ನ ಬ್ಲಾಗ್ ಅನ್ನು ಪರಿಚಯಿಸಿದೆ !

ನನ್ನ ಈ ಯಶಸ್ಸಿಗೆ ಪೂರ್ಣಬೆಂಬಲನೀಡಿದ ಪ್ರೊ|ಮುರಳೀಧರ ಉಪಾಧ್ಯ ,ಹಿರಿಯಡಕ ,ಪದ್ಯಾಣ ರಾಮಚಂದ್ರಣ್ಣ  ,ಬ್ಲಾಗ್ ತೆರೆದು ಬರೆಯಲು ಸಹಾಯ ಮಾಡಿದ ನನ್ನ ಮಗ ಅರವಿಂದ ,ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ ವಿಜಯ ಕರ್ನಾಟಕ ಪತ್ರಿಕೆಗೆ ,ಹಾಗೂ ಓದಿ ಪ್ರೋತ್ಸಾಹಿಸಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ ,ಧನ್ಯವಾದಗಳು


Friday, 7 February 2014

ಸಂಶೋಧಕರು ಪ್ರಶ್ನಾತೀತರಲ್ಲ !ಆದರೂ ..



ಹೌದು !ಯಾವುದೇ ಸಂಶೋಧನಾ  ಬರಹಗಳು ಸಮಗ್ರ ಅಲ್ಲ ಹಾಗಂತ ಅಪ್ರಬುದ್ಧವೂ ಅಲ್ಲ !,ಸಂಶೋಧಕರು  ಸಿಕ್ಕ ಮಾಹಿತಿಯ ಪರಿಧಿಯೊಳಗೆ ಬರೆದ ಲೇಖನಗಳು.ತುಳು ನಾಡ ದೈವಗಳ ಬಗೆಗೆ ಮಾಹಿತಿದಾರರು ನೀಡಿದ ಮಾಹಿತಿಯನ್ನು ಬದಲಾಯಿಸದೆ ಬರೆದು ಆ ದೈವದ ಬಗ್ಗೆ ಪ್ರಚಲಿತ ಇರುವ ಐತಿಹ್ಯ ,ಪಾಡ್ದನಗಳು ಸಿಕ್ಕ್ಕರೆ ಅದನ್ನು ಒಟ್ಟು ಮಾಡಿ ಜಾನಪದ ಸಿದ್ಧಾಂತ ಹಾಗೂ ಹಿರಿಯ ವಿದ್ವಾಂಸರು ಹಾಕಿ ಕೊಟ್ಟ ದಾರಿಯಲ್ಲ್ಲಿ ಅವರದೇ ಆದ ನಿಲುವಿಗೆ ಬರುತ್ತಾರೆ ಅದನ್ನು ಲೇಖನದ ಕೊನೆಯಲ್ಲಿ ಹಾಕುತ್ತಾರೆ 

ಇನ್ನು ಜನಪದರು ನೀಡಿದ ಐತಿಹ್ಯ ಪಾದ್ದನಗಳಲ್ಲಿ ತಪ್ಪು ಅನ್ನುವುದಿರುವುದಿಲ್ಲ ,ಆದರೆ ಭಿನ್ನತೆಗಳು ಇರುತ್ತವೆ.ಒಂದೇ ದೈವದ ಮೂಲಕ್ಕೆ ಸಂಬಂಧಿಸಿದಂತೆ ಹಲವು ಪ್ರಕಾರದ ಐತಿಹ್ಯಗಳು ಪಾಡ್ದನಗಳು ಇರುತ್ತವೆ .ಜನಪದ ಕಲಾವಿದರು ಕಂಠಸ್ಥ ಪರಂಪರೆಯಲ್ಲಿ ಕೇಳಿ ಕೊಂಡು ನೋಡಿ ಕೊಂಡು ಬಂದ ಮಾಹಿತಿಯನ್ನು  ನೀಡುತ್ತಾರೆ.

ಬೇರೆ ಬೇರೆ ಪ್ರದೇಶಗಳಲ್ಲಿ ಅಥವಾ ಒಂದೇ ಪರಿಸರದಲ್ಲಿ ಭಿನ್ನ ಭಿನ್ನ ಕಥಾನಕಗಳು ಪ್ರಚಲಿತ ಇರಬಹುದು .ಆಗ ಒಂದು ಪರಿಸರದಲ್ಲಿ ಇರುವ ಕಥಾನಕವನ್ನು ತಿಳಿದ ಕೆಲವು ಜನರು ಇತರ ಪ್ರದೇಶಗಳಲ್ಲಿ ಪ್ರಚಲಿತ ಇರುವ ,ಅಥವಾ ಇತರರು ನೀಡಿರುವ ಮಾಹಿತಿ ತಪ್ಪು ಎಂದು ಭಾವಿಸುವುದು ಉಂಟು !

ತಮ್ಮ ಗಮನಕ್ಕೆ ಬಂದಿಲ್ಲ ಎಂದಾದರೆ ಅದು ಇಲ್ಲವೇ ಇಲ್ಲ ಎಂದು ವಾದಿಸುವುದೂ ಉಂಟು ,ಸಂಶೋಧಕರು  ಈ ಬಗ್ಗೆ ಅನೇಕ ಬಾರಿ ಹೇಳಿದ್ದುಂಟು ನಮಗೆ ಗೊತ್ತಿಲ್ಲವಾದರೆ ಅದು ಇಲ್ಲವೆಂದು ಅರ್ಥವಲ್ಲ ನಮಗೆ ಗೊತ್ತಿಲ್ಲ ಎಂದು ಮಾತ್ರ ಭಾವಿಸಬೇಕು ಎಂದು

ಜನಪದ ಇತರ ಅಧ್ಯಯನ ಶಾಸ್ತ್ರ ಗಳಿಗಿಂತ ಭಿನ್ನವಾದುದು ಇಲ್ಲಿ ಮುಖಿಕ ಪರಂಪರೆಯಲ್ಲಿ ಹರಿದು ಬಂದ ಎಲ್ಲ ಮಾಹಿತಿಗಳೂ ಸರಿ ,ಆದರೆ ಹಾಗೆಂದು ಎಲ್ಲ ಮಾಹಿತಿಗಳು ಒಂದೇ ಅಲ್ಲ ಮಾಹಿತಿಗಳಲ್ಲಿ ಭಿನ್ನತೆ ಇರುತ್ತದೆ.
ಭಿನ್ನತೆ ಇರುವುದನ್ನು ಕೆಲವರು ತಪ್ಪು ಎಂದು ಹೇಳುತ್ತಾರೆ ,ತಪ್ಪು ಎಂದು ಹೇಳುವ ಮೊದಲು ಯಾಕೆ ಎಲ್ಲಿ ಹೇಗೆ ಎಂದು ಸ್ಪಷ್ಟಪಡಿಸುವುದು ತುಂಬಾ ಮುಖ್ಯ ,ಈ ಬಗ್ಗೆ ಒಂದು ಸಮರ್ಪಕ ಲೇಖನ ಬರೆದು ಎಲ್ಲಿ ತಪ್ಪು ಎಂದು ತೋರಿಸಿದರೆ  ಮುಂದಕ್ಕೆ ಲೇಖನ ಬರೆಯುವಾಗ ಅದನ್ನೂ ಸೇರಿಸಿಕೊಳ್ಳುತ್ತಾರೆ  ಅವರ ಹೆಸರನ್ನು ಉಲ್ಲೇಖಿಸಿ ,ಇದರ ಬದಲು ಕೇವಲ ತಪ್ಪು ಎಂದು ಆಧಾರವಿಲ್ಲದೆ ಹೇಳಿದರೆ ಒಪ್ಪಿಕೊಳ್ಳಲಾಗುವುದಿಲ್ಲ.



ಒಬ್ಬರು ಹೇಳಿದ ವಿಚಾರವನ್ನು ಹೀಗೆಯೇ ಎಂದು ನಿಷ್ಕರ್ಷೆಗೆ ಬರಬೇಕಾದರೆ ಸಾಕಷ್ಟು ಅಧ್ಯಯನದ ಅಗತ್ಯ ಇದೆ.ಆ ವಿಚಾರದ ಬಗ್ಗೆ ಆ ತನಕ ನಡೆದ ಅಧ್ಯಯನಗಳು ,ಆಯಾಯ ಕ್ಷೇತ್ರದ ಪರಿಣತ ವಿದ್ವಾಂಸರ ಅಭಿಪ್ರಾಯಗಳನ್ನು ಮೊದಲು ಅಧ್ಯಯನ ಮಾಡಿ ಅದನ್ನೆಲ್ಲ ಸೂಕ್ತವಾಗಿ ಉಲ್ಲೇಖಿಸಿ ನಂತರ ತಮ್ಮ ಅಭಿಪ್ರಾಯವನ್ನು ತಿಳಿಸ ಬೇಕು ಮುಂದೆ ಈ ಹಿಂದಿನವರ ಅಭಿಪ್ರಾಯಕ್ಕೂ ತಮ್ಮ ಅಭಿಪ್ರಾಯಕ್ಕೂ ಇರುವ ವ್ಯತ್ಯಾಸ ,ಅಭಿಪ್ರಾಯ ಬೇಧವನ್ನು ತಿಳಿಸಿ ತಾವು ಹೇಳಿದ್ದು ಯಾಕೆ ಸರಿ ಎಂದು ಸಮರ್ಥಿಸ ಬೇಕೇ ಹೊರತು ಯಾವುದೇ ಆಧಾರವಿಲ್ಲದೆ ಬೇರೆಯವರು ಹೇಳಿದ್ದು ಸರಿಯಲ್ಲ ಎಂದು ಹೇಳುವುದು ಸರಿಯಾದ ವಿಧಾನವಲ್ಲ
  ಸಂಶೋಧಕರು ಸಾಮಾನ್ಯವಾಗಿ ಕೇವಲ ಕ್ಷೇತ್ರ ಕಾರ್ಯ ಮಾತ್ರವಲ್ಲ ಜೊತೆಗೆ ಜಾನಪದ ಸಿದ್ಧಾಂತಗಳ ಶಾಸ್ತ್ರಿಯ ಅಧ್ಯಯನವನ್ನೂ ಮಾಡಿರುತ್ತಾರೆ ಅನೇಕ ವರ್ಷಗಳ   ಅನುಭವವೂ ಇರುತ್ತದೆ  ಹಾಗಾಗಿ ಅವರ ಅಭಿಪ್ರಾಯಗಳನ್ನು ಆಧಾರಗಳಿಲ್ಲದೆ ತಳ್ಳಿ ಹಾಕಲು ಆಗುವುದಿಲ್ಲ
  ಸಂಶೋಧಕರು ಕೂಡ ಕೆಲವೊಮ್ಮೆ ಇತರರ ಅಭಿಪ್ರಾಯಗಳನ್ನು ಖಂಡಿಸಿರುವುದು ಉಂಟು.ಆದರೆ ಇತರರು ಏನು ಹೇಳಿದ್ದಾರೆ ಎಂದು ತಿಳಿಸಿ ನಂತರ ಅವರ ಸ್ವಂತ  ಅಭಿಪ್ರಾಯವನ್ನು ಹೇಳಿ ಅದಕ್ಕೆ ಬೇಕಾದ ಸಾಕ್ಷಿ ಆಧಾರಗಳನ್ನು ನೀಡಿ ತಮ್ಮ  ಅಭಿಪ್ರಾಯ ಸರಿ ಎಂದು ಹೇಳುತ್ತರೆ.ಇದು ಹಿರಿಯರು ಹಾಕಿ ಕೊಟ್ಟ ಮಾರ್ಗ ಕೂಡಾ !

Tuesday, 4 February 2014

ತುಳುನಾಡಿನ 560 + ..ದೈವಗಳ ಹೆಸರುಗಳು :© ಡಾ.ಲಕ್ಷ್ಮೀ ಜಿ ಪ್ರಸಾದ( copy rights reseved )



                      


ತುಳುನಾಡ ಭೂತಗಳ  ಸಂಖ್ಯೆ ಒಟ್ಟು ಎಷ್ಟು ?  ನನಗೆ ಸಿಕ್ಕಿದ್ದು ಕೇವಲ 560  +.. ಆದರೆ ನಿಜವಾಗಿಯೂ ಇದರ ಸಂಖ್ಯೆ ದೊಡ್ಡದಿದೆ !
ಈ ಬಗ್ಗೆ ಡಾ. ವಾಮನ ನಂದಾವರ ಅವರು ನನ್ನ ತುಳುನಾಡಿನ ನಾಗಬ್ರಹ್ಮ ಮತ್ತು ಕಂಬಳ ಕೃತಿಗೆ ಬರೆದ ಮುನ್ನುಡಿಯಲ್ಲಿ ನೀಡಿದ ಸಮರ್ಪಕ ಮಾಹಿತಿ ಹೀಗಿದೆ .
ಡಾ. ಲಕ್ಷ್ಮೀ  ವಿ. ಅವರ ಬರವಣಿಗೆಯಲ್ಲಿ ವ್ಯಾಪಕವಾದ ಕ್ಷೇತ್ರಕಾರ್ಯವನ್ನು ಕಾಣಲು ಸಾಧ್ಯವಾಗುತ್ತದೆ. ದಾರಿಯಲ್ಲಿ ಹೋಗಿಬರುತ್ತಿರಬೇಕಾದರೆ ಗಮನಕ್ಕೆ ಬರುವ ಒಂದು ಕಲ್ಲು ಅವರಿಗೆ ಜನಪದ ಅಂಶವಾಗಿ ಅಧ್ಯಯನಾಸಕ್ತಿಗೆ ಕಾರಣವಾಗುತ್ತದೆ.

 ಹಾಗಾಗಿಯೇ ತುಳುವರ ಆರಾಧನೆಯ ಸಾರತ್ತೊಂಜಿ ದೈವಗಳಿಗೆ(ಸಾವಿರದೊಂದು ದೈವಗಳಿಗೆ) ಹೊಸ ಭಾಷ್ಯ ಬರೆಯಲು ಅರ್ಹತೆಗಳಿಸಿಕೊಂಡಿದ್ದಾರೆ. ಎ. ಮೇನ್ನರ್(1897) ನೀಡಿರುವ ಭೂತಗಳ ಸಂಖ್ಯೆ: 133. ಡಾ. ಬಿ. ಎ. ವಿವೇಕ ರೈ(1885) ನೀಡಿರುವ ಸಂಖ್ಯೆ: 274, ಡಾ.ಕೆ. ಚಿನ್ನಪ್ಪ ಗೌಡರು(1990) ನೀಡಿರುವ ಪರಿಷ್ಕೃತ ಪಟ್ಟಿಯಂತೆ: 360 ರಘುನಾಥ ಎಂ. ವರ್ಕಾಡಿ(2011) ಅವರ ಕಡಂಬಾರ ಮಲ್ರಾಯೆಕೃತಿಯಲ್ಲಿ ಪುನಾರಚಿಸಿದ ಹೊಸ ಪಟ್ಟಿಯಲ್ಲಿ 407 ದೈವಗಳನ್ನು ಹೆಸರಿಸಿದ್ದಾರೆ. 

ಇವೆಲ್ಲವನ್ನೂ ಮೀರಿ ನಿಲ್ಲುವ ಯಾದಿಯೊಂದು ಡಾ. ಲಕ್ಷ್ಮೀ  ವಿ. ಅವರಿಂದ ಸಾಧ್ಯವಾಗಿದೆ. ಇದರ ಸಾಧ್ಯತೆಗೆ ಎರಡು ಉದಾಹರಣೆಗಳನ್ನು  ಅವರ ಮಾಹಿತಿ ಕೋಶದಿಂದಲೇ ಎತ್ತಿಕೊಳ್ಳಬಹುದು. ಈ ಶೋಧಕಿ ಕಂಡುಕೊಂಡ ಉರವ’, ‘ಎರುಬಂಟೆ’, ‘ಅಕ್ಕ ಬೋಳಾಂಗ’, ‘ಅಜ್ಜ ಬಳಯಮೊದಲಾದ 50ರಷ್ಟು ಅಪೂರ್ವ ಭೂತಗಳು ಅವರ ಸಾಧನೆಯ ಫಲವಾಗಿವೆ. ಹಾಗೆಯೇ ಕುಕ್ಕೆತ್ತಿ-ಬಳ್ಳು’, ‘ಪರವ ಭೂತ’, ‘ಕನ್ನಡ ಬೀರ’, ‘ಕುಂಡ-ಮಲ್ಲು’, ‘ಕುಲೆಮಾಣಿಗ’, ‘ಅಚ್ಚು ಬಂಗೇತಿಮೊದಲಾದ 82ರಷ್ಟು ತುಂಡು  ಭೂತಗಳು ಈ ಸಾಧಕಿಯ ಸೇರಿಗೆಯಲ್ಲಿವೆ. ಇದು ಹೇಗೆ ಸಾಧ್ಯವಾಯಿತು ಎಂದು ಅಚ್ಚರಿ ಪಡಬೇಕಾಗಿಲ್ಲ. ಬಾಸೆಲ್ ಮಿಶನ್ ಪರಂಪರೆಯ ಬರ್ನೆಲ್, ಮೇನ್ನರ್‍ಮೊದಲಾದವರು ತೋರಿಸಿಕೊಟ್ಟ ಹಾದಿಯಿದೆ.

1872, ಮಾರ್ಚ್ ತಿಂಗಳ23ನೆಯ ತಾರಿಕಿನಂದು ತೊಡಗಿ ನಾಲ್ಕು ದಿವಸ ಮಂಗಳೂರಿನ ದೂಮಪ್ಪ ಎಂಬವರ ಮನೆಯಲ್ಲಿನಡೆದ ಇಲ್ಲೆಚ್ಚಿದ ನೇಮ(ಮನೆಯಲ್ಲಿ ನಡೆಯುವ ವಿಶಿಷ್ಟ ದೈವಾರಾಧನೆ)ವನ್ನು ನೋಡಿ ಅಧ್ಯಯನ ಮಾಡಿರುವ ಪರಂಪರೆಯದು. ಹಾಗೆ ಎ.ಸಿ ಬರ್ನೆಲ್ ನಡೆಸಿದ ಅಧ್ಯಯನದ ಫಲವಾಗಿ ಖಿhe eviಟ ತಿoಡಿshiಠಿ oಜಿ  he ಖಿuuvಚಿs(ಎ.ಸಿ ಬರ್ನೆಲ್: 1894-1897) ಈ ಸಂಶೋಧನ ಪ್ರಬಂಧ ಮಾಲಿಕೆಯಲ್ಲಿ ಪ್ರಮುಖ ಭೂತಗಳ ಒಂದು ಪಟ್ಟಿಯಿದೆ. ಈ ಪಟ್ಟಿಯನ್ನು ಸಿದ್ಧಮಾಡಿ ಗ್ರಂಥದಲ್ಲಿ ಸೇರಿಸಿದವರು  ಎ. ಮೇನ್ನರ್. ಈ ಪಟ್ಟಿಯಲ್ಲಿ 133 ಭೂತಗಳ ಹೆಸರುಗಳಿ

 ಡಾ. ಬಿ. ಎ. ವಿವೇಕ ರೈ(1985) ಅವರ ತುಳು ಜನಪದ ಸಾಹಿತ್ಯಕೃತಿಯಲ್ಲಿ274(ಪು.35-38)  ಭೂತಗಳ ಹೆಸರುಗಳಿವೆ. ಡಾ. ಕೆ. ಚಿನ್ನಪ್ಪ ಗೌಡ ಕೆ.(1990)ಅವರ ಭೂತಾರಾಧನೆ ಜಾನಪದೀಯ ಅಧ್ಯಯನ ಗ್ರಂಥದಲ್ಲಿ 360 ಭೂತಗಳ ಪರಿಷ್ಕೃತ ಪಟ್ಟಿಯಿದೆ(ಪು.34-39). ‘ಸಾವಿರದೊಂದು ಭೂತಗಳ ಬೆನ್ನು ಹಿಡಿದಾಗಎನ್ನುವ ಲೇಖನದಲ್ಲಿ ರಘುನಾಥ ಎಂ. ವರ್ಕಾಡಿ(2011, ಪು.65-79) ಅವರ ಕಡಂಬಾರ ಮಲ್ರಾಯೆಕೃತಿಯಲ್ಲಿ 407 ಭೂತಗಳ ಹೆಸರುಗಳು ದಾಖಲಾಗಿವೆ. ಈ ಲೆಕ್ಕಾಚಾರ ತೀರ ಈಚೆಗಿನದು.


 ನಾನು ನನ್ನ ಜನಪದ ಸುತ್ತಮುತ್ತ ಕೃತಿಯಲ್ಲಿ ದಾಖಲಿಸಿರುವಂತೆ ಮತ್ತು ಕಂಡುಕೊಂಡಂತೆ ಕಂಡಿಗೆತ್ತಾಯ’(ಬಜ್ಪೆ-ಕೊಳಂಬೆ),  ನಡ್ಡೊಡಿತ್ತಾಯ’(ಕಾರಿಂಜೆ), ‘ಮುಕುಡಿತ್ತಾಯಿಈ ಮೂರು ಭೂತಗಳ  ಹೆಸರುಗಳು ಈಗಾಗಲೇ ಮಾಡಿರುವ ಪಟ್ಟಿಯಲ್ಲಿ ಇಲ್ಲ. ಹಾಗಾಗಿ ಅವು ಸೇರಿದಾಗ: 407+3=410 ಭೂತಗಳ ಲೆಕ್ಕ ಸಿಗುತ್ತದೆ.

ತುಳುವರು ಸಾವಿರದೊಂದು(ಸಾರತ್ತೊಂಜಿ) ಭೂತಗಳನ್ನು ನಂಬಿಕೊಂಡು ಬಂದ ಪರಂಪರೆಯವರು. ಇಲ್ಲೀಗ 133 ಭೂತಗಳ ಈ ಸಂಖ್ಯೆ ಹೆಚ್ಚಾಗುತ್ತಿರುವುದೆಂದರೆ ಭೂತಗಳ ಸಂತಾನ ಅಭಿವೃದ್ಧಿಯಾಗಿದೆ ಎಂದರ್ಥವಲ್ಲ. ಒಂದಾನೊಂದು ಕಾಲದಲ್ಲಿ ಸಾವಿರದೊಂದು ದೈವಗಳನ್ನು ನಂಬಿಕೊಂಡು ಬರುತಿದ್ದರೂ ಕಾಲಕ್ರಮೇಣ ಈ ನಂಬಿಕೆ ಸಡಿಲಾಗಿ ಅವುಗಳ ಸಂಖ್ಯೆ ಜನಮಾನಸದ ನೆನಪಿನಲ್ಲಿ ಕಡಿಮೆಯಾಗಿರಬಹುದು. ಅಧ್ಯಯನ ಮತ್ತು ಸಂಶೋಧನೆಗಳಿಂದಾಗಿ ಅವುಗಳ ಹೆಸರುಗಳು ಮತ್ತೆ ಬೆಳಕಿಗೆ ಬಂದುವು. 

ಹಾಗೆ ಇದೀಗ ಡಾ. ಲಕ್ಷ್ಮೀ  ವಿ. ಅವರ ಈ ಸ್ವರೂಪದ ಶೋಧನೆಯಿಂದಾಗಿ 132 ದೈವಗಳು ನಮ್ಮ ತಿಳುವಳಿಕೆಯ ಮಜಲಿಗೆ ಬಂದಿವೆ. ಆಗ 410+132=542 ಎಂದಾಗುವುದು. ಇನ್ನು ಮುಂದೆ ಅವುಗಳ ಲೆಕ್ಕಕೊಡುವಾಗ 542ಕ್ಕಿಂತ ಕುಂದು ಬರಬಾರದು.  ಶೋಧನೆಗೆ ಇನ್ನೂ ಎಡೆಯಿದೆ. ಸಾವಿರದೊಂದು ಗುರಿಯೆಡೆಗೆ ಸಾಗುವ ಹಾದಿಯಿದೆ.
 

             ನನ್ನ ಸಂಗ್ರಹಕ್ಕೆ ಸಿಕ್ಕಿದ ತುಳುನಾಡಿನ 502  + ..ದೈವಗಳ ಹೆಸರುಗಳು

                                       ( copy rights reserved to us)




         1 ಅಗ್ನಿ ಚಾಮುಂಡಿ ಗುಳಿಗ (ಮೂಕಾಂಬಿ ಗುಳಿಗ )ಚಿತ್ರ :ಡಾ.ಲಕ್ಷ್ಮೀ ಜಿ ಪ್ರಸಾದ




                             2  ಅಬ್ಬೆ ಜಲಾಯ ಮತ್ತು ಶಿರಾಡಿ ಚಿತ್ರ :ಡಾ.ಲಕ್ಷ್ಮೀ ಜಿ ಪ್ರಸಾದ
                              3     ಅಜ್ಜಿ ಭೂತ ಚಿತ್ರ :.ಲಕ್ಷ್ಮೀ ಜಿ ಪ್ರಸಾದ
                                 


        4 ಅಜ್ಜಿ ಭೂತ ಮತ್ತು ಕೂಜಿಲುಚಿತ್ರ :ಡಾ..ಲಕ್ಷ್ಮೀ ಜಿ ಪ್ರಸಾದ


                                      5    ಅಕ್ಕಚ್ಚು ಚಿತ್ರ ಕೃಪೆ -ಕೆ ಜೀವಿತ್ ಶೆಟ್ಟಿ
                                     6   ಅಣ್ಣಪ್ಪ ಪಂಜುರ್ಲಿ  ಚಿತ್ರ ಕೃಪೆ :ಮುನ್ನ ಕಡೆಕಾರ್
                                       7   ಅರಬ್ಬೀ ಭೂತ ಚಿತ್ರ ಕೃಪೆ :ನಮ್ಮ ಸತ್ಯೊಳು
                            8  ಅರಮನೆ ಜಟ್ಟಿಗ -    ಚಿತ್ರ ಕೃಪೆ -ಧರ್ಮ ದೈವ


                                  9  ಅಂಬಾರ ಮರ್ಲ ಗುಳಿಗ ಚಿತ್ರ ಕೃಪೆ :ನಮ್ಮ ಸತ್ಯೊಳು

10 ಅಜ್ಜ ಬೊಳಯನ ಬೇಟೆ ಚಿತ್ರ :ಡಾ.ಲಕ್ಷ್ಮೀ ಜಿ ಪ್ರಸಾದ

                                     11   ಉಳ್ಳಾಯ ಚಿತ್ರ ಕೃಪೆ :ನಮ್ಮ ಸತ್ಯೊಳು
                                             12  ಉಳ್ಳಾಳ್ತಿ
  

                                         14     ಎರು ಬಂಟ  ಚಿತ್ರ :ಡಾ..ಲಕ್ಷ್ಮೀ ಜಿ ಪ್ರಸಾದ      
                                               
                                               
           15      ಓಡ್ಯನ್ತಾಯ ಚಿತ್ರ ಕೃಪೆ -ಕೆ ಜೀವಿತ್ ಶೆಟ್ಟಿ
                                           
16   ಕಲ್ಲುರ್ಟಿ  
                                        
                    17         ಕನ್ನಡ ಬೀರ .ಚಿತ್ರ :ಡಾ..ಲಕ್ಷ್ಮೀ ಜಿ ಪ್ರಸಾದ

                      
                           18       ಕಿನ್ನಿ ಮಾಣಿ    ಚಿತ್ರ :ಡಾ..ಲಕ್ಷ್ಮೀ ಜಿ ಪ್ರಸಾದ                            
                                         
                       19           ಕುಲೆ ಭೂತ ?ಪ್ರೇತ ಕೋಲ
                                    
                       20          ಕಂಬುಲದ ಬಂಟ        
                                       

                   21        ಕುಂಜಿರಾಯ ಚಿತ್ರ ಕೃಪೆ -ಕೆ ಜೀವಿತ್ ಶೆಟ್ಟಿ
                               22    ಕೋಟೆಯ ಬಬ್ಬು       ಚಿತ್ರ ಕೃಪೆ -ಶ್ರೀ ಜೀವಿತ್ ಶೆಟ್ಟಿ
                                    23        ಕೊಡಮಣಿತಾಯ ಚಿತ್ರ ಕೃಪೆ -ಕೆ ಜೀವಿತ್ ಶೆಟ್ಟಿ
                                 
                            24     ಕುಕ್ಕೆತ್ತಿ ಬಳ್ಳು ಚಿತ್ರ :ಡಾ.ಲಕ್ಷ್ಮೀ ಜಿ ಪ್ರಸಾದ


                                     
                            25           ಕುಂಟು ಕಾನ ಕೊರವ ಚಿತ್ರ :ಡಾ.ಲಕ್ಷ್ಮೀ ಜಿ ಪ್ರಸಾದ

                           
                         26            ಕೊರಗ ತನಿಯ ಮತ್ತು ಬೆರ್ಮೆರ್
                                    27      ಗುಳಿಗಚಿತ್ರ ಕೃಪೆ :ಧರ್ಮ ದೈವ
                              
                                   
                28         ಜಟಾ ಧಾರಿ ಚಿತ್ರ :ಡಾ..ಲಕ್ಷ್ಮೀ ಜಿ ಪ್ರಸಾದ
                        29       ಜೋಗಿ ಪುರುಷ     ಚಿತ್ರ ಕೃಪೆ -ಶ್ರೀ ಜೀವಿತ್ ಶೆಟ್ಟಿ

                                 

         
                            30  ಜತೆ ಕುಲೆ ಚಿತ್ರ :ಡಾ..ಲಕ್ಷ್ಮೀ ಜಿ ಪ್ರಸಾದ
                           ೩೧    ಜೋಡು ಪಂಜುರ್ಲಿ ಚಿತ್ರ ಕೃಪೆ -ಕೆ ಜೀವಿತ್ ಶೆಟ್ಟಿ
                                 ೩೨        ಜುಮಾದಿ ಚಿತ್ರ ಕೃಪೆ -ಕೆ ಜೀವಿತ್ ಶೆಟ್ಟಿ

                                                
               

                           33     ದುಗ್ಗಲಾಯ ಚಿತ್ರ :ಡಾ..ಲಕ್ಷ್ಮೀ ಜಿ ಪ್ರಸಾದ


                                  35          ಜುಮಾದಿ ಬಂಟ ಚಿತ್ರ ಕೃಪೆ -ಕೆ ಜೀವಿತ್ ಶೆಟ್ಟಿ
                                                

                              36   ನಾಗ ಭೂತ ಚಿತ್ರ :ಡಾ..ಲಕ್ಷ್ಮೀ ಜಿ ಪ್ರಸಾದ

                                         
                                     37         ನಾಗ ಮತ್ತು ಬೆರ್ಮೆರ್
                                                           

                                          38  ನೈದಾಲ ಪಾಂಡಿ ಚಿತ್ರ :ಡಾ..ಲಕ್ಷ್ಮೀ ಜಿ ಪ್ರಸಾದ
                                      



                      39   ಕನ್ನಡ ಯಾನೆ ಪುರುಷ ಭೂತ ಚಿತ್ರ :ಡಾ..ಲಕ್ಷ್ಮೀ ಜಿ ಪ್ರಸಾದ
                                                     

                                        

                            40       ಪರವ ಭೂತ ಚಿತ್ರ :ಡಾ..ಲಕ್ಷ್ಮೀ ಜಿ ಪ್ರಸಾದ


                       41     ಮಡಿಕತ್ತಾಯ ಚಿತ್ರ ಕೃಪೆ :ಧರ್ಮ ದೈವ
                   42      ಮಡಿಕತ್ತಾಯಚಿತ್ರ ಕೃಪೆ :ಧರ್ಮ ದೈವ

                       43    ಮಾಯಂದಾಲ್      ಚಿತ್ರ ಕೃಪೆ -ಶ್ರೀ ಮಹೇಂದ್ರ ನಾಥ ಸಾಲೆತ್ತೂರು


                                                  

                                         44            ಮಾಲಿಂಗ ರಾಯ ಚಿತ್ರ :ಡಾ..ಲಕ್ಷ್ಮೀ ಜಿ ಪ್ರಸಾದ
                                  45        ಮುಂಡ್ಯತ್ತಾಯಚಿತ್ರ ಕೃಪೆ :ಧರ್ಮ ದೈವ
                                     46          ಮೈಸಂದಾಯ ಚಿತ್ರ ಕೃಪೆ :ವೆಂಕಟೇಶ್ 
                                  47    ಮರ್ಲ್ ಜುಮಾದಿ ಚಿತ್ರ ಕೃಪೆ :ನಮ್ಮ ಸತ್ಯೊಳು
                               48   ಮರ್ಲ್ ಜುಮಾದಿ ಚಿತ್ರ ಕೃಪೆ -ಕೆ ಜೀವಿತ್ ಶೆಟ್ಟಿ
                            49        ಮರ್ಲ್ ರಕ್ತೇಶ್ವರಿ ಚಿತ್ರ ಕೃಪೆ :ಧರ್ಮ ದೈವ
                              50       ಮಹಾ ಕಾಳಿ ಚಿತ್ರ ಕೃಪೆ :ಧರ್ಮ ದೈವ
                            51   ಮಹಾಕಾಳಿ ಚಿತ್ರ ಕೃಪೆ :ಧರ್ಮ ದೈವ
                                52          ಮಗ್ರಂದಾಯ ಚಿತ್ರ ಕೃಪೆ :ಧರ್ಮ ದೈವ

                          53          ಮೂ ಜುಲ್ನಾಯ ಚಿತ್ರ ಕೃಪೆ :ಧರ್ಮ ದೈವ
                               54               ಮೂಜುಲ್ನಾಯ ಚಿತ್ರ ಕೃಪೆ :ಧರ್ಮ ದೈವ

                                  55             ನಾಗ ರಕ್ತೇಶ್ವರಿ ಚಿತ್ರ ಕೃಪೆ :ಧರ್ಮ ದೈವ
                                       56              ಪಿಲಡ್ಕತ್ತಾಯಚಿತ್ರ ಕೃಪೆ :ಧರ್ಮ ದೈವ
                       57          ಪಿಲಿ ಭೂತ ಚಿತ್ರ ಕೃಪೆ :ಧರ್ಮ ದೈವ
                                58            ಪಿಲಿ ಚಾಮುಂಡಿ  ಚಿತ್ರ ಕೃಪೆ -ಕೆ ಜೀವಿತ್ ಶೆಟ್ಟಿ
                            59     ಪುಲಂದಾಯ ಚಿತ್ರ ಕೃಪೆ -ಕೆ ಜೀವಿತ್ ಶೆಟ್ಟಿ
                             60          ಚಿತ್ರ ಕೃಪೆ -ಕೆ ಜೀವಿತ್ ಶೆಟ್ಟಿ
                                   61       ಬಂಟ ಜಾವದೆ ಚಿತ್ರ ಕೃಪೆ :ತುಳುಒರಿಪುಗ 
 
62 ಬಂಟ  ಚಿತ್ರ ಕೃಪೆ -ಕೆ ಜೀವಿತ್ ಶೆಟ್ಟಿ
  
                            
                                     63   ಬೊಬ್ಬರ್ಯ ಚಿತ್ರ ಕೃಪೆ :ನಮ್ಮ ಸತ್ಯೊಳು

                   

                        
             
  64  ಬೈಸು ನಾಯಕ   ಚಿತ್ರ :ಡಾ.ಲಕ್ಷ್ಮೀ ಜಿ ಪ್ರಸಾದ                     

   
                          65 ಬಬ್ಬರ್ಯ ಮತ್ತು ಬ್ಯಾರ್ದಿ ಭೂತ
                                 
                                  66     ಬ್ರಾಹ್ಮಣತಿ ಭೂತ ಚಿತ್ರ ಕೃಪೆ :ನಮ್ಮ ಸತ್ಯೊಳು
                                        67      ಭೈರವ ಚಿತ್ರ ಕೃಪೆ :ಧರ್ಮ ದೈವ
                                              68    ರಕ್ತೇಶ್ವರಿ ಚಿತ್ರ ಕೃಪೆ :ಧರ್ಮ ದೈವ
                                     69        ಶಿವರಾಯ ಚಿತ್ರ ಕೃಪೆ -ಕೆ ಜೀವಿತ್ ಶೆಟ್ಟಿ
                                            

                                    70        ಸುತ್ತು ಕೋಟೆ ಚಾಮುಂಡಿ ಚಿತ್ರ :ಡಾ..ಲಕ್ಷ್ಮೀ ಜಿ ಪ್ರಸಾದ


                             71   ವೈದ್ಯನಾಥ  ಚಿತ್ರ ಕೃಪೆ :ಧರ್ಮ ದೈವ

                                    
                     72     ಹನುಮಂತ ಭೂತ /ಆಂಜನೇಯ ದೈವ  ಚಿತ್ರ :ಡಾ.ಲಕ್ಷ್ಮೀ ಜಿ ಪ್ರಸಾದ               
                                        

                               73          ಹಲೇರಪಂಜುರ್ಲಿ  
 


                                        74  ಹುಲಿ ಚೌಂಡಿ ಚಿತ್ರ ಕೃಪೆ -ಕೆ ಜೀವಿತ್ ಶೆಟ್ಟಿ

                                
                                              75 ನಾಲ್ಕೈತ್ತಾಯ .ಚಿತ್ರ ಕೃಪೆ :ಧರ್ಮ ದೈವ



                                                  77 ನಾರಳತ್ತಾಯ ಚಿತ್ರ :ಡಾ.ಲಕ್ಷ್ಮಿ ಜಿ ಪ್ರಸಾದ


                                                       78 ಮೂವ  ಚಿತ್ರ :ಡಾ.ಲಕ್ಷ್ಮೀ ಜಿ ಪ್ರಸಾದ


                                                      79 ಪುದ  ಚಿತ್ರ : ಲಕ್ಷ್ಮೀ ಜಿ ಪ್ರಸಾದ

                                       80 ಪಿಲಿ ಚಾಮುಂಡಿ ಚಿತ್ರ :ಡಾ.ಲಕ್ಷ್ಮೀ ಜಿ ಪ್ರಸಾದ
                                        

     
                             
81 ಧರಮ್ ಬಲ್ಲಾಳ್ತಿ ಮತ್ತು ಜುಮಾದಿ ಚಿತ್ರ ಕೃಪೆ :ಸುಕೇಶ್ ಭಿಲ್ಲವ

                                                             ನಾಲ್ಕೈತ್ತಾಯ ಚಿತ್ರ ಕೃಪೆ :ಧರ್ಮ ದೈವ




                                     ಹಳ್ಳತ್ತಾಯಿ ಚಿತ್ರ ಕೃಪೆ :ರಾಜಗೋಪಾಲ ಹೆಬ್ಬಾರ ನೆರಿಯ
                                               ಹೊಸಮ್ಮ ಚಿತ್ರ :ಡಾ.ಲಕ್ಷ್ಮೀ ಜಿ ಪ್ರಸಾದ




                                      ಮರ್ಲು ಮಾಣಿಚಿತ್ರ :ಡಾ.ಲಕ್ಷ್ಮಿ ಜಿ ಪ್ರಸಾದ


                                      ಮಿತ್ತೂರು ನಾಯರ್ ದೈವ :ಚಿತ್ರ :ಡಾ.ಲಕ್ಷ್ಮೀ ಜಿ ಪ್ರಸಾದ



                                                        ಕುಲೆ ಮಾನಿಗ ಚಿತ್ರ :ಡಾ.ಲಕ್ಷ್ಮೀ ಜಿ ಪ್ರಸಾದ




                                                  ಕೇತುರ್ಲಾಯ:ಚಿತ್ರ ಕೃಪೆ :ಧರ್ಮ ದೈವ


   (c )ಚಿತ್ರಗಳು :ನನ್ನವು ಮತ್ತು face bookಗೆಳೆಯರು

                               
ತುಳುನಾಡ ಭೂತಗಳ  ಸಂಖ್ಯೆ ಒಟ್ಟು ಎಷ್ಟು ?  ನನಗೆ ಸಿಕ್ಕಿದ್ದು ಕೇವಲ 483 +.. ! ಆದರೆ ನಿಜವಾಗಿಯೂ ಇದರ ಸಂಖ್ಯೆ ದೊಡ್ಡದಿದೆ !
ಈ ಬಗ್ಗೆ ಡಾ. ವಾಮನ ನಂದಾವರ ಅವರು ನನ್ನ ತುಳುನಾಡಿನ ನಾಗಬ್ರಹ್ಮ ಮತ್ತು ಕಂಬಳ ಕೃತಿಗೆ ಬರೆದ ಮುನ್ನುಡಿಯಲ್ಲಿ ನೀಡಿದ ಸಮರ್ಪಕ ಮಾಹಿತಿ ಹೀಗಿದೆ .
ಡಾ. ಲಕ್ಷ್ಮೀ  ವಿ. ಅವರ ಬರವಣಿಗೆಯಲ್ಲಿ ವ್ಯಾಪಕವಾದ ಕ್ಷೇತ್ರಕಾರ್ಯವನ್ನು ಕಾಣಲು ಸಾಧ್ಯವಾಗುತ್ತದೆ. ದಾರಿಯಲ್ಲಿ ಹೋಗಿಬರುತ್ತಿರಬೇಕಾದರೆ ಗಮನಕ್ಕೆ ಬರುವ ಒಂದು ಕಲ್ಲು ಅವರಿಗೆ ಜನಪದ ಅಂಶವಾಗಿ ಅಧ್ಯಯನಾಸಕ್ತಿಗೆ ಕಾರಣವಾಗುತ್ತದೆ.

 ಹಾಗಾಗಿಯೇ ತುಳುವರ ಆರಾಧನೆಯ ಸಾರತ್ತೊಂಜಿ ದೈವಗಳಿಗೆ(ಸಾವಿರದೊಂದು ದೈವಗಳಿಗೆ) ಹೊಸ ಭಾಷ್ಯ ಬರೆಯಲು ಅರ್ಹತೆಗಳಿಸಿಕೊಂಡಿದ್ದಾರೆ. ಎ. ಮೇನ್ನರ್(1897) ನೀಡಿರುವ ಭೂತಗಳ ಸಂಖ್ಯೆ: 133. ಡಾ. ಬಿ. ಎ. ವಿವೇಕ ರೈ(1885) ನೀಡಿರುವ ಸಂಖ್ಯೆ: 274, ಡಾ.ಕೆ. ಚಿನ್ನಪ್ಪ ಗೌಡರು(1990) ನೀಡಿರುವ ಪರಿಷ್ಕೃತ ಪಟ್ಟಿಯಂತೆ: 360 ರಘುನಾಥ ಎಂ. ವರ್ಕಾಡಿ(2011) ಅವರ ಕಡಂಬಾರ ಮಲ್ರಾಯೆಕೃತಿಯಲ್ಲಿ ಪುನಾರಚಿಸಿದ ಹೊಸ ಪಟ್ಟಿಯಲ್ಲಿ 407 ದೈವಗಳನ್ನು ಹೆಸರಿಸಿದ್ದಾರೆ. 

ಇವೆಲ್ಲವನ್ನೂ ಮೀರಿ ನಿಲ್ಲುವ ಯಾದಿಯೊಂದು ಡಾ. ಲಕ್ಷ್ಮೀ  ವಿ. ಅವರಿಂದ ಸಾಧ್ಯವಾಗಿದೆ. ಇದರ ಸಾಧ್ಯತೆಗೆ ಎರಡು ಉದಾಹರಣೆಗಳನ್ನು  ಅವರ ಮಾಹಿತಿ ಕೋಶದಿಂದಲೇ ಎತ್ತಿಕೊಳ್ಳಬಹುದು. ಈ ಶೋಧಕಿ ಕಂಡುಕೊಂಡ ಉರವ’, ‘ಎರುಬಂಟೆ’, ‘ಅಕ್ಕ ಬೋಳಾಂಗ’, ‘ಅಜ್ಜ ಬಳಯಮೊದಲಾದ 50ರಷ್ಟು ಅಪೂರ್ವ ಭೂತಗಳು ಅವರ ಸಾಧನೆಯ ಫಲವಾಗಿವೆ. ಹಾಗೆಯೇ ಕುಕ್ಕೆತ್ತಿ-ಬಳ್ಳು’, ‘ಪರವ ಭೂತ’, ‘ಕನ್ನಡ ಬೀರ’, ‘ಕುಂಡ-ಮಲ್ಲು’, ‘ಕುಲೆಮಾಣಿಗ’, ‘ಅಚ್ಚು ಬಂಗೇತಿಮೊದಲಾದ 82ರಷ್ಟು ತುಂಡು  ಭೂತಗಳು ಈ ಸಾಧಕಿಯ ಸೇರಿಗೆಯಲ್ಲಿವೆ. ಇದು ಹೇಗೆ ಸಾಧ್ಯವಾಯಿತು ಎಂದು ಅಚ್ಚರಿ ಪಡಬೇಕಾಗಿಲ್ಲ. ಬಾಸೆಲ್ ಮಿಶನ್ ಪರಂಪರೆಯ ಬರ್ನೆಲ್, ಮೇನ್ನರ್‍ಮೊದಲಾದವರು ತೋರಿಸಿಕೊಟ್ಟ ಹಾದಿಯಿದೆ.

1872, ಮಾರ್ಚ್ ತಿಂಗಳ23ನೆಯ ತಾರಿಕಿನಂದು ತೊಡಗಿ ನಾಲ್ಕು ದಿವಸ ಮಂಗಳೂರಿನ ದೂಮಪ್ಪ ಎಂಬವರ ಮನೆಯಲ್ಲಿನಡೆದ ಇಲ್ಲೆಚ್ಚಿದ ನೇಮ(ಮನೆಯಲ್ಲಿ ನಡೆಯುವ ವಿಶಿಷ್ಟ ದೈವಾರಾಧನೆ)ವನ್ನು ನೋಡಿ ಅಧ್ಯಯನ ಮಾಡಿರುವ ಪರಂಪರೆಯದು. ಹಾಗೆ ಎ.ಸಿ ಬರ್ನೆಲ್ ನಡೆಸಿದ ಅಧ್ಯಯನದ ಫಲವಾಗಿ ಖಿhe eviಟ ತಿoಡಿshiಠಿ oಜಿ  he ಖಿuuvಚಿs(ಎ.ಸಿ ಬರ್ನೆಲ್: 1894-1897) ಈ ಸಂಶೋಧನ ಪ್ರಬಂಧ ಮಾಲಿಕೆಯಲ್ಲಿ ಪ್ರಮುಖ ಭೂತಗಳ ಒಂದು ಪಟ್ಟಿಯಿದೆ. ಈ ಪಟ್ಟಿಯನ್ನು ಸಿದ್ಧಮಾಡಿ ಗ್ರಂಥದಲ್ಲಿ ಸೇರಿಸಿದವರು  ಎ. ಮೇನ್ನರ್. ಈ ಪಟ್ಟಿಯಲ್ಲಿ 133 ಭೂತಗಳ ಹೆಸರುಗಳಿ

 ಡಾ. ಬಿ. ಎ. ವಿವೇಕ ರೈ(1985) ಅವರ ತುಳು ಜನಪದ ಸಾಹಿತ್ಯಕೃತಿಯಲ್ಲಿ274(ಪು.35-38)  ಭೂತಗಳ ಹೆಸರುಗಳಿವೆ. ಡಾ. ಕೆ. ಚಿನ್ನಪ್ಪ ಗೌಡ ಕೆ.(1990)ಅವರ ಭೂತಾರಾಧನೆ ಜಾನಪದೀಯ ಅಧ್ಯಯನ ಗ್ರಂಥದಲ್ಲಿ 360 ಭೂತಗಳ ಪರಿಷ್ಕೃತ ಪಟ್ಟಿಯಿದೆ(ಪು.34-39). ‘ಸಾವಿರದೊಂದು ಭೂತಗಳ ಬೆನ್ನು ಹಿಡಿದಾಗಎನ್ನುವ ಲೇಖನದಲ್ಲಿ ರಘುನಾಥ ಎಂ. ವರ್ಕಾಡಿ(2011, ಪು.65-79) ಅವರ ಕಡಂಬಾರ ಮಲ್ರಾಯೆಕೃತಿಯಲ್ಲಿ 407 ಭೂತಗಳ ಹೆಸರುಗಳು ದಾಖಲಾಗಿವೆ. ಈ ಲೆಕ್ಕಾಚಾರ ತೀರ ಈಚೆಗಿನದು.


 ನಾನು ನನ್ನ ಜನಪದ ಸುತ್ತಮುತ್ತ ಕೃತಿಯಲ್ಲಿ ದಾಖಲಿಸಿರುವಂತೆ ಮತ್ತು ಕಂಡುಕೊಂಡಂತೆ ಕಂಡಿಗೆತ್ತಾಯ’(ಬಜ್ಪೆ-ಕೊಳಂಬೆ),  ನಡ್ಡೊಡಿತ್ತಾಯ’(ಕಾರಿಂಜೆ), ‘ಮುಕುಡಿತ್ತಾಯಿಈ ಮೂರು ಭೂತಗಳ  ಹೆಸರುಗಳು ಈಗಾಗಲೇ ಮಾಡಿರುವ ಪಟ್ಟಿಯಲ್ಲಿ ಇಲ್ಲ. ಹಾಗಾಗಿ ಅವು ಸೇರಿದಾಗ: 407+3=410 ಭೂತಗಳ ಲೆಕ್ಕ ಸಿಗುತ್ತದೆ.

ತುಳುವರು ಸಾವಿರದೊಂದು(ಸಾರತ್ತೊಂಜಿ) ಭೂತಗಳನ್ನು ನಂಬಿಕೊಂಡು ಬಂದ ಪರಂಪರೆಯವರು. ಇಲ್ಲೀಗ 133 ಭೂತಗಳ ಈ ಸಂಖ್ಯೆ ಹೆಚ್ಚಾಗುತ್ತಿರುವುದೆಂದರೆ ಭೂತಗಳ ಸಂತಾನ ಅಭಿವೃದ್ಧಿಯಾಗಿದೆ ಎಂದರ್ಥವಲ್ಲ. ಒಂದಾನೊಂದು ಕಾಲದಲ್ಲಿ ಸಾವಿರದೊಂದು ದೈವಗಳನ್ನು ನಂಬಿಕೊಂಡು ಬರುತಿದ್ದರೂ ಕಾಲಕ್ರಮೇಣ ಈ ನಂಬಿಕೆ ಸಡಿಲಾಗಿ ಅವುಗಳ ಸಂಖ್ಯೆ ಜನಮಾನಸದ ನೆನಪಿನಲ್ಲಿ ಕಡಿಮೆಯಾಗಿರಬಹುದು. ಅಧ್ಯಯನ ಮತ್ತು ಸಂಶೋಧನೆಗಳಿಂದಾಗಿ ಅವುಗಳ ಹೆಸರುಗಳು ಮತ್ತೆ ಬೆಳಕಿಗೆ ಬಂದುವು. 

ಹಾಗೆ ಇದೀಗ ಡಾ. ಲಕ್ಷ್ಮೀ  ವಿ. ಅವರ ಈ ಸ್ವರೂಪದ ಶೋಧನೆಯಿಂದಾಗಿ 132 ದೈವಗಳು ನಮ್ಮ ತಿಳುವಳಿಕೆಯ ಮಜಲಿಗೆ ಬಂದಿವೆ. ಆಗ 410+132=542 ಎಂದಾಗುವುದು. ಇನ್ನು ಮುಂದೆ ಅವುಗಳ ಲೆಕ್ಕಕೊಡುವಾಗ 542ಕ್ಕಿಂತ ಕುಂದು ಬರಬಾರದು.  ಶೋಧನೆಗೆ ಇನ್ನೂ ಎಡೆಯಿದೆ. ಸಾವಿರದೊಂದು ಗುರಿಯೆಡೆಗೆ ಸಾಗುವ ಹಾದಿಯಿದೆ.
 


(ನನ್ನ ಸಂಗ್ರಹಕ್ಕೆ ಸಿಕ್ಕಿದ ತುಳುನಾಡಿನ 460 + ..ದೈವಗಳ ಹೆಸರುಗಳು© ಡಾ.ಲಕ್ಷ್ಮೀ ಜಿ ಪ್ರಸಾದ) 

ಪರಿಷ್ಕೃತ ಪಟ್ಟಿ :  ತುಳುನಾಡಿನ 505  + ..ದೈವಗಳ ಹೆಸರುಗಳು  :© ಡಾ.ಲಕ್ಷ್ಮೀ ಜಿ ಪ್ರಸಾದ
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
 1 ಅಕ್ಕಚ್ಚು
 ಅಚ್ಚು ಬಂಗೇತಿ
2 ಅಕ್ಕಮ್ಮ ದೈಯಾರು
3 ಅಕ್ಕೆರಸು
4 ಅಕ್ಕೆರಸು ಪೂಂಜೆದಿ
5 ಅಕ್ಕೆರ್ಲು
6  ಅಕ್ಕ ಬೋಳಾರಿಗೆ
6 ಅಚ್ಚು ಬಂಗೇತಿ
7 ಅಜ್ಜ ಬೊಲಯ
8 ಅಜ್ಜಿ ಭೂತ
9 ಅಟ್ಟೋಡಾಯೆ
10 ಅಡಿಮಣಿತ್ತಾಯ
11 ಅಡಿಮರಾಂಡಿ
12 ಅಣ್ಣಪ್ಪ
13ಅಬ್ಬೆರ್ಲು
14 ಅಡ್ಕದ ಭಗವತಿ 
ಅಡ್ಕದ ಚಕ್ರಪದಿ
15ಅತ್ತಾವರ ದೆಯ್ಯೊಂಗುಳು
16 ಅಡ್ಡೋಲ್ತಾಯೆ
17 ಅಡ್ಕತ್ತಾಯ
18 ಅಡ್ಯಲಾಯೆ
19  ಅಡ್ಯಂತಾಯ
20 ಅಬ್ಬಗ
21  ಅಬ್ಬೆ ಜಲಾಯ
22  ಅರಬ್ಬೀ ಭೂತ
23 ಅರಸಂಕುಳು
 © ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
ಅರಸಂಕಲ
ಅಂಕೆ
24 ಅರಸು ಭೂತ
25 ಅನ್ನರ ಕಲ್ಲುಡೆ
26  ಅಗ್ನಿ ಚಾಮುಂಡಿ ಗುಳಿಗ (ಮುಕಾಂಬಿ ಗುಳಿಗ )
27 ಆಚಾರಿ ಭೂತ
28 ಆನೆ ಕಟ್ನಾಯೆ
29   ಆಲಿ
30 ಆಟಿ ಕಳಂಜೆ ?!
31ಅಂಗಣತ್ತಾಯೆ
32 ಅಮ್ಬೆರ್ಲು
ಅಮ್ಮಣ ಬನ್ನಾಯ
33 ಇಷ್ಟ ಜಾವದೆ
34 ಈರ ಭದ್ರೆ
35 ಈಸರ ಕುಮಾರೆ 
ಉಮ್ಮಯೆ
36 ಉಮ್ಮಳಾಯ
37 ಉಮ್ಮಳಿ
38 ಉರಿ ಮರ್ತಿ
39 ಉರಿಯಡಿತ್ತಾಯ
 40 ಉಳ್ಳಾಯ
 41ಉಳ್ಳಾಲ್ತಿ
42 ಉಳಿಯತ್ತಾಯ
43 ಉಳ್ಳಾಕುಲು
44   ಉರವೆ
45 ಉರಿಮರ್ಲ
46 ಎಲ್ಯ ಉಳ್ಳಾಕುಳು
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
47 ಎರಿಯಜ್ಜ
48 ಎರು ಕನಡೆ
49 ಎರು ಕೋಪಾಳೆ
50 ಎರು ಬಂಟ
51 ಎರು ಶೆಟ್ಟಿ
52   ಎರು
53 ಎಲ್ಯಕ್ಕೆರ್
54   ಎಲ್ಯನ್ನೇರ್
55 ಒಕ್ಕು ಬಲ್ಲಾಳ

56 ಒಲಿ ಚಾಮುಂಡಿ

57  ಒಲಿಪ್ರಾಂಡಿ
58 ಒರು ಬಾಣಿಯೆತ್ತಿ
59 ಓಡಿಲ್ತಾಯ
60 ಒಂಜರೆ ಕಜ್ಜದಾಯೆ
61 ಒರ್ಮುಗೊತ್ತಾಯೆ
62 ಒರಿ ಉಲ್ಲಾಯೆ
63 ಒರ್ಮಲ್ತಾಯೆ
64 ಒರ್ಮುಲ್ಲಾಯೆ
65 ಒಲಿ ಮರ್ಲೆ
೬೬ ಒಡ್ಡಮರಾಯ(ತಿಂಗಳೆ ಗರಡಿ) 
೬೬ ಓಪೆತ್ತಿ ಮದಿಮಾಲ್ /ವಾಪತ್ತಿ ಮದಿಮಾಲ್(ಮಾಹಿತಿ ಸಂಕೇತ ಪೂಜಾರಿ)
66  ಕಚ್ಚೆ ಭಟ್ಟ
67 ಕನ್ನಡ ಭೂತ
68 ಕನ್ನಡ ಬೀರ
69 ಕನ್ನಡಿಗ
70 ಕತ್ತಲೆ ಬೊಮ್ಮಯ
71 ಕಡಂಬಳಿತ್ತಾಯ
72 ಕರ್ಮಲೆ ಜುಮಾದಿ (ಬಿರ್ಮಣ ಬೈದ್ಯ)
73 ಕರ್ನಾಲ ದೈವ
ಕಂಡದಾಯ© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
74 ಕನಪಡಿತ್ತಾಯ
75 ಕನ್ನಡ ಯಾನೆ ಪುರುಷ ಭೂತ
76 ಕಲ್ಕುಡ
77 ಕಲ್ಲುರ್ಟಿ
78  ಕಂಟಿರಾಯೆ
79 ಕಡನ್ತಾಯೆ
80 ಕನಲ್ಲಾಯೆ
81 ಕನ್ಯಾಕುಮಾರಿ
82 ಕಬಿಲ
83 ಕರಿಯನಾಯಕ
84 ಕರಿಯ ಮಲ್ಲ
 85 ಕರಿ ಚಾಮುಂಡಿ
 © ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
86 ಕಾಲ ಭೈರವ
87 ಕಾಳ ರಾಹು
88 ಕಳರ್ಕಾಯಿ  
89 ಕಲ್ಲೂರತ್ತಾಯೆ
90 ಕಲ್ಲೇರಿತ್ತಾಯ
91 ಕುರಿಯಾಡಿತ್ತಾಯ
92  ಕಾಳಮ್ಮ
93 ಕೆರೆ ಚಾಮುಂಡಿ
94 ಕಳಲ
95  ಕಳುವೆ
96 ಕಾಂಜವ
97 ಕಾಂತಾ ಬಾರೆ
98 ಕಾಂತು ನೆಕ್ರಿ
99 ಕಾಯರಡಿ ಬಂಟೆ
100 ಕಾರಿ
101 ಕಾಳರಾತ್ರಿ
102 ಕರಿಯಣ್ಣ ನಾಯಕ
103 ಕಾಜಿ ಮದಿಮ್ಮಾಲ್ ಕುಲೆ
104 ಕಾಡೆದಿ
105 ಕಾರಿಂಜೆತ್ತಾಯ
106 ಕಾರ್ಕಳತ್ತಾಯೇ
107 ಕಿನ್ನಿದಾರು
108 ಕಾಜು ಕುಜುಂಬ 
ಕರಿಬಿಲತ್ತಾಯ
ಕಾನಲ್ತಾಯ
ದೇಯಿ ಶಂಕರ್ ಕುಂಜತುರು
109 ಕುಲೆ ಭೂತ
110 ಕುಲೆ ಮಾಣಿಗ
111 ಕುಲೆ ಬಂಟೆತ್ತಿ
112 ಕುರವ
 © ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
ಕುರುವಾಯಿ (ಮಾಹಿತಿ ,ಬಾಲಕೃಷ್ಣ ಶಿಬರಾಯ )
ಕುದುರೆ ಮುಖ ದೈವ /ಕುದುರೆತ್ತಾಯ (ಮಾಹಿತಿ Yenkey)
113 ಕುರೆ ಪೆರ್ಗಡೆ
114 ಕುಕ್ಕೆತ್ತಿ
115 ಕುಕ್ಕಿನಂತಾಯ
116 ಕುರ್ಕಲ್ಲಾಯೆ
117 ಕುಮಾರ ಸ್ವಾಮಿ
118 ಕುಂಞÂ ಭೂತ
119 ಕುಂಜೂರಾಯ
120 ಕುಂಜಣಿಗೋ
121 ಕುಟ್ಟಿ ಚಾತು
122 ಕುಮಾರ
123 ಕೂಜು
124 ಕೇತುರ್ಲಾಯೆ
125 ಕೊಟ್ಯದಾಯೆ
126 ಕೇಚರಾವುತ
127 ಕೆಂಜಳ್ತಾಯೆ
128 ಕೊಡನ್ಗೆತ್ತಾಯೆ
129 ಕೊರಗ
130 ಕೊಲ್ಲುರಮ್ಮ
131 ಕೋಡಿದಜ್ಜೆ
132 ಕುಂಟುಕಾನ ಕೊರವ
133 ಕುಂಡ
134 ಕುಂದಯ
135 ಕಿನ್ನಿ ಮಾಣಿ
136 ಕಿರಿಯಾಯೆ
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
137 ಕೂಜಿಲು
138 ಕೊರಗ ತನಿಯ
139 ಕೊರತಿ
140 ಕೋರ್ದಬ್ಬು /ಕೋಟೆದ ಬಬ್ಬು ಸ್ವಾಮಿ
141 ಕೋಟಿ 
142  ಕೋಮರಾಯ
143 ಕೋಮಾರು ಚಾಮುಂಡಿ
144 ಕೋಟೆತ್ತ ಕಲ್ಲಾಳ
 145 ಕಂಡಿಗೆತ್ತಾಯ
145 ಕುಂಟಲ್ದಾಯ
146 ಕೋಟೆರಾಯ/ಕೋಟೆದಾರ್
ಕಾನದ
ಕಟದ

146 ಗಂಡ ಗಣ
147 ಗಡಿರಾವುತೆ
148 ಗಿಂಡೆ
149 ಗಿರಾವು
150 ಗಿಳಿರಾಮ
ಗಂಧರ್ವ -ಬೋಳಾರ್ ಗರೋಡಿ ಮರ್ನೆ
151 ಗುಳಿಗ
152 ಗುಮ್ಟೆ ಮಲ್ಲ
153 ಗುಳಿಗನ್ನಾಯ
154 ಗುರಮ್ಮ
155 ಗುರಿಕ್ಕಾರ
156 ಗೆಜ್ಜೆ ಮಲ್ಲೆ
157 ಗೋವಿಂದ
158 ಗುರು ಕಾರ್ನೂರು
159ಗಂಗನಾಡಿ ಕುಮಾರ 
160 ಚಿಕ್ಕ ಸದಾಯಿ
161ಚಾಮುಂಡಿ
162 ಚೀನೀ ಭೂತಗಳು
163 ಚೆನ್ನಯ
 © ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
164 ಚೆನ್ನಿಗರಾಯ
165 ಚೇರಿತ್ತಾಯೆ
166 ಚೈಂಬೆರ್
167 ಚಂಡಿ 
 168  ಜಂಗ ಬಂಟ      
169 ಜಂದರ್ಗತ್ತಾಯೆ
170 ಜಗನ್ನಾಥ ಪುರುಷ
171ಜಟ್ಟಿಗ
172 ಜಟಾ ಧಾರಿ
173 ಜಡೆತ್ತಾರ್
174 ಜದ್ರಾಯೆ
175 ಜಾವದೆ
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
176 ಜೋಗಿ ಪುರುಷ
178 ಜಾಲಬೈಕಾಡ್ತಿ
179 ಜಾರಂದಾಯ
180 ಜಾನು ನಾಯ್ಕ
181 ಜೂಂಬ್ರ
182 ಜತೆ ಕುಲೆ 
183ಡೆಂಜಿ ಪುಕ್ಕೆ 
184 ತಡ್ಯದಜ್ಜೆ
185  ತುಳು ಭೂತ
186 ತೋಮಜ್ಜ
187 ತೋಡ ಕುಕ್ಕಿನಾರ್ /ವೈದ್ಯ ನಾಥ
188 ತನ್ನಿ ಮಾಣಿಗ, , ,
189 ದಾರಗ
190 ದಾರು
191   ದಾಲ್ಸುರಾಯ
192 ದುಗ್ಗಲಾಯ
193ಧೂಮಾವತಿ
194 ದೇವಾನು ಪಂಬೆದಿಯಮ್ಮ
195 ದೈವನ ಮುಟ್ಟುನಾಯೆ,
196   ದೈವಸಾದಿಗೆ
197 ದೆಯ್ಯಾರ್
198 ದೆಯ್ಯಂಕುಳು
199 ದಂಡೆ  ರಾಜ
200 ದರ್ಗಂದಾಯ
201 ದುಗ್ಗಮ್ಮ ದೈಯಾರ್ 
ದುಗ್ಗಮೆ
202 ದುರ್ಗಂತಾಯೆ
203 ದೂರ್ದುಮ
204 ದೇಯಿ
205 ದೇವ ಪುರುಷ
206ದೇವು ಪುಂಜ
207 ದರಮ್ ಬಲ್ಲಾಳ್ತಿ
208 ದೆಸಿಂಗ ರಾಯ 

208ದಂಡ ನಾಯಕ 
೨೦೯ ದೀಪದ ಮಾಣಿ

© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
naraya(jeevith shetty) 
209 ನಾಗಂತಾಯೆ
210 ನಾಗ ಚಾಮುಂಡಿ
210 ನಾಗ ನಂದಿ
211 ನೀಚ /ಅಂಗಾರ ಬಾಕುಡ
212 ನಾಲ್ಕೈತ್ತಾಯ
213 ನಾರಪಾಡಿ ಪೊಸಕಲ್ಲಾಳೆ
214 ನಾರಳತ್ತಾಯ 
ನಾಡ ದೈವ ,ಬೂಡು ಜಾಲು  ನಿಡ್ಲೆ
215 ನಂದಿ ಗೋಣ
216 ನೈದಾಲ ಪಾಂಡಿ
217 ನೆತ್ತರು ಮುಗುಳಿ :
218 ನೇರಳತ್ತಾಯ
219 ನೆಲ್ಯಕ್ಕೇರ್
220 ನೇಲ್ಯನ್ನೆರ್
221 ನೆಲ್ಲುರಾಯ
222 ನುರ್ಗಿಮದಿಮ್ಮಾ
223 ನಾಯರ್ ಭೂತ
224 ನಾರಂಬಡಿ
225 ನಾಲ್ಕೈ ಭದ್ರೆ
226 ನೇಲ್ಯ ರಾಯೆ
227 ನೇಲ್ಯ ರಾಯ ಬವನೊ
228 ನಂದಿ
229 ನಾಗ ನಂದಿ 
230 ನಡ್ದೊಡಿತ್ತಾಯ  

© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
231 ಪಾಡಿರಾಯ
232 ಪಾಲಕತ್ತಾಯ
233 ಪಾಲೆತ್ತಾಯ

234   ಪರವ ಭೂತ
235 ಪರಿವಾರ ನಾಯಕ
236 ಪಟ್ಟಂತರಸು , ,
237 ಪಟ್ಟೋರಿತ್ತಾಯ
238 ಪತ್ತೊಕ್ಕೆಲು ಜನಾನುದೈವ
 239  ಪಂಜುರ್ಲಿ
240   ಪಲ್ಲದ ಮುದ್ದ
241 ಪಂಚ ಜುಮಾದಿ
242 ಪಾಪೆಲು ಚಾಮುಂಡಿ
243 ವಿಷ್ಣು ಮೂರ್ತಿ
245 ಪುದೆಲ್ ಪುಂಚ
246 ಪುದ
247  ಪುತ್ತು ಗಿರಾವು
248 ಪುರಲಾಯೆ
249 ಪೆಲದ್ಕತ್ತಾಯೆ
250 ಪೆರ್ದೊಳ್ಳು
251 ಪೊಟ್ಟೋಳು
252 ಪೊಟ್ಟೋರಿತ್ತಾಯ
253 ಪೊಯ್ಯತ್ತಾಯ
254 ಪೊಸಲ್ದಾಯೇ
255 ಪೊಸ ಮಾರಾಯೆ
256 ಪೊಸೊಳಿಗೆ ಅಮ್ಮ
257 ಪಡುವೆಟ್ನಾಯ
258 ಪಿಲಿ ಚಾಮುಂಡಿ
259 ಪುದರುಚಿನ್ನ ಬಂಟ
260 ಪೂಮಾಣಿ  
261 ಪೊಟ್ಟ ಪಂಜುರ್ಲಿ
262   ಪೋತಾಳ/ಪುದತ್ತಾಳ
263 ಪೊಯ್ಯೆತ್ತಾಯಿ
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
 264   ಪಿಲೆ
265 ಪೆಲತ್ತಿ
266 ಪೋಲಿಸ್ ಭೂತ(maahit Prkash maarpadi )

267ಪಡಕಣ್ಣಾಯ
268 ಪಯ್ಯ ಬೈದ್ಯ 
 ಪರಮೇಶಿ


ಬನ್ನಡ್ಕತ್ತಾಯ(ಮಾಹಿತಿ ಧರ್ಮ ದೈವ -ನಾಗರಾಜ ಭಟ್ ,ಬಂಟ್ವಾಳ

269 ಬಲವಂಡಿ
270   ಬಳ್ಳು
271 ಬಚ್ಚ ನಾಯಕ
272 ಬಸ್ತಿ ನಾಯಕ
belentengarjja
273 ಬಿರಣ
274 ಬ್ಯಾರಿ ಭೂತ
278 ಬ್ಯಾರ್ದಿ ಭೂತ
279 ಬೀರ್ನಾಚಾರಿ :
280 ಬಿರ್ಮಣಾಚಾರಿ :
281 ಬೀರ್ನಾಳ್ವ
282 ಬೆರ್ಮೆರ್
 283 ಬೇಡವ :
284 ಬಂಡಿರಾಮ
285 ಬಂಡಾರಿ
286 ಬಾಕುಡ
287 ಬಾಕುಡ್ತಿ
289 ಬಾಡುರಾಯೆ
290 ಬಾಮ ಕುಮಾರ
291 ಬಾಲ ಕುಮಾರ
292 ಬಿರ್ಮೆರಜ್ಜಿ
293 ಬಿಕ್ರ ಮೇಲಾಂತೆ
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
294 ಬುದಾ ಬಾರೆ
295 ಬಾಲೆ ಬಾರಗ
296 ಬುದ್ಯಂತಾಯೆ  
 297   ಬಬ್ಬರ್ಯ
298 ಬಿಲ್ಲಾರ
299 ಬಿಲ್ಲಾರ್ತಿ
300 ಬೂಡು ಬೊಮ್ಮಯ ಸ್ವಾಮಿ
301 ಬೈಸು ನಾಯಕ
302 ಬೈರಾಗಿ
303 ಬೊಂಟೆಗಾರೆರ್
304 ಬೊಮ್ಮರ್ತಾಯೆ
305 ಬೊಲ್ತಾಯ್ತೋಲು
306 ಭಸ್ಮ ಮೂರ್ತಿ
307 ಭೂತ ನಾಗ
308 ಭೂತ ರಾಜ
 309  ಬೊಟ್ಟಿ ಭೂತ
310 ಬ್ರಾಣ ಭೂತ

311 ಭಟ್ಟಿ ಭೂತ
312 ಬಂಗಾಡಿ ಮಾಣಿಕೊ
313 ಬಂಟ ಭೂತ
314 ಬಂಟ ಜಾವದೆ
315 ಬಲ್ಲ ಮಂಜತ್ತಾಯ 
 316 ಬಂಟಾಮ್ಡಿ
317  ಬರಮಲ್ತಾಯೆ
318 ಮಲಾರ್ ಜುಮಾದಿ (ಕರ್ನಗೆ) 
319   ಮಹಾ ಕಾಳಿ ,
320 ಮಾಯಂದಾಲ್
321  ಮರ್ಲು ಮೈಯೊಂದಿ
322 ಮರ್ಲು ಜುಮಾದಿ
323 ಮಂತ್ರ ದೇವತೆ
324ಮಂಗಾರ ಮಾಣಿಗ
325 ಮಂಜ ನಾಗ
326ಮಂಜ ಬೊಮ್ಮ
327 ಮಗ್ರಂದಾಯ
328 ಮಡಿಕತ್ತಾಯ(ಮಾಹಿತಿ :ದಿನೇಶ್ ವರ್ಕಾಡಿ )
329 ಮಡಳಾಯೆ
330 ಮದ್ದಡ್ಕತ್ತಾಯೆ
331 ಮಡೆನಾಗ
332 ಮಡ್ಯೋಳೆ
333 ಮಂತ್ರೊದಾಯೆ
334 ಮನ್ಸೆರ್ ಭೂತ
335 ಮಲೆಯಾಳ ಭೂತ
336 ಮಲೆ ಕೊರತಿ
337 ಮದಿಮಾಲ್
338 ಮಲೆರಾಯ
339 ಮಾಣಿ ಬಾಲೆ 
ಮಾಟಂತಾಯ (ಮಾಹಿತಿ ಸುಶ್ರುತ್ ಅಡ್ಡೂರು)
ಮಾನೆಯಪ್ಪು (ಮಾಹಿತಿ ಸುಶ್ರುತ್ ಅಡ್ಡೂರು)
ಮಾಯ್ಲೆರ್
ಮಾಯಿಲ್ದಿ © ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
ಮೇಲ್ಕಾರತ್ತಾಯಿ
340 ಮಾಂದಿ
 341   ಮಲ್ಲು
342 ಮರ್ದ ಬಲ್ಲಾಳ್ತಿ
343 ಮಾಪುಳೆ ಭೂತ
344 ಮಾಪುಳ್ತಿ ಭೂತ
345 ಮಾಪುಳ್ತಿ ಧೂಮಾವತಿ
346 ಮಾಲಿಂಗ ರಾಯ
347 ಮಾಣಿ ಭೂತ
 348 ಮಾಣೆಚ್ಚಿ
349 ಮಾಯಿಲು
350 ಮಾಯೊದ ಬಾಲೆ
351 ಮಾರಂ ದೈವ
352 ಮಾರಾವಂಡಿ
353 ಮಾರಾಳಮ್ಮ್ಮ
354 ಮಾರಿಯಮ್ಮ
355 ಮಿತ್ತಂತಾಯೆ
356 ಮುಕ್ಕಬ್ಬೆ
357 ಮುಡಿಲ್ತಾಯ
358 ಮುರ್ತುರಾಯ
359ಮುಕುಡಿತ್ತಾಯಿ
360 ಮೂಡಿ ಪಡಿತ್ತಾಯೆ
361ಮೂಡೋತ್ನಾಯೆ
362 ಮೂ ಜುಲ್ನಾಯ
 © ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
363 ಮೂರ್ತಿಲ್ಲಾಯ
ಮುಪ್ಪಣ್ಣ ದೈವ ಶಿರ್ಲಾಲು
364 ಮಲೆ ಮುದ್ದ
365 ಮುಗೆರ್ಲು
366 ಮಂಗಳೆರ್
367  ಮುಕಾಂಬಿ
368  ಮುಂಡೆ ಬ್ರಾಂದಿ(maahiti sanket pujari )
369 ಮುಡಿಪುನ್ನಾರ್
370 ಮುಸ್ಲಿಮರ ಮಕ್ಕಳು
371  ಮೂವ
372 ಮೈಸಂದಾಯ
373 ಯಡಪಡಿತ್ತಾಯ
374 ಯರ್ಮುಂಜಾಯೆ
375 ಮೇಲ್ಕಾರ್ತಾಯೆ
376 ಮಲ್ಲ ರಾಯೆ 
377 ಯೇರ್ಮನ್ನಾಯೆ
 378   ಮಣಿಕಂಟತ್ತಾಯ
379  ಮಲರಾಯ 
 © ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
 380  ಮದನಕ್ಕೆ ದೈಯಾರು
೩೮೧ ಮಾಡ್ಲಾಯ
೩೮೧ ಮರ್ಲು ಮಾಣಿ
೩೮೧ ಮುಡಿತ್ತಾಯ
೩೮೧ ಮಾಯೊಲು-ಡಾ.ವಾಮನ ನಂದಾವರ 
೩೮೧ಮಂಜಿಷ್ಣಾರ್
೩೮೨ ಮನಿಯಂದಾಯ
31  ರಕ್ತೇಶ್ವರಿ
382  ರಾವು  ಗುಳಿಗ
383  ರುದ್ರ ಚಾಮುಂಡಿ

 384 ಶಗ್ರಿತ್ತಾಯ
385 ಶಿವರಾಯ
386  ಶಂಕರ ಬಡವಣ
387 ಶಿರಾಡಿ 

© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
388 ಸರ್ವೆರ್
389 ಸುಬ್ಬಮ್ಮ
390 ಸೂ ಕತ್ತೆರಿ
391 ಸೊನ್ನೆ
392 ಸ್ವಾಮಿ
393 ಸೆಟ್ಟಿಗಾರ


394  ಸತ್ಯನ್ಗಳದ ಕೊರತಿ
395 ಸಂಪಿಗೆತ್ತಾಯ 
396 ಸನ್ಯಾಸಿ ಹಿರಿಯಾಯೆ
397 ಸೇಮ ಕಲ್ಲ ಪಂಜುರ್ಲಿ
398 ಸುಬ್ಬಿಯಮ್ಮ ಗುಳಿಗ
399ಸಾರ್ತ ಮಲ್ಲು 
400     ಹನುಮಂತ ಭೂತ
401  ಹಳ್ಳತ್ತಾಯ
    
403   ಹೊಸಮ್ಮ,

404 ಪಲ್ಲ ಧೂಮಾವತಿ
405 ಜೆಡೆ ಕಲ್ಲು ಧೂಮಾವತಿ  
405 ಪದ್ದೆಯಿ ಧೂಮಾವತಿ
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )

400 ರತೋಜುಮಾದಿ
401 ಸಾರಾಳ ಜುಮಾದಿ
402 ಕೈರ್ ಜುಮಾದಿ
403 ಕಾಂತೆರಿ ಜುಮಾದಿ
404 ಜುಮ್ರ ಜುಮಾದಿ
405 ಕಾಂತು ನೆಕ್ರಿ ಜುಮಾದಿ
406  ಪಡು ಧೂಮಾವತಿ 

407 ಕೊಮಾರು ಚಾಮುಂಡಿ
4028ಪೊಲಮರದೆ ಚಾಮುಂಡಿ
409 ಅಮ್ಮಂಗಲ್ಲು ಧೂಮಾವತಿ
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )

410  ಮಂತ್ರ ಗುಳಿಗ
411 ಪಾತಾಳ ಗುಳಿಗ
412 ಒರಿ ಮಾಣಿ ಗುಳಿಗ
413 ಆಕಾಸಗುಳಿಗೆ
414 ಚಾಮುಂಡಿ ಗುಳಿಗ
415 ರಾಜನ್ ಗುಳಿಗ
416 ಮಾರಣ ಗುಳಿಗ
417 ಅಂತ್ರ ಗುಳಿಗ
418 ನೆತ್ತೆರ್ ಗುಳಿಗ
419 ಮುಳ್ಳು ಗುಳಿಗ
420 ಮಂತ್ರ ಗುಳಿಗ
421 ಮಂತ್ರವಾದಿ ಗುಳಿಗ
422 ಬಂಡಾರಿ ಗುಳಿಗ
423 ಚೌಕಾರು ಗುಳಿಗ
424 ನೆತ್ತರು ಗುಳಿಗ

425 ಭೂಮಿ ಗುಳಿಗ
426ಸಂಕೊಲಿಗೆ ಗುಳಿಗ
427 ಜೋಡು ಗುಳಿಗ
428   ಜಾಗೆದ ಪಂಜುರ್ಲಿ
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )

429  ಉರಿ ಮರ್ಲೆ ಪಂಜುರ್ಲಿ
430 ವರ್ನರ ಪಂಜುರ್ಲಿ
431 ಒರಿ ಬಂಟೆ ಪಂಜುರ್ಲಿ
432 ಕಡಬದ ಪಂಜುರ್ಲಿ
433 ಕಡೆಕ್ಕಾರ ಪಂಜುರ್ಲಿ
434 ಕಾಡಬೆಟ್ಟು ಪಂಜುರ್ಲಿ
435 ಕುಂತಾಳ ಪಂಜುರ್ಲಿ
436 ಕುಡುಮೊದ ಪಂಜುರ್ಲಿ
437 ಕುಪ್ಪೆ ಪಂಜುರ್ಲಿ
438 ಕೂಳೂರು ಪಂಜುರ್ಲಿ
439 ಕೋರೆ ದಾಂಡ ಪಂಜುರ್ಲಿ
439 ಕೊಟ್ಯದ ಪಂಜುರ್ಲಿ
440 ಗೂಡು ಪಂಜುರ್ಲಿ
441 ಗ್ರಾಮ ಪಂಜುರ್ಲಿ
442 ಚಾವಡಿದ ಪಂಜುರ್ಲಿ
443 ನಾಡ ಪಂಜುರ್ಲಿ
444 ಪಂಜಣತ್ತಾಯ  ಪಂಜುರ್ಲಿ
445 ಪಟ್ಟದ ಪಂಜುರ್ಲಿ
446 ಪಾರೆಂಕಿ ಪಂಜುರ್ಲಿ
447 ಜೋಡು ಪಂಜುರ್ಲಿ
448 ರುದ್ರ ಪಂಜುರ್ಲಿ
449 ಮುಗೇರ ಪಂಜುರ್ಲಿ
450   ಒರ್ತೆ ಪಂಜುರ್ಲಿ
451 ಮನಿಪ್ಪನ ಪಂಜುರ್ಲಿ
453 ಅಮ್ಬಟಾಡಿ ಪಂಜುರ್ಲಿ
454 ಅಣ್ಣಪ್ಪ ಪಂಜುರ್ಲಿ
455  ಉದ್ಪಿದ ಪಂಜುರ್ಲಿ
ಮೈಯಾರ್ಗೆ ಪಂಜುರ್ಲಿ (ಮಾಹಿತಿ :ಸಂತೋಷ್ ಕುಮಾರ )
 456  ಜೋಡು ಕಲ್ಲುರ್ಟಿ
457 ಹಾಡಿ ಕಲ್ಲುರ್ಟಿ
458 ಒರ್ತೆ ಕಲ್ಲುರ್ಟಿ
459 ಪಾಷಾಣ ಮೂರ್ತಿ
460 ರಾಜನ್ ಕಲ್ಕುಡ ...
.461 ಉರಿ ಮರ್ತಿ
462 ಅಂಗಾರೆ ಕಲ್ಕುಡ
463ಸತ್ಯ ಕುಮಾರ
464ಸತ್ಯ ದೇವತೆ
465 ಇಷ್ಟ ದೇವತೆ
 46 6 ಮಂತ್ರ ದೇವತೆ .
.467 ಮಂದ್ರಾಯ
468 ಮಿತ್ತ ಮೊಗರಾಯ 
 © ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
.469 ಮೈಯಾರ್ಗೆ ಪಂಜುರ್ಲಿ (ಮಾಹಿತಿ :ಸಂತೋಷ್ ಕುಮಾರ )
4470 ಮಾಡ್ಲಾಯ(ಮಾಹಿತಿ ಸಂಕೇತ್ ಕುಮಾರ್ )
5471 ಕತ್ತಲೆ ಕಾಣದ ಗುಳಿಗ (ಸಂತೋಷ್ ಕುಮಾರ )
472  ಮರ್ಲ್ ರಕ್ತೇಶ್ವರಿ 
473  ಶಗ್ರಿತ್ತಾಯ 
474  ಕೊಂಕಣಿಭೂತ  
475  ಮಂದ್ರಾಯ
1476  ಒಡ್ಡಮರಾಯ
477  ದರಂ ಬಲ್ಲಲ್ತಿ  
478  ಮಣಿಕಂಠತ್ತಾಯ 
479 ಮಿತ್ತಮೊಗರಾಯ 
48೦ ಅಚ್ಚು ಬಂಗೇತಿ  
481 ಮಲೆಯಾಳ ಚಾಮುಂಡಿ  
48 2 ಮರ್ಲು ಮಾಣಿ  
483 ಪಿಲಡ್ಕತ್ತಾಯ  
484 ಬನ್ನಡ್ಕತ್ತಾಯ (ಮಾಹಿತಿ ಧರ್ಮ ದೈವ )
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
೪೮೫ ಮಾಡ್ಲಾಯ (ಮಾಹಿತಿ ಸಂಕೇತ )
೪೮೬ ಮರ್ಲು ಮಾಣಿ
೪೮೭ ಮುಡಿತ್ತಾಯ
೪೮೮ ಕುಂಟಲ್ದಾಯ (ಮಾಹಿತಿ ನವೀನ ಕುಮಾರ್ ಮರಿಕೆ )
೪೮೯ ಒಡ್ಡಮರಾಯ(ತಿಂಗಳೆ ಗರಡಿ) 
500 ನೆಲ್ಲುರಾಯ
501ಮಲೆಸಾವಿರ ಭೂತ (ಮಾಹಿತಿ ಪ್ರಜ್ವಲ್ )
502 ಹರಿಹರ ಭೂತ (ಮಾಹಿತಿ ಗೀತ ನಾಯಕ್)
503ಸೀರಂಬಲ್ತಾಯ,(ಮಾಹಿತಿ ಶಂಕರ್ ಕುಂಜತ್ತೂರು )
504 ಬೀರ ಮರ್ಲೆರ್ (ಮಾಹಿತಿ ಶಂಕರ್ ಕುಂಜತ್ತೂರು )
50 5ಕಡಂಗಲ್ಲಾಯ (ಮಾಹಿತಿ ಶಂಕರ್ ಕುಂಜತ್ತೂರು )

೫೦೬ ಮಾಟಂತಾಯ (ಮಾಹಿತಿ ಸುಶ್ರುತ್ ಅಡ್ಡೂರು)
೫೦೭ ಮಾನೆಯಪ್ಪು (ಮಾಹಿತಿ ಸುಶ್ರುತ್ ಅಡ್ಡೂರು)
೫೦೮ ಮಾಯ್ಲೆರ್
೫೦೯ ಮಾಯಿಲ್ದಿ 
೫೧೦ ಪರಂಬಲತ್ತಾಯ ,(ಮಾಹಿತಿ- ಶಂಕರ್ ಕುಂಜತ್ತೂರು )
೫೧೧ ಕೋಚು ಗುಳಿಗ(ಮಾಹಿತಿ- ಶಂಕರ್ ಕುಂಜತ್ತೂರು ) , 
೫1 ೨ ಕಿನ್ನಿಲು , (ಮಾಹಿತಿ- ಶಂಕರ್ ಕುಂಜತ್ತೂರು )
೫೧೩ ಪೊಯಿ ಚಾಮುಂಡಿ(ಮಾಹಿತಿ- ಶಂಕರ್ ಕುಂಜತ್ತೂರು )
೫೧೩ ಕುಂಞಲ್ವ ಬಂಟ 
೫೧೪ ಅಂಕೆ -ಡಾ.ವಾಮನ ನಂದಾವರ
೫೧೫ ಉಮ್ಮಯೆ- ಡಾ.ವಾಮನ ನಂದಾವರ
೫೧೬ ದುಗ್ಗಮೆ- ಡಾ.ವಾಮನ ನಂದಾವರ
೫೧೭ ಮಾನಿ ಬಾಲೆ 
 © ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
೫೧೮ ಚೀನಿದಾರ್ -ಡಾ.ವಾಮನ ನಂದಾವರ 
೫೧೯ ನರಯ
೫೨೦ ಮಾಯೋಲು
೫೨೧ ಉರ್ಮಿತ್ತಾಯ 
೫೨೩ ಕುಡಂದರೆ
೫೨೪ ಅಡಿಮರಾಯ 
೫೨೫ ಕೋಟೆ ಜಟ್ಟಿಗ
526 ಮೇಲ್ಕಾರತ್ತಾಯಿ
527 ಅಡ್ಕದ ಚಕ್ರಪದಿ 
528 ಪೆರ್ನು 
529 ದೆಯ್ಯು 
53೦ಮದ್ಮಯ 
531 ಮದ್ಮಲ್
534 ಕುಂಡ್ಜು ಬಂಟ
535 ಬಂಕಿ ನಾಯ್ಕ 
 © ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
536 ಸೇನವ
534 ಪಟ್ಲೆರ್
535 ತಿಗಮಾರೆರ್ 
536 ಬಲಾಯಿ ಮಾರೆರ್ 
53 7 ಪೀಲೆದಾಯೆ
ಪೋಲಿಸ್ 
ಕಳ್ಳ (ಕಳುವೆ)
೫೩೮ 
ಬೆಲೆಂಟೆಂಗರಜ್ಜ
೫೩೯ದೇಸಿಂಗ ರಾಯ 
೫೪೦ಕೋಟೆರಾಯ /ಕೋಟೆದಾರ್  (ಮಾಹಿತಿ ಮಹೆಂದ್ರನಾಥ್ )
  ೫೪೧ ಓಪೆತ್ತಿ ಮದಿಮಾಲ್ /ವಾಪತ್ತಿ ಮದಿಮಾಲ್(ಮಾಹಿತಿ ಸಂಕೇತ ಪೂಜಾರಿ)
೫೪೨ ವಾಟೆಚಾರಾಯ (ಮಾಹಿತಿ ಸಂಕೇತ ಪೂಜಾರಿ )
೫೪೩ವಜಲಾಯ (ಮಾಹಿತಿ ಸಂಕೇತ ಪೂಜಾರಿ )
೫೪೫ ಕೆಮ್ಮ ಡೆ ಜುಮಾದಿ(ಮಾಹಿತಿ ಸಂಕೇತ ಪೂಜಾರಿ )
೫೪೬ ದಮಯಂತ(ಮಾಹಿತಿ ಪ್ರಕಾಶ್ ಮಾರ್ಪಾಡಿ )
೫೪೭ ಸೇರೆಗಾರ್ (ಮಾಹಿತಿ ಪ್ರಕಾಶ್ ಮಾರ್ಪಾಡಿ )
೫೪೮ ಪಡ್ಕಂತಾಯ (ಮಾಹಿತಿ ಪ್ರಕಾಶ್ ಮಾರ್ಪಾಡಿ )
೫೪೯ ಕುರುವಾಯಿ (ಮಾಹಿತಿ ,ಬಾಲಕೃಷ್ಣ ಶಿಬರಾಯ )
೫೫೦ ಕಂಡದಾಯ
೫೫೧ ದೀಪದ ಮಾಣಿ 
೫೫೨ ಮನಿಯಂದಾಯ 
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
೫೫೩ಕಾನದ
೫೫೪ ಕಟದ
೫೫೫ ಅಮ್ಮಣ  ಬನ್ನಾಯ (.ಮಾಹಿತಿ ವಾಮನ ನಂದಾವರ)
೫೫೬ ಪೆರಿಯಾಕುಳು
೫೫೭ ಮುಪ್ಪಣ್ಣ ದೈವ
೫೫೮ ನಾಡ ದೈವ
೫೫೯ ಮಲೆಯಾಳಿ ದೈವ
560 ಗಂಧರ್ವಬೋಳಾರ್ ಗರೋಡಿ ಮರ್ನೆ
561 ಕರಿಬಿಲತ್ತಾಯ
562 ಕಾನಲ್ತಾಯ
563 ಕುದುರೆ ಮುಖ ದೈವ (yenkey)© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
ನನ್ನ ಸಂಗ್ರಹದ ಈ ತನಕ ಎಲ್ಲೂ ಹೆಸರು ದಾಖಲಾಗದ ಸುಮಾರು 125ದೈವಗಳು ಮತ್ತು ನಾನು ಅಧ್ಯಯನ ಮಾಡಿದ ,ಇತರೆಡೆಯೂ  ಅಧ್ಯಯನ ವಾಗಿರುವ ಸುಮಾರು 50-೫೫ ದಿಗಳು ಹೀಗೆ ಸುಮಾರು  180 ದೈವಗಳು ಮತ್ತು ಡಾ.ಚಿನ್ನಪ್ಪ ಗೌಡರ ಕೃತಿಯಲ್ಲಿ ಪಟ್ಟಿ ಮಾಡಿದ ಭೂತಗಳ ಹೆಸರುಗಳನ್ನೂ ಸೇರಿಸಿ ಒಂದೇ ಭೂತದ ಬೇರೆ ಬೇರೆ ಹೆಸರು ಎನಿಸಿದ್ದನ್ನು ಕೈ ಬಿಟ್ಟು ಈ ಪಟ್ಟಿಯನ್ನು ತಯಾರಿಸಿದ್ದೇನೆ ,ಕೊನೆಯಲ್ಲಿ ಒಂದೇ ಭೂತದ ಬೇರೆ ಬೇರೆ ಹೆಸರುಗಳನ್ನೂ ಸೇರಿಸಿದ್ದೇನೆ ಇದರಲಿಇಲ್ಲದ ಭೂತಗಳ ಹೆಸರು ತಿಳಿದಿದ್ದರೆ ತಿಳಿಸಿ pls ಮುಂದೆ ಅವನ್ನು ಸೇರಿಸುತ್ತೇನೆ

ಇಲ್ಲಿರುವ  ದೇಯಿ ,ಬುದ್ಯಂತಾಯೆ ,ದೇವು ಪುಂಜ ,ಆತ ಕಳೆಂಜ ಮೊದಲಾದ ಕೆಲವು ಹೆಸರುಗಳನ್ನು ನಾನು ಡಾ. ಚಿನ್ನಪ್ಪ ಗೌಡರ ಭೂತಾರಾಧನೆ ಕೃತಿಯಲ್ಲಿನ ದೈವಗಳ ಹೆಸರಿನ ಪಟ್ಟಿ ಯಲ್ಲಿರುವುದನ್ನುನೋಡಿ  ಹಾಕಿದ್ದು ಇವರು ದೈವಗಳೇ ?ಇವರಿಗೆ ದೈವಗಳ ನೆಲೆಯಲ್ಲಿ ಆರಾಧನೆ ಇದೆಯೇ ಎಂಬ ಬಗ್ಗೆ ನಂಗೂ ಸಂಶಯ ಇದೆ
ಕಂಡಿಗೆತ್ತಾಯ’(ಬಜ್ಪೆ-ಕೊಳಂಬೆ),  ನಡ್ಡೊಡಿತ್ತಾಯ’(ಕಾರಿಂಜೆ), ‘ಮುಕುಡಿತ್ತಾಯಿ ಮಾಹಿತಿ :ಡಾ.ವಾಮನ ನಂದಾವರ

ನನ್ನ ಕೃತಿಗಳಲ್ಲಿ ಮಾತ್ರ ಹೆಸರು / ಮಾಹಿತಿ ಇರುವ/ನಾನು ನಾನು ಸಂಶೋಧಿಸಿದ   ದೈವಗಳು © ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )

1 ಅಕ್ಕಚ್ಚು
2 ಅಕ್ಕ ಬೋಳಾರಿಗೆ
3 ಅಚ್ಚು ಬಂಗೇತಿ
4 ಅಜ್ಜ ಬೊಲಯ
5 ಅಜ್ಜಿ ಭೂತ
6 ಅಟ್ಟೋಡಾಯೆ
7ಅಡ್ಕತ್ತಾಯ
8 ಅಡ್ಯಂತಾಯ
9 ಅಬ್ಬೆ ಜಲಾಯ
10 ಅರಬ್ಬೀ ಭೂತ
11  ಉರವೆ
12 ಎರು ಬಂಟ
18 ಎರು ಶೆಟ್ಟಿ
19ಎಲ್ಯಕ್ಕೆರ್
 20 ಎಲ್ಯನ್ನೇರ್
21 ಒಲಿ ಚಾಮುಂಡಿ
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
22  ಒಲಿಪ್ರಾಂಡಿ
23 ಒರು ಬಾಣಿಯೆತ್ತಿ
23 ಕನ್ನಡ ಭೂತ
24 ಕನ್ನಡ ಬೀರ
25 ಕನ್ನಡಿಗ
26 ಕತ್ತಲೆ ಬೊಮ್ಮಯ
27 ಕಡಂಬಳಿತ್ತಾಯ
28 ಕರ್ಮಲೆ ಜುಮಾದಿ (ಬಿರ್ಮಣ ಬೈದ್ಯ)
29 ಕನ್ನಡ ಯಾನೆ ಪುರುಷ ಭೂತ
,
30 ಕರಿ ಚಾಮುಂಡಿ

31ಕೆರೆ ಚಾಮುಂಡಿ
33 ಕರಿಯಣ್ಣ ನಾಯಕ
34 ಕಾಜಿ ಮದಿಮ್ಮಾಲ್ ಕುಲೆ
35 ಕಾರಿಂಜೆತ್ತಾಯ

36 ಕುಲೆ ಮಾಣಿಗ
38 ಕುರವ
39 ಕುರೆ ಪೆರ್ಗಡೆ
40 ಕುಕ್ಕೆತ್ತಿ
41 ಕುಂಞÂ ಭೂತ
42 ಕುಂಟುಕಾನ ಕೊರವ
43 ಕುಂಡ
44 ಕುಂದಯ
45 ಕೂಜಿಲು
46 ಕೋಮರಾಯ
47 ಕಚ್ಚೆ ಭಟ್ಟ
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
49 ಗುರು ಕಾರ್ನೂರು
49 ಚೀನೀ ಭೂತಗಳು
50 ಚೆನ್ನಿಗರಾಯ
51 ಜತೆ ಕುಲೆ
52 ಜಂಗ ಬಂಟ 
53 ಜೋಗಿ ಪುರುಷ
54 ಜಾಲಬೈಕಾಡ್ತಿ
55 ಜೂಂಬ್ರ
59 ಡೆಂಜಿ ಪುಕ್ಕೆ
60 ದಾರು
61  ದಾಲ್ಸುರಾಯ
62 ದುಗ್ಗಲಾಯ
63 ದೇವಾನು ಪಂಬೆದಿಯಮ್ಮ
64 ದೈವನ ಮುಟ್ಟುನಾಯೆ,
65  ದೈವಸಾದಿಗೆ
ನಾಗ ಚಾಮುಂಡಿ
66 ನೈದಾಲ ಪಾಂಡಿ
67 ನೆತ್ತರು ಮುಗುಳಿ :
68 ನೇರಳತ್ತಾಯ
69 ನೆಲ್ಯಕ್ಕೇರ್
70 ನೇಲ್ಯನ್ನೆರ್
71 ನೆಲ್ಲುರಾಯ
72 ನುರ್ಗಿಮದಿಮ್ಮಾ
73 ಪರವ ಭೂತ
74ಪರಿವಾರ ನಾಯಕ
75 ಪಟ್ಟಂತರಸು , ,
76 ಪತ್ತೊಕ್ಕೆಲು ಜನಾನುದೈವ
77 ಪಲ್ಲದ ಮುದ್ದ
78 ಪಾಪೆಲು ಚಾಮುಂಡಿ
79 ಪುದೆಲ್ ಪುಂಚ
80 ಪುದ
81ಪುದರುಚಿನ್ನ ಬಂಟ
81  ಪೋತಾಳ/ಪುದತ್ತಾಳ
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
85  ಬಳ್ಳು
87 ಬ್ಯಾರಿ ಭೂತ
88 ಬ್ಯಾರ್ದಿ ಭೂತ
89 ಬೀರ್ನಾಚಾರಿ :
90 ಬಿರ್ಮಣಾಚಾರಿ :
91 ಬೀರ್ನಾಳ್ವ
 92   ಬೆರ್ಮೆರ್
93ಬೇಡವ :
94 ಬಂಡಿರಾಮ 
 95  ಬಬ್ಬರ್ಯ
96 ಬೂಡು ಬೊಮ್ಮಯ ಸ್ವಾಮಿ
97 ಬೈಸು ನಾಯಕ
 98  ಬೊಟ್ಟಿ ಭೂತ
99 ಬ್ರಾಣ ಭೂತ
100 ಭಟ್ಟಿ ಭೂತ
101 ಬಂಟ ಜಾವದೆ
101 ಮದನಕ್ಕೆ ದೈಯಾರು :
102 ಮಲಾರ್ ಜುಮಾದಿ (ಕರ್ನಗೆ) 
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
103  ಮರ್ಲು ಮೈಯೊಂದಿ
  104   ಮಲ್ಲು
105 ಮರ್ದ ಬಲ್ಲಾಳ್ತಿ
106 ಮಾಪುಳೆ ಭೂತ
107 ಮಾಪುಳ್ತಿ ಭೂತ
108 ಮಾಪುಳ್ತಿ ಧೂಮಾವತಿ
108 ಮಾಲಿಂಗ ರಾಯ
109 ಮಾಣಿ ಭೂತ
110  ಮಲೆ ಮುದ್ದ
112 ಮುಕಾಂಬಿ
113  ಮುಂಡೆ ಬ್ರಾಂದಿ
114   ಮೂವ
ಮಾಡ್ಲಾಯ+(ಮಾಹಿತಿ:ಸಂಕೇತ್ ಪೂಜಾರಿ)
 115 ರುದ್ರ ಚಾಮುಂಡಿ
116   ಶಂಕರ ಬಡವಣ
117 ಶಿರಾಡಿ
118     ಸತ್ಯನ್ಗಳದ ಕೊರತಿ :
119   ಸೇಮ ಕಲ್ಲ ಪಂಜುರ್ಲಿ
119   ಹಳ್ಳತ್ತಾಯ
120     ಹನುಮಂತ ಭೂತ
121 ಹೊಸಮ್ಮ 
122 ಬಲ್ಲ ಮಂಜತ್ತಾಯ 
123 ನಾರಳತ್ತಾಯ (ಭೂತರಾಜ ) 
124 ಕಾರಿಂಜೆತ್ತಾಯ 
125  ಸಬ್ಬೆಡ್ತೆರ್
126 ಜಟ್ಟಿಗ 
೧೨೭ ಅಚ್ಚು ಬಂಗೇತಿ 
© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
128ಮರ್ಲು ಮಾಣಿ 
129 ಶಿರಾಡಿ
130 ಕನ್ನಡ ಯಾನೆ ಪುರುಷ ಭೂತ
ನನಗೆ ಹೆಸರು ಮಾತ್ರ ಸಿಕ್ಕಿ ಮಾಹಿತಿ ಸಂಗ್ರವಾಗದ ದೈವಗಳು
೧ ಪಿಲೆ
೨ ಪೆಲತ್ತಿ
೩ ಪೋಲಿಸ್ ಭೂತ
೪ ಶಗ್ರಿತ್ತಾಯ 
5 ಕೊಂಕಣಿಭೂತ  
6 ಮಂದ್ರಾಯ
7 ಒಡ್ಡಮರಾಯ
9 ದರಂ ಬಲ್ಲಲ್ತಿ  
10 ಮಣಿಕಂಠತ್ತಾಯ
 11 .ಮಲೆಸಾವಿರ ಭೂತ (ಮಾಹಿತಿ :ಪ್ರಜ್ವಲ್ )
12 ಹರಿ ಹರ ಭೂತ (ಮಾಹಿತಿ :ಗೀತಾ ನಾಯಕ್)
ನಾನು  ಅಧ್ಯಯನ ಮಾಡಿರುವ ಇತರೆಡೆಯೂ ಮಾಹಿತಿ ಲಭ್ಯ ವಿರುವ ದೈವಗಳು
1 ಕಲ್ಕುಡ
2 ಕಲ್ಲುರ್ಟಿ
3 ಕಿನ್ನಿ ಮಾಣಿ
4 ಪುಮಾಣಿ
5 ಮುದ್ದ
6 ಕಳಲ
7 ಬೀರ್ನಾಲ್ವ
8 ಬಬ್ಬರ್ಯ
9 ಕೋಟೆದ ಬಬ್ಬು
10 ಆಲಿ © ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
11 ಚಾಮುಂಡಿ
13 ಕೊರಗ ತನಿಯ
14 ಬೆರ್ಮೆರ್
15 ಜಟಾಧಾರಿ
16 ಪಿಳಿ ಚಾಂಡಿ
17 ಅಗ್ನಿ ಚಾಮುಂಡಿ ಗುಳಿಗ  (ಮುಕಾಂಬಿ ಗುಳಿಗ )
18 ಮಡಿಕತ್ತಾಯ (ಮಾಹಿತಿ :ದಿನೇಶ್ ವರ್ಕಾಡಿ )
 ..19 ಮಿತ್ತೂರು ನಾಯರ್ ದೈವ
20  ಮುಸ್ಲಿಮರ ಮಕ್ಕಳು
.© ಡಾ.ಲಕ್ಷ್ಮೀ ಜಿ ಪ್ರಸಾದ
( copy rights reserved )
.......45-50 . 
ಹೀಗ ನಾನು ಅಧ್ಯನ ಮಾಡಿರುವ ಸಂಶೋಧಿಸಿರುವ ಸುಮಾರು 150-160ಡಾ.ವಾಮನ ನಂದಾವರ ಅವರು ಮಾಹಿತಿ ನೀಡಿರುವ 3 ದಿನೇಶ ವರ್ಕಾಡಿ ಮಾಹಿತಿ ನೀಡಿರುವ 2 ದೈವಗಳನ್ನು ಹೊರತು ಪಡಿಸಿದರೆ ಉಳಿದ ಎಲ್ಲ ಹೆಸರುಗಳನ್ನೂ ಡಾ.ಚಿನ್ನಪ್ಪ ಗೌಡರ ಭೂತಾರಾಧನೆ -ಒಂದು ಅಧ್ಯಯನ ಕೃತಿಯಲ್ಲಿನ ಭೂತಗಳ ಪಟ್ಟಿಯಿಂದ ಸ್ವೀಕರಿಸಲಾಗಿದೆ