Saturday 30 September 2023

ನಾಗ / ಅರದರೆ ಚಾಮುಂಡಿ/ ಬೊಟ್ಟಿ ಭೂತ- ಡಾ.ಲಕ್ಷ್ಮೀ ಜಿ ಪ್ರಸಾದ್

                              


                                            ನಾಗ ಚಾಮುಂಡಿ /ಬೊಟ್ಟಿ ಭೂತ
ಸುಳ್ಯ ಪುತ್ತೂರು ಪರಿಸರದಲ್ಲಿ ಬೊಟ್ಟಿ ಭೂತಕ್ಕೆ ಆರಾಧನೆ ಇದೆ .ಇದು ಮೂಲತಃ ಜೈನ ಭೂತ .ಈ ದೈವ ಜೈನ ವ್ಯಕ್ತಿ ಎಂಬ ಬಗ್ಗೆ ಗುಲಾಬಿ ಅಜಲ್ತಿ ಅವರು ಸುಮಾರು ವರ್ಷ ಹಿಂದೆಯೇ ಮಾಹಿತಿ ನೀಡಿದ್ದರು .ಆದರೆ ಅದಕ್ಕಿಂತ ಹೆಚ್ಚಿನ ಮಾಹಿತಿ ಅವರಿಗೆ ತಿಳಿದಿರಲಿಲ್ಲ .ಹಾಗಾಗಿ ಈ ದೈವದ ಬಗ್ಗೆ ಮಾಹಿತಿ ಸಂಗ್ರಹಿಸಲು ಯತ್ನಿಸುತ್ತಾ ಇದ್ದೆ
ಇತ್ತೀಚಿಗೆ ಚೊಕ್ಕಾಡಿಗೆ ಆಟಿಡೊಂಜಿ ದಿನ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದಾಗ ಅಲ್ಲಿಗೆ ಹಿರಿಯ ಭೂತ ಕಟ್ಟುವ ಕಲಾವಿದರಾದ ಪೂವಪ್ಪ ಅಜಲರ ಪರಿಚಯವಾಯಿತು .
ಅವರು ಹೇಳುವಂತೆ ನಾಗ ಚಾಮುಂಡಿ ,ಗುಡ ಚಾಮುಂಡಿ ಮತ್ತು ಬೊಟ್ಟಿ ಭೂತ ಮೂರೂ ಒಂದೇ ದೈವದ ಬೇರೆ ಬೇರೆ ಹೆಸರುಗಳು.copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ
ಹಿಂದೆ ಮಾಣಿ ಯಲ್ಲಿ ಅಸಗಲರು/ ಅರದರರು ಎಂಬ ಜೈನ ಬಲ್ಲಾಳ ಅರಸರು ಇದ್ದರು .ಅವರು ಅವರ ಬೊಟ್ಟು ಗದ್ದೆಗೆ ಹುಲಿ ಮತ್ತು ಚಿರತೆಯನ್ನು ಕಟ್ಟಿ ಉಳುಮೆ ಮಾಡುತ್ತಾರೆ.ಆಗ ಅಲ್ಲಿ ಸುತ್ತು ಮುತ್ತ ಇದ್ದ ಮೂಲನಿವಾಸಿಗಳ ಗದ್ದೆಯಲ್ಲಿ ಉಳುಮೆ ಮಾಡುತ್ತಿದ್ದ ಎತ್ತು ಕೋನಗಳು ಹೆದರಿ ಓಡಿದವು .ಅಲ್ಲಿ ಮೂಲನಿವಾಸಿಗಳಾದ ಅಜಲರಿಗೂ ಜೈನ ಅರಸುಗಳಿಗೂ ವಿವಾದ ಉಂಟಾಗಿ ಹೋರಾಟವಾಯಿತು .© ಡಾ.ಲಕ್ಷ್ಮೀ ಜಿ‌ಪ್ರಸಾದ್ 
ಆಗ ಅಲ್ಲಿನ ಜೈನ ಅರಸು ನೆಲದಲ್ಲಿ ಹೂತು ಹೋದರು .ಆಗ ಅವರ ಬಲ ಗೈ ಬಂಟ ನಾಗಿದ್ದ ಕೋಚಾಳ್ವ ಬಂಟ ./ಕುಂಜಾಲ್ವ ಬಂಟ ಎಂಬಾತ ಅಯ್ಯೋ ನನಗಿನ್ನಾರು ಗತಿ ,ನನ್ನ ಹೊಟ್ಟೆ ಪಾಡು ಏನು ?ಎಂದು ದುಖಿಸುತ್ತಾನೆ .ಆಗ ನೆಲದ ಅಡಿಯಿಂದ ಗುಡ್ಡದ ತುದಿಯಲ್ಲಿರುವ ಕೊಪ್ಪರಿಗೆಯಲ್ಲಿರುವ ಚಿನ್ನ ಬೆಳ್ಳಿ ತೆಗೆದುಕೋ ಎಂದು ಅಶರೀರ ವಾಣಿ ಕೇಳಿಸಿತು .ಹಾಗೆ ಆಟ ಗುಡ್ಡದ ತುದಿಗೆ ಹೋಗಿ ಕೊಪ್ಪರಿಗೆ ಮುಟ್ಟಿದಾಗ ಅದು ಕಬ್ಬಿನವಾಗಿ ಬದಲಾಯಿತು .ಆಗ ಅವನು ಇನ್ನಷ್ಟು ರೋಧಿಸುತ್ತಾನೆ.ಆಗ ನಾನು ಅಲ್ಲಿ ಮಾಣಿಕ್ಯವಾಗಿ ಉದಿಸಿಬಂದಿದ್ದೇನೆ ನಂಬಿ ಆರಾಧಿಸು ಎಂದು ನುಡಿ ಕೇಳಿಸುತ್ತದೆ.ಅಂತೆ ಆತ ಅಲ್ಲಿ ದೈವತ್ವ ಪಡೆದ  ಜೈನ ಬಲ್ಲಾಳ ನನ್ನು ಆರಾಧಿಸುತ್ತಾನೆ .copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ
ಗುಡ್ಡೆಯ ಮೇಲೆ ಇರುವ ಕಾರಣ ಆ ದೈವಕ್ಕೆ ಗುಡ್ಡೆ ಚಾಮುಂಡಿ /ಗುಡ ಚಾಮುಂಡಿ ಎಂದು ಕರೆಯುತ್ತಾರೆ .ಗುಡ ಚಾಮುಂಡಿ ಸ್ತ್ರೀ ದೈವ್ತವಲ್ಲ ಪುರುಷ ರೂಪಿ ದೈವವೆಂದು ಈ ದೈವವನ್ನು ಆರಾಧಿಸುವ .  ಭರತ್ ಭಂಡಾರಿ ಪುತ್ತೂರು ಅವರು ಅಭಿಪ್ರಾಯಪಟ್ಟಿದ್ದಾರೆ © ಡಾ.ಲಕ್ಷ್ಮೀ ಜಿ‌ಪ್ರಸಾದ್ 
ನಾಗ ಚಾಮುಂಡಿ ದೈವಕ್ಕೆ ದೊಡ್ಡ ಮೀಸೆ ಇರುತ್ತದೆ ಇದು ಕೂಡ ಸ್ತ್ರೀ ದೈವವಲ್ಲ .
 ಬೊಟ್ಟಿ ಗದ್ದೆಯಲ್ಲಿ ಉದ್ಭವವಾದ ಕಾರಣ ಆತನನ್ನು ಬೊಟ್ಟಿ ಭೂತ ಎಂದು ಕರೆಯುತ್ತಾರೆ.ಇದನ್ನುನಾಗ ಭೂತ ಎಂದೂ ಕರೆಯುತ್ತಾರೆ ಎಂದು ಪೂವಪ್ಪ ಅವರು ಹೇಳಿದ್ದಾರೆ.ಅರದರೆ ಚಾಮುಂಡಿ ಎಂದೂ ಕರೆಯುತ್ತಾರೆ © ಡಾ.ಲಕ್ಷ್ಮೀ ಜಿ ಪ್ರಸಾದ್ 
ನಾಗ ಭೂತದ ಸಣ್ಣ ಸಂಧಿಯಲ್ಲಿ ಕೂಡ ಯಾರೋ ಐವರು ನೆಲದಲ್ಲಿ ಹೂತು ಹೋದ ಕಥಾನಕವಿದೆ .ಪಂಚ ಪಾಂಡವೆರ್ನೆಲಟ್ ತಾರಿಯೇರ್ ಐನು ಭೂತೊಳು ಮಿತ್ತು ಲಕ್ಕಿಯೇರ್ ಎಂಬಲ್ಲಿ ಸ್ಪಷ್ಟವಾಗುತ್ತದೆ .
ಒಂದು ಭೂತ ಇನ್ನೊಂದರೊಡನೆ ಸಮನ್ವಯ ಗೊಂದು ಆರಧಿಸ್ಸಲ್ಪದುವುದು ಸಾಮಾನ್ಯವಾದ ವಿಚಾರ ಅಂತೆಯೇ ಇಲ್ಲೂ ಆಗಿರಬಹುದು
ಕರಾವಳಿಯ ಸಾವಿರದೊಂದು ದೈವಗಳು ಗ್ರಂಥದ ಆಯ್ದ ಭಾಗ ,ಈ ಗ್ರಂಥದ ಮಾಹಿತಿಗಾಗಿ 9480516684 ಗೆ ಕರೆ ಅಥವಾ ವಾಟ್ಸಪ್ ಮೆಸೇಜ್ ಮಾಡಬಹುದು 
ಡಾ.ಲಕ್ಷ್ಮೀ ಜಿ ಪ್ರಸಾದ್ 

1 comment: