Sunday 20 July 2014

ಸಾವಿರದೊಂದು ದೈವಗಳು 151-300 © Dr.LAKSHMI G PRASAD

                                    copy rights reserved

151 ಕಾನಲ್ತಾಯ
152 ಕಾನತ್ತಿಲ 
153 ಕಾರಿ 
154 ಕಾರಿಂಜೆತ್ತಾಯ
155 ಕಾಲ ಭೈರವ
156 ಕಾಲ ಭೈರವಿ
157 ಕಾಳಮ್ಮ
158 ಕಾಳ ರಾಹು
159 ಕಾಳಸ್ತ್ರಿ
160 ಕಾಳಿ
161 ಕಾಳೇಶ್ವರಿ
162  ಕಾಂತಾ ಬಾರೆ 
163  ಕಾಂತು ನೆಕ್ರಿ
164 ಕಿನ್ನಿದಾರು 
165 ಕಿನ್ನಿಮಾಣಿ
166  ಕಿನ್ನಿಲು
167 ಕಿರಾತ ನಂದಿ
 168 ಕಿನ್ನಿ ಮಾಣಿ
169  ಕಿರಿಯಾಯೆ
170  ಕುಕ್ಕೆತ್ತಿ 
171 ಕುಕ್ಕಿನಂತಾಯ
172 ಕುಕ್ಕುಲತ್ತಾಯೆ
173 ಕುರ್ಕಲ್ಲಾಯೆ
174 ಕುಟ್ಟಿ ಚಾತು 
175 ಕುಡಂದರೆ
176 ಕುಡುಮ ದೈವ
177 ಕುಡುಪಾಲ್ 
178 ಕುದುರೆ ಮುಖ ದೈವ
179 ಕುರವ
180 ಕುರಿಯತ್ತಾಯೆ
181 ಕುರಿಯಾಡಿತ್ತಾಯ
182 ಕುರುವಾಯಿ 
183 ಕುಮಾರ
184 ಕುಮಾರ ಸ್ವಾಮಿ
185 ಕುರೆ ಪೆರ್ಗಡೆ 
186 ಕುಲೆ ಭೂತ
187 ಕುಲೆ ಮಾಣಿಗ
188 ಕುಲೆ ಬಂಟೆತ್ತಿ 
189  ಕುಂಞÂ ಭೂತ
190  ಕುಂಞಲ್ವ ಬಂಟ
191 ಕುಂಜಣಿಗೋ
 192 ಕುಂಜೂರಾಯ
193 ಕುಂಟಲ್ದಾಯ
194 ಕೂಜಿಲು 
195 ಕುಂಟುಕಾನ ಕೊರವ 
196 ಕುಂಡ
197 ಕುಂಡಾಯೆ
198 ಕುಂಡೋದರ
199 ಕುಂದಯ

200 ಕೆರೆ ಚಾಮುಂಡಿ
201 ಕೆಂಚರಾಯ
202 ಕೆಂಚಿ ಕೆಲುತ್ತಾಯೆ
203 ಕೆಂಜಲ್ತಾಯೆ
204 ಕೇತುರ್ಲಾಯೆ
205  ಕೇಚರಾವುತ
206 ಕ್ಷೇತ್ರ ಪಾಲ 
207 ಕೊಟ್ಯದಾಯೆ
 208 ಕೊಡನ್ಗೆತ್ತಾಯೆ
 209 ಕೊರಗ 
210  ಕೊರತಿ 
211ಕೊರಪೊಳು
212ಕೊಲ್ಯತ್ತಾಯ
213 ಕೊಲ್ಲುರಮ್ಮ
 214 ಕೋಡಿದಜ್ಜೆ
215 ಕೋಡಂಬ ದೈವ 
216 ಕೊಂಡೆಲ್ತಾಯೆ
217  ಕೋಟಿ -ಚೆನ್ನಯ 
218  ಕೋಟಿ ದೈವ
219 ಕೋಟೆ ಜಟ್ಟಿಗ 
220 ಕೋರ್ದಬ್ಬು /ಕೋಟೆದ ಬಬ್ಬು ಸ್ವಾಮಿ
221 ಕೋಟೆತ್ತ ಕಲ್ಲಾಳ
222 ಕೋಟೆರಾಯ/ಕೋಟೆದಾರ್
223 ಕೋಮರಾಡಿ
224 ಕೋಮರಾಯ
225 ಕೋಮಾರು
226 ಕೋಟಿ -ಚೆನ್ನಯ
227 ಕೊಂಕಣಿಭೂತ  
228 ಖಡ್ಗೆಶ್ವರ
229 ಖಡ್ಗೆಶ್ವರಿ
230 ಖ/ಕಂಡಿಗೆತ್ತಾಯ
231 ಗಡಿರಾವುತೆ
232 ಗಂಗೆನಾಡಿ ಕುಮಾರ
233 ಗಂಡ ಗಣ
234 ಗಂಧರ್ವ
235  ಗಿರಾವು
236 ಗಿಳಿರಾಮ
237 ಗಿಲ್ಕಿಂದಾಯೆ
238 ಗಿಂಡೆ
239 ಗುಳಿಗ 
240 ಒಕ್ಕಣ್ಣ ಗುಳಿಗ 
241 ಕಲ್ಲಾಲ್ತಿ ಗುಳಿಗ 
242 ಕಲ್ಲಾತ್ ಗುಳಿಗ 
243 ಕತ್ತಲೆ ಕಾನದ ಗುಳಿಗ 
244 ಪಾತಾಳ ಗುಳಿಗ 
245 ಕಲ್ಲಾಲ್ತಾಯ ಗುಳಿಗ 
246 ಮಾರಣ ಗುಳಿಗ 
247 ಚೌಕಾರು ಗುಳಿಗ 
248 ಪೊಟ್ಟ ಗುಳಿಗ 
248 ಮಾರಣ ಗುಳಿಗ 
250 ಕುರುವ ಗುಳಿಗ 
251 ರಾಜ ಗುಳಿಗ 
252 ಮುಕಾಂಬಿ ಗುಳಿಗ 
253 ಸುಬ್ಬಿ ಗುಳಿಗ 
254 ರುದ್ರಾಂಡಿ ಗುಳಿಗ 
255 ಪಂಜುರ್ಲಿ ಗುಳಿಗ 
256 ರಕ್ತೇಶ್ವರಿ ಗುಳಿಗ 
 257  ಮಂತ್ರ ಗುಳಿಗ
 258 ಪಾತಾಳ ಗುಳಿಗ
 259 ಒರಿ ಮಾಣಿ ಗುಳಿಗ
 260 ಆಕಾಸಗುಳಿಗೆ
261  ಚಾಮುಂಡಿ ಗುಳಿಗ
262  ರಾಜನ್ ಗುಳಿಗ
263  ಮಾರಣ ಗುಳಿಗ
264  ಅಂತ್ರ ಗುಳಿಗ
265  ನೆತ್ತೆರ್ ಗುಳಿಗ
266  ಮುಳ್ಳು ಗುಳಿಗ
267  ಮಂತ್ರ ಗುಳಿಗ
268  ಮಂತ್ರವಾದಿ ಗುಳಿಗ
269 ಭಂ ಡಾರಿ ಗುಳಿಗ
270 ಚೌಕಾರು ಗುಳಿಗ
271  ನೆತ್ತರು ಗುಳಿಗ
272 ಕೋಚು ಗುಳಿಗ
273  ಭೂಮಿ ಗುಳಿಗ
274  ಸಂಕೊಲಿಗೆ ಗುಳಿಗ
275  ಜೋಡು ಗುಳಿಗ
276 ಗುಮ್ಟೆ ಮಲ್ಲ
277  ಗುಳಿಗನ್ನಾಯ
278  ಗುರಮ್ಮ
279  ಗುರಿಕ್ಕಾರ  
280 ಗುರು ಕಾರ್ನೂರು
281  ಗೆಜ್ಜೆ ಮಲ್ಲೆ
282  ಗೋವಿಂದ
283 ಘಂಟಾ ಕರ್ಣ
284 ಚಂಡಿ
285 ಚಾಮುಂಡಿ 
286 ಕೆರೆ ಚಾಮುಂಡಿ 
287 ಪಿಲಿ ಚಾಮುಂಡಿ 
288 ಕರಿ ಚಾಮುಂಡಿ 
289 ರಕ್ತ ಚಾಮುಂಡಿ 
290 ಪಾಪೆಲು ಚಾಮುಂಡಿ 
291 ಒಲಿ ಚಾಮುಂಡಿ 
292 ಮುಡ ಚಾಮುಂಡಿ 
293 ಅಕ್ರಮಲೆ ಚಾಮುಂಡಿ 
294 ನಾಗ ಚಾಮುಂಡಿ 
295 ನೆತ್ತೆರ್ ಚಾಮುಂಡಿ 
296 ಮಲೆಯಾಳ ಚಾಮುಂಡಿ 
297 ರುದ್ರ ಚಾಮುಂಡಿ 
298 ಪೊಲಮರದ ಚಾಮುಂಡಿ 
299 ಕೋಮಾರು ಚಾಮುಂಡಿ
300 ಪೊಯಿಚಾಮುಂಡಿ
301 ಚಿಕ್ಕ ಸದಾಯಿ

Saturday 19 July 2014

ಸಾವಿರದೊಂದು ದೈವಗಳು (102-150) © Dr.LAKSHMI G PRASAD

                     
                                      copy rights reserved
102 ಕನ್ನಡ ಭೂತ
103 ಕನ್ನಡ ಬೀರ 
104  ಕನ್ನಡ ಯಾನೆ ಪುರುಷ ಭೂತ
105 ಕನ್ನಡಿಗ
106 ಕನಲ್ಲಾಯೆ
107 ಕನ್ಯಾಕುಮಾರಿ
103 ಕರ್ನಾಲ ದೈವ
104 ಕತ್ತಲೆ ಬೊಮ್ಮಯ 
105 ಕರ್ಮಲೆ ಜುಮಾದಿ (ಬಿರ್ಮಣ ಬೈದ್ಯ)
106 ಕಬಿಲ
107 ಕಂಟಿರಾಯೆ
 108 ಕಂಡದಾಯ
109 ಕರಿ ಭೂತ 
110  ಕರಿ ಚಾಮುಂಡಿ
111 ಕರಿಮಾರ ಕೊಮಾಳಿ
112 ಕರಿಯ ನಾಯಕ
113 ಕರಿಯ ಮಲ್ಲ
114 ಕರಿಯ ಮಲ್ಲಿ
 115 ಕರಿಯ ಮಲೆಯೆ
 116 ಕರುಂಗೋಲು ದೈವ
117 ಕಳಲ
118 ಕಳರ್ಕಾಯಿ  
119 ಕಲ್ಲೂರತ್ತಾಯೆ
120 ಕಲ್ಲೇರಿತ್ತಾಯ
121 ಕಲ್ಲೆಂಚಿನಾಯೆ
122 ಕಳ್ಳ (ಕಳುವೆ) ಭೂತ
123 ಕಂಚಿನ ದೇವಿ
124 ಕಂಡ ಕರ್ಣಿ
125 ಕಂಬೆರ್ಲು
126 ಕಂಬಳತ್ತಾಯ
127 ಕಂಬಳದ ಬಂಟ
128  ಕಲ್ಕುಡ
129 ಕಲ್ಲುರ್ಟಿ
 130 ಜೋಡು ಕಲ್ಲುರ್ಟಿ
 131 ಹಾದಿ ಕಲ್ಲುರ್ಟಿ
 132 ಒರ್ತೆ ಕಲ್ಲುರ್ಟಿ
134 ಪಾಷಾಣ ಮೂರ್ತಿ
 135 ರಾಜನ್ ಕಲ್ಕುಡ
136 ಉರಿ ಮರ್ತಿ 
137 ಅಂಗಾರೆ ಕಲ್ಕುಡ

 138 ಸತ್ಯ ಕುಮಾರ
139 ಸತ್ಯ ದೇವತೆ
 140 ಇಷ್ಟ ದೇವತೆ
141 ಪ್ರಸನ್ನ ಮೂರ್ತಿ 
142 ಉಗ್ರ ಮೂರ್ತಿ
143 ಒರ್ತೆ 
145 ಕಾರ್ಕಳತ್ತಾಯ
146ಕಾಚು ಕುಜುಂಬ
147 ಕಾಜಿ ಮದಿಮ್ಮಾಲ್ ಕುಲೆ 
148 ಕಾಡೆದಿ
149 ಕಾನದ
150 ಕಾಯರಡಿ ಬಂಟೆ


  ಸಾವಿರದೊಂದು ದೈವಗಳು –(C)ಡಾ.ಲಕ್ಷ್ಮೀ ಜಿ ಪ್ರಸಾದ ,ಕನ್ನಡ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜು ಬೆಳ್ಳಾರೆ ,ಸುಳ್ಯ
 copy rights reserved 





ಸಾವಿರದೊಂದು ದೈವಗಳು (51-101)- © Dr.LAKSHMI G PRASAD

                             


 copy rights reserved

51 ಉಮ್ಮಯೆ
52 ಉಮ್ಮಳಾಯ
53ಉಮ್ಮಳ್ತಿ
54  ಉರವೆ
55 ಉರಿ ಮರ್ಲ
56 ಉರಿ ಮರ್ತಿ 
57 ಉರಿಮಾರಿ
58 ಉರಿಯಡಿತ್ತಾಯ 
59  ಉಳ್ಳಾಕುಲು
60 ಉಳ್ಳಾಯ
61 ಉಳ್ಳಾಲ್ತಿ
62 ಉಳಿಯತ್ತಾಯ
63 ಎಡ್ಮೇರು ಕಟ್ಟಿಂಗೇರಿ
64 ಎರು 
65 ಎರು ಕನಡೆ
66 ಎರು ಕೋಪಾಳೆ
67ಎರು ಬಂಟ
68 ಎರು ಶೆಟ್ಟಿ
69  ಎರಿಯಜ್ಜ
70 ಎಲ್ಯ ಉಳ್ಳಾಕುಳು
71 ಎಲ್ಯಕ್ಕೇರ್
72 ಎಲ್ಯನ್ನೇರ್
73 ಎಳೆಯ ಭಗವತಿ (ಮಾಹಿತಿ :ರಘುನಾಥ ವರ್ಕಾಡಿ )
74 ಐತ ಮಾಮೆ (ರಘುನಾಥ ವರ್ಕಾಡಿ )
75 ಐವೆರ್ ಬಂಟ್ರ (ರಘುನಾಥ ವರ್ಕಾಡಿ )
76 ಒಕ್ಕು ಬಲ್ಲಾಳ
 77 ಒಡಿಲುತ್ತಾಯೆ
78 ಒಲಿ ಚಾಮುಂಡಿ
79   ಒಲಿ ಪ್ರಾಂಡಿ
80 ಒರು ಬಾಣಿಯೆತ್ತಿ
81 ಒರ್ಮುಗೊತ್ತಾಯೆ
82 ಒರಿ ಉಲ್ಲಾಯೆ
83 ಒರ್ಮಲ್ತಾಯೆ
84 ಒರ್ಮುಲ್ಲಾಯೆ
85 ಒಲಿ ಮರ್ಲೆ
86 ಒಡ್ಡಮರಾಯ 
87 ಒಂಜರೆ ಕಜ್ಜದಾಯೆ
88 ಓಟೆಜರಾಯ
89 ಓಡಿಲ್ತಾಯ
90 ಓಪೆತ್ತಿ ಮದಿಮಾಲ್ /ವಾಪತ್ತಿ ಮದಿಮಾಲ್(ಮಾಹಿತಿ ಸಂಕೇತ ಪೂಜಾರಿ)
91 ಕಚ್ಚೂರ ಮಾಲ್ಡಿ
92   ಕಚ್ಚೆ ಭಟ್ಟ 

93 ಕಟದ
94 ಕಟ್ಟಳ್ತಾಯೆ
95 ಕಡವಿನ ಕುಂಞ
96 ಕಡರುಕಳಿ 
97  ಕಡಂತಾಯ
98 ಕಡಂಬಳಿತ್ತಾಯ
99 ಕಡೆಂಜಿ ಬಂಟ
100  ಕತಂತ್ರಿ
101 ಕನಪಡಿತ್ತಾಯ



51 ಉಮ್ಮಯೆ
52 ಉಮ್ಮಳಾಯ
53ಉಮ್ಮಳ್ತಿ
54  ಉರವೆ
55 ಉರಿ ಮರ್ಲ
56 ಉರಿ ಮರ್ತಿ 
57 ಉರಿಮಾರಿ
58 ಉರಿಯಡಿತ್ತಾಯ 
59  ಉಳ್ಳಾಕುಲು
60 ಉಳ್ಳಾಯ
61 ಉಳ್ಳಾಲ್ತಿ
62 ಉಳಿಯತ್ತಾಯ
63 ಎಡ್ಮೇರು ಕಟ್ಟಿಂಗೇರಿ
64 ಎರು 
65 ಎರು ಕನಡೆ
66 ಎರು ಕೋಪಾಳೆ
67ಎರು ಬಂಟ
68 ಎರು ಶೆಟ್ಟಿ
69  ಎರಿಯಜ್ಜ
70 ಎಲ್ಯ ಉಳ್ಳಾಕುಳು
71 ಎಲ್ಯಕ್ಕೇರ್
72 ಎಲ್ಯನ್ನೇರ್
73 ಎಳೆಯ ಭಗವತಿ
74 ಐತ ಮಾಮೆ
75 ಐವೆರ್ ಬಂಟರ್
76 ಒಕ್ಕು ಬಲ್ಲಾಳ
 77 ಒಡಿಲುತ್ತಾಯೆ
78 ಒಲಿ ಚಾಮುಂಡಿ
79   ಒಲಿ ಪ್ರಾಂಡಿ
80 ಒರು ಬಾಣಿಯೆತ್ತಿ
81 ಒರ್ಮುಗೊತ್ತಾಯೆ
82 ಒರಿ ಉಲ್ಲಾಯೆ
83 ಒರ್ಮಲ್ತಾಯೆ
84 ಒರ್ಮುಲ್ಲಾಯೆ
85 ಒಲಿ ಮರ್ಲೆ
86 ಒಡ್ಡಮರಾಯ 
87 ಒಂಜರೆ ಕಜ್ಜದಾಯೆ
88 ಓಟೆಜರಾಯ
89 ಓಡಿಲ್ತಾಯ
90 ಓಪೆತ್ತಿ ಮದಿಮಾಲ್
91 ಕಚ್ಚೂರ ಮಾಲ್ಡಿ
92   ಕಚ್ಚೆ ಭಟ್ಟ 

93 ಕಟದ
94 ಕಟ್ಟಳ್ತಾಯೆ 
95 ಕಡವಿನ ಕುಂಞ
96 ಕಡರುಕಳಿ 
97  ಕಡಂತಾಯ
98 ಕಡಂಬಳಿತ್ತಾಯ
99 ಕಡೆಂಜಿ ಬಂಟ
100  ಕತಂತ್ರಿ
101 ಕನಪಡಿತ್ತಾಯ







ಸಾವಿರದೊಂದು ಭೂತಗಳ/ದೈವಗಳ ಹೆಸರುಗಳು (1-50) © Dr.LAKSHMI G PRASAD

                   
   
copy rights reserved
1 ಅಕ್ಕಚ್ಚು
2 ಅಕ್ಕಮ್ಮ ದೈಯಾರು 
3 ಅಕ್ಕ ಬೋಳಾರಿಗೆ
4 ಅಕ್ಕೆರಸು
5 ಅಕ್ಕೆರಸು ಪೂಂಜೆದಿ
6 ಅಕ್ಕೆರ್ಲು 
7 ಅಗ್ನಿ ಚಾಮುಂಡಿ ಗುಳಿಗ (ಮುಕಾಂಬಿ ಗುಳಿಗ )
8 ಅಚ್ಚು ಬಂಗೇತಿ
9ಅಜ್ಜ ಬೊಲಯ
10 ಅಜ್ಜಿ ಭೂತ 
11 ಅಜ್ಜೆರ್ 
12 ಅಜ್ಜೆರ್ ಭಟ್ರು
13ಅಟ್ಟೋಡಾಯೆ
14 ಅಡ್ಕತ್ತಾಯ
15 ಅಡ್ಯಲಾಯೆ
16 ಅಡ್ಯಂತಾಯ
17 ಅಡ್ಕದ ಭಗವತಿ
18 ಅಡಿಮಣಿತ್ತಾಯ
19 ಅಡಿಮರಾಯ
20  ಅಡಿಮರಾಂಡಿ
21 ಅಡ್ಡೋಲ್ತಾಯೆ
22 ಅಣ್ಣಪ್ಪ
23 ಅತ್ತಾವರ ದೆಯ್ಯೊಂಗುಳು  (ಅಣ್ಣ )
24 ಅನ್ನರ ಕಲ್ಲುಡೆ
25 ಅಬ್ಬಗ 
26 ಅಬ್ಬೆರ್ಲು
27  ಅಬ್ಬೆ ಜಲಾಯ
28  ಅರಬ್  ಭೂತ
29 ಅರಸಂಕುಳು 
30  ಅರಸಂಕಲ
31 ಅರಸು ಭೂತ
32 ಅರಸು ಮಂಜಿಷ್ಣಾರ್ 
33  ಅಲ್ನತ್ತಾಯೆ/ಅಲ್ಲತ್ತಾಯೆ
34 ಅಂಕೆ
35 ಅಂಗಾರೆ ಕಲ್ಕುಡ
36 ಅಂಗಾರ ಬಾಕುಡ
37 ಅಂಗಣತ್ತಾಯೆ
38 ಅಂಬೆರ್ಲು
39 ಅಂಮಣ ಬನ್ನಾಯ
40 ಆಚಾರಿ ಭೂತ
41ಆನೆ ಕಟ್ನಾಯೆ
42  ಆಲಿ
43 ಆಟಿ ಕಳಂಜೆ 
44 ಇಷ್ಟ ಜಾವದೆ

45 ಈರ ಭದ್ರೆ
46 ಈಸರ ಕುಮಾರೆ 
47 ಉಚ್ಚೆ ಹಂದಿ
48 ಉಡ್ದೋತ್ತಾಯೆ
49 ಉದ್ರಾಂಡಿ  
50 ಉದ್ದ ಕನಡ

Friday 11 July 2014

ಫೇಸ್ ಬುಕ್ ನಲ್ಲಿ ಹೆಣ್ಣು ಮಕ್ಕಳ ಫೇಸ್ ಗಳು (11 ಜುಲೈ 2014 ರಂದು ಉದಯವಾಣಿ ಮಹಿಳಾ ಸಂಪದದಲ್ಲಿ ಪ್ರಕಟಿತ ಲೇಖನ )-ಡಾ.ಲಕ್ಷ್ಮೀ ಜಿ ಪ್ರಸಾದ

                                


ಅತ್ಯಾಚಾರಗಳಲ್ಲಿ ಆಕರ್ಷಣೆಯಿಂದ ನಡೆಯುವ ಅತ್ಯಾಚಾರ, ಮಾನಸಿಕ ಅಸ್ವಸ್ಥರಿಂದ ನಡೆಯುವ ಅತ್ಯಾಚಾರ, ಕುಡುಕರಿಂದ ನಡೆಯುವ ಅತ್ಯಾಚಾರ, ಪ್ರತೀಕಾರಕ್ಕಾಗಿ ನಡೆಯುವ ಅತ್ಯಾಚಾರ ಮೊದಲಾದ ವಿಧಗಳು ಇವೆ. ಪ್ರಸ್ಥುತ ವರದಿಯಲ್ಲಿ ಇರುವುದು ಮಾನಸಿಕ ದೌರ್ಬಲ್ಯಲ್ಯದಿಂದ ಆಗಿರುವುದು. ನಮ್ಮಲ್ಲಿ ಅತಿಹೆಚ್ಚು ಆಕರ್ಷಣೆಯಿಂದ ನಡೆಯುವ ಅತ್ಯಾಚಾರ ನಡೆಯುತ್ತವೆ. ಹೆಣ್ಣುಮಕ್ಕಳ ನಡೆ ಸರಿ ಇದ್ದರೆ ಅದನ್ನು ಸುಲಭವಾಗಿ ನಿಯಂತ್ರಿಸಬಹುದು. ದೇಶದ ಹೆಣ್ಣುಮಕ್ಕಳು ಎಷ್ಟು ಹಾದಿ ತಪ್ಪಿದರೂ ಇಷ್ಟೊಂದು ಕಡಿಮೆ ಪ್ರಮಾಣದಲ್ಲಿ ಅತ್ಯಾಚಾರ ನಡೆಯುತ್ತಿದೆ ಎಂದರೆ ನಮ್ಮ ಗಂಡುಮಕ್ಕಳು ನಿಜಕ್ಕೂ ಅಭಿನಂದಾರ್ಹರು.

ಕೋಲಾರದಲ್ಲಿ ಬೆನ್ನು ಬೆನ್ನಿಗೆ ಶಾಲಾ ವಿದ್ಯಾರ್ಥಿನಿಯರ ಮೇಲಾದ ಅತ್ಯಾಚಾರವನ್ನು ಖಂಡಿಸಿ ಫೇಸ್ ಬುಕ್ ನಲ್ಲಿ ಹಾಕಿದ ಪೋಸ್ಟ್ ಗೆ ಬಂದ ಒಂದು ಪ್ರತಿಕ್ರಿಯೆ ಇದು  !
“ಜಗತ್ತಿನ ಅತ್ಯಂತ ಕ್ರೂರ ಪ್ರಾಣಿ ಯಾವುದು ತಿಳಿದಿದೆಯೇ ?ಇಲ್ಲವಾದಲ್ಲಿ  ಒಂದು ಕನ್ನಡಿ ತೆಗೆದು ಬಗ್ಗಿ ನೋಡಿ “ ಎಂಬ ಒಂದು  ಹಾಸ್ಯವನ್ನು  ಫೇಸ್ ಬುಕ್ ನಲ್ಲಿ ಓದಿ ನಗಾಡಿದ್ದೆ ಕೆಲ ದಿನಗಳ ಹಿಂದೆ .
ಮೇಲಿನ ಪ್ರತಿಕ್ರಿಯೆ ಓದಿದಾಗ " ಅದು ತಮಾಷೆಯಲ್ಲ ವಾಸ್ತವ ಜಗತ್ತಿನ ಅತ್ಯಂತ ಕ್ರೂರ ಪ್ರಾಣಿ ಮನುಷ್ಯನೇ ಖಂಡಿತಾ" ಎನ್ನಿಸಿತು .
ಅತ್ಯಾಚಾರದಂಥಹ ಅಕ್ಷಮ್ಯ. ಹೇಯ ,ಕ್ರೂರ ಕಾರ್ಯಕ್ಕೂ ಕೂಡ ಹೆಣ್ಣನ್ನೇ ಕಾರಣ ಮಾಡುವ ಹೃದಯ ದಾರಿದ್ರ್ಯತೆಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ.!
ಹೆಂಗಸರ ಬಗ್ಗೆ ಯಾಕೆ ಅವಜ್ಞೆ ಈ ಸಮಾಜಕ್ಕೆ? ..ನನಗೆ ಅರ್ಥವಾಗುತ್ತಿಲ್ಲ .

 “ಹೆಂಗಸರಿಗೆ ಮಾತನಾಡಲು ಬರುವುದಿಲ್ಲ “ ಎನ್ನುತ್ತಾರೆ ವಿಶ್ವವಿದ್ಯಾಲಯವೊಂದರ ನಿವೃತ್ತ ಕನ್ನಡ ಪ್ರೊಫೆಸ್ಸರ್ ಒಬ್ಬರು
“ಬ್ಯಾಟರಿಗೆ ಒಂದು ಪೊಸಿಟಿವ್ ಮತ್ತು ಒಂದು ನೆಗೆಟಿವ್ ತುದಿಗಳು ಇರುತ್ತವೆ ,ಹೆಂಗಸರಿಗೆ ನೆಗೆಟಿವ್ ತುದಿ ಮಾತ್ರ ಇರುತ್ತದೆ “ಎಂದು ತಮ್ಮ ಸಹೋದ್ಯೋಗಿಗಳು ಮಾತನಾಡಿಕೊಳ್ಳುವ ಬಗ್ಗೆ  ವೈದ್ಯ ಉಪನ್ಯಾಸಕರೊಬ್ಬರು ಹೇಳುತ್ತಾರೆ .
ಇತ್ತೀಚೆಗೆ ಭೇಟಿಯಾದ ಖ್ಯಾತ ವೈದ್ಯ ಚಿಂತಕರೊಬ್ಬರು ಸ್ತ್ರೀಯರ ಮೇಲಿನ ಅತ್ಯಾಚಾರ ಪ್ರಕರಣಗಳ ಬಗ್ಗೆ ಮಾತಾಡುತ್ತಾ ಅದಕ್ಕೆ ಸ್ತ್ರೀಯರ ವೇಷ ಭೂಷಣ ಕೂಡ ಕಾರಣ ಎಂದು ಹೇಳಿದರು !

ಕೋಲಾರದಲ್ಲಿ ಅತ್ಯಾಚಾರಕ್ಕೊಳಗಾದ ಶಾಲಾ ಬಾಲಕಿಯರು ಅಶ್ಲೀಲ ಬಟ್ಟೆ ತೊಟ್ಟಿದ್ದರೆ? ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಉಜಿರೆಯ ವಿದ್ಯಾರ್ಥಿನಿ ಸೌಜನ್ಯ ಆಗಲಿ ,ಸೌಮ್ಯ ಭಟ್ ಆಗಲಿ ಯಾರು ಕೂಡ ಕಾಮಪ್ರಚೋದಕವಾದ ವೇಷ ಭೂಷಣ ಹೊಂದಿರಲಿಲ್ಲ.ಮೂರು ತಿಂಗಳ ಹಸುಳೆ ಯಿಂದ ಹಿಡಿದು ಎಂಬತ್ತು ವರ್ಷದ ಅಜ್ಜಿಯನ್ನು ಬಿಡದೆ ಅತ್ಯಾಚಾರ ಮಾಡಿದ್ದಾರೆ
ಅತ್ಯಾಚಾರಕ್ಕೆ ಒಳಗಾದ ಸ್ತ್ರೀಯರು ಯಾರೂ ತುಂಡು ಬಟ್ಟೆ ಧರಿಸಿರಲಿಲ್ಲ ಎನ್ನುವುದು ವಾಸ್ತವ ..ಇಷ್ಟಿದ್ದೂ ಸುಶಿಕ್ಷಿತರಾದ ಮಂದಿ ಕೂಡ ಅತ್ಯಾಚಾರಕ್ಕೆ ಹೆಣ್ಣನ್ನೇ ಬೊಟ್ಟು ಮಾಡುತ್ತಾರೆ .

ಇತ್ತೀಚೆಗೆ ಫೇಸ್ ಬುಕ್  ಗುಂಪು ಒಂದರಲ್ಲಿ ಯಾರೋ ಒಬ್ಬರು ಅತ್ಯಾಚಾರಕ್ಕೆ ಯಾರು ಕಾರಣ ?ಹೆಣ್ಣು ಅಥವಾ ಗಂಡು ಎಂದು ಪ್ರಶ್ನೆ ಕೇಳಿದ್ದರು .ಅದಕ್ಕೆ ಅನೇಕ ಮಂದಿ ಹೆಣ್ಣೇ ಕಾರಣ ಎಂದಿದ್ದರೆ ,ಕೆಲ ಮಂದಿ ಇಬ್ಬರೂ ಕಾರಣ ಎಂದಿದ್ದರು .ಗಂಡಿನ ವಿಕೃತ ಮನಸು ಕಾರಣ ಎಂದು ಒಬ್ಬರೂ ಹೇಳಿರಲಿಲ್ಲ.ಬಹುಶ ಇದನ್ನೇ ಪುರುಷ ಪ್ರಧಾನ ಸಮಾಜ ಎನ್ನುವುದು ಇರಬೇಕು .ಗಂಡಿನ ಅಕ್ಷಮ್ಯ ಅಪರಾಧಗಳಿಗೆ ಕೂಡಾ ಹೆಣ್ಣನ್ನು ಹೊಣೆ ಮಾಡುವುದು ಇದರ ಲಕ್ಷಣ ಇರಬೇಕು.

ಇದೇ ರೀತಿ ಒಂದೆರಡು ತಿಂಗಳ ಹಿಂದೆ  ಇನ್ನೊಂದು ಫೇಸ್ ಬುಕ್ ಗುಂಪು ಒಂದರಲ್ಲಿ ಹಾಕಿದ್ದ ಒಂದು ಪೋಸ್ಟ್  ಗಮನ ಸೆಳೆಯಿತು .ಅದು ಕಾಸರಗೋಡು ಪರಿಸರದಲ್ಲಿ ಹುಡುಗಿಯರು ಲವ್ / ಮತಾಂತರದ ಜಾಲಕ್ಕೆ ಬೀಳುವ ಬಗ್ಗೆ ಬಂದ ವಾರ್ತಾ ಪತ್ರಿಕೆಯೊಂದರ ಭಾಗ ಆಗಿತ್ತು .ಇತ್ತೀಚಿಗೆ ಲವ್/ಮತಾಂತರದ ಜಾಲಕ್ಕೆ ಸಿಲುಕಿದ ಯುವತಿಯನ್ನು ಹುಡುಕಿ ಹಿಂದೆ ಕರೆದು ಕೊಂಡು ಬಂದಿದ್ದರು .ಆ ಯುವತಿ ಯಾವ ರೀತಿ ಜಾಲ ಬೀಸುತ್ತಾರೆ ಎಂಬ ಬಗ್ಗೆ ಮಾಹಿತಿ ನೀಡಿದ್ದು ಅದರಲ್ಲಿ ಇತ್ತು .ಆರಂಭದಲ್ಲಿ ಯುವತಿಯರ ಸ್ನೇಹಿತರ ಮೂಲಕ ಪರಿಚಯ ಮಾಡಿಕೊಂಡು ಮಾದಕ ಪದಾರ್ಥಗಳನ್ನು ಸೇರಿಸಿದ ಸಿಹಿ ತಿಂಡಿ ಚಾಕೋಲೆಟ್ ಗಳನ್ನು ನೀಡುತ್ತಾರೆ .ಆ ಚಾಕೋಲೆಟ್ ಗೆ ಮಾದಕ ವಸ್ತು ಸೇರಿಸಿರುವುದರಿಂದ ಇವರು ಅದಕ್ಕೆ ಅಡಿಕ್ಟ್ ಆಗುತ್ತಾರೆ .ಅವರು ಕೊಡುವ  ಮಾದಕ ವಸ್ತುವಿಗಾಗಿ ಸ್ನೇಹ ಮುಂದುವರಿಯುತ್ತದೆ .ಮತ್ತೆ ಐ ಪ್ಯಾಡ್ ಗಳನ್ನು ಕೊಟ್ಟು ಮನ ಪರಿವರ್ತನೆ ಮಾಡುತ್ತಾರೆ ಇತ್ಯಾದಿ ಮಾಹಿತಿ ಅದರಲ್ಲಿತ್ತು .

ಇದಕ್ಕೆ ಕೆಲವರು ನೀಡಿದ ಪ್ರತಿಕ್ರಿಯೆ ದಿಗ್ಭ್ರಮೆ ಗೊಳಿಸಿತ್ತು !ಒಬ್ಬರು ಹೀಗೆ ಆಗುವುದಕ್ಕೆ ಹೆಣ್ಣು ಮಕ್ಕಳಿಗೆ ಅತಿಯಾದ ಸ್ವಾತಂತ್ರ್ಯ ನೀಡಿದ್ದು ಕಾರಣ ,ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಮನೆ ಬಿಟ್ಟು ಹೊರ ಬರುವ ಅವಕಾಶ ಇರಲಿಲ್ಲ .ಈಗ ಇವರಿಗೆ ಅಂತ ಸ್ವಾತಂತ್ರ್ಯ ನೀಡಿದ್ದು ತಪ್ಪು ಎಂದು ಹೇಳಿದರೆ ಇನ್ನೊಬ್ಬರು ಮದುವೆ ವಯಸ್ಸನ್ನು 14 ವರ್ಷಕ್ಕೆ ಇಳಿಸ ಬೇಕು ಎಂದು ಅಭಿಪ್ರಾಯಿಸಿದರು .
ಇನ್ನೊಬ್ಬರು ನನ್ನ ಮೂರು ವರ್ಷದ ಮೊಮ್ಮಗ ಕೂಡಾ ಬೇರೆಯವರು ಕೊಟ್ಟ ತಿಂಡಿ ತೀರ್ಥ ತಿನ್ನುವುದಿಲ್ಲ .ಈ ಹುಡುಗಿಯರಿಗೆ ಅಷ್ಟು ಬುದ್ಧಿ ಇಲ್ಲವೇ ಎಂದು ವಾದಿಸಿದರು! ಮತ್ತೊಬ್ಬರು ಹೆಣ್ಣು ಮಕ್ಕಳನ್ನು ಕೆಟ್ಟ ಭಾಷೆಯಲ್ಲಿ ಬೈದು “ಹೆಣ್ಣು ಮಕ್ಕಳ ಸೊಂಟ ಮುರಿದು ಮನೆಯಲ್ಲಿ ಕೂಡಿ ಹಾಕ ಬೇಕು” ಎಂದು ಹೇಳಿದರು !ಅವಳನ್ನು ಹಿಂದೆ ಕರೆದು ಕೊಂಡು  ಬಂದದ್ದೇಕೆ ?ಅಲ್ಲಿಯೇ ಸಾಯಲಿ ಎಂದು ಬಿಡ ಬೇಕು ಎಂದು ಇನ್ನೊಬ್ಬರು ಹೇಳಿದರು .ಅನೇಕರಿಗೆ  ಇದು ಹಾಸ್ಯದ ವ್ಯಂಗ್ಯದ ವಸ್ತು ಆಯಿತು !

ಯಾರೋ ಒಬ್ಬರು ಫೇಸ್ ಬುಕ್ ಗುಂಪಿನಲ್ಲಿ ಕುಕ್ಕರ್ ಸಿಡಿದು ಗಾಯಗೊಂಡ ಓರ್ವ  ಮಹಿಳೆಯ ಚಿತ್ರ ಹಾಕಿದ್ದರು .ಅದಕ್ಕೆ ಪ್ರತಿಕ್ರಿಯಿಸಿದ ಅನೇಕರು ಈಗಿನ ಹುಡುಗಿಯರು ಅಮ್ಮಂದಿರಿಗೆ ಅಡುಗೆಗೆ ಸಹಾಯ ಮಾಡುವುದಿಲ್ಲ ,ಶೋಕಿ ಡ್ರೆಸ್ ಹಾಕಿಕೊಂಡು ತಿರುಗಾಡುತ್ತಾರೆ  ಇತ್ಯಾದಿಯಾಗಿ  ಅಸಂಬದ್ಧ ಕಾಮೆಂಟ್  ಮಾಡಿದ್ದರು !ಯಾರೊಬ್ಬರೂ ಅದನ್ನು ಪ್ರಶ್ನಿಸಲೂ ಇಲ್ಲ,ಹುಡುಗಿಯರನ್ನು ದೂಷಿಸಲು ಕಾರಣಕ್ಕಾಗಿ ಕಾಯುತ್ತಿರುತ್ತಾಯೇ  ನಮ್ಮ ಸಮಾಜ ಮಂದಿ?! ಎಂದು ಇದನ್ನು ಓದುವಾಗ ಅನ್ನಿಸಿತು .

ಇದನ್ನೆಲ್ಲ ಓದಿದ, ಗಮನಿಸಿದ ಸಹೃದಯರೊಬ್ಬರು “ನಾವು ನಮಗೆ ಹೆಣ್ಣು ಮಗಳು ಬೇಕೇ ಬೇಕು ಎಂದು ದೇವರಿಗೆಲ್ಲ ಹರಿಕೆ ಹಾಕಿ ಹಂಬಲಿಸಿ ಮಗಳನ್ನು ಪಡೆದೆವು .ಈಗ ಅನ್ನಿಸುತ್ತದೆ .ಅದು ತಪ್ಪಾಯಿತು ಎಂದು .ಹೆಣ್ಣು ಹೆತ್ತ ತಪ್ಪಿಗೆ ನಾವು ಏನೆಲ್ಲಾ ಅನುಭವಿಸ ಬೇಕು.ಹೆಣ್ಣು ಮಕ್ಕಳನ್ನು ರಕ್ಷಣೆ ಯೇ ಒಂದು ಸವಾಲು .ಹೆಣ್ಣು ಮಕ್ಕಳಿಗೆ ಏನಾದರು ಆದರೆ ಎಲ್ಲ ಕಡೆಯಿಂದಲೂ ಮಾತು ಕೇಳಬೇಕು ”ಎಂದು ಖೇದದಿಂದ ಹೇಳಿದರು .

ಒಂದೆಡೆ ಆರು ತಿಂಗಳ ಮಗುವಿನ ಮೇಲೆ ಅತ್ಯಾಚಾರ ,ಇನ್ನೊಂದೆಡೆ ಎಲ್ ಕೆ ಜಿ ಮಗುವಿನ ಮೇಲೆ ಶಾಲಾ ವಾಹನ ಚಾಲಕನಿಂದ ಅತ್ಯಾಚಾರ .ಶಾಲೆಯಲ್ಲಿ ಶಿಕ್ಷಕರೇ  ಲೈಂಗಿಕ ಕಿರು ಕುಳ  ಕೊಟ್ಟ ವಿಚಾರಗಳು ಕೇಳಿ ಬರುತ್ತಿವೆ .
ಮುಂದೆ ಹೇಗೋ ಓದಿ ಕೆಲಸಕ್ಕೆ ಸೇರಿದರೆ ಸಹೋದ್ಯೋಗಿಗಳಿಂದ ಮೇಲಧಿಕಾರಿಗಳಿಂದ  ಕಿರು ಕುಳ ,ಲಿಂಗ ತಾರ ತಮ್ಯ !ಮನೆಯಿಂದ ಕಾಲು ಹೊರಗಿಟ್ಟರೆ ಕಾಮುಕರ ಕಾಟ .ಹೆಣ್ಣು ಮಕ್ಕಳಿಗೆ ಮನೆ ಕೂಡ ಸುರಕ್ಷಿತ ತಾಣ ಅಲ್ಲ .ಮಗಳನ್ನೇ ಅತ್ಯಾಚಾರ ಮಾಡುವ ತಂದೆ, ಚಿಕ್ಕಪ್ಪ, ಮಾವಂದಿರು,ಕೆಲಸದವರು  .ಆರು ತಿಂಗಳ ಮಗು ಎಂದು ನೋಡದೆ ಎಂಬತ್ತೈದು ವರ್ಷದ ಅಜ್ಜಿ ಎಂದು ಬಿಡದೆ ಎಲ್ಲ ವಯೋಮಾನದ ಹೆಂಗಸರನ್ನು ಅತ್ಯಾಚಾರ ಮಾಡಿ ಕೊಂದು ಬಿಸಾಡುವುದು ಅಲ್ಲಲ್ಲಿ ಕಂಡು ಬರುತ್ತಿದೆ !

ಒಂದೆಡೆ ಲೈಂಗಿಕ ದೌರ್ಜನ್ಯ ,ಲಿಂಗ ತಾರತಮ್ಯದ ಪಿಶಾಚಿಗಳು ಕಾಡಿದರೆ ಇನ್ನೊಂದೆಡೆ ಲವ್/ಮತಾಂತರದ ಜಾಲ . ಹಾಡು ಹಗಲೇ ಅಪಹರಿಸಿ ಅತ್ಯಾಚಾರ ಮಾಡಿ ಕೊಂದು ಬಿಸಾಡಿದರೂ ಅಪರಾಧಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸದ ದುರ್ಬಲ ಕಾನೂನು ವ್ಯವಸ್ಥೆ .ದೂರು ಕೊಡಲು ಹೋದವರನ್ನೇ ಅಪರಾಧಿಗಳಂತೆ ಕಾಡುವ ವ್ಯವಸ್ಥೆ ಎಂಬ ಅವ್ಯವಸ್ಥೆ !
 ಇದೆಲ್ಲಕ್ಕೂ  ಹೆಣ್ಣು ಮಕ್ಕಳನ್ನೂ ಅವರ ಹೆತ್ತವರನ್ನೂ ಹೊಣೆ ಮಾಡುವ ಸಮಾಜ ! 

ದೆಹಲಿಯ ಹುಡುಗಿಯ ವಿಚಾರದಲ್ಲಿ “ಅಣ್ಣಾ ಅಂತ ಬೇಡಿ ಕೊಳ್ಳ ಬೇಕಿತ್ತು ,ಅವಳು ಪ್ರತಿಭಟಿಸ ಬಾರದಿತ್ತು” .”ಅವಳು ಪ್ರತಿಭಟಿಸಿದ ಕಾರಣ ಅವಳನ್ನು ಕೊಂದು ಹಾಕಿದರು” .”ಹೆಣ್ಣು ಮಕ್ಕಳು ಮನೆ ಬಿಟ್ಟು ಹೊರಗೆ ಹೋಗುವ ಕಾರಣವೇ ಹೀಗೆ ಆಗುವುದು .ನನ್ನ ಮಗಳನ್ನು ನಾನು ಹೊರಗೆ ಅಲೆಯಲು ಬಿಡುವುದಿಲ್ಲ .ಅಲೆಯಲು ಹೋಗಿ ರಾತ್ರಿ ಮಾಡಿ ಬಂದರೆ ಮನೆಗೆ ಸೇರಿಸುತ್ತಿರಲಿಲ್ಲ “ಇತ್ಯಾದಿ ನಾನಾ ಮಾತುಗಳು ಆಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ .

 ಹೆಣ್ಣುಮಕ್ಕಳು ಮೈ ಕೈ ಕಾಣುವ ವೇಷ ಭೂಷಣ ಧರಿಸುವುದೇ ಇದಕ್ಕೆ ಕಾರಣ .ಗಂಡಸರ ಮನಸ್ಸು ಇಂಥ ವೇಷ ಭೂಷಣಗಳಿಂದ ಉತ್ತೇಜನ ಗೊಳ್ಳುತ್ತದೆ .ಹೆಣ್ಣು ಮಕ್ಕಳಿಗೆ ಬೇಗ ಮದುವೆ ಮಾಡಬೇಕು .ಇಲ್ಲದಿದ್ದರೆ ಹೀಗೇ ಆಗುವುದು .ಹೆಣ್ಣು ಮಕ್ಕಳನ್ನು ತಂದೆ ತಾಯಂದಿರು ಹದ್ದು ಬಸ್ತಿನಲ್ಲಿ ಇಡದ ಕಾರಣ ಹೀಗೆ ಆಗುವುದು ಇತ್ಯಾದಿ ಮಾತುಗಳು ಜನರಿಂದ 

ತಮ್ಮ ಮಗಳಿಗೆ ಅನ್ಯಾಯವಾಗಿದೆ ಎಂದು ಸೌಜನ್ಯಾಳ ತಂದೆ ತಾಯಿ ಹೇಳಿದರೆ ಆ ಬಗ್ಗೆ ಮಾತನಾಡುವುದೇ ಅಶ್ಲೀಲತೆ, ನಾಚಿಗೆ ಕೇಡು ಎಂದು ಮಹಿಳಾ ಸಾಹಿತಿ ಯೊಬ್ಬರು ಹೇಳಿದ ವಿಚಾರ ಎಲ್ಲರಿಗೂ ತಿಳಿದದ್ದೇ ಆಗಿದೆ.
ಫೇಸ್ ಬುಕ್ ನಂತಹ  ಸಾಮಾಜಿಕ ಅಂತರ್ಜಾಲ ತಾಣಗಳನ್ನು ಸಾಮಾನ್ಯವಾಗಿ ಸಾಕಷ್ಟು ಶಿಕ್ಷಣ ಪಡೆದವರೇ ಬಳಸುತ್ತಾರೆ.ಆದರೆ ಫೇಸ್ ಬುಕ್ ನಂತಹ  ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಕೂಡಾ  ಹೆಣ್ಣು ಮಕ್ಕಳ ಅವಹೇಳನ ಸಹಿಸಲು ಆಗುವುದಿಲ್ಲ !

ಯಾವಾಗಲೋ ನಮ್ಮ ದೇಶಕ್ಕೆ  ವಿದೇಶಿ ಮಹಿಳೆಯರು ಬಂದಿದ್ದಾಗ ಸೀರೆ ಉಟ್ಟು ತೆಗೆಸಿದ  ಫೋಟೋ ಹಾಗೂ   ಕಾಲೇಜ್ ಕ್ಯಾಂಪಸ್ ನಲ್ಲೋ ಅಥವಾ ಫಲಿತಾಂಶದ ದಿನವೋ ಎಲ್ಲೋ ಒಂದು ಕಡೆ ಒಂದಷ್ಟು ಕುಶಿಯಿಂದ ಸಂಭ್ರಮಿಸುತ್ತಿರುವ ಹುಡುಗಿಯರ ಗುಂಪಿನ ಫೋಟೋ ಅನ್ನು ಎಲ್ಲಿಂದಲೋ ನಕಲು ಮಾಡಿ ಅವರ ಅನುಮತಿ ಪಡೆಯದೇ ಹಾಕಿ ಅವರಿಗೆ(ವಿದೇಶೀಯರಿಗೆ ) ನಮ್ಮ   ಸಂಸ್ಕೃತಿ ಬೇಕು ಇವರಿಗೆ ?(ಆ ಹುಡುಗಿಯರಿಗೆ ) ಎಂದು ಪ್ರಶ್ನಾರ್ಥಕವಾಗಿ ಹಾಕಿ ಶೇರ್ ಮಾಡಿ ಹೆಣ್ಣು ಮಕ್ಕಳನ್ನು ಅವಮಾನಿಸುವುದು ಸಾಮಾನ್ಯ ವಿಚಾರ !ಇಷ್ಟಕ್ಕೂ ಹೀಗೆ ಕೇಳುವವರು ಪುರಾತನ ಭಾರತೀಯ ಸಂಸ್ಕೃತಿಯ ಅನುಸಾರ ಕಚ್ಚೆ ಹಾಕಿ ಜುಟ್ಟು ಬಿಟ್ಟು ಕಿವಿಗೆ ಮತ್ತು ಜುಟ್ಟಿಗೆ ಹೂ ಮುಡಿದ ಗಂಡಸರಲ್ಲ .ಆಧುನಿಕ ಪ್ಯಾಂಟ್ ಶರ್ಟ್ ,ಆಧುನಿಕ ಕೇಶ ಶೈಲಿಯ ವೇಷ ಭೂಷಣ ಹಾಗೂ  ಬದುಕನ್ನು ಅನುಸರಿಸುತ್ತಿರುವ ಇಂದಿನ ಯುವಕರು .

ಇನ್ನು  ಫೇಸ್ ಬುಕ್ ನಂತ ಸಾಮಾಜಿಕ ಜಾಲಗಳಲ್ಲಿ ಹೆಣ್ಣು ಮಕ್ಕಳ  ಅಕೌಂಟ್ ಅನ್ನು ಹ್ಯಾಕ್ ಮಾಡಿ ಅಲ್ಲಿಂದ ಅವರ ಫೋಟೋ ಕದ್ದು ಅದನ್ನು ಕೆಟ್ಟದಕ್ಕೆ ಬಳಸಿ ಆ ಹೆಣ್ಣು ಮಕ್ಕಳ ಬದುಕನ್ನು ಹಾಳು ಗೆಡವುವ ಅನೇಕ ದುಷ್ಟರು ಇದ್ದಾರೆ .ಇಂಥಹಾದ್ದೆ ಕಾರಣಕ್ಕೆ ಜೀವ ಕಳೆದು ಕೊಂಡ ಯುವತಿಯೊಬ್ಬಳ ಫೋಟೋ ಹಾಕಿ “ಹೆಣ್ಣು ಮಕ್ಕಳೇ ಎಚ್ಚರ .ಯಾರು ಹೆಣ್ಣು ಮಕ್ಕಳು ಫೇಸ್ ಬುಕ್ ನಂಥ ಸಾಮಾಜಿಕ ತಾಣಗಳಲ್ಲಿ  ಮುಖ ತೋರಿಸ ಬೇಡಿ !”ಎಂದು ಬರೆದು ಶೇರ್ ಮಾಡಿರುವುದು ಅಲ್ಲಲ್ಲಿ ಕಂಡು ಬರುತ್ತದೆ ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ಇರುವಂತೆ ತೋರಿಸಿ ಕೊಂಡು ಅದನ್ನು ಸಾವಿರಾರು ಮಂದಿ ಶೇರ್ ಮಾಡುತ್ತಾರೆ .ಆದರೆ ಒಬ್ಬನೇ ಒಬ್ಬ ವ್ಯಕ್ತಿ ಕೂಡಾ “ಹೆಣ್ಣು ಮಕ್ಕಳ ಅಕೌಂಟ್  ನಿಂದ ಕದ್ದು ಅವರ ಫೋಟೋ ತೆಗೆದು ದುರುಪಯೋಗ ಮಾಡ ಬೇಡಿ .ಹೆಣ್ಣು ಮಕ್ಕಳು ನಮ್ಮಂತೆ ಮನುಷ್ಯರು ಅವರಿಗೆ ಎಲ್ಲರಂತೆ ಬದುಕುವ ಹಕ್ಕಿದೆ .ಅವರ ಫೋಟೋಗಳನ್ನು ದುರುಪಯೋಗ ಮಾಡಬೇಡಿ ಎಂದು ಸಂದೇಶ ನೀಡಿದ್ದು ನನ್ನ ಗಮನಕ್ಕೆ ಬಂದಿಲ್ಲ .

ಹೆಂಗಸರು ಸಾಮಾಜಿಕ ಅಂತರ್ಜಾಲ ತಾಣಕ್ಕೆ ಬಂದರೆ ಸಾಕು ಹಾಯ್  ಹಲೋ  ಕಾಫಿ ಆಯ್ತಾ ? ತಿಂಡಿ ಆಯ್ತಾ ?ಅಂತ ವ್ಯರ್ಥವಾಗಿ ಮಾತನಾಡಿ ಕಾಡುವರು  ಅನೇಕರು ! ಕೆಟ್ಟ ಮೆಸೇಜ್ /ಚಿತ್ರಗಳನ್ನು ಕಳುಹಿಸಿ ಕಾಡುವ ಪ್ರೇತಗಳೂ ಇವೆ ಈ
ಎಲ್ಲ ಶೆಲ್ಯಾಣತ್ತು ಕೇಳುವಾಗ ನಿಜವಾಗಿಯೂ ಯಾರಿಗಾದರೂ ಹೆಣ್ಣು ಮಗು ಬೇಕು ಎಂದೆನಿಸಲು ಸಾಧ್ಯವೇ ?!
ಖಂಡಿತಾ ಇಲ್ಲ .ಆದರೆ ಇದರ ಪರಿಣಾಮ ಏನಾದೀತು ಎಂದು ಆಲೋಚಿಸಿದರೆ ವಿಷಾದವಾಗುತ್ತದೆ !!

 ಹೌದು! “ಹೆಣ್ಣು ಮಕ್ಕಳಿಗೆ ತಾಯಿಯ ಗರ್ಭ ಕೂಡ ಸುರಕ್ಷಿತವಲ್ಲ “
 ನಮ್ಮ ಉಪರಾಷ್ಟ್ರ ಪತಿಗಳಾಗಿದ್ದ ಕೆ ಆರ್ ನಾರಾಯಣ್ ಹೇಳಿರುವುದು ನಿಜ .ಹೆಣ್ಣು ಮಕ್ಕಳನ್ನು ತಾತ್ಸಾರದಿಂದ ನೋಡಿ ವರದಕ್ಷಿಣೆ ,ಶೋಷಣೆ ಮಾಡಿದ್ದಲ್ಲದೆ ಹೆಣ್ಣು ಮಗುವನ್ನು ತಾಯಿಯ ಗರ್ಭದಲ್ಲಿರುವಾಗಲೇ ಚಿವುಟಿ ಹಾಕಿದ್ದರಿಂದ ಈಗಾಗಲೇ ಗಣನೀಯವಾಗಿ ಕುಸಿದಿದೆ.2011 ರ ಜನಗಣತಿಯ ಅಂಕಿ ಅಂಶಗಳ ಪ್ರಕಾರ ಪ್ರತಿ ಸಾವಿರ ಗಂಡುಗಳಿಗೆ  978  ಹೆಂಗಸರು ಇದ್ದಾರೆ .ಆದರೆ ಮಕ್ಕಳ  ಅಂಕಿ ಅಂಶ ಪರಿಗಣಿಸಿದಾಗ ಪ್ರತಿ ಸಾವಿರ ಗಂಡು ಮಕ್ಕಳಿಗೆ 948  ಹೆಣ್ಣು ಮಕ್ಕಳು ಇದ್ದಾರೆ 

ಈಗಾಗಲೇ ಲಕ್ಷಾಂತರ ಮಂದಿ ಹೆಣ್ಣು ಮಕ್ಕಳು ಕಡಿಮೆಯಾಗಿದ್ದಾರೆ ! ಹೆಣ್ಣಿನ ಪ್ರಮಾಣ ಗಣನೀಯವಾಗಿ ಕುಸಿತ ಕಂಡಿದೆ .
ಇದರ ಪರಿಣಾಮ ಸಮಾಜದ ಮೇಲೆ ಈಗಾಗಲೇ ಕಾಣಿಸಿಕೊಂಡಿದೆ .ವಿಶೇಷವಾಗಿ ಒಂದು ಸಮುದಾಯದಲ್ಲಿ ಕನ್ಯೆಯರ ಬರ ಕಾಣಿಸಿಕೊಂಡಿದೆ .ಇದರಿಂದಾಗಿ ಹಳ್ಳಿಯಲ್ಲಿರುವ ಕೃಷಿಕ ಹುಡುಗರಿಗೆ ,ಸಣ್ಣ ಪುಟ್ಟ ಅಂಗಡಿ ಇಟ್ಟು ಬದುಕುವವರಿಗೆ ,ಸಣ್ಣ ಪುಟ್ಟ ಕೆಲಸದಲ್ಲಿ ಇರುವವರಿಗೆಮದುವೆಯಾಗಲು  ಹುಡುಗಿಯರು ಸಿಗುತ್ತಿಲ್ಲ .ತಂದೆ ತಾಯಂದಿರು ತಮ್ಮ ಮಗಳಿಗೆ ಒಳ್ಳೆಯ ಕೆಲಸದಲ್ಲಿರುವ ಪೇಟೆಯಲ್ಲಿರುವ ಸ್ಥಿತಿಗತಿ ಇರುವ ಹುಡುಗರು ಸಿಗುವಾಗ ಹಳ್ಳಿಯಲ್ಲಿ ಇರುವ ,ಸರಿಯಾದ ಉದ್ಯೋಗ ಆರ್ಥಿಕ ಭದ್ರತೆ ಇಲ್ಲದಿರುವ ಹುಡುಗರಿಗೆ ಕೊಡುತ್ತಾರೆಯೇ ?ಕೊಡ ಬೇಕು ಎಂದು ಹೇಳುವುದು ಸರಿಯಲ್ಲ ಅದು ಅವರ ಇಷ್ಟ . ಈ ಬಗ್ಗೆ ಹಳ್ಳಿ ಹುಡುಗರನ್ನು ಮದುವೆಯಾಗಲು ಹುಡುಗಿಯರು ಮುಂದಾಗದ ಬಗ್ಗೆ ಯಾವಾಗಲೂ ಸಾಮಜಿಕ ತಾಣಗಳಲ್ಲಿ ದೂಷಣೆಯ ಮಾತುಗಳು ಆಗಾಗ ಕೇಳಿ ಬರುತ್ತವೆ

ಹುಡುಗರಿಗೆ ಹುಡುಗಿ ಸಿಗದೇ ಇರುವುದಕ್ಕೆ ತಂದೆ ತಾಯಿ ಕೊಡದೇ ಇರುವುದು ಕಾರಣ ಅಲ್ಲ ,ಹುಡುಗರಿಗೆ ಹುಡುಗಿ ಸಿಗದ್ದಕ್ಕೆ ಗಂಡು ಹೆಣ್ಣಿನ ಅನುಪಾತ ಕುಸಿದದ್ದೇಮುಖ್ಯವಾದ  ಕಾರಣ. ತೀರಾ ಇತ್ತೀಚೆಗಿನವರೆಗೂ  ಅಂದರೆ ಹದಿನೈದು ವರ್ಷ ಹಿಂದಿನ ತನಕವೂ   ಕನ್ಯೆಯರ ಕೊರತೆ ಇರುವ ಆ ಸಮುದಾಯದಲ್ಲಿ  ವರ ದಕ್ಷಿಣೆ ತೆಗೆದುಕೊಳ್ಳುತ್ತಿದ್ದರು .ಅದರಲ್ಲೂ ತುಸು ಕಪ್ಪು ಇದ್ದು ಹೆಚ್ಚು ಓದಿರದ ಹುಡುಗಿಗೆ ಮದುವೆಯಾಗ ಬೇಕಿದ್ದರೆ ಕೈ ತುಂಬಾ ವರದಕ್ಷಿಣೆ ನೀಡ ಬೇಕಿತ್ತು ಆದ್ರೆ ಈಗ ಹೆಣ್ಣಿನ ಸಂಖ್ಯೆ ಕಡಿಮೆ ಆದ ಕಾರಣ ವರದಕ್ಷಿಣೆ  ಈಗ ಆ ಸಮುದಾಯದಲ್ಲಿ ಇಲ್ಲವೇ ಇಲ್ಲ .ಇಲ್ಲಿ ನಿದಾನಕ್ಕೆ ವಧೂ  ದಕ್ಷಿಣೆ ಪದ್ಧತಿ ಆರಂಭವಾದರೂ ಆದೀತು! ಆದರೆ .ಇಷ್ಟಾಗಿದ್ದರೂ ಇನ್ನೂ ಕೂಡ ಜನರು ಎಚ್ಚತ್ತು ಕೊಂಡಿಲ್ಲ .ಹೆಣ್ಣಿನ ಶೋಷಣೆ ನಿಂತಿಲ್ಲ .

.ಈಗ ಎಲ್ಲ ಕ್ಷೇತ್ರದಲ್ಲು ಹೆಣ್ಣು  ಮಕ್ಕಳು ಮುಂದುವರಿಯುತ್ತಿದ್ದಾರೆ .ಅವರಿಗೆ ಶಿಕ್ಷಣ ಸಿಗುವಂತೆ ಮಾಡುತ್ತಿದ್ದಾರೆ .ಹೆಣ್ಣು ಮಕ್ಕಳಿಗೂ ಗಂಡು ಮಕ್ಕಳಿಗೆ ಸಮಾನವಾದ ಸ್ಥಾನ ಮಾನ ಸಿಗುತ್ತಾ ಇದೆ ಆದ್ದರಿಂದ ಇನ್ನು ಹೆಣ್ಣು ಮಕ್ಕಳ ಸಂಖ್ಯೆ ಕುಸಿಯಲಾರದು ಎಂದು ತುಸು ನಿರಾಳತೆ ಇತ್ತು !
ಆದರೆ ಆ ನಿರಾಳತೆ ಹೆಚ್ಚು ಸಮಯ ಇರಲಿಕ್ಕಿಲ್ಲ .ಅಂದು ವರದಕ್ಷಿಣೆ ಶೋಷಣೆ ,ಬಡತನ ದಿಂದಾಗಿ ಹೆಣ್ಣು ಮಗು ಬೇಡ eega ಎಅತ್ಯಾಚಾರ ಕಿರುಕುಳಗಳ ಕಾರಣಕ್ಕೆ ಹೆಣ್ಣು ಮಗು ಬೇಡ ಎನಿಸಿದ್ದರೆ ಅದರಲ್ಲಿ ಆಶ್ಚರ್ಯ ಏನೂ ಇಲ್ಲ.

ಇಂದು ಎಲ್ಲೆಡೆ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ,ಕೊಲೆ ,ಲೈಂಗಿಕ ಕಿರುಕುಳ ,ಲಿಂಗ ತಾರತಮ್ಯ , ಲವ್ /ಮತಾಂತರದ  ಜಾಲ ಮೊದಲಾದ ಕಾರಣಕ್ಕೆ ಹೆಣ್ಣು ಮಗು  ಭಾರ ಎನಿಸುತ್ತಿದೆ .ಆದ್ದರಿಂದ ಎಲ್ಲರೂ ಎಚ್ಚತ್ತು ಕೊಳ್ಳ ಬೇಕಾಗಿದೆ .ಹೆಣ್ಣು ಮಕ್ಕಳ ಸುರಕ್ಷಿತತೆ ಬಗ್ಗೆ ಆಲೋಚಿಸ ಬೇಕು .ಅತ್ಯಾಚಾರ ಮಾಡಿದವರಿಗೆ ,ಕಿರುಕುಳ ನೀಡುವವರಿಗೆ  .ಮತಾಂತರದ ಜಾಲದ ಮೂಲಕ ಹೆಣ್ಣು ಮಕ್ಕಳನ್ನು ಖೆಡ್ಡಾಕ್ಕೆ ಬೀಳಿಸುವವರಿಗೆ, ಶೀಘ್ರವಾಗಿ ಶಿಕ್ಷೆ  ಸಿಗುವಂತೆ ಮಾಡ ಬೇಕು .ಜೊತೆಗೆ ಸಮಾಜದಲ್ಲಿಯೂ ಈ ಬಗ್ಗೆ ಜಾಗೃತಿ ಮೂಡಿಸ ಬೇಕು

ಅತ್ಯಾಚಾರಿಗಳಿಗೆ ಬಲವಾದ ಶಿಕ್ಷೆ  ಶೀಘ್ರವಾಗಿ ಆಗಬೇಕು ,ಜೊತೆಗೆ ಸಾಮಾಜಿಕವಾಗಿ ಜಾಗೃತಿ ಮೂಡಿಸಬೇಕು ",ಹೆಣ್ಣು ಭೋಗದ ವಸ್ತುವಲ್ಲ ,ಅವಳಿಗೂ ಎಲ್ಲರಂತೆ ಬದುಕುವ ಸ್ವಾತಂತ್ರ್ಯವಿದೆ" ಎಂಬುದನ್ನು ಮನಗಾಣಿಸಬೇಕು.
ಶಾಲೆಗೆ ಹೋಗಿ ಬರುವ ಹೆಣ್ಣುಮಕ್ಕಳಿಗೆ  ಈ ಬಗ್ಗೆ ತಿಳುವಳಿಕೆ ನೀಡಬೇಕು .ಒಬ್ಬೊಬ್ಬರೇ ಓಡಾಡದೆ ಗುಂಪಿನಲ್ಲಿ ಹೋಗಿ ಬರುವಂತೆ ತಿಳುವಳಿಕೆ ನೀಡಬೇಕು

ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಹೆಣ್ಣು ಮಕ್ಕಳ ಅವಹೇಳನ ನಿಲ್ಲಿಸಬೇಕು.
ಹೆಣ್ಣು ಮಕ್ಕಳ ಮೇಲಿನ ಯಾವುದೇ ತರದ ದೌರ್ಜನ್ಯವನ್ನು ,ಜಾತಿ ಮತ,ಪಂಥ ,ಧರ್ಮ , ಪಕ್ಷ ಎಂಬ ಭೇದವಿಲ್ಲದೆ ಒಗ್ಗಟ್ಟಾಗಿ ವಿರೋಧಿಸ ಬೇಕು .ಪಕ್ಕದ ಮನೆಗೆ ಬಿದ್ದ ಬೆಂಕಿ ನಮ್ಮ ಮನೆಗೂ ಹರಡಬಹುದು ಎಂಬುದನ್ನು ನಾವು ಮರೆಯಬಾರದು .

ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕರು
ಸರ್ಕಾರಿ ಪಿಯು ಕಾಲೇಜು
ಬೆಳ್ಳಾರೆ ,ಸುಳ್ಯ