Tuesday 5 March 2013

chanda baari raadhe gopala paddhana by Smt sharada g bangera ,maninalkur

Vocaroo Voice Message

 ಚಂದ ಬಾರಿ ರಾಧೆ ಗೋಪಾಲ ಪಾಡ್ದನ -ಹಾಡಿದವರು  ಶ್ರೀಮತಿ ಶಾರದ ಜಿ ಬಂಗೇರ ಮಣಿನಾಲ್ಕೂರು ,ಬಂಟ್ವಾಳ 

 
               ಲಕ್ಷ್ಮೀ ಪ್ರಸಾದ ಮತ್ತು ಶಾರದ ಜಿ  ಬಂಗೇರ
ಪುರಾಣಗಳ ಪರಿಕಲ್ಪನೆಗೆ ವ್ಯತಿರಿಕ್ತವಾದ ಶ್ರೀ ಕೃಷ್ಣ ನ ಚಿತ್ರಣ ಈ ಪಾಡ್ದನದಲ್ಲಿದೆ . ಪುರಾಣದ ಪ್ರಕಾರ ರಾಧೆ ಕೃಷ್ಣನ ಬಳಿಗೆ ಒಲಿದು ಆರಾಧಿಸಿ ತಾನಾಗಿಯೇ ಬಂದವಳು . ಆದರೆ ಇಲ್ಲಿ ಕೃಷ್ಣ ರಾಧೆಯನ್ನು  ಅವಳ ಅಕ್ಕ ಚಂದ ಬಾರಿಯ ರೂಪದಲ್ಲಿ ಬಂದು ವಂಚಿಸಿ ವಶೆ  ಪಡಿಸಿ ಕೊಳ್ಳುವ  ವಿಚಾರವನ್ನು ವರ್ಣಿಸಲಾಗಿದೆ . ಕೃಷ್ಣನನ್ನು ಕಳ್ಳರ ಕಳ್ಳ,  ಅಂಗಡಿ ಅಂಗಡಿ ಅಲೆದು ಪೆಟ್ಟು ತಿನ್ನುವವನು, .ಬೆಳಗ್ಗೆ ಕಂಡ ಹೆಣ್ಣನ್ನು ಸಂಜೆಗೆ ಬಿಡದವನು . ಸ್ತ್ರೀ ಲೋಲನೆಂದು  ವರ್ಣಿಸಿದ್ದಾರೆ ತುಳು ಜನಪದ ಪಾಡ್ದನಗಾರರು . ದಾಸವರೇಣ್ಯರ ನಿಂದಾಸ್ತುತಿ ಗಳಂತೆ  ಇದು ಕೂಡ  ತುಳು ಜನಪದರ ನಿಂದಾ ಸ್ತುತಿಯ ವಿಶಿಷ್ಟ  ಅಭಿವ್ಯಕ್ತಿ  ಇರಬಹುದು .
ಮಣಿನಾಲ್ಕೂರು ಅಂಗನವಾಡಿಯ ಸಹಾಯಕರಾಗಿರುವ ಶಾರದಾ ಬಂಗೆರರಿಗೆ ಅನೇಕ ಪಾಡ್ದನಗಳು,   ತುಳು ಜನಪದ ಹಾಡುಗಳು ತಿಳಿದಿದ್ದು  ಅವನ್ನು  ಸುಮಧುರವಾಗಿ ಹಾಡುತ್ತಾರೆ   

No comments:

Post a Comment