Friday 6 September 2024

ಎದುರು ನೋಡುತ್ತಿದ್ದ ಗ್ರಂಥ ಕೈ ಸೇರಿದಾಗ- ಕರಾವಳಿಯ ಸಾವಿರದೊಂದು ದೈವಗಳು

 


ನಾನು ಒಂದೇ ಸಮನೆ ಎದುರು ನೋಡುತ್ತಿದ್ದ ನಿಮ್ಮ ಹೆಮ್ಮೆಯ ಗ್ರಂಥ ಸುಸ್ಥಿತಿಯಲ್ಲಿ  ಶಿಕ್ಷಕರ ದಿನಾಚರಣೆಯ ಶುಭ ಗುರುವಾರ ದ ದಿನವಾದ ಇಂದು ನನ್ನ ಕೈಸೇರಿತು, 

ಗ್ರಂಥದ ಅಗಾಧತೆಯನ್ನು ಮೇಲ್ನೋಟಕ್ಕೆ ನೋಡಿದ ತಕ್ಷಣ ಅದಕ್ಕಾಗಿ ನೀವು ಪಟ್ಟಿರುವ ಶ್ರಮ ಕಳೆದ ಸಮಯ, ಸಂಪತ್ತಿನ ತ್ಯಾಗಗಳು ಎಷ್ಟಿರಬಹುದು ಎಂದು ಯೋಚಿಸಿಯೇ ನಿಮ್ಮ ಬಗ್ಗೆ ಅಪಾರವಾದ ಗೌರವ ಉಂಟಾಗಿ ನಿಜವಾಗಿಯೂ  ಕಣ್ಣುಗಳು ತುಂಬಿ ಬಂದವು, ನಿಮಗೆ ತಾಯಿ  ಮೂಕಾಂಬಿಕೆಯು ಉತ್ತಮ ಆರೋಗ್ಯ, ನೆಮ್ಮದಿ ಹಾಗೂ ಗೌರವ, ಸಂಪತ್ತನ್ನು ನೀಡಿ ನಿಮ್ಮ ಕನಸುಗಳನ್ನು ನನಸು ಮಾಡಲಿ ಎಂದು  ಪ್ರಾರ್ಥಿಸುತ್ತೇನೆ, ಕೆಲ ಮಾನವರು ಉತ್ತಮ ಕಾರ್ಯಗಳಿಂದ ನಮ್ಮ ನಾಡಿನಲ್ಲಿ ದೈವದ ಸ್ಥಾನ ಪಡೆದುಕೊಳುತ್ತಿದ್ದರು, ನೀವು ಮುಂದಿನ ಪೀಳಿಗೆಗೆ ನಮ್ಮ ದೈವಗಳ ಮಾಹಿತಿಯನ್ನು  ಶ್ರಮಿಸಿ ಸಂಗ್ರಹಿಸಿ ಪ್ರತ್ಯಕ್ಷ ದೈವವಾಗಿಯೇ ಕಾಣುತ್ತಿದ್ದೀರಿ , ನಿಮ್ಮ ಜ್ಞಾನ ಹಾಗೂ ಸಂಕಲ್ಪ ದೈವತ್ವದಷ್ಟೇ ಶ್ರೇಷ್ಠವಾದದು ಅಂದರೆ ಅತಿಶಯೋಕ್ತಿಯಲ್ಲದ ಸತ್ಯ

ಪುಸ್ತಕದ ಓದನ್ನು ಇಂದಿನಿಂದಲೇ ಪ್ರಾರಂಬಿಸುತ್ತೆನೆ. 

ನಿಮ್ಮ ಪಾದಗಳಿಗೆ ತುಂಬ ಹೃದಯದಿಂದ ನಮಸ್ಕಾರಿಸುತ್ತಾ ನಿಮ್ಮ ಆಶೀರ್ವಾದವನ್ನು ಬೇಡುತ್ತೇನೆ - ಅವಿನಾಶ್ ಬಿ ಆರ್ ಕಡೂರು.

No comments:

Post a Comment