Sunday, 2 November 2025

223 ನಮ್ಮ‌ಹೆಮ್ಮೆಯ ಪುಸ್ತಕ‌ ಮಿತ್ರರು


 #ನಮ್ಮ_ಹೆಮ್ಮೆಯ_ಓದುಗ_ಮಿತ್ರರು 

#ಕರಾವಳಿಯ_ಸಾವಿರದೊಂದು_ದೈವಗಳು 


ಕಳೆದ ವರ್ಷ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕ ಪ್ರಕಟಣೆಗೆ ಮೊದಲೇ ಮುಂಗಡ ಪಾವತಿಸಿ ಕಾದಿರಿಸಿ ಬೆಂಬಲಿಸಿದವರು ಯುವ ಬರಹಗಾರರಾದ  ದಯಾನಂದ ರೈ ಕಳ್ವಾಜೆಯವರು.


ಪುಸ್ತಕದ ಕುರಿತಾದ ಅವರ ಮೆಚ್ಚುಗೆಯ ಮಾತುಗಳು ಇಲ್ಲಿವೆ


"ಮೇಮ್ ನಮಸ್ಕಾರ...

ನಾನು ದಯಾನಂದ ರೈ ಕಳ್ವಾಜೆ.ನಿಮ್ಮ ಪುಸ್ತಕ ನನ್ನ ಕೈಸೇರಿ ವರುಷ ಸಂದರೂ, ಅಭಿಪ್ರಾಯ ಹೇಳಲು ಅನುವಾಗಿರಲಿಲ್ಲ. ದೈವಾರಾಧಾನೆಯ ನೆಲೆ ಮತ್ತು ಸಂಸ್ಕೃತಿಯ ಕೆಲವು ಮಜಲುಗಳನ್ನು ತಿಳಿಯಪಡಿಸುವ ಪ್ರಯತ್ನ ಶ್ಲಾಘನೀಯ. ಈ ಸಂಗ್ರಹಯೋಗ್ಯ ಹೊತ್ತಗೆಯ ಹಿಂದೆ ಅದೆಷ್ಟು ಶ್ರಮವಿದೆಯೋ ನಾನರಿಯೆ. ಆದರೆ ದೈವಿಕ ಸಂಪ್ರದಾಯಗಳನ್ನು ನಂಬುವವರು, ಮತ್ತು ಅಧ್ಯಯನ ನಡೆಸುವವರು ತಮ್ಮ ತಮ್ಮ ಮನೆಯಲ್ಲಿ ಸಂಗ್ರಹಿಸಿಡಲೇ ಬೇಕಾದ ಹೊತ್ತಗೆ ಇದು. ಮೇಲಾಗಿ ಸಾವಿರಕ್ಕಿಂತಲೂ ಮಿಗಿಲಾದ ವಿಭಿನ್ನ ಸಂಸ್ಕಾರ ವಿಶೇಷಗಳನ್ನು ಲೇಖನಿಯಲ್ಲಿಳಿಸಿ ಬಲ್ಲವರಲ್ಲಿ ಕೇಳಿತಿಳಿದ ನಿಮ್ಮ ಬಗೆ ಬಹುಮಾನ್ಯ. ಅಭಿನಂದನೆಗಳು ಮೇಮ್ ನಮಸ್ಕಾರ 🙏"

222 ನಮ್ಮ‌ಪ್ರೀತಿಯ ಓದುಗ ಮಿತ್ರರು


 ಭರವಸೆಯ ಯುವ ಸಂಶೋಧಕ ಸುರೇಶ್ ಮಂಗಲ್ಪಾಡಿಯವರ ಕೈಯಲ್ಲಿ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್  


ಸುಮಾರು 18 ವರ್ಷಗಳ ಮೊದಲು ನಾನು ಇಂಚಲಂಗೋಡಿನಲ್ಲಿ ನಡೆಯುವ ಸರ್ಪಕೋಲ/ ಬೆರ್ಮೆರ ನಲಿಕೆ ರೆಕಾರ್ಡ್ ಮಾಡಲು ಹೋದಾಗ ಮಾಹಿತಿ ನೀಡಿ ಪೂರ್ಣ ಬೆಂಬಲ ನೀಡಿದವರು ರತ್ನಾಕರ,ಸುರೇಶ ಮತ್ತು ಸತೀಶ ಎಂಬ ಮಂಗಲ್ಪಾಡಿಯ ಸಹೋದರರು.

ಇವರಲ್ಲಿ ವೃತ್ತಿಯಲ್ಲಿ ಶಿಕ್ಷಕರಾಗಿರುವ ಅರ್ಥ ಶಾಸ್ತ್ರ ಸ್ನಾತಕೋತ್ತರ ಪದವೀಧರರಾದ ಸುರೇಶ್ ಅವರು ಇತ್ತೀಚೆಗೆ ಬಾಕುಡ ಸಮುದಾಯದವರ ಸರ್ಪಕೋಲದ ಬಗ್ಗೆ ಅಧ್ಯಯನ ಮಾಡಿ ಹೊಸ ಹೊಳಹುಗಳ ಸಂಶೋಧನಾ ಗ್ರಂಥವನ್ನು ಪ್ರಕಟಿಸಿದ್ದಾರೆ.ಪ್ರಸ್ತುತ ನಮ್ಮ‌ಕರಾವಳಿಯ ಸಾವಿರದೊಂದು ದೈವಗಳು ಕೃತಿಯನ್ನು ಮಲೆಯಾಳ ಭಾಷೆಗೆ ಅನುವಾದಿಸಲು ಮುಂದಾಗಿದ್ದಾರೆ 

ಇವರಿಂದ ಇನ್ನಷ್ಟು ಅಧ್ಯಯನ ನಡೆಯಲಿ ಸಂಶೋಧನಾ ಕೃತಿಗಳು ಪ್ರಕಟವಾಗಲಿ ಎಂಬ ಹಾರೈಕೆ ನನ್ನದು

221 ನಮ್ಮ‌ಪ್ರೀತಿಯ ಓದುಗ ಮಿತ್ರರು


 ತುಳುನಾಡಿನ ದೈವಗಳು ಕಾಲ್ಪನಿಕ ಪಾತ್ರಗಳಲ್ಲ..


ಆರು ತಲೆಮಾರುಗಳ ಹಿಂದೆ ಕಾರಣಾಂತರಗಳಿಂದ ದೈವತ್ವ ಪಡೆದು ಅಜ್ಜೆರ್ ಭಟ್ರು ಎಂಬ ಹೆಸರಿನ ದೈವವಾಗಿ ಆರಾಧಿಸಲ್ಪಡುವ ನಾರಾಯಣ ಎಡವಟ್ನಾಯರ ವಂಶಜರಾದ ಗೀತ ಮತ್ತು ಅವರ ಪತಿ ರಾಘವೇಂದ್ರ ಅಸ್ರಣ್ಣರು ತುಳುವರ ದೈವಗಳ ಕಥಾನಕಗಳು ಊಹಾಪೋಹವಲ್ಲ ಕಪೋಲ ಕಲ್ಪತವಲ್ಲ.ನಡೆದು ಹೋದ ಅಲೌಕಿಕ,ಐತಿಹಾಸಿಕ  ಸಂಗತಿಗಳು ಎಂಬ ಬಗ್ಗೆ ಪ್ರತ್ಯಕ್ಷ ನಿದರ್ಶನವಾಗಿದ್ದಾರೆ


ಹೀಗೆಯೇ ಅಯ್ಯೆರ್ ಬಂಟೆರ್ ,ಕಚ್ಚೆ ಭಟ್ಟ ,ಬೀರ್ಣಾಳ್ಬ ,,ತಿಮ್ಮಣ್ಣ ನಾಯಕ ,ನೈದಾಲ ಪಾಂಡಿ ,ಮಂಡೆಕ್ಕಾರ ಕಲ್ಲುರ್ಟಿ ದೈವಗಳ ವಂಶಜರು ಈಗಲೂ ಇದ್ದಾರೆ ,ಮುಂದೆ ಸಮಯ ಸಿಕ್ಕಾಗ ಸಚಿತ್ರ ಮಾಹಿತಿ ನೀಡುವೆ ಹುಡುಕಾಡಿದರೆ ಇನ್ನಿತರ ದೈವತ್ವ ಪಡೆದು ಆರಾಧಿಸಲ್ಪಡುವ ಐತಿಹಾಸಿಕ ವ್ಯಕ್ತಿಗಳ ವಂಶಜರ ಬಗ್ಗೆಯೂ ಮಾಹಿತಿ ಸಿಗಬಹುದು

ಹೆಚ್ಚಿನ ಮಾಹಿತಿ  ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್  ಗ್ರಂಥದಲ್ಲಿದೆ mobile9480516684

220 ನಮ್ಮ‌ಹೆಮ್ಮೆಯ ಓದುಗ ಮಿತ್ರರು


 ನಮ್ಮ ಹೆಮ್ಮೆಯ ಓದುಗರು 

ಕರಾವಳಿಯ ಸಾವಿರದೊಂದು ದೈವಗಳು -


Pawan Naresh Bangera 


ಪ್ರಸ್ತುತ ದುಬೈ ಯಲ್ಲಿರುವ ಪವನ್ ನರೇಶ್ ಬಂಗೇರ ಅವರ  ಮತ್ತವರ ಮಡದಿ ಮಗಳ  ಕೈಯಲ್ಲಿ ಕರಾವಳಿಯ ಸಾವಿರದೊಂದು ದೈವಗಳು ಗ್ರಂಥ

219 ನಮ್ಮ‌ಹೆಮ್ಮೆಯ ಪುಸ್ತಕ ಮಿತ್ರರು : ಪದ್ಮಶ್ರೀ ಒಪುರಸ್ಕೃತ ಸಾಲು ಮರದ ತಿಮ್ಮಕ್ಕ


 ವೃಕ್ಷ ಮಾತೆ ಪದ್ಮಶ್ರೀ ಸಾಲು ಮರದ ತಿಮ್ಮಕ್ಕನವರ ಮಡಿಲಲ್ಲಿ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684

218 ನಮ್ಮ‌ಹೆಮ್ಮೆಯ ಪುಸ್ತಕ ಮಿತ್ರರು : ಅಶೋಕ್ ಶೆಟ್ಡಿ ದುಬೈ


 ಕರಾವಳಿಯ ಸಾವಿರದೊಂದು ದೈವಗಳು ಕೃತಿ ಅನೇಕ ದೇಶಗಳಿಗೆ ಹೋಗಿದೆ

ದುಬೈಯಿಂದ ಅಶೋಕ್ ಶೆಟ್ಟಿಯವರು ಪುಸ್ತಕವನ್ನು ಕೊಂಡು ಸಂಭ್ರಮಿಸಿದ್ದಾರೆ.

ಓದುಗರ ಸಂತೃಪ್ತಿಯೇ ನಮಗೆ ಮುಖ್ಯ..

217 ನಮ್ಮ ಪ್ರೀತಿಯ ಪುಸ್ತಕ‌ ಮಿತ್ರರು : ನೀತಾ ಶೆಟ್ಟಿ


 ನಮ್ಮ ಹೆಮ್ಮೆಯ ಓದುಗ ಮಿತ್ರರಲ್ಲಿ ಎಳೆಯ ವಯಸ್ಸಿನವರಾದ ನೀತಾ ಶೆಟ್ಟಿ ,ಈ ವರ್ಷ ಪಿಯುಸಿ ಓದಿ ಸಿಇಟಿ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿನಿ..

ಇಂದಿನ ಯುವಕರಿಗೆ ಓದುವ ಹವ್ಯಾಸ ಇಲ್ಲ ಎಂಬುದು ಬರಹಗಾರರ ಕೊರಗು..ಸದಾ ಮೊಬೈಲ್ ರೀಲ್ ಗೇಮ್ ಗಳನ್ನು ಆಡುವ ಯುವಕರ ನಡುವೆ ನೀತಾ ಶೆಟ್ಟಿ ವಿಶಿಷ್ಟರಾಗಿ ಕಾಣಿಸುತ್ತಾರೆ.

ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್