Wednesday 20 May 2015

ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು:216 ಬಸ್ತಿ ನಾಯಕ (ಬಾಲ ಬಂಟ ಬಸಪ್ಪ ನಾಯಕ )(c)ಡಾ.ಲಕ್ಷ್ಮೀ ಜಿ ಪ್ರಸಾದ



             
   
               ಚಿತ್ರ ಕೃಪೆ :ಧರ್ಮ ದೈವ
copy rights reservedತುಳುವರ  ಪಾಡ್ದನ ಹಾಗೂ ಭೂತಾರಾಧನೆಯಲ್ಲಿ ಅನೇಕ ಇತಿಹಾಸದ ಎಳೆಗಳು ಅಡಕವಾಗಿವೆ ಅಂತೆಯೇ ಬಸ್ತಿನಾಯಕ ದೈವ ಕಥಾನಕವು ಕೆಳದಿಯ ಇತಿಹಾಸದೊಂದಿಗೆ ತಳಕು ಹಾಕಿಕೊಂಡಿದೆ ಬಸ್ತಿ ನಾಯಕ ಸಾಕಷ್ಟು ಪ್ರಸಿದ್ಧ ದೈವತ .copy rights reserved (c) Dr.Laxmi g Prasad ಈ ದೈವ ಕನ್ನಡದಲ್ಲಿ ನುಡಿ ಕೊಡುವುದು ಈ ದೈವ ಮೂಲತ ಕನ್ನಡಿಗ ಎಂಬುದನು ಸಮರ್ಥಿಸುತ್ತದೆ .ಈ ದೈವ ನುಡಿಯಲ್ಲಿ ತನ್ನನ್ನು ತಾನು ಬಾಲ ಬಂಟ ಬಸಪ್ಪ ನಾಯಕ ಎಂದು ಕರೆದುಕೊಳ್ಳುತ್ತದೆ.ಬಸಪ್ಪನಾಯಕ ಎಂಬುದೇ ಆಡು ಮಾತಿನಲ್ಲಿ ಬಸ್ತಿ ನಾಯಕ ಆಗಿದೆcopy rights reserved (c) Dr.Laxmi g Prasad 
ಈತನೋರ್ವಅರಸು ಆಗಿದ್ದ ಬಗ್ಗೆ ಇಲ್ಲಿ ಮಾಹಿತಿ ದೊರೆಯುತ್ತದೆ .ತಾನು ಮಂಗಳೂರು ಸೀಮೆಯನ್ನು ಹಿಡಿದು ಕೊಂಡೆ ಕಾಲ ಮೇಲೆ ಕಾಲು ಕೈ ಮೇಲೆ ಕೈ ಮೀಸೆ ಮೇಲೆ ಕೈ ಹಾಕಿ ಕೊಂಡೆ ಎಂಬಲ್ಲಿ ಇದು copy rights reserved (c) Dr.Laxmi g Prasad ಸ್ಪಷ್ಟವಾಗುತ್ತದೆ /
ತುಳುನಾಡನ್ನು ಆಳಿದ ಕೆಳದಿ ಸಂಸ್ಥಾನದಲ್ಲಿ ಬಸಪ್ಪ ನಾಯಕ ,ಇಮ್ಮಡಿ ಬಸಪ್ಪ ನಾಯಕ ಮತ್ತು ಚೆನ್ನ ಬಸವ ನಾಯಕ ಎಂಬ ಅರಸುಗಳು ಇದ್ದ ಬಗ್ಗೆ ಇತಿಹಾಸದಿಂದ ತಿಳಿದು ಬರುತ್ತದೆ ಈ ಬಗ್ಗೆ ಅರಿಯಲು ಕೆಳದಿಯ ಇತಿಹಾಸವನ್ನು ಗಮನಿಸಬೇಕಾಗುತ್ತದೆ .copy rights reserved
ಶಿವಮೊಗ್ಗ ಜಿಲ್ಲೆಯ ಸಾಗರದಿಂದ  ಸುಮಾರು  8 ಕಿ.ಮೀ. ದೂರದಲ್ಲಿರುವ ಪುಟ್ಟ ಗ್ರಾಮ ಕೆಳದಿ ಸಂಸ್ಥಾನವಾಗಿ ಬೆಳೆದ ಪರಿ ಅನನ್ಯವಾದುದು .ಹನ್ನೆರಡನೆಯ ಶತಮಾನದಲ್ಲಿ ಈ ಊರು ಸಾಂತರಸರ ಅಧೀನದಲ್ಲಿತ್ತು. ಪೊಂಬುಚ್ಚ ಪುರವರಾಧೀಶ್ವರನಾಗಿದ್ದ ಮಹಾಮಂಡಳೇಶ್ವರ ತ್ರಿಭುವನಮಲ್ಲ ಭುಜಬಲ ಪ್ರತಾಪ ಶಾಂತರಸನ ತೃಟಿತ ಶಾಸನವೊಂದು ಇಲ್ಲಿ ದೊರೆತಿದೆ.


 ಲ್ಲಿಯೇ ಹುಟ್ಟಿ ಬೆಳೆದ ಸಾಮಾನ್ಯ ಮನೆತನವೊಂದಕ್ಕೆ ಸೇರಿದ್ದ ಚೌಡಗೌಡನೆಂಬ ರೈತನಿಗೆ ನಿಕ್ಷೇಪವೊಂದು ದೊರೆತಿದ್ದು ಅದರ ಸಹಾಯದಿಂದ ಅಥವ ತನ್ನ ಸ್ವ ಸಾಮರ್ಥ್ಯದಿಂದ  ಸಣ್ಣ ಪಾಳೆಯಪಟ್ಟೊಂದನ್ನು ಅವನು ಕಟ್ಟಿಕೊಂಡು ಮುಂದೆ ತನ್ನ ಪ್ರಭಾವವನ್ನು ಬೆಳೆಸಿಕೊಂಡನೆಂದೂ ಐತಿಹ್ಯವಿದೆ. ಇವನ ಪರಾಕ್ರಮಕ್ಕೆ ಮೆಚ್ಚಿ ಕೃಷ್ಣದೇವರಾಯ ಎಂಟು ಮಾಗಣೆಗಳ ನಾಯಕತ್ವವನ್ನು ಕೊಟ್ಟು ಇವನನ್ನು ನಾಯಕನನ್ನಾಗಿ ಮಾಡಿದ. ಹೀಗೆ ಕೆಳದಿ ಸು.160೦ರಲ್ಲಿ ಒಂದು ಪುಟ್ಟ ಸಂಸ್ಥಾನದ ರಾಜಧಾನಿಯಾಯಿತು.copy rights reserved (c) Dr.Laxmi g Prasad 

ಚೌಡಗೌಡನ ಕಾಲ  ಸುಮಾರು ಕ್ರಿಸ್ತಶಕ 1500ರಿಂದ 1530.ಇವನ ನಂತರ ಇವನ ಹಿರಿಯ ಮಗ ಸದಾಶಿವ ನಾಯಕನು ವಿಜಯನಗರದ ವಿರೋಧಿಗಳನ್ನು ಹಿಮ್ಮೆಟ್ಟಿಸಿ ಕೇರಳ ರಾಜ್ಯದ ಹಲವು ಭಾಗಗಳನ್ನು ವಶಪಡಿಸಿಕೊಳ್ಳುತ್ತಾನೆ. ಸದಾಶಿವ ನಾಯಕನಿಗೆ ಮೂವರು ಮಕ್ಕಳಿದ್ದು ಅವರುಗಳು ತಂದೆಯ ನಂತರ ಸುಮಾರು ಮೂವತ್ತು ವರುಷಗಳ ರಾಜ್ಯಭಾರ ಮಾಡುತ್ತಾರೆ.ಶಿವಪ್ಪ ನಾಯಕ ವೆಂಕಪ್ಪ ನಾಯಕ ಎರಡನೇ ವೆಂಕಪ್ಪ ನಾಯಕ ಮೊದಲಾದವರು ಸಂಸ್ಥಾನವನ್ನು ಗಟ್ಟಿ ಗೊಳಿಸುತ್ತಾರೆ

ಮುಂದೆ ಇವರ ವಂಶದ ಹಿರಿಯ ಸೋಮಶೇಖರ ನಾಯಕ ಆಳ್ವಿಕೆ ನಡೆಸುತ್ತಾನೆ ಆತನ ಮಡದಿ ಚನ್ನಮ್ಮ ದಿಟ್ಟ ರಾಣಿ ಶಿವಾಜಿಯ ಮಗ ಸಂಭಾಜಿಗೆ ಆಶ್ರಯ ಕೊಟ್ಟ ಕಾರಣ ಔರಂಗ ಜೇಬನ ವಿರೋಧ ಎದುರಾಗಿ ಆತ ದಾಳಿ ಮಾಡುತ್ತಾನೆ copy rights reserved (c) Dr.Laxmi g Prasad ಆತನ ದಾಳಿಯನ್ನು ದಿಟ್ಟವಾಗಿ ಎದುರಿಸಿ ಹಿಮ್ಮೆಟ್ಟಿಸುತ್ತಾಳೆ ಅವಳು .’ಇದಾಗಿ ಸ್ವಲ್ಪ ಸಮಯದಲ್ಲೇ ಬಿಜಾಪುರದ ಸುಲ್ತಾನನು ಕೆಳದಿಗೆ ಮುತ್ತಿಗೆ ಹಾಕಲು ಬಂದನುಶತ್ರುಗಳು ರಾಜ್ಯವನ್ನು ಸುತ್ತುವರಿದಿದ್ದರು ರಾಣಿಗೆ ಯಾವುದೇ ದಾರಿ ತೋಚದೆ ತಾನೆ ಖುದ್ದಾಗಿ ನಿಂತು ಖಡ್ಗವನ್ನು ಹಿಡಿದು ಸೇನೆ ಮುನ್ನೆಡೆಸುವ ಸಂದರ್ಭ ಬಂದಾಗ ಅವರ ರಾಜ್ಯದವರೇ ಅದ ಹಲವರ ವಿರೋಧ ಎದುರಿಸಬೇಕಾಯಿತು.

ಹಲವರು ನಾವು ಹೇಳಿದ ವ್ಯಕ್ತಿಯನ್ನೇ ಪಟ್ಟಕ್ಕೆ ತರಬೇಕು, ಇಲ್ಲವಾದರೆ ನಾವೇ ಜನರನ್ನು ನಿಮ್ಮ ವಿರುದ್ದ ದಂಗೆ ಎಬ್ಬಿಸುತ್ತೇವೆ ಎಂದು ಎಚ್ಚರಿಸಿದರು. copy rights reserved (c) Dr.Laxmi g Prasad ಅತ್ತ ಕಡೆ ಧರಿ ಇತ್ತ ಕಡೆ ಪುಲಿ ಎರಡು ಅಪಾಯವೇ ಸರಿ ಎಂದು ಯೋಚಿಸಿ ತಮಗೆ ಮಕ್ಕಳು ಇಲ್ಲದೆ ಇದ್ದುದರಿಂದ ಬಸಪ್ಪ ನಾಯಕ ಎಂಬ ಹುಡುಗನನ್ನು ದತ್ತು ತಗೆದು ಕೊಂಡಳು.

ಚೆನ್ನಮ್ಮ ತನ್ನ ಜನರನ್ನು ಉದ್ದೇಶಿಸಿ ವೀರ ಕನ್ನಡಿಗರೇ, ಶೂರ ಸೈನಿಕರೇ ಇಂದು ಈ ರಾಜ್ಯದ ಅಳಿವು ಉಳಿವು ನಿಮ್ಮ ಕೈಯಲ್ಲಿದೆ.  ಗೆದ್ದರೆ ರಾಜ್ಯ, ಸತ್ತರೆ ಸ್ವರ್ಗ ಎಂಬ ಅಮರವಾಣಿಯೊಂದಿಗೆ  ಹುರಿದುಂಬಿಸಿದಳು. ಬಿಜಾಪುರದ ಸೈನ್ಯದ ಮೇಲೆ ಶೌರ್ಯದಿಂದ ಹೋರಾಡಿದರು ಜಯ ಲಭಿಸಲಾರದು ಎಂದು ಚೆನ್ನಮ್ಮ ಬಿದನೂರನ್ನು ಬಿಡಬೇಕಾಯಿತು. ಬೇರೆ ಮಾರ್ಗವಿಲ್ಲದೆ, ರಾಜ್ಯ ಭಂಡಾರದ ಸಂಪತ್ತನ್ನು, ಬೆಲೆಯುಳ್ಳ ವಸ್ತುಗಳನ್ನು ಭುವನಗಿರಿಗೆ ಸಾಗಿಸಿದಳು  ಶತ್ರುಗಳು ಬಂದಾಗ ಅವರು ಖಾಲಿಯಾದ ಭಂಡಾರವನ್ನು ಕಂಡು ನಿರಾಸೆಯಾದರು.copy rights reserved (c) Dr.Laxmi g Prasad 

ದತ್ತು ಪ್ರಕರಣದ ಸಮಯದಲ್ಲಿ ರಾಣಿಗೂ ಅವರ ಪ್ರಧಾನಿಗೂ ವಿರಸವಾಗಿ ಪ್ರಧಾನಿ ತಿಮ್ಮಣ್ಣ ನಾಯಕ ರಾಣಿಯನ್ನು ಬಿಟ್ಟು ಹೋಗಿದ್ದನು. ಬಿದನೂರು ಸುಲ್ತಾನ ವಶವಾಯಿತು ಎಂದು ಅರಿತ ದೇಶಾಭಿಮಾನಿ ತಿಮ್ಮಣ್ಣ ರಾಣಿಯನ್ನು ಭೇಟಿ ಮಾಡಿ  ತನ್ನ ತಪ್ಪನ್ನು ಮನ್ನಿಸಬೇಕೆಂದು ಬಿನ್ನಹವಿತ್ತು ರಾಣಿಯ ಜೊತೆ ಕೊಡಿಕೊಂಡು ಮತ್ತೆ ಬಿದನೂರು ಕೋಟೆಗೆ ಮುತ್ತಿಗೆ ಹಾಕಿದರು. ದಟ್ಟವಾದ ಕಾಡಿನಲ್ಲಿ ಚೆನ್ನಮ್ಮನ ಕೈಗೆ ಸಿಕ್ಕ ಸುಲ್ತಾನನ ಸೈನ್ಯ ನುಚ್ಚು ನೊರಾಯಿತು. ಬಿದನೂರು ಮತ್ತೆ ಚೆನ್ನಮ್ಮರ ವಶವಾಯಿತು. ಸರ್ವಾನುಮತದಿಂದ ಕೆಳದಿಯ ಪ್ರಜೆಗಳು ರಾಣಿಯ ಆಡಳಿತವನ್ನು ಒಪ್ಪಿಕೊಂಡರು

ಹೀಗೆ 1670ರಿಂದ 1696ರವರೆಗೆ ಧರ್ಮದಿಂದ ದಕ್ಷತೆಯಿಂದ ರಾಜ್ಯವಾಳಿ, ಕೀರ್ತಿ ವೈಭವಗಳಿಂದ ಬಾಳಿ  ಕಡೆಗೆ ರಾಜ್ಯವನ್ನು ದತ್ತು ಪುತ್ರನಿಗೆ ಒಪ್ಪಿಸಿ  ಶಿವ ಚಿಂತನೆಯಲ್ಲಿ ತೊಡಗಿದರು.ಇಲ್ಲಿಂದ ಮುಂದೆ ಕೆಳದಿ ಸಂಸ್ಥಾನವನ್ನು ಮುನ್ನಡೆಸಿದವನು ಬಸವಪ್ಪ ನಾಯಕ copy rights reserved

ಇವನು ಮಂಗಳೂರು ಸೀಮೆ ಸೇರಿದಂತೆ ಕೆಳದಿಯ ಅಲ್ಲ ಪ್ರದೇಶಗಳ ಆಳ್ವಿಕೆಯನ್ನು ದಕ್ಷವಾಗಿ ಮಾಡಿದ್ದನು .

ಕೆಳದಿಯನ್ನು ಆಳಿದ ಕೊನೆಯ ರಾಣಿ ವೀರಮ್ಮಾಜಿ. ಅವಳ ದತ್ತು ಪುತ್ರ ಚೆನ್ನ ಬಸವ .ಆತನಿಗೆ ಆಕೆ ಪಟ್ಟ ಕಟ್ಟದೆ ಅಧಿಕಾರ ಕೊಡದೆ ಸತಾಯಿಸಿದಳು ಎಂಬ ಅಭಿಪ್ರಾಯವೂ ಇದೆ .ಆತನೊಂದಿಗೆ ಸೇರಿಕೊಂಡು ಆತನಿಗೆ ಕೆಳದಿ ರಾಜ್ಯ ಕೊಡಿಸುತ್ತೇನೆಂದು ಹೇಳಿ ಆತನ ಸಹಾಯದಿಂದ ಮದಕರಿ ನಾಯಕ ಹಾಗೂ ಹೈದರಾಲಿ ಕೆಳದಿಯನ್ನು ವಶಪಡಿಸಲು ಯತ್ನಿಸಿದರೆಂದೂ ಐತಿಹ್ಯವಿದೆcopy rights reserved (c) Dr.Laxmi g Prasad 

.

     ಚೆನ್ನಬಸವಪ್ಪನಾಯಕನ ಅಂತ್ಯದ ಕುರಿತು ಆತ ರೋಗಬಾಧೆಯಿಂದ ತನ್ನ 14ನೆಯ ವಯಸ್ಸಿನಲ್ಲೇ ಮೃತನಾದನೆಂದು ಕೆಳದಿ ಸಂಸ್ಥಾನದ ಇತಿಹಾಸವನ್ನು ಎಳೆ ಎಳೆಯಾಗಿ ವಿವರಿಸುವ ಕೆಳದಿನೃಪ ವಿಜಯದಲ್ಲಿ ಈ ರೀತಿ ಹೇಳಿದೆ:

ಇರುತಿರುತುಂ ತದ್ಧರಣೀ

ಶ್ವರನುರುವಿಧಿವಶದೆ ತಾಂ ಚತುರ್ದಶವರ್ಷಾಂ

ತರದೊಳ್ ಪರಿಣಯಮಿಲ್ಲದೆ

ನೆರೆ ರೋಗಾರ್ತಿಯೊಳ್ ಶಿವನೊಳೈಕ್ಕಂಬಡೆದಂ || (ಕೆ.ನೃ.ವಿ. ೧೧.೫೨)

     ಆದರೆ ಕೆಲವು ಇತಿಹಾಸಕಾರರು (ಡಿ ಲಾ ಟೂರ್, ರೋಬ್ಸನ್, ಕಿರ್ಮಾನಿ, ವಿಲ್ಕ್ಸ್) ಚೆನ್ನಬಸವನಾಯಕನನ್ನು ರಾಣಿ ವೀರಮ್ಮಾಜಿಯೇ ಕೊಲ್ಲಿಸಿದಳೆಂದು ಹೇಳುತ್ತಾರೆ.copy rights reserved (c) Dr.Laxmi g Prasad 

ಒಟ್ಟಿನಲ್ಲಿ ಕೆಳದಿಯ ಇತಿಹಾಸದಲ್ಲಿ ಚೆನ್ನ ಬಸವನಾಯಕ ಓರ್ವ ದುರಂತ ನಾಯಕನಾಗಿ ಕಂಡು ಬರುತ್ತಾನೆ

ಇಲ್ಲಿ ಇಬ್ಬರು ಬಸವಪ್ಪ ನಾಯಕರು ಒಬ್ಬ ಚೆನ್ನ ಬಸವನಾಯಕ ರೂ ಆಳ್ವಿಕೆ ನಡೆಸಿರುವುದು ಕಂಡು ಬರುತ್ತದೆ

ಬಸ್ತಿ ನಾಯಕ ನೇಮದಲ್ಲಿ ದೈವವು ತನ್ನನ್ನು ಬಾಲ ಬಂಟ ಬಸಪ್ಪ ನಾಯಕ ಎಂದು ಕರೆದು ಕೊಳ್ಳುತ್ತದೆ.ತಾನು ಮಂಗಳೂರು ಸೀಮೆ ಹಿಡಿದು ಕೊಂಡೆ ಎಂದೂ ಹೇಳುತ್ತದೆ.   

ಸಾಮಾನ್ಯವಾಗಿ ಮೊದಲ ಅರಸ ಅಥವಾ ಕೊನೆಯ ಅರಸು ದೈವತ್ವ ಪಡೆದು ಆರಾಧಿಸಲ್ಪಡುವುದು ತುಳುನಾಡಿನಲ್ಲಿ ಕಂಡು ಬರುತ್ತದೆ.ಅಲ್ಲದೆ ದುರಂತ ಮತ್ತು ದೈವತ್ವ ಇಲ್ಲಿನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. copy rights reserved (c) Dr.Laxmi g Prasad ಇಲ್ಲಿ ಬಸವಪ್ಪ ನಾಯಕ ಮೊದಲ ಅರಸನಲ್ಲ.

ಚೆನ್ನ ಬಸವ ಕೆಳದಿಯ ಕೊನೆಯಅರಸ ಜೊತೆಗೆ ತಾಯಿಯಿಂದಲೇ ಕಿರುಕುಳಕ್ಕೆ ಒಳಗಾದವನು .ಕೇವಲ ಹದಿನಾಲ್ಕು ಅಥವಾ ಹತ್ತೊಂಬತ್ತು ವರ್ಷಕ್ಕೆ ಮರಣವಪ್ಪಿದವನು.ಹಾಗಾಗಿ ಈತ ಬಾಲಕನೇ ಆಗಿರುವುದರಿಂದ ಬಾಲ ಬಂಟ ಬಸಪ್ಪ ನಾಯಕ ಎಂದು ಕರೆಸಿಕೊಳ್ಳುವ ಬಸ್ತಿ ನಾಯಕ ಹೆಸರಿನ ದೈವ ಮೂಲತ ಈತನೇ ಆಗಿರಬಹುದು.ಈ ದೈವದ ಕೈಯಲ್ಲಿನ ಕಟ್ಟಿ ಗುರಾಣಿ ಕಿರೀಟವನ್ನು ಹೋಲುವ ತಲೆ ಪಟ್ಟ ಮೀಸೆ ಗಾಂಭೀರ್ಯಗಳು ಈತನ ಅರಸು ಮೂಲವನ್ನು ಸಮರ್ಥಿಸುತ್ತದೆ ಅದೇ ರೀತಿ ಆಡುವ ಭಾಷೆ ಕನ್ನಡವಾಗಿದ್ದು ಈತ ಮೂಲತ ತುಳುಭಾಷಿಗನಲ್ಲ ಎಂದು ತಿಳಿಸುತ್ತದೆ .ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆದರೆ ಇದಮಿತ್ಥಂ ಎಂದು ಹೇಳಲು ಸಾಧ್ಯವಾಗಬಹುದು copy rights reserved

Tuesday 12 May 2015

ಸಾವಿರದೊಂದು ಗುರಿಯೆಡೆಗೆ:ತುಳುನಾಡ ದೈವಗಳು 206-207 :ಕಲೆಂಬಿತ್ತಾಯಮತ್ತು ಭಟ್ರು ನಾಯಕ (c)ಡಾ.ಲಕ್ಷ್ಮೀ ಜಿ ಪ್ರಸಾದ


                    
                                                    ಚಿತ್ರ ;ಅಂತರ್ಜಾಲ
ಪುತ್ತೂರು ತಾಲೂಕಿನ ರಾಮಕುಂಜೇಶ್ವರ ದೇವಾಲಯದಲ್ಲಿ ಆರಾಧನೆಗೊಳ್ಳುವ ಕಲೆಂಬಿತ್ತಾಯ ಮತ್ತು ಭಟ್ರು ನಾಯಕ ಅಪರೂಪದ ಎರಡು ಭೂತಗಳು'
ಈ ದೈವಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ .ಶ್ರೀಯುತ ವೆಂಕರಮಣ ಉಪಾಧ್ಯಾಯರು "ಕಲೆಂಬಿ ತ್ತಾಯ ನೂರಿತ್ತಾಯ ಕುಟುಂಬದವರ ಮನೆ ದೈವ ಎಂದು ಹೇಳಿದ್ದಾರೆ .ಇದು ಅವರ ಧರ್ಮ ದೈವ ಎಂದು ಕುಟ್ಟಿ ಪರವ ಅವರು ಹೇಳಿದ್ದಾರೆ.
ನೂರಿತ್ತಾಯ ಅವರ ಕ್ತುಮ್ಬದ ಹಿರಿಯರು ಏಳು ಗಂಗೆ ಗೆ ಅವರ ಹಿರಿಯರ ಸಂಸ್ಕಾರಕ್ಕಾಗಿ ಹೋಗಿ ಬರುವಾಗ ಈ ದೈವ ಅವರೊಂದಿಗೆ ಹಿಂಬಾಲಿಸಿ ಬಂದು ಅವರ ಮನೆ ದೇವರ ಬಲಭಾಗದಲ್ಲಿ ನೆಲೆ ನಿಲ್ಲುತ್ತದೆ .
ಕಲೆಂಬಿ ತ್ತಾಯ ಎಂಬುದು ಶಿವಳ್ಳಿ ಬ್ರಾಹ್ಮಣರ ಒಂದು ಉಪನಾಮ ಕೂಡ .ಓರ್ವ ಕಲೆಂಬಿತ್ತಾಯ ಉಪನಾಮವಿರುವ ಬ್ರಾಹ್ಮಣ ಯಾವುದೊ ಕಾರಣಕ್ಕೆ ದೈವತ್ವ ಪಡೆದು ಆರಾಧಿಸಲ್ಪಟ್ಟಿರುವ ಸಾಧ್ಯತೆ ಇದೆ .
ಇನ್ನು ಭಟ್ರು ನಾಯಕ ಎನ್ನುವ ದೈವದ ಅಬಗ್ಗೆ ಕೂಡ ಯಾವುದೊಂದು ಮಾಹಿತಿ ಲಭ್ಯವಾಗಿಲ್ಲ.ಈ  ಬಗ್ಗೆ ಮಾಹಿತಿ ಇದ್ದವರು ತಿಳಿಸಬೇಕಾಗಿ ವಿನಂತಿ

Friday 1 May 2015

ಸಾವಿರದೊಂದು ಗುರಿಯೆಡೆಗೆ:ತುಳುನಾಡ ದೈವಗಳು:203 ಜತ್ತಿಂಗ © ಡಾ.ಲಕ್ಷ್ಮೀ ಜಿ ಪ್ರಸಾದ

                                          
© copy rights reserved(c) ಡಾಲಕ್ಷ್ಮೀ ಜಿ ಪ್ರಸಾದ ಚಿತ್ರ ಕೃಪೆ :ಚಿತ್ತರಂಜನ್ ತುಳುನಾಡು

ಸುಳ್ಯ ,ಪುತ್ತೂರು ,ಕಾರ್ಕಳ ಉಡುಪಿ ಸರಿದಂತೆ ತುಳುನಾಡಿನಾದ್ಯಂತ ಜಟ್ಟಿಗ ಎಂಬ  ಭೂತಕ್ಕೆ ಆರಾಧನೆ ಇದೆ .ಅರಮನೆ ಜಟ್ಟಿಗ ,ಕೋಟೆ ಜಟ್ಟಿಗ ,ಬೂಡು ಜಟ್ಟಿಗ ಇತ್ಯಾದಿ ಅನೇಕ ಹೆಸರುಗಳಿವೆ.ಇವೆಲ್ಲ ಒಂದೇ ದೈವ ಜತಿಗನ ಬೇರೆ ಬೇರೆ ಹೆಸರುಗಳೋ ಅಥವಾ ಬೇರೆ ಬೇರೆ ದೈವತಗಳೋ ಎಂಬ ಬಗ್ಗೆ ಇದಮಿಥ್ಹಂ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ .ಹೆಸರೇ ಸೂಚಿಸುವಂತೆ ಈತ ಮೂಲತಃ ಪೈಲ್ವಾನ ,ಕುಸ್ತಿ ಪಟು ಆಗಿರಬೇಕು
ವೀರ ಆರಾಧನೆ ಎಲ್ಲೆಡೆ ಕಂಡು ಬರುವ ವಿದ್ಯಮಾನ.ಹೊನ್ನಾವರ ,ಭಟ್ಕಳ ,ಗೇರುಸೊಪ್ಪೆ ಮೊದಲಾಡೆಗೆ ಜಟ್ಟಿಗನನ್ನು ಆರಾಧಿಸುತ್ತಾರೆ .ಈ ಬಗ್ಗೆ ಡಾ,ರಹಮತ್ ತರಿಕೆರೆ ಅವರು ಗೇರುಸೊಪ್ಪೆ ಬಸದಿಯ ಸಮೀಪವೇ ಬಯಲಿನಲ್ಲಿ ಇರುವ ಅನೇಕ ಜಟ್ಟಿಗನ ಕಲ್ಲುಗಳ ಬಗ್ಗೆ  " ಬುಡಕಟ್ಟು ಜನರಾದ ಗೊಂಡರ ದೈವಗಳು ಈ ಕಲ್ಲುಗಳು" ಎಂದು ಹೇಳಿದ್ದಾರೆ 

"ಗೇರುಸೋಪ್ಪೆಯನ್ನು ಆಳಿದ ಮೆಣಸಿನ ಚೆನ್ನ ಭೈರಾ ದೇವಿಯು ಅರಮನೆ ಕೋಟೆ ಗಳನ್ನು ಕಾಯಲು ದೂರದ ಆಂಧ್ರದ ಗೊಂಡ ಸಮುದಾಯದ ವೀರ ಜಟ್ಟಿಗಳನ್ನು ಕರೆಸಿದಳೆಂದು ಐತಿಹ್ಯವಿದೆ .ಕೋಟೆ ಜಟ್ಟಿ ,ಅರಮನೆ ಜಟ್ಟಿ ಹೆಸರುಗಳು ಇದ ನ್ನು  ದೃಡೀಕರಿಸುತ್ತವೆ.ಅರಮನೆಯ ಜಟ್ಟಿ ಅರಮನೆ ಕಾದವನು ಇರಬಹುದು ,ಕೋಟೆ ಕಾಯುವ ಜಟ್ಟಿ ಕೋಟೆ ಜಟ್ಟಿ ಇರಬಹುದು" ಎಂದು ರಹಮತ್ ತರಿಕೆರೆಯವರು ಅಭಿಪ್ರಾಯ ಪಟ್ಟಿದ್ದಾರೆ .

ಮೆಣಸಿನ ಯುದ್ಧದಲ್ಲಿ ಇವರೆಲ್ಲ ಸ್ವಾಮಿ ನಿಷ್ಠೆಯನ್ನು ಮೆರೆದು ಯುದ್ಧ ಮಾಡಿ ದುರಂತವನ್ನಪ್ಪಿರಬಹುದು .ಇವರ ಸಾಹಸ ಸ್ವಾಮಿ ನಿಷ್ಠೆ ಯಿಂದಾಗಿ ಇವರು ಜನ ಮಾನಸದಲ್ಲಿ ನಿಂತು ಆರಾಧನೆ ಪಡೆದಿರ ಬಹುದು .

ಹಗರಣ (ಒಂದು ದೃಶ್ಯ ಕಾವ್ಯ )ದ ಆರಂಭದಲ್ಲಿ ಜಟ್ಟಿಗರ ಪೂಜೆ ಮಾಡುವ ಸಂಪ್ರದಾಯವಿದೆ.

ಅಲ್ಲಿ ಆರಾಧಿಸಲ್ಪಡುವ ಜಟ್ಟಿಗರೇ ತುಳು ಪರಂಪರೆಯ ಜಟ್ಟಿ ದೈವವಾದರೆ ?ವೀರಾರಾಧನೆಯ ಪ್ರಸರಣ ಇಲ್ಲಿಯವರೆಗೆ ಹಬ್ಬಿ ಇಲ್ಲಿನ ಸಂಸ್ಕೃತಿಯಂತೆ ದೈವಗಳ ನೆಲೆಯಲ್ಲಿ ಆರಾಧಿಸಲ್ಪಟ್ಟಿರುವ ಸಾಧ್ಯತೆ ಇದೆ .

ಜಟ್ಟಿಗ ಮತ್ತು ಜತ್ತಿಂಗ ರನ್ನು ಹೆಸರಿನ ಸಾಮ್ಯತೆಯಿಂದಾಗಿ ಒಂದೇ ಭೂತ ಎಂದು ಜನರು ಭಾವಿಸಿದ್ದಾರೆ.
 ಆದ್ರೆ ಇಲ್ಲಿ ಪ್ರಚಲಿತವಿರುವ ಐತಿಹ್ಯದ ಪ್ರಕಾರ ಜತ್ತಿಂಗ  ಭೂತ ಮೂಲತಃ ಒಬ್ಬ ತಂತ್ರಿ .ಚೌಂಡಿ ಆರಾಧನೆಯನ್ನು ಮಾಡುವಾಗ ಓರ್ವ ತಂತ್ರಿ ದ್ರೋಹವನ್ನು ಮಾಡುತ್ತಾರೆ .ಆಗ ಕೋಪಗೊಂಡ ಚೌಂಡಿ /ಚಾಮುಂಡಿ ದೈವ ಆತನನ್ನು ಮಾಯ ಮಾಡಿ ಜಟ್ಟಿಗ ಎಂಬ ಹೆಸರಿನಲ್ಲಿ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತದೆ.ಈ ದೈವವನ್ನು ಜತ್ತಿಂಗೆ /ಜಟ್ಟಿಂಗ ಎಂದೂ ಕರೆಯುತ್ತಾರೆ

 ಈ ಬಗ್ಗೆ ಶಶಾಂಕ ನೆಲ್ಲಿತ್ತಾಯರು ನೀಡಿದ ಒಂದು ಮದಿಪಿನಲ್ಲೂ ಮಾಹಿತಿ ಇದೆ 
 
ಸ್ವಾಮಿ ಅಪ್ಪೆ ಚೌoಡಿ...........
ಆನಿದ ಕಾಲೋಡ್ ಗಟ್ಟದ ರಾಜ್ಯೋಡ್ ಬೀಮರಾಯೇ ತೋಟದ ಕಾರಂಬಡೆ ಮರತ ಮುದೆಲ್ ಪೊಟ್ಟು ಕಲ್ಲುಡ್ ನಿಲೆಯದ್ ಬೀಮರಾಯೇ ಚೌoಡಿ ಪಂಡುದ್ ಗೋಚರ ಮಲ್ಪಯಿ ದೈವದು ಉಲ್ಲ .
ಅನಿದ ಕಾಲೋಡ್ ನಿನನ್ ನಿಲೆ ಮಲ್ಪರೆ ಬತ್ತಿನ ತಂತ್ರಿಲು ಮೋಸ ಮಲ್ತೆರುಂದು ಪನ್ಪಿನೈಕದ್ ಅರೆನ್ ಮಾಯಾ ಮಲ್ತದು ಜಟ್ಟಿಗರಾಯೆ ಪನ್ಪಿನ ದೈವ ಸಗ್ತಿಯಾದ್ ನಿನ ಮರ್ಗಿಲ್ದ್ ನಂಬೊಂದು ಬರ್ಪಿಲೆಕ್ಕ ಮಲ್ತೊಂದು , ತುಳುನಾಡ ಪಂಚ ವರ್ಣದ ಪುಣ್ಯ ಬೂಮಿಡ್ ಬಡಕಾಯಿ ಅಂಕೋಲಾ ಗಡಿದುರ್ದ್ ತೆಂಕಾಯಿ ರಾಮೆಸರ ಗಡಿ ಮುಟ್ಟ ಜಾಗ್ ಜಾಗೆಡ್ ಸಂಚಾರೋಗ್ ಪಿದದೊಂಡ..

ಈತನನ್ನು ಜಟ್ಟಿಗರಾಯ ಎಂದು ಕರೆಯಬೇಕಿದ್ದರೆ ,ಇಲ್ಲಿ ಚಾಮುಂಡಿ ದೈವದ ಆರಾಧನೆಯಲ್ಲಿ ದ್ರೋಹ ಮಾಡಿದ ತಂತ್ರಿ ಜಟ್ಟಿಯೂ ಆಗಿದ್ದನೇ?ಎಂಬ ಸಂದೇಹ ಉಂಟಾಗುತ್ತದೆ .ಚಾಮುಂಡಿದೈವದಆಗ್ರಹಕ್ಕೆತುತ್ತಾಗಿಮಾಯವಾಗಿ  ದೈವತ್ವ ಪಡೆದ ತಂತ್ರಿ ಗೆ ಜಟ್ಟಿಗ ಎಂದು ಹೆಸರು ಬರಬೇಕಿದ್ದರೆ ಆತ ಜಟ್ಟಿ ಕೂಡಾ ಆಗಿದ್ದಿರಬೇಕು .
ಅಥವಾ ತಂತ್ರಿಗಳು/ತಂತ್ರಿದಾರ್ ಎಂಬುದು ಕಾಲಾಂತರದಲ್ಲಿ ತಂತ್ರಿಗ >ಜತ್ತಿಂಗ >ಜಟ್ಟಿಗ ಆಗಿ ಬದಲಾಗಿರುವ ಸಾಧ್ಯತೆ ಇದೆ 



ಅರಮನೆ ಜಟ್ಟಿಗ .ಕೋಟೆ ಜಟ್ಟಿಗ ಮೊದಲಾದ ದೈವಗಳು ಮೂಲತಃ ಜಟ್ಟಿಗರೇ/ಕುಸ್ತಿ ಪಟುಗಳೇ ಆಗಿರಬೇಕು /ಆದರೆ ಜತ್ತಿಂಗ ಮಾತ್ರ ಮೂಲತ ಓರ್ವ ಬ್ರಾಹ್ಮಣ ತಂತ್ರಿ .ಚಾಮುಂಡಿ ದೈವದ ಆರಾಧನೆಯಲ್ಲಿ ದ್ರೋಹ ಮಾಡಿದ್ದಕ್ಕೆ ದೈವ ಆತನನ್ನು ಮಾಯಾ ಮಾಡಿದೆ .ದೈವದ ಆಗ್ರಹಕ್ಕೆ ಸಿಲುಕಿ ಮಯವದವರು ಅದೇ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧಿಸಲ್ಪಡುವ ವಿಚಾರ ತುಳುವ ಸಂಸ್ಕೃತಿಯಲ್ಲಿ ಅಸಹಜವೇನೂ ಅಲ್ಲ.ಹಾಗೆಯೇ ಇಲ್ಲಿ ಕೂಡ ದ್ರೋಹವೆಸಗಿ ಚಾಮುಂಡಿ ದೈವದ ಆಗ್ರಹಕ್ಕೆ ತುತ್ತಾದ ಬ್ರಾಹ್ಮ ತಂತ್ರಿ ದೈವತ್ವ ಪಡೆದು ಜತ್ತಿಂಗ ದೈವವಾಗಿ ಆರಾಧಿಸಲ್ಪಡುತ್ತಿರುವ ಸಾಧ್ಯತೆ ಹೆಚ್ಚಾಗಿದೆ .
ಈ ಭೂತದ ವೇಷ ಭೂಷಣ ಅಭಿನಯ ಅಭಿವ್ಯಕ್ತಿಗಳು ಕೂಡ ಇದನ್ನು ಸಮರ್ಥಿಸುತ್ತದೆ .
ಜತ್ತಿಂಗ ಭೂತಕ್ಕೆ ಸಾಮಾನ್ಯವಾಗಿ ಬ್ರಾಹ್ಮಣರು ಧರಿಸುವ   ಜನಿವಾರ ಕಚ್ಚೆ ನಾಮ ಹಾಕಿ ಭೂತ ಕಟ್ಟುತ್ತಾರೆ .

ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆದರೆ ಸ್ಪಷ್ಟ ಮಾಹಿತಿ ತಿಳಿದು ಬರಬಹುದು 



Sunday 26 April 2015

ಡಾ.ವಿಜಯ ಸುಬ್ಬರಾಜ್ ದತ್ತಿ ನಿಧಿ "ಗಣ್ಯ ಲೇಖಕಿ "ಪುರಸ್ಕಾರ

 ಇಂದು ದಿನಾಂಕ 26/04 /2015 ರಂದು ಬೆಳಗ್ಗೆ ಬೆಂಗಳೂರಿನ ಎನ್ ಆರ್ ಕಾಲೋನಿ ಯಲ್ಲಿರುವ ಬಿ.ಎಂ ಶ್ರೀ ಪ್ರತಿಷ್ಠಾನದ ಡಾ.ವಿಜಯ ಸುಬ್ಬರಾಜ್ ದತ್ತಿ ನಿಧಿ ಗಣ್ಯ ಲೇಖಕಿ ಪುರಸ್ಕಾರ ಪ್ರದಾನ ಕಾರ್ಯಕ್ರಮ ನಡೆಯಿತು .ಖ್ಯಾತ ಕತೆಗಾರ್ತಿ ಸುನಂದಾ ಕಡಮೆಯರಿಗೆ ಗಣ್ಯ ಲೇಖಕಿ ಪುರಸ್ಕಾರವನ್ನು ಚೆನ್ನೈ ದೂರ ದರ್ಶನ  ಕೇಂದ್ರದ ನಿರ್ದೇಶಕರಾಗಿರುವ ಸಿ ಎನ್ ರಾಮ ಚಂದ್ರ ಅವರು ನೀಡಿದರು .
ವಿಮರ್ಶಕ ರಾಮ ರಾವ್ ಕುಲಕರ್ಣಿ ಅವರು ಸುನಂದಾ ಕಡಮೆಯವರ ಕೃತಿಗಳ ಬಗ್ಗೆ ಮಾತನಾಡಿದರು ,ವಿಜಯ ಸುಬ್ಬರಾಜ್ ಅವರು ಎಲೆ ಮರೆಯ ಕಾಯಿಯಂತೆ ಇದ್ದು ಮಹತ್ತರ ಸಾಹಿತ್ಯ ಸಂಶೋಧನೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಇರುವವರನ್ನು ಗುರುತಿಸುವುದು ತಮ್ಮ ಉದ್ದೇಶ ಎಂದು ತಾವು ದತ್ತು ನಿಧಿ ಸ್ಥಾಪಿಸಿದುದರ ಬಗ್ಗೆ ತಮ್ಮ ಆಶಯವನ್ನು ತಿಳಿಸಿದರು.
ಸಿ ಎನ್ ರಾಮಚಂದ್ರ ಅವರು ಸುನಂದಾ ಕಡಮೆಯವರ ಕೃತಿಗಳನ್ನು ವಿಮರ್ಶಿಸುತ್ತಾ ,ಪುರಸ್ಕಾರದ ಅಗತ್ಯ ಹಾಗೂ ಮಹತ್ವದ ಬಗ್ಗೆ ಮಾತನಾಡಿದರು.
ಬಿ ಎಂ ಶ್ರೀ ಪ್ರತಿಷ್ಥಾನದ ಅಧ್ಯಕ್ಷರಾಗಿರುವ ಪಿ ವಿ ನಾರಾಯಣ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು,ಕಾರ್ಯದರ್ಶಿಗಳಾದ ರವೀಂದ್ರ ಅವರು ಧನ್ಯವಾದ ಅರ್ಪಿಸಿದರು .ಇನ್ನೋರ್ವ ಕಾರ್ಯದರ್ಶಿಗಳಾದ ಪ್ರೊ.ಅಬ್ದುಲ್ ಬಷೀರ್ ಅವರು ಕಾರ್ಯಕ್ರಮ ನಿರ್ವಹಿಸಿದರು

ಹಂಪಿ ಕನ್ನಡ ವಿಶ್ವ ವಿದ್ಯಾಲಯಕ್ಕೆ ನೋಂದಣಿಗೊಂಡಿರುವ ಬಿ ಎಂ ಶ್ರೀ ಪ್ರತಿಷ್ಠಾನ ,ಎಂ ವಿ ಸೀ ಸ್ನಾತಕೋತ್ತರ ಸಂಶೋಧನಾ ಕೇಂದ್ರದ ಮೂಲಕ ನಾನು ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ -ಒಂದು ವಿಶ್ಲೇಷಣಾತ್ಮಕ ಅಧ್ಯಯನ ಎಂಬ ವಿಷಯದಲ್ಲಿ ನನ್ನ ಮೊದಲ ಪಿಎಚ್ ಡಿ ಪದವಿಯನ್ನು ಪಡೆದಿದ್ದು ,ಈ ಸಂಸ್ಥೆಯ ಹಳೆಯ ವಿದ್ಯಾರ್ಥಿನಿ ಹಾಗೂ ಸದಸ್ಯೆ ಕೂಡ ಆಗಿರುತ್ತೇನೆ ,ನನ್ನ ಸಂಶೋಧನಾ ಅಧ್ಯಯನ ಹಾಗೂ ಮೌಖಿಕ ಪರೀಕ್ಷೆ ಸಂದರ್ಭದಲ್ಲಿ ಡಾ.ವಿಜಯ ಸುಬ್ಬರಾಜ್ ಅವರು ನಮಗೆ ಪೂರ್ಣ ಬೆಂಬಲ ನೀಡಿ ಆತ್ಮ ವಿಶ್ವಾಸ ತುಂಬಿದ್ದನ್ನು ನಾನು ಮರೆಯಲಾರೆ .

ಎಲ್ಲರ ಮಾತುಗಳನ್ನು ಆಲಿಸಲು ಕೆಳಗೆ ಕ್ಲಿಕ್ ಮಾಡಿ
Vocaroo Voice Message



-ಲಕ್ಷ್ಮೀ ಜಿ ಪ್ರಸಾದ ,
ಕನ್ನಡ ಉಪನ್ಯಾಸಕಿ
ಸರ್ಕಾರಿ ಪದವಿ ಪೂರ್ವ ಕಾಲೇಜ್
ಬೆಳ್ಳಾರೆ ,ಸುಳ್ಯ ,ದ.ಕ ಜಿಲ್ಲೆ









Tuesday 21 April 2015

ಕಡಬದಿ೦ದ...: ತುಳು ಸಂಸ್ಕೃತಿಯ ಬಗ್ಗೆ ಎರಡು ಡಾಕ್ಟರೇಟ್ ಪಡೆದ ಮೊದಲ ಮಹಿಳೆ...

ಕಡಬದಿ೦ದ...: ತುಳು ಸಂಸ್ಕೃತಿಯ ಬಗ್ಗೆ ಎರಡು ಡಾಕ್ಟರೇಟ್ ಪಡೆದ ಮೊದಲ ಮಹಿ...: ಹೆ ಣ್ಣು ತನ್ನ ಕುಟು೦ಬದ ವ್ಯಾಪ್ತಿಯಲ್ಲಿ ತನ್ನ ಸ್ವತತ್ರ ಬದುಕಿಗಾಗಿ ಪ್ರಶ್ನೆ ಮಾಡಿದಾಗ ಒ೦ದು ಹೊಸ ಬದುಕಿನ ದಾರಿ ತೆರೆದು ಕೊಳ್ಳುತ್ತದೆ.ನಮ್ಮ ಮನೆಯ ಆವರಣದಲ್ಲೇ ಹೆಣ್ಣ...

ಕಡಬದಿ೦ದ...: ತುಳು ಸಂಸ್ಕೃತಿಯ ಬಗ್ಗೆ ಎರಡು ಡಾಕ್ಟರೇಟ್ ಪಡೆದ ಮೊದಲ ಮಹಿಳೆ...

 


  ಕಡಬದಿ೦ದ...: ತುಳು ಸಂಸ್ಕೃತಿಯ ಬಗ್ಗೆ ಎರಡು ಡಾಕ್ಟರೇಟ್ ಪಡೆದ ಮೊದಲ ಮಹಿಳೆ...: ಹೆ ಣ್ಣು ತನ್ನ ಕುಟು೦ಬದ ವ್ಯಾಪ್ತಿಯಲ್ಲಿ ತನ್ನ ಸ್ವತತ್ರ ಬದುಕಿಗಾಗಿ  ಪ್ರಶ್ನೆ ಮಾಡಿದಾಗ ಒ೦ದು ಹೊಸ ಬದುಕಿನ ದಾರಿ ತೆರೆದು ಕೊಳ್ಳುತ್ತದೆ.ನಮ್ಮ ಮನೆಯ ಆವರಣದಲ್ಲೇ ಹೆಣ್ಣ...
http://vkkadaba.blogspot.in/2015/03/laxmigprasad.html?spref=tw

Monday 20 April 2015

ಭೂತಗಳ ಅದ್ಭುತ ಜಗತ್ತಿಗೆ 75,000 ಓದುಗರು !


ಇಂದಿಗೆ ನನ್ನ ಬ್ಲಾಗ್ (ಭೂತಗಳ ಅದ್ಭುತ ಜಗತ್ತು )ಓದುಗರ ಸಂಖ್ಯೆ 75,000 ತಲುಪಿದೆ ಹಾಗೂ ನನ್ನ ಪೇಜ್ Bhutagala Adbhuta Jagattu 4,000 ಓದುಗರನ್ನು ಪಡೆದಿದೆ.
ಎರಡು ವರ್ಷ ಮೂರು ತಿಂಗಳ ಮೊದಲು ಪ್ರೊ.ಮುರಳೀಧರ ಉಪಾಧ್ಯರ ಸಹಾಯದಿಂದ ನಾನು ಬ್ಲಾಗ್ ತೆರೆದೆ,ಆರಂಭದಲ್ಲಿ ,ನನಗೆ ಯೂನಿಕೋಡ್ ತಂತ್ರಜ್ಞಾನ ತಿಳಿಯದ ಕಾರಣ ಬ್ಲಾಗ್ ನಲ್ಲಿ ಬರೆಯುದು ಕಷ್ಟಕರ ಆಗಿತ್ತು ಹಾಗಾಗಿ ಭೂತಗಳ ಚಿತ್ರ ಮಾತ್ರ ಬ್ಲಾಗ್ ಗೆ ಹಾಕುತ್ತಿದ್ದೆ

 ಇಂದಿಗೆ ಸರಿಯಾಗಿ ಎರಡು ವರ್ಷ (21-04-2013)ಮೊದಲು ಅಬ್ದುಲ್ ರಶೀದ್ ಅವರ ಪ್ರೇರಣೆಯಿಂದ ಕೆಂಡ ಸಂಪಿಗೆಗಾಗಿ ಭೂತಗಳ ಅದ್ಭುತ ಜಗತ್ತಿನಲ್ಲಿ ಎಂಬ ಅಂಕಣ ಬರೆಯಲು ಆರಂಭಿಸಿದೆ .ಆಗ ನನಗೆ Aravinda VK ಅವರು ಸಂಶೋಧಿಸಿದ aravinda vk converter (github.com//aravindavk/ascii2unicode) ಮೂಲಕ ನುಡಿ ಬರಹದಲ್ಲಿ ಬರೆದಿರುವುದನ್ನು ಯೂನಿಕೋಡ್ ಗೆ ಬದಲಾಯಿಸಲು ಕಲಿತಿದ್ದೆ .ಜೊತೆಗೆ ಬ್ಲಾಗ್ ಲೇಖನಗಳನ್ನು ಫೇಸ್ ಬುಕ್ ಹಾಗೂ ಇತರ ಗುಂಪುಗಳಿಗೆ share ಮಾಡುವುದನ್ನು ಪದ್ಯಾಣ ರಾಮಚಂದ್ರಣ್ಣ ಅವರ ಸಹಾಯದಿಂದ ಕಲಿತೆ


ನಂತರ 20 ವಾರಗಳ ಕಾಲ ಕೆಂಡ ಸಂಪಿಗೆಗೆ ತುಳುನಾಡಿನ ಅಪರೂಪದ ಭೂತಗಳ ಬಗ್ಗೆ ಬರೆದೆ.ನಂತರ ಅದು ನಿಂತು ಹೋಯಿತು
ಈ ನಡುವೆ ನನ್ನ ಲೇಖನಗಳನ್ನು ಓದಿದ ಅನೇಕ ಸ್ನೇಹಿತರು ಬೇರೆ ಬೇರೆ ಭೂತಗಳ ಕುರಿತು ಮಾಹಿತಿ ಕೇಳುತ್ತಿದ್ದರು ,ಅವರಿಗಾಗಿ ನಾನು ಮಾಹಿತಿ ಸಂಗ್ರಹಿಸಿ ನೀಡುತ್ತ ಇದ್ದೆ
.ಇದಕ್ಕೂ ಮೊದಲೇ ನನ್ನ ತುಂಡು ಭೂತಗಳು -ಒಂದು ಅಧ್ಯಯನ ,ಹಾಗೂ ತುಳುನಾಡಿನ ಅಪ್ರುವ ಭೂತಗಳು ಕೃತಿ ಪ್ರಕಟವಾಗಿತ್ತು .ಇದರಲ್ಲಿ ಅನೇಕ ಅಪರೂಪದ ಹೆಸರು ಕೂಡ ದಾಖಲಾಗಿಲ್ಲದ ಭೂತಗಳ ಬಗ್ಗೆ ಬರೆದಿದ್ದೆ

ಹಾಗಾಗಿ ಡಾ.ವಾಮನ ನಂದಾವರ ಅವರ ಪ್ರೇರಣೆಯಿಂದ ಸ್ನೇಹಿತರ ಬೆಂಬಲದೊಂದಿಗೆ ನಾನು ಒಂದು ವರ್ಷ ಮೊದಲು (21-02-2014) ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು ಎಂಬ ಸರಣಿಯನ್ನು ಆರಂಭಿಸಿದೆ .ಈಗ ಅದು 190 ಆನ್ನು  ತಲುಪಿದೆ .ಜೊತೆಗೆ ಎಪ್ಪತ್ತೈದು ಸಾವಿರ ಓದುಗರನು ತಲುಪಿದೆ,ಇಲ್ಲಿರುವ ಹೆಚ್ಚ್ಚಿನ ದೈವಗಳ ಮಾಹಿತಿ ನನ್ನ ಸ್ವಂತದ್ದು,ನಾನು ಕ್ಷೇತ್ರ ಕಾರ್ಯ ಮಾಡಿ ಪಡೆದುಕೊಂಡ ಮಾಹಿತಿಗಳು .ಸುಮಾರು 50-60 ದೈವಗಳ ಮಾಹಿತಿಯು ಡಾ.ಚಿನ್ನಪ್ಪ ಗೌಡ ,ಡಾ,viveka ರೈ ,ಡಾ.ಅಮೃತ ಸೋಮೇಶ್ವರ ,ಡಾ,ಬನ್ನಂಜೆ ಬಾಬು ಅಮೀನ್ ಅವರ ಕೃತಿಗಳಲ್ಲಿವೆ .ಉಳಿದವೆಲ್ಲ ನನ್ನ ಸ್ವಂತ ಅಧ್ಯಯನದ ಫಲಿತಗಳು ಆಗಿವೆ . 

ಈ ನಡುವೆ ದೀಕ್ಷಿತ್ ರೈ ಎನ್ಮೂರು ಅವರ ಸಹಾಯದಿಂದಒಂದು ವರ್ಷದ Bhutagala Adbhuta Jagattu ಎಂಬ page ಆನ್ನೂ ತೆರದೆ
.ಅದೂ ಇಂದಿಗೆ 4000 like ಎಂದರೆ ಓದುಗರನ್ನು ಪಡೆಯಿತು
ಇದೆಲ್ಲ ಮುಖ ಪುಸ್ತಕ ಬಂಧುಗಳ ನಿರಂತರ ಪ್ರೋತ್ಸಾಹ ಕಾರಣವಾಗಿದೆ .ಆದರಿಂದ ಎಲ್ಲ ಸ್ನೇಹಿತರಿಗೂ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ

ನನ್ನ ಬ್ಲಾಗ್ http://laxmipras.blogspot.com
ನನ್ನ page https://www.facebook.com/pages/Bhutagala-Adbhuta-Jagattu/729560787088596?fref=photo