Tuesday 14 November 2023

ನೆತ್ತೆರ್ ಮುಗುಳಿ ( ಪಾಪೆಲು ಚಾಮುಂಡಿ ) - ಡಾ.ಲಕ್ಷೀ ಜಿ ಪ್ರಸಾದ್

 ಪಾಪೆಲು ಚಾಮುಂಡಿ : 

       ಪಾಪೆಲು ಚಾಮುಂಡಿ ಅನ್ಯಾಯ ಮಾಡಿದವನನ್ನು ರಕ್ತಕಾರಿ ಸಾಯುವಂತೆ ಮಾಡುತ್ತದೆ. ಆದ್ದರಿಂದ ಪಾಪೆಲು ಚಾಮುಂಡಿ ದೈವವು ನೆತ್ತರ ಮುಗುಳಿ ಎಂದೇ ಪ್ರಸಿದ್ಧವಾಗಿದೆ. ಪಾಪೆಲು ಚಾಮುಂಡಿ ದೈವದ ಪಾಡ್ದನದ ಪ್ರಕಾರ ಸಾವಿರ ವರ್ಷಗಳ ಹಿಂದೆ ಘಟ್ಟದ ಮೇಲಿನಿಂದ ಚಾರ್ಮಾಡಿ (ಬಂಗಾಡಿ) ಘಾಟಿಯ ಮೂಲಕ ವ್ಯಾಘ್ರವಾಹಿನಿ ರಕ್ತ ಚಾಮುಂಡಿ ದೈವವು ಇಳಿದು ಬರುತ್ತದೆ. ಲಿಂಗಾಯತ ಮತಕ್ಕೆ ಸೇರಿದ್ದ ರಾಮಸೆಟ್ಟಿ ಎಂಬುವರು ರುದ್ರಾಂಶ ಸಂಭೂತರಾಗಿದ್ದರು. ಅವರ ಜೊತೆಗೆ ವ್ಯಾಘ್ರವಾಹಿನಿ ರಕ್ತ ಚಾಮುಂಡಿಯು ಕಾವು ತ್ರಿಮೂರ್ತಿ ದೇವಸ್ಥಾನಕ್ಕೆ ಬಂದು ತ್ರಿಮೂರ್ತಿಗಳಲ್ಲಿ ತನಗೆ ನೆಲೆಸಲು ಯಾವ ಸ್ಥಳ ಯೋಗ್ಯವಾದುದುಎಂದು ಕೇಳುತ್ತದೆ. ಆ ಕಾಲದಲ್ಲಿ ಅಪ್ಪೆಟ್ಟಿ ಈರೆಟ್ಟಿ ಒಡೆಯರುಗಳು ಧರ್ಮಿಷ್ಠರಾಗಿದ್ದುಸತ್ಯ-ಧರ್ಮ-ನ್ಯಾಯ ನೀತಿಗಳ ಸಾಕಾರ ಮೂರ್ತಿಗಳಾಗಿದ್ದರು.© ಡಾ.ಲಕ್ಷ್ಮೀ ಜಿ‌ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು,ಮೊಬೈಲ್ 9480516684  ಆದ್ದರಿಂದ ದೇವರು ವ್ಯಾಘ್ರವಾಹಿನಿ ರಕ್ತಚಾಮುಂಡಿಗೆ ಅಪ್ಪೆಟ್ಟಿ ಒಡೆಯರುಗಳಿಂದ ಕಟ್ಟೆ ಗುಡಿಗಳನ್ನು ನಿರ್ಮಿಸಿಕೊಂಡು ಕಾವು ದೇವರುಗಳಿಗೆ ಪ್ರಧಾನ ಬಂಟರಂತೆ ಇದ್ದು ಗ್ರಾಮಕ್ಕೆ ಗ್ರಾಮಾಧಿ ದೇವತೆ ಎನಿಸಿಕೊಂಡಿರಲು ಆದೇಶವೀಯುತ್ತಾರೆ. © ಡಾ.ಲಕ್ಷ್ಮೀ ಜಿ ಪ್ರಸಾದ್ 
ವ್ಯಾಘ್ರವಾಹಿನಿ ರಕ್ತಚಾಮುಂಡಿಯ ಜೊತೆಗೆ ಬಂದ ದೈವಾಂಶ ಸಂಭೂತರಾದ ರಾಮಸೆಟ್ಟಿ ತಮ್ಮ ಯೋಗ ಶಕ್ತಿಯಿಂದ ಮನುಷ್ಯ ರೂಪವನ್ನು ಬಿಟ್ಟು ಬೈರವ ದೇವತೆಯಾಗಿ ವ್ಯಾಘ್ರವಾಹಿನಿ ರಕ್ತಚಾಮುಂಡಿ ದೈವದೊಂದಿಗೆ ಸೇರುತ್ತಾರೆ. ರಾಮಶೆಟ್ಟಿ ಭೈರವ ದೇವತೆಯಾಗಿ ರಕ್ತಚಾಮುಂಡಿ ಸೇರಿಗೆಗೆ ಸಂದು ಪಾಪೆಲು ಚಾಮುಂಡಿ ಎಂಬ ದೈವವಾಗಿ ಆರಾಧನೆ ಪಡೆಯುತ್ತಾರೆ. ಕೊಕ್ಕಡ, ಕಾವು, ಬೆಳ್ತಂಗಡಿ, ಪರಿಸರದಲ್ಲಿ ಪಾಪೆಲು ಚಾಮುಂಡಿ (ನೆತ್ತರು ಮುಗುಳಿ) ದೈವಕ್ಕೆ ಆರಾಧನೆ ಇದೆ.© ಡಾ.ಲಕ್ಷ್ಮೀ ಜಿ ಪ್ರಸಾದ್
ಹೆಚ್ಚಿನ ಮಾಹಿತಿಗಾಗಿ ಕರಾವಳಿಯ ಸಾವಿರದೊಂದು ದೈವಗಳು ಗ್ರಂಥ ನೋಡಬಹುದು 

ನಮ್ಮ ಭೂತಾರಾಧನೆ ಪರಂಪರೆ ಅರಿಯಲು ಇರುವ ಒಂದೊಳ್ಳೆ ಮಾಹಿತಿ ಪೂರ್ಣ, ಸಂಗ್ರಹ ಯೋಗ್ಯ ಗ್ರಂಥ- ಶ್ರೀನಿಧಿ ರಾವ್




ನಮ್ಮ ಭೂತಾರಾಧನೆ ಪರಂಪರೆ ಅರಿಯಲು ಇರುವ ಒಂದೊಳ್ಳೆ ಮಾಹಿತಿ ಪೂರ್ಣ, ಸಂಗ್ರಹ ಯೋಗ್ಯ  ಗ್ರಂಥ- ಶ್ರೀನಿಧಿ ರಾವ್ 


 ಸಿಗಬೇಕಿರುವುದು ಸಿಕ್ಕೇ ಸಿಗುತ್ತದೆ. ಆಗಬೇಕಿರುವುದು ಆಗೇ ಆಗುತ್ತದೆ. 


ಡಾ. ಲಕ್ಷ್ಮಿ ವಿ. ಅವರ ಐತಿಹಾಸಿಕ ಗ್ರಂಥದ ಕರಡು ಬರಹ ಓದುವ ಸೌಭಾಗ್ಯ ಮೊದಲಿಗೆ  ದೇವರು ಕರುಣಿಸಿದ್ದು ಯಾಕಿರಬಹುದು ಅಂತ ಇನ್ನು ಯೋಚಿಸ್ತಾ ಇದ್ದೀನಿ. 


ಗ್ರಂಥ ರೆಡಿ ಆಗಿ ಅವರಿಗೆ ಸಿಕ್ಕಾಗ ತುಂಬಾ ಖುಷಿ ಆಗಿತ್ತು.  .. ಆದರೆ  ಅಯ್ಯಾ.. ನಾನು ಪುಸ್ತಕ ಹಿಡಿದು ಓದಲು ಇನ್ನು ಎಷ್ಟು ಸಮಯ ಕಾಯಬೇಕು ಅನ್ನಿಸಿತ್ತು. ಯಾರು ಬರುವವರು ಇದ್ದಾರೆ? ಸ್ವಲ್ಪ ಯೋಚಿಸಿದೆ. ಒಂದೆರಡು ಹೆಸರು ತಲೆಗೆ ಬಂದ್ರೂ ಕೇಳೋಕೆ ಹೋಗಲಿಲ್ಲ. 


ಮೊನ್ನೆ ಮಂಗಳವಾರ ಅಚಾನಕ್ಕಾಗಿ Jevitha Rodrigues    ಜೊತೆ ಮಾತಾಡಿದಾಗ ಹೊಸ ಬೆಳಕು ಮೂಡಿ ಇವತ್ತು ಕೈಗೆ ಪುಸ್ತಕ ಸಿಕ್ಕಿತು. ಗ್ರಂಥವನ್ನು ಹೊತ್ತು ತಂದು ಕೊಟ್ಟ ಉಮಾಶಂಕರ್ ಅವರಿಗೆ ವಂದನೆಗಳು .


ನಿಜಕ್ಕೂ ನಮ್ಮ ಭೂತಾರಾಧನೆ ಪರಂಪರೆ ಅರಿಯಲು ಇರುವ ಒಂದೊಳ್ಳೆ ಮಾಹಿತಿ ಪೂರ್ಣ, ಸಂಗ್ರಹ ಯೋಗ್ಯ  ಗ್ರಂಥ.


ನಾನು ಲಕ್ಷ್ಮಿ ಅಕ್ಕ ಹೇಗೆ ಪರಿಚಯ ಆದೆವು. ನಮ್ಮ ಪರಿಚಯದ ಹಿಂದೆ  ದೇವರು ಅದೆಂತಹ ಉನ್ನತವಾದ ಕಾರಣ ಇಟ್ಟಿದ್ದ. ಮೂಲತಃ ನಾನು ಸೋಮಾರಿ ಯಾವುದನ್ನು ತಾನಾಗಿ ಕೈಗೆ ತಗೊಂಡು ಮಾಡುವ ಕತೆ ಇಲ್ಲ. ಹೇಗೋ ಇದೊಂದು ಕಾರ್ಯ ನಾನು ನಂಬುವ ದೈವ ದೇವರು ಮಾಡಿಸಿದರು .


 🙏🙏🙏

Monday 13 November 2023

ಕರಾವಳಿಯ ಸಾವಿರದೊಂದು ದೈವಗಳು- ಉದಯ ಬಿರ್ಮುಕಜೆ ಪೆರ್ಲಂಪಾಡಿ

 



ಕರಾವಳಿಯ ಸಾವಿರದೊಂದು ದೈವಗಳು  - ಉದಯ ಗೌರಿ ಬಿರ್ಮುಕಜೆ ,ಪೆರ್ಲಂಪಾಡಿ 


ಡಾ.ಲಕ್ಷ್ಮೀ ಜಿ.ಪ್ರಸಾದ್ ರವರು ಸಂಪಾದಿಸಿದ 'ಕರಾವಳಿಯ ಸಾವಿರದೊಂದು ದೈವಗಳು' ಕೃತಿಯನ್ನು ಲೇಖಕಿಯವರು ಕಳುಹಿಸಿಕೊಟ್ಟಿದ್ದು ಇಂದು( 21-09-2021) ಕೈ ಸೇರಿತು.ಕೊಡಗು ಸೇರಿದಂತೆ ಕಾರವಾರದಿಂದ ಕೊಟ್ಟಾಯಂವರೆಗಿನ ತುಳು,ಕನ್ನಡ,ಮಲಯಾಳ,ಕೊಡವ ಪರಿಸರದ ಇನ್ನೂರ ಇಪ್ಪತ್ತೆಂಟು ದೈವಗಳ ಮಾಹಿತಿಯುಳ್ಳ ಅಪರೂಪದಲ್ಲಿ ಅಪರೂಪವೆನಿಸುವ ಕೃತಿ ಇದಾಗಿದೆ. ವೃತ್ತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿರುವ ಇವರು ಸಂಸ್ಕ್ರತ, ಕನ್ನಡ,ಹಿಂದಿ ಭಾ಼ಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಒಂದು ಎಂ.ಫೀಲ್,ಎರಡು ಪಿ ಹೆಚ್.ಡಿ ಪಡೆದವರು.ಬಿ.ಎಸ್ಸಿ,ಬಿ.ಇಡಿ,ಲಿಪಿ ಶಾಸ್ತ್ರ ದಲ್ಲಿ ಡಿಪ್ಲೊಮ ಹೀಗೆ ಹಲವು ಶೈಕ್ಷಣಿಕ ಅರ್ಹತೆಯನ್ನು ಹೊಂದಿದವರು.ಬುದ್ಧಿ ಬಂದಾಗಿನಿಂದ ಬರೀ ಓದು,ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಗಟ್ಟಿಗಿತ್ತಿ .ಹೀಗೆ ಅವರ ಬಗ್ಗೆ ಬರೆಯುವುದು ಬಹಳಷ್ಟಿದೆ.ಅಂತಹ ಅಪ್ರತಿಮ ಫ್ರತಿಭೆ ಸರಳ ಸಜ್ಜನರಾದ ಲಕ್ಷ್ಮೀ ಜಿ.ಪ್ರಸಾದ್ ರವರ ಇಪ್ಪತ್ತು ವರ್ಷ ಗಳ ಅವಿರತ ಪರಿಶ್ರಮದ ಫಲವನ್ನು ಸಮಾಜದ ಮುಂದಿಟ್ಟಿದ್ದಾರೆ. ರಾಮಚಂದ್ರಾಪುರ ಮಠದ ಶ್ರೀಗಳ ಅಮೃತ ಹಸ್ತದಿಂದ ಲೋಕಾರ್ಪಣೆಗೊಂಡ ಕೃತಿ ಅತ್ಯಂತ ಸುಂದರವಾಗಿದೆ ಮೂಡಿ ಬಂದಿದೆ.130 gsm art paper ಬಳಸಲಾಗಿದೆ.ವರ್ಣ ಚಿತ್ರಗಳು ಮತ್ತು ಕಪ್ಪಬಿಳುಪು ಚಿತ್ರಗಳು ಅತ್ಯಂತ ಸ್ಪಷ್ಟವಾಗಿ ಬಂದಿವೆ.                     ಕರಾವಳಿಗರ ಪ್ರತಿ ಮನೆಯಲ್ಲೂ ಇರಲೇ ಬೇಕಾದ ಸಂಗ್ರಹಯೋಗ್ಯ ಕೃತಿ.ದೈವಗಳ ಆರಾಧಕರು ನಾವಾಗಿದ್ದರೂ ನಸವು ಆರಾಧಿಸುವ ದೈವಗಳ ಮಾಹಿತಿ ನಮಗೆ ಸ್ಪಷ್ಟವಾಗಿರುವುದಿಲ್ಲ ಅದಕ್ಕೆ ಪರಿಹಾರ ಕೃತಿ. ಜಾಸ್ತಿ ಬರೆಯುವುದಿಲ್ಲ ವನಿತೆಯೊಬ್ಬಳ ಸಾಹಸಕ್ಕೆ ಎಲ್ಲರೂ ಕೈ ಜೋಡಿಸಿ ಅವರ ಶ್ರಮವನ್ನು ಸಾರ್ಥಕಗೊಳಿಸೋಣ. ಈ ಕೃತಿಯನ್ನು ಕೊಂಡು ಓದೋಣ.ನಮ್ಮ ದೈವಗಳ ಬಗ್ಗೆ ತಿಳಿದುಕೊಳ್ಳೋಣ.ಭಕ್ತಿಯ ದೀವಟಿಕೆಗೆ ಮತ್ತಷ್ಟು ತೈಲ ಎರೆಯುವ ಕಾರ್ಯವಾಗಲಿ.                             ಈ ಕೃತಿಗಾಗಿ ಲಕ್ಷ್ಮೀ ಜಿ.ಪ್ರಸಾದ್ ರವರನ್ನು ಸಂಪರ್ಕಿಸಿ. ಮೊ.ಸಂಖ್ಯೆ.9480516684.

ಕರಿ ಚಾಮುಂಡಿ - ಡಾ.ಲಕ್ಷ್ಮೀ ಜಿ ಪ್ರಸಾದ್

 ಕರಿಚಾಮುಂಡಿ :

     ಕರಿಚಾಮುಂಡಿ ದೈವವನ್ನು ಕರಿಚಾಂಡಿ ಎಂದೂ ಕರೆಯುತ್ತಾರೆ. ಕರಿಚಾಮುಂಡಿ ಯಾರೆಂಬ ಬಗ್ಗೆ ಸೂಕ್ತ ಮಾಹಿತಿ ಸಿಕ್ಕಿಲ್ಲ. ಆದರೆ ಮಡಪ್ಪಾಡಿಯಲ್ಲಿ ಕರಿಚಾಮುಂಡಿ ಭೂತಕ್ಕೆ ನೇಮ ಆಗುವಾಗ ಹೇಳಿದ ಪಾಡ್ದನದ ಕೆಲವು ಸಾಲುಗಳಲ್ಲಿ ಕರಿಚಾಮುಂಡಿಯ ತಂದೆ ಕಾನಕಲ್ಲಟೆ ದೇವರೆಂದೂತಾಯಿ ನೆಲವುಲ್ಲ ಸಂಖ್ಯೆಎಂದೂ ಹೇಳಿದೆ. ಕೊರಗ ತನಿಯ ತಾಯಿ ಮೈರೆಯ ತಂದೆ ತಾಯಿಯನ್ನು ಕಾನಕಲ್ಲಟೆ ದೇವರುನೆಲವುಲ್ಲ ಸಂಖ್ಯೆ ಎಂದು ಕೊರಗ ತನಿಯ ಪಾಡ್ದನದಲ್ಲಿ ಹೇಳಿದೆ.© ಡಾ.ಲಕ್ಷ್ಮೀ ಜಿ ಪ್ರಸಾದ್  ಕಾಸರಗೋಡುಬಂಟ್ವಾಳ ಪರಿಸರದಲ್ಲಿ ಒಂಜಿ ಕುಂದ ನಲ್ಪ ದೈವೊಳ ನೇಮದಲ್ಲಿ ಪುದ ಎಂಬ ಭೂತಕ್ಕೆ ಆರಾಧನೆ ಇದೆ. ಕೊರಗ ತನಿಯನ ತಾಯಿ ಮೊದಲು ಪಾರಿವಾಳವಾಗಿದ್ದು ನಂತರ ಹೆಣ್ಣಾದವಳು ಎಂದು ಒಂದು ಪಾಡ್ದನದಲ್ಲಿ ಹೇಳಿರುವ ಬಗೆ ಡಾ. ಅಮೃತ ಸೋಮೇಶ್ವರರು ತಿಳಿಸಿದ್ದಾರೆ. ಆದ್ದರಿಂದ ಕೊರಗ ತನಿಯನ ತಾಯಿ ಮೈರೆಯೇ ಪುದ ಎಂದೂಕರಿಚಾಮುಂಡಿ ಎಂದೂ ಆರಾಧನೆ ಹೊಂದಿರುವ ಸಾಧ್ಯತೆ ಇದೆ.© ಡಾ.ಲಕ್ಷ್ಮೀ ಜಿ ಪ್ರಸಾದ್ 

ಪಾಡ್ದನದ ಕಥೆಗಳು : ಚಾಮುಂಡಿ ದೈವದ ಹುಟ್ಟಿನ ಕಥೆ - ಡಾ.ಲಕ್ಷ್ಮೀ ಜಿ‌ ಪ್ರಸಾದ್

 ಚಾಮುಂಡಿ ಪಾಡ್ದನ


 


ಚಾಮುಂಡಿ ತುಳುನಾಡಿನ ಎಲ್ಲಡೆಗಳಲ್ಲಿ ಆರಾಧಿಸಲ್ಪಡುವ ಪ್ರಧಾನ ದೈವ, ಚಾಮುಂಡಿ ಮೂಲತಃ ಪುರಾಣ ಮೂಲ ದೈವವೇ? ಎಂಬ ಬಗ್ಗೆ ಇದಮಿತ್ಥಂ ಎಂಬ ನಿರ್ಣಯಕ್ಕೆ ಬರುವುದು ಕಷ್ಟಸಾಧ್ಯವಾದ ವಿಚಾರವಾಗಿದೆ. ಚಾಮುಂಡಿ ದೈವದ ಆರಾಧನೆಯ ಸಂದರ್ಭದಲ್ಲಿ ಅದರ ಪ್ರಸರಣ ಕಾರಣಿಕರ ಕುರಿತಾದ ಪಾಡ್ದನವನ್ನು ಹೇಳುತ್ತಾರೆ. ಚಾಮುಂಡಿ ಭೂತದ ಹುಟ್ಟಿನ ಕುರಿತಾಗಿ ಏನನ್ನೂ ಹೇಳುವುದಿಲ್ಲ. ಅಲೌಕಿಕ ನೆಲೆಯಲ್ಲಿ ಏಳು ಸಮುದ್ರದ ನಡುವೆ ಎಪ್ಪತ್ತೇಳು ನಾಗಬಿಂಬಗಳ ನಡುವೆ ಚಾಮುಂಡಿ ದೈವ ಉದ್ಭವಿಸಿ ಬಂತು ಎಂದು ಹೇಳುತ್ತಾರೆ.


ಚಾಮುಂಡಿ ದೈವದ ಹುಟ್ಟಿನ ಕುರಿತಾದ ಒಂದು ಪಾಡ್ದನದ ಭಾಗವನ್ನು ಪಾಡ್ದನಗಾರ್ತಿ ಶ್ರೀಮತಿ ಶಾರದಾ ಜಿ.ಬಂಗೇರ ಅವರಿಂದ ನಾನು ಸಂಗ್ರಹಿಸಿದ್ದು ಅದರ ಪ್ರಕಾರ ಚಾಮುಂಡಿ ಭೂತ ಮೂಲತಃ ಚಾಮುಂಡಿ ಎಂಬ ಹೆಸರಿನ ಹುಡುಗಿ. ಈ ಪಾಡ್ದನದಲ್ಲಿ ಎಡದಲ್ಲಿ ಎಡಮಲೆ, ಬಲದಲ್ಲಿ ಬಲಮಲೆ, ನಡುವಿನಲ್ಲಿ ನಡುಮಲೆ ಇದೆ. ಇದರಲ್ಲಿ ಭೀಮರಾಯ ಭಟ್ಟರ ಸಂಪಿಗಾನ ತೋಟವಿದೆ. ಒಂದು ದಿನ ಭೀಮರಾಯ ಭಟ್ಟರು ಸ್ನಾನಕ್ಕೆಂದುಸಂಪಿಗಾನ ತೋಟದ ನಡುವಿನಲ್ಲಿರುವ ತಾವರೆಯ ಕೊಳಕ್ಕೆ ಬರುತ್ತಾರೆ. ಅಲ್ಲಿಒಂದು ಬಿಳಿಯ ತಾವರೆ ಹೂ ಭೀಮರಾಯ ಭಟ್ಟರ ಮಡಿಲಿಗೆ ಬಂದು ಬೀಳುತ್ತದೆ. ತಮ್ಮ ಉತ್ತರೀಯದಲ್ಲಿ ಆ ಬಿಳಿಯ ತಾವರೆ ಹೂವನ್ನು ಕಟ್ಟಿಕೊಂಡು ಬಂದ ಭೀಮುರಾಯ ಭಟ್ಟರು ದೇವರ ಕೋಣೆಗೆ ತಂದುದೇವರಿಗೆ ಅರ್ಪಿಸುತ್ತಾರೆ. ಆಗ ಆ ಬಿಳಿಯ ತಾವರೆ ಹೂ ಒಂದು ಹೆಣ್ಣು ಮಗುವಾಗುತ್ತದೆ. ಮಕ್ಕಳಿಲ್ಲದೆ ಕೊರಗುತ್ತಿದ್ದ ಭೀಮುರಾಯ ಭಟ್ಟರಿಗೆ ಬಹಳ ಸಂತೋಷ ವಾಗುತ್ತದೆ. ಆ ಮಗುವಿಗೆ `ಚಾಮುಂಡಿ’ ಎಂದು ಹೆಸರಿಟ್ಟು ಸಾಕುತ್ತಾರೆ. ಮುಂದೆ `ಚಾಮುಂಡಿ’ ಎಂಬ ಹೆಸರುಳ್ಳ ಮಗುವೇ ದೈವತ್ವವನ್ನು ಪಡೆದು ಚಾಮುಂಡಿ ಭೂತವಾಗಿ ಆರಾಧನೆ ಹೊಂದುತ್ತಾಳೆ. ಆದರೆ ಅವಳು ಹೇಗೆ ದೈವತ್ವವನ್ನು ಪಡೆದಳು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಬೀಮುರಾಯ ಭಟ್ಟರ ಮಗಳು ಚಾಮುಂಡಿ ಗೆ ದಾಯಾದಿಯಾಗಿರುವ ಗಣಪತಿ ಭಟ್ಟ ಎಂಬಾತ ದ್ರೋಹ ಎಸಗುತ್ತಾನೆ.ಆಗ ಕತ್ತಲೆಕಾನದ ಗುಳಿಗ ಆತನನ್ನು ಸಂಹರಿಸುತ್ತದೆ.ನಂತರ ಚಾಮುಂಡಿಯ ಸೇರಿಗೆಗೆ ಸಂದು ಗಣಪತಿ ಭಟ್ಟ ಜತ್ತಿಂಗ/ ಜಟ್ಡಿಗ ದೈವವಾಗಿ ಆರಾಧನೆ ಪಡೆಯುತ್ತಾನೆ.ಚಾಮುಂಡಿ ದೈವದ ಜೊತೆಗೆ ಜತ್ತಿಂಗ ಮತ್ತು ಕತ್ತಲೆ ಕಾನದ ಗುಳಿಗನಿಗೂ ಆರಾಧನೆ ಇರುತ್ತದೆ 


ತುಳುನಾಡಿನಲ್ಲಿ ಮಲೆ ಚಾಮುಂಡಿ, ಮುಡ ಚಾಮುಂಡಿ, ಅಗ್ನಿ ಚಾಮುಂಡಿ, ಒಲಿ ಚಾಮುಂಡಿ, ಕೋಮಾರು ಚಾಮುಂಡಿ, ಮಲೆಯಾಳ ಚಾಮುಂಡಿ, ರುದ್ರ 


ವಿಷ್ಣುಮೂರ್ತಿ ಚಾಮುಂಡಿ, ಪಿಲಿಚಾಮುಂಡಿ, ಕರಿಜಾಮುಂಡಿ, ಪಾಪೆಲು ಚಾಮುಂಡಿ ಇತ್ಯಾದಿಯಾಗಿ ಅನೇಕ ಚಾಮುಂಡಿ ಭೂತಗಳಿವೆ. ಹೆಸರಿನೊಂದಿಗೆ `ಚಾಮುಂಡಿ’ ಎಂದು ಸೇರಿಕೊಂಡಿದೆಯಾದರೂ ಇವೆಲ್ಲ ಒಂದೇ ದೈವ ಚಾಮುಂಡಿಯ ಬೇರೆ-ಬೇರೆ ಹೆಸರುಗಳಲ್ಲ. ಬದಲಾಗಿ ಚಾಮುಂಡಿ ಎಂಬ ಹೆಸರನ್ನು ಸೇರಿಸಿಕೊಂಡಿರುವ ಬೇರೆ ಬೇರೆ ದೈವಗಳಾಗಿವೆ.© ಡಾ.ಲಕ್ಷ್ಮೀ ಜಿ ಪ್ರಸಾದ್

ತುಳು ಸಂಸ್ಕೃತಿಯ ಹೊನ್ನ‌ ಕಿರೀಟಕ್ಕೆ ಇಟ್ಟ ನವಿಲು ಗರಿ - ಡಾ.ನಾ ಮೊಗಸಾಲೆ

 

ನಮಸ್ಕಾರ 
ನಾನು ಡಾ.ಲಕ್ಷ್ಮೀ ಜಿ ಪ್ರಸಾದ್ ಕನ್ನಡ ಉಪನ್ಯಾಸಕಿ    ಸರ್ಕಾರಿ  ಪಿಯು ಕಾಲೇಜು ಬ್ಯಾಟರಾಯನಪುರ    ಬೆಂಗಳೂರು  ಮೊಬೈಲ್ 9480516684 
ಕಾಸರಗೋಡಿನ ಪುಟ್ಟ ಗ್ರಾಮ ಕೊಳ್ಯೂರು ನನ್ನ ಊರು 
ಚಿಕ್ಕಂದಿನಿಂದಲೇ ದೈವಾರಾಧನೆ ಬಗ್ಗೆ ಆಸಕ್ತಿ ಹೊಂದಿದ್ದು,ಎಂಎ(ಸಂಸ್ಕೃತ)  ಮೊದಲ ರ‌್ಯಾಂಕ್  ಎಂಎ ( ಹಿಂದಿ)   ಎಂಎ( ಕನ್ನಡ)ಮೂರನೆಯ ರ‌್ಯಾಂಕಿನೊಂದಿಗೆ  ಮೂರು ಸ್ನಾತಕೋತ್ತರ ಪದವಿಗಳನ್ನು  ಗಳಿಸಿ ತುಳು ಸಂಸ್ಕೃತಿ ಬಗ್ಗೆ ಅಧ್ಯಯನ ಮಾಡಿ   ಎಂಫಿಲ್ ಹಾಗೂ ಎರಡು ಡಾಕ್ಟರೇಟ್ ಪದವಿಗಳನ್ನು ಪಡೆದಿರುವೆ.25 ಪುಸ್ತಕಗಳು ಹಾಗೂ ಆರುನೂರಕ್ಕಿಂತ ಹೆಚ್ಚಿನ ಬರಹಗಳು ಪ್ರಕಟವಾಗಿದೆ
ಇದರಲ್ಲಿ ಇತ್ತೀಚೆಗೆ ಪ್ರಕಟಿತವಾಗಿ ಬಹಳ ಖ್ಯಾತಿಯನ್ನು ಗಳಿಸಿರುವ  ಕರಾವಳಿಯ ಸಾವಿರದೊಂದು ದೈವಗಳು ಎಂಬ 1036 ಪುಟಗಳ A4 ಗಾತ್ರದ ಬೃಹತ್ ಗ್ರಂಥದಲ್ಲಿ  ಕಾರವಾರದಿಂದ ಹಿಡಿದು ಕಣ್ಣಾನ್ನೂರು ತನಕ ಆರಾಧನೆಗೊಳ್ಳುವ ಕನ್ನಡ ತುಳು ಕೊಡವ ಮಲೆಯಾಳ ಪರಿಸರದ 1253 ದೈವಗಳ ಮಾಹಿತಿ ಇದೆ  
ಅದನ್ನು ತೆರೆದಾಗಲೆಲ್ಲ  ನನಗನಿಸುವದ್ದು ಇದೇ ಭಾವ..ಈ ಪುಸ್ತಕವನ್ನು ನಾನು ಬರೆದೆನೇ ? ಎಂದು ಸೋಜಿಗ ಆಗುತ್ತದೆ.
ಇಲ್ಲ..ನನ್ನಂಥಹ ಸಾಮಾನ್ಯ ಮಹಿಳೆಗೆ ಯಾವುದೇ ಸಂಘ ಸಂಸ್ಥೆಗಳ ಅಕಾಡೆಮಿಯ ಯೂನಿವರ್ಸಿಟಿಯ ಅನುದಾನ ಸಹಾಯವಿಲ್ಲದೆ 1253 ದೈವಗಳ ಮಾಹಿತಿ ಸಂಗ್ರಹ ,ವಿಶ್ಲೇಷಣೆ ಅಸಾಧ್ಯವಾದ ವಿಚಾರ..ದೈವ ದೇವರುಗಳೇ ಮಾಹಿತಿ ಒದಗಿಸಿ ವಿಚಕ್ಷಣಾ ಬುದ್ಧಿಯನ್ನು ಕೊಟ್ಟು ಕೈ ಹಿಡಿದು ಬರೆಸಿದ್ದಾರೆ ಎಂದಷ್ಟೇ ಹೇಳಬಲ್ಲೆ.ಇದರಲ್ಲಿ ಅನೇಕರ ಸಹಕಾರ  ಇದೆ .ಅದನ್ನೆಂದಿಗೂ ಮರೆಯಲಾರೆ 

ಈ ಗ್ರಂಥದ ಮಾಹಿತಿಯನ್ನು ಡಾ.ನಾ ಮೊಗಸಾಲೆ ಅವರ ಮಾತಿನೊಂದಿಗೆ ಕೆಳಗೆ ನೀಡಿರುವೆ
ಇದನ್ನು ನೀವು ತಮ್ಮ ವೈಯುಕ್ತಿಕ ಬಳಕೆಗೆ ಹಾಗೂ ಗಣ್ಯರಿಗೆ ಉಡುಗೊರ ದಶಕಗಳ ಕಾಲ ಕ್ಷೇತ್ರ ಕಾರ್ಯ ಅಧ್ಯಯನ ಹಾಗೂ ಪ್ರಕಟಣೆಗೆ ನನಗೆ ಅರುವತ್ತು- ಎಪ್ಪತ್ತು  ಲಕ್ಷಕ್ಕಿಂತ ಹೆಚ್ಚು ದುಡ್ಡು ಖರ್ಚಾಗಿದೆ  . ,ನಾನು ಇದನ್ನು ನನ್ನ ಸ್ವಂತ ದುಡ್ಡಿನಲ್ಲಿ ಮಾಡಿರುವೆ.ಯಾವುದೇ ಸಂಘ ಸಂಸ್ಥೆಗಳ ಯೂನಿವರ್ಸಿಟಿಯ ಅನುದಾನ ನನಗೆ ಲಭಿಸಿರುವುದಿಲ್ಲ .ಹಾಗಾಗಿ ಗೌರವ ಪ್ರತಿ ನೀಡಲು ಅಸಾಧ್ಯ .ಆದರೆ ನಿಮ್ಮಂತಹವರು ಈ ಪುಸ್ತಕ ಓದಬೇಕು  ಎಲ್ಲೆಡೆ ಈ ಪುಸ್ತಕ ಜನರಿಗೆ  ಮಾಹಿತಿಗಾಗಿ ಲಭ್ಯವಾಗಬೇಕು ಎಂಬ ಆಶಯ ನನಗಿದೆ  ಹಾಗಾಗಿ ಪುಸ್ತಕದ ಪ್ರತಿಗಳನ್ನು ತಮ್ಮ ವೈಯಕ್ತಿಕ ಬಳಕೆ ಹಾಗೂ ಗ್ರಂಥಾಲಯಕ್ಕಾಗಿ  ಖರೀದಿಸುವಂತೆ ಮನವಿ ಮಾಡಿರುವೆ .ಡಾ.ವೀರೇಂದ್ರ ಹೆಗ್ಗಡೆ, ಬೆಂಗಳೂರು ಯೂನಿವರ್ಸಿಟಿ ಪ್ರೊಫೆಸರ್.ರಾಜಪ್ಪ ದಳವಾಯಿ ,ಕ್ರೈಸ್ಟ್ ಕಾಲೇಜು ,, ಮಂಗಳೂರು ಯೂನಿವರ್ಸಿಟಿ





ತುಳು ಸಂಸ್ಕೃತಿಯ ಹೊನ್ನ‌ ಕಿರೀಟಕ್ಕೆ ಇಟ್ಟ ನವಿಲು ಗರಿ
- ಡಾ.ನಾ ಮೊಗಸಾಲೆ

 
ಡಾ. ಲಕ್ಷ್ಮೀ ಪ್ರಸಾದ್ (ಲಕ್ಷ್ಮೀ ವಾರಣಾಸಿ) ಅವರು ಕಾಸರಗೋಡು ಜಿಲ್ಲೆಯ ಕೋಳ್ಯೂರು ಗ್ರಾಮದ ವಾರಣಾಸಿ ಮೂಲದವರು .ಇವರ ತಂದೆ ವೇದಮೂರ್ತಿ ನಾರಾಯಣ ಭಟ್ಟರು  ವಿದ್ವಾಂಸರೆಂದು ಪ್ರಸಿದ್ಧರು. ತನ್ನ ಮನೆತನವು ವೈದಿಕಾಚರಣೆಯನ್ನೇ ಹೊಂದಿದ್ದರೂ, ಕುಟುಂಬದಲ್ಲಿ ದೈವದ ಆರಾಧನೆಯನ್ನು ಮಾಡುತ್ತಿರುವುದೇಕೆ ಎಂಬ ಕುತೂಹಲವೇ ಡಾ. ಲಕ್ಷ್ಮೀ ಪ್ರಸಾದ್ ಅವರಿಗೆ ಪ್ರೇರಣೆಯಾಗಿ ಅವರು ಈ ಕುರಿತಾದ ಸಂಶೋಧನೆಗೆ ಇಳಿದರು. 

ಇದರಿಂದ ಕರಾವಳಿ ಕರ್ನಾಟಕದ ಅಂದರೆ ಅವಿಭಜಿತ ದ.ಕ.ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ ಮತ್ತು ಕೊಡಗನ್ನೂ ಒಳಗೊಂಡಂತೆ ದೈವರಾಧನೆಯ ಆಶಯ ಆಕೃತಿಯನ್ನು ನಿರಂತರ ಸಂಶೋಧಿಸಲು ಅವರು ಮುಂದಾದರು. ಈ ನಿರಂತರತೆ ಇಪ್ಪತ್ತೊಂದು  ವರುಷಗಳ ಕಾಲ ನಡೆದುದರ ಪರಿಣಾಮವಾಗಿ ಈ ಮೇಲಿನ ಪ್ರದೇಶಗಳಲ್ಲಿ ಒಟ್ಟು ಎರಡು ಸಾವಿರದ ಇನ್ನೂರ ಮೂವತ್ತು  ದೈವಗಳು ಆರಾಧಿಸಲ್ಪಡುತ್ತವೆ ಎನ್ನುವ ಸತ್ಯ ಗೋಚರಿಸಿತು.

ಹಿರಿಯ ಜಾನಪದ ತಜ್ಞರೂ ವಿದ್ವಾಂಸರೂ ಆಗಿರುವ ಪ್ರೊ| ಬಿ.ಎ.ವಿವೇಕ ರೈ ಅವರು ತಮ್ಮ ಮಹಾಪ್ರಬಂಧದಲ್ಲಿ (1985) ಇನ್ನೂರ ಅರುವತ್ತೇಳು  ,ಇನ್ನೋರ್ವ ಜಾನಪದ ವಿದ್ವಾಂಸ ಪ್ರೊ| ಚಿನ್ನಪ್ಪಗೌಡರು ಇದನ್ನು ಪರಿಷ್ಕರಿಸಿ  ತಮ್ಮ ಮಹಾಪ್ರಬಂಧದಲ್ಲಿ (1990) ಮುನ್ನೂರು , ಮುಂದೆ ರಘುನಾಥ ವರ್ಕಾಡಿಯವರು ತಮ್ಮ ‘ಕಂಡಂಬಾರು ಮಲರಾಯ’ ಕೃತಿಯಲ್ಲಿ (2011) ನಾಲ್ಕು ನೂರ ಏಳು ದೈವಗಳ ಹೆಸರುಗಳನ್ನು ಪಟ್ಟಿ ಮಾಡಿದ್ದಾರೆ.

ಆಮೇಲೆ ಈ ಬಗ್ಗೆ ಸಂಶೋಧನೆ ನಡೆದದ್ದು ಕಡಿಮೆ ಅಥವಾ ಈ ಅರಿವಿನಲ್ಲೆ ಗಿರಕಿ ಹೊಡೆದದ್ದೇ ಹೆಚ್ಚು. ಆದರೆ ಡಾ. ಲಕ್ಷ್ಮಿ ಪ್ರಸಾದ್ ಅವರ ಆಸಕ್ತಿ ಅಥವಾ ಜಿಜ್ಞಾಸೆಯು ತಾವು ರಚಿಸಿದ ಮಹಾಪ್ರಬಂಧದ ಹೊತ್ತಿಗೆ (2007) ಸಾವಿರದ ನಾಲ್ಕು ನೂರ ಮೂವತ್ತೈದು ದೈವಗಳ ಕ್ಷೇತ್ರ ಕಾರ್ಯದ ತನಕ ಹಬ್ಬಿತು. ಇದೀಗ ಅವರು ಎರಡು ಸಾವಿರದ ಇನ್ನೂರ ಮೂವತ್ತು   ದೈವಗಳನ್ನು ಸಾಕ್ಷಿ ಸಮೇತ ಗುರುತಿಸಿ ನಾಡು ಬೆರಗಾಗುವಂತೆ ಮಾಡಿದ್ದಾರೆ.

ತುಳು ಸಂಸ್ಕೃತಿಯ ಪ್ರಧಾನ ಅಂಗವಾಗಿ ದೈವಾರಾಧನೆ ಇದೆ. ಅದು ಇಲ್ಲದ ತುಳು ಸಂಸ್ಕೃತಿಯೇ ಇಲ್ಲ ಎನ್ನುವುದು ಅದರ ಪಾರಮ್ಯ. ನಂಬಿಕೆಯ ಆಧಾರದ ಮೇಲೆ ನಿಂತಿರುವ ಈ ಆರಾಧನಾ ಪದ್ಧತಿಯು ಶತಮಾನಗಳ ಪರಂಪರೆಯುಳ್ಳದ್ದು. ಇಂಥ ಸಂಸ್ಕೃತಿಯ ಬೇರುಗಳ ಆಳಕ್ಕೆ ಇಳಿದು ಚಿನ್ನವನ್ನು ಅಗೆದು ತೆಗೆದು ಪುಟಕ್ಕಿಡುವ ಹಾಗೆ ಮಾಡುವ ಕೆಲಸವು ಸಂಕೀರ್ಣವೂ, ಸಂಕಷ್ಟದ್ದೂ ಹೌದು, ಹಾಗೆಯೇ ಪುರುಷರಿಗಷ್ಟೇ ಸೀಮಿತ ಎನ್ನುವಂತಿದ್ದ ಈ ಸಂಶೋಧನೆಯನ್ನು  ಮಹಿಳೆಯರು ಮಾಡಬಹುದೆನ್ನುವಂತೆ ಡಾ.ಲಕ್ಷ್ಮೀ ಪ್ರಸಾದರು ಮಾಡಿ ತೋರಿಸಿದ್ದಾರೆ. 

ಇದಕ್ಕೆ ಅವರು ಹುಟ್ಟಿದ ಗಂಡು ಮೆಟ್ಟಿನ ನೆಲದ ಪ್ರಭಾವ ಎಷ್ಟು ಕಾರಣವೋ ಅಷ್ಟೇ ಅವರ ಗಂಡೆದೆಯೂ ಕೂಡಾ! 
ಡಾ. ಲಕ್ಷ್ಮೀ ಪ್ರಸಾದರು ಸಂಸ್ಕೃತ( ಮೊದಲನೆಯ ರ‌್ಯಾಂಕ್) ಹಿಂದಿ ಮತ್ತು ಕನ್ನಡ( ನಾಲ್ಕನೆಯ ರ‌್ಯಾಂಕ್), ದಲ್ಲಿ ಸ್ನಾತಕೋತ್ತರ ಪದವೀಧರರು. ಒಂದು  ಎಂ.ಫಿಲ್ ಪದವಿ  ಹಾಗೂ ಎರಡು ಪಿ.ಹೆಚ್.ಡಿ ಪದವಿಗಳ‌ ಗರಿಯೂ ಅವರ ಸಾಧನೆಗೆ ದಕ್ಕಿದೆ. 

ಬದುಕನ್ನು ಅಧ್ಯಯನ ,ಅಧ್ಯಾಪನ ಮತ್ತು ಸಂಶೋಧನೆಗಳಿಗೆ  ಮೀಸಲಿಟ್ಟಿರುವ ಅವರ ಈ ಇಪ್ಪತ್ತಮೂರನೆಯ   ಕೃತಿ ಅವರ ಮಹಾತ್ವಾಕಾಂಕ್ಷೆಯ ಶಿಖರ.

ಸರಕಾರದ ಆಶ್ರಯವಿಲ್ಲದೆ, ಅಕಾಡಮಿಗಳ ಪ್ರೋತ್ಸಾಹವಿಲ್ಲದೆಯೇ  ತನಗೆ ತಾನೇ ಸ್ವಯಂ ಭೂವಾಗಿ ನಡೆಸಿದ ಈ ಕ್ಷೇತ್ರ ಕಾರ್ಯ ಆಧಾರಿತ ಅಧ್ಯಯನ ಅಪರೂಪದಲ್ಲಿ ಅಪರೂಪದ್ದು.

 ಭೂತ ಕಟ್ಟುವ ಜನಾಂಗದವರಿಂದ ಮತ್ತು ಇನ್ನಿತರ ಸಂಸ್ಕೃತಿ ಚಿಂತಕರ ಮೂಲದ ಐತಿಹ್ಯಗಳಿಂದ ಸಂಗ್ರಹಿಸಲ್ಪಟ್ಟು ವಿಶ್ಲೇಷಿಸಲ್ಪಟ್ಟ ಅವರ ಸಂಶೋಧನೆಯ  ಆಯ್ದ ಸಾವಿರದ ಇನ್ನೂರ ಐವತ್ತಮೂರು   ದೈವ(1253)ಗಳ ಮಾಹಿತಿಗಳನ್ನು ಈ ಗ್ರಂಥದಲ್ಲಿ ಅವರು ಅನಾವರಣಗೊಳಿಸಿದ್ದಾರೆ. 

ಇದು ತುಳು ಸಂಸ್ಕೃತಿಯ ಹೊನ್ನ ಕಿರೀಟಕ್ಕೆ ಇಟ್ಟ ನವಿಲಗರಿ.

ಇದು ‘ಪಿಂತಿಲ್ಲ ಮುಂತಿಲ್ಲ’ ಎನ್ನುವ ಜಾನಪದ ಸಂಶೋಧನೆಯ ಆಚಾರ್ಯಕೃತಿಯಾಗಿದ್ದು ‘ಅಯ್ಯಯ್ಯ ಎಂಚ ಪೊರ್ಲಾಂಡ್‍ಂದ್ ತುಳುವರು ಮೈಯುಬ್ಬಿ ಹೇಳಬೇಕಣ್ಣ’ ಎನ್ನುವುದನ್ನು ಈ ಕಾಲದಲ್ಲಿ ಅನುರಣಿಸಲು ಕಾರಣವಾಗಿರುವ ವಿಸ್ಮಯ.

ಸ್ಥಳ : ಕಾಂತಾವರ           ಡಾ.ನಾ.ಮೊಗಸಾಲೆ
 ದಿ: 01.08.2021          ಕನ್ನಡ ಸಂಘ, ಕಾಂತಾವರ

 ಕರಾವಳಿಯ ಸಾವಿರದೊಂದು ದೈವಗಳು
ಅನುಕ್ರಮಣಿಕೆ 315  ಅಧ್ಯಾಯಗಳು
1 ಅಕ್ಕಚ್ಚು
2- ಅಕ್ಕ ಬೋಳಾರಿಗೆ
3-4ಅಕ್ಕೆರ್ಲು- ಅಂಬೆರ್ಲು
5-6 ಅಚ್ಚು ಮತ್ತು ಮೆಚ್ಚು ಬಂಗೇತಿಯರು
7 ಅಗ್ನಿ ಕೊರತಿ
8-13  ಅಗ್ನಿ ಭೈರವನ್ ಮತ್ತು ಪರಿವಾರ 
13- 15 ಅಜ್ಜ ಬಳಯ  ಮತ್ತು ಮಾಮಿ ಕುಲೆ
15-17 ಅಜ್ಜಮ್ಮ ದೇವರು ಮತ್ತು ಪರಿವಾರ 
18-26 ಅಜ್ಜಿ ಭೂತ , ಕೂಜಿಲು ಮತ್ತು ಇತರ ದೈವಗಳು
27  ಅಜ್ಜಿ ಬೆರೆಂತೊಲು
28-29 ಅಜ್ಜೆರ್ ಭಟ್ರು ಮತ್ತು ಅಜ್ಜೆರ್ ಪರಿವಾರ
30 ಅಡ್ಯಲಾಯ
31   ಅಡ್ಯಂತಾಯ
32-33 ಅಡಿ ಮಣಿತ್ತಾಯ ಮತ್ತು ಅಡಿಮರಾಂಡಿ
34-35  ಅಣ್ಣ ತಮ್ಮ ದೈವಗಳು/ಅತ್ತಾವರದ ದೈವಗಳು
36-37  ಅಣ್ಣೋಡಿ ಕುಮಾರ- ಕಿನ್ಯಂಬು
38  ಗುಟ್ಟು ಬಿಟ್ಟು ಕೊಡದ ಅಬ್ಬೆ ಜಲಾಯ
39 -40 ಅರಬ್ಬಿ ಮತ್ತು ಬ್ರಾಂದಿ 
41-44 ಅರಸು ಬಂಗಾಡಿತ್ತಾಯ ಮತ್ತು ಸೇರಿಗೆ ದೈವಗಳು
45 ಅಸುರಾಳನ್/ ಅಸುಳಾನುಂ ಮಕ್ಕಳು
46-47 ಅಂಗಕ್ಕಾರನ್ ಮರುಟೋಳನ್
48 ಅಂಗಾರ ಬಾಕುಡ
49 ಅಂಮಣ ಬನ್ನಾಯ
50-51 ಅಂಕೆ- ಉಮ್ಮಯ
52  ಆಚಾರಿ ಭೂತ
53 ಆಟಕಾರ್ತಿ
54  ಆಟಿ ಕಳೆಂಜ
55-57 ಆದಿ ವೇಡನ್ ಮತ್ತು ಪರಿವಾರ 
58 ಇಷ್ಟಜಾವದೆ 
59 ಉಗ್ಗೆದಲ್ತಾಯ 
60 ಉಮ್ಮಲ್ತಿ 
61-62 ಉಪ್ರಝಾಸ್ಸಿ ಮತ್ತು ಉಚ್ಚಬಲಿ ತೆಯ್ಯಂ
63-64 ಉರವ ಎರುಬಂಟ
65-88 ಉಳ್ಳಾಕುಲು   ಮತ್ತು ಉಳ್ಳಾಲ್ತಿ ದೈವಗಳು
89-90 ಎರು ಶೆಟ್ಟಿ( ಮಲೆ ಮುದ್ದ)
91-92  ಎಂಬ್ರಾನ್ ದೇವ- ಐಪ್ಪಳ್ಳಿ
93-99 ಏಲುವೆರ್ ಸಿರಿಕುಲು
100 ಒಕ್ಕು ಬಲ್ಲಾಳ
101-102 ಒರುಬಾಣಿಯೆತ್ತಿ ,ನೆಲ್ಲೂರಾಯ 
 103- 105 ಓಣಂ ದೈವಗಳು
106 ಓಟೆಚರಾಯ
107: ಕಟ್ಟು ಎಡ್ತುನ್ ಕುಟ್ಟಿ
‌108 ಕಟ್ಟದಲ್ತಾಯ
‌109-110 ಕಡವಿನ ಕುಂಞ ಮತ್ತು ಕಳವಿನ ಚಿಕ್ಕ
111-112 ಕಡಂಬಳಿತ್ತಾಯ,ಕೊಡಂಬಿಲ್ತಾಯ
113-114 ಕನಪಾಡಿತ್ತಾಯ ಮತ್ತು ಮಗ್ರಂದಾಯ
115  ಕನ್ನಡ ಕಲ್ಕುಡ
116  ಕನ್ನಡ ಬೀರ
117 ಕನ್ನಡ ಭೂತ
118-119 ಕನ್ನಲಾಯ ಮತ್ತು ಸ್ವಾಮಿ ನಂದೆದಿ
120 ಕನಿಯತಿ
121  ಕಪ್ಪಣ್ಣಣಿಕ/ ಕಾರ್ಯಸ್ಥನ್ 
 123-124 ಕರಿಯಣ್ಣ ನಾಯಕ ಮತ್ತು ಕೋಟಿ ನಾಯಕ 
125 ಕರಿಯ ಮಲ್ಲಯ್ಯ
  126-133 ಕರಿಂತಿರಿ ನಾಯರ್ ,ಪುಲಿಯೂರ್ ಕಾಳಿ ಮತ್ತು ಪುಲಿ ದೈವಗಳು 
134 -135 ಕರ್ನಗೆ ಮತ್ತು ಮಲಾರ್ ಜುಮಾದಿ
136-137  ಕಲಿಯಾಟ ಅಜ್ಜಪ್ಪ, ಕಾಟಾಳ ಬೊಳ್ತು
138-139 ಅಲಿಖಿತ ಇತಿಹಾಸ ಸಾರುವ ಕಲ್ಕುಡ ಕಲ್ಲುರ್ಟಿ ದೈವಗಳು 
140  ಕಂಡನಾರ ಕೇಳನ್
141  ಕಂರ್ಭಿ ಬೈದ್ಯೆದಿ
142  ಕಾಜಿಗಾರ್ತಿ
143-153  ಕಾಡ್ಯನಾಟದ ದೈವಗಳು 
154- 155  ಕಾಡೆದಿ  ಮತ್ತು ಕಾಡ್ತಿಯಮ್ನ
156-157 ಅತಿಕಾರೆ ಬೆಳೆಯನ್ನು ತಂದ ಕಾನದ ಕಟದರು
158-160 ಕಾನಲ್ತಾಯ ಮತ್ತು ಪರಿವಾರ ದೈವಗಳು
161-162 ಕಾಯರ್ತಾಯ ಮಾದ್ರಿತ್ತಾಯ
163-167 ಕಾರಿ ಕಬಿಲ ದೈವಗಳು 
168 ಕಾಳರಾತ್ರಿ 
169-172 ಧರ್ಮಸ್ಥಳದಲ್ಲಿ ನೆಲೆಸಿದ ದೈವಗಳು ಕಾಳರಾಹು,ಕಳರ್ಕಾಯಿ ,ಕುಮಾರ ಸ್ವಾಮಿ‌ ಕನ್ಯಾಕುಮಾರಿ 
173-178  ಕಾಂತಾ ಬಾರೆ ,ಬೂದಾ ಬಾರೆ , ಅಚು ಬೈದ್ಯೆತಿ ,ಪುಲ್ಲ ಪೆರ್ಗಡ್ತಿ ,ಉಳ್ಳಾಯ ,ಸಾರಮಾನ್ಯ ದೈವಗಳು 
 179 ಕಾಂತು ನೆಕ್ರಿ ಭೂತ
180  ಕಿನ್ನಿದಾರು
181 ಕೀಳು ದೈವ
183-183 ಮದುಮಕ್ಕಳ ರೂಪದಲ್ಲಿ ಕಂಗೊಳಿಸುವ ಕುಕ್ಕೆತ್ತಿ ಬಳ್ಳು ದೈವಗಳು 
184-185 ಕುಜುಂಬ ಕಾಂಜವ ಮತ್ತು ಕಾಚು ಕುಜುಂಬ  ದೈವಗಳು
186-190 ಕುಟ್ಟಿಚ್ಚಾತ್ತನ್ ,ಪಮ್ಮಚ್ಚು ಮತ್ತು ಸೇರಿಗೆ ದೈವಗಳು 
191 ಕುಡಿ ವೀರನ್ 
192 ಕುದುರೆತ್ತಾಯ / ಕುದುರೆ ಮುಖ ದೈವ
‌ 193-194 ಕುರವ ಮತ್ತು ಸತ್ಯಂಗಳದ ಕೊರತಿ
195 ಕುರುವಾಯಿ ದೈವ
‌196-203 ಕುಲೆ ಭೂತಗಳು - ತುಳುನಾಡಿನ ವಿಶಿಷ್ಟ ದೈವಗಳು
‌204   ಕುಂಞಮ್ಮ ಆಚಾರ್ದಿ
‌205  ಕುಂಞಾಳ್ವ ಬಂಟ
‌206 ಕುಂಞಿ ಭೂತ
‌207 ಕುಂಞಿ ರಾಮ ಕುರಿಕ್ಕಳ್
208 - 212 ಕುಂಜಿರಾಯ ದೈವಗಳು
213-214 ಕುಂಜಿ ಮತ್ತು ಅಂಗಾರ ದೈವಗಳು 
215  ಕುಂಜೂರಂಗಾರ
‌216 ಕುಂಟಲ್ದಾಯ
‌217 ಕುಂಟುಕಾನ ಕೊರವ
‌218-219 ಕುಂಡ - ಮಲ್ಲು ದೈವಗಳು 
220  ಕುಂಡೋದರ
221-224 ಕೆಂಚಣ್ಣ ಕರಿಯಣ್ಣ ಪಾಪಣ್ಣ ಮತ್ತು ಲಕ್ಷ್ಮೀ ನರಸಿಂಹ
225-226 ಕೇಚ ರಾವುತ ಮತ್ತು ರೇವಂತ 
‌227   ಕೇತುರ್ಲಾಯ
228-231 ಕೊಡಮಣಿತ್ತಾಯ,ವೈದ್ಯನಾಥ ,ಕುಡುಮದಾಯ ಮತ್ತು ಕುಕ್ಕಿನಂತಾಯ ದೈವಗಳು
 232 ಕೊಟ್ಟೆದಲ್ತಾಯ
‌233 ಕೊನ್ನೊಟ್ಟು ಕಡ್ತ
‌234  ತುಳುನಾಡಿನ ಜನಾನುರಾಗಿ ದೈವ ಕೊರಗ ತನಿಯ 
‌235 ಕೊರತಿ 
‌236 -237  ಕೊಲ್ಲಿ ಕುಮಾರ ಮತ್ತು ಕೊಲ್ಯತ್ತಾಯ
238-239 ಕೊಂಡಾಣದ ಬಂಟ ಮತ್ತು ತಂಕರು ಮೂಲ್ಯೆದಿ
240 ಅಪ್ರತಿಮ ವೀರ ಕೋಚು ಮಲ್ಲಿ 
241 242 ತುಳುನಾಡು ಬೆಳಗಿದ ಅವಳಿ ವೀರರು : ಕೋಟಿ ಚೆನ್ನಯರು
‌243-244 ಅಪ್ರತಿಮ ಸಾಹಸಿ ಕೋಟೆದ ಬಬ್ಬು ಮತ್ತು ಕಚ್ಚೂರ ಮಾಲ್ದಿ
‌245 ಕೋಟ್ರ ಗುತ್ತಿನ ಬಬ್ಬು 
‌246-247  ಕೋಟೆರಾಯ ಮತ್ತು ಕೋಟೇಶ್ವರ ದೈವಗಳು
248 ಕೋರಚ್ಚನ್ 
‌249 ಕೋಲು ಭಂಡಾರಿ
250   ಕೋಳೆಯಾರ ಮಾಮ
251ಗಣಪತಿ ಕೋಲ
252  ಗಂಗೆ ನಾಡಿ ಕುಮಾರ ,( ಓಡಿಲ್ತಾಯ)
253-254 ಗಂಡ ಗಣಗಳು ಮತ್ತು ಡೆಂಜಿ ಪುಕ್ಕೆ 
255-256 ಗಂಧರ್ವ ದೈವಗಳು
257   ಗಿಳಿರಾಮ
258  ಗಿಡಿರಾವಂತ
259 -260 ಗಿರಾವು ಮತ್ತು ಕೊಡೆಕಲ್ಲಾಯ
261 ಗುರು ಕಾರ್ನವೆರ್ 
262 ಗುರುನಾಥನ್ 
263-275 ಗುಳಿಗ ಮತ್ತು ಸೇರಿಗೆ  ದೈವಗಳು
( ಒರಿ ಮಾಣಿ ಗುಳಿಗ ,ಮಂತ್ರವಾದಿ ಗುಳಿಗ,ಸನ್ಯಾಸಿ ಗುಳಿಗ ,ತಂರ್ಜಿ ಗುತ್ತಿನ ಗುಳಿಗ ,ಮುಕಾಂಬಿ ಗುಳಿಗ,ಸಂಕೊಲಿಗ ಗುಳಿಗ,ಶಾಂತಿ ಗುಳಿಗ,ಸುಬ್ಬಿಯಮ್ಮ ಗುಳಿಗ,ಕಲಾಲ್ತಾಯ ಗುಳಿಗ ,ಜಾಗೆದ ಖಾವಂದೆರಾವು ಗುಳಿಗ,ಕಲಿಚ್ಚಿ,ಕಾಲನ್ ಗುಳಿಗ ) 
 276-300 ಚಾಮುಂಡಿ ಮತ್ತು ಸೇರಿಗೆದೈವಗಳು 
ಅಗ್ನಿ ಚಾಮುಂಡಿ ಗುಳಿಗ, ಕರಿ ಚಾಮುಂಡಿ,ಕೆರೆ ಚಾಮುಂಡಿ,ಚೌಂಡಿ,ಗುಡ್ಡೆ ಚಾಮುಂಡಿ ಅರದರೆ ಚಾಮುಂಡಿ ,ಅಸಗಲ ಚಾಮುಂಡಿ,ನಾಗ ಚಾಮುಂಡಿ,ಪಾಪೆಲು ಚಾಮುಂಡಿ, ನೆತ್ರಾಂಡಿ ,ಮನದಲಾತ್ ಚಾಮುಂಡಿ,ಮಾಪಿಳ್ಳ ಚಾಮುಂಡಿ ಕೋಮಾರು ಚಾಮುಂಡಿ ಇತ್ಯಾದಿ)
301-302 ಚಾವುಂಡೇಶ್ವರ ಮತ್ತು ಚಂಡಿಕೇಶ್ವರ 
303-314  ಚಿಕ್ಕು/ ಚಿಕ್ಕಮ್ಮ  ಪರಿವಾರ ದೈವಗಳು
 315 ಚಿನಿಕಾರ/ ಚೀನೀ ಬೂತಗಳು
316 ಚೆನ್ನಿಗರಾಯ
317-319 ಚೆಮ್ಮರತಿ,ಪಡುವೀರನ್ ದೈವಗಳು
320 ಚೆಂಬರ್ಪುನ್ನಾಯ
321-322 ಜಟಾಧಾರಿ ಮತ್ತು  ಶಾಂತ ದುರ್ಗೆ 
323 -334'  ಜಟ್ಟಿಗ  ದೈವಗಳು
(ಜೈನ ಜಟ್ಟಿಗ ಕೋಟೆ ಜಟ್ಟಿಗ ನೆತ್ರಾಣಿ ಜಟ್ಟಿಗ ಹೊಗೆವಡ್ಡಿ ಜಟ್ಟಿಗ ಅರಮನೆ ಜಟ್ಟಿಗ ಮಾಣಿ ಬೀರ ಜಟ್ಟಿಗಮಾಣಿಭದ್ರ ಜಟ್ಟಿಗ ಇತ್ಯಾದಿ) 
335-337 ಜಮೆಯ- ಜಮಯತಿ ,ಬಡೆದಿ ದೈವಗಳು
338  ಜಂಗ ಬಂಟ
339-340  ಜಾನು ನಾಯ್ಕ ಮತ್ತು ಬಂಡಿರಾಮ 
341  ಜಾರಂದಾಯ
342  ಜಾಲ ಬೈಕಾಡ್ತಿ
343   ಪನ್ನೆ ಬೀಡಿನ ಜಾಲ್ಸೂರಾಯ
344 ಜೋಕುಲು ದೈವೊಲು
345-346 ಜೈನ ಗುಜ್ಜಾರ್ಲು ಮತ್ತು ಜೈನ ಭೂತ 
347 ತಪ್ಪೇದಿ
348 ತನ್ನಿಮಾಣಿಗ 
 349-351 ತಂತ್ರಿಗಣಗಳು
352 ತಿಮ್ಮಣ್ಣ ನಾಯಕ
353-355 ತೆಕ್ಕನ್ ಕರಿಯಾತನ್, ಕನ್ನಿಕ್ಕೊರುಮಗನ್ ಮತ್ತು ಕೈಕೋಲನ್ ತೆಯ್ಯಂ
356 ತೋಡ ಕುಕ್ಕಿನಾರ್ 
357 ದಾರಮ್ಮ ಬಳ್ಳಾಲ್ತಿ 
358-361 ದಾರು ಕುಂದಯ ದೈವಗಳು 
362   ದೀಪದ ಮಾಣಿ
363   ದುಗ್ಗಲಾಯ ಮತ್ತು ಸುತ್ತು ಕೋಟೆ ಚಾಮುಂಡಿ 
364  ದೂಮ
365 ದೂಧುರ್ಮ / ದೂರ್ದುಮ 
366-367 ದೆಸಿಲು ಮತ್ತು ಕಿಲಮರತ್ತಾಯ
368 ದೇಬೆ ದೈವ,
369-370  ದೇರೆ ಮತ್ತು  ಮಾನಿ ದೈವಗಳು
371ದೇವಾನು ಪಂಬೆದಿಯಮ್ಮ
372 ದೇಯಿ ಬೈದೆತಿ
373-374 ದೇಸಿಂಗ ಉಳ್ಳಾಕುಲು ಮತ್ತು ,ಕೋಟೆದಾರ್
 375-378 ದೈವ ಸಾದಿಗೆ ಒಲಿಪ್ರಾಂಡಿ , ,ದೈವನ ಮುಟ್ನಾಯೆ ,ಅಡ್ಯೊಲ್ತಾಯೆ
379  ದೈವಂತಿ
380-400 ಧೂಮಾವತಿ ಮತ್ತು ಸೇರಿಗೆ ದೈವಗಳು 
ಕಾಂತೇರಿ ಜುಮಾದಿ,ಬಂಟ,ಮರ್ಲು ಜುಮಾದಿ,ಕರ್ಮಲೆ ಜುಮಾದಿ ,ದುರ್ಗಲ್ಲ ಜುಮಾದಿ,ಮಾಪುಳ್ತಿ ಧೂಮಾವತಿ ,ಪಡಿಂಞರೆ ಧೂಮಾವತಿ, ಧೂಮಹಾಸ್ತಿಯಮ್ಮ ,ಮಲಾರ್ ಜುಮಾದಿ ಮತ್ತು ಕರ್ನಗೆ ಇತ್ಯಾದಿ) 
401-404 ನಂದಿ ಹೆಸರಿನ ದೈವಗಳು ( ಹಿರೇ ನಂದಿ ಕಿರರ ನಂದಿ ,ಜೋಗಪ್ಪ ಶೆಟ್ಟಿ ,ನಂದಿಕೇಶ್ವರ ,ನಂದಿ ಗೋಣ) 
405-408  ನರಿ ತೆಯ್ಯಂ,ನರಿ ಪೂದ ಮತ್ತು ಸೇರಿಗೆ ದೈವಗಳು 
409 ನಂದಿಗೆನ್ನಾಯ
410-412  ನಾಗ ಕನ್ನಿಕೆ  ಮತ್ತು ನಾಗರಾಜರು 
413 ನಾಗ ದೈವ/ಭೂತ
414   ನಾಗ ಬ್ರಹ್ಮ 
415   ನಾಗ ಬ್ರಹ್ಮ ಮಂಡಲದ ದೈವಗಳು
416-417 ನಾರಳ್ತಾಯ ಮತ್ತು ಭೂತರಾಜ 
418 ನಾಲ್ಕೈತಾಯ
419-420  ನೀಚ ತನಿಯ ಮತ್ತು ಒಂಟಿ ಕಾಲಿನ ಬಬ್ಬರ್ಯ 
421-422  ನುರ್ಗಿ‌ಮದಿಮಾಲ್ ಮತ್ತು ದುರ್ಗಿ ಮದಿಮಾಲ್ 
423-424  ನೆತ್ತರು ಮುಗುಳಿ ಮತ್ತು ಭೈರವ 
425   ನೇರಳತ್ತಾಯ
426 -428  ನೈದಾಲ ಪಾಂಡಿ  ,ಪೂವತ್ತಿಮಾರ್ ಮತ್ತು ಮಹೇಶ್ವರನ್ ದೈವಗಳು
429 ಪಟ್ಟಾರ್ ತೆಯ್ಯಂ
430 ಪಟ್ಟೋರಿತ್ತಾಯ
431 ಪಡೆ ಬೀರ ಕಣ್ಣಂಡ ದೊಡ್ಡಯ್ಯ 
432-433 ಪಡ್ಕಂತಾಯ ಮತ್ತು  ಗೆಂಡಕೇತ್ರಾಯ
434 ಪತ್ತೊಕ್ಕೆಲು ಜನನಂದ ದೈವ
435-436:ಪನಯಾರ್  ಮತ್ತು ಸಂಪ್ರದಾಯ ದೈವ
437:ಪಯ್ಯ ಬೈದ್ಯ
438-443'ಪಯ್ಯಂಬಿಲ್ ಚಂದು ತಚ್ಚೋಳಿ ಒದೆನನ್ನ ಮತ್ತು ಪರಿವಾರ
444-445  ಪರವ  ಮತ್ತು ಪರಿವಾರ ನಾಯಕ
446 ಪಂಜಿ ಭೂತ
 447  -462 ಪಂಜುರ್ಲಿ ಮತ್ತು ಸೇರಿಗೆ ದೈವಗಳು
ಅಂಗಣತ್ತಾಯ ಪಂಜುರ್ಲಿ ಅಟ್ಟೊಡಾಯೆ ಪಂಜುರ್ಲಿ 
ಅಣ್ಣಪ್ಪ ಪಂಜುರ್ಲಿ ಅಲೇರ ಪಂಜುರ್ಲಿ‌
ಉಂರ್ದರ ಪಂಜುರ್ಲು ,ಒರಿ ಮರ್ಲೆ ಪಂಜುರ್ಲಿ
ಕಟ್ಟದಲ್ತಾಯ ಪಂಜುರ್ಲಿ ,ಕೆಂಪರ್ನ ಪಂಜುರ್ಲಿ ‌,ಕುಪ್ಪೆ ಪಂಜುರ್ಲಿ,ಕುಪ್ಪೆಟ್ಟು ಪಂಜುರ್ಲಿ
ಗಣಾಮಣಿ ಪಂಜುರ್ಲಿ,ಜುಂಬುರ್ಲಿ ,ತೆಲ್ಲಾರ್  ಪಂಜುರ್ಲಿ ದಾಸಪ್ಪ ಪಂಜುರ್ಲಿ
ದೆಂದೂರ ಪಂಜುರ್ಲಿ
ದೇವರ ಪೂಜಾರಿ ಪಂಜುರ್ಲಿ 
ಪಂಜಣತ್ತಾಯ ಪಂಜುರ್ಲಿ‌
ಬಗ್ಗು ಪಂಜುರ್ಲಿ,
ಬಗ್ಗು ಮೊಯ್ಲಿದಿ 
ವರ್ಣಾರ ಪಂಜುರ್ಲಿ 
ಸೇಮಿಕಲ್ಲ ಪಂಜುರ್ಲಿ 
468 ಪಾಣರಾಟ
469 ಪಿಲಿ ಭೂತ 
470 -471  ಪುದರ್ ಚಿನ್ನ ಬಂಟ ಮತ್ತು  ಪಿಲೆ ಪೆಲತ್ತಿ ದೈವಗಳು
472  ಪುದ  ಮತ್ತು ಪೋತಾಳ
473- 490 ಪುರಾಣ ದೇವತೆಗಳು ಮತ್ತು ಭೂತ ತೆಯ್ಯಂ ಗಳು
491-500ತುಳುನಾಡಿನ ಪುರುಷ ಭೂತಗಳು 
501  ಪುಲಂದಾಯ ಬಂಟ
502 ಪುಲಿಮರಂಞ ತೊಂಡನ್ 
503 -510  ಪುಲಿಯೂರ್ ಕಾಳಿ  ಪುಳ್ಳಿಕರಂಕಾಳಿ,ಕರಿಂತಿರಿ ನಾಯರ್ ಮತ್ತು ಐವರು ಹುಲಿ ದೈವಗಳು
511  ಪೆರಿಯಾಟ್ ಕಂಡನ್ 
512  ಪೆರುಂಬಳಯಚ್ಚನ್
513  ಪೊಟ್ಟನ್ 
514  520 ಪೊನ್ನಂಗಾಲತಮ್ಮೆ  ಮತ್ತು ಆರು  ಸಹೋದರರು
521 ಪೊನ್ವಾನ್ ತೊಂಡಚ್ಚನ್
522-525:ಪೊಸಮಹರಾಯ ,ಉಳ್ಳಾಲ್ತಿಯರುಮತ್ತು ಮಾಡ್ಲಾಯಿ 
526 -536 ಪೋಲೀಸ್,  ಕಳ್ಳ ,ಶಾನುಭಾಗ,ಪಟೇಲ, ಗುರಿಕ್ಕಾರ,ತಿಗಮಾರೆರ್ ,ಬಲಾಯಿಮಾರೆರ್,ಸೇನವ ,ಕಡೆಂಜು ಬಂಟ, ಸೇನವ ದೈವಗಳು
537 ಪೋಲೀಸ್ ತೆಯ್ಯಂ
 538-539 ಬಚ್ಚನಾಯಕ ಮತ್ತು ಮಂಞಣ ನಾಯಕ‌
540 -544 5ಬಬ್ಬರ್ಯ ಮತ್ತು ಸೇರಿಗೆ ದೈವಗಳು 
545-548 ಬಲವಾಂಡಿ ,ಕಂಡೆತ್ತಾಯ , ಉಳ್ಳಾಯ ,ಕುರಿಯಾಡಿತ್ತಾಯ
549  ಬಲ್ಲ ಮಂಜತ್ತಾಯ
550-555 ಬಲ್ಲಾಳ ಬಲ್ಲಾಳ್ತಿ ಮತ್ತು ಇತರ ದೈವಗಳು
556 ಬಲೀಂದ್ರ 
557  ಬಸ್ತಿನಾಯಕ
558 ಬಂಕಿ ನಾಯ್ಕ 
559-562 ಬಂಟಜಾವದೆ ಮತ್ತು ಉಳ್ಳಾಲ್ತಿ  ಪಡಿಕಲ್ಲಾಯ
562 ಬಾಕುಡತಿ
563 ಬಾಲೆ ಕನ್ಯಾಪು
564 -605 ಬ್ರಾಹ್ಮಣ ಮೂಲದ ದೈವಗಳು
606 ಬಿರ್ಮಣಾಚಾರಿ 
607 -608  ಬಿಲ್ಲಾರ ಬಿಲ್ಲಾರ್ತಿ ದೈವಗಳು
609 ಕುಂಬಳೆ ಸಿಮೆಯ ಪಟ್ಟದ ದೈವ ಬೀರಣ್ಣಾಳ್ವ
610  ಬೀರ್ನಾಚಾರಿ
611-613 ಬೂಡು ಬೊಮ್ಮಯ್ಯ ಮತ್ತು ಕತ್ತಲೆ ಬೊಮ್ಮಯ್ಯ,ಪಟ್ಟಂತರಸು
 614-616:ಬೆರ್ಮೆರ್,ಕಂಬೆರ್ಲು ಮತ್ತು ಹಕ್ಕೆರ್ಲು 
617-618 ಬೆಲೆಟಂಗರಜ್ಜ ಮತ್ತು ತಂಗಡಿ
619-620 ಬೇಡವ ಮತ್ತು ಬೇಟೆಗಾರ ದೈವಗಳು
621 ಬೊಟ್ಟಿ ಭೂತ
622 -625:ಬೋವ ದೈವಗಳು .
626 ಬೈನಾಟಿ 
627   ಬೈಸು ನಾಯಕ
628-690 ಭಗವತಿ ದೈವಗಳು
 692-694   ಭದ್ರಕಾಳಿ ,ಭದ್ರಕಾಳಿ ಭಗವತಿ ಮತ್ತು ವಣ್ಣಾತಿ ದೈವ
695 - 696  ಭದ್ರಕಾಳಿಮತ್ತು ಬೊಳ್ಳಿ ಬಿಲ್ ಅಯ್ಯಪ್ಪ 
697-698 ಭಂಡಾರಿ ಮತ್ತು ಪಿಲಡ್ಕತ್ತಾಯ‌
699 ಮಡಿಕತ್ತಾಯ
700-701 ಮದನಕ್ಕೆ ದೈಯಾರ್ ,ಕಳಿಗೋಂಕು ಮಾಬೀರರು
702-703'  ಮದಂಗಲ್ಲಾಯ ಕಡಂಗಲ್ಲಾಯ 
704-705 ಮದಿಮಾಯ ಮದಿಮಾಲ್
706ಮನಕ್ಕಡನ್ ಗುರುಕ್ಕಳ್ 
707 ಮನಕ್ಕೊಟ್ಟ ಅಮ್ಮ
708- 726 ಮನ್ಸರ  ದೈವಗಳು
717 ಮರಾಂಗಣೆ
718;ಮರುತಿಯೋಡನ್ ಕುರಿಕ್ಕಳ್
719-720  ಮಲಯಾಳ ಬ್ರಹ್ಮ ಮತ್ತು ಮಲ್ಯಾಳ ಭಟ್ರು 
721 ಮಲರಾಯ
722  ಮಲೆಕುಡಿಯರ ಅಯ್ಯಪ್ಪ 
723-726: ಮಲೆ ತಮ್ಮಚ್ಚ ಮತ್ತು ಪರಿವಾರ 
727-730 ಮಲೆರಾಯ ಮತ್ತು ಪರಿವಾರ 
 731 ಮಲೆಸಾವಿರ ದೈವ
732-733:ಮಂಗಳೆರ್ ಮತ್ತು  ಗುರು ಮಂಗೞೆರ್ 
734 -736:ಮಂತ್ರ ಗಣ ಮಂತ್ರ ದೇವತೆ ಮಂತ್ರ ಮೂರ್ತಿ ದೈವಗಳು
737 ಮಂದ್ರಾಯ
738-739 ಮಹಾಕಾಳಿ ಮತ್ತು ಮಾಂಕಾಳಿ ದೈವಗಳು
740-745 ಮಾಯಂದಾಲ್ ಮತ್ತು ಪರಿವಾರ  
746-747 ಮಾಯೊಲು ಮಾಯೊಲಜ್ಜಿ.
748-760 ಮಾರಿ ಭೂತಗಳು
761 -763 ಮಾಲಿಂಗ ರಾಯ ದಂಡಪ್ಪ ನಾಯಕ ಮಂಞ ನಾಯಕ ದೈವಗಳು‌
764 ಮಾಸ್ತಿಯಮ್ಮ 
765-766 ಮಿತ್ತೂರು ನಾಯರ್ ದೈವಗಳು

768-782 ಮುಗೇರ ದೈವಗಳು 
783 ಮುಡದೇರ್ ಕಾಳ ಭೈರವ 
784-786  ಮುತ್ತಪ್ಪನ್ ,ತಿರುವಪ್ಪನ್ ,ಮೂಲಂಪೆತ್ತಮ್ಮ
787  ಮುತ್ತು ಮಾರಿಯಮ್ಮ  
788 ಮುನಿಸ್ವಾಮಿ ದೈವ
789 ಮುವ್ವೆ ಮೂವ,ಮೂವಿಗೆ ವಾತೆ 
790 - 816ಮುಸ್ಲಿಂ ಮೂಲದ ದೈವಗಳು 
817 ಮೂಜಿಲ್ನಾಯ 
818-819 ಮೂಡೊಟ್ನಾರ್,ಪಡುವೆಟ್ನಾರ್ 
820 ಮೂರಿಲು
821 ಮೂರ್ತಿಲ್ಲಾಯ
822- 900 ಮೂಲ ಪುರುಷ ದೈವಗಳು 
901 ಮೆಕ್ಕೆ ಕಟ್ಟಿನ ಉರುಗಳು 
902-903  ಮೇರ ಮೇತಿಯರು
904 ಮೇಲಂಟಾಯ 
905 ಮೈಯೊಂದಿ
906  ಮೈಸಂದಾಯ
907 ಮೋಂದಿ ಕೋಲ‌
908 ಯಕ್ಷ ಯಕ್ಷಿಯರು ಮತ್ತು ಶ್ರೀಲಂಕಾದ  ಯಕುಮ ಕೋಲ‌ 
909 -910  ರಕ್ತೇಶ್ವರಿ ಮತ್ತು ಬವನೊ
911 ರಾಜನ್ ದೈವಗಳು
912 -914 ವಣ್ಣಾತನ್ ವಯನಾಡು ಕುಲವನ್,ಕಣ್ಣನ್ 
915 ವಡ್ಡಮರಾಯ
916 ವಿದೇಶೀ ಕಾಫ್ರೀ ದೈವಗಳು
917 ವಿಷ್ಣು ಮೂರ್ತಿ ಮತ್ತು ಪಾಲಂದಾಯಿ ಕಣ್ಣನ್
919 - 920 ವೀರಭದ್ರ/ ವೈರಜಾತ್,ವೀರನ್ 
921-924 ವೀರ ವಿಕ್ರಮೆರ್ ಮತ್ತು ಇರ್ವೆರ್ ಬೈದ್ಯೆರ್
925 ವೆಳ್ಳು ಕುರಿಕ್ಕಳ್
926 ವೇಟಕ್ಕೊರುಮಗನ್
927 ವೈದ್ಯಾಚಾರ್ಯ/ ವೈದ್ಯರಾಜನ್ 
928 ಶಗ್ರಿತ್ತಾಯ ದೈವ 
929 ಶಂಕರ ಬಡವಣ
930 -932 ಶಾಸ್ತಾವು,ಕರಿ ಭೂತ,ಕೋಮಾಳಿ
933 ಶಿರಾಡಿ ಭೂತ.
934 ಶಿವರಾಯ 
935 ಶ್ರೀಮಂತಿ ದೈವ
936-937 ಸತ್ಯ ಮಾಗಣ್ತಿ ಮತ್ತು ಕಲ್ಲು ದೈವ 
938 -942 ಬಾಕುಡರ ಸರ್ಪಕೋಲದ ದೈವಗಳು
943 ಸರ್ಪಂಕಳಿ
944 ಸರ್ಪಂತುಳ್ಳಲ್
945 ಸಂನ್ಯಾಸಿ ಮಂತ್ರ ದೇವತೆ
946 ಸಾದಿಕರಾಯ ಮತ್ತು ಹಾದಿಕಾರಾಯ 
947 ಸಾರ ಮಾಂಕಾಳಿ
948 ಸ್ವಾಮಿ ದೈವ 
949-956 ಸೀತಾಯುಂ ಮಕ್ಕಳುಂ,ದೈವತಾರ್ ಮತ್ತು ಪರಿವಾರ
957: ಸುಬ್ಬರಾಯ
958 ಸೋಣದ ಜೋಗಿ
959 ಹನುಮಂತ/ ಸಾರ ಪುಲ್ಲಿದಾರ್ ದೈವ
960 -961ಹಳ್ಳತ್ತಾಯ ಮತ್ತು ಅಲ್ನತ್ತಾಯ 
962 ಹಳೆಯಮ್ಮ
963 -973 ಹಾಯ್ಗುಳಿ ಮತ್ತು ಪರಿವಾರ 
ಮೂಕ ಹಾಯ್ಗುಳಿ,ಕೆಪ್ಪ ಹಾಯ್ಗುಳಿ,ತಾತ್ರಯ್ಯ,ಅಕ್ಸಾಲಿ ,ಮೂಡೂರ್ ಹಾಯ್ಗುಳಿ ,ನೆತ್ರ ಹಾಯ್ಗುಳಿ ಇತ್ಯಾದಿ )
974 -995 ಹಿರಿಯಾಯ ದೈವಗಳು
( ಆನೆ ಬೈದ್ಯ,ಸಿದ್ದ ಮರ್ದ ಬೈದ್ಯ,ಬಗ್ಗ ಪೂಜಾರಿ, ನಾಡು ಬೈದ್ಯ, ಬೊಲ್ಲ ಬೈದ್ಯ,ದೇರೆ ಬೈದ್ಯ ,ಚೆನ್ನಪ್ಪ ಪೂಜಾರಿ ,ಸಿದ್ದ ಬೈದ್ಯ,ಕೊರಗ ಬೈದ್ಯ ಇತ್ಯಾದಿ );
996-997 ಹುಲಿ ಮತ್ತು ಹಸರ ತಿಮ್ಮ 
998 -1000 ಹೊಸಮ್ಮ ,ಹೊಸಳಿಗಮ್ಮ ಮತ್ತು ಕುಲೆ ಮಾಣಿಕೊ
1001 ಹೌಟಲ್ದಾಯ ಮತ್ತು ಮಾಳದ ಕೊರಗ 
ಅಧ್ಯಯನಾತ್ಮಕ ಗ್ರಂಥ   ಸಂಗ್ರಹ-© ಡಾ.ಲಕ್ಷ್ಮೀ ಜಿ ಪ್ರಸಾದ್
mobile 9480516684

Sunday 12 November 2023

ಪಾಡ್ದನದ ಕಥೆಗಳು - ಡಾ.ಲಕ್ಷ್ಮೀ ಜಿ ಪ್ರಸಾದ್

 



ಚಂದಬಾರಿ ರಾಧೆ ಗೋಪಾಲ


ಪುರಾಣದ ಕಲ್ಪನೆಗಿಂತ ಭಿನ್ನವಾಗಿ, ತುಳು ಜಾನಪದ ಪಾಡ್ದನಗಲ್ಲಿ ಶ್ರೀಕೃಷ್ಣನನ್ನು ಸ್ತ್ರೀಲೋಲುಪ, ಲಂಪಟ ಎಂಬಂತೆ ಚಿತ್ರಿಸಿರುವುದು ತುಳು ಜನಪದರಲ್ಲಿದ್ದ ನಿಂದಾಸ್ತುತಿಯ ಹೊಳಹನ್ನು ನೀಡುತ್ತದೆ. ದೇವರನ್ನು ಕೂಡ ತಮ್ಮ ಲ್ಲೇ ಒಬ್ಬನಂತೆ ಪರಿಭಾವಿಸುವ ಮುಗ್ಧ ಸ್ವಾತಂತ್ರ್ಯ ಜನಪದರಿಗಷ್ಟೇ ಇರಲು ಸಾಧ್ಯವೇನೋ....


ತುಳು ಜನಪದ ಸಾಹಿತ್ಯದಲ್ಲಿ ಅದರಲ್ಲಿಯೂ ವಿಶೇಷವಾಗಿ ಪಾಡ್ದನಗಳಲ್ಲಿ ಈಶ್ವರ,ಕೃಷ್ಣ ಮೊದಲಾದ ದೇವರುಗಳ ಉಲ್ಲೇಖವಿದೆ. ಇಲ್ಲಿ ದೇವರುಗಳು ಪುರಾಣದ ಕಲ್ಪನೆಗಿಂತ ಭಿನ್ನವಾಗಿ ಚಿತ್ರಿಸಲ್ಪಟ್ಟಿದ್ದಾರೆ. ಚಂದಬಾರಿ ರಾಧೆ ಸಿರಿಕೃಷ್ಣ ಪಾಡ್ದನದಲ್ಲಿ ಶ್ರೀಕೃಷ್ಣ ಪ್ರಧಾನ ಪಾತ್ರವಾಗಿದ್ದಾನೆ. ನಾಗಸಿರಿ ಕನ್ನಗೆ ಪಾಡ್ದನದಲ್ಲಿ ಕೂಡ ಕೃಷ್ಣನ ಪ್ರಸ್ತಾಪವಿದೆ. ಇಲ್ಲೆಲ್ಲ ಶ್ರೀಕೃಷ್ಣನನ್ನು ಮಹಾತ್ಮನನ್ನಾಗಿ ಚಿತ್ರಿಸಿಲ್ಲ, ಈ ಪಾಡ್ದನಗಳಲ್ಲಿ ಶ್ರೀಕೃಷ್ಣನನ್ನು ಸ್ತ್ರೀಲೋಲನಾಗಿ, ವಿಷಯಲಂಪಟನಂತೆ, ಕಳ್ಳರ ಕಳ್ಳನಂತೆ ಚಿತ್ರಿಸಲಾಗಿದೆ.


ಪುರಾಣದ ಪರಿಕಲ್ಪನೆಯಲ್ಲಿ ಶ್ರೀಕೃಷ್ಣ-ರಾಧೆಯರು ರಾಧೆಯರು ಅನುಪಮ ಪ್ರೇಮಿಗಳು. ಕೃಷ್ಣನಿಗೆ ಒಲಿದ ರಾಧೆ ತಾನಾಗಿಯೇ ಕೃಷ್ಣನೆಡೆಗೆ ಬಂದಂತೆ ಕತೆ ಪುರಾಣಗಳಲ್ಲಿದೆ. ಆದರೆ ಚಂದಬಾರಿ ರಾಧೆ ಸಿರಿಕೃಷ್ಣಕತೆ ಪಾಡ್ದನದಲ್ಲಿ ಶ್ರೀಕೃಷ್ಣನು ರಾಧೆಯನ್ನು ಮೋಸದಿಂದ ವಶಪಡಿಸಿಕೊಂಡ ಕಥಾನಕವಿದೆ. ಚಂದಬಾರಿಯನ್ನು ಶ್ರೀಕೃಷ್ಣನಿಗೆಕೊಟ್ಟು ಮದುವೆ ಮಾಡಿಕೊಟ್ಟಿರುವುದರಿಂದ ರಾಧೆಗೆ ತನಗೋರ್ವ ಅಕ್ಕಇರುವುದು ತಿಳಿದಿರುವುದಿಲ್ಲ. ಒಂದು ದಿನ ರಾಧೆ ತನ್ನ ಪತಿ ಗೋಪಾಲನಲ್ಲಿ ನನಗೆ ಯಾರು ಸಂಬಂಧಿಕರು ಇಲ್ಲವೇ? ಎಂದು ಪ್ರಶ್ನಿಸುತ್ತಾಳೆ.


ಆಗ ಗೋಪಾಲನ್ನು `ನಿನಗೆ ಚಂದಬಾರಿ ಎಂಬ ಅಕ್ಕ ಇದ್ದಾಳೆ. ಅವಳಿಗೆ ಮೇಲಿನ ಮಿರಿಲೋಕದ ಶ್ರೀಕೃಷ್ಣನೊಂದಿಗೆ ಮದುವೆಯಾಗಿದೆ’ ಎಂದು ಹೇಳುತ್ತಾನೆ.


ತನಗೆ ಅಕ್ಕ ಇದ್ದಾಳೆಂಬ ತಿಳಿದಾಗ ಸಂತಸಗೊಂಡರಾಧೆ, ಆಕೆಯನ್ನು ನೋಡಬೇಕು ಎಂದು ಹಠ ಮಾಡುತ್ತಾಳೆ. ಆಗ ಗೋಪಾಲ, ನಿನ್ನ ಭಾವ ಶ್ರೀಕೃಷ್ಣನಿಗೆ ಒಳ್ಳೆಯ ಗುಣಗಳಿಲ್ಲ, ಹೋಗಬೇಡ ಎನ್ನುತ್ತಾನೆ.© ಡಾ.ಲಕ್ಷ್ಮೀ ಜಿ ಪ್ರಸಾದ್


ಆದರೆ ರಾಧ ಹಠ ಮಾಡಿ ಊಟ ತಿಂಡಿ ಸ್ನಾನಾದಿಗಳನ್ನು ತ್ಯಜಿಸುತ್ತಾಳೆ. ಆಗ ಮನ ಕರಗಿದ ಗೋಪಾಲ ದಂಡಿಗೆ ಸಿದ್ಧಪಡಿಸಿ ಕಳುಹಿಸಿಕೊಡುತ್ತಾನೆ.


ಮೇಲು ಮಿರಿಲೋಕದಲ್ಲಿ ಕಂಬಳ ಗದ್ದೆಯ ಕಟ್ಟಹುಣೆಯಲ್ಲಿ ದಂಡಿಗೆ ಬರುವುದನ್ನು ನೋಡಿದ ಶ್ರೀಕೃಷ್ಣ ದಂಡಿಗೆ ಬರುತ್ತಿರುವ ಬಗ್ಗೆ ಹೇಳಿದಾಗ ಚಂದಬಾರಿಗೆ ಬರುತ್ತಿರುವುದು ತನ್ನ ತಂಗಿ ರಾಧೆ ಎಂದು ತಿಳಿಯುತ್ತದೆ. ಆಗ ಅವಳು ``ಅವಳು ನನ್ನ ತಂಗಿ ರಾಧೆ. ಅವಳು ಬರಲಿ, ಅವಳ ತಂಟೆಗೆ ಹೋಗಬೇಡಿ’’ ಎಂದು ಕೇಳಿಕೊಳ್ಳುತ್ತಾಳೆ.


ರಾಧೆಯನ್ನು ಪ್ರೀತಿಯಿಂದ ಬರಮಾಡಿಕೊಂಡ ಚಂದಬಾರಿ ಕೈಕಾಲು ತೊಳೆಯಲು ಮುತ್ತಿನ ಕೆರೆಗೆ ಕಳುಹಿಸುತ್ತಾಳೆ. ಅಲ್ಲಿ ಶ್ರೀಕೃಷ್ಣ ತಾವರೆ ಹೂವಾಗಿ ಬಂದು ರಾಧೆಯ ಮಡಲಿಗೆ ಬಿದ್ದು ತನ್ನ ನಿಜರೂಪ ತೋರಿದಾಗ ಕೃಷ್ಣನ ಕುರಿತು ಮೊದಲೇ ತಿಳಿದಿದ್ದ ರಾಧೆ ಅವನನ್ನು ಬೈದು, ಅವನಿಂದ ತಪ್ಪಿಸಿಕೊಂಡು ಅಕ್ಕನಿರುವಲ್ಲಿಗೆ ಬರುತ್ತಾಳೆ.


ಅಕ್ಕ-ತಂಗಿ ಅಕ್ಕಪಕ್ಕ ಕುಳಿತುಆತ್ಮೀಯತೆಯಿಂದ ಮಾತನಾಡಿ ಬೇಸರ ಕಳೆಯುತ್ತಾರೆ. ಸಂಜೆಯಾಗುತ್ತಲೇ ತಂಗಿ ರಾಧೆಯು ಅಕ್ಕನನ್ನು ತನ್ನ ಮನೆಗೆ ಬರುವಂತೆ ಆಹ್ವಾನಿಸಿ ತನ್ನ ಮನೆಗೆ ಹಿಂದಿರುಗುತ್ತಾಳೆ.


ಇತ್ತ ಶ್ರೀಕೃಷ್ಣ ಚಂದಬಾರಿಯ ಒಂದು ಸೀರೆಯನ್ನು ಉಟ್ಟು ಚಂದಬಾರಿಯ ವೇಷವನ್ನು ಧರಿಸುತ್ತಾನೆ. ಅಕ್ಕನ ದಾರಿಯನ್ನುಕಾಯುತ್ತಿದ್ದ ರಾಧೆ ಚಂದಬಾರಿ ರೂಪದಲ್ಲಿ ಬಂದ ಶ್ರೀಕೃಷ್ಣನನ್ನು ಅಕ್ಕನೆಂದೇ ಭಾವಿಸಿ ಸ್ವಾಗತಿಸಿ ಸತ್ಕಾರ ಮಾಡುತ್ತಾಳೆ. ರಾತ್ರಿ ಊಟ ಮಾಡಿ ಏಳು ಮಾಳಿಗೆಯ ಉಪ್ಪರಿಗೆಯ ಮೇಲೆ ಹೋಗಿ ರಾಧೆ ಮತ್ತು ಚಂದಬಾರಿ ರೂಪದಲ್ಲಿರುವ ಶ್ರೀಕೃಷ್ಣ ಮಲಗಲು ಹೋಗುತ್ತಾರೆ. ತಂಗಿರಾಧೆ ಅಕ್ಕನಲ್ಲಿ ಕಥೆ ಹೇಳೆಂದು ಹೇಳುವಾಗ ನನಗೆ ಕಥೆಗಿತೆ ತಿಳಿದಿಲ್ಲ. ನಾನು ನನ್ನ ದೇವರುಶ್ರೀಕೃಷ್ಣ ನಾಮಸ್ಮರಣೆ ಮಾತ್ರ ಮಾಡುವುದು ಎಂದು ಚಂದಬಾರಿ ರೂಪ ಧರಿಸಿದ ಶ್ರೀಕೃಷ್ಣ ಹೇಳುತ್ತಾನೆ. ಹಾಗಾದರೆ ಅದನ್ನೇ ಹೇಳು ಎಂದು ರಾಧೆ ಹೇಳುತ್ತಾಳೆ. ಆಗ ನಾನು ಹೇಳುವುದಿಲ್ಲ. ನಾನು ಹೇಳಿದರೆ ನಿನ್ನ ಭಾವ ಇಲ್ಲಿ ಪ್ರತ್ಯೇಕ್ಷವಾಗುತ್ತಾನೆ ಎಂದುಚಂದಬಾರಿ ರೂಪದ ಶ್ರೀಕೃಷ್ಣ ಹೇಳುತ್ತಾನೆ. ತೊಂದರೆ ಇಲ್ಲ. ಅದನ್ನೇ ಹೇಳು ಎಂದು ರಾಧೆ ಹೇಳಿದಾಗ ಚಂದಬಾರಿ ರೂಪದ ಶ್ರೀಕೃಷ್ಣ.ಶ್ರೀಕೃಷ್ಣನ ನಾಮಸ್ಮರಣೆ ಮಾಡುತ್ತಾನೆ. ಕೂಡಲೇ ತನ್ನ ನಿಜ ರೂಪವನ್ನು ತೋರುತ್ತಾನೆ. ಆ ಬಳಿಕ ಏಳು ರಾತ್ರಿ ಏಳು ಹಗಲು ರಾಧೆ ಮತ್ತು ಕೃಷ್ಣ ಜೊತೆಯಾಗಿ ಇರುತ್ತಾರೆ. ಇತ್ತ ಚಂದಬಾರಿ ತನ್ನ ಪತಿ ಶ್ರೀಕೃಷ್ಣ ಎಲ್ಲಿಗೆ ಹೋದನೆಂದು ಹುಡುಕುತ್ತಾ ರಾಧೆಯ ಮನೆಗೆ ಬರುತ್ತಾಳೆ. ಗೋಪಾಲನೂ ಮೇಲು ಮಾಳಿಗೆಯಲ್ಲಿ ಅಕ್ಕ ತಂಗಿ ಏಳು ರಾತ್ರಿ ಏಳು ಹಗಲು ಏನು ಮಾಡುತ್ತಿದ್ದಾರೆ ಎಂದು ಸಂಶಯ ತಾಳುತ್ತಾನೆ.© ಡಾ.ಲಕ್ಷ್ಮೀ ಜಿ ಪ್ರಸಾದ್


ಆಗರಾಧೆ ಮತ್ತು ಶ್ರೀಕೃಷ್ಣ ದೇವರು ಮಾಳಿಗೆ ಇಳಿದು ಬರುತ್ತಾರೆ. ಗೋಪಾಲನಲ್ಲಿ ಶ್ರೀಕೃಷ್ಣ ದೇವರು ರಾಧೆ ಎಂಜಲಾಗಿದ್ದಾಳೆ. ಅವಳು ನಿನಗೆ ಬೇಕೆ? ನಾನು ಕೊಂಡು ಹೋಗಲೇ? ಎಂದು ಕೇಳುತ್ತಾನೆ. ಗೋಪಾಲ, ರಾಧೆ ತನಗೆ ಬೇಡ, ನೀನೇ ಕರಕೊಂಡು ಹೋಗು ಎನ್ನುತ್ತಾನೆ.


ಮುಂದೆ ಚಂದಬಾರಿ ಹಾಗೂ ರಾಧೆಯರನ್ನು ಕರೆದುಕೊಂಡು ಶ್ರೀಕೃಷ್ಣ ಮೇಲಿನ ಮಿರಿಲೋಕಕ್ಕೆ ಬರುತ್ತಾನೆ. ಅಲ್ಲಿ ರಾಧೆ, ಚಂದಬಾರಿ ಹಾಗೂ ಶ್ರೀಕೃಷ್ಣ ಸಂಸಾರ ನಡೆಸುತ್ತಾ ಇರುತ್ತಾರೆ. ಎಂದುಶ್ರೀಮತಿ ಶಾರದಾ ಜಿ. ಬಂಗೇರ ಅವರು ಹೇಳಿದ ಚಂದಬಾರಿ ರಾಧೆ ಸಿರಿಕೃಷ್ಣ ಪಾಡ್ದನದಲ್ಲಿ ಹೇಳಿದೆ.


ಇದೇ ರೀತಿನಾಗಸಿರಿ ಕನ್ನಗೆ ಪಾಡ್ದನದಲ್ಲಿ ಕೂಡ ಶ್ರೀಕೃಷ್ಣನನ್ನು ಸ್ತ್ರೀಲೋಲುಪನಂತೆ ಚಿತ್ರಿಸಲಾಗಿದೆ. ತುಳು ಜನಪದ ಸಾಹಿತ್ಯವಾದ ಪಾಡ್ದನಗಳಲ್ಲಿ ಶ್ರೀಕೃಷ್ಣನ ಪರಿಕಲ್ಪನೆ ವಿಶಿಷ್ಟವಾಗಿ ಮೂಡಿ ಬಂದಿದೆ. ದಾಸವರೇಣ್ಯರ ನಿಂದಾಸ್ತುತಿಗಳಂತೆ ಇವು ಕೂಡ ತುಳು ಜನಪದರ ನಿಂದಾಸ್ತುತಿಗಳೇ ಇರಬಹುದು.




     3. ಮಧುರಗೆ ಮದುಮಗಳು


ಮದುವೆಗಿಂತ ಮೊದಲು ಮೈನೆರೆದ ಹೆಣ್ಣು ಮಕ್ಕಳನ್ನು ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿಗೆ ಬಿಡುತ್ತಿದ್ದ ವಿಚಾರ ದೇಯಿ ಬೈದೆತಿ ಪಾಡ್ದನದಲ್ಲಿದೆ. ಅಂತಹ ಪದ್ಧತಿಯ ಕುರಿತು ರಚಿಸಲ್ಪಟ್ಟ ಪಾಡ್ದನವಿದು. ಏಳು ಜನ ಅಕ್ಕ ತಂಗಿಯರಲ್ಲಿ ಮಧುರಗೆ ಹಿರಿಯವಳು. ಆರು ಜನ ತಂಗಿಯರಿಗೆ ಚಿಕ್ಕಂದಿನಲ್ಲಿಯೇ ಮದುವೆಯಾಗುತ್ತದೆ. ಮಧುರಗೆ ಮದುವೆಯಾಗದೆ ಉಳಿದಾಗ ಆರು ಜನ ತಂಗಿಯರು ಹಾಗೂ ಮನೆ ಮಂದಿ ಒಟ್ಟಾಗಿ ಚರ್ಚಿಸಿ “ಅವಳ ಕಣ್ಣು ಕಟ್ಟಿ ಕಾಡಿಗೆ ಬಿಡಬೇಕು” ಎಂದು ನಿಶ್ಚಯಿಸುತ್ತಾರೆ. ದೊಡ್ಡಪ್ಪನ ಮಗನಿಗೆ ನೂಲ ಮದುವೆ(ಉಪನಯನ) ಎಂದು ಹೇಳಿ ಅವಳನ್ನು ಅಲಂಕರಿಸಿ ಕರೆದುಕೊಂಡು ಹೋಗುವಾಗ ಕಾಡಿನಲ್ಲಿ ಬಿಟ್ಟು ತಂದೆ ಹಿಂದಿರುಗುತ್ತಾರೆ. ಅವಳ ತಾಯಿ ‘ತನ್ನ ಮಗಳನ್ನು ಒಂದು ನೆಲೆಗೆ ಮುಟ್ಟಿಸುವಂತೆ’ ದೈವಗಳಲ್ಲಿ ಪ್ರಾರ್ಥಿಸುತ್ತಾಳೆ.© ಡಾ.ಲಕ್ಷ್ಮೀ ಜಿ ಪ್ರಸಾದ್

ಜುಮಾದಿ ದೈವವು ಮೂರ್ತೆ ತೆಗೆಯುವ ಬೈದ್ಯನ ರೂಪದಲ್ಲಿ ಬಂದು ಅವಳನ್ನು ಕರೆದೊಯ್ದು ಕದ್ರಿಯ ಬಂಗೇರ ಅರಸನಿಗೆ ಒಪ್ಪಿಸುತ್ತದೆ. ಆತ ಅವಳನ್ನು ಮದುವೆಯಾಗುತ್ತಾನೆ. ಇಲ್ಲಿ ಮಧುರಗೆಯ ಕಥೆ ಸುಖಾಂತವಾಗಿದೆಯಾದರೂ ಮದುವೆಯಾಗದ ಹೆಣ್ಣು ಮಕ್ಕಳನ್ನು ಕಾಡಿನಲ್ಲಿ ಕೈಕಾಲು ಕಟ್ಟಿ, ಕಣ್ಣಿಗೆ ಬಟ್ಟೆ ಕಟ್ಟಿ ಬಿಡುತ್ತಿದ್ದ ಅನಿಷ್ಟ ಪದ್ಧತಿಯ ಕುರಿತು ತಿಳಿಸುತ್ತದೆ. ವಾಸ್ತವಿಕ ನೆಲೆಯಲ್ಲಿ ಹೇಳುವುದಾದರೆ ಕಾಡಿನ ದಾರಿಯಲ್ಲಿ ಬಂದ ಯಾರೋ ಕರುಣಾಳು ವ್ಯಕ್ತಿಗಳು ಅವಳನ್ನು ಕರೆದುಕೊಂಡು ಹೋಗಿ ಒಳ್ಳೆಯ ವರನನ್ನು ಹುಡುಕಿ ಮದುವೆ ಮಾಡಿಸಿರಬಹುದು. ಕಾಲಾಂತರದಲ್ಲಿ ಜುಮಾದಿಯ ಮಹಿಮೆ ಸೇರಿರಬಹುದು.


ಭಾರತ ದೇಶದಾದ್ಯಂತ ಪ್ರಚಲಿತವಿದ್ದ ಸತಿ ಪದ್ಧತಿಯ ಬಗ್ಗೆ ತುಳು ಪಾಡ್ದನಗಳು ಮೌನ ತಾಳಿವೆ. ಇದರಿಂದ ಸತಿಪದ್ಧತಿ ತುಳುನಾಡಿನಲ್ಲಿ ಅಷ್ಟಾಗಿ ಪ್ರಚಲಿತವಿರಲಿಲ್ಲ. ಇಂಥದೊಂದು ಅನಿಷ್ಟ ಪದ್ಧತಿ ತುಳುನಾಡಿನಲ್ಲಿ ಇರಲಿಲ್ಲ ಎಂದು ಹೇಳಿಕೊಳ್ಳಬಹುದಾದರೂ, ಅದಕ್ಕಿಂತಲೂ ಕ್ರೂರವಾದ ಮದುವೆಯಾಗದ ಹೆಣ್ಣು ಮಕ್ಕಳನ್ನು ಬೆತ್ತಲಾಗಿಸಿ ಕಣ್ಣಿಗೆ ಬಟ್ಟೆ ಕಟ್ಟಿ ಕೈಕಾಲು ಕಟ್ಟಿ ಕಾಡಿನಲ್ಲಿ ಬಿಡುತ್ತಿದ್ದ ಅನಿಷ್ಟ ಪದ್ಧತಿ ತುಳುನಾಡಿನಲ್ಲಿ ಪ್ರಚಲಿತವಿತ್ತು ಎನ್ನುವುದಕ್ಕೆ ಈ ಪಾಡ್ದನ ಸಾಕ್ಷಿಯಾಗಿದೆ.




4. ಜಾಯಿಲ ಬಂಗೇತಿ

© ಡಾ.ಲಕ್ಷ್ಮೀ ಜಿ ಪ್ರಸಾದ್

ಮದುವೆಯಾಗದ ಹೆಣ್ಣು ಮಕ್ಕಳನ್ನು ನಮೆಯಲ್ಲಿರಿಸಿಕೊಳ್ಳಬಾರದು ಎಂಬ ನಂಬಿಕೆ ಇದ್ದಂತೆ ಅಶುಭಗಳಿಗೆಯಲ್ಲಿ ಮೈನೆರೆದ ಹೆಣ್ಣು ಮಕ್ಕಳನ್ನು ಕೂಡ ಮನೆಯಲ್ಲಿರಿಸಿಕೊಳ್ಳಬಾರದು ಎಂಬ ನಂಬಿಕೆಯಿದ್ದು ಅದರ ಸುತ್ತ ಈ ಪಾಡ್ದನವು ಹೆಣ್ಣೆಯಲ್ಪಟ್ಟಿದೆ. ಕನರಾಯ ಬಂಗೇರರ ಮುದ್ದಿನ ಸೊಸೆ ಜಾಯಿಲ ಬಂಗೇತಿ. ಅತ್ತೆ ಮುಂಡ್ಯಗಳಿಗೆ ಜಾಯಿಲ ಬಂಗೇತಿ ಬಗ್ಗೆ ಪ್ರೀತಿ ಆದರಗಳು ಇರಲಿಲ್ಲ. ಅದಕ್ಕೆ ಸರಿಯಾಗಿ ಜಾಯಿಲ ಬಂಗೇತಿ ಮಂಗಳವಾರ ಅಮವಾಸ್ಯೆಯ ಫಲದಲ್ಲಿ ಪುಷ್ಪವತಿಯಾಗುತ್ತಾಳೆ. ಆಗ ಅತ್ತೆ ಮುಂಡ್ಯಗ ‘ಅಶುಭ ಗಳಿಗೆಯಲ್ಲಿ ಮೈನೆರೆದ’ ಹೆಣ್ಣನ್ನು ಮನೆಯಲ್ಲಿರಿಸಿಕೊಳ್ಳಬಾರದು. ಹಾಗೆ ಒಂದು ವೇಳೆ ಇರಿಸಿಕೊಂಡರೆ ಬೀಡಿಗೆ ಕೊಟ್ಟು ಗುದ್ದಲಿ ಬೀಳುತ್ತದೆ. ಸರ್ವನಾಶವಾಗುತ್ತದೆ ಎಂದು ಹೇಳುತ್ತಾಳೆ. ಶಾಸ್ತ್ರದಲ್ಲಿ ಕೂಡ ಹಾಗೆ ಹೇಳಿದೆ ಎನ್ನುತ್ತಾರೆ ಕನರಾಯ ಬಂಗೇರರು. ಮುಂಡ್ಯಗ ಜಾಯಿಲ ಬಂಗೇತಿಯನ್ನು ಮನೆಯಿಂದ ಹೊರಹಾಕುವಾಗ ಬಂಗೇರರು ದುಃಖಿಸಿದರಾದರೂ ಅವಳನ್ನು ತಡೆಯುವುದಿಲ್ಲ.


ಮುಂದೆ ಜತುರಂಗದ ಬೀಡಿನ ಒಡತಿಯು ಕರುಣೆಯಿಂದ ಜಾಯಿಲ ಬಂಗೇತಿಗೆ ಆಶ್ರಯ ಕೊಡುತ್ತಾಳೆ. ಅವಳ ಮಗ ಬೊಳ್ಳಿಲ್ಲ ಕುಮಾರ ಜಾಯಿಲ ಬಂಗೇತಿಯನ್ನು ಮದುವೆಯಾಗುತ್ತಾನೆ. ಜಾಯಿಲ ಬಂಗೇತಿಯ ಕಥೆ ಜತುರಂದ ಬೀಡಿನ ಒಡತಿಯ ಅಂತಃಕರಣದ ಕಾರಣದಿಂದ ಸುಖಾಂತವಾಗಿರುವುದಾದರೂ ಶಾಸ್ತ್ರದ ಹೆಸರಿನಲ್ಲಿ, ಸಂಪ್ರದಾಯದ ಹೆಸರಿನಲ್ಲಿ ಸ್ತ್ರೀಯ ಮೇಲೆ ಆಗುತ್ತಿದ್ದ ಶೋಷಣೆಯನ್ನು ಈ ಪಾಡ್ದನವು ತಿಳಿಸುತ್ತದೆ.




5. ಕರಿಯ ಕನ್ಯಾ ಮದನು


ಏಳು ಮಂದಿ ಕಬ್ಬೀರರ ಮುದ್ದಿನ ತಂಗಿ ಮದನು. ಅವಳನ್ನು ಮದುವೆ ಮಾಡಿಕೊಟ್ಟಿದ್ದಾರೆ. ಅವಳು ಚೊಚ್ಚಲ ಬಸುರಿಯಾದಾಗ ಅವಳ ಸೀಮಂತಕ್ಕೆ ಸಮುದ್ರಕ್ಕೆ ಹೋಗಿ ಮುತ್ತುಗಳನ್ನು ತರುತ್ತಾರೆ ಅವಳ ಏಳು ಜನ ಅಣ್ಣಂದಿರು. ಸೀಮಂತ ಮುಗಿಸಿ ತಮ್ಮ ಮನೆಗೆ ಕರೆ ತರಲು ಅಣ್ಣಂದಿರು ಹೋಗುತ್ತಾರೆ. ಏಳು ಜನ ಅಣ್ಣಂದಿರು ಅವಳನ್ನು ಕರೆತರುತ್ತಾರೆ. ಕದ್ರಿಯ ಸಮೀಪಕ್ಕೆ ಬಂದಾಗ ಮಧ್ಯಾಹ್ನವಾಗುತ್ತದೆ. ಕಲ್ಲು ಜೋಡಿಸಿ, ಒಲೆ ಹೂಡಿ, ಸೌದೆ ಉರಿಸಿ, ಅಕ್ಕಿ ಬೇಯಿಸಿ, ಅಡುಗೆ ಮಾಡಿಟ್ಟು, ಸ್ನಾನ ಬರುವಾಗ ಏಳು ಜನ ಕಬ್ಬೀರರು ಹೋಗುತ್ತಾರೆ. ಸ್ನಾನ ಮಾಡಿ ಬರುವಾಗ ಮುಂದೆ ತಂಗಿಗೆ ಸುಖಪ್ರಸವವಾಗಲಿ ಎಂದು ಬೇಡಿಕೊಳ್ಳಲು ಕದ್ರಿ ದೇವಾಲಯಕ್ಕೆ ಹೋಗುತ್ತಾರೆ. ಅಲ್ಲಿ ತೆಪ್ಪಂಗಾಯಿ, ಗುಬ್ಬಿ ಕಾಳಗ ಸೂಳೆಯರ ಮೇಳ ಮೊದಲಾದ ಸಾಹಸದ ಆಟಗಳು ಇರುತ್ತವೆ. ಇವರು ಎಲ್ಲದರಲ್ಲಿ ಗೆಲ್ಲುತ್ತಾರೆ. ಆಗ ಕದ್ರಿಯ ಅರಸ ಅಸೂಯಯಿಂದ ಅವರನ್ನು ಬಂಧಿಸಿ ಸೆರೆಮನೆಯಲ್ಲಿ ಕೂಡ ಹಾಕುತ್ತಾನೆ. ತುಂಬು ಗರ್ಭಿಣಿ ಮದನು ಬಂದು ಅಣ್ಣಂದಿರನ್ನು ಬಿಡುವಂತೆ ಕೇಳಿಕೊಂಡರೂ ಬಿಡುವುದಿಲ್ಲ. ಆಗ ಅವಳು ‘ನೀನು ನನ್ನ ಅಣ್ಣಂದಿರನ್ನು ಬಿಡದಿದ್ದರೆ ನನ್ನ ಹೊಟ್ಟೆಯಲ್ಲಿರುವ ಮಗ ಮುಂದೆ ನಿನ್ನನ್ನು ಸೋಲಿಸಿ ಮಾವಂದಿರನ್ನು ಬಿಡಿಸುತ್ತಾನೆ’ ಎಂದು ಹೇಳಿ ಅಲ್ಲಿಂದ ಬಂದು ಕಾಡಿನಲ್ಲಿ ವಾಸಿಸುತ್ತಾಳೆ. ಒಂದು ಗಂಡು ಮಗುವಿಗೆ ಜನ್ಮವೀಯುತ್ತಾಳೆ. ಆ ಮಗುವನ್ನು ತೆಕ್ಕಿ ಎಲೆಯಲ್ಲಿ ಮಲಗಿಸಿ ಸಮುದ್ರದಲ್ಲಿ ತೇಲಿಬಿಡುತ್ತಾಳೆ. ಆ ಮಗು ಮರಕಾಲರ ಕೈಗೆ ಸಿಕ್ಕುತ್ತದೆ. ಅವರು ಆ ಮಗುವನ್ನು ಸಂತಾನವಿಲ್ಲದ ನಂದಾರ ಅರಸನಿಗೆ ಕೊಡುತ್ತಾರೆ. ಆ ಮಗು ರಾಜನ ದತ್ತು ಮಗುವಾಗಿ ಬೆಳೆಯುತ್ತಾನೆ. ಮುಂದೊಂದು ದಿನ ಬೆಳೆದು ದೊಡ್ಡವನಾದ ನಂತರ ಕಾಡಿಗೆ ಬಂದಾಗ ಮರಕಾಲರ ಸಹಾಯದಿಂದ ತನ್ನ ತಾಯಿಯ ಗುರುತು ಹಿಡಿಯುತ್ತಾನೆ. © ಡಾ.ಲಕ್ಷ್ಮೀ ಜಿ ಪ್ರಸಾದ್

ಕದ್ರಿಯ ಅರಸರನ್ನು ಸೋಲಿಸಿ ತನ್ನ ಮಾವಂದಿರನ್ನು ಬಿಡಿಸಿಕೊಂಡು ಬರುತ್ತಾನೆ. ಅಪ್ರತಿಮ ವೀರರನ್ನು, ಸಾಹಸಿಗಳನ್ನು ಕಂಡರೆ ಅವರ ಮೇಲೆ ಮತ್ಸರ ಪಟ್ಟು ರಾಜರುಗಳು ತೊಂದರೆ ಕೊಡುವ ವಿಚಾರ ಅನೇಕ ಪಾಡ್ದನಗಳಲ್ಲಿ ಉಕ್ತವಾಗಿದೆ. ಇಂಥಹ ವೀರರನ್ನು ಹೀಗೆಯೇ ಬಿಟ್ಟರೆ ಮುಂದೊಂದು ದಿನ ತಮ್ಮ ಅಧಿಕಾರಕ್ಕೆ ಕುತ್ತು ಬಂದೀತೆಂಬ ಭಯದಿಂದ ಅವರನ್ನು ನಾಶಕ್ಕೆ ಯತ್ನಿಸುವ ವಿಚಾರ ಕರಿಮಲೆ ಜುಮಾದಿ, ಹಳ್ಳತ್ತಾಯ, ಕಲ್ಕುಡ ಕಲ್ಲುರ್ಟಿ ಮೊದಲಾದ ಪಾಡ್ದನಗಳಲ್ಲಿದೆ.


ಇಂಥಹದ್ದೇ ಒಂದು ಎಲ್ಲೋ ನಡೆದಿರಬಹುದಾದ ಘಟನೆಯನ್ನು ಆಧರಿಸಿ ಈ ಪಾಡ್ದನವು ರಚಿತವಾಗಿದೆ. ಇದರಲ್ಲಿ ಕೆಲವು ಅಲೌಕಿಕ ವಿಚಾರಗಳು ಕೂಡ ಸೇರಿಕೊಂಡಿವೆ.


 6 ನಾಗಸಿರಿ ಕನ್ಯಗೆ


ತುಳು ಪಾಡ್ದೆನಗಳಲ್ಲಿ ಈಶ್ವರ ಕೃಷ್ಣ ಮೊದಲಾದ ಪೌರಾಣಿಕ ದೇವರುಗಳು ಲೌಕಿಕ ನೆಲೆಯ ಅರಸರಂತೆ ಚಿತ್ರಿಸಲ್ಪಟ್ಟಿದ್ದಾರೆ. ಪಾಡ್ದನಗಳಲ್ಲಿ ಅರಸರಲ್ಲಿದ್ದಿರಬಹುದಾದ ದರ್ಪ, ಅಹಮಿಕೆ, ಸ್ತ್ರೀ ವ್ಯಾಮೋಹಗಳು ಈಶ್ವರ, ಕೃಷ್ಣ ಮೊದಲಾದ ದೇವರುಗಳಿಗೆ ಹೇಳಲ್ಪಟ್ಟಿವೆ. ಅಂತೆಯೇ ನಾಗಸಿರಿ ಕನ್ಯಗೆ ಪಾಡ್ದನದಲ್ಲಿ ಬರುವ ಸಿರಿಕೃಷ್ಣ ದೇವರು ತಮ್ಮನ ಹೆಂಡತಿಯ ಮೇಲೆ ಕಣ್ಣು ಹಾಕುವ ಕೆಟ್ಟ ವ್ಯಕ್ತಿಯಂತೆ ಚಿತ್ರಿಸಲ್ಪಟ್ಟಿದ್ದಾನೆ. ಸತ್ಯದಲ್ಲಿ ಹುಟ್ಟಿದ ನಾಗಸಿರಿ ಸಾಮಾನ್ಯ ಹೆಂಗಸರಂತೆ ನೀರು ತರಲು ಹೋಗುತ್ತಾಳೆ. ಶ್ರೀಕೃಷ್ಣ ದೇವರು ಅವಳ ಮೇಲೆ ಆರೋಪ ಹೊರಿಸಿದಾಗ ಕುದಿಯುವ ಎಣ್ಣೆಯಲ್ಲಿ ಮುಳುಗಿ ತನ್ನ ಪ್ರಾತಿವೃತ್ಯವನ್ನು ಪ್ರಮಾಣಿಸಿದ ನಂತರ ಕೂಡ ಸರ್ಪಗಳಿರುವ ಪೆಟ್ಟಿಗೆಗೆ ಕೈ ಹಾಕಿಸಿ ಪರೀಕ್ಷಿಸಬೇಕೆಂದು ಶ್ರೀಕೃಷ್ಣ ಹೇಳಿದಾಗ ‘ಈ ಜನ್ಮದ ಬಗ್ಗೆ ರೋಸಿ ಹೋಗುವ ನಾಗಸಿರಿ ಕಾಳೀಂಗ ಸರ್ಪದ ಹತ್ತಿರ ತನ್ನನ್ನು ಕಚ್ಚಿ ಸಾಯಿಸುವಂತೆ’ ಪ್ರಾರ್ಥಿಸುತ್ತಾಳೆ. © ಡಾ.ಲಕ್ಷ್ಮೀ ಜಿ ಪ್ರಸಾದ್

ಸರ್ಪ ಅವಳನ್ನು ಕಚ್ಚುತ್ತದೆ. ಅವಳು ಕಾಯ ಬಿಟ್ಟು ಕೈಲಾಸ ಸೇತುತ್ತಾಳೆ. ಇಲ್ಲಿ ನಾಗಸಿರಿಯಲ್ಲಿ ಲೌಕಿಕತೆ ಹಾಗೂ ಅಲೌಕಿಕತೆ ಎರಡು ಕೂಡ ಸೇರಿಕೊಂಡಿವೆ. ಶ್ರೀಕೃಷ್ಣ ಕೇರೆ ಹಾವಾಗಿ ಬಂದಾಗ ಕಾಗೆಯ ರೂಪವನ್ನು ಧರಿಸಿ ನಾಗಸಿರಿ ಕುಕ್ಕಲು ಹೋಗುತ್ತಾಳೆ. ಮುಂದೆ ಉಣುವಾಗಿ ಹಸುವಿನ ಕೆಚ್ಚಲಲ್ಲಿ ಅಡಗಿ ಕುಳಿತುಕೊಳ್ಳುತ್ತಾಳೆ. ಆಗ ಕೋಳಿಯಾಗಿ ಬಂದ ಶ್ರೀಕೃಷ್ಣನನ್ನು ಗಿಡುಗನಾಗಿ ಹಿಡಿಯಲು ಹೋಗುತ್ತಾಳೆ. ಇಷ್ಟೆಲ್ಲ ಮಹಿಮೆಯನ್ನು ತೋರುವ ನಾಗಸಿರಿ ಹಾದರದ ಆರೋಪಕ್ಕೆ ಸಿಲುಕಿ ಸಾಮಾನ್ಯ ಹೆಣ್ಣು ಮಕ್ಕಳಂತೆ ಸತ್ಯ ಪ್ರಮಾಣ ಮಾಡಬೇಕಾಗುತ್ತದೆ. ಸತ್ಯವನ್ನು ತೋರಿಸಿದ ನಂತರವೂ ತಾನಾಗಿಯೇ ಸರ್ಪವನ್ನು ಪ್ರಾರ್ಥಿಸಿ ಸಾವನ್ನು ತಂದುಕೊಳ್ಳುತ್ತಾಳೆ.


ನಾಗಸಿರಿ ಕನ್ಯಗೆಯ ಪಾಡ್ದನದಲ್ಲಿ ಸೇರಿಕೊಂಡಿರುವ ಅಲೌಕಿಕ ವಿಚಾರಗಳನ್ನು ಕೈ ಬಿಟ್ಟರೆ ‘ನಾಗಸಿರಿ ಒಬ್ಬ ರಾಜನ ಹೆಂಡತಿ, ರಾಜನ ಅಣ್ಣ ಅವಳ ಮೇಲೆ ಕಣ್ಣು ಹಾಕುತ್ತಾನೆ. ಅವಳು ದಕ್ಕದಿದ್ದಾಗ ಅವಳ ಮೇಲೆ ಹಾದರದ ಆರೋಪವನ್ನು ಮಾಡುತ್ತಾನೆ. ಆದ್ದರಿಂದ ಕುದಿಯುವ ಎಣ್ಣೆಯಲ್ಲಿ ಮುಳುಗಿ, ಜೀವಂತ ಸರ್ಪವನ್ನು ಕೈಯಲ್ಲಿ ಹಿಡಿದು ಸತ್ಯಪ್ರಮಾಣ ಮಾಡಬೇಕಾಗಿ ಬಂದು ಅದರಲ್ಲಿ ಮರಣವನ್ನಪ್ಪಿರಬಹುದು ಅಥವಾ ತನ್ನ ಮೇಲೆ ಬಂದ ಆರೋಪದಿಂದಾಗಿ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬಹುದು’ ಎಂದು ಹೇಳಬಹುದು.

© ಡಾ.ಲಕ್ಷ್ಮೀ ಜಿ‌ ಪ್ರಸಾದ್

ನಾಗಸಿರಿ ಕನ್ಯಗೆ ಪಾಡ್ದನಕ್ಕೆ ಪಾಠಾಂತರಗಳು ಪ್ರಚಲಿತವಿದ್ದು ಒಂದು ಪಾಠದಲ್ಲಿ ನಾಗಸಿರಿ ಕನ್ಯಗೆಗೆ ತೊಂದರೆ ಕೊಟ್ಟಾತನನ್ನು ಅಣ್ಣ ಸೂರ್ಯ ಭಾರೀ ನಾಗರಾಜ ದೇವರೆಂದು ಹೇಳಿದೆ. ನಾಗಸಿರಿಯ ಮರಣಾನಂತರ ಕೂಡ ಆಕೆಯ ಶವಕ್ಕೆ ಸರಿಯಾದ ಸಂಸ್ಕಾರ ಮಾಡದಂತೆ ಅಣ್ಣ ಭಾರೀ ಸೂರ್ಯ ನಾಗರಾಜ ದೇವರು ತಡೆಯುತ್ತಾನೆ. ಆಗ ನಾಗಸಿರಿಯು ಅವಳ ತಂಗಿ ರೂಪ ಧರಿಸಿ ಸಂಸ್ಕಾರವನ್ನು ಮಾಡುವಂತೆ ಮಾಡಿ ಬೊಜ್ಜದಂದು ಅಣ್ಣ ನಾಗರಾಜನಿಗೆ ಉಪಾಯವಾಗಿ ಕಂದಡಿ ಹಾವಿನ ವಿಷ ಉಣಬಡಿಸಿ ಆತನನ್ನು ಕೊಂದು ದ್ವೇಷ ತೀರಿಸಿಕೊಳ್ಳುತ್ತಾಳೆ.




7 . ಅಬ್ಬಿನ ಬಂಗಾರು


ಎದ್ದಾಡಿ ಎಣ್ಮೆದಡಿ ಬೀಡಿನಲ್ಲಿ ಎಮ್ಮೆ ಮೇಯಿಸಿಕೊಂಡು, ಎಳ್ಳಿನ ಗದ್ದೆಯನ್ನು ಕಾಯುವ ಹುಡುಗಿ ಅಬ್ಬಿನ ಬಂಗಾರಿ. ಬಲು ಧೈರ್ಯಸ್ಥೆ, ಚತುರಮತಿ ಹುಡುಗಿ. ಕುದುರೆಯ ಮೇಲೆ ಸವಾರಿ ಮಾಡುತ್ತ ಎಳ್ಳಿನ ಗದ್ದೆಯನ್ನು ಹಾಳು ಮಾಡಿದ ಕುಂದಯ ನಂದಾರನನ್ನು ಜೋರು ಮಾಡುತ್ತಾಳೆ. ಆಗ ಏಳೆಲೆ ಕೂಡ ಮೂಡದ ಎಳ್ಳಿನ ಸಸಿಯಲ್ಲಿ ಎಣ್ಣೆ ಎಲ್ಲಿದೆ? ಎಂದು ಇವಳನ್ನು ಕೇಳುತ್ತಾನೆ. ಆಗ “ಏಳೆಲೆ ಮೂಡಿದ ಎಳ್ಳಿನ ಸಸಿಯಲ್ಲಿ ಬೇರಿನಲ್ಲಿ ಎಣ್ಣೆ ಇದೆ” ಎಂದು ಉತ್ತರಿಸುವ ಅಬ್ಬಿನ ಬಂಗಾರು ‘ನಿನ್ನ ತಾಯಿ ಮದುಮಗಳಾದಾಗ ನೀನೆಲ್ಲಿದ್ದೆ? ಎಂದು ಪ್ರತಿ ಪ್ರಶ್ನೆಯನ್ನು ಹಾಕುತ್ತಾಳೆ. ಉತ್ತರ ತಿಳಿಯದೆ ಮಂಕಾಗಿ ತನ್ನ ತಂದೆಯಲ್ಲಿ ಕೇಳಿದಾಗ, ಕುಂದಯ ನಂದಾರನ ತಂದೆ ನಂದಾರ ಅರಸರಿಗೂ ಗೊತ್ತಿರಲಿಲ್ಲ. ಕೊನೆಗೆ ಹೇಳಿ ‘ನಿನ್ನನ್ನು ನಾನು ಮದುವೆಯಾದರೆ ಏನು ಮಾಡುತ್ತಿ?’ ಎಂದು ಕೇಳುತ್ತಾನೆ. ಆಗ ಅವಳ ತುಸು ಕೂಡ ಅಳುಕದೆ ‘ಮೂರು ವರ್ಷದೊಳಗೆ ಮೂರು ಮಕ್ಕಳನ್ನು ಹೆತ್ತು ಆಡಿಸುತ್ತೇನೆ’ ಎಂದುತ್ತರಿಸುತ್ತಾಳೆ. ಇಷ್ಟು ಪೊಗರಿರುವ ಹುಡುಗಿಯ ಮಾತನ್ನು ಸುಳ್ಳು ಮಾಡಿ, ಅವಳನ್ನು ಸೋಲಿಸುವುದಕ್ಕಾಗಿಯೇ ಆಖೆಯನ್ನು ಮದುವೆಯಾಗುತ್ತಾನೆ ಕುಂದಯ ಹೊರಬಾರದಂತೆ ವ್ಯವಸ್ಥೆ ಮಾಡಿ, ಕಾಳಗಕ್ಕೆಂದು ಹೊರ ರಾಜ್ಯಕ್ಕೆ ಹೋಗುತ್ತಾನೆ. ಅಬ್ಬಿನ ಬಂಗಾರು ಹೆಗ್ಗಣದ ಸಹಾಯದಿಂದ ತೂತು ಕೊರೆದು ಹೊರಬಂದು ಹೂಮಾರುವ ಹೆಣ್ಣಿನ ವೇಷದಿಂದ ಬಂದು, ವಯ್ಯಾರ ಮಾಡಿ ಕುಂದಯ ನಂದಾರನನ್ನು ತನ್ನ ತೆಕ್ಕೆಗೆ ಸೆಳೆದುಕೊಂಡು, ಅವನೊಂದಿಗೆ ಮೂರು ವರ್ಷ ಕಳೆಯುತ್ತಾಳೆ. ಒಂದು ಹೆಣ್ಣು ಹಾಗೂ ಎರಡು ಅವಳಿ ಗಂಡು ಮಕ್ಕಳಿಗೆ ಜನ್ಮವೀಯುತ್ತಾಳೆ. ಇಷ್ಟಾದರೂ ತಾನು ಅಬ್ಬಿನ ಬಂಗಾರು ಎಂದು ಗೊತ್ತಾಗದಂತೆ ಜಾಗ್ರತೆ ವಹಿಸುತ್ತಾಲೆ. ಮೂರು ವರ್ಷದ ಗಡು ಮುಗಿಯುತ್ತಾ ಬರಲು ಕುಂದಯ ನಂದಾರನ ಮುದ್ರೆ ಉಂಗುರ, ಬಂಗಾರಿನ ನೇಗಿಲು, ಬೆಳ್ಳಿಯ ಸುಣ್ಣದ ಅಂಡೆಗಳನ್ನು ಉಪಾಯವಾಗಿ ಕೇಳಿ ಪಡೆದುಕೊಂಡು ಬಂದು, ನೆಲಮಾಳಿಗೆಯನ್ನು ಸೇರುತ್ತಾಳೆ

© ಡಾ.ಲಕ್ಷ್ಮೀ ಜಿ ಪ್ರಸಾದ್. ತನ್ನ ಮಾರು ವೇಷ ಕಳಚಿ ನಿಜರೂಪದಿಂದ ಮಕ್ಕಳನ್ನು ಆಟವಾಡಿಸುತ್ತಿರುತ್ತಾಳೆ. ಮೂರ ವರ್ಷ ಕಳೆದು ‘ಅಬ್ಬಿನ ಬಂಗಾರನ್ನು ಸೋಲಿಸಿದ್ದೇನೆ’ ಎಂದು ಗರ್ವದಿಂದ ಕುಂದಯ ನಂದಾರ ನೆಲಮಾಳಿಗೆಯ ಬಾಗಿಲು ತೆರೆದು ಒಳಗೆ ಬಂದರೆ ಅಲ್ಲಿ ಅಬ್ಬಿನ ಬಂಗಾರು ತನ್ನ ಮೂರು ಮಕ್ಕಳೊಂದಿಗೆ ಆಡುತ್ತಿರುತ್ತಾಳೆ. ಮಡದಿಯ ಜಾಣ್ಮೆಯನ್ನು ಮೆಚ್ಚಿ ಮಡದಿ ಮಕ್ಕಳೊಂದಿಗೆ ಬಾಳುತ್ತಾನೆ ಕುಂದಯ ನಂದಾರ. ಅವರಿಗೆ ಹುಟ್ಟಿದ ಅವಳಿ ಗಂಡು ಮಕ್ಕಳೇ ಮುಂದೆ ಕಾಂತಾಬಾರೆ ಬೂದಾ ಬಾರೆಯರೆಂಬ ಪ್ರಸಿದ್ಧ ವೀರರಾಗುತ್ತಾರೆ.© ಡಾ‌.ಲಕ್ಷ್ಮೀ ಜಿ ಪ್ರಸಾದ್


ಹೆಣ್ಣೊಬ್ಬಳ ಜಾಣ್ಮೆಯನ್ನು ಕುರಿತು ಕಟ್ಟಲ್ಪಟ್ಟ ಪಾಡ್ದನವಿದು. ಹೆಣ್ಣನ್ನು ಹೇಗಾದರೂ ಸೋಲಿಸಬೇಕೆಂಬ ಗಂಡಿನ ಪ್ರವೃತ್ತಿ ಈ ಪಾಡ್ದನದಲ್ಲಿ ಕಾಣಿಸಿಕೊಂಡಿದೆ.© ಡಾ.ಲಕ್ಷ್ಮೀ ಜಿ ಪ್ರಸಾದ್








8. ಬಾಲೆ ರಂಗಮೆ


ಮೇದಾರನ ತಂಗಿ ರಂಗಮೆ. ಕದ್ರಿ ಕೋಳ್ಯೂರು ದೇವಾಲಯಗಳಿಗೆ ಹರಿಕೆ ಸಲ್ಲಿಸಲು ರಂಗಮೆ ಹೋಗುವಾಗ ದಾರಿಯಲ್ಲಿ ಸಿಕ್ಕ ಬೈರರ ಕೇರಿಯ ಭೈರವರಸ ಆಕೆಯನ್ನು ಮೋಹಿಸಿ ಮದುವೆಯಾಗು ಎಂದು ಪೀಡಿಸುತ್ತಾನೆ. ಆಗ ಹರಿಕೆ ಕೊಟ್ಟು ಹಿಂದೆ ಬರುವಾಗ ನಾನು ಇದೇ ದಾರಿಯಲ್ಲಿ ಬರುತ್ತೇನೆ, ಮದುವೆಯಾಗುವುದಾದರೆ ನನ್ನ ಅಣ್ಣನಲ್ಲಿ ಬಂದು ಕೇಳು ಎಂದು ಹೇಳಿ ತಪ್ಪಿಸಿಕೊಳ್ಳುತ್ತಾಳೆ. ಮುಂದೆ ಭೇಟಿಯಾಗುವ ಕದ್ರಿಯ ಅರಸ ಹೇಳಿದಂತೆ ಹಿಂದೆ ಬರುವಾಗ ಬೇರೆ ದಾರಿಯಲ್ಲಿ ಬರುತ್ತಾಳೆ.© ಡಾ.ಲಕ್ಷ್ಮೀ ಜಿ ಪ್ರಸಾದ್


ಅವಳು ಬರುವುದನ್ನು ಕಾದು ಕುಳಿತ ಭೈರವರಸ ಅವಳು ಬಾರದಿದ್ದಾಗ, ಅವಳ ಅಣ್ಣನನ್ನು ಬರ ಹೇಳಿ ‘ರಂಗಮೆಯನ್ನು ಮದುವೆ ಮಾಡಿಕೊಡು’ ಎಂದು ಹೇಳುತ್ತಾನೆ. ಮೇದಾರ ಅದಕ್ಕೆ “ಕೆಳಜಾತಿಯ ಭೈರವ ಕೇರಿಯ ಭೈರವರಸನಿಗೆ ಹೆಣ್ಣು ಕೊಡಲಾರೆ” ಎಂದುತ್ತರಿಸುತ್ತಾನೆ. ಆಗ ಮುಳ್ಳಿನ ಮಂಚಕ್ಕೆ ಕಟ್ಟಿ, ಉರಿ ಮೂಡೆ ಹಾಕಿ ಹಿಂಸಿಸುತ್ತಾನೆ ಭೈರವರಸ. ಕೊನೆಗೆ ಹಿಂಸೆ ತಾಳಲಾರದೆ ತಂಗಿಯನ್ನು ಕೊಡುತ್ತೇನೆ ಎಂದು ಒಪ್ಪಿಕೊಳ್ಳುತ್ತಾನೆ.


ರಂಗಮೆ ಭೈರವರಸನ ಕೈಯಿಂದ ಪಾರಾಗಲು ಉಪಾಯವೊಂದನ್ನು ಹೂಡುತ್ತಾಳೆ. ಭೈರವರಸನ ದಿಬ್ಬಣ ಬಂದಾಗ ‘ತನಗೆ ತೀವ್ರ ಹೊಟ್ಟೆನೋವು ಮಾಳಿಗೆಯಿಂದ ಕೆಳಗೆ ಇಳಿದು ಬರಲಾರೆ ಆದ್ದರಿಂದ ದಂಡಿಗೆಯ ಕೊಂಬಿಗೆ ಧಾರೆ ಎರೆಯಿರಿ’ ಎಂದು ಹೇಳುತ್ತಾಳೆ. ಅಂತೆಯೇ ದಂಡಿಗೆಯ ಕೊಂಬಿಗೆ ಧಾರೆ ಎರೆದು ಮದುವೆಯ ಶಾಸ್ತ್ರ ಮುಗಿಸುತ್ತಾರೆ. ದಿಬ್ಬಣದೊಂದಿಗೆ ಹಿಂದಿರುಗುತ್ತಾರೆ. ಮರುದಿನವೇ ತಂಗಿಯನ್ನು ಕರೆದೊಯ್ಯುವಂತೆ ಮೇದಾರ ಭೈರವರಸನಿಗೆ ಓಲೆ ಕಳುಹಿಸುತ್ತಾನೆ. ಮಡದಿಯನ್ನು ಕರೆದೊಯ್ಯಲೆಂದು ಬಂದಾಗ ಅಲ್ಲೊಂದು ಕಾಷ್ಠ ಉರಿಯುತ್ತಾ ಇರುತ್ತದೆ. ‘ರಂಗಮೆ ಹೊಟ್ಟೆ ನೋವಿನಿಂದ ಸತ್ತಿದ್ದಾಳೆ’ ಎಂದು ಅಲ್ಲಿದ್ದ ಜನರು ಹೇಳುತ್ತಾರೆ. ಆಗ ರಂಗಮೆಯ ಮೇಲಿನ ವ್ಯಾಮೋಹದಿಂದ ಬುದ್ಧಿಶೂನ್ಯನಾದ ಭೈರವರಸ ಅದೇ ಚಿತೆಗೆ ಹಾರಿ ಸಾಯುತ್ತಾನೆ. ರಂಗಮೆ ಸತ್ತಿರುವುದಿಲ್ಲ. ಹೆಣ್ಣುನಾಯಿಯ ಶವವನ್ನಿಟ್ಟು ಕಾಷ್ಠ ಉರಿಸಿರುತ್ತಾರೆ. ಭೈರವರಸ ಸತ್ತ ನಂತರ ರಂಗಮೆ ಕದ್ರಿಯ ಅರಸನನ್ನು ಮದುವೆಯಾಗುತ್ತಾಳೆ.© ಡಾ.ಲಕ್ಷ್ಮೀ ಜಿ ಪ್ರಸಾದ್


ಹೆಣ್ಣು ಮಕ್ಕಳಿಗೆ, ಅವರ ಮನೆವರಿಗೆ ಇಷ್ಟವಿಲ್ಲದಿದ್ದರೂ ಕೂಡ ಬಲಿಷ್ಟರು, ಅರಸರುಗಳು ಬಲಾತ್ಕಾರವಾಗಿ ಕೊಂಡೊಯ್ದು ಮದುವೆಯಾಗುತ್ತಿದ್ದುದರ ಕುರಿತು ಈ ಪಾಡ್ದನವು ತಿಳಿಸುತ್ತದೆ. ಇಲ್ಲಿ ರಂಗಮೆಯ ಜಾಣ್ಮೆಯಿಂದಾಗಿ ಭೈರವರಸ ಸತ್ತು ಹೋಗುತ್ತಾನೆ. ರಂಗಮೆ ತಾನಿಷ್ಟ ಪಟ್ಟ ಕದ್ರಿಯ ಅರಸನನ್ನು ವಿವಾಹವಾಗುತ್ತಾಳೆ. ಇದೇ ಆಶಯವಿರುವ ಇನ್ನೊಂದು ಪಾಡ್ದನವನ್ನು ಡಾ. ಕಮಲಾಕ್ಷ ಅವರು ಸಂಗ್ರಹಿಸಿದ್ದು, ಅದರಲ್ಲಿ ಕಥಾನಯಕಿಯನ್ನು ದೈಯಕ್ಕು ಎಂದು ಹೇಳಿದ್ದು, ಈಕೆ ಎಣ್ಮೂರು ಗುತ್ತಿನ ದಾರಾಮು ಪೊಣ್ಣೋವಿನ ಮಗಳೆಂದು ಹೇಳಲಾಗಿದೆ. ಬಂಟ್ವಾಳ ಪೇಟೆಗೆ ಹೋಗಿಬರುವಾಗ ಬೈಲೂರ ಬಂಗ ತೊಂದರೆ ಕೊಡುತ್ತಾನೆ. ದೈಯಕ್ಕುವನ್ನು ಮದುವೆ ಮಾಡಿ ಕೊಡು ಎಂದು ದಾರಾಮುವಿನಲ್ಲಿ ಕೇಳುತ್ತಾನೆ. ಆಗ ದಾರಾಮು “ಆಸ್ತಿಯಲ್ಲಿ ನೀನು ಮೇಲಿದ್ದರೂ ಜಾತಿಯಲ್ಲಿ ನೀನು ಕೀಳು ನೀನು ಭೈರ, ಆದ್ದರಿಂದ ಹೆಣ್ಣು ಕೊಡಲಾರೆ” ಎನ್ನುತ್ತಾಳೆ. ಆಗ ಆಕೆಯನ್ನು ನಾನಾ ವಿಧವಾಗಿ ಹಿಂಸಿಸುತ್ತಾನೆ ಭೈರವರಸ. ಕೊನೆಗೆ ದೈಯಕ್ಕು ಅವನಿಗೆ ಯುದ್ಧಾಹ್ವಾನ ನೀಡುತ್ತಾಳೆ. ಸ್ವತಃ ಕತ್ತಿ ಹಿಡಿದು ಯುದ್ಧ ಮಾಡಿ ಆತನನ್ನು ಕೊಲ್ಲುತ್ತಾಳೆ ದೈಯಕ್ಕು.


ಇದೇ ಆಶಯವಿರುವ ಇನ್ನೊಂದು ಪಾಡ್ದನವನ್ನು ಶ್ರೀ ರಾಮನಾಯ್ಕ ಸಂಗ್ರಹಿಸಿದ್ದಾರೆ. ಈ ಪಾಡ್ದನದಲ್ಲಿ ದೈಯಕ್ಕು ಮಗಳಿಗೆ ಮದುವೆಯಾಗೆಂದು ಕಾಡುವವನು ಚಿಪ್ಪೋಲಿ ಬಂಗ. ಅವಳ ಸೋದರ ಮಾವನನ್ನು ಕಟ್ಟಿ ಹಾಕಿ ಕೊಡಬಾರದ ಕಷ್ಟ ಕೊಡುತ್ತಾನೆ. ಮಾವನ ಕಷ್ಟ ನೋಡಲಾರದೆ ಮದುವೆಗೆ ಒಪ್ಪಿಗೆಕೊಡುತ್ತಾಲೆ ದೈಯಕ್ಕು ಮಗಳು. ಮದುವೆಯ ಸಂದರ್ಭದಲ್ಲಿ ಧಾರೆ ಆಗುವ ಹೊತ್ತಿಗೆ ತಾನು ತಂದಿದ್ದ ಕತ್ತಿಯಿಂದ ಚಿಪ್ಪೋಲಿ ಬಂಗನ ಕೈಯನ್ನು ದೈಯಕ್ಕು ಮಗಳು ಕತ್ತರಿಸುತ್ತಾಳೆ.


ಈ ಮೂರು ಕೂಡ ಒಂದೇ ಆಶಯವನ್ನು ಹೊಂದಿದ್ದು ಒಂದೇ ಪಾಡ್ದನದ ಭಿನ್ನ ಭಿನ್ನ ಪಾಠಗಳಂತೆ ಕಾಣಿಸುತ್ತವೆ. ಮದುವೆಯಾಗೆಂದು ಕಾಡಿ ಬಲಾತ್ಕರಿಸಿದ ರಾಜನೊಬ್ಬನನ್ನು ಹೆಣ್ಣು ಮಗಳೊಬ್ಬಳು ಎದುರಿಸಿ ಉಪಾಯವಾಗಿ ಆತನನ್ನು ಕೊಂದ ಘಟನೆ ಎಲ್ಲೋ ನಡೆದಿದ್ದು, ಅದನ್ನು ಕೇಂದ್ರವಾಗಿಸಿ ಈ ಪಾಡ್ದನಗಳು ಕಟ್ಟಲ್ಪಟ್ಟಿವೆ. ಬೀರುಕಲ್ಕುಡನ ಕೈಕಾಲುಗಳನ್ನು ಕಡಿಸಿದ ಭೈರವರಸನ ಕ್ರೌರ್ಯ ತುಳುನಾಡಿನಲ್ಲಿ ಜನರಿಗೆ ತಿಳಿದಿರುವ ವಿಚಾರವೇ ಆಗಿದೆ. ಆದ್ದರಿಂದಲೇ ಏನೋ ಕಾಟ ಕೊಟ್ಟು ಸಾವಿಗೀಡಾದ ವ್ಯಕ್ತಿಯನ್ನು ಈ ಪಾಡ್ದಗಳಲ್ಲಿ ಭೈರವರಸ ಎಂದೇ ಹೇಳಲಾಗಿದೆ. ಬೀರು ಕಲ್ಕುಡನಿಗೆ ಕಾರ್ಕಳದ ಭೈರವರಸ ಮಾಡಿದ ಅನ್ಯಾಯವನ್ನು ತುಳುವ ಜನಪದರು ಎಂದಿಗೂ ಕ್ಷಮಿಸುವುದಿಲ್ಲ. ಆದ್ದರಿಂದಲೇ ಪಾಡ್ದನಗಾರರು ಪಾಡ್ದನಗಳಲ್ಲಿ ಕೆಟ್ಟ ವ್ಯಕ್ತಿಯೊಂದಿಗೆ ಭೈರವರಸವನ್ನು ಸಮೀಕರಿಸಿದ್ದಾರೆ ಎಂದು ಡಾ|| ಅಮೃತ ಸೋಮೇಶ್ವರ ಅಭಿಪ್ರಾಯ ಪಟ್ಟಿದ್ದಾರೆ. ಪ್ರಸ್ತುತ ಪಾಡ್ದನದಲ್ಲಿ ಭೈರವರಸ ಸ್ತ್ರೀ ಲೋಲುಪನಂತೆ, ಕ್ರೂರಿಯಂತೆ ಚಿತ್ರಿಸಲ್ಪಟ್ಟಿದ್ದಾನೆ. ಅವನನ್ನು ಉಪಾಯದಿಂದ ಸಾಯುವಂತೆ ಮಾಡುವ ರಂಗಮೆ ಮೆಚ್ಚುಗೆಗೆ ಪಾತ್ರವಾಗುತ್ತಾಳೆ.




9 ಬಾಲೆ ಪದ್ಮಕ್ಕೆ


ಕನರಾಯ ಬೀಡಿನ ಬಂಗೇರರ ಮಡದಿ ಬಾಲೆ ಪದ್ಮಕ್ಕೆ ಚೊಚ್ಚಲ ಬಸುರಿಯಾಗಿದ್ದಾಗ ಬಂಗೇರರಿಗೆ ಕಾಳಗವೊಮದು ಒದಗಿ ಬರುತ್ತದೆ. ಅವನು ದಂಡಿಗೆ ಹೋಗಲು ಹೊರಟು ನಿಂತಾಗ ತಾನು ಕೂಡ ಬರುತ್ತೇನೆ ಎಂದು ಹಠಮಾಡಿ ಅವನ ಜೊತೆಗೆ ದಂಡಿಗೆ ಮಡದಿ ಬಾಲೆ ಪದ್ಮಕ್ಕೆ ಬರುತ್ತಾಳೆ. ಅವರು ಹೊರಡುವಾಗ ಕನರಾಯ ಬಂಗೇರರ ತಾಯಿ ದೈವಗಳಲ್ಲಿ “ಇಬ್ಬರು ಹೋಗಿ ಮೂವರಾಗಿ ಬರುವಂತೆ ಅನುಗ್ರಹಿಸುವಂತೆ” ಬೇಡುತ್ತಾರೆ.


ಮುಂದೆ ದಾರಿ ಮಧ್ಯದಲ್ಲಿ ಬಾಲೆ ಪದ್ಮಕ್ಕೆಗೆ ಪ್ರಸವ ವೇದನೆ ಕಾಣಿಸಿಕೊಳ್ಳುತ್ತದೆ. ಕಾಡಿನ ನಡುವೆ ಇರುವ ಅರಮನೆಯ ಒಡತಿ ಅವಳನ್ನು ಆರೈಕೆ ಮಾಡುತ್ತಾಳೆ. ಬಾಲೆ ಪದ್ಮಕ್ಕೆ ಅವಳಿ ಗಂಡು ಮಕ್ಕಳಿಗೆ ಜನ್ಮವೀಯುತ್ತಾಳೆ. ಕನರಾಯ ಬಂಗೇರ ಹೆಂಡತಿ ಮತ್ತು ಮಕ್ಕಳನ್ನು ಅಲ್ಲಿಯೇ ಬಿಟ್ಟು ಕಾಳಗಕ್ಕೆ ಹೋಗುತ್ತಾನೆ. ಏಳೆಂಟು ವರ್ಷ ಕಳದು ಯುದ್ಧವನ್ನು ಗೆದ್ದು ಹಿಂದೆ ಬರುವಾಗ ಮಡದಿ ಮಕ್ಕಳನ್ನು ಕರೆತರಲು ಹೋಗುತ್ತಾರೆ. ಅವರ ಮಡದಿ ಮಕ್ಕಳಿಗೆ ಏಳು ವರ್ಷವಾದಾಗ ತೆಂಗಿನ ಗರಿ ತಲೆಗೆ ಬಿದ್ದು ಮರಣವನ್ನಪ್ಪಿರುತ್ತಾರೆ. ಇಬ್ಬರು ಮಕ್ಕಳೊಂದಿಗೆ ಕನರಾಯ ಬಂಗೇರರು ಬೀಡಿಗೆ ಬರುತ್ತಾರೆ.


ಅವರ ತಾಯಿ ದೈವದಲ್ಲಿ ಅರಿಕೆ ಮಾಡಿದ್ದಂತೆ ಇಬ್ಬರು ಹೋಗಿ ಮೂವರಾಗಿ ಬಂದಿರುತ್ತಾರೆ. ಮಡದಿ ಬಾಲೆ ಪದ್ಮಕ್ಕೆ ಅವಳಿ ಮಕ್ಕಳನ್ನು ಹೆತ್ತ ಕಾರಣ ಕನರಾಯ ಬಂಗೇರ ಸೇರಿ ಅವರು ನಾಲ್ವರಾಗುತ್ತಾರೆ. ಆದರೆ ದೈವದ ಎದುರು ಅರಿಕೆ ಮಾಡಿದ್ದು ‘ಇಬ್ಬರು ಹೋಗಿ ಮೂವರು ಬರಲೆಂದು’, ಆದ್ದರಿಂದ ಬಾಲೆ ಪದ್ಮಕ್ಕೆ ಸಾಯುತ್ತಾಳೆ ಎಂಬ ಆಶಯ ಇಲ್ಲಿದೆ.


 


 10 ಬಾಲೆ ಜೇವು ಮಾಣಿಗ


ಆಟದಲ್ಲಿ ಕೂಡ ಸೋಲೊಪ್ಪಿಕೊಳ್ಳದ ಗಂಡಿನ ಅಹಮಿಕೆಯ ಕಾರಣದಿಂದ ದುರಂತವನ್ನಪ್ಪಿದ ಹೆಣ್ಣು ಮಗಳೊಬ್ಬಳ ಕುರಿತಾದ ಕಥಾನಕವಿದು. ಬಾಲೆಜೇವು ಮಾಣಿಗ ತುಸು ಮೇಲರಿಮೆ ಇರುವ ಹೆಣ್ಣು ಮಗಳು. ಅವಳ ಗಂಡ ಪರಿಮಾಳೆ ಬಲ್ಲಾಳ ದಬ್ಬಾಳಿಕೆ ಸ್ವಭಾವದವನು. ಪರಿಮಾಳೆ ಬಲ್ಲಾಳ ಮತ್ತು ಬಾಲೆಜೇವು ಮಾಣಿಗ ಚೆನ್ನಮಣೆ ಆಡುತ್ತಾರೆ. ಬಾಲೆ ಜೇವು ಮಾಣಿಗ ಸತತವಾಗಿ ಮೂರು ಆಟಗಳನ್ನು ಗೆಲ್ಲುತ್ತಾಳೆ. ಆಗ ಬಲ್ಲಾಳ ‘ಬಾಯಾರಿಕೆಯಾಗುತ್ತದೆ ನೀರು ತಾ’ ಎನ್ನುತ್ತಾನೆ. ಆಗ ಅವಳು ‘ನಾನು ಒಳಗೆ ಹೋದರೆ ಮಣೆ ತಿರುಗಿಸಿ ಆಟ ಕೆಡಿಸುತ್ತೀರಿ ನೀವು’ ಎಂದು ಹೇಳುತ್ತಾಳೆ. ಆಗ ಬಲ್ಲಾಳ ಇಲ್ಲ ನಾನು ಹಾಗೆ ಮಾಡುವುದಿಲ್ಲ ಎಂದು ಹೇಳಿದರೂ ಅವಳು ಒಳಗೆ ಹೋದಾಗ ಚೆನ್ನಮಣೆಯನ್ನು ತಿರುಗಿಸಿ ಇಟ್ಟು ಮೋಸ ಮಾಡುತ್ತಾನೆ.


ಆಟದಲ್ಲಿ ಕೂಡ ಪ್ರಾಮಾಣಿಕಕತೆಯಿಲ್ಲದೆ ಮೋಸ ಮಾಡಿದ ಗಂಡನ ಕುರಿತು ಅವಳಿಗೆ ಅಸಾಧ್ಯ ಸಿಟ್ಟು ಬರುತ್ತದೆ. ಅವಳು ಚಿನ್ನೆ ಮಣೆಗೆ ತುಳಿದು ಅದನ್ನು ಕವುಚಿ ಹಾಕುತ್ತಾಳೆ. ಆಗ ಪರಿಮಾಳೆ ಬಲ್ಲಾಳ ಚೆನ್ನೆ ಮಣೆಯನ್ನೆತ್ತಿ ಬಾಲೆಜೇವು ಮಾಣಿಗಳ ತಲೆಗೆ ಹೊಡೆದು ಅವಳನ್ನು ಸಾಯಿಸುತ್ತಾನೆ.


ಈ ಪಾಡ್ದನದ ಅನೇಕ ಪಾಠಾಂತರಗಳು ಪ್ರಚಲಿತವಿವೆ. ಅವುಗಳಲ್ಲಿ ಬಲ್ಲಾಳ ಮಾಣಿಗಳಿಗೆ ಹೊಡೆದು ಬಡಿದು ಮಾಡುತ್ತನಾದರೂ ಅವಳ ಸಾವು ಜುಮಾದಿಯ ಆಗ್ರದಿಂದಾಗುತ್ತದೆ ಎಂದು ಹೇಳಲಾಗಿದೆ. ಪ್ರಸ್ತುತ ಸಂಪುಟದಲ್ಲಿರುವ ಬಾಲೆಜೇವು ಪಾಡ್ದನದಲ್ಲಿ ಬಾಲೆಜೇವು ಮಾಣಿಗಳ ಸಾವಿಗೆ ಬಲ್ಲಾಲನ ದುಡುಕು ಪ್ರವೃತ್ತಿ ಆಟದಲ್ಲಿ ಕೂಡ ಸೋಲೊಪ್ಪಿಕೊಳ್ಳದ ಅಹಮಿಕೆ, ಹೆಂಡತಿಯ ಮೇಲೆ ಕೈ ಮಾಡುವ ಕ್ರೌರ್ಯವೇ ಕಾರಣವಾಗಿದೆ. ಯಾವುದೇ ಅಲೌಕಿಕ ಶಕ್ತಿಯ ಉಲ್ಲೇಖ ಈ ಪಾಡ್ದನದಲ್ಲಿ ಇಲ್ಲ. ಆದ್ದರಿಂದ ಇದು ವಾಸ್ತವಕ್ಕೆ ಸಮೀಪವಾಗೆದೆ ಎಂದು ಹೇಳಬಹುದು.




 ಶ್ರೀಮತಿ ಶಾರದಾ ಜಿ. ಬಂಗೇರರÀ ಕವಿತೆಗಳು


ಇವರ ಕವಿತೆಗಳು ಸರಳವಾದುದು ,ಸುಶ್ರಾವ್ಯವಾಗಿ ಹಾಡಲು ಸೂಕ್ತವಾದವುಗಳು.ತುಳು ಜನಪದ ಕವಯಿತ್ರಿಯರು  ಕಂಡ ಪ್ರಕೃತಿ ಗಿಡ ಮರ ಹೂ ಹಣ್ಣು, ಆಭರಣಗಳು ,ಮನೆಗೆ ಬೇಕಾದ ಅಡುಗೆ ವಸ್ತುಗಳು ಮೊದಲಾದವುಗಳ ಸುತ್ತ ಹೆಣೆದ ಕವಿತೆಗಳು ಇವು .ನವುರು ಪ್ರೇಮವನ್ನು ನಿವೇದಿಸುವ ಕವಿತೆಯೂ ಇದೆ  ಸಂವಾದ ರೂಪದ ಹಾಡುಗಳೂ ಅನೇಕ ಇವೆ .ಇವು ಭಾಷೆ ಬೇರೆ ಬೇರೆಯಾದರೂ ಭಾವ ಒಂದೇ ಎಂಬದನ್ನು ಸಾರುತ್ತವೆ.  






1 ಪುಕ್ಕೇದಿ


ಪುಕ್ಕೇದಿ ಮತ್ತು ಕೋಡಂಗರು ಬಲ್ಲಾಳನ ಮನೆ ಕೆಲಸದ ಆಳುಗಳು. ಪುಕ್ಕೇದಿಯ ಮೇಲೆಮೋಹಗೊಳ್ಳುವ ಬಲ್ಲಾಳ ಪುಕ್ಕೇದಿಗೆ ವಿಷಮಿಶ್ರಿತ ಹುಳಿಯನ್ನು ನೀಡಿ, ಕೆಸುವಿನ ಸೊಪ್ಪು ಕ್ಯೊದುಕೊಂಡು ಹೋಗಿ ಕೋಡಂಗನಿಗೆ ಅಡಿಗೆ ಮಾಡಿ ಬಡಿಸಲು ಹೇಳುತ್ತಾನೆ. ಬಲ್ಲಾಳನ ಹುನ್ನಾರ ತಿಳಿಯದ ಮುಗ್ಧೆ ಪುಕ್ಕೇದಿ ಆ ಹುಳಿಯನ್ನು ಉಪಯೋಗಿಸಿ ಅಡುಗೆ ಮಾಡಿ ಕೋಡಂಗನಿಗೆ ಬಡಿಸುತ್ತಾಳೆ. ಕೋಡಂಗ ಸಾಯುತ್ತಾನೆ. ಇದನ್ನು ಬಲ್ಲಾಳನಿಗೆ ಪುಕ್ಕೇದಿ ತಿಳಿಸಿದಾಗ ಅವಳನ್ನು ಮನೆ ಒಳಗೆ ಬರಲು ಹೇಳುತ್ತಾನೆ ಬಲ್ಲಾಳ. ಆಗ ಅದು ಬಲ್ಲಾಳ ಮಾಡಿದಕೃತ್ಯ ಎಂದುತಿಳಿಯುವ ಪುಕ್ಕೇದಿ ಪರತಿ ಮಂಗಣೆಯಂತೆಯೇ ಸಮಯ ಪ್ರಜ್ಞೆ ಮರೆದು ಬಲ್ಲಾಳನ ಸಮಸ್ತ ಸಂಪತ್ತನ್ನು ಕೋಡಂಗನ ಚಿತೆಗೆ ಹಾಕಿಸಿ, ಕೊನೆಗೆ ತಾನು ಕೂಡ ಕಾಷ್ಯಕ್ಕೆ ಸಾಯುವುದರ ಮೂಲಕ ಬಲ್ಲಾಳನ ಮೇಲೆ ಪ್ರತಿಕಾರ ಮಾಡುತ್ತಾಳೆ.


2 ರಾಮಚಂದಿರ ಮರಲ ನಿಮ್ರ್ಯಾರೇ


ದಾಸವರೇಣ್ಯರು ಬಾಲಕೃಷ್ಣನ ಬಾಲಲೀಲೆಗಳನ್ನು ನಾನಾ ವಿಧವಾಗಿ ವರ್ಣಿಸಿ ಸ್ತುತಿಸಿ ಧನ್ಯತೆಯನ್ನು ಪಡೆದಿದ್ದಾರೆ. ಕೃಷ್ಣನ ತುಂಟಾಟಗಳನ್ನು ವರ್ಣಿಸುತ್ತಾ ಆ ಕುರಿತು ಗೋಪಮ್ಮನಿಗೆ ದೂರು ಹೇಳಿದ ಗೊಲ್ಲರ ಹುಡುಗಿಯರಿಗೆ ಒಡೆದ ಬಳೆಯ ಬದಲಿಗೆ ಹೊಸ ಬಳೆಯನ್ನು,ಹರಿದ ಸೀರೆಯ ಬದಲಿಗೆ ಹೊಸ ಸೀರೆ ಕೊಡುವೆನು ಎಂದು ಗೋಪಮ್ಮ ಹೇಳುವ ವಿಚಾರ ಇಲ್ಲಿ ವಿಶಿಷ್ಟವಾಗಿ ಮೂಡಿ ಬಂದಿದೆ. ಅಂತೆಯೇ ಎಲ್ಲ ತುಂಟಾಟಗಳನ್ನು ಮಾಡಿದ ಕೃಷ್ಣನ ಮೇಲೆ ದೂರು ಹೇಳಲು ಬಂದ ಗೋಪಿಕಾ ಸ್ತ್ರೀಯರು ತೊಟ್ಟಿಲಲ್ಲಿ ಬಗ್ಗಿ ನೋಡುವಾಗ ಬಾಲಕೃಷ್ಣ ನಗುತ್ತಿರುತ್ತಾನೆ ಎಂದಿಲ್ಲಿ ಕವಿತೆಯ ಮೂಲಕ ಬಾಲಕೃಷ್ಣನ ಲೀಲೆಗಳನ್ನು ಜನಪದ ಕವಿಗಳು ವರ್ಣಿಸಿದ್ದಾರೆ.




2 ಬಂಗರಾಳ್ವಾಗ


ನೀರಿಗೆಂದು ಹೋಗುವ ಹೆಣ್ಣು ಮಗಳಿಗೆ ದಾರಿಯಲ್ಲಿ ಕಾಮುಕನೊಬ್ಬ ಸಿಕ್ಕಿತೊಂದರೆ ಕೊಟ್ಟಾಗ, ಆತನಿಗೆರಡೇಟು ಕೊಟ್ಟು ಓಡಿಸುವ ಧೈರ್ಯ ಸಾಹಸವನ್ನು ತೋರುವ ಕಥಾನಕ ಬಂಗರಾಳ್ವಾಗ ಎಂಬ ಸಣ್ಣ ತುಳು ಕವಿತೆಯಲ್ಲಿದೆ.


``ಬಂಗರಾಳ್ವಾಗ’’ ಎಂಬ ಧೈರ್ಯಸ್ಥ ಹುಡುಗಿ ನೀರು ತರಲೆಂದು ಹೋಗುತ್ತಾಳೆ. ದಾರಿಯಲ್ಲಿ ಒಂದು ಬೇಲಿಯ ದ್ವಾರದಲ್ಲಿ ದೇರೆ ಮುಂಡೋರಿ ಎಂಬಾತ ಅಡ್ಡಗಟ್ಟುತ್ತಾನೆ. ಆಗ ಅವಳು `ದಾರಿ ಬಿಡು ತಡಮೆಯನ್ನು ತೊಲಗಿಸು ದೇರೆ ಮುಂಡೋರಿ’ ಎಂದು ಹೇಳುತ್ತಾಳೆ. `ದಾರಿ ಬಿಡಲು ತಡಮೆ ತೆಗೆಯಲು ನಿನ್ನ ಹತ್ತಿರ ಒಂದು ಮಾತನಾಡಬೇಕು’ ಎಂದು ದೇರೆ ಮುಂಡೋರಿ ಹೇಳುತ್ತಾನೆ. ಅವನಿಂದ ಹೇಗೋ ತಪ್ಪಿಸಿಕೊಂಡು ಹೋಗಿ ನೀರು ತರುತ್ತಾಳೆ. ಬಂಗರಾಳ್ವಾಗ ನೀರು ತೆಗೆದುಕೊಂಡು ಹಿಂದೆ ಬರುವಾಗ ಅವನು ಪುನಃ ದಾರಿಗಡ್ಡ ನಿಂತು ನನ್ನನ್ನು ಮದುವೆಯಾಗುತ್ತೀಯಾ? ಎಂದು ಕೇಳುತ್ತಾನೆ. ಆಗಲೂ ಹೇಗೋ ತಪ್ಪಿಸಿಕೊಂಡು ಹೋಗುತ್ತಾಳೆ ಬಂಗರಾಳ್ವಾಗ. ಮರುದಿನ ಅವಳು ನೀರಿಗೆ ಹೋದಾಗ ಪುನಃ ಅದೇ ದೇರೆ ಮುಂಡೋರಿ ದಾರಿಗಡ್ಡ ನಿಂತು `ನಿನ್ನೆ ಹೇಳಿದ ಮಾತಿಗೆ ಉತ್ತರ ಕೊಡು ಬಂಗರಾಳ್ವಾಗ’ ಎಂದು ಹೇಳುತ್ತಾನೆ. ಆಗ ಬಂಗರಾಳ್ವಾಗ `ನಾನೀಗ ಬೊಬ್ಬೆ ಹಾಕುತ್ತೇನೆ’ ಎಂದು ಹೆದರಿಸುತ್ತಾಳೆ. ಆಗಲೂ ದೇರೆ ಮುಂಡೋರಿ ದಾರಿ ಬಿಡುವುದಿಲ್ಲ. ಆಗ ಅವನು ಅವಳ ಕೈ ಹಿಡಿದು ಬಳೆ ಒಡೆದು ಹಾಕುತ್ತಾನೆ. `ನಿನ್ನನ್ನು ಬಿಟ್ಟರೆ ನನಗೆ  ಬೇರೆ ಹೆಣ್ಣು ಸಿಗುವುದಿಲ್ಲ’ ಎಂದುಹೇಳುತ್ತಾನೆ. ಆಗ ಬಂಗರಾಳ್ವಾಗ ಬೊಬ್ಬೆ ಹಾಕುತ್ತಾಳೆ. ಅವಳ ಬೊಬ್ಬೆ ಕೇಳಿ ಊರಿನ ಜನರೆಲ್ಲ ಓಡಿ ಬಂದು ದೇರೆ ಮುಂಡೋರಿಗೆ ಏಟು ಹಾಕಿ ಅವನನ್ನು ಓಡಿಸುತ್ತಾರೆ. ಆದರೆ ಮರುದಿವಸ ಪುನಃ ಅವಳನ್ನು ದಾರಿಯಲ್ಲಿ ಅಡ್ಡಗಟ್ಟಿ ತೊಂದರೆ ಮಾಡುತ್ತಾನೆ. ದೇರೆ ಮುಂಡೋರಿ, ಇನ್ನು ರಕ್ಷಣೆಗಾಗಿ ಬೇರೆಯವರನ್ನು ನಂಬಿ ಪ್ರಯೋಜನವಿಲ್ಲ ಎಂದರಿತ ಬಂಗರಾಳ್ವಾಗ `ದಾರಿ  ಬಿಡು ತಡಮೆ ತೊಲಗಿಸು’ ಎಂದವಳೇ ತಾನು ಹಿಡಿದ ಕೊಡವನ್ನು ಎತ್ತಿ ಅವನ ಮೇಲೆ ಹೊಡೆಯುತ್ತಾಳೆ. ಆಗ ಓಡಿಹೋಗುತ್ತಾನೆ ದೇರೆ ಮುಂಡೋರಿ, `ಊರಿಗೆ ಬಂದ ಮಾರಿ ಅತ್ತ ಹೋಯಿತು’ ಎಂದು ಹೇಳಿ ಬಂಗರಾಳ್ವಾಗ ಮನೆಗೆ ಬರುತ್ತಾಳೆ. ಮುಂದೆಂದೂ ಬೇರೆ ಮುಂಡೋರಿ ಅವಳ ಸುದ್ದಿಗೆ ಬರುವುದಿಲ್ಲ.


ತೊಂದರೆ ಕೊಟ್ಟವನಿಗೆ ಎರಡೇಟು ಕೊಟ್ಟು ಓಡಿಸುವ ಧೈರ್ಯವನ್ನು ತೋರುವ ತುಳು ನಾಡಿನ ಹೆಣ್ಣು ಮಗಳು ಬಂಗರಾಳ್ವಾನ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.


 4ರಾದು


ತುಳುನಾಡು ಹೆಣ್ಣು ಮಕ್ಕಳ ದಿಟ್ಟತನಕ್ಕೆಸಾಕ್ಷಿಯಾಗಿ ನಿಲ್ಲುವ ಪಾತ್ರ ರಾದುವಿನದು. ಶಾರದಾ ಜಿ. ಬಂಗೇರ ನಿರೂಪಿಸಿದ ಚಿಕ್ಕದೊಂದು ತುಳು ಕವಿತೆ ರಾದು.


ಹಾಡಿನಲ್ಲಿ ಹೇಳಿರುವಂತೆ ರಾದು ಬಹಳ ಒಳ್ಳೆಯ ಹೆಣ್ಣು ರಾದು ಅತ್ತೆಗೆ ಮೆಚ್ಚಿನ ಸೊಸೆ ಕೂಡ ನಾವು ಹೋಗುತ್ತೇವೆ’ ಎಂದು ರಾದು ಕೇಳಿದಾಗ ಹಾಗೆ ಯಾಕೆ ಹೇಳುತ್ತಿ ಮಗ ಎಂದುಅತ್ತೇ ಕೇಳುತ್ತಾರೆ. ಆಗ ಅವಳು ``ನಿಮ್ಮ ಮೊಮ್ಮಗ ಅಚ್ಯುತನಿಗೆ ಆಟವಾಡಲೆಂದು ಬುಗುರಿ ತರಲು ಹೋಗುವಾಗ ವಾಸ ಇಲ್ಲದ ಮನೆಯಲ್ಲಿ ನಿಮ್ಮ ಮಗ ಬಂಗೇರ ಮತ್ತು ನಡೆತೆಗೆಟ್ಟ ಹೆಣ್ಣು ಒಟ್ಟಿಗೆ ಇದ್ದರು. ನಾನು ಅಲ್ಲಿಗೆ ಹೋದದಕ್ಕೆ ನಿಮ್ಮ ಮಗ ಕೈಸೋಲುವಷ್ಟು ಹೊಡೆದರು. ಕಾಲು ಸೋಲುವಷ್ಟು ತುಳಿದರು. ಆದ್ದರಿಂದ ನಾನು ಮತ್ತು ಮಗ ಅಚ್ಯುತ ನನ್ನ ತವರಿಗೆ ಹೋಗುತ್ತೇನೆ’ ಎಂದು ಹೇಳುತ್ತಾಳೆ.


ಇಲ್ಲಿ ರಾದುವಿನ ದೃಢನಿರ್ಧಾರ ಪ್ರಕಟವಾಗುತ್ತದೆ. ತವರಿಗೆ ಹೊರಟ ಸೊಸೆಯಲ್ಲಿ ಅತ್ತೆ `ಹಾಗೆ ಹೋದರೆ ರಾದು ನೀನು ಮತ್ತೆ ಯಾವಾಗ ಬರುವೆ?’ ಎಂದು ಕೇಳುತ್ತಾರೆ. ಆಗ `ನಿಮ್ಮ ಮಗ ಸತ್ತಾಗ ಬಾರದಿದ್ದರೆ ಬೊಜ್ಜುಕ್ಕಾದರೂ ಬರುತ್ತೇನೆ’ ಎಂದು ಹೇಳುತ್ತಾರೆ ರಾದು. ಆದರೆ ಆ ಕ್ಷಣಕ್ಕೆ ಅವಳ ಕಣ್ಣಿನಲ್ಲಿ ನೀರು ಬರುತ್ತದೆ.


ತನ್ನ ಸಂಸಾರ ಹಾಳಾದ ಬಗ್ಗೆ ರಾದುವಿಗೆ ದುಃಖವಾಗುತ್ತದೆ. ಆದರೂ ಬೇರೆ ಹೆಣ್ಣಿನ ಸಹವಾಸ ಮಾಡಿದ್ದಲ್ಲದೆ ಅದನ್ನು ನೋಡಿದ್ದಕ್ಕಾಗಿ ಹೊಡೆದ ತುಳಿದ ಗಂಡನ ಜೊತೆ ಸಂಸಾರ ಮಾಡಲು ಅವಳ ಸ್ವಾಭಿಮಾನ ಒಪ್ಪುವುದಿಲ್ಲ. ಮಗನ ಕೈ ಹಿಡಿದು ಇಳಿದು ಹೋಗಿಯೇ ಬಿಡುತ್ತಾಳೆ ರಾದು. ಗಂಡನಾದವನು ಮಾಡುವ ಶೋಷಣೆಯ ಚಿತ್ರಣ ಇಲ್ಲಿದೆ. ತಪ್ಪುದಾರಿ ಹಿಡಿದು ತನ್ನ ಮೇಲೆ ದೌರ್ಜನ್ಯವೆಸಗಿದ ಗಂಡನನ್ನು ತಿರಸ್ಕರಿಸಿ ಹೊರ ನಡೆಯುವ ಧೈರ್ಯವನ್ನು ತೋರುತ್ತಾಳೆ ರಾದು.




5 ಕಲ್ಜಿಗದ ಕಥೆಪಣ್ಣೆ ನಲಿಪು ತೂಕ ಮಾದಿರ


ಆಧುನಿಕ ಹಾಡಿನ ಗತಿಯನ್ನು ಹೊಂದಿರುವ ಈ ಕವಿತೆ ಕಲಿಯುಗದ ಎಂದರೆ ಆಧುನಿಕತೆಯ ಈ ಸಮಯದ ಜೀವನವನ್ನರು ನಿರೂಪಿಸುತ್ತದೆ. ಕಳ್ಳು ಗಂಗಸರ ದೂರವಾಯಿತು. ಶ್ರೀಮಂತರ ದೊಡ್ಡಸ್ತಿಕೆ ಹೊರಟು ಹೋಯ್ತು. ಜೊತೆಗೆ ಗಾಂಧೀಜಿಯ ಪಟಹಾರಿಹೋಯಿತು. ಎಂಬಲ್ಲಿ ಸತ್ಯ. ಪ್ರಾಮಾಣಿಕತೆ ಕೂಡ ಮರೆಯಾಗುತ್ತಿದೆ ಎಂಬುದು ಸೂಚನೆ ಈ ಕವಿತೆಯಲ್ಲಿದೆ.