Monday 13 April 2015

ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು :178 ದಾರಮ್ಮ ಬಲ್ಲಾಳ್ತಿ (c) ಡಾ.ಲಕ್ಷ್ಮೀ ಜಿ ಪ್ರಸಾದ


                            
ದಾರಮ್ಮ ಬಲ್ಲಾಳ್ತಿಯ ಅತಿ ಅಪರೂಪದ ಫೋಟೋ ಒದಗಿಸಿ ಕೊಟ್ಟ ಸುಕೇಶ್ ಬಿಲ್ಲವ ಇವರಿಗೆ ಋಣಿ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಮರ್ದಾಲ ಎಂಬ ಜೈನ ಬಲ್ಲಾಳರ ಬೀಡು ಇದೆ .
ಇಲ್ಲಿನ ಆರಾಧ್ಯ ದೈವ ಮರ್ದಾಲ ಧೂಮಾವತಿ ಮತ್ತು ಸೇರಿಗೆ ದೈವ ದಾರಮ್ಮ ಬಲ್ಲಾಳ್ತಿ ಬಗ್ಗೆ  ತುಳುನಾಡಿನ ದೈವಗಳು ಕೃತಿಯಲ್ಲಿ ಡಾ.ಬನ್ನಂಜೆ ಬಾಬು ಅಮೀನ್ ಅವರು ಮಾಹಿತಿ ನೀಡಿದ್ದಾರೆ. ಸುಮಾರು ನಾನ್ನೂರು ವರ್ಷಗಳ ಹಿಂದೆ ಇಲ್ಲಿ ನಾಲ್ಕು ಜನ ಅಣ್ಣ ತಮ್ಮಂದಿರು ಇದ್ದರು .ಈ ನಾಲ್ವರು ಬಲ್ಲಾಳರಿಗೆ ಒಬ್ಬಳೇ ಒಬ್ಬ ಮುದ್ದಿನ ತಂಗಿ ಇದ್ದಳು .
ಒಂದಿ ದಿನ ನಾಲ್ವರು ಬಲ್ಲಾಳರು ಅಡೂರಿಗೆ ಧೂಮಾವತಿ ಕೋಲ ನೋಡಲು ಹೋಗುತ್ತಾರೆ .ಅವರು ಹಿಂದೆ ಬರುವಾಗ ಅವರೊಂದಿಗೆ ಧೂಮಾವತಿ ದೈವ ಮರ್ದಾಲ ಬೀಡಿಗೆ ಬರುತ್ತದೆ .ತನಗೆ ಮೆಚ್ಚಿ ಕೊಟ್ಟು ಆರಾಧಿಸಬೇಕು ಎಂದು ಬಲ್ಲಾಲರಿಗೆ ಸೂಚಿಸುತ್ತದೆ .
ಅಣ್ಣ ತಮ್ಮಂದಿರು ಸಂತೋಷದಿಂದ ಮೆಚ್ಚಿ  ಸಿದ್ಧತೆಗೆ ತೊಡಗುತ್ತಾರೆ .ಮೆಚ್ಚಿಗೆ ಹೊಸ ಬತ್ತ ದಿನದ ಅರಳು ಆಗಬೇಕು .ಇದನ್ನು ಶುದ್ಧದಿಂದ ಮಾಡಲು ತಮ್ಮ ಮುದ್ದಿನ ತಂಗಿ ದಾರಮ್ಮ ನಿಗೆ ಹೇಳುತ್ತಾರೆ .
ಅಣ್ಣಂದಿರ ಮಾತಿನಂತೆ ದಾರಮ್ಮ ತಲೆಗೆ ಎಣ್ಣೆ ಹಚ್ಚ್ಚಿ ಸ್ನಾನ ಮಾಡಿ ಮಡಿ ಬಟ್ಟೆ ಉಟ್ಟು ಅರಳು ತಯಾರಿಸಲು ಸಿದ್ಧಳಾಗುತ್ತಾಳೆ.copy rights reserved (c) Dr.Laxmi g Prasad
ಓಲೆ ಉರಿಸಿ ಹೊಸ ಓಡು(ಮಣ್ಣಿನ ಬಾಣಲೆ ) ಇರಿಸುತ್ತಾಳೆ ಬಿಸಿಯಾದಾಗ ಬತ್ತ ಹಾಕಿ ಅರಳು ಮಾಡುತ್ತಾಳೆ.ಆಗ ಒಂದು ಬತ್ತ ಸಿಡಿದು ಅರಳಾಗಿ ಒಲೆಯ ಬದಿಯ ಕಲ್ಲಿನ ಮೇಲೆ ಬೀಳುತ್ತದೆ .ಆ ಹೊಸ ಬತ್ತದ ಅರಳಿನ ಪರಿಮಳಕ್ಕೆ ಸೋತು ತನ್ನ ವಯೋಸಹಜ ಚಪಲತೆಯಿಂದ ದಾರಮ್ಮ ಆ ಅರಳನ್ನು ಹೆಕ್ಕಿ ಬಾಯಿಗೆ ಹಾಕಿ ತಿನ್ನುತ್ತಾಳೆ .
ಇದನ್ನು ಮಾಯ ರೂಪದಲ್ಲಿದ್ದ ಧೂಮಾವತಿ ದೈವ ಗಮನಿಸುತ್ತದೆ . ತನಗೆ ಕೊಡುವ ಮೊದಲು ಅವಳು ಅರಳನ್ನು ತಿಂದದ್ದರಿಂದ  ಕೋಪಗೊಂಡ ಮರ್ದಾಲ ಧೂಮಾವತಿ ದೈವ ದಾರಮ್ಮ ಬಲ್ಲಾಲ್ದಿ ಯನ್ನು ಮಾಯ ಮಾಡುತ್ತಾಳೆ .
ಇದನ್ನು ತಿಳಿದ ಅಣ್ಣಂದಿರು ದುಃಖಿಸುತ್ತಾ ಧೂಮಾವತಿಯಲ್ಲಿ "ಅವಳು ನಮ್ಮ ಮರ್ದಾಲ ಬೀಡಿನ ಐಸಿರಿ ಅವಳನ್ನು ಮಾಯ ಮಾಡಿದೆಯಲ್ಲ ,ಇನ್ನಾರು ನಮಗೆ ಗತಿ ಎಂದು ಪ್ರಾರ್ಥಿಸಲು ,ಪ್ರಸನ್ನ ಗೊಂಡ ದೈವ ಅವಳನ್ನು ನನ್ನ ಸೇರಿಗೆಗೆ ಸಂದಾಯ ಮಾಡುತ್ತೇನೆ ನನಗೆ ಕೋಲ ನೇಮ ನೆರಿ ಕೊಟ್ಟು  ಆರಾಧನೆಮಾಡುವಾಗ ಜೊತೆಗೆ ಅವಳಿಗೂ ಆರಾಧನೆ ಆಗುವಂತೆ ಮಾಡುತ್ತೇನೆ "ಎಂದು ಹೇಳಿ ಅನುಗ್ರಹ ಮಾಡಿತು .copy rights reserved (c) Dr.Laxmi g Prasad 
ಹಾಗೆ ಮುಂದೆ ದಾರಮ್ಮ ಬಲ್ಲಾಳ್ತಿ ಧೂಮಾವತಿಯ ಶ್ರೀಗೆ ದೈವವಾಗಿ ಆರಾಧನೆ ಹೊಂದುತ್ತಾಳೆ .
"ದೈವಕ್ಕೆ ಕೋಲ ಕೊಡುವ ಸಂದರ್ಭದಲ್ಲಿ ದಾರಮ್ಮ ಬಲ್ಲಾಲ್ತಿಗೆ ಪಟ್ಟೆ ಸೀರೆ ಉಟ್ಟು ದರ್ಶನಾವೇಶ ನಡೆಸುವುದು ,ಮರ್ದಾಲ ಧೂಮಾವತಿ ಯ ಜೊತೆಗೆ ದರ್ಶನ ಬರಿಸುವುದು ಕ್ರಮ ಅದೇ ರೀತಿ ದಾರಮ್ಮ ಬಲ್ಲಾಳ್ತಿಯ ದರ್ಶನಾವೇಶದಿನದ ಬಿಡುಗಡೆಯಾಗುವ ಮೊದಲು ಹೆಣ್ಣು ಸಂತತಿಗೆ ಪ್ರಸಾದ ಕೊಡುವುದು ಸಂಪ್ರದಾಯ ಎಂದು "ಡಾ||ಬನ್ನಂಜೆ ಬಾಬು ಅಮೀನ್ ಅವರು ಹೇಳಿದ್ದಾರೆ .copy rights reserved (c) Dr.Laxmi g Prasad 
ಕೋಲದ ಸಮಯದಲ್ಲಿ ದಾರಮ್ಮ ಬಲ್ಲಾಳ್ತಿಯ ಭೂತ ಕಟ್ಟುವವರು ಪಟ್ಟೆ ಸೀರೆ ಉಟ್ಟು ಸ್ತ್ರೀ  ಸಹಜ ಉಡುಗೆಯನ್ನು ಧರಿಸುತ್ತಾರೆ ."ಪರಿವಾರ ದೈವಗಳ ಕೋಲದ ನಂತರ ಮರ್ದಾಲ ಧೂಮಾವತಿ /ಜುಮಾದಿ ಮತ್ತು ದಾರಮ್ಮ ಬಲ್ಲಾಳ್ತಿ ಗಳಿಗೆ ಒಟ್ಟಿಗೆ ಕೋಲ ಕೊಟ್ಟು ಆರಾಧಿಸುತ್ತಾರೆ "ಎಂದು ಬನ್ನಂಜೆ ಬಾಬು ಅಮೀನ್ ಅವರು ಹೇಳಿದ್ದಾರೆ .
ತುಳುನಾಡಿನ ಭೂತಾರಾಧನೆ ಹಲವು ಕೌತುಕಗಳ ಒಡಲು.ಇದನ್ನು ಸರಿಯಾಗಿ ಅರ್ಥೈಸಬೇಕಾದರೆ ದೀರ್ಘ ಕಾಲದ ವಿಸ್ತೃತ ಅಧ್ಯಯನದ ಅಗತ್ಯವಿದೆ .ಇಲ್ಲಿ ಯಾರು ಯಾಕೆ ಹೇಗೆ ದೈವತ್ವ ಪಡೆಯುತ್ತಾರೆ ಎಂಬುದನ್ನು ಹೇಳಲು ನಿಶ್ಚಿತವಾದ ನಿಯಮ ಎಂಬುದಿಲ್ಲ .ಹಾಗಿದ್ದರೂ ದೈವಗಳ ಅನುಗ್ರಹಕ್ಕೆ ಪಾತ್ರರಾದವರೂ ,ಕೋಪಕ್ಕೆ ತುತ್ತಾದವರೂ ಅದೇ ದೈವದ ಸೇರಿಗೆ ಸೇರಿ ದೈವತ್ವ ಪಡೆದು ಆರಾಧಿಸಲ್ಪಡುವ ವಿದ್ಯಮಾನ ತುಳುನಾಡಿನ ಅಲ್ಲಲ್ಲಿ ಕಂಡು ಬರುತ್ತದೆ .ಅಂತೆಯೇ ಇಲ್ಲಿ ಕೂಡ ದಾರಮ್ಮ ಧೂಮಾವತಿ ದೈವದ ಕೋಪಕ್ಕೆ ತುತ್ತಾಗಿ ಮಾಯವಾಗಿ ನಂತರ ದೈವತ್ವ ಪಡೆದು ಆರಾಧಿಸಲ್ಪಡುತ್ತಿರುವ ಸಾಧ್ಯತೆ ಇದೆ .copy rights reserved (c) Dr.Laxmi g Prasad 
ವಿಧಿ ನಿಷೇಧಗಳು ಆದಿ ಮಾನವನ ಅಲಿಖಿತ ಶಾಸನಗಳಗಿದ್ದವು .ಹಾಗೆಯೇ ಅಲೌಕಿಕ ಕಲ್ಪನೆಯನ್ನು ಹೊರತು ಪಡಿಸಿ ವಾಸ್ತವಿಕ ನೆಲೆಯಲ್ಲಿ ಆಲೋಚಿಸುವಾಗ "ದೈವಕ್ಕೆ ಅರ್ಪಿಸುವ ಮೊದಲು ಅರಳನ್ನು ತಿನ್ನಬಾರದು ಎಂಬ ವಿಧಿಯನ್ನು ಮೀರಿದ ದಾರಮ್ಮ ನಿಗೆ ಶಿಕ್ಷೆಯಾಗಿದ್ದು ಅವಳು ದುರಂತವನ್ನಪ್ಪಿರುವ ಸಾಧ್ಯತೆ ಇದೆ .ದುರಂತ ಮತ್ತು ದೈವತ್ವ tulu ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಅಂಶವೇ ಆಗಿರುವುದರಿಂದ ,ದುರಂತವನ್ನಪ್ಪಿದ ದಾರಮ್ಮ ದೈವತ್ವ ಪಡೆದಿರುವ ಸಾಧ್ಯತೆ ಇದೆ ,ಇದಕ್ಕೆ ಧೂ ಮಾವತಿ ದೈವದ ಕೋಪ ಮತ್ತು ಮಾಯಾ ಮಾಡಿದ ಕಥಾನಕ ಸೇರಿರಬಹುದು "ಎಂದು ಹೇಳಬಹುದು .
ಪುತ್ತೂರಿನ ಮರ್ದಾಲ ಬೀಡಿನ ದಾರಮ್ಮ ಬಲ್ಲಾಲ್ತಿಗೆ ಕಾರ್ಕಳ ,ಉಡುಪಿcopy rights reserved (c) Dr.Laxmi g Prasad 
ಸುತ್ತ ಮುತ್ತ ಕೂಡ ಆರಾಧನೆ ಇರುವುದು ಕುತೂಹಲಕರ ವಿಚಾರವಾಗಿದೆ .ಮರ್ದಾಲ ಬೀಡಿನಲ್ಲಿ ಕನ್ನಡಿಗ ಎಂಬ ಒಂದು ಅಪರೂಪದ ದೈವಕ್ಕೆ ಕೂಡ ಆರಾಧನೆ ಇದೆ ಈ ಬಗ್ಗೆ ಮಾಹಿತಿ ಸಂಗ್ರಹಿಸಲು ಸಾಧ್ಯವಾಗಿಲ್ಲ
ಆಧಾರ ಗ್ರಂಥ
ತುಳುನಾಡಿನ ದೈವಗಳು -ಡಾ||ಬನ್ನಂಜೆ ಬಾಬು ಅಮೀನ್

No comments:

Post a Comment