Tuesday 28 March 2023

ಆತ್ಮ ಕಥೆ

 ಲಕ್ಷ್ಮೀ ಜಿ ಪ್ರಸಾದ್ ನಿಮ್ಮ ತಾಯಿಗೆ ಗೊತ್ತಾ ನಿಮ್ಮ ಅಜ್ಜಿಗೆ ಗೊತ್ತಾ ..?


ಹೀಗೆ ಕೇಳದ್ದು ರಘುಪತಿ ತ್ಹಾಮಣ್ಕರರ ಪುಣ್ಯವೋ ಲಕ್ಷ್ಮೀ ಪ್ರಸಾದರ ಪುಣ್ಯವೋ‌  ಗೊತ್ತಿಲ್ಲ..


ಕೆಲವು ಸಮಯದ ಹಿಂದೆ ದೆಹಲಿಯ ದೊಡ್ಡ ಕನ್ನಡ ತುಳು ಅಭಿಮಾನಿ ಸಂಘಟಕರೊಬ್ಬರು ಯಾವುದೋ ಕಾರ್ಯಕ್ರಮದ ಬಗ್ಗೆ fb ಯಲ್ಲಿ ಹಾಕಿದ್ದರು.ಅದರಲ್ಲಿ ಯಾರನ್ನೋ ಉಪನ್ಯಾಸಕ್ಕೆ ಕರೆದಿದ್ದರು


ಆ ಸಂಘಟಕರ ಸ್ನೇಹಿತರಾದ ನಮಗೂ ಆತ್ಮೀಯರಾದ ನಿವೃತ್ತ ಬ್ಯಾಂಕ್ ಮ್ಯಾನೇಜರರೂ ಸಾಹಿತಿಗಳೂ ಗಾಯಕರೂ ಆಗಿರುವ ರಘುಪತಿ ತ್ಹಾಮಣ್ಕರ್ ಅವರು ಆ ಪೋಸ್ಟ್ ನ ಕಮೆಂಟ್ ನಲ್ಲಿ ಲಕ್ಷ್ಮೀ ಜಿ ಪ್ರಸಾದರನ್ನೂ ಕರೆಯಿರಿ ಎಂದು ಕಮೆಂಟ್ ಮಾಡಿ ನನ್ನನ್ನೂ ಟ್ಯಾಗ್ ಮಾಡಿದ್ದರು

ಅವರು ಟ್ಯಾಗ್ ಮಾಡಿದ ಕಾರಣ ಆ ಪೋಸ್ಟ್ ಗಮನಕ್ಕೆ ಬಂದು ನೋಡಿದೆ..ಅದರಲ್ಲಿ ಅನೇಕರು ಆ ಸಂಘಟಕರ ಒಳ್ಳೆಯ ಕಾರ್ಯವನ್ನು ಮೆಚ್ಚಿ ಅಭಿನಂದಿಸಿದ್ದರು.ಅದಕ್ಕೆಲ್ಲ ಅವರು ಪ್ರತಿಕ್ರಯಿಸಿ ಧನ್ಯವಾದ ಸೂಚಿಸಿದ್ದರು.ಆ ಸಂಘಟಕರು ನನಗೂ ಪರಿಚಿತರಾಗಿದ್ದು ನನ್ನ ಹಿತೈಷಿ ಎಂದೇ ನಾನು ಆ ತನಕ ಭಾವಿಸಿದ್ದೆ.ರಘುಪತಿ ತ್ಹಾಮಣ್ಕರರ ಕಮೆಂಟಿಗೆ ನನ್ನನ್ನು ಕರೆಸಕಾಗದ ಬಗ್ಗೆ ಏನಾದರೊಂದು ಸಮಜಾಯಿಸಿ ನೀಡಬಹುದೆಂದು ಭಾವಿಸಿದ್ದೆ..ಅವರ ಕಮೆಂಟಿಗೆ ಇವರದೊಂದು ನೋಡಿದ್ದರ ಸೂಚಕವಾಗಿ ಲೈಲ್ ಕೂಡ ಇರಲಿಲ್ಲ..


ಅದನ್ನು ಗಮನಿಸಿದ ಯಾರೋ ಈ ಬಗ್ಗೆ ಏನೋ ಆಕ್ಷೇಪಿಸಿ ಕಮೆಂಟಿಸಿದರು

ಆಗ ಅವರು ರಘುಪತಿ ತ್ಹಾಮಣ್ಕರರಿಗೆ ನೀವು ಕಾರ್ಯಕ್ರಮ ಸ್ಪಾನ್ಸರ್ ಮಾಡ್ತಿದ್ದರೆ ನಿಮ್ಮ ಕಮೆಂಟಿಗೆ ಪ್ರತಿಕ್ರಿಯೆ ನೀಡ್ತಿದ್ದೆ ಎಂದರು..

ಅವರ ಪ್ರತಿಕ್ರಿಯೆ ನೋಡಿ ನನಗೂ ಅಚ್ಚರಿ ಆಯಿತು.ಸಾಮಾನ್ಯವಾಗಿ ಯಾರಾದರೂ ಯಾರನ್ನಾದರೂ ರೆಫರ್ ಮಾಡಿದರೆ ಮುಂದೆ ಅವಕಾಶ ಸಿಕ್ಕಾಗ ಕರೆಸುತ್ತೇವೆ ಎಂದು ಹೇಳುದು ಸಜ್ಜನಿಕೆ...ಕರೆಸುದು ಬಿಡುದು ನಂತರದ್ದು..


ಆದರೆ  ಅಂತಹ ಸಜ್ಜನಿಕೆಯ ಮಾತುಗಳೂ ಅವರಿಂದ ಬಾರದ್ದು ನನಗೂ ಅಚ್ಚರಿ ಎನಿಸಿತ್ತು..ನನ್ನ ಹಿತೈಷಿಗಳೆಂದು ಭಾವಿಸಿದ್ದು ನನ್ನ ತಪ್ಪೆಂದು ನನಗೆ ಅರಿವಾಯಿತು..


ಇರಲಿ..


ರಾಘವೆಂದ್ರ ಹುಣಸೂರರಿಗಿಂತ ಇವರು ಬೆಟರ್..ಯಾಕೆಂದರೆ ರಘುಪತಿ ತ್ಹಾಮಣ್ಕರರಲ್ಲಿ ಲಕ್ಷ್ಮೀ ಜಿ ಪ್ರಸಾದ್ ನಿಮ್ಮ ತಾಯಿಗೆ ಗೊತ್ತಾ ? ಅಜ್ಜಿಗೆ ಗೊತ್ತಾ ? ಅವರು ಎಡಪಂಥದವರಿಗೆ ಗೊತ್ತಾ ? ನಾವು ಎಡಚರನ್ನು ಮಾತ್ರ ಕರೆಯುವುದೆಂದು ನಿಮಗೆ ಗೊತ್ತಿಲ್ವ ?ಬಲ ಪಂಥದವರನ್ನು ನಾವು ಹಾಗೆಲ್ಲ ಕರೆಯುವುದಿಲ್ಲ ಎಂದು ನಿನಗೆ ಗೊತ್ತಿಲ್ವ ?/ ಅವರಿಗೆ ಬಕೆಟ್ ಹಿಡಿಯಲು ಬರುತ್ತಾ ? ನಮ್ಮನ್ನು ಕರೆಸಿ ಅವರು ಹಾರ ತುರಾಯಿ ಹಾಕಿ ಇಂದ್ರ ಚಂಸ್ರ ಎಂದು ಹೊಗಳಿ ಆಕಾಶಕ್ಕೇರಿಸಿದ್ದಾರಾ ? ಎಂದು ಕೇಳಲಿಲ್ಲವಲ್ಲ..ಅದೇ ಪುಣ್ಯ..


ಇಷ್ಟಕ್ಕೂ ಯಾರೋ ಕರೆದು ನಾನು ಹೋಗಿ ಉಪನ್ಯಾಸ ನೀಡಿ ನಾನು ನಾನಾಗಿದ್ದಲ್ಲ..ನನ್ನ ಬರವಣಿಗೆ ಮತ್ತು ಓದುಗರ ಕೊಂಡಿಯಾಗಿ ಬಂದದ್ದು ಬ್ಲಾಗ್ fb ವಾಟ್ಸೊ್ ಮತ್ತು ಪುಸ್ತಕಗಳು..ಮೊದಲೊಂದು ಕಾಲವಿತ್ತು.ಯಾರೋ ಕರೆದು ಅವಕಾಶ ಕೊಟ್ಟರೆ ಮಾತ್ರ ತಮ್ಮ ಅಧ್ಯಯನದ ವಿಚಾರಗಳನ್ನು ಹೊರ ಜಗತ್ತಿಗೆ ತಿಳಿಸಲು ಸಾಧ್ಯವಿತ್ತು.ಈಗ ಹಾಗಲ್ಲ..ಬರಹಗಳನ್ನು ಚೆನ್ನಾಗಿದ್ದರೆ ದೇಶ ವಿದೇಶದ ಲಕ್ಷಾಂತರ ಓದುಗರನ್ನು ಕ್ಷಣ ಮಾತ್ರದಲ್ಲಿ ತಲುಪುತ್ತವೆ.ಹಾಗಾಗಿ ಇಂತಹವರಿಗೆ ಬಕೆಟ್ ಹಿಡಿಯುವ ಅಗತ್ಯ ನಮಗಿಲ್ಲ ಈಗ .ಜಾತಿ ರಾಜಕೀಯ ಸಣ್ಣತನ ಅಹಂಕಾರ ಕಾಲೆಳೆಯುವಿಕೆ ಇದೆಲ್ಲ ನಾನಿರುವ ತನಕ ಅವರಿರುವ ತನಕ ಮಾತ್ರ..ನಂತರ ನನ್ನ ಅಧ್ಯಯನ , ಪುಸ್ತಕಗಳೇ ಮಾತಾಡುತ್ತವೆ..

ಆದರೆ ಇಂತಹವರಿದ್ದರೆಂದು ತಿಳಿಸುವ ಸಲುವಾಗಿ ಆತ್ಮಕಥೆಯಲ್ಲಿದನ್ನು ಬರೆಯಬೇಕೆಂದಿದ್ದೆ.ಆದರೆ

ಈ ವಿಚಾರ ನನಗೆ ಮರೆತೇ ಹೋಗಿತ್ತು..ರಾಘವೇಂದ್ರ ಹುಣಸೂರರ ಕೃಪೆಯಿಂದ ನೆನಪಾಯಿತು..😁😁

ನೆನಪಾದ ಕಾರಣ ಈಗಲೇ ಬರೆದಿಡುವೆ..


ಅದು ಸರಿ..ಆ ವ್ಯಕ್ತಿ ಯಾರು ?....

.

.

.

.

.

.

.

.

.

.

.

.

.

.

.

.

ನನ್ನ ಆತ್ಮಕಥೆಯಲ್ಲಿ ತಿಳಿಸುತ್ತೇನೆ..ಈಗಲೇ ತಿಳಿಸಿದರೆ ಸ್ವಾರಸ್ಯವಿರುವುದಿಲ್ಲ.ಅಲ್ವ?

.

2 comments:

  1. ಎಂಥವರೆಲ್ಲಾ ಇರುತ್ತಾರೆ! ಇಷ್ಟು ಸಣ್ಣತನವೆ?

    ReplyDelete