Friday 1 May 2015

ಸಾವಿರದೊಂದು ಗುರಿಯೆಡೆಗೆ:ತುಳುನಾಡ ದೈವಗಳು:203 ಜತ್ತಿಂಗ © ಡಾ.ಲಕ್ಷ್ಮೀ ಜಿ ಪ್ರಸಾದ

                                          
© copy rights reserved(c) ಡಾಲಕ್ಷ್ಮೀ ಜಿ ಪ್ರಸಾದ ಚಿತ್ರ ಕೃಪೆ :ಚಿತ್ತರಂಜನ್ ತುಳುನಾಡು

ಸುಳ್ಯ ,ಪುತ್ತೂರು ,ಕಾರ್ಕಳ ಉಡುಪಿ ಸರಿದಂತೆ ತುಳುನಾಡಿನಾದ್ಯಂತ ಜಟ್ಟಿಗ ಎಂಬ  ಭೂತಕ್ಕೆ ಆರಾಧನೆ ಇದೆ .ಅರಮನೆ ಜಟ್ಟಿಗ ,ಕೋಟೆ ಜಟ್ಟಿಗ ,ಬೂಡು ಜಟ್ಟಿಗ ಇತ್ಯಾದಿ ಅನೇಕ ಹೆಸರುಗಳಿವೆ.ಇವೆಲ್ಲ ಒಂದೇ ದೈವ ಜತಿಗನ ಬೇರೆ ಬೇರೆ ಹೆಸರುಗಳೋ ಅಥವಾ ಬೇರೆ ಬೇರೆ ದೈವತಗಳೋ ಎಂಬ ಬಗ್ಗೆ ಇದಮಿಥ್ಹಂ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ .ಹೆಸರೇ ಸೂಚಿಸುವಂತೆ ಈತ ಮೂಲತಃ ಪೈಲ್ವಾನ ,ಕುಸ್ತಿ ಪಟು ಆಗಿರಬೇಕು
ವೀರ ಆರಾಧನೆ ಎಲ್ಲೆಡೆ ಕಂಡು ಬರುವ ವಿದ್ಯಮಾನ.ಹೊನ್ನಾವರ ,ಭಟ್ಕಳ ,ಗೇರುಸೊಪ್ಪೆ ಮೊದಲಾಡೆಗೆ ಜಟ್ಟಿಗನನ್ನು ಆರಾಧಿಸುತ್ತಾರೆ .ಈ ಬಗ್ಗೆ ಡಾ,ರಹಮತ್ ತರಿಕೆರೆ ಅವರು ಗೇರುಸೊಪ್ಪೆ ಬಸದಿಯ ಸಮೀಪವೇ ಬಯಲಿನಲ್ಲಿ ಇರುವ ಅನೇಕ ಜಟ್ಟಿಗನ ಕಲ್ಲುಗಳ ಬಗ್ಗೆ  " ಬುಡಕಟ್ಟು ಜನರಾದ ಗೊಂಡರ ದೈವಗಳು ಈ ಕಲ್ಲುಗಳು" ಎಂದು ಹೇಳಿದ್ದಾರೆ 

"ಗೇರುಸೋಪ್ಪೆಯನ್ನು ಆಳಿದ ಮೆಣಸಿನ ಚೆನ್ನ ಭೈರಾ ದೇವಿಯು ಅರಮನೆ ಕೋಟೆ ಗಳನ್ನು ಕಾಯಲು ದೂರದ ಆಂಧ್ರದ ಗೊಂಡ ಸಮುದಾಯದ ವೀರ ಜಟ್ಟಿಗಳನ್ನು ಕರೆಸಿದಳೆಂದು ಐತಿಹ್ಯವಿದೆ .ಕೋಟೆ ಜಟ್ಟಿ ,ಅರಮನೆ ಜಟ್ಟಿ ಹೆಸರುಗಳು ಇದ ನ್ನು  ದೃಡೀಕರಿಸುತ್ತವೆ.ಅರಮನೆಯ ಜಟ್ಟಿ ಅರಮನೆ ಕಾದವನು ಇರಬಹುದು ,ಕೋಟೆ ಕಾಯುವ ಜಟ್ಟಿ ಕೋಟೆ ಜಟ್ಟಿ ಇರಬಹುದು" ಎಂದು ರಹಮತ್ ತರಿಕೆರೆಯವರು ಅಭಿಪ್ರಾಯ ಪಟ್ಟಿದ್ದಾರೆ .

ಮೆಣಸಿನ ಯುದ್ಧದಲ್ಲಿ ಇವರೆಲ್ಲ ಸ್ವಾಮಿ ನಿಷ್ಠೆಯನ್ನು ಮೆರೆದು ಯುದ್ಧ ಮಾಡಿ ದುರಂತವನ್ನಪ್ಪಿರಬಹುದು .ಇವರ ಸಾಹಸ ಸ್ವಾಮಿ ನಿಷ್ಠೆ ಯಿಂದಾಗಿ ಇವರು ಜನ ಮಾನಸದಲ್ಲಿ ನಿಂತು ಆರಾಧನೆ ಪಡೆದಿರ ಬಹುದು .

ಹಗರಣ (ಒಂದು ದೃಶ್ಯ ಕಾವ್ಯ )ದ ಆರಂಭದಲ್ಲಿ ಜಟ್ಟಿಗರ ಪೂಜೆ ಮಾಡುವ ಸಂಪ್ರದಾಯವಿದೆ.

ಅಲ್ಲಿ ಆರಾಧಿಸಲ್ಪಡುವ ಜಟ್ಟಿಗರೇ ತುಳು ಪರಂಪರೆಯ ಜಟ್ಟಿ ದೈವವಾದರೆ ?ವೀರಾರಾಧನೆಯ ಪ್ರಸರಣ ಇಲ್ಲಿಯವರೆಗೆ ಹಬ್ಬಿ ಇಲ್ಲಿನ ಸಂಸ್ಕೃತಿಯಂತೆ ದೈವಗಳ ನೆಲೆಯಲ್ಲಿ ಆರಾಧಿಸಲ್ಪಟ್ಟಿರುವ ಸಾಧ್ಯತೆ ಇದೆ .

ಜಟ್ಟಿಗ ಮತ್ತು ಜತ್ತಿಂಗ ರನ್ನು ಹೆಸರಿನ ಸಾಮ್ಯತೆಯಿಂದಾಗಿ ಒಂದೇ ಭೂತ ಎಂದು ಜನರು ಭಾವಿಸಿದ್ದಾರೆ.
 ಆದ್ರೆ ಇಲ್ಲಿ ಪ್ರಚಲಿತವಿರುವ ಐತಿಹ್ಯದ ಪ್ರಕಾರ ಜತ್ತಿಂಗ  ಭೂತ ಮೂಲತಃ ಒಬ್ಬ ತಂತ್ರಿ .ಚೌಂಡಿ ಆರಾಧನೆಯನ್ನು ಮಾಡುವಾಗ ಓರ್ವ ತಂತ್ರಿ ದ್ರೋಹವನ್ನು ಮಾಡುತ್ತಾರೆ .ಆಗ ಕೋಪಗೊಂಡ ಚೌಂಡಿ /ಚಾಮುಂಡಿ ದೈವ ಆತನನ್ನು ಮಾಯ ಮಾಡಿ ಜಟ್ಟಿಗ ಎಂಬ ಹೆಸರಿನಲ್ಲಿ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತದೆ.ಈ ದೈವವನ್ನು ಜತ್ತಿಂಗೆ /ಜಟ್ಟಿಂಗ ಎಂದೂ ಕರೆಯುತ್ತಾರೆ

 ಈ ಬಗ್ಗೆ ಶಶಾಂಕ ನೆಲ್ಲಿತ್ತಾಯರು ನೀಡಿದ ಒಂದು ಮದಿಪಿನಲ್ಲೂ ಮಾಹಿತಿ ಇದೆ 
 
ಸ್ವಾಮಿ ಅಪ್ಪೆ ಚೌoಡಿ...........
ಆನಿದ ಕಾಲೋಡ್ ಗಟ್ಟದ ರಾಜ್ಯೋಡ್ ಬೀಮರಾಯೇ ತೋಟದ ಕಾರಂಬಡೆ ಮರತ ಮುದೆಲ್ ಪೊಟ್ಟು ಕಲ್ಲುಡ್ ನಿಲೆಯದ್ ಬೀಮರಾಯೇ ಚೌoಡಿ ಪಂಡುದ್ ಗೋಚರ ಮಲ್ಪಯಿ ದೈವದು ಉಲ್ಲ .
ಅನಿದ ಕಾಲೋಡ್ ನಿನನ್ ನಿಲೆ ಮಲ್ಪರೆ ಬತ್ತಿನ ತಂತ್ರಿಲು ಮೋಸ ಮಲ್ತೆರುಂದು ಪನ್ಪಿನೈಕದ್ ಅರೆನ್ ಮಾಯಾ ಮಲ್ತದು ಜಟ್ಟಿಗರಾಯೆ ಪನ್ಪಿನ ದೈವ ಸಗ್ತಿಯಾದ್ ನಿನ ಮರ್ಗಿಲ್ದ್ ನಂಬೊಂದು ಬರ್ಪಿಲೆಕ್ಕ ಮಲ್ತೊಂದು , ತುಳುನಾಡ ಪಂಚ ವರ್ಣದ ಪುಣ್ಯ ಬೂಮಿಡ್ ಬಡಕಾಯಿ ಅಂಕೋಲಾ ಗಡಿದುರ್ದ್ ತೆಂಕಾಯಿ ರಾಮೆಸರ ಗಡಿ ಮುಟ್ಟ ಜಾಗ್ ಜಾಗೆಡ್ ಸಂಚಾರೋಗ್ ಪಿದದೊಂಡ..

ಈತನನ್ನು ಜಟ್ಟಿಗರಾಯ ಎಂದು ಕರೆಯಬೇಕಿದ್ದರೆ ,ಇಲ್ಲಿ ಚಾಮುಂಡಿ ದೈವದ ಆರಾಧನೆಯಲ್ಲಿ ದ್ರೋಹ ಮಾಡಿದ ತಂತ್ರಿ ಜಟ್ಟಿಯೂ ಆಗಿದ್ದನೇ?ಎಂಬ ಸಂದೇಹ ಉಂಟಾಗುತ್ತದೆ .ಚಾಮುಂಡಿದೈವದಆಗ್ರಹಕ್ಕೆತುತ್ತಾಗಿಮಾಯವಾಗಿ  ದೈವತ್ವ ಪಡೆದ ತಂತ್ರಿ ಗೆ ಜಟ್ಟಿಗ ಎಂದು ಹೆಸರು ಬರಬೇಕಿದ್ದರೆ ಆತ ಜಟ್ಟಿ ಕೂಡಾ ಆಗಿದ್ದಿರಬೇಕು .
ಅಥವಾ ತಂತ್ರಿಗಳು/ತಂತ್ರಿದಾರ್ ಎಂಬುದು ಕಾಲಾಂತರದಲ್ಲಿ ತಂತ್ರಿಗ >ಜತ್ತಿಂಗ >ಜಟ್ಟಿಗ ಆಗಿ ಬದಲಾಗಿರುವ ಸಾಧ್ಯತೆ ಇದೆ 



ಅರಮನೆ ಜಟ್ಟಿಗ .ಕೋಟೆ ಜಟ್ಟಿಗ ಮೊದಲಾದ ದೈವಗಳು ಮೂಲತಃ ಜಟ್ಟಿಗರೇ/ಕುಸ್ತಿ ಪಟುಗಳೇ ಆಗಿರಬೇಕು /ಆದರೆ ಜತ್ತಿಂಗ ಮಾತ್ರ ಮೂಲತ ಓರ್ವ ಬ್ರಾಹ್ಮಣ ತಂತ್ರಿ .ಚಾಮುಂಡಿ ದೈವದ ಆರಾಧನೆಯಲ್ಲಿ ದ್ರೋಹ ಮಾಡಿದ್ದಕ್ಕೆ ದೈವ ಆತನನ್ನು ಮಾಯಾ ಮಾಡಿದೆ .ದೈವದ ಆಗ್ರಹಕ್ಕೆ ಸಿಲುಕಿ ಮಯವದವರು ಅದೇ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧಿಸಲ್ಪಡುವ ವಿಚಾರ ತುಳುವ ಸಂಸ್ಕೃತಿಯಲ್ಲಿ ಅಸಹಜವೇನೂ ಅಲ್ಲ.ಹಾಗೆಯೇ ಇಲ್ಲಿ ಕೂಡ ದ್ರೋಹವೆಸಗಿ ಚಾಮುಂಡಿ ದೈವದ ಆಗ್ರಹಕ್ಕೆ ತುತ್ತಾದ ಬ್ರಾಹ್ಮ ತಂತ್ರಿ ದೈವತ್ವ ಪಡೆದು ಜತ್ತಿಂಗ ದೈವವಾಗಿ ಆರಾಧಿಸಲ್ಪಡುತ್ತಿರುವ ಸಾಧ್ಯತೆ ಹೆಚ್ಚಾಗಿದೆ .
ಈ ಭೂತದ ವೇಷ ಭೂಷಣ ಅಭಿನಯ ಅಭಿವ್ಯಕ್ತಿಗಳು ಕೂಡ ಇದನ್ನು ಸಮರ್ಥಿಸುತ್ತದೆ .
ಜತ್ತಿಂಗ ಭೂತಕ್ಕೆ ಸಾಮಾನ್ಯವಾಗಿ ಬ್ರಾಹ್ಮಣರು ಧರಿಸುವ   ಜನಿವಾರ ಕಚ್ಚೆ ನಾಮ ಹಾಕಿ ಭೂತ ಕಟ್ಟುತ್ತಾರೆ .

ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆದರೆ ಸ್ಪಷ್ಟ ಮಾಹಿತಿ ತಿಳಿದು ಬರಬಹುದು 



Sunday 26 April 2015

ಡಾ.ವಿಜಯ ಸುಬ್ಬರಾಜ್ ದತ್ತಿ ನಿಧಿ "ಗಣ್ಯ ಲೇಖಕಿ "ಪುರಸ್ಕಾರ

 ಇಂದು ದಿನಾಂಕ 26/04 /2015 ರಂದು ಬೆಳಗ್ಗೆ ಬೆಂಗಳೂರಿನ ಎನ್ ಆರ್ ಕಾಲೋನಿ ಯಲ್ಲಿರುವ ಬಿ.ಎಂ ಶ್ರೀ ಪ್ರತಿಷ್ಠಾನದ ಡಾ.ವಿಜಯ ಸುಬ್ಬರಾಜ್ ದತ್ತಿ ನಿಧಿ ಗಣ್ಯ ಲೇಖಕಿ ಪುರಸ್ಕಾರ ಪ್ರದಾನ ಕಾರ್ಯಕ್ರಮ ನಡೆಯಿತು .ಖ್ಯಾತ ಕತೆಗಾರ್ತಿ ಸುನಂದಾ ಕಡಮೆಯರಿಗೆ ಗಣ್ಯ ಲೇಖಕಿ ಪುರಸ್ಕಾರವನ್ನು ಚೆನ್ನೈ ದೂರ ದರ್ಶನ  ಕೇಂದ್ರದ ನಿರ್ದೇಶಕರಾಗಿರುವ ಸಿ ಎನ್ ರಾಮ ಚಂದ್ರ ಅವರು ನೀಡಿದರು .
ವಿಮರ್ಶಕ ರಾಮ ರಾವ್ ಕುಲಕರ್ಣಿ ಅವರು ಸುನಂದಾ ಕಡಮೆಯವರ ಕೃತಿಗಳ ಬಗ್ಗೆ ಮಾತನಾಡಿದರು ,ವಿಜಯ ಸುಬ್ಬರಾಜ್ ಅವರು ಎಲೆ ಮರೆಯ ಕಾಯಿಯಂತೆ ಇದ್ದು ಮಹತ್ತರ ಸಾಹಿತ್ಯ ಸಂಶೋಧನೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಇರುವವರನ್ನು ಗುರುತಿಸುವುದು ತಮ್ಮ ಉದ್ದೇಶ ಎಂದು ತಾವು ದತ್ತು ನಿಧಿ ಸ್ಥಾಪಿಸಿದುದರ ಬಗ್ಗೆ ತಮ್ಮ ಆಶಯವನ್ನು ತಿಳಿಸಿದರು.
ಸಿ ಎನ್ ರಾಮಚಂದ್ರ ಅವರು ಸುನಂದಾ ಕಡಮೆಯವರ ಕೃತಿಗಳನ್ನು ವಿಮರ್ಶಿಸುತ್ತಾ ,ಪುರಸ್ಕಾರದ ಅಗತ್ಯ ಹಾಗೂ ಮಹತ್ವದ ಬಗ್ಗೆ ಮಾತನಾಡಿದರು.
ಬಿ ಎಂ ಶ್ರೀ ಪ್ರತಿಷ್ಥಾನದ ಅಧ್ಯಕ್ಷರಾಗಿರುವ ಪಿ ವಿ ನಾರಾಯಣ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು,ಕಾರ್ಯದರ್ಶಿಗಳಾದ ರವೀಂದ್ರ ಅವರು ಧನ್ಯವಾದ ಅರ್ಪಿಸಿದರು .ಇನ್ನೋರ್ವ ಕಾರ್ಯದರ್ಶಿಗಳಾದ ಪ್ರೊ.ಅಬ್ದುಲ್ ಬಷೀರ್ ಅವರು ಕಾರ್ಯಕ್ರಮ ನಿರ್ವಹಿಸಿದರು

ಹಂಪಿ ಕನ್ನಡ ವಿಶ್ವ ವಿದ್ಯಾಲಯಕ್ಕೆ ನೋಂದಣಿಗೊಂಡಿರುವ ಬಿ ಎಂ ಶ್ರೀ ಪ್ರತಿಷ್ಠಾನ ,ಎಂ ವಿ ಸೀ ಸ್ನಾತಕೋತ್ತರ ಸಂಶೋಧನಾ ಕೇಂದ್ರದ ಮೂಲಕ ನಾನು ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ -ಒಂದು ವಿಶ್ಲೇಷಣಾತ್ಮಕ ಅಧ್ಯಯನ ಎಂಬ ವಿಷಯದಲ್ಲಿ ನನ್ನ ಮೊದಲ ಪಿಎಚ್ ಡಿ ಪದವಿಯನ್ನು ಪಡೆದಿದ್ದು ,ಈ ಸಂಸ್ಥೆಯ ಹಳೆಯ ವಿದ್ಯಾರ್ಥಿನಿ ಹಾಗೂ ಸದಸ್ಯೆ ಕೂಡ ಆಗಿರುತ್ತೇನೆ ,ನನ್ನ ಸಂಶೋಧನಾ ಅಧ್ಯಯನ ಹಾಗೂ ಮೌಖಿಕ ಪರೀಕ್ಷೆ ಸಂದರ್ಭದಲ್ಲಿ ಡಾ.ವಿಜಯ ಸುಬ್ಬರಾಜ್ ಅವರು ನಮಗೆ ಪೂರ್ಣ ಬೆಂಬಲ ನೀಡಿ ಆತ್ಮ ವಿಶ್ವಾಸ ತುಂಬಿದ್ದನ್ನು ನಾನು ಮರೆಯಲಾರೆ .

ಎಲ್ಲರ ಮಾತುಗಳನ್ನು ಆಲಿಸಲು ಕೆಳಗೆ ಕ್ಲಿಕ್ ಮಾಡಿ
Vocaroo Voice Message



-ಲಕ್ಷ್ಮೀ ಜಿ ಪ್ರಸಾದ ,
ಕನ್ನಡ ಉಪನ್ಯಾಸಕಿ
ಸರ್ಕಾರಿ ಪದವಿ ಪೂರ್ವ ಕಾಲೇಜ್
ಬೆಳ್ಳಾರೆ ,ಸುಳ್ಯ ,ದ.ಕ ಜಿಲ್ಲೆ









Tuesday 21 April 2015

ಕಡಬದಿ೦ದ...: ತುಳು ಸಂಸ್ಕೃತಿಯ ಬಗ್ಗೆ ಎರಡು ಡಾಕ್ಟರೇಟ್ ಪಡೆದ ಮೊದಲ ಮಹಿಳೆ...

ಕಡಬದಿ೦ದ...: ತುಳು ಸಂಸ್ಕೃತಿಯ ಬಗ್ಗೆ ಎರಡು ಡಾಕ್ಟರೇಟ್ ಪಡೆದ ಮೊದಲ ಮಹಿ...: ಹೆ ಣ್ಣು ತನ್ನ ಕುಟು೦ಬದ ವ್ಯಾಪ್ತಿಯಲ್ಲಿ ತನ್ನ ಸ್ವತತ್ರ ಬದುಕಿಗಾಗಿ ಪ್ರಶ್ನೆ ಮಾಡಿದಾಗ ಒ೦ದು ಹೊಸ ಬದುಕಿನ ದಾರಿ ತೆರೆದು ಕೊಳ್ಳುತ್ತದೆ.ನಮ್ಮ ಮನೆಯ ಆವರಣದಲ್ಲೇ ಹೆಣ್ಣ...

ಕಡಬದಿ೦ದ...: ತುಳು ಸಂಸ್ಕೃತಿಯ ಬಗ್ಗೆ ಎರಡು ಡಾಕ್ಟರೇಟ್ ಪಡೆದ ಮೊದಲ ಮಹಿಳೆ...

 


  ಕಡಬದಿ೦ದ...: ತುಳು ಸಂಸ್ಕೃತಿಯ ಬಗ್ಗೆ ಎರಡು ಡಾಕ್ಟರೇಟ್ ಪಡೆದ ಮೊದಲ ಮಹಿಳೆ...: ಹೆ ಣ್ಣು ತನ್ನ ಕುಟು೦ಬದ ವ್ಯಾಪ್ತಿಯಲ್ಲಿ ತನ್ನ ಸ್ವತತ್ರ ಬದುಕಿಗಾಗಿ  ಪ್ರಶ್ನೆ ಮಾಡಿದಾಗ ಒ೦ದು ಹೊಸ ಬದುಕಿನ ದಾರಿ ತೆರೆದು ಕೊಳ್ಳುತ್ತದೆ.ನಮ್ಮ ಮನೆಯ ಆವರಣದಲ್ಲೇ ಹೆಣ್ಣ...
http://vkkadaba.blogspot.in/2015/03/laxmigprasad.html?spref=tw

Monday 20 April 2015

ಭೂತಗಳ ಅದ್ಭುತ ಜಗತ್ತಿಗೆ 75,000 ಓದುಗರು !


ಇಂದಿಗೆ ನನ್ನ ಬ್ಲಾಗ್ (ಭೂತಗಳ ಅದ್ಭುತ ಜಗತ್ತು )ಓದುಗರ ಸಂಖ್ಯೆ 75,000 ತಲುಪಿದೆ ಹಾಗೂ ನನ್ನ ಪೇಜ್ Bhutagala Adbhuta Jagattu 4,000 ಓದುಗರನ್ನು ಪಡೆದಿದೆ.
ಎರಡು ವರ್ಷ ಮೂರು ತಿಂಗಳ ಮೊದಲು ಪ್ರೊ.ಮುರಳೀಧರ ಉಪಾಧ್ಯರ ಸಹಾಯದಿಂದ ನಾನು ಬ್ಲಾಗ್ ತೆರೆದೆ,ಆರಂಭದಲ್ಲಿ ,ನನಗೆ ಯೂನಿಕೋಡ್ ತಂತ್ರಜ್ಞಾನ ತಿಳಿಯದ ಕಾರಣ ಬ್ಲಾಗ್ ನಲ್ಲಿ ಬರೆಯುದು ಕಷ್ಟಕರ ಆಗಿತ್ತು ಹಾಗಾಗಿ ಭೂತಗಳ ಚಿತ್ರ ಮಾತ್ರ ಬ್ಲಾಗ್ ಗೆ ಹಾಕುತ್ತಿದ್ದೆ

 ಇಂದಿಗೆ ಸರಿಯಾಗಿ ಎರಡು ವರ್ಷ (21-04-2013)ಮೊದಲು ಅಬ್ದುಲ್ ರಶೀದ್ ಅವರ ಪ್ರೇರಣೆಯಿಂದ ಕೆಂಡ ಸಂಪಿಗೆಗಾಗಿ ಭೂತಗಳ ಅದ್ಭುತ ಜಗತ್ತಿನಲ್ಲಿ ಎಂಬ ಅಂಕಣ ಬರೆಯಲು ಆರಂಭಿಸಿದೆ .ಆಗ ನನಗೆ Aravinda VK ಅವರು ಸಂಶೋಧಿಸಿದ aravinda vk converter (github.com//aravindavk/ascii2unicode) ಮೂಲಕ ನುಡಿ ಬರಹದಲ್ಲಿ ಬರೆದಿರುವುದನ್ನು ಯೂನಿಕೋಡ್ ಗೆ ಬದಲಾಯಿಸಲು ಕಲಿತಿದ್ದೆ .ಜೊತೆಗೆ ಬ್ಲಾಗ್ ಲೇಖನಗಳನ್ನು ಫೇಸ್ ಬುಕ್ ಹಾಗೂ ಇತರ ಗುಂಪುಗಳಿಗೆ share ಮಾಡುವುದನ್ನು ಪದ್ಯಾಣ ರಾಮಚಂದ್ರಣ್ಣ ಅವರ ಸಹಾಯದಿಂದ ಕಲಿತೆ


ನಂತರ 20 ವಾರಗಳ ಕಾಲ ಕೆಂಡ ಸಂಪಿಗೆಗೆ ತುಳುನಾಡಿನ ಅಪರೂಪದ ಭೂತಗಳ ಬಗ್ಗೆ ಬರೆದೆ.ನಂತರ ಅದು ನಿಂತು ಹೋಯಿತು
ಈ ನಡುವೆ ನನ್ನ ಲೇಖನಗಳನ್ನು ಓದಿದ ಅನೇಕ ಸ್ನೇಹಿತರು ಬೇರೆ ಬೇರೆ ಭೂತಗಳ ಕುರಿತು ಮಾಹಿತಿ ಕೇಳುತ್ತಿದ್ದರು ,ಅವರಿಗಾಗಿ ನಾನು ಮಾಹಿತಿ ಸಂಗ್ರಹಿಸಿ ನೀಡುತ್ತ ಇದ್ದೆ
.ಇದಕ್ಕೂ ಮೊದಲೇ ನನ್ನ ತುಂಡು ಭೂತಗಳು -ಒಂದು ಅಧ್ಯಯನ ,ಹಾಗೂ ತುಳುನಾಡಿನ ಅಪ್ರುವ ಭೂತಗಳು ಕೃತಿ ಪ್ರಕಟವಾಗಿತ್ತು .ಇದರಲ್ಲಿ ಅನೇಕ ಅಪರೂಪದ ಹೆಸರು ಕೂಡ ದಾಖಲಾಗಿಲ್ಲದ ಭೂತಗಳ ಬಗ್ಗೆ ಬರೆದಿದ್ದೆ

ಹಾಗಾಗಿ ಡಾ.ವಾಮನ ನಂದಾವರ ಅವರ ಪ್ರೇರಣೆಯಿಂದ ಸ್ನೇಹಿತರ ಬೆಂಬಲದೊಂದಿಗೆ ನಾನು ಒಂದು ವರ್ಷ ಮೊದಲು (21-02-2014) ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು ಎಂಬ ಸರಣಿಯನ್ನು ಆರಂಭಿಸಿದೆ .ಈಗ ಅದು 190 ಆನ್ನು  ತಲುಪಿದೆ .ಜೊತೆಗೆ ಎಪ್ಪತ್ತೈದು ಸಾವಿರ ಓದುಗರನು ತಲುಪಿದೆ,ಇಲ್ಲಿರುವ ಹೆಚ್ಚ್ಚಿನ ದೈವಗಳ ಮಾಹಿತಿ ನನ್ನ ಸ್ವಂತದ್ದು,ನಾನು ಕ್ಷೇತ್ರ ಕಾರ್ಯ ಮಾಡಿ ಪಡೆದುಕೊಂಡ ಮಾಹಿತಿಗಳು .ಸುಮಾರು 50-60 ದೈವಗಳ ಮಾಹಿತಿಯು ಡಾ.ಚಿನ್ನಪ್ಪ ಗೌಡ ,ಡಾ,viveka ರೈ ,ಡಾ.ಅಮೃತ ಸೋಮೇಶ್ವರ ,ಡಾ,ಬನ್ನಂಜೆ ಬಾಬು ಅಮೀನ್ ಅವರ ಕೃತಿಗಳಲ್ಲಿವೆ .ಉಳಿದವೆಲ್ಲ ನನ್ನ ಸ್ವಂತ ಅಧ್ಯಯನದ ಫಲಿತಗಳು ಆಗಿವೆ . 

ಈ ನಡುವೆ ದೀಕ್ಷಿತ್ ರೈ ಎನ್ಮೂರು ಅವರ ಸಹಾಯದಿಂದಒಂದು ವರ್ಷದ Bhutagala Adbhuta Jagattu ಎಂಬ page ಆನ್ನೂ ತೆರದೆ
.ಅದೂ ಇಂದಿಗೆ 4000 like ಎಂದರೆ ಓದುಗರನ್ನು ಪಡೆಯಿತು
ಇದೆಲ್ಲ ಮುಖ ಪುಸ್ತಕ ಬಂಧುಗಳ ನಿರಂತರ ಪ್ರೋತ್ಸಾಹ ಕಾರಣವಾಗಿದೆ .ಆದರಿಂದ ಎಲ್ಲ ಸ್ನೇಹಿತರಿಗೂ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ

ನನ್ನ ಬ್ಲಾಗ್ http://laxmipras.blogspot.com
ನನ್ನ page https://www.facebook.com/pages/Bhutagala-Adbhuta-Jagattu/729560787088596?fref=photo

Tuesday 14 April 2015

ಸಾವಿರದೊಂದು ಗುರಿಯೆಡೆಗೆ:ತುಳುನಾಡ ದೈವಗಳು 179-ಸೇಮಿ ಕಲ್ಲ ಪಂಜುರ್ಲಿ (c)ಡಾ.ಲಕ್ಷ್ಮೀ ಜಿ ಪ್ರಸಾದ


                                                ಚಿತ್ರ ಕೃಪೆ :ಧರ್ಮ ದೈವ
ಹೆಸರಿನಲ್ಲಿ ಪಂಜುರ್ಲಿ ಎಂದು ಇದ್ದರೂ ಕ್ಷೇಮಕಲ್ಲ /ಸೇಮಿ ಕಲ್ಲ ಪಂಜುರ್ಲಿ, ಪಂಜುರ್ಲಿ ದೈವವಲ್ಲ .ಪಂಜುರ್ಲಿಯ ಸೇರಿಗೆ ದೈವ ಕೂಡ ಅಲ್ಲ
ಪ್ರಧಾನ ದೈವದ ಸೇರಿಗೆಯಾಗಿ ಅನೇಕ ದೈವಗಳಿಗೆ ಆರಾಧನೆ ಇರುತ್ತದೆ .ಸಾಮಾನ್ಯವಾಗಿ ಸೇರಿಗೆ ದೈವಗಳು ಪ್ರಧಾನ ದೈವದ ಆಗ್ರಹ ಅಥವಾ ಅನುಗ್ರಹ ಪಡೆದು ದೈವತ್ವ ಪಡೆದ ಶಕ್ತಿಗಳಾಗಿರುತ್ತವೆ
ಹೀಗೆ ಸತ್ಯನಾಪುರದ ಸಿರಿಯ ಆಗ್ರಹಕ್ಕೆ ತುತ್ತಾಗೆ ದೈವತ್ವ ಪಡೆದ ದೈವ ಕ್ಷೇಮಿಕಲ್ಲ ಪಂಜುರ್ಲಿ .ಸತ್ಯನಾಪುರದ ರಾಜ ಬೆರ್ಮ ಆಳ್ವನಿಗೆ ಹುಟ್ಟಿದ ಮಗು ಸಾಯುತ್ತದೆ. ಹೆಂಡತಿಯೂ ಸಾಯುತ್ತಾಳೆ. ಬೇರೆ ಸಂತಾನವಿಲ್ಲದ ವೃದ್ಧ ಅರಸ ಬೆರ್ಮ ಆಳ್ವನಿಗೆ ‘ಮುಂದೆ ತನ್ನ ರಾಜ್ಯಕ್ಕೆ ದಿಕ್ಕಿಲ್ಲ’ ಎಂದು ಚಿಂತೆಯಾಗಿ ದುಃಖಿಸುತ್ತಾನೆ. ಅವನ ಕಣ್ಣೀರು ಅವನ ಕುಲದೈವ ಲಂಕೆಲೋಕನಾಡಿನ ಬೆರ್ಮರ ಪಾದಕ್ಕೆ ಸಂಪಿಗೆ ಹೂವಿನ ರಾಶಿಯಾಗಿ ಬೀಳುತ್ತದೆ.

ಆಗ ಬೆರ್ಮೆರ್ ಬಡಬ್ರಾಹ್ಮಣನ ರೂಪ ಧರಿಸಿ, ಬೆರ್ಮ ಆಳ್ವನಲ್ಲಿಗೆ ಬಂದು ‘ಲಂಕೆಲೋಕನಾಡಿನ ಆದಿ ಆಲಡೆ, ಕಾಡು-ಪೊದೆ ಬಳ್ಳಿಯಿಂದ ಸುತ್ತುವರಿದು ಪಾಳು ಬಿದ್ದಿದೆ. ಅದರ ಜೀರ್ಣೋದ್ಧಾರ ಮಾಡಿದರೆ ನಿನ್ನ ಸಮಸ್ಯೆ ಸರಿಹೋಗುತ್ತದೆ’ ಎಂದು ಹೇಳುತ್ತಾನೆ. ಅಂತೆಯೇ ಬೆರ್ಮ ಆಳ್ವ ಹೋಗಿ ಲಂಕೆಲೋಕನಾಡಿನ ‘ಬೆರ್ಮೆರ’ ಪ್ರಾರ್ಥನೆಯನ್ನು ಮಾಡಿ ಕಾಡಿನಲ್ಲಿರುವ ಬೆರ್ಮೆರನ್ನು ತಂದು ಏಳದೆ ಗುಂಡ ಗುಡಿ ಕಟ್ಟಿಸುತ್ತೇನೆ ಎಂದು ಹರಿಕೆ ಹೇಳುತ್ತಾನೆ. ಆಗ ಪ್ರಸಾದರೂಪದಲ್ಲಿ ಸಿಕ್ಕ ಹಿಂಗಾರದ ಹಾಳೆಯ ಮೇಲಿನ ಗಂಧದ ಗುಳಿಗೆ ಹೆಣ್ಣುಮಗುವಾಗುತ್ತದೆ.
ಆ ಮಗುವನ್ನು ದೇವರ ವರವೆಂದು ಭಾವಿಸಿ ಬೆರ್ಮ ಆಳ್ವ ಆ ಮಗುವಿಗೆ ‘ಬಾಲೆಕ್ಕೆ ಸಿರಿ’ ಎಂದು ಹೆಸರಿಟ್ಟು ಸಾಕುತ್ತಾನೆ. ಮುಂದೆ ಬಸ್ರೂರು ಬತ್ತಕೇರಿ ಅರಮನೆಯ ಕಾಂತುಪೂಂಜರ ಜೊತೆ ಅವಳ ಮದುವೆಯಾಗುತ್ತದೆ. ಮುಂದೆ ಕಾಂತುಪೂಂಜ ಸೂಳೆ ಸಿದ್ದುವಿನ ಸಹವಾಸ ಮಾಡುತ್ತಾನೆ. ಸಿರಿ ಗರ್ಭಿಣಿಯಾಗುತ್ತಾಳೆ. ಅವಳ ಸೀಮಂತಕ್ಕೆ, ತೆಗೆದ ಸೀರೆಯನ್ನು ಸೂಳೆ ಸಿದ್ದು ಉಟ್ಟು ನೆರಿಗೆ ಹಾಳು ಮಾಡುತ್ತಾಳೆ. ಈ ಬಗ್ಗೆ ಬೆರ್ಮೆರ್ ಸಿರಿಗೆ ಸೂಚನೆ ನೀಡಿರುತ್ತಾರೆ.

 ಆದ್ದರಿಂದ ಆ ಸೀರೆಯನ್ನು ತಿರಸ್ಕರಿಸಿ ತನ್ನ ಅಜ್ಜ ತಂದ ಸೀರೆಯನ್ನು ಉಡುತ್ತಾಳೆ. ಎಲ್ಲರ ಎದುರು ತನ್ನ ಮರ್ಯಾದೆ ತೆಗೆದಳೆಂದು ಕಾಂತುಪೂಂಜ ಸಿರಿಯೊಡನೆ ಕೋಪಿಸುತ್ತಾನೆ. ಮುಂದೆ ಅವಳು ಮಗುವನ್ನು ಹೆತ್ತಾಗಲೂ ನೋಡಲು ಬರುವುದಿಲ್ಲ. ಬೆರ್ಮ ಆಳ್ವ ಸತ್ತಾಗಲೂ ಬರುವುದಿಲ್ಲ. ಕಾಂತುಪೂಂಜನ ಪಿತೂರಿಯಿಂದಾಗಿ ಬೆರ್ಮ ಆಳ್ವನ ಅರಮನೆ, ರಾಜ್ಯ ದಾಯಾದಿಗಳ ಪಾಲಾಗುತ್ತದೆ.
 ಸಿರಿ ತನ್ನ ಮಗು ಕುಮಾರ ಹಾಗೂ ಕೆಲಸದ ಹೆಂಗಸು ದಾರುವಿನೊಂದಿಗೆ ಬಸ್ರೂರು ಬತ್ತಕೇರಿ ಅರಮನೆಗೆ ಬಂದು ಬರ (ವಿಚ್ಛೇದ)ವನ್ನು ಕೇಳುತ್ತಾಳೆ. ಮುಂದೆ ಅರಮನೆ ಉರಿದು ಹೋಗುವಂತೆ ಶಾಪ ಕೊಟ್ಟು ಅಲ್ಲಿಂದ ದೇಶಾಂತರ ಹೋಗುತ್ತಾಳೆ
ಸಂಜೆ ಹೊತ್ತು ಕಂತುವುದರ ಒಳಗೆ ತನ್ನ ರಾಜ್ಯದ ಗದುಯನ್ನು ದಾಟಿ ಹೋಗಬೇಕೆಂದು ಕಾಂತು ಪೂಂಜ ಹೇಳುತ್ತಾನೆ .
ಅಂತೆಯೇ ದಾರುವಿನೊಂದಿಗೆ ತೊಟ್ಟಿಲ ಮಗುವನ್ನು ಹಿಡಿದುಕೊಂಡು ಬರುವಾಗ ದಾರಿಯಲ್ಲಿ ಗಾಳಿ ಕೊಂತ್ಯಮ್ಮ ದೇವರು ಸಿಗುತ್ತಾರೆ .
ಸಿರಿಗೆ ರಸ ಬಾಲೆ ಹಣ್ಣು ಹಾಲು ತಂದು ಕೊಡುತ್ತಾಳೆ .ಮತ್ತೆ ಅವಳಲ್ಲಿ ನನ್ನ ಮಗ ವೀರ ಭದ್ರ ಕುಮಾರ ಬರುವ ಮೊದಲು ಇಲ್ಲಿಂದ ಹೋಗು ಅವನು ಕಂಡರೆ ನಿನ್ನನ್ನು ಬಿಡಲಾರ ,ಅವನು ಸಿಕ್ಕರೆ ಅವನನ್ನು ನಿನ್ನ ಮಗನ ಹಾಗೆ ಭಾವಿಸಿ ಅವನ ತಪ್ಪನ್ನು ಕ್ಷಮಿಸಬೇಕು ಎಂದು ಹೇಳುತ್ತಾರೆ .ಆಯಿತು ಎಂದು ಹೇಳುತ್ತಾಳೆ ಸಿರಿ
ಅಲ್ಲಿಂದ ಮುಂದೆ ಹೋಗುವಾಗ ವೀರ ಭದ್ರ ಕುಮಾರ ಹಿಮ್ಬಾಲಿಸ್ಕೊಂದು ಬಂದು ಅಡ್ಡ ಕಟ್ಟುತ್ತಾನೆ .ಅವಳತಲೆ ಕೂದಲಿಗೆ ಕೈ ಹಾಕುತ್ತಾನೆ .ಆಗ


ಓ ಮುಟ್ಟಡ ಮುಟ್ಟಡ ಪಂಡೆರ್ ಬಾಲೆಕ್ಕೆ ಸಿರಿಯೇ
ಓ ಪನ್ನಲ ಪತ್ತಿನಕೇಂಡಿಜೆ ಪಂಡೆರ್ ಆರಾಂಡ ಆನಿಗಯ್ ಯೇ
ಓ ಒಲಿಪ್ಪಾಲ ಉದೆಟ್ ಲ ನೆದಿಪ್ಪಾಲ ಕಲ್ಲುಲ ಪಾದೆಲ ನೆಗೆಪ್ಪುಲಾಯೆ

ನನ್ನನ್ನು ಮುಟ್ಟ ಬೇಡ ಮುಟ್ಟ ಬೇಡ ಎಂದು ಸಿರಿ ಹೇಳುತ್ತಾಳೆ .ಅವಳ ಮಾತನ್ನು ಲಕ್ಷಿಸದೆ ಮುಂದುವರಿದ ಅವನಿಗೆ ಶಾಪ ಕೊಟ್ಟು ಹೊಳೆಯಲ್ಲಿ ಪಾದೆ ಕಲ್ಲಾಗುವಂತೆಮಾಡುತ್ತಾಳೆ .ಮುಂದೆ ಅವನ ತಾಯಿಗೆ ಕೊಟ್ಟ ಮಾತು ನೆನಪಾಗಿ ಆತನಿಗೆ ದೈವತ್ವ ನೀಡಿ ಕ್ಷೇಮ ಕಲ್ಲು ಪಂಜುರ್ಲಿ ಎಂಬ ಹೆಸರಿನಲ್ಲಿ ಆರಾಧನೆ ಪಡೆ ಎಂದು ಹೇಳುತ್ತಾಳೆ .

ಹೀಗೆ ಸಿರ್ಯ ಅನುಗ್ರಹದಿಂದ ದೈವತ್ವ ಪಡೆದ ವೀರ ಭದ್ರ ಕುಮಾರ ಕ್ಷೇಮ ಕಲ್ಲ ಪಂಜುರ್ಲಿ ದೈವವಾಗಿ ನೆಲೆ ನಿಲ್ಲುತ್ತಾನೆ .

Monday 13 April 2015

ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು :178 ದಾರಮ್ಮ ಬಲ್ಲಾಳ್ತಿ (c) ಡಾ.ಲಕ್ಷ್ಮೀ ಜಿ ಪ್ರಸಾದ


                            
ದಾರಮ್ಮ ಬಲ್ಲಾಳ್ತಿಯ ಅತಿ ಅಪರೂಪದ ಫೋಟೋ ಒದಗಿಸಿ ಕೊಟ್ಟ ಸುಕೇಶ್ ಬಿಲ್ಲವ ಇವರಿಗೆ ಋಣಿ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಮರ್ದಾಲ ಎಂಬ ಜೈನ ಬಲ್ಲಾಳರ ಬೀಡು ಇದೆ .
ಇಲ್ಲಿನ ಆರಾಧ್ಯ ದೈವ ಮರ್ದಾಲ ಧೂಮಾವತಿ ಮತ್ತು ಸೇರಿಗೆ ದೈವ ದಾರಮ್ಮ ಬಲ್ಲಾಳ್ತಿ ಬಗ್ಗೆ  ತುಳುನಾಡಿನ ದೈವಗಳು ಕೃತಿಯಲ್ಲಿ ಡಾ.ಬನ್ನಂಜೆ ಬಾಬು ಅಮೀನ್ ಅವರು ಮಾಹಿತಿ ನೀಡಿದ್ದಾರೆ. ಸುಮಾರು ನಾನ್ನೂರು ವರ್ಷಗಳ ಹಿಂದೆ ಇಲ್ಲಿ ನಾಲ್ಕು ಜನ ಅಣ್ಣ ತಮ್ಮಂದಿರು ಇದ್ದರು .ಈ ನಾಲ್ವರು ಬಲ್ಲಾಳರಿಗೆ ಒಬ್ಬಳೇ ಒಬ್ಬ ಮುದ್ದಿನ ತಂಗಿ ಇದ್ದಳು .
ಒಂದಿ ದಿನ ನಾಲ್ವರು ಬಲ್ಲಾಳರು ಅಡೂರಿಗೆ ಧೂಮಾವತಿ ಕೋಲ ನೋಡಲು ಹೋಗುತ್ತಾರೆ .ಅವರು ಹಿಂದೆ ಬರುವಾಗ ಅವರೊಂದಿಗೆ ಧೂಮಾವತಿ ದೈವ ಮರ್ದಾಲ ಬೀಡಿಗೆ ಬರುತ್ತದೆ .ತನಗೆ ಮೆಚ್ಚಿ ಕೊಟ್ಟು ಆರಾಧಿಸಬೇಕು ಎಂದು ಬಲ್ಲಾಲರಿಗೆ ಸೂಚಿಸುತ್ತದೆ .
ಅಣ್ಣ ತಮ್ಮಂದಿರು ಸಂತೋಷದಿಂದ ಮೆಚ್ಚಿ  ಸಿದ್ಧತೆಗೆ ತೊಡಗುತ್ತಾರೆ .ಮೆಚ್ಚಿಗೆ ಹೊಸ ಬತ್ತ ದಿನದ ಅರಳು ಆಗಬೇಕು .ಇದನ್ನು ಶುದ್ಧದಿಂದ ಮಾಡಲು ತಮ್ಮ ಮುದ್ದಿನ ತಂಗಿ ದಾರಮ್ಮ ನಿಗೆ ಹೇಳುತ್ತಾರೆ .
ಅಣ್ಣಂದಿರ ಮಾತಿನಂತೆ ದಾರಮ್ಮ ತಲೆಗೆ ಎಣ್ಣೆ ಹಚ್ಚ್ಚಿ ಸ್ನಾನ ಮಾಡಿ ಮಡಿ ಬಟ್ಟೆ ಉಟ್ಟು ಅರಳು ತಯಾರಿಸಲು ಸಿದ್ಧಳಾಗುತ್ತಾಳೆ.copy rights reserved (c) Dr.Laxmi g Prasad
ಓಲೆ ಉರಿಸಿ ಹೊಸ ಓಡು(ಮಣ್ಣಿನ ಬಾಣಲೆ ) ಇರಿಸುತ್ತಾಳೆ ಬಿಸಿಯಾದಾಗ ಬತ್ತ ಹಾಕಿ ಅರಳು ಮಾಡುತ್ತಾಳೆ.ಆಗ ಒಂದು ಬತ್ತ ಸಿಡಿದು ಅರಳಾಗಿ ಒಲೆಯ ಬದಿಯ ಕಲ್ಲಿನ ಮೇಲೆ ಬೀಳುತ್ತದೆ .ಆ ಹೊಸ ಬತ್ತದ ಅರಳಿನ ಪರಿಮಳಕ್ಕೆ ಸೋತು ತನ್ನ ವಯೋಸಹಜ ಚಪಲತೆಯಿಂದ ದಾರಮ್ಮ ಆ ಅರಳನ್ನು ಹೆಕ್ಕಿ ಬಾಯಿಗೆ ಹಾಕಿ ತಿನ್ನುತ್ತಾಳೆ .
ಇದನ್ನು ಮಾಯ ರೂಪದಲ್ಲಿದ್ದ ಧೂಮಾವತಿ ದೈವ ಗಮನಿಸುತ್ತದೆ . ತನಗೆ ಕೊಡುವ ಮೊದಲು ಅವಳು ಅರಳನ್ನು ತಿಂದದ್ದರಿಂದ  ಕೋಪಗೊಂಡ ಮರ್ದಾಲ ಧೂಮಾವತಿ ದೈವ ದಾರಮ್ಮ ಬಲ್ಲಾಲ್ದಿ ಯನ್ನು ಮಾಯ ಮಾಡುತ್ತಾಳೆ .
ಇದನ್ನು ತಿಳಿದ ಅಣ್ಣಂದಿರು ದುಃಖಿಸುತ್ತಾ ಧೂಮಾವತಿಯಲ್ಲಿ "ಅವಳು ನಮ್ಮ ಮರ್ದಾಲ ಬೀಡಿನ ಐಸಿರಿ ಅವಳನ್ನು ಮಾಯ ಮಾಡಿದೆಯಲ್ಲ ,ಇನ್ನಾರು ನಮಗೆ ಗತಿ ಎಂದು ಪ್ರಾರ್ಥಿಸಲು ,ಪ್ರಸನ್ನ ಗೊಂಡ ದೈವ ಅವಳನ್ನು ನನ್ನ ಸೇರಿಗೆಗೆ ಸಂದಾಯ ಮಾಡುತ್ತೇನೆ ನನಗೆ ಕೋಲ ನೇಮ ನೆರಿ ಕೊಟ್ಟು  ಆರಾಧನೆಮಾಡುವಾಗ ಜೊತೆಗೆ ಅವಳಿಗೂ ಆರಾಧನೆ ಆಗುವಂತೆ ಮಾಡುತ್ತೇನೆ "ಎಂದು ಹೇಳಿ ಅನುಗ್ರಹ ಮಾಡಿತು .copy rights reserved (c) Dr.Laxmi g Prasad 
ಹಾಗೆ ಮುಂದೆ ದಾರಮ್ಮ ಬಲ್ಲಾಳ್ತಿ ಧೂಮಾವತಿಯ ಶ್ರೀಗೆ ದೈವವಾಗಿ ಆರಾಧನೆ ಹೊಂದುತ್ತಾಳೆ .
"ದೈವಕ್ಕೆ ಕೋಲ ಕೊಡುವ ಸಂದರ್ಭದಲ್ಲಿ ದಾರಮ್ಮ ಬಲ್ಲಾಲ್ತಿಗೆ ಪಟ್ಟೆ ಸೀರೆ ಉಟ್ಟು ದರ್ಶನಾವೇಶ ನಡೆಸುವುದು ,ಮರ್ದಾಲ ಧೂಮಾವತಿ ಯ ಜೊತೆಗೆ ದರ್ಶನ ಬರಿಸುವುದು ಕ್ರಮ ಅದೇ ರೀತಿ ದಾರಮ್ಮ ಬಲ್ಲಾಳ್ತಿಯ ದರ್ಶನಾವೇಶದಿನದ ಬಿಡುಗಡೆಯಾಗುವ ಮೊದಲು ಹೆಣ್ಣು ಸಂತತಿಗೆ ಪ್ರಸಾದ ಕೊಡುವುದು ಸಂಪ್ರದಾಯ ಎಂದು "ಡಾ||ಬನ್ನಂಜೆ ಬಾಬು ಅಮೀನ್ ಅವರು ಹೇಳಿದ್ದಾರೆ .copy rights reserved (c) Dr.Laxmi g Prasad 
ಕೋಲದ ಸಮಯದಲ್ಲಿ ದಾರಮ್ಮ ಬಲ್ಲಾಳ್ತಿಯ ಭೂತ ಕಟ್ಟುವವರು ಪಟ್ಟೆ ಸೀರೆ ಉಟ್ಟು ಸ್ತ್ರೀ  ಸಹಜ ಉಡುಗೆಯನ್ನು ಧರಿಸುತ್ತಾರೆ ."ಪರಿವಾರ ದೈವಗಳ ಕೋಲದ ನಂತರ ಮರ್ದಾಲ ಧೂಮಾವತಿ /ಜುಮಾದಿ ಮತ್ತು ದಾರಮ್ಮ ಬಲ್ಲಾಳ್ತಿ ಗಳಿಗೆ ಒಟ್ಟಿಗೆ ಕೋಲ ಕೊಟ್ಟು ಆರಾಧಿಸುತ್ತಾರೆ "ಎಂದು ಬನ್ನಂಜೆ ಬಾಬು ಅಮೀನ್ ಅವರು ಹೇಳಿದ್ದಾರೆ .
ತುಳುನಾಡಿನ ಭೂತಾರಾಧನೆ ಹಲವು ಕೌತುಕಗಳ ಒಡಲು.ಇದನ್ನು ಸರಿಯಾಗಿ ಅರ್ಥೈಸಬೇಕಾದರೆ ದೀರ್ಘ ಕಾಲದ ವಿಸ್ತೃತ ಅಧ್ಯಯನದ ಅಗತ್ಯವಿದೆ .ಇಲ್ಲಿ ಯಾರು ಯಾಕೆ ಹೇಗೆ ದೈವತ್ವ ಪಡೆಯುತ್ತಾರೆ ಎಂಬುದನ್ನು ಹೇಳಲು ನಿಶ್ಚಿತವಾದ ನಿಯಮ ಎಂಬುದಿಲ್ಲ .ಹಾಗಿದ್ದರೂ ದೈವಗಳ ಅನುಗ್ರಹಕ್ಕೆ ಪಾತ್ರರಾದವರೂ ,ಕೋಪಕ್ಕೆ ತುತ್ತಾದವರೂ ಅದೇ ದೈವದ ಸೇರಿಗೆ ಸೇರಿ ದೈವತ್ವ ಪಡೆದು ಆರಾಧಿಸಲ್ಪಡುವ ವಿದ್ಯಮಾನ ತುಳುನಾಡಿನ ಅಲ್ಲಲ್ಲಿ ಕಂಡು ಬರುತ್ತದೆ .ಅಂತೆಯೇ ಇಲ್ಲಿ ಕೂಡ ದಾರಮ್ಮ ಧೂಮಾವತಿ ದೈವದ ಕೋಪಕ್ಕೆ ತುತ್ತಾಗಿ ಮಾಯವಾಗಿ ನಂತರ ದೈವತ್ವ ಪಡೆದು ಆರಾಧಿಸಲ್ಪಡುತ್ತಿರುವ ಸಾಧ್ಯತೆ ಇದೆ .copy rights reserved (c) Dr.Laxmi g Prasad 
ವಿಧಿ ನಿಷೇಧಗಳು ಆದಿ ಮಾನವನ ಅಲಿಖಿತ ಶಾಸನಗಳಗಿದ್ದವು .ಹಾಗೆಯೇ ಅಲೌಕಿಕ ಕಲ್ಪನೆಯನ್ನು ಹೊರತು ಪಡಿಸಿ ವಾಸ್ತವಿಕ ನೆಲೆಯಲ್ಲಿ ಆಲೋಚಿಸುವಾಗ "ದೈವಕ್ಕೆ ಅರ್ಪಿಸುವ ಮೊದಲು ಅರಳನ್ನು ತಿನ್ನಬಾರದು ಎಂಬ ವಿಧಿಯನ್ನು ಮೀರಿದ ದಾರಮ್ಮ ನಿಗೆ ಶಿಕ್ಷೆಯಾಗಿದ್ದು ಅವಳು ದುರಂತವನ್ನಪ್ಪಿರುವ ಸಾಧ್ಯತೆ ಇದೆ .ದುರಂತ ಮತ್ತು ದೈವತ್ವ tulu ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಅಂಶವೇ ಆಗಿರುವುದರಿಂದ ,ದುರಂತವನ್ನಪ್ಪಿದ ದಾರಮ್ಮ ದೈವತ್ವ ಪಡೆದಿರುವ ಸಾಧ್ಯತೆ ಇದೆ ,ಇದಕ್ಕೆ ಧೂ ಮಾವತಿ ದೈವದ ಕೋಪ ಮತ್ತು ಮಾಯಾ ಮಾಡಿದ ಕಥಾನಕ ಸೇರಿರಬಹುದು "ಎಂದು ಹೇಳಬಹುದು .
ಪುತ್ತೂರಿನ ಮರ್ದಾಲ ಬೀಡಿನ ದಾರಮ್ಮ ಬಲ್ಲಾಲ್ತಿಗೆ ಕಾರ್ಕಳ ,ಉಡುಪಿcopy rights reserved (c) Dr.Laxmi g Prasad 
ಸುತ್ತ ಮುತ್ತ ಕೂಡ ಆರಾಧನೆ ಇರುವುದು ಕುತೂಹಲಕರ ವಿಚಾರವಾಗಿದೆ .ಮರ್ದಾಲ ಬೀಡಿನಲ್ಲಿ ಕನ್ನಡಿಗ ಎಂಬ ಒಂದು ಅಪರೂಪದ ದೈವಕ್ಕೆ ಕೂಡ ಆರಾಧನೆ ಇದೆ ಈ ಬಗ್ಗೆ ಮಾಹಿತಿ ಸಂಗ್ರಹಿಸಲು ಸಾಧ್ಯವಾಗಿಲ್ಲ
ಆಧಾರ ಗ್ರಂಥ
ತುಳುನಾಡಿನ ದೈವಗಳು -ಡಾ||ಬನ್ನಂಜೆ ಬಾಬು ಅಮೀನ್