Sunday 22 October 2023

ಕರಾವಳಿಯ ಸಾವಿರದೊಂದು ದೈವಗಳು : ಮರ್ಲು ಮಾಣಿ

ಮರ್ಲ  ಮಾಣಿ - ಡಾ.ಲಕ್ಷ್ಮೀ ಜಿ ಪ್ರಸಾದ್.ಕರಾವಳಿಯ ಸಾವಿರದೊಂದು ದೈವಗಳು ,mobile - 9480516684 


copy rights reserved (c) ಡಾ.ಲಕ್ಷ್ಮೀ ಜಿ ಪ್ರಸಾದ   ಸುಳ್ಯದ ಎಡಮಂಗಲದಲ್ಲಿ ಉಳ್ಳಾಕುಲುಗಳೊಂದಿಗೆ ಆರಾಧಿಸಲ್ಪಡುವ ದೈವವಿದು. ಹೆಸರೇ ಸೂಚಿಸುವಂತೆ ಈ ದೈವ ಮೂಲತಃ ಬ್ರಾಹ್ಮಣ ಮಾಣಿಯಾಗಿದೆ. ಉಳ್ಳಾಕುಲು ಮರ್ಲಾಣೆ ಎಂಬ ಪ್ರದೇಶಕ್ಕೆ ಬರುವಾಗ ಅಲ್ಲಿ ಬ್ರಾಹ್ಮಣ ಅರ್ಚಕನೋರ್ವ ಪಂಚಕುರುವೆ ಹಿಡಿದುಕೊಂಡು ದೇವರಿಗೆ ಹೂ ಕೊಯ್ಯುತ್ತಿರುತ್ತಾನೆ. ಆಗ ಅಲ್ಲಿಗೆ ಬಂದ ಉಳ್ಳಾಕುಲು ಎಡಮಂಗಲ ದೇವಸ್ಥಾನಕ್ಕೆ ಹೋಗುವ ದಾರಿಯನ್ನು ಕೇಳಿದಾಗಈ ಬ್ರಾಹ್ಮಣ ಹುಡುಗ ತಪ್ಪು ದಾರಿಯನ್ನು ಹೇಳುತ್ತಾನೆ. ಇದು ತಿಳಿದ ಉಳ್ಳಾಕುಲುಗಳು ಕೋಪಿಸಿಕೊಂಡು ಅವನನ್ನು ಮಾಯ ಮಾಡುತ್ತಾರೆ. ಆಗ ತಪ್ಪಿಗೆ ಕ್ಷಮೆ ಯಾಚಿಸುತ್ತಾನೆ ಆ ಅರ್ಚಕ.copy rights reserved (c) ಡಾ.ಲಕ್ಷ್ಮೀ ಜಿ ಪ್ರಸಾದ ಆಗ ಉಳ್ಳಾಕುಲು ಅವನನ್ನು ತನ್ನ ಸೇರಿಗೆಯ ದೈವವಾಗಿ ಸೇರಿಸಿಕೊಳ್ಳುತ್ತಾರೆ. ಆತ ಮರ್ಲಾಣೆಯ ಮಾಣಿ ಎಂಬ ಹೆಸರಿನಿಂದ ಆರಾಧಿಸಲ್ಪಡುತ್ತಾನೆ. ಕಾಲಾಂತರದಲ್ಲಿ ಮರ್ಲಾಣೆಯ ಮಾಣಿ ಎಂಬುದು ಮರ್ಲು ಮಾಣಿ ಎಂದು ಅಪಭ್ರಂಶಗೊಂಡಿದೆ. ಈತನ ಬೆನ್ನಿಗೆ ಪಂಚಕುರುವೆ ನೇತು ಹಾಕುತ್ತಾರೆ. ಕೈಯಲ್ಲಿ ತಾಳೆಗರಿಯ ಕೊಡೆ ಹಾಗೂ ಕಬ್ಬಿನ ಜಲ್ಲೆಯನ್ನು ಈ ದೈವ ಹಿಡಿದಿರುತ್ತದೆ.
copy rights reserved (c) ಡಾ.ಲಕ್ಷ್ಮೀ ಜಿ ಪ್ರಸಾದಹಿಂದಿನ ಕಾಲದಲ್ಲಿ ತುಂಡರಸರು ತಮ್ಮ ಸುತ್ತ ಮುತ್ತಲಿನ ಇತರರ ವ್ಯಾಪ್ತಿಯಲ್ಲಿರುವ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿದ್ದರು .ಅಂತೆಯೇ ಮತಾಂಧ ಅರಸರು ಇತರ ಧರ್ಮದವರ ದೇವಾಲಯಗಳನ್ನು ಕೊಳ್ಳೆ ಹೊಡೆದು ನಾಶ ಮಾಡುತ್ತಿದ್ದರು .
ಹಾಗಾಗಿ ವಾಸ್ತವದಲ್ಲಿ ದೇವಸ್ಥಾನವನ್ನು ಕೊಳ್ಳೆ ಹೊಡೆಯಲು ಬಂದ ತುಂಡರಸ ಅಥವಾ ಪಾಳೆಗಾರರ ದಾರಿ ತಪ್ಪಿಸಿ ಈತ ದೇವಸ್ಥಾನದ ಸಂಪತ್ತನ್ನು ರಕ್ಷಣೆ ಮಾಡಿರ ಬಹುದು copy rights reserved (c) ಡಾ.ಲಕ್ಷ್ಮೀ ಜಿ ಪ್ರಸಾದ.ಇದು ಗೊತ್ತಾಗಿ ಮುಂದೆ ಆ ಪಾಳೆಗಾರ ಅಥವಾ ತುಂಡರಸ ಈತನನ್ನು ದುರಂತಕ್ಕೀಡು ಮಾಡಿರ ಬಹುದು .ಕಾಲಾಂತರದಲ್ಲಿ ಈತ ನಿಗೆ ಉಲ್ಲಾಕುಳು ಜೊತೆ ಆರಾಧನೆ ಆರಂಭವಾಗಿರ ಬಹುದು .
ಕರಾವಳಿಯ ಸಾವಿರದೊಂದು ದೈವಗಳು ಕೃತಿಯ ಆಯ್ದ ಭಾಗ 

Wednesday 18 October 2023

ಮಾಪುಳೆ ಮಾಪುಳ್ಚಿ ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್

 

ಮುಸ್ಲಿಂ ಮೂಲದ ಮಾಪುಳೆ ಮಾಪುಳ್ಚಿ ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್

ಕರಾವಳಿಯ ಸಾವಿರದೊಂದು ದೈವಗಳು ಕೃತಿಯ ಆಯ್ದ ಭಾಗ 



ತುಳುನಾಡಿನಲ್ಲಿ ಆರಾಧನೆ ಪಡೆಯುವ ದೈವಗಳೆಷ್ಟು?ಈ ಪ್ರಶ್ನೆಗೆ ಉತ್ತರಿಸುವುದು ಬಹಳ ಕಷ್ಟ ಯಾಕೆಂದರೆ ಎಲ್ಲ ದೈವಗಳ ಹೆಸರು ಕೂಡ ಇನ್ನು ಸಂಗ್ರಹವಾಗಿಲ್ಲ ,ನಾನು 1253  ದೈವಗಳ ಮಾಹಿತಿ ಹಾಗೂ 2360 ದೈವಗಳ ಹೆಸರನ್ನು ಅಧ್ಯಯನ ಮಾಡಿ ಕರಾವಳಿಯ ಸಾವಿರದೊಂದು ದೈವಗಳು ಕೃತಿಯಲ್ಲಿ ಬರೆದಿದ್ದೇನೆ.

 ,ಆದರೆ ಇದಾದ ನಂತರ ಕೂಡ  ಬ್ರಹ್ಮನಂದಾರ್ ಬೊಳ್ಳಿ‌ಮಾಣಿಗ   ಮೊದಲಾದ ಅನೇಕ ಹೆಸರುಗಳು ಸಿಕ್ಕಿವೆ ,

ಈ ಹಿಂದೆ ಕುಂಬಳಚ್ಚೇರಿ(ಉತ್ತರ ಕೊಡಗು ಜಿಲ್ಲೆ )ಯಲ್ಲಿ ಆರಾಧನೆ ಪಡೆಯುವ ಮಾಪುಳೆ ಮಾಪುಳ್ತಿ ದೈವಗಳ ಬಗ್ಗೆ ತಿಳಿಸಿದ್ದೆ .
ಇಂದು ಇದೇ ಹೆಸರಿನಲ್ಲಿ ಇನ್ನು ಎರಡು ದೈವತಗಳಿಗೆ ಆರಾಧನೆ ಇರುವ ಬಗ್ಗೆ ಶ್ರೀಯುತ ಶಿವರಾಮ ಭಟ್ ಅವರು ತಿಳಿಸಿದರು .
ಸವಣೂರು ನಲ್ಲಿ ಈ ದೈವಗಳ ಆರಾಧನೆ ಶಿವರಾಮ ಭಟ್ಟರ ಮನೆಯಲ್ಲಿ ನಡೆಯುತ್ತದೆ .ಮಾಪುಳೆ ಮಾಪುಲ್ತಿಯರಿಗೆ ಒಂದು ಕಲ್ಲು ಹಾಕಿ ಆರಾಧಿಸುತ್ತಾರೆ.(C).ಡಾ.ಲಕ್ಷ್ಮೀ ಜಿ ಪ್ರಸಾದ
ಅಲ್ಲಿ ಬಲ್ರಾಂಡಿ ಎಂಬ ಪ್ರಧಾನ ದೈವಕ್ಕೆ ಆರಾಧನೆ ಇದೆ.ಈ ದೈವ ಘಟ್ಟದಿಂದ ಇಳಿದು ಬರುವಾಗ ಹಲಸಿನ ಹಣ್ಣನ್ನು ಒಂದು ಮುಸ್ಲಿ ದಂಪತಿಗಳು ಕದಿಯುತ್ತಾರೆ.ಆಗ ದೈವದ ಆಗ್ರಹಕ್ಕೆ ತುತ್ತಾಗಿ ಅವರು ಕಲ್ಲಾಗಿ ಮಾಯವಾಗುತ್ತಾರೆ ನಂತರ ಅವರು ಅಲ್ಲಿ ಸೇರಿಗೆ ದೈವಗಳಾಗಿ ಮಾಪುಳೆ ಮಾಪುಳ್ಚಿ ಹೆಸರಿನಲ್ಲಿ ಆರಾಧನೆ ಪಡೆಯುತ್ತಾರೆ .
ವಿಧಿ ನಿಷೇಧಗಳು ಆದಿ ಮಾನವನ ಅಲಿಖಿತ ಶಾಸನಗಳು.ಇವನ್ನು ಮೀರಿದವರಿಗೆ ಶಿಕ್ಷೆ ನಿಶ್ಚಿತಸಾಮಾನ್ಯವಾಗಿ ನಮ್ಮಲ್ಲಿ ದೈವಕ್ಕೆ ಕುಡಿ ಕಟ್ಟಿ ಇಟ್ಟ ಹಣ್ಣನ್ನು ಕದಿಯಬಾರದು ಎಂಬ ನಂಬಿಕೆ ಇದೆ   ಅಂತೆಯೇ ಇಲ್ಲಿ ನಿಷೇಧವನ್ನು ಮೀರಿದ ವ್ಯಕ್ತಿಗಳು ದುರಂತವನ್ನಪ್ಪಿರಬೇಕು .ದುರಂತ ಮತ್ತು ದೈವತ್ವ ತುಳು ಸಂಸ್ಕೃತಿಯಲ್ಲಿ ಹಾಸುಹೊಕ್ಕಾದ ವಿಚಾರ ಅಂತೆಯೇ ಈ ಮುಸ್ಲಿಂ ದಂಪತಿಗಳು ದುರಂತವನ್ನಪ್ಪಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾರೆ.ದೈವದ ಅನುಗ್ರಹಕ್ಕೆ ಪಾತ್ರರಾದವರು ದೈವ ದೇವಸ್ಥಾನಗಳನ್ನು ಕಟ್ಟಿಸಿದವರು ಇಲ್ಲಿ ದೈವತ್ವ ಪಡೆದು ಆರಾಧಿಸಲ್ಪಡುವುದು ಸಾಮಾನ್ಯ ವಿಚಾರ ಅಂತೆಯೇ ದೈವದ ಆಗ್ರಹಕ್ಕೆ ಸಿಕ್ಕಿ ದುರಂತವನ್ನಪ್ಪಿದವರೂ ಇಲ್ಲಿ ಅದೇ ದೈವದ ಸೇರಿಗೆ ದೈವಗಳಾಗಿ ಆರಾಧನೆ ಪಡೆಯವುದು ತುಳು ಸಂಸ್ಕೃತಿಯ ಅನನ್ಯತೆ .ಇಲ್ಲಿ ಇವರು ದೈವಗಳಾಗುವ ಮೊದಲು ಏನಾಗಿದ್ದರು ಯಾರಾಗಿದ್ದರು ?

ಎಂಬುದು ಮುಖ್ಯವಾಗುವುದೇ ಇಲ್ಲ ದೈವತ್ವ ಪಡೆದ ನಂತರ ಅವರೆಲ್ಲ ನಮ್ಮನ್ನು ಕಾಯುವ ಶಕ್ತಿಗಳು ಎಲ್ಲರಿಗೂ ಒಂದೇ ರೀತಿಯ ಭಕ್ತಿಯ ನೆಲೆ ಇದು ತುಳು ಸಂಸ್ಕೃತಿಯ ಔನ್ನತ್ಯದ ಪ್ರತೀಕ (c)ಡಾ.ಲಕ್ಷ್ಮೀ ಜಿ ಪ್ರಸಾದ
ಮಾಹಿತಿ ನೀಡಿದ ಶಿವರಾಮ ಭಟ್ ಹಾಗೂ ಮಾಹಿತಿ ಸಂಗ್ರಹದಲ್ಲಿ ಸಹಾಯ ಮಾಡಿದ ಪದ್ಮನಾಭ ಆಚಾರ್ಯ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು

Tuesday 17 October 2023

ಬಾಲೆ ಮಧುರಗೆ ಮದಿಮಾಲ್

 ಬಾಲೆ ಮಧುರಗೆ ಮದಿಮಾಲ್ : ಪಾಡ್ದನ ಹಾಡಿದವರು ಶಾರದಾ ಜಿ ಬಂಗೇರ

ಸಂಗ್ರಹ,ಲಿಪ್ಯಂತರ ಅನುವಾದ ಮತ್ತು ಪ್ರಕಟಣೆ.ಡಾ.ಲಕ್ಷ್ಮೀ ಜಿ ಪ್ರಸಾದ್ 

ಮಧುರಗೆ ಮದುಮಗಳು


ಮದುವೆಗಿಂತ ಮೊದಲು ಮೈನೆರೆದ ಹೆಣ್ಣು ಮಕ್ಕಳನ್ನು ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿಗೆ ಬಿಡುತ್ತಿದ್ದ ವಿಚಾರ ದೇಯಿ ಬೈದೆತಿ ಪಾಡ್ದನದಲ್ಲಿದೆ. ಅಂತಹ ಪದ್ಧತಿಯ ಕುರಿತು ರಚಿಸಲ್ಪಟ್ಟ ಪಾಡ್ದನವಿದು. ಏಳು ಜನ ಅಕ್ಕ ತಂಗಿಯರಲ್ಲಿ ಮಧುರಗೆ ಹಿರಿಯವಳು. ಆರು ಜನ ತಂಗಿಯರಿಗೆ ಚಿಕ್ಕಂದಿನಲ್ಲಿಯೇ ಮದುವೆಯಾಗುತ್ತದೆ. ಮಧುರಗೆ ಮದುವೆಯಾಗದೆ ಉಳಿದಾಗ ಆರು ಜನ ತಂಗಿಯರು ಹಾಗೂ ಮನೆ ಮಂದಿ ಒಟ್ಟಾಗಿ ಚರ್ಚಿಸಿ “ಅವಳ ಕಣ್ಣು ಕಟ್ಟಿ ಕಾಡಿಗೆ ಬಿಡಬೇಕು” ಎಂದು ನಿಶ್ಚಯಿಸುತ್ತಾರೆ. ದೊಡ್ಡಪ್ಪನ ಮಗನಿಗೆ ನೂಲ ಮದುವೆ(ಉಪನಯನ) ಎಂದು ಹೇಳಿ ಅವಳನ್ನು ಅಲಂಕರಿಸಿ ಕರೆದುಕೊಂಡು ಹೋಗುವಾಗ ಕಾಡಿನಲ್ಲಿ ಬಿಟ್ಟು ತಂದೆ ಹಿಂದಿರುಗುತ್ತಾರೆ. ಅವಳ ತಾಯಿ ‘ತನ್ನ ಮಗಳನ್ನು ಒಂದು ನೆಲೆಗೆ ಮುಟ್ಟಿಸುವಂತೆ’ ದೈವಗಳಲ್ಲಿ ಪ್ರಾರ್ಥಿಸುತ್ತಾಳೆ.© ಡಾ.ಲಕ್ಷ್ಮೀ ಜಿ ಪ್ರಸಾದ್

ಜುಮಾದಿ ದೈವವು ಮೂರ್ತೆ ತೆಗೆಯುವ ಬೈದ್ಯನ ರೂಪದಲ್ಲಿ ಬಂದು ಅವಳನ್ನು ಕರೆದೊಯ್ದು ಕದ್ರಿಯ ಬಂಗೇರ ಅರಸನಿಗೆ ಒಪ್ಪಿಸುತ್ತದೆ. ಆತ ಅವಳನ್ನು ಮದುವೆಯಾಗುತ್ತಾನೆ. ಇಲ್ಲಿ ಮಧುರಗೆಯ ಕಥೆ ಸುಖಾಂತವಾಗಿದೆಯಾದರೂ ಮದುವೆಯಾಗದ ಹೆಣ್ಣು ಮಕ್ಕಳನ್ನು ಕಾಡಿನಲ್ಲಿ ಕೈಕಾಲು ಕಟ್ಟಿ, ಕಣ್ಣಿಗೆ ಬಟ್ಟೆ ಕಟ್ಟಿ ಬಿಡುತ್ತಿದ್ದ ಅನಿಷ್ಟ ಪದ್ಧತಿಯ ಕುರಿತು ತಿಳಿಸುತ್ತದೆ. ವಾಸ್ತವಿಕ ನೆಲೆಯಲ್ಲಿ ಹೇಳುವುದಾದರೆ ಕಾಡಿನ ದಾರಿಯಲ್ಲಿ ಬಂದ ಯಾರೋ ಕರುಣಾಳು ವ್ಯಕ್ತಿಗಳು ಅವಳನ್ನು ಕರೆದುಕೊಂಡು ಹೋಗಿ ಒಳ್ಳೆಯ ವರನನ್ನು ಹುಡುಕಿ ಮದುವೆ ಮಾಡಿಸಿರಬಹುದು. ಕಾಲಾಂತರದಲ್ಲಿ ಜುಮಾದಿಯ ಮಹಿಮೆ ಸೇರಿರಬಹುದು.© ಡಾ.ಲಕ್ಷ್ಮೀ ಜಿ‌ ಪ್ರಸಾದ್



ಭಾರತ ದೇಶದಾದ್ಯಂತ ಪ್ರಚಲಿತವಿದ್ದ ಸತಿ ಪದ್ಧತಿಯ ಬಗ್ಗೆ ತುಳು ಪಾಡ್ದನಗಳು ಮೌನ ತಾಳಿವೆ. ಇದರಿಂದ ಸತಿಪದ್ಧತಿ ತುಳುನಾಡಿನಲ್ಲಿ ಅಷ್ಟಾಗಿ ಪ್ರಚಲಿತವಿರಲಿಲ್ಲ. ಇಂಥದೊಂದು ಅನಿಷ್ಟ ಪದ್ಧತಿ ತುಳುನಾಡಿನಲ್ಲಿ ಇರಲಿಲ್ಲ ಎಂದು ಹೇಳಿಕೊಳ್ಳಬಹುದಾದರೂ, ಅದಕ್ಕಿಂತಲೂ ಕ್ರೂರವಾದ ಮದುವೆಯಾಗದ ಹೆಣ್ಣು ಮಕ್ಕಳನ್ನು ಬೆತ್ತಲಾಗಿಸಿ ಕಣ್ಣಿಗೆ ಬಟ್ಟೆ ಕಟ್ಟಿ ಕೈಕಾಲು ಕಟ್ಟಿ ಕಾಡಿನಲ್ಲಿ ಬಿಡುತ್ತಿದ್ದ ಅನಿಷ್ಟ ಪದ್ಧತಿ ತುಳುನಾಡಿನಲ್ಲಿ ಪ್ರಚಲಿತವಿತ್ತು ಎನ್ನುವುದಕ್ಕೆ ಈ ಪಾಡ್ದನ ಸಾಕ್ಷಿಯಾಗಿದೆ.© ಡಾ.ಲಕ್ಷ್ಮೀ ಜಿ ಪ್ರಸಾದ್



ಡೆನ್ನಾರ ಡೆನ್ನಾ ಡೆನ್ನಾನಾ ಓಯೇಯೇ ಡೆನ್ನಾನಾ

ಕೊಂಟಾಡದ ಬೀಡಿನಲ್ಲಿ ಇದ್ದಾರೆ

ಕೋಚಣ್ಣ ಆಳ್ವರು ಇದ್ದಾರೆ

ಅವರಿಗೆ ಮೋಹದ ಪ್ರೀತಿಯ ಮಡದಿ ಕುಂತ್ಯಮ್ಮ ದೈಯಾರು

ಡೆನ್ನಾ ಡೆನ್ನಾನಾ ಓಯೋಯೋ ಡೆನ್ನಾನ ಡೆನ್ನಾ ಡೆನ್ನಾ ಡೆನ್ನಾನಯೇ

ಅವರಿಗೆ ಹುಟ್ಟಿದ ಬೆಳೆಯುವ ಹೆಣ್ಣು ಮಕ್ಕಳು

ಏಳು ಜನ ಹೆಣ್ಣು ಮಕ್ಕಳು

ಚಿಕ್ಕ ಚಿಕ್ಕ ಹುಡುಗಿಯರನ್ನು ದೊಡ್ಡ ದೊಡ್ಡ ರಾಜ್ಯಕ್ಕೆ 

ಅರಸು ಬಲ್ಲಾಳರಿಗೆ ಕೊಟ್ಟಿದ್ದಾರೆ

ಎಲ್ಲರಿಂದ ಹಿರಿಯವಳು ಮಧುರೆಗೆ ಮದುಮಗಳು

ಉಳಿದುಕೊಂಡು ಉಳಿದು ಬರುವಾಗ

ಯಾರಮ್ಮ ಮದುಮಗಳೆ ಕೇಳಿದೆಯ

ಕೊಂತ್ಯಮ್ಮ ದೇವಿಯನ್ನು ಕರೆದರು

ನಮ್ಮ ಸೋದರಳಿಯ ಇದ್ದಾನೆ ಅವನಾದರೆ

ಕದಿರೆಯ ಬೀಡಿನಲ್ಲಿ ಬಂಗೇರ ಅರಸು

ಅವನಲ್ಲಿ ಒಂದು ಮಾತು ಕೇಳು 

 ಮಗಳನ್ನು ಮದುವೆ ಆಗುವನೋ

ಕೋಚಣ್ಣ ಆಳ್ವರು ಹೇಳಿದರು 

 ಆ ದಿನ ಹೋಗಿ ಮರುದಿನ ಬಂದಾಗ

ಬೆಳಗಿನ ಜಾವದಲ್ಲಿ ಏಳುವರು

 ಕುಂತ್ಯಮ್ಮ ಮಡದಿ ಹೇಳುವರು

ಯಾರಯ್ಯ ಒಡೆಯ ಯಾರಯ್ಯ ಮದುಮಗ

ನಾನು ಹೋಗುವೆ ನಾನು ಬಂಗೇರನ

ಹತ್ತಿರ ಬಂದು ಮಾತು ಕೇಳುವೆಂದು ಹೇಳಿದರು

ಬೇಗನೆ ಹೋಗಿ ಬೇಗ ಬಾ 

 ಎಂದು ಕೋಚಣ್ಣ ಆಳ್ವರು ಹೇಳಿದರು

ಯಾರಮ್ಮ ಮಧುರಗ ಮಧುರಗ ಕೇಳಿದೆಯಾ

ನಾನು ಒಂದು ದೇವಸ್ಥಾನಕ್ಕೆ ಹೋಗುವೆ © ಡಾ.ಲಕ್ಷ್ಮೀ ಜಿ ಪ್ರಸಾದ್ 

ಕದಿರೆಯ ದೇವಸ್ಥಾನಕ್ಕೆ ಹೋಗುವೆ

ಎಂದು ಕದಿರೆಯ ಬೀಡಿಗೆ ಹೋಗುವಾಗ

ಡೆನ್ನಾನಾ ಡೆನ್ನಾನಾ ಡೆನ್ನ ಡೆನ್ನ ಡೆನ್ನಾನಾ

ಯಾರದು ಕೆಲಸದವರೇ ಕರೆಯುವನು

ಅದು ಯಾರು ಬರುವುದೆಂದು ನೋಡಿ ಎಂದು

ಏಳೇಳು ಮಾಳಿಗೆಯ ಉಪ್ಪರಿಗೆಯಲ್ಲಿ ಕುಳಿತು

ಬಂಗೇರ ಅರಸು ನೋಡುತ್ತಾರೆ

 ಯಾರದು ಬರುವುದು ನನ್ನ ಅತ್ತೆ

ಸೋದರ ಮಾವನ ಮಡದಿ ಎಂದು ಹೇಳಿದನು

ಕವುಚಿ ಹಾಕಿದ ಕಲ್ಲಿನ ಮರಿಗೆಯನ್ನ

ಮೊಗಚಿ ಹಾಕಿ ತಂದರು 

 ಆಕಾಶದ ಏತ ಕೊಡಿಸಿದರು

ಪಾತಾಳದಿಂದ ಹನಿ ನೀರು ತೆಗೆಸಿದರು

ತಾಮ್ರದ ಸೌಟು ನೀರು ತರಿಸಿದರು

ಕದಿರೆಯ ಬಂಗೇರ ಅರಸುಗಳು

ಯಾರಯ್ಯ ಅತ್ತೆಯವರೇ ಅತ್ತೆಯವರೇ ಬಟ್ಟೆಯಲ್ಲಿ

ಮುಖದ ಬೆವರು ಒರಸಿರಿ ಎಂದು ಹೇಳಿದ

ಬಂಗೇರ ಅರಸುಗಳು ಹೇಳುವಾಗ

ಏನು ಬಂದಿರಿ ಅತ್ತೇಂದು ಕೇಳಿದರು

ಒಳ್ಳೆಯದಕ್ಕೆ ಬಂದಿರೋ ಕೆಟ್ಟದಕ್ಕೆ ಬಂದಿರೋ

ಬAದವರು ಕುಳಿತುಕೊಳ್ಳಿ ಎಂದು ಹೇಳಿದರು

ಊಟ ಮಾಡಿ ಎಂದು ಹೇಳಿದರು 

 ಕದ್ರಿಯ ಬಂಗೇರ ಅರಸುಗಳು

ನಾನು ಬಂದ ಕಾರ್ಯವ ಹೇಳಿ 

 ನಾನು ಊಟ ಮಾಡುವೆಂದು

ಹೇಳಿದರು ಮದುಮಗಳು ಕುಂತ್ಯಮ್ಮ ದೈಯಾರು

ಯಾರಯ್ಯ ಬಂಗೇರ ಅರಸುಗಳು 

 ನಮ್ಮ ಪ್ರೀತಿಯ ಮೋಹದ ಮಗಳು

ಮಧುರಗೆ ಮದುಮಗಳು ಇನ್ನು ಇದ್ದಾಳೆ

ಬಂದ ಬಂದ ಸಂಬAಧ ಕೂಡಿ ಬರುವುದಿಲ್ಲ

ಕಣ್‌ಕಟ್ಟಿನ ಹಾಗೇ ಆಗುತ್ತದೆ

ನೀನಾದರು ಅವಳನ್ನು ಮದುವೆ ಆಗಬೇಕು ಎಂದು

ಕುAತ್ಯಮ್ಮ ದೇವಿ ಕೇಳುವಾಗ 

 ಯಾರಮ್ಮ ಅತ್ತೆಯೇ ಕೇಳಿರಿ

ಒಳ್ಳೆ ಒಳ್ಳೆ ಹೆಣ್ಣುಗಳನ್ನು ದೊಡ್ಡ ದೊಡ್ಡ ರಾಜ್ಯಕ್ಕೆ

ಅರಸು ಬಲ್ಲಾಳರಿಗೆ ಕೊಟ್ಟಿದ್ದೀರಿ 

 ಕೆಂಚು ಕೂದಲ ಮೇಳ್ಳೆಗಣ್ಣಿನ

ತಿರುಚಿನ ಕಾಲುಗಳ ದೊಡ್ಡ ಹೊಟ್ಟೆಯ ಹುಡುಗಿಯನ್ನು

ನನಗೆ ಇಟ್ಟು ಕಟ್ಟುವಿರಾ ಎಂದು ಕೇಳುವರು

ಕದಿರೆಯ ಬಂಗೇರ ಅರಸುಗಳು

ಇಲ್ಲ ಮಗ ಬಂಗೇರ ನೀನಗಾಗುವಂಥ ಹೆಣ್ಣು ಎಂದು  © ಡಾ.ಲಕ್ಷ್ಮೀ ಜಿ‌ ಪ್ರಸಾದ್ 

ಅಷ್ಟಾಗಿ ಕೇಳಿದರು ಕುಂತ್ಯಮ್ಮ ದೈಯಾರು

ಕಣ್ಣಿನಲ್ಲಿ ನೀರು ತಂದುಕೊAಡರು

ಹಾಗಾದರೆ ಅಂಥ ಹೆಣ್ಣನು ಕಲ್ಲು ಕಟ್ಟಿ

ಹೊಂಡಕ್ಕೆ ಹಾಕಿ ಅತ್ತೆಯವರೇ 

 ಕಣ್ಣಿಗೆ ಬಟ್ಟೆ ಕಟ್ಟಿ ಕೈಕಾಲು ಬಂಧಿಸಿ

ಕತ್ತಲಿನ ರಾಜ್ಯಕ್ಕೆ ಬಿಡಿ ಎಂದು 

 ಹೇಳಿದರು ಬಂಗೇರ ಅರಸುಗಳು

ಹೇಳಿದ ಮಾತನ್ನು ಕೇಳಿದರು ಕುಂತ್ಯಮ್ಮ

ಇಳಿದುಕೊAಡು ಊರಿಗೆ ಬರುವರು

ಡೆನ್ನಾನ್ನಾ ಡೆನ್ನ ಡೆನ್ನಾನಾ ಮದುಮಗ

ಯಾರಯ್ಯ ಮದುಮಗ ಕೇಳಿರಿ 

 ನಾನು ಹೋದೆ ಕದಿರದ ಬೀಡಿಗೆ

ಬಂಗೇರ ಅರಸರ ಹತ್ತಿರ ಮಾತನಾಡಿದೆ

ಅವನು ಹೇಳಿದ ಮಾತು ಕೇಳಿದಾಗ

ಜೀವ ಇಟ್ಟುಕೊಂಡು ಬದುಕುವುದೇ ಬೇಡವೆನಿಸಿತು

ಒಳ್ಳೊಳ್ಳೆ ಹೆಣ್ಣುಗಳನ್ನು ದೊಡ್ಡ ದೊಡ್ಡ ರಾಜ್ಯಕ್ಕೆ

ಅರಸು ಬಲ್ಲಾಳರಿಗೆ ಕೊಟ್ಟಿದ್ದೀರಿ ಉಳಿದೊಂದು

ಅವಳನ್ನು ಕಣ್ಣಿಗೆ ಬಟ್ಟೆ ಕಟ್ಟಿ ಕತ್ತಲ ರಾಜ್ಯಕ್ಕೆ

ಬಿಡಿ ಎಂದು ಹೇಳಿದ ಬಂಗೇರ ಅರಸು

ಡೆನ್ನ ಡೆನ್ನ ಡೆನ್ನಾನಾ ಓಯೇಯೇ ಡೆನ್ನಾನಾ

ಕೊಂಡಾಟAದ ಬೀಡಿನಲ್ಲಿ ಇದ್ದಾರೆ ರಾಯರು

ಕೋಚಣ್ಣ ಆಳ್ವರು ಕುಂತ್ಯಮ್ಮ ದೈಯಾರು

ಅವರಿಗೆ ಹುಟ್ಟಿ ಬೆಳೆದ ಮಕ್ಕಳು 

 ಏಳು ಜನ ಹೆಣ್ಣು ಮಕ್ಕಳು

ಎಲ್ಲರಿಗಿಂತ ಹಿರಿಯವಳು ಮಧುರಗೆ ಮದುಮಗಳು

ಬೆಳೆದೊಂದು ಮಗಳನ್ನು ಏನು ಮಾಡುವುದೆಂದು

ಎಲ್ಲರು ಒಟ್ಟಿಗೆ ಸೇರಿ ಒಟ್ಟಿಗೆ ಕೇಳುವಾಗ

ನಮ್ಮ ದೊಡ್ಡಪ್ಪನ ಮಗನಿಗೆ ನೂಲಮದುವೆ೧

ಇದೆಯೆಂದು ಹೇಳಿ ಸಿಂಗಾರ ಮಾಡಿರಿ ತಾಯಿ

ಹೇಳುವರು ಹೆಣ್ಣುಗಳು ಆರು ಜನ ಹೆಣ್ಣು ಮಕ್ಕಳು © ಡಾ‌.ಲಕ್ಷ್ಮೀ ಜಿ ಪ್ರಸಾದ್ 

ತಂಗಿಯರು ಹೇಳುವಾಗ 

 ಯಾರಯ್ಯ ತಾಯಿ ಯಾರಯ್ಯ ತಾಯಿ

ಕವುಚಿ ಮಲಗಿ ಉಸಿರು ಬಿಟ್ಟರೆ

ಒಂದು ಕೋಲು ಮಣ್ಣು ಅಡಿಗೆ ಹೋಗುತ್ತದೆ

ಮೊಗಚಿ ಮಲಗಿ ಉಸಿರು ಬಿಟ್ಟರೆ 

 ಮಾಡಿನ ಮುಳಿ ಹಾರುತ್ತದೆ. 

ದೊಡ್ಡವಳಾದ ಹೆಣ್ಣನ್ನು ಮನೆಯಲ್ಲಿ

ಇಡಲು ಬಾರದೆಂದು ಹೇಳಿದರು 

 ಕಣ್ಣಿಗೆ ಬಟ್ಟೆ ಕಟ್ಟಿ ಕೈಕಾಲು ಕಟ್ಟಿ

ಕತ್ತಲೆ ಕಾಡಿಗೆ ಬಿಟ್ಟು ಬನ್ನಿ ಎಂದು ಹೇಳಿದರು

ಯಾರಯ್ಯ ತಾಯಿ ತಾಯಿ ಕೇಳಿರಿ 

 ತಂದೆಗೆ ಹೇಳಿರೆಂದು ಹೇಳಿದರು

ಆರು ಜನ ಹೆಣ್ಣು ಮಕ್ಕಳು ಕುಳಿತು

ಕೇಳುವರು ಮಧುರಗೆ ಮದುಮಗಳು

ಯಾರು ಮಗ ಮಧುರಗ ಯಾರಮ್ಮ ಮಧುರಗೆ

ನಮ್ಮ ದೊಡ್ಡಪ್ಪನ ಮಗನಿಗೆ ನೂಲ ಮದುವೆ

ಉಂಟು ಎಂದು ಹೇಳಿದರು 

 ಅಲ್ಲಿಗೆ ನಿನ್ನನ್ನು ಕರೆದುಕೊಂಡು ಹೋಗುವರು

ತಂದೆಯ ಒಟ್ಟಿಗೆ ಹೋಗು ಎಂದು 

 ಆರು ಜನ ತಂಗಿಯರು ತಾಯಿಯರು

ಒಟ್ಟಿಗೆ ಸೇರಿ ಹೇಳುವಾಗ 

 ಕಣ್ಣಿನಲ್ಲಿ ದುಃಖ ಪಡುವಳು ಮಗಳು

ಹೊಟ್ಟೆಯಲ್ಲಿ ಕಾವೇರಿ ಮಾಡುವಳು

ಆಯಿತೆಂದು ಹೇಳುವುದಿಲ್ಲ ಆಗದೆಂದು ಹೇಳುವುದಿಲ್ಲ

ಬಾಯಿತೆರೆದು ಹೇಳುವುದಿಲ್ಲ 

 ಕೊರಳು ಕೆಳಗೆ ಹಾಕಿ ಕಡುದುಃಖ

ಬಿಡುವಳು ಮಗಳು ಮಧುರಗೆ ಮದುಮಗಳು

ಯಾರು ಮಗಳೆ ಮದುಮಗಳೆ ಮಧುರಗ

ಎಂದರು ತಾಯಿ ಬೆಳ್ಳಿಯ ತಟ್ಟೆಗೆ 

 ಬಂಗಾರಿನ ಚಮಚ ಹಿಡಿದುಕೊಂಡು

ತಲೆಗು ಮೈಗೂ ಸ್ನಾನ ಮಾಡು ಮಗಳೆ

ತಲೆಗೆ ಎಣ್ಣೆ ಹಾಕಿಕೋ ಎಂದರು 

 ತಾಯಿ ಕುಂತ್ಯಮ್ಮ ಹೇಳಿದರು

ಬಿಸಿನೀರು ಕಾಯಿಸಿದರು 

 ಬೇಗನೆ ಅಡಿಗೆ ಮಾಡಿದರು

ನೀರು ಕಾದು ಬಿಸಿಯಾಗಲು 

 ಮಧುರಗೆ ಮದುಮಗಳನ್ನು ಕರೆದರು

ಬಿಸಿನೀರು ಆಗಿದೆ ಅಡಿಗೆ ಆಗಿದೆ

ಎಂದು ಇನ್ನು ಬೇಗ ಎಂದು ಹೇಳಿದರು

ತಲೆಗೆ ಮೈಗೆ ಸ್ನಾನ ಮಾಡು ಮಗಳೆ ಮಧುರಗ

ಚಿನ್ನದಲ್ಲಿ ಸಿಂಗಾರ ಮಾಡುವೆಂದು ಹೇಳುವರು

ನನಗೆ ಯಾಕೆ ಸೀರೆ ರವಕೆ ತಾಯಿಯವರೆ

ಕತ್ತಲೆ ಕಾಡಿಗೆ ಹೋಗುವವಳಿಗೆ

ಎಂದು ಹೇಳುವಳು ಮಧುರಗೆ ಮದುಮಗಳು

ಹೇಳುವಾಗ ತಾಯಿ ಕುಂತ್ಯಮ್ಮ ಹೇಳುವರು

ಯಾರು ಮಗಳೆ ಮಧುರಗ ಯಾರು ಮಗ ಮಧುರಗ

ನಿನ್ನ ದೊಡ್ಡಪ್ಪನ ಮಗನ ಉಪನಯನ 

 ಇದೆ ಎಂದು ಹೇಳುವರು

ಅಲ್ಲಿಗೆ ನಿನ್ನನ್ನು ಕರೆದುಕೊಂಡು ಹೋಗುತ್ತಾರೆ

ಎಂದು ಹೇಳುವರು ಕುಂತ್ಯಮ್ಮ ದೈಯಾರು

ಬಿಸಿನೀರು ತಣ್ಣೀರು ಎರೆದರು ಅವರು 

 ಚಿನ್ನದ ಒಡವೆ ತಂದರು

ಚಿನ್ನದೊಡವೆ ಅವಳ ಕೊರಳಿಗೆ ಹಾಕಿದರು

ರೇಷ್ಮೆಗಿಂತ ಮೇಲಿನ ರೇಷ್ಮೆ ಸೀರೆಯನ್ನು ತಂದರು

ಉಡಿಸಿದರು ಇನ್ನು ಬೇಗ ಬರುವಾಗ

ಹೊಟ್ಟೆಗೆ ಉಣ್ಣುವುದಿಲ್ಲ ಬಾಯಿ ತೆರೆಯುವುದಿಲ್ಲ

ತಲೆ ಕೆಳಹಾಕಿ ಕಣ್ಣಿನಲ್ಲಿ ನೀರು ತುಂಬುತ್ತಾಳೆ

ಯಾರು ಮಗಳೆ ಯಾರು ಮಗಳೆ ಮಧುರಗ

ಹೊತ್ತು ಹೋಗುತ್ತದೆ ವೇಳೆ ಆಗುತ್ತದೆ

ಸಮಯಕ್ಕೆ ಹೋಗಬೇಕೆಂದು ಹೇಳುವರ

ತಂದೆ ಕೋಚಣ್ಣಾಳ್ವರು ಬರುವರು

ಕೋಚಣ್ಣಾಳ್ವರು ಇನ್ನು ಬೇಗ ಬಂದರು

ಬೇಗ ಅಲಂಕಾರ ಮಾಡಿ ಊಟ ಹಾಕು

ಕುಂತ್ಯಮ್ಮ ದೈಯಾರೆಂದು ಹೇಳಿದರು

ಅಲಂಕಾರ ಸಮ್ಮಾನ ಮಾಡಿದರು ಕುಂತ್ಯಮ್ಮ

ಚಿನ್ನದಲ್ಲಿ ಶ್ರೇಷ್ಠವಾದ ಚಿನ್ನದ ಒಡವೆ

ರೇಷ್ಮೆ ಸೀರೆಯಲ್ಲಿ ಒಳ್ಳೆಯ ಸೀರೆಯನ್ನು

ಉಡಿಸಿ ಕಳುಹಿಸಿದರು ಹೋಗು ಮಗ

ಈವತ್ತೊಂದು ದಿನ ಕುಳಿತು ನಾಳೆಯೆ ಬನ್ನಿ ಎಂದು

ತಾಯಿ ಕುಂತ್ಯಮ್ಮ ಹೇಳುವಾಗ

ಯಾರಮ್ಮ ತಾಯಿ ತಾಯಿಯವರೇ ಹೇಳುವಳು

ನನಗೆ ಯಾಕೆ ಸೀರೆ ರವಿಕೆ 

 ಕತ್ತಲೆ ಕಾಡಿಗೆ ಹೋಗುವವಳಿಗೆ

ನನಗೆ ಯಾಕೆ ಸುಳ್ಳು ಹೇಳುತ್ತೀರಿ ತಾಯಿಯವರೇ

ನಾನು ಕೂಡ ನಿನ್ನ ಮಗಳೆಯೆ? ಕೇಳುವಳು

ಅತ್ತುಕೊಂಡು ದುಃಖಿಸಿಕೊಂಡು ಹೊರಡುವಳು ಮಗಳು

ನಿಮ್ಮ ಹೆಣ್ಣು ಮಕ್ಕಳು ನನ್ನ ತಂಗಿಯರು ದೊಡ್ಡ ದೊಡ್ಡ

ಅರಸು ಬಲ್ಲಾಳರುಗಳು ಒಟ್ಟಿಗೆ ಸೇರುವ ಹೊತ್ತೊಂದು

ಬರುವುದು ಎಂದು ಹೇಳಿದಳು ಮಧುರಗೆ ಮದುಮಗಳು

ಕಣ್ಣಿನಲ್ಲಿ ಕಡುದುಃಖ ಮಾಡಿಕೊಂಡು ಹೊರಟಾಗ

ಹೋಗುವ ಮಗಳೆ ಮದುಮಗಳೆ ಬಾ ಎಂದು 

ಕರೆದುಕೊಂಡು ಹೋಗುವರು ತಂದೆ ಕೋಚಣ್ಣಾಳ್ವರು

ಕಾಡಿನ ನಡುವೆ ಹೋಗುವಾಗ ರಾತ್ರಿ ಕತ್ತಲು ಆಗುವಾಗ

ಯಾರಯ್ಯ ತಂದೆಯವರೇ ತಂದೆಯವರೇ

ನನಗೆ ಆಯಾಸ ಬಾಯಾರಿಕೆ ಆಗುತ್ತಿದೆ

ನಾವು ಸ್ವಲ್ಪ ಕುಳಿತುಕೊಳ್ಳುವ ಎಂದು ಹೇಳುವಾಗ

ಆಯಿತು ಮಗಳೆ ಎಂದು ಹೇಳಿ ಕಾಲು ನೀಡಿ 

ಕುಳಿತುಕೊಳ್ಳುವರು ತಂದೆ ಕೋಚಣ್ಣಾಳ್ವರು

ಸ್ವಲ್ಪ ಮಲಗಿ ನಿದ್ರೆ ಮಾಡುವೆ ಮತ್ತೆ

ಹೋಗುವ ಎಂದು ಹೇಳಿದರು ಮದುರೆಗ ಮದುಮ್ಮಗಳು

ಡೆನ್ನಾ ಡೆನ್ನಾ ಡೆನ್ನಾನಾ ಓಯೇಯೇ ಮದುಮಗ ಕೇಳಿರಿ

ಮಗಳನ್ನು ಎಲ್ಲಿಗೆ ಕರೆದುಕೊಂಡು ಹೋದಿರಿ

ಎಲ್ಲಿ ಬಿಟ್ಟು ಬಂದಿರಿ ಎಂದು ಮಡದಿ 

 ಕುಂತ್ಯಮ್ಮ ದೆಯ್ಯಾರು ಕೇಳುವಾಗ

ಕಣ್ಣಿನಲ್ಲಿ ಕಡು ದುಃಖ ಮಾಡಿದರು 

 ಹೊಟ್ಟೆಯಲ್ಲಿ ಕಾವೇರಿ ಸುರಿದರು

ಏಳು ಜನ ಹೆಣ್ಣು ಮಕ್ಕಳನ್ನು ಏಳು ಕೋಟಿ ಕೊಟ್ಟು

ಏಳು ಸಂಬAಧ ಕಟ್ಟಬೇಕೆಂದು ಎಣಿಸಿದ್ದೆ ನಾನು

ಒಂದು ಮಗಳಿಗೆ ಸಂಬAಧ ಕೂಡಿ ಬರಲಿಲ್ಲ ಹೇಳಿದರು

ಕುಂತ್ಯಮ್ಮ ದೈಯಾರು ಅಷ್ಟು ಮಾತು ಕೇಳಿದರು

ಓಡೋಡಿ ಹೋಗುವರು ಕುಂತ್ಯಮ್ಮ

ಯಾರಯ್ಯ ದೈವಗಳೆ ಯಾರಯ್ಯ ದೇವರೆ

ನನ್ನ ಒಂದು ಮಗಳಿಗೆ ಒಳ್ಳೆಯ ದಾರಿ ತೋರಿಸು

ಎಂದು ಹೇಳಿದರು ಕುಂತ್ಯಮ್ಮ ದೈಯಾರು

ದೊಡ್ಡ ಒಂದು ಮನೆಗೆ ಎತ್ತಿಸಿ ಅವಳನ್ನು

ರಕ್ಷಣೆ ಮಾಡಿ ಎಂದು ಕೇಳಿದರು  ಯಾರಮ್ಮ ಕುಂತ್ಯಮ್ಮ ಕೇಳಿದೆಯಾ

ಒಂದು ಕಾಡಿನಲ್ಲಿ ಹೋಗುವಾಗ ಅವಳಿಗೆ 

 ನಿದ್ರೆ ಬೇಗ ಬಂತು

ತAದೆಯವರೆ ಮಲಗುವೆ ಎಂದು ಹೇಳಿದಳು ಮಗಳು

ಕಾಲು ನೀಡಿ ಮಲಗಿಸಿದೆ  

ಮೆಲ್ಲನೆ ಎದ್ದು ಕಣ್ಣಿಗೆ ಬಟ್ಟೆ ಕಟ್ಟಿ

ಬಿಟ್ಟು ಬಂದೆ ಎಂದು ಹೇಳಿದರು

ಡೆನ್ನ ಡೆನ್ನಾ ಡೆನ್ನಾನ್ನಾ ಓಯೇಯೆ ಡೆನ್ನಾನ್ನಾ

ಆ ಹೊತ್ತಿಗೆ ಮಗಳು ಮಧುರೆಗೆ 

 ಯಾರಯ್ಯ ತಂದೆಯವರೆ ಎಲ್ಲಿದ್ದೀರಿ

ಎಂದು ಹೇಳಿ ಎಚ್ಚರಾಗುವಾಗ ಅತ್ತುಕೊಂಡು

ಅತ್ತುಕೊAಡು ಬೊಬ್ಬೆ ಹಾಕುವಾಗ

ತಾಳೆಯ ಮೂರ್ತೆ ಮಾಡುವ ಬೈದ್ಯಬ ರೂಪದಲ್ಲಿ © ಡಾ‌‌.ಲಕ್ಷ್ಮೀ ಜಿ‌ ಪ್ರಸಾದ್ 

ಜುಮಾದಿ ದೈವವು ಬರುತ್ತದೆ

ಯಾರಮ್ಮ ಮದುಮಗಳೆ ಯಾರಮ್ಮ ಮದುಮಗಳೆ

ನಿನ್ನ ಮಾವ ನಾನೆಂದು ಹೇಳಿ 

 ನಿನ್ನ ಕಣ್ಣಿನ ಬಟ್ಟೆಯನ್ನು ಬಿಚ್ಚಿ

ನಿನ್ನನ್ನು ಕರೆದುಕೊಂಡು ಹೊಗುವೆ

ನನ್ನೊಂದು ಊರಿಗೆ ಮನೆಗೆ ಎಂದು ಹೇಳಿದರು೩

ಕಣ್ಣಿನ ಬಟ್ಟೆ ಬಿಡಿಸಿರಿ ಮಾವ 

 ಕೈಯ ಬಂಧನ ಬಿಡಿಸಿರಿ ಎಂದು

ಮಧುರಗೆ ಹೇಳಿ ಅತ್ತುಕೊಂಡು 

 ಕೆಳಿದಾಗ ಬೇಸರ ಮಡುವಾಗ

ನಿನ್ನನ್ನು ನನ್ನೊಂದು ಕೊಟಡಿಗೆ 

ಕರೆದುಕೊಂಡು ಹೋಗುವೆಂದು

ಬಾರಮ್ಮ ಮದುಮಗಳೆ ಬಾ ಎಂದು 

ಕರೆದುಕೊಂಡುಹೋಗುತ್ತದೆ ತಾಳೆಯ

 ಮೂರ್ತದಾರನ ವೇಷದ ಜುಮಾದಿ ದೈವ

ಆ ಹೊತ್ತಿಗೆ ಕೊಂಡು ಹೋಗಿ ಅಲ್ಲಿ

ಚಾವಡಿಯಲ್ಲಿ ಕುಳ್ಳಿರಿಸಿ ಯಾರಯ್ಯ ಬಂಗೇರ ಅರಸುಗಳೆ

ನಿನಗಾಗುವಂಥ ಹೆಣ್ಣನ್ನು ಕರೆದುಕೊಂಡು ಬಂದಿದ್ದೇನೆ

ಚಾವಡಿ ನಡುವಿನಲ್ಲಿ ನೋಡಿರಿ ಎಂದಾಗ

ಓಡೋಡಿ ಬರುವರು ಬಂಗೇರರು 

 ಕದಿರೆಯ ಬಂಗೇರ ಅರಸುಗಳು

ಒಂದು ಕೈಯಲ್ಲಿ ಹಿಡಿದರು ಬಂಗೇರರು

ಕದಿರೆಯ ಬಂಗೇರ ಅರಸುಗಳು

ಇಂದು ಹಿಡಿದ ಕೈಯನ್ನು ಯಾವತ್ತಿಗೂ ಬಿಡಲಾರೆ © ಡಾ‌.ಲಕ್ಷ್ಮೀ ಜಿ ಪ್ರಸಾದ್ 

ಹೇಳುವರು ಒಳಗೆ ಕರೆದುಕೊಂಡು ಹೋಗುವರು

ಡೆನ್ನನಾ ಡೆನ್ನ ಡೆನ್ನ ಡೆನ್ನಾನಾ ಓಯೇಯೇ ಡೆನ್ನಾನಯೇ

ಶಾರದಾ ಜಿ ಬಂಗೇಋ ಮೌಖಿಕ ಸಾಹಿತ್ಯ - ಡಾ.ಲಕ್ಷ್ಮೀ ಜಿ ಪ್ರಸಾದ್ ಅವರ ಕೃತಿಯ ಆಯ್ದ ಭಾಗ..copy rights reserved © ಡಾ‌.ಲಕ್ಷ್ಮೀ ಜಿ ಪ್ರಸಾದ್ 

Monday 16 October 2023

ಭೂತಗಳ ಆರಾಧನೆ, ತುಳು ಸಂಸ್ಕೃತಿಯ ಅಪೂರ್ವ ಸಂಶೋಧಕಿ ಡಾ ಲಕ್ಷ್ಮಿ ಜಿ. ಪ್ರಸಾದ್- ಸುಮನಾ ಉಪಾಧ್ಯಾಯವ

 


ಭೂತಗಳ ಆರಾಧನೆ, ತುಳು ಸಂಸ್ಕೃತಿಯ ಅಪೂರ್ವ ಸಂಶೋಧಕಿ ಡಾ ಲಕ್ಷ್ಮಿ ಜಿ. ಪ್ರಸಾದ್- ಸುಮನಾ ಉಪಾಧ್ಯಾಯ . 
https://www.google.com/amp/s/m.kannadaprabha.com/womens-day/2020/mar/06/an-unique-researcher-of-tulu-culture-and-demons-dr-lakshmi-g-prasad-413693.amp?bshm=rimc/2
ಭೂತಾರಾಧನೆ ತುಳುನಾಡು ಕರಾವಳಿ ಭಾಗದ ಒಂದು ಸೊಗಸಾದ ಸಂಸ್ಕೃತಿ. ಭೂತಾರಾಧನೆ ಇಲ್ಲಿನ ತುಳು ಭಾಷಿಕರ ಜನರ ಜೀವನದಲ್ಲಿ ಹಾಸುಹೊಕ್ಕಿದೆ.
ಆಧುನಿಕ ಜೀವನಶೈಲಿಯಲ್ಲಿ ಭೂತಾರಾಧನೆ ಬಗ್ಗೆ ಇಂದಿನ ಜನಾಂಗದವರಿಗೆ ತಿಳುವಳಿಕೆ ಕಡಿಮೆಯೇ.ಇಂದಿನ ಮಕ್ಕಳಿಗೆ ಭೂತಗಳ ವೇಷಗಳನ್ನು ನೋಡ ಸಿಗುವುದೇ ಅಪರೂಪ. 
ಇಂತಹ ಸ್ಥಿತಿಯೊಳಗೆ ತುಳುನಾಡಿನ ಸಂಸ್ಕೃತಿ, ಭೂತಾರಾಧನೆ ಬಗ್ಗೆ ಅಧ್ಯಯನ ಮಾಡಿ ಎಂ.ಫಿಲ್ ಹಾಗೂ ಎರಡು ಡಾಕ್ಟರೇಟ್ ಪದವಿಗಳನ್ನು ಪಡೆದ ಮೊದಲ ಮಹಿಳೆ ಮಾತ್ರವಲ್ಲ ವ್ಯಕ್ತಿ ಡಾ.ಲಕ್ಷ್ಮಿ ಜಿ ಪ್ರಸಾದ್ ಅವರು. ಅಧ್ಯಯನ ಮಾಡಿದ್ದಷ್ಟೇ ಅಲ್ಲದೆ ಇಂದಿನ ಡಿಜಿಟಲ್ ಮಾಧ್ಯಮ ಯುಗದಲ್ಲಿ ಎಲ್ಲರೂ ಇಂಟರ್ನೆಟ್ ಗೆ ಮಾಹಿತಿಗೆ ಮೊರೆಹೋಗುತ್ತಿರುವ ಸಂದರ್ಭದಲ್ಲಿ ಅದರ ಪರಿಚಯ, ಮಾಹಿತಿ ಇಂದಿನ ಯುವಜನರಿಗೂ ಸಿಗಲೆಂದು ಲಕ್ಷ್ಮಿಯವರು ಈ ಬಗ್ಗೆ ಅತ್ಯಪರೂಪದ ಬ್ಲಾಗನ್ನೇ ತಯಾರಿಸಿದ್ದಾರೆ. ಕರಾವಳಿ ಜಿಲ್ಲೆಯ ತುಳುನಾಡಿನ ಭೂತಗಳ ಇತಿಹಾಸ, ಹಿನ್ನೆಲೆ, ಆರಾಧನೆ ಸ್ವರೂಪ ಒಳಗೊಂಡ ವಿಚಾರ ನಿರಂತರ ಸಂಶೋಧನೆ ಮಾಡಿ, ಭೂತಾರಾಧನೆ ಮಾಹಿತಿ ಹಾಗೂ ಸಂಬಂಧಿಸಿದ ವಿಚಾರಗಳ 700ಕ್ಕಿಂತಲೂ ಹೆಚ್ಚು ಬರಹಗಳು ಈ ಬ್ಲಾಗ್ ನಲ್ಲಿವೆ. 
http://laxmipras.blogspot.com(ಭೂತಗಳ ಅದ್ಭುತ ಜಗತ್ತು-ಸಂಶೋಧನಾ ಬ್ಲಾಗ್) ನೊಳಗೆ ಸಂಪೂರ್ಣ ಮಾಹಿತಿ ಓದುಗರಿಗೆ ಸಿಗುತ್ತದೆ. ಈ ಬ್ಲಾಗ್ ಎಷ್ಟು ಜನಪ್ರಿಯವಾಗಿದೆಯೆಂದರೆ ದೇಶ-ವಿದೇಶಗಳ 3 ಲಕ್ಷಕ್ಕಿಂತಲೂ ಹೆಚ್ಚಿನ ಓದುಗರನ್ನು ಇದು ಹೊಂದಿದೆ. ಭೂತಾರಾಧನೆಯ ಕುರಿತು ಮಾಹಿತಿ, ಫೋಟೊ, ಜಾನಪದ, ಮಹಿಳೆಯರ ಬದುಕು, ನಾನಾ ಭಾಷೆಯ ಸಾಹಿತ್ಯಗಳ ಬರಹ ಈ ಬ್ಲಾಗ್‌ನಲ್ಲಿದೆ. ದೇಶ-ವಿದೇಶಗಳ ಅನೇಕ ಸಂಶೋಧಕರು, ಅಧ್ಯಯನಕಾರರು ಇದರಿಂದ ಮಾಹಿತಿ ಪಡೆದಿದ್ದಾರೆ. ಡಾ ಲಕ್ಷ್ಮಿ ಜಿ ಪ್ರಸಾದ್ ಅವರು ಸಾವಿರದ ಎಂಟು ನೂರು ದೈವಗಳ ಹೆಸರನ್ನು ಸಂಗ್ರಹ ಮಾಡಿದ್ದಾರೆ‌. 500 ಭೂತಗಳ ಕುರಿತಾಗಿ ಅಧ್ಯಯನ ಮಾಡಿ ಬರೆದಿದ್ದಾರೆ‌.ನೂರಕ್ಕೂ ಹೆಚ್ಚಿನ ಅಪರೂಪದ ಪಾಡ್ದನಗಳನ್ನು ಸಂಗ್ರಹಿಸಿದ್ದಾರೆ.

ಇವರು ಮೂಲತಃ ಕಾಸರಗೋಡಿನ ಕೋಳ್ಯೂರಿನವರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಸ್ತುತ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ 20ಕ್ಕೂ ಅಧಿಕ ಪುಸ್ತಕಗಳು, 200ಕ್ಕೂ ಅಧಿಕ ಶೈಕ್ಷಣಿಕ,ವೈಚಾರಿಕ, ಸಂಶೋಧನಾತ್ಮಕ ಬರಹಗಳು ನಾಡಿನ ಪತ್ರಿಕೆಗಳಲ್ಲಿ, ಪುಸ್ತಕಗಳಾಗಿ ಪ್ರಕಟಗೊಂಡಿವೆ. 
ಡಾ. ಲಕ್ಷ್ಮೀ ಜಿ.ಪ್ರಸಾದ್‌ ಕನ್ನಡ, ಸಂಸ್ಕೃತಿ ಮತ್ತು ಹಿಂದಿ ಎಂಎ ಪದವಿ ಪಡೆದಿದ್ದಾರೆ. ತುಳುನಾಡಿನ ನಾಗಬ್ರಹ್ಮ ಮತ್ತು ಕಂಬಳ -ವಿಶ್ಲೇಷಣಾತ್ಮಕ ಅಧ್ಯಯನ ಎಂಬ ಸಂಶೋಧನೆ ಮಹಾಪ್ರಬಂಧ ರಚಿಸಿ ಹಂಪಿ ಕನ್ನಡ ವಿವಿಯಲ್ಲಿ ಡಾಕ್ಟರೇಟ್‌ ಗಳಿಸಿದ್ದಾರೆ. ಪಾಡ್ದನಗಳಲ್ಲಿ ತುಳುವ ಸಂಸ್ಕೃತಿಯ ಅಭಿವ್ಯಕ್ತಿ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ದ್ರಾವಿಡ ವಿವಿಯಿಂದ 2ನೇ ಡಾಕ್ಟರೇಟ್‌ ಗಳಿಸಿದ್ದಾರೆ. 150 ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ರಾಜ್ಯ, ಪ್ರಾದೇಶಿಕ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದು, ಹಲವಾರು ರಾಜ್ಯ, ರಾಷ್ಟ್ರೀಯ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಇಂದಿನ ಕಾಲಘಟ್ಟಕ್ಕೆ ಭೂತಾರಾಧನೆ ಅದರ ಕಲಿಕೆ ಹೇಗೆ ಪ್ರಸ್ತುತ ಎಂಬುದಕ್ಕೆ ಡಾ ಲಕ್ಷ್ಮಿ ಪ್ರಸಾದ್ ಹೀಗೆ ಹೇಳುತ್ತಾರೆ: ಕುಮಾರವ್ಯಾಸನ ಗದುಗಿನ ಭಾರತ, ರಾಮಾಯಣ, ಮಹಾಭಾರತ, ಹಳೆಗನ್ನಡ ಹೇಗೆ ಇಂದಿಗೂ ಪ್ರಸ್ತುತವೋ, ಇಂದಿನ ಜನಾಂಗದವರು ಕಲಿಯಬೇಕೆನ್ನುತ್ತಾರೋ ಭೂತಾರಾಧನೆ ಕೂಡ ತುಳು ಸಂಸ್ಕೃತಿಯ ಪರಂಪರೆ ಇಂದಿಗೂ ಪ್ರಸ್ತುತ. ಅದು ತುಳು ಸಂಸ್ಕೃತಿಯ ಮೆಟ್ಟಿಲು, ಅದೊಂದು ತುಳುನಾಡಿನ ಶಕ್ತಿ, ಅದನ್ನು ಅರಿತು ದಾಟಿಕೊಂಡೇ ಮುಂದೆ ಹೋಗಬೇಕಾಗುತ್ತದೆ. ''ನೀರಿನಲ್ಲಿ ಮೀನು ಈಜುವುದು, ಹಕ್ಕಿ ಹಾರುವುದು''ಎಷ್ಟು ಸಹಜವೋ ತುಳುನಾಡಿನ ಭೂತಾರಾಧನೆ ಬಗ್ಗೆ ತಿಳಿದುಕೊಳ್ಳುವುದು ಅಷ್ಟೇ ಸಹಜ ಎನ್ನುತ್ತಾರೆ.
ಡಾ ಲಕ್ಷ್ಮಿ ಪ್ರಸಾದ್ ಅವರು ಭೂತಾರಾಧನೆ ಬಗ್ಗೆ ವಿವರವಾಗಿ ಹೇಳಿರುವ ವಿಡಿಯೊಗಳು ಅವರ ಯು ಟ್ಯೂಬ್ ಚಾನೆಲ್ ನಲ್ಲಿದೆ
ಡಾ ಲಕ್ಷ್ಮಿ ಜಿ ಪ್ರಸಾದ್ ಅವರ ಕರಾವಳಿಯ ಸಾವಿರದೊಂದು ದೈವಗಳು ಪ್ರಸಿದ್ದ ಕೃತಿ ಲಕ್ಷ್ಮೀ ಜಿ ಪ್ರಸಾದರ ಮೊಬೈಲ್ : 9480516684
ಲೇಖನ: ಸುಮನಾ ಉಪಾಧ್ಯಾಯ 
Tags :ಸಂಸ್ಕೃತಿTulu cultureDr Lakshmi G Prasadತುಳು ಭಾಷೆ

ತುಳುನಾಡಿನಲ್ಲಿ ಮಾಯವಾಗುವವರು ಏನಾಗುತ್ತಾರೆ? - ಡಾ.ಲಕ್ಷ್ಮೀ ಜಿ ಪ್ರಸಾದ್

 ಕಳೆದ ವರ್ಷ ವೈರಲ್ ಆಗಿರುವ ಲಕ್ಷಾಂತರ ಮಂದಿ ಓದಿದ ಬರಹ 

https://m.facebook.com/story.php?story_fbid=4388294387962495&id=100003459322515&mibextid=Nif5oz

ತುಳುನಾಡಿನಲ್ಲಿ  ಮಾಯವಾಗುವವರು ಏನಾಗುತ್ತಾರೆ?

- ಡಾ.ಲಕ್ಷ್ಮೀ ಜಿ ಪ್ರಸಾದ್ 

ಆಧಾರ 

#ಕರಾವಳಿಯ_ಸಾವಿರದೊಂದು_ದೈವಗಳು 

ಮಾಯ ಮತ್ತು ಜೋಗದ ಬೆಳಕಿನಲ್ಲಿ‌ " ಕರಾವಳಿಯ ಸಾವಿರದೊಂದು ದೈವಗಳು‌ ಲೇ: ಡಾ.ಲಕ್ಷ್ಮೀ ಜಿ ಪ್ರಸಾದ್ ,

ಪುಸ್ತಕ ಬೇಕಾಗಿದ್ದವರು 

ಮೊಬೈಲ್ 9480516684 ಗೆ ವಾಟ್ಸಪ್ ಮೆಸೇಜ್ ಅಥವಾ ಕರೆ ಮಾಡಿ 

#ಕಾಂತಾರ Rishab Shetty 

ನನ್ನ ಸಹೋದ್ಯೋಗಿ ಗಣಿತ ಉಪನ್ಯಾಸಕಿ ಮಂಜುಳಾ ಅವರು ಇಂದು ಕೇಳಿದ ಪ್ರಶ್ನೆ ಇದು.ಕಾಂತಾರ ಸಿನೇಮ ನೋಡಿದ ಅನೇಕರು ಇದೇ ಪ್ರಶ್ನೆಯನ್ನು ನನ್ನಲ್ಲಿ ಕೇಳಿದ್ದಾರೆ. 


ಇದಕ್ಕೆ ಸರಳವಾಗಿ ಉತ್ತರಿಸುವ ಯತ್ನ ಮಾಡಿದ್ದೇನೆ.


ತುಳುನಾಡಿನ ದೈವಾರಾಧನೆ ಒಂದು ವಿಶಿಷ್ಟವಾದ ಆರಾಧನಾ ರಂಗ ಕಲೆ,ಧಾರ್ಮಿಕ ಆರಾಧನಾ ಪದ್ಧತಿ.ಹಿಂದು‌,ಮುಸ್ಲಿಂ ,ಜೈನ ಕ್ರಿಶ್ಚಿಯನ್ ಸೇರಿದಂತೆ ಎಲ್ಲ ಜಾತಿ ಮತಗಳ ಜನರು ದೈವತ್ವ ಪಡೆದು ಆರಾಧಿಸಲ್ಪಡುತ್ತಿದ್ದಾರೆ.ಎಲ್ಲ ಜಾತಿ‌ಮತಗಳ ಜನರೂ  ಇಲ್ಲಿನ ದೈವಗಳ ಆರಾಧನೆ ಮಾಡುತ್ತಾರೆ.ಇಲ್ಲಿ ದೈವಗಳಾಗುವ ಮೊದಲು ಇವರು ಏನಾಗಿದ್ದರು ಯಾರಾಗಿದ್ದರು ?ಎಂಬುದು ಗಣನೆಗೆ ಬರುವುದಿಲ್ಲ.ದೈವಗಳಾದ ನಂತರ ಇವರು ನಮ್ಮನ್ನು ಕಾಯುವ ಶಕ್ತಿಗಳು.ಎಲ್ಲ ದೈವಗಳಿಗೂ ಸಮಾನ ಆದರ, ಗೌರವ ,ಭಕ್ತಿಯ ಆರಾಧನೆ‌.ಹೀಗೆ ಜಾತಿ ಮತಗಳ ಸಾಮರಸ್ಯ ತುಳು ಸಂಸ್ಕೃತಿಯ ವೈಶಿಷ್ಟ್ಯ .


ತುಳು ಸಂಸ್ಕೃತಿಯಲ್ಲಿ‌ ಮಾಯವಾಗುವುದು ಎಂದರೆ ಸಾಯುವುದು ಅಲ್ಲ ,ದುರಂತವೂ ಅಲ್ಲ  ಬರೀ ಅದೃಶ್ಯವಾಗುವುದಲ್ಲ‌ ,ಕರಗಿ ಹೋಗುವುದಲ್ಲ ಅಥವಾ ಇಲ್ಲವಾಗುವುದೂ ಅಲ್ಲ 


ಇಲ್ಲಿ ಮಾಯಕಕ್ಕೆ ಸಲ್ಲುದು ( ಮಾಯಕೊಗ್  / ಮಾಯೊಗ್ ಸಂದುನೆ) ಎಂದು ಹೇಳುತ್ತಾರೆ.ಅದರರ್ಥ 

ದೈವದ ಸಾನ್ನಿಧ್ಯಕ್ಕೆ ಸೇರುವುದು ಎಂದಾಗಿದೆ.ತುಳುವರ ಪರಿಕಲ್ಪನೆಯ ಮೋಕ್ಷ ಇದು. ಪುರಾಣ ಪರಿಕಲ್ಪನೆಯ ಮೋಕ್ಷಕ್ಕೂ ಮಾಯಕಕ್ಕೆ ಸಲ್ಲುವುದಕ್ಕೂ ವ್ಯತ್ಯಾಸವಿದೆ.

© ಡಾ‌ಲಕ್ಷ್ಮೀ ಜಿ ಪ್ರಸಾದ್ 

ಈ ಪರಿಕಲ್ಪನೆಯ ಮಾಯಕ ಅಥವಾ ಮೋಕ್ಷವೆಂದರೆ ಆ ದೈವದ ಜೊತೆ ಐಕ್ಯವಾಗುವುದಲ್ಲ ಬದಲಿಗೆ ಆ ದೈವದಂತೆಯೇ ಶಕ್ತಿ ಪಡೆದು ಇನ್ನೊಂದು  ದೈವವಾಗುವುದು ಎಂದರೆ   ಶಿಷ್ಟ ರಕ್ಷಕ ದುಷ್ಟ ಶಿಕ್ಷಕರಾಗಿ ಜನರನ್ನು ಕಾಪಾಡುವ ಒಲವಿನ ಶಕ್ತಿಗಳಾಗುವುದು.ಇದನ್ನೇ  ದೈವತ್ವ ಪ್ರಾಪ್ತಿ ಅಥವಾ ದೈವತ್ವ ಪಡೆಯುವುದು ಎನ್ನುತ್ತೇವೆ ಯಾವ ದೈವದ ಸಾನ್ನಿದ್ಯವನ್ನು ಪಡೆದಿರುವರೋ ಆ ದೈವದ ಸೇರಿಗೆ ದೈವ/ ಪರಿವಾರ ದೈವ ಎಂದು ಈ ದೈವವನ್ನು ಗುರುತಿಸುತ್ತಾರೆ .ಹಾಗಾಗಿ‌ಮಾಯವಾದಾಗ ಅಶೌಚದ ಆಚರಣೆ ಇರುವುದಿಲ್ಲ‌,ಅಂತ್ಯ ಸಂಸ್ಕಾರ ಇರುವುದಿಲ್ಲ‌ ಬದಲಿಗೆ ದೈವದ ಆರಾಧನೆ ಇರುತ್ತದೆ ಯಾಕೆಂದರೆ ಅವರು ಸತ್ತದ್ದಲ್ಲ.ದೈವ ಸಾನ್ನಿಧ್ಯಕ್ಕೆ ಸೇರಿ ದೈವವೇ ಆಗಿರುತ್ತಾರೆ© ಡಾ.ಲಕ್ಷ್ಮೀ ಜಿ  ಪ್ರಸಾದ್ 


ಇನ್ನು ತುಳುನಾಡಿನಲ್ಲಿ ಯಾರಿಗೆ ಯಾವಾಗ ಹೇಗೆ ಯಾಕೆ ದೈವತ್ವ ಪ್ರಾಪ್ತಿಯಾಗುತ್ತದೆ ಎಂಬುದಕ್ಕೆ ಸಿದ್ಧ ಸೂತ್ರವಿಲ್ಲ.ಸಾಮಾನ್ಯವಾಗಿ ಎಲ್ಲರಂತೆ ಮಾನವರಾಗಿ ಹುಟ್ಡಿ ಅತಿಮಾನುಷ ಸಾಹಸ ಮೆರೆದವರು ಮಾಯಕಕ್ಕೆ ಸಂದು ದೈವತ್ವ ಪಡೆದು ದೈವಗಳಾಗಿ ಆರಾಧನೆ ಪಡೆದಿದ್ದಾರೆ ,


ಕೋಟಿ -ಚೆನ್ನಯರು,ಮುದ್ದ -ಕಳಲರು ಎಣ್ಮೂರು ದೆಯ್ಯು -ಕೇಲತ್ತ ಪೆರ್ನೆ,ಕಾನದ- ಕಟದರು ಕೋಟೆದ ಬಬ್ಬು- ತನ್ನಿ ಮಾಣಿಗ ಮೊದಲಾದ ಅತಿಮಾನುಷ ಸಾಹಸಿಗಳು  ದೈವತ್ವ ಪಡೆದು ಆರಾಧಿಸಲ್ಪಡುತ್ತಾರೆ

© ಡಾ‌ಲಕ್ಷ್ಮೀ ಜಿ ಪ್ರಸಾದ್

ಇನ್ನು ದೈವಗಳ ಆರಾಧನೆ ಮಾಡಿದ ಅನನ್ಯ ಭಕ್ತರನ್ನು  ದೈವಗಳು ಅನುಗ್ರಹಿಸಿ ಅವರನ್ನು ಮಾಯ ಮಾಡಿ‌ ತನ್ನ ಸೇರಿಗೆಗೆ / ಸಾನ್ನಿಧ್ಯಕ್ಕೆ ಸೇರಿಸಿಕೊಳ್ಳುತ್ತವೆ


ತನ್ನ ಅನನ್ಯ ಭಕ್ತೆಯಾದ ಅಕ್ಕ ಅರಸು ಎಂಬ ಜೈನ ಅರಸಿಯನ್ನು ರಕ್ತೇಶ್ವರಿ ದೈವವು ಮಾಯ ಮಾಡಿ‌ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತದೆ ,ಈ ಜೈನ ರಾಣಿ ಅಕ್ಕಚ್ಚು ದೈವವಾಗಿ ಆರಾಧನೆ ಹೊಂದುತ್ತಾಳೆ 


ಕೋಟೆದ ಬಬ್ಬು ಸ್ವಾಮಿಯ ಅನನ್ಯ ಭಕ್ತೆಯಾದ ಅಜ್ಜಿ ಬೆರೆಂತೊಲು ಅನ್ನು ದೈವ ಮಾಯ ಮಾಡಿ ತನ್ನ ಸೇರಿಗೆಗೆ ಸೇರಿಸಿಕೊಂಡ ಕಥೆ ಇದೆ.ಕೋಟೆದ ಬಬ್ಬು ಸ್ವಾಮಿಯ ಸಾನ್ನಧ್ಯ ಪಡೆದ ಅಜ್ಜಿ ಬೆರೆಂತೊಲು ಕೂಡ ಸೇರಿಗೆ ದೈವವಾಗಿ ಆರಾಧನೆ ಪಡೆಯುತ್ತಾಳೆ 


ತನ್ನ ಅನನ್ಯ ಭಕ್ತೆಯಾದ ಓರ್ವ ಬಾಣಿಯೆತ್ತಿ ( ಮಲಯಾಳ ಗಾಣಿಗ ಸಮುದಾಯದ ಸ್ತ್ರೀ) ಯನ್ನು ಭಗವತಿ ದೈವ ತನ್ನ ಸಾನ್ನಿಧ್ಯಕ್ಕೆ ಸೇರಿಸಿಕೊಂಡಿದೆ,ಈ ಸ್ತ್ರೀ ಒರು ಬಾಣಿಯೆತ್ತಿ ಹೆಸರಿನಲ್ಲಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾಳೆ 


ತನ್ನನ್ನು ಬಹಳ ಭಕ್ತಿ ನಿಷ್ಠೆಯಿಂದ ಆರಾಧನೆ ಮಾಡುತ್ತಿದ್ದ ಬ್ರಾಹ್ಮಣ ಅರ್ಚಕನನ್ನು  ಪಂಜುರ್ಲಿ ದೈವವು ಮಾಯ ಮಾಡಿ ದೈವತ್ವ ನೀಡುತ್ತದೆ ಆತ ದೇವರ  ಪೂಜಾರಿ ಪಂಜುರ್ಲಿ ಎಂಬ ಹೆಸರಿನಲ್ಲಿ ದೈವತ್ವ ಪಡೆದು ಆರಾಧನೆ ಪಡೆಯುತ್ತಾನೆ,ಇಪ್ಪತಜ್ಜ ,ಕಾನಲ್ತಾಯ ಭಟ್ರು ಭೂತ,ಕಚ್ಚೆ ಭಟ್ಟ,ಬ್ರಾಣ ಭೂತ ಮೊದಲಾದವರು ಈ ರೀತಿಯಾಗಿ ದೈವತ್ವ ಪಡೆದವರು.


ಅದೇ ರೀತಿ ದೈವ ದೇವರುಗಳಿಗೆ ಸ್ಥಾನ ಕಟ್ಟಿಸುವ‌ ಮಹತ್ಕಾರ್ಯ ಮಾಡಿದ ಅನೇಕರು  ದೈವತ್ವ ಪಡೆದು ಆರಾಧಿಸಲ್ಪಡುತ್ತಿದ್ದಾರೆ


 ಕಾರಿಂಜೆತ್ತಾಯ,ಅಡ್ಕತ್ತಾಯ ,ಚೆನ್ನಿಗರಾಯ ಸುಜೀರ್ ನ ದೇಯಿ ಬೈದ್ಯೆತಿ,ಜಾನು ನಾಯ್ಕ/ ಬೈದ್ಯ ,ಕಂರ್ಭಿಸ್ಥಾನದ ದೇಯಿ ಬೈದೆತಿ ,ಅಚ್ಚು ಬಂಗೇತಿ ಮೊದಲಾದವರು ಇಂತಹ ಕಾರಣಕ್ಕೆ ದೈವತ್ವ ಪಡೆದವರು.ಜನರಿಗೆ ಉಪಕಾರಿಯಾಗಿ ಹಳ್ಳಿ‌ಮದ್ದುಗಳನ್ನು ಕೊಡುತ್ತಿದ್ದ ಬ್ರಾಹ್ಮಣ ಸ್ತ್ರೀ ಇಲ್ಲತಮ್ಮ ದೈವವಾಗಿ ಇನ್ನೋರ್ವ ಸ್ತ್ರೀ ಶ್ರೀಮಂತಿ ದೈವವಾಗಿ ಆರಾಧನೆ ಪಡೆಯುತ್ತಿದ್ದಾರೆ 


ಇನ್ನು  ದೈವಗಳ ಆಗ್ರಹಕ್ಕೆ ಎಂದರೆ  ಕೋಪಕ್ಕೆ ತುತ್ತಾದವರು ಕೂಡ ದೈವತ್ವ ಪಡೆದು ಆರಾಧಿಸಲ್ಪಡುವ ಅನೇಕ ಕಥಾನಕಗಳಿವೆ © ಡಾ.ಲಕ್ಷ್ಮೀ ಜಿ ಪ್ರಸಾದ್ 


ಚಾಮುಂಡಿ ದೈವಕ್ಕೆ ದ್ರೋಹ ಮಾಡಿದ ಓರ್ವ ಬ್ರಾಹ್ಮಣನನ್ನು ದೈವ ಮಾಯ ಮಾಡಿ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತದೆ.ಆತ ಜತ್ತಿಂಗ ದೈವವಾಗಿ ಆರಾಧನೆ ಪಡೆಯುತ್ತಾನೆ.


ತನಗೆ ಆಶ್ರಯ ಕೊಟ್ಟ ಮನೆಯ ಒಡೆಯನ ಮಗಳನ್ನು ತನ್ನ ಮಾಂತ್ರಿಕ ಶಕ್ತಿಯಿಂದ ವಶಪಡಿಸಿಕೊಳ್ಳಲೆತ್ನಿಸಿದ ಆಲಿ ಬ್ಯಾರಿ ಎಂಬ ಮುಸ್ಕಿಂ ವ್ಯಕ್ತಿಯನ್ನು ರಕ್ತೇಶ್ವರಿ ದೈವ ಉಪಾಯದಿಮದ ನೀರಿಗಿಳಿಸಿ ಮಾಯ ಮಾಡಿ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತದೆ.ಆತ ಆಲಿ ಭೂತ/ ಆಲಿ ಚಾಮುಂಡಿ ಎಂಬ ಹೆಸರಿನಲ್ಲಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾನೆ.


ಮಂಗಳೂರಿನ ಉರ್ವ ಚಿಲುಂಬಿಯಲ್ಲಿ ಅರಬ್ ವ್ಯಾಪಾರಿಯೊಬ್ಬ ಮಲರಾಯ ದೈವದ ಭಕ್ತೆಯಾದ ಓರ್ವ ಬ್ರಾಹ್ಮಣ ಹುಡುಗಿಗೆ ತೊಂದರೆ ಕೊಡುತ್ತಾನೆ.ಆಗ ತನ್ನ ಭಕ್ತೆಯ ಮಾನ ರಕ್ಷಣೆಗಾಗಿ ಮಲರಾಯ ದೈವ ಆ ಹುಡುಗಿಯನ್ನು ಮಾಯ ಮಾಡುತ್ತದೆ.ಶಿಕ್ಷೆಯಾಗಿ ಅ ಅರಬ್ ವ್ಯಾಪಾರಿಯನ್ನು ಮಾಯ ಮಾಡುತ್ತದೆ.ಮಾಯವಾದ ಈ ಇಬ್ಬರೂ ಅದೇ ದೈವದ ಸೇರಿಗೆಗೆ / ಸಾನ್ನಿಧ್ಯಕ್ಕೆ ಸಂದು ದೈವತ್ವ ಪಡೆದು ಆರಾಧಿಸಲ್ಪಡುತ್ತಾರೆ.

© ಡಾ‌ಲಕ್ಷ್ಮೀ ಜಿ ಪ್ರಸಾದ್

ಹೇಳಿದ ಹರಕೆಯನ್ನು ಮರೆತ ದೇವು ಪೂಂಜನ ಮೇಲೆ ಕಾಂತೇರಿ ಜುಮಾದಿ ದೈವ ಮುನಿದು ದುರಂತವನ್ನು ಉಂಟು ಮಾಡುತ್ತದೆ.ನಂತರ ದೇವು ಪೂಂಜನೂ ಕಾಂತೇರಿ ಜುಮಾದಿ ದೈವದ ಬಂಟ ದೈವವಾಗಿ ಆರಾಧನೆ ಪಡೆಯುತ್ತಾನೆ‌ ಹೇಳಿದ ಹರಕೆಯನ್ನು ಮರೆತದ್ದಲ್ಲದೆ ಜುಮಾದಿ ದೈವದ ಹಲಸಿನ ಮರದ ಹಣ್ಣನ್ನು ಕೊಯ್ದು ತಿಂದ ಮಂಜನಾಳ್ವರಿಗೆ ಶಿಕ್ಷೆಯ ರೂಪದಲ್ಲಿ ಕಂಬಳದ ಕೋಣಗಳು ಹಾಗೂ ನಾರ್ಯದ ಬಬ್ಬುವನ್ನು ಮಾಯ ಮಾಡುತ್ತದೆ.ಕಂಬಳದ ಕೋಣ ಹಾಗೂ ನಾರ್ಯದ ಬಬ್ಬು ದೈವತ್ಬ ಪಡೆದು ಎರುಬಂಟ ಮತ್ತು ಉರವ ದೈವಗಳಾಗಿ ಆರಾಧನೆ ಪಡೆಯುತ್ತಾರೆ .


ವಿಧಿ ನಿಷೇಧಗಳು ಆದಿಮಾನವನ ಕಾಲದ ಅಲಿಖಿತ ಶಾಸನಗಳಾಗಿದ್ದವು ಎಂಬಂತೆ ನಿಯಮಗಳನ್ನು ಮೀರಿದ ಅನೇಕರು ಮಾಯವಾಗಿ ದೈವತ್ವ ಪಡೆದಿದ್ದಾರೆ.ಬಬ್ಬರ್ಯನ ಕೋಲವನ್ನು ಸ್ತ್ರೀಯರು ನೋಡಬಾರದೆಂಬ ನಿಯಮವನ್ನು ಮೀರಿ ನೋಡಿದ ಮುಸ್ಲಿಂ ಮಹಿಳೆ ಬ್ಯಾರ್ದಿ ಭೂತವಾಗಿ ದೈವತ್ವ ಪಡೆದಿದ್ದಾಳೆ 


ಉಳ್ಳಾಕುಲ ದೈವದ ಕೋಲವನ್ನು ಹಲಸಿನ ಮರದ ಎಡೆಯಿಂದ ಬಗ್ಗಿ ನೋಡಿದ ಈರ್ವರು ಬ್ರಾಹ್ಮಣ ಹುಡುಗಿಯರು ನುರ್ಗಿ‌ಮದಿಮಾಳ್ ದುರ್ಗಿ‌ಮದಿಮಾಳ್ ಎಂಬ ಹೆಸರಿನಲ್ಲಿ ದೈವತ್ವ ಪಡೆದು ಆರಾಧಿಸಲ್ಪಡುತ್ತಿದ್ದಾರೆ  ಅರಸು ದೈವದ ಕೋಲವನ್ನು ನೋಡಿದ ಮೀನುಗಾರ್ತಿ ಮಹಿಳೆಯೊಬ್ಬಳನ್ನು ದೈವ ಮಾಯಮಾಡುತ್ತದೆ 

© ಡಾ‌ಲಕ್ಷ್ಮೀ ಜಿ ಪ್ರಸಾದ್

ಇನ್ನು ಯಾವುದೇ ವಿಶೇಷ ಕಾರಣವಿಲ್ಲದೇ ಇದ್ದಾಗಲೂ ದೈವದ ದೃಷ್ಟಿಗೆ ಬಿದ್ದು ಮಾಯವಾಗಿ ಆಯಾಯ ದೈವಗಳ ಸಾನ್ನಧ್ಯದಲ್ಲಿ ದೈವಗಳಾಗಿ ಆರಾಧಿಸಲ್ಪಡುತ್ತಾರೆ.ಕುಂಞಿ ಭೂತ,ಬ್ಯಾರಿ ಭೂತ,ಮಾಪುಲೆ ಮಾಪುಳ್ತ ಭೂತಗಳು,ಮಾಪುಲ್ತಿ ಧೂಮಾವತಿ ಬ್ರಾಣ ಭೂತ ಮತ್ತು ಮಾಣಿ ಭೂತ ,ದಾರು ಕುಂದಯ ಮೊದಲಾದವರು ಅಕಾರಣವಾಗಿ ದೈವದ ದೃಷ್ಟಿ ತಾಗಿ‌ಮಾಯವಾಗಿ ಆಯಾಯ ದೈವಗಳ ಸಾನ್ನಿಧ್ಯ ಸೇರಿ ದೈವತ್ವ ಪಡೆದು ಆರಾಧಿಸಲ್ಪಡುತ್ತಿದ್ದಾರೆ 

© ಡಾ‌ಲಕ್ಷ್ಮೀ ಜಿ ಪ್ರಸಾದ್

ತುಳುನಾಡಿನಲ್ಲಿ ಅನೇಕ ಕನ್ನಡಿಗರು ದೈವತ್ವ ಪಡೆದು ಆರಾಧಿಸಲ್ಪಡುತ್ತಿದ್ದಾರೆ ಬಚ್ಚ ನಾಯಕ ತಿಮ್ಮಣ್ಣ ನಾಯಕ ಬೈಸು ನಾಯಕ ಕನ್ನಡ ಬೀರ ಕನ್ನಡ ಭೂತ ,ಕನ್ನಡ ಯಾನೇ ಲುರುಷ ಭೂತ ಮೊದಲಾದ  ಅನೇಕರು ಕನ್ನಡ ಮೂಲದ ದೈವಗಳು

ಓರ್ವ ಬ್ರಿಟಿಷ್ ಸುಭೇದಾರ ಕುಡ ಕಾರಣಾಂತರಗಳಿಂದ ದೈವತ್ವ ಪಡೆದು ಕನ್ನಡ ಬೀರ ಎಂಬ ಹೆಸರಿನ ದೈವವಾಗಿ‌ ಆರಾಧನೆ ಪಡೆಯುತ್ತಾನೆ 

ದೈವವನ್ನು ಒಂದೆಡೆಯಿಂದ ತನ್ನ ಮನೆಗೆ ಕೊಂಡು ಹೋಗುವ ಸಮಯದಲ್ಲಿ ಕಾರಣಾಂತರದಿಂದ  ಆ ವ್ಯಕ್ತಿಯ ಮಡಿಲಲ್ಲಿ ಓರ್ವ ಪೊಲೀಸ್ ಸಾಯುತ್ತಾನೆ‌ ಆತ ದೈವತ್ವ ಪಡೆದು ಪೊಲೀಸ್ ತೆಯ್ಯಂ ಆಗಿ ಆರಾಧಿಸಲ್ಪಡುತ್ತಾನೆ 

ಪಿಲಿಚಾಮುಂಡಿ ದೈವ ಮಾವೇರಿ ತೀರ್ಥ ಸ್ನಾನಕ್ಕೆ ಹೋಗುವಾಗ ಎದುರಾಗುವ ಕಳ್ಳ ಪೋಲೀಸ್ ಅವಲಕ್ಕಿ ಮಾರಾಟಗಾರ, ಜೇನು‌ಮಾರಾಟಗಾರ ,ಶ್ಯಾನುಭೋಗ ಸೇನವ ಪಟೇಲ ಗುರಿಕಾರ ಮೊದಲಾದವರನ್ನೆಲ್ಲ ತನ್ನ ಸೇರಿಗೆಗೆ ಸೇರಿಸಿಕೊಂಡು ದೈವತ್ವ ನೀಡುತ್ತದೆ ಇವರೆಲ್ಲ ಪಿಲಿಚಾಮುಂಡಿಯ  ಸೇರಿಗೆ/ ಪರಿವಾರ ದೈವಗಳಾಗಿ ಆರಾಧಿಸಲ್ಪಡುತ್ತಾರೆ.© ಡಾ.ಲಕ್ಷ್ಮೀ ಜಿ ಪ್ರಸಾದ್ 


 ದೈವಗಳ ಅನುಗ್ರಹಕ್ಕೆ ಅಥವಾ ಆಗ್ರಹಕ್ಕೆ ಈಡಾಗಿ‌ ಮಾಯವಾದವರು ಆಯಾಯ ದೈವಗಳ ಸಾನ್ನಿಧ್ಯಕ್ಕೆ ಸೇರಿ ದೈವಗಳಾಗಿ ಆರಾಧನೆ ಪಡೆಯುವ ಕಥಾನಕಗಳು ಅನೇಕ ಕಡೆಗಳಲ್ಲಿ ಪ್ರಚಲಿತವಿವೆ.


ಇಲ್ಲಿ ದೈವತ್ವ ಪಡೆಯುವ ಮೊದಲು ಇವರು ಏನಾಗಿದ್ದರು? ಒಳ್ಳೆಯವರೋ ಕೆಟ್ಟವರೋ  ಎಂಬ ವಿಷಯ ಗಣನೆಗೆ ಬರುವುದಿಲ್ಲ .ದೈವವಾದ ನಂತರ ಇವರು ನಮ್ಮನ್ನು ಕಾಯುವ ಶಕ್ತಿಗಳು .ಎಲ್ಲ ದೈವಗಳಿಗೂ ಸಮಾನ ಗೌರವ, ಭಕ್ತಿಯ ಆರಾಧನೆ ಇರುತ್ತದೆ ,ಇದು ತುಳು ಸಂಸ್ಕೃತಿಯ ವಿಶಿಷ್ಟತೆ .ಇಲ್ಲಿ ಎಲ್ಲ ಜಾತಿ ಮತಗಳ ಜನರೂ ದೈವತ್ವ ಪಡೆದು ಆರಾಧಿಸಲ್ಪಡುತ್ತಿದ್ದಾರೆ ಹಾಗೆಯೇ ಇಲ್ಲಿ ಎಲ್ಲ ಜಾತಿ ಮತಗಳ ಜನರೂ  ದೈವಗಳನ್ನು ನಂಬಿ ಆರಾಧಿಸುತ್ತಾರೆ .ಇಲ್ಲಿನ ದೈವಾರಾಧನೆಯಲ್ಲಿ ಜಾತಿ ಮತಗಳ ಸಾಮರಸ್ಯವಿದೆ.ಹಾಗಾಗಿ ಇದು  ಜಗತ್ತಿಗೇ ಮಾದರಿಯಾಗಿರುವ ಶ್ರೇಷ್ಠ ಆರಾಧನಾ ಪದ್ಧತಿಯಾಗಿದೆ 

© ಡಾ‌ಲಕ್ಷ್ಮೀ ಜಿ ಪ್ರಸಾದ್ ಲೇ :,ಕರಾವಳಿಯ ಸಾವಿರದೊಂದು ದೈವಗಳು‌,ಮೊಬೈಲ್ : 9480516684 

ದೈವ ಕಟ್ಟಿದವರೂ  ಮಾಯವಾಗುತ್ತಾರೆಯೇ ? ಮಾಯವಾದವರು ಏನಾಗುತ್ತಾರೆ ?ಮಾಯ ಆಗುದೆಂದರೇನು ?  

ದೈವದ ಕಳದಲ್ಲಿ ಗಾಯಗೊಳ್ಳುವ ಕೋರಚ್ಚನ್ ಎಂಬ ದೈವ ಪಾತ್ರಿ ದೈವತ್ವ  ಪಡೆದು ದೈವವಾಗಿ ಆರಾಧಿಸಲ್ಪಡುತ್ತಾನೆ.  ದೈವ ಕಟ್ಟಿದಾಗ  ಮಾಯ ಹೊಂದಿದ  ಫಣಿಯನ್ ದೈವತ್ವ ಪಡೆದು ಆರಾಧನೆ ಪಡೆಯುತ್ತಾನೆ‌.


ಸುಳ್ಯ ಉತ್ತರ ಕೊಡಗು ಪರಿಸರಲ್ಲಿ ಅಜ್ಜಿ ಭೂತದೊಡನೆ ಕೂಜಿಲು ಹೆಸರಿನ ಎರಡು ದೈವಗಳಿಗೆ ಆರಾಧನೆ ಇದೆ.ಈ ದೈವಗಳ ಕೋಲದ ಕೊನೆಯಲ್ಲಿ ಸೇರಿದ ಜನರೆಲ್ಲ ಸೇರಿ ಕೈ ಕೈ ಹಿಡಿದು ದೈವಗಳ ಸುತ್ತ ಭದ್ರವಾಗಿ ಕೋಟೆ ಕಟ್ಟಿ ನಿಲ್ಲುತ್ತಾರೆ.

ಆಗ ದೈವಗಳು ಇವರ ಕೈಯಿಂದ ತಪ್ಪಿಸಿಕೊಂಡು ಹೊರ ಹೋಗಲು ಪ್ರಯತ್ನ ಪಡುತ್ತವೆ.ಜನರು ಬಿಡುವುದಿಲ್ಲ.


ಒಂದೊಮ್ಮೆ ಈ ಕೂಜಿಲು  ದೈವಗಳು  ಜನರು ಕಟ್ಟಿದ ಕೋಟೆಯಿಂದ ತಪ್ಪಿಸಿಕೊಂಡು ಹೊರ ಹೋದರೆ ಮತ್ತೆ ಹಿಂದೆ ಬರುವುದಿಲ್ಲ.ಕಾಡಿನೊಳಗೆ ಹೋಗಿ‌ ಮಾಯವಾಗುತ್ತಾರೆ ಎಂಬ ಐತಿಹ್ಯವಿದೆ.

© ಡಾ‌ಲಕ್ಷ್ಮೀ ಜಿ ಪ್ರಸಾದ್

© ಡಾ‌ಲಕ್ಷ್ಮೀ ಜಿ ಪ್ರಸಾದ್ ಲೇ :,ಕರಾವಳಿಯ ಸಾವಿರದೊಂದು ದೈವಗಳು‌,ಮೊಬೈಲ್ : 9480516684 

ಮೊದಲು ಹದಿನಾರು ಕೂಜಿಲು ದೈವಗಳಿಗೆ ಕೋಲ ಇತ್ತು.ಕೋಟೆ ತಪ್ಪಿಸಿಕೊಂಡು ಒಬ್ಬೊಬ್ಬರೇ ಹೊರ ಹೋಗಿ ಮಾಯವಾಗಿ ಇಬ್ಬರು ಮಾತ್ರ ಉಳಿದಿದ್ದಾರೆ ಹಾಗಾಗಿ ಈಗ ಎರಡು ಕೂಜಿಲು ದೈವಗಳಿಗೆ ಕೋಲ ಕಟ್ಟಿ ಆರಾಧಿಸುತ್ತಾರೆ.ತಮ್ಮ ಮನೆಯ ಹಿರಿಯರಲ್ಲೊಬ್ಬರು ಹೀಗೆ ಮಾಯಕ ಹೊಂದಿದ್ದಾರೆ ಎಂದು‌ ಭೂತ ಕಟ್ಟುವ ಹಿರಿಯ ಕಲಾವಿದರಾದ ಪೂವಪ್ಪರು ನನ್ನಲ್ಲಿ ಮಾತನಾಡುವಾಗ ಹೇಳಿದ್ದರು.


ಇದೇ ರೀತಿಯ ಅಚರಣೆ ಹಾಗೂ ನಂಬಿಕೆಗಳು ವರ್ಣಾರ ಪಂಜುರ್ಲಿ,ದುಗಲಾಯ,ಸುತ್ತು ಕೋಟೆ ಚಾಮುಂಡಿ ದೈವಗಳ ಬಗ್ಗೆಯೂ ಇದೆ 


ತಮ್ಮ  ಊರು ಹೊಸಬೆಟ್ಟಿನಲ್ಲಿ  ರಾವು ಗುಳಿಗ ಆವೇಶ ಬಂದು ಗೋಳಿ‌ಮರವನ್ನು ಏರಿ ಮಾಯವಾದ ಬಗ್ಗೆ ಹೊಸಬೆಟ್ಟಿನ ಗಣೇಶ್ ರಾಮ್ ಅವರು ತಿಳಿಸಿದ್ದಾರೆ ಮಾಯವಾದದ್ದಕ್ಕೆ ಸಾಕ್ಷಿಯಾಗಿ ಮರದ ಕೆಳಗೆ ದೈವದ ಗಗ್ಗರ ಸಿಕ್ಕಿತಂತೆ ,


ನಂತರ ಇಲ್ಲಿ ರಾವು ಗುಳಿಗನ ಕೋಲವನ್ನು ನಿಲ್ಲಿಸಿದರಂತೆ.ಆದರೆ ಪದೇ ಪದೇ ಆ ಊರಿನಲ್ಲಿ ಅಪಘಾತಗಳಾಗಲು ಶುರುವಾಗಿ ನಂತರ ಪುನಃ ಈ ದೈವವನ್ನು ಕಟ್ಟಿ ಕೋಲ ಕೊಟ್ಟು ಆರಾಧಿಸಲು ಶುರು ಮಾಡಿದ್ದಾರೆ 

© ಡಾ‌ಲಕ್ಷ್ಮೀ ಜಿ ಪ್ರಸಾದ್

ಅದೇ ರೀತಿ ಸುಳ್ಯ

ಸುಳ್ಯದ ದೇಂಗೋಡಿಯ ಜಾಲಾಟದಲ್ಲಿ ಬಹಳ ಉಗ್ರ ಸ್ವರೂಪದ ದೈವ ಜಂಗ ಬಂಟ  ಆವೇಶದಿಂದ ಓಡಿ ಮಾಯವಾಗುತ್ತದೆ ಬಿದಿರು ಮೆಳೆಯ ತುದಿಯಲ್ಲಿ ಗಗ್ಗರ ಸಿಲುಕಿಕೊಂಡು ಸಿಕ್ಕಿತೆಂಬ ಮಾಹಿತಿಯನ್ನು ಈ ಮನೆಯ ನಿತಿನ್ ಅವರು ತಿಳಿಸಿದ್ದಾರೆ,


ಕೂಜಿಲು ದೈವ ಕಟ್ಟಿರುವವರಲ್ಲಿ ಒಬ್ಬಾತ ತಮ್ಮ ಮನೆಯಲ್ಲಿ ಮಾಯವಾದದ್ದೆಂಬ ಐತಿಹ್ಯ ಇರುವುದನ್ನು ದೀಪಕ ಮುರುಡಿತ್ತಾಯರು ತಿಳಿಸಿದ್ದಾರೆ.ಈ ಕಾರಣದಿಂದ ಅಲ್ಲಿ ಸುಮಾರು ಸಮಯ ಕೂಜಿಲು ದೈವಗಳ ಕೋಲವನ್ನು ನಿಲ್ಲಿಸಿದ್ದರಂತೆ 

ಇತ್ತೀಚೆಗೆ ಸುಳ್ಯದಲ್ಲಿ ಹನ್ನೊಂದು ಕೊರಗ ತನಿಯ ದೈವಗಳ ಕೋಲ ಆಗುವಾಗ ಹನ್ನೆರಡನೆಯ ಕೊರಗ ತನಿಯ ದೈವ ಕಾಣಿಸಿಕೊಂಡು ಅದೃಶ್ಯವಾಗಿದೆ ಸಾಕ್ಷಿಯಾಗಿ ಆ ದೈವ ಧರಿಸಿದ್ದ ಮುಟ್ಟಾಳೆ ಇತ್ತು ಎಂಬ  ಬಗ್ಗೆ ಕೇಳಿದ್ದೆ.

© ಡಾ‌ಲಕ್ಷ್ಮೀ ಜಿ ಪ್ರಸಾದ್ ಲೇ :,ಕರಾವಳಿಯ ಸಾವಿರದೊಂದು ದೈವಗಳು‌,ಮೊಬೈಲ್ : 9480516684 

ಇಲ್ಲೆಲ್ಲ‌ ಮಾಯವಾದವರು ಏನಾದರು ಎಂಬುದಕ್ಕೆ ಸ್ಪಷ್ಟ ಮಾಹಿತಿ ಸಿಗುವುದಿಲ್ಲ.ಆದರೆ ದೈವದ ಅನುಗ್ರಹಕ್ಕೆ ಪಾತ್ರರಾದ ಇವರುಗಳು ಅಯಾಯ ದೈವವದ ಸಾನ್ನಿಧ್ಯಕ್ಕೆ ಸೇರಿ ದೈವಗಳೇ ಆಗಿರುತ್ತಾರೆ 

ಯಾಕೆಂದರೆ  ಅನೇಕ ವ್ಯಕ್ತಿಗಳನ್ನು ದೈವಗಳು ಮಾಯ ಮಾಡಿ ತಮ್ಮ ಸೇರಿಗೆಗೆ ಸೇರಿಸಿಕೊಂಡ ವಿಚಾರ ಅನೇಕ ದೈವಗಳ ಕಥೆಯಲ್ಲಿದೆ.ನನಗೆ ಸಿಕ್ಕವನ್ನೆಲ್ಲ 1238 ದೈವಗಳ ಮಾಹಿತಿ ಇರುವ ನನ್ನ ಕರಾವಳಿಯ ಸಾವಿರದೊಂದು ದೈವಗಳು ಕೃತಿಯಲ್ಕಿ ದಾಖಲಿಸಿದ್ದೇನೆ ಕಾಂತಾರದಂತಹ ಸಾವಿರ ಸಿನೇಮಗಳಿಗೆ ಸಾಕಾಗುವಷ್ಟು ಕಥಾನಕಗಳು ಇದರಲ್ಲಿದೆ 

ಮಾಯ ಆಗುವುದರೆ ಇಲ್ಲವಾಗುವುದಲ್ಲ.ಹಾಗಾಗಿ ಮಾಯವಾದವರ ಪತ್ನಿ ವಿಧವೆ ಎಂದು ಪರಿಗಣಿಸಲ್ಪಡುವುದಿಲ್ಲ.ಆಕೆಗೆ ಅಪಾರ ಗೌರವ ಇರುತ್ತದೆ ಎಂಬ ಮಾಹಿತಿ ಹಿರಿಯರಾದ ದೈವ ಕಟ್ಟುವ ಕಲಾವಿದರಾದ ಪೂವಪ್ಪ ಅವರು ನೀಡಿದ್ದಾರೆ .ಹಾಗಾಗಿ ಮಾಯವಾಗಿ ದೈವತ್ವವ ಪಡೆದವರಿಗೆ ಇತರರಿಗೆ ಮಾಡುವಂತೆ ಅಂತ್ಯ ಸಂಸ್ಕಾರ ಮಾಡುವುದಲ್ಲ.ಅವರಿಗೆ ದೈವದ ರೀತಿಯಲ್ಲಿ ತಂಬಿಲ ಕೋಲ ಕೊಟ್ಟು ಆರಾಧಿಸುತ್ತಾರೆ ಮಾಯವಾದವರ ಮನೆ ಮಂದಿಗೆ ಅಶೌಚದ ಆಚರಣೆಯೂ ಇರುವುದಿಲ್ಲ. 


ಮಾಯಕ ಹೊಂದಿದವರ ಮನೆ ಮಂದಿ ಸಂಸಾರದ ಗತಿ ಏನು ಎಂಬುದೊಂದು ಪ್ರಶ್ನೆ ಅನೇಕರಿಗೆ ಕಾಡಿದೆ

ಈ ಭೂಮಿಯಲ್ಲಿ ಯಾರೂ ಶಾಶ್ವತರಲ್ಲ.ಎಲ್ಲರನ್ನೂ ಹೆತ್ತ ತಾಯಿಯಂತೆ ಪೊರೆಯುವ ದೈವ ದೇವರುಗಳು ಈ ಮನೆಮಂದಿಯನ್ನೂ ಸಲಹುವರು ಎಂದಷ್ಟೇ ಹೇಳಬಲ್ಲೆ.ಮಾಯಕ ಹೊಂದಿದವರು ಜನನ ಮರಣ ಚಕ್ರದಿಂದ/ ಭವ ಬಂಧನದಿಂದ ಪಾರಾಗಿ‌ ಶಿಷ್ಟ ಜನರ ರಕ್ಷಣೆ ಮಾಡುವ ಶಕ್ತಿಗಳಾಗಿ ನೆಲೆನಿಲ್ಲುತ್ತಾರೆ 

© ಡಾ‌ಲಕ್ಷ್ಮೀ ಜಿ ಪ್ರಸಾದ್ ಲೇ :,ಕರಾವಳಿಯ ಸಾವಿರದೊಂದು ದೈವಗಳು‌,ಮೊಬೈಲ್ : 9480516684 

ಇನ್ನು ಕಾಂತಾರ ಸಿನೇಮದ ಕಥೆ ದಂತ ಕಥೆ ಎಂದಿದ್ದಾರೆ.ನಾನಿಲ್ಲಿ ಹೇಳಿದ ಕಥಾನಕಗಳೂ ಕೂಡ ದಂತ ಕಥೆಗಳೇ..ಇವು ಯಾವುದೋ ಕಾಲದಲ್ಲಿ ನಡೆದಿರಬಹುದಾದ ಘಟನೆಗಳು ಮೌಖಿಕವಾಗಿ ಹರಡಿದ ಕಥಾನಕಗಳು 

ಕಾಂತಾರದ ದಂತ ಕಥೆ ಯಾವುದೋ ಕಾಲ ಘಟ್ಟದಲ್ಲಿ ನಡೆದದ್ದೇ ಆಗಿದ್ದರೆ ಅಲ್ಲಿ ದೈವ ಕಟ್ಟಿದಾಗ ಮಾಯವಾಗುವ  ತಂದೆ ಮಗ  ಇಬ್ಬರೂ ಕೂಡ ಪಂಜುರ್ಲಿ ದೈವದ ಸಾನ್ನಿಧ್ಯಕ್ಕೆ ಸೇರಿದ ಸೇರಿಗೆ ದೈವಗಳೇ ಆಗಿರುತ್ತಾರೆ

ಹಾಗಾಗಿಯೇ ಅವರಿಬ್ಬರು ಮಾಯಕವಾದ ಸ್ಥಳದಲ್ಲಿ ತಂದೆ ಮಗನ  ಸಮಾಗಮವನ್ನು ತೋರಿಸಿರಬಹುದು.  ಗುರುವ ಸತ್ತಾಗ ಅಳುವ ಧ್ವನಿ ಪಂಜುರ್ಲಿ ದೈವದ ಸಾನ್ನಿಧ್ಯ ಸೇರಿ ಸೇರಿಗೆ ದೈವವಾದ  ಗುರುವನ ಚಿಕ್ಕಪ್ಪನದು ಎಂದು ಅರ್ಥೈಸಬಹುದು ಅಥವಾ ತನ್ನ ಅನನ್ಯ ಭಕ್ತ ಗುರುವನ ಸಾವಿಗೆ ದುಃಖಿಸಿದ ಪಂಜುರ್ಲಿಯದೆಂದೂ ಅರ್ಥೈಸಬಹುದು. ಇದು ಸಿನೇಮ ಹಾಗಾಗಿ ಈ ಭಾಗ ಕಲ್ಪನೆಯಾಗಿರಲೂ ಸಾಧ್ಯವಿದೆ 

© ಡಾ.ಲಕ್ಷ್ಮೀ ಜಿ ಪ್ರಸಾದ್ 

ಹೀಗೆ ಮಾಯ ಎಂದರೆ ಒಬ್ಬ ವ್ಯಕ್ತಿ ಇದ್ದಕ್ಕಿದ್ದಂತೆ ಅದೃಶ್ಯವಾಗಲು ಸಾಧ್ಯವೇ ? ಎಂಬುದೊಂದು ಪ್ರಶ್ನೆ..


falling to 5 th dimention ಎಂದರೆ ಜನರು ನೋಡುತ್ತಿದ್ದಂತೆಯೇ ವ್ಯಕ್ತಿಗಳು ಅದೃಶ್ಯವಾದ ಸುಮಾರು 163 ಪ್ರಕರಣಗಳು ದಾಖಲಾಗಿವೆ.ಇವು‌ ಮೆಟ ಫಿಸಿಕ್ಸ್ ನಲ್ಲಿ ಬರುತ್ತವೆ.ಉದ್ದ ಅಗಲ ಎತ್ತರ ಕಾಲ ಎಂಬ ನಾಲ್ಕು dimension ನಲ್ಲಿ ನಾವು ಬದುಕುತ್ತಿದ್ದೇವೆ.ಇದನ್ನು ಮೀರಿದ ಐದನೆಯ dimension ಗೆ ಹೋದ ವ್ಯಕ್ತಿ ವಸ್ತು ಅದೃಶ್ಯವಾಗುತ್ತದೆ ಎಂಬ ವಿಚಾರವನ್ನು ಉಜಿರೆಯ ಚಲಿಸುವ ವಿಶ್ವಕೋಶ ಎಂದೇ ಖ್ಯಾತರಾಗಿದ್ದ ಫಿಸಿಕ್ಸ್ ಪ್ರೊಫೆಸರ್ ಕೇಶವರು ನಾವು ವಿದ್ಯಾರ್ಥಿಗಳಾಗಿದ್ದಾಗ ಹೇಳಿದ್ದರು


ಅಂತೆಯೇ ಕಪ್ಪು ರಂಧ್ರ/ black holes ಗಳು ಇವೆಯಂತೆ ಇವುಗಳನ್ನು ಪ್ರವೇಶ ಮಾಡಿದ ಬೆಳಕು ಕೂಡ ಹೊರಬರುವುದಿಲ್ಲ‌ ಅಷ್ಟು ಹೆಚ್ಚಿನ ಗುರುತ್ವಾಕರ್ಷಣ ಬಲ ಇರುತ್ತದೆಯಂತೆ

ಇದಲ್ಲದೆ ಬರ್ಮುಡಾ ಟ್ರ್ತಾಂಗಲ್ ನ ಕುರಿತಾಗಿ ಅನೇಕ ಐತಿಹ್ಯಗಳಿವೆ.ಈ ಪ್ರದೇಶವನ್ನು ಸಮೀಪಿಸಿದ ಹಡಗು ವಿಮಾನ ಎಲ್ಲವೂ ಅದೃಶ್ಯವಾಗಿವೆ.ಇವನ್ನು ಪತ್ತೆ ಮಾಡಲು ಹೋದವರೂ ನಾಪತ್ತೆಯಾಗಿದ್ದಾರಂತೆ


ಅಂತೆಯೇ ದೈವ ಕಟ್ಟಿದ ಕಲಾವಿದರಲ್ಲೂ ವಿಶೇಷ ಶಕ್ತಿಯ ಅವೇಶವಾಗಿ / ಶಕ್ತಿ ಉತ್ತೇಜನಗೊಂಡು  ಇಂತಹ ಪವಾಡಗಳು ನಡೆಯಬಾರದೆಂದೇನೂ ಇಲ್ಲ.

ನಮಗೆ ಗೊತ್ತಿಲ್ಲದೇ ಇರುವ ಅನೇಕ ವಿಚಾರಗಳಿವೆ.ಗೊತ್ತಿಲ್ಲದೇ ಇರುವುದನ್ನು ಗೊತ್ತಿಲ್ಕ ಎನ್ನಬಹುದೇ ಹೊರತು ಇಲ್ಲವೇ ಇಲ್ಲ ಎನ್ನಲಾಗದು 

ಕಳೆದ ಇಪ್ಪತ್ತೊಂದು ವರ್ಷಗಳ ಕ್ಷೇತ್ರ ಕಾರ್ಯ ಅಧ್ಯಯನದಲ್ಲಿ ಇಂತಹ ಅನೇಕ ಕೌತುಕದ ಅಧ್ಯಯನ ಯೋಗ್ಯ ವಿಚಾರಗಳಿವೆ.ವಿಶಿಷ್ಟ ಕಥಾನಕಗಳು ಸಿಕ್ಕಿವೆ

ಇನ್ನು ತುಳುನಾಡಿನಲ್ಲಿ ಎಷ್ಟು ದೈವಗಳಿಗೆ ಆರಾಧನೆ ಇದೆ ಎಂಬುದೊಂದು ಪ್ರಶ್ನೆ.ಇದಕ್ಕೆ ಇದಮಿತ್ಥಂ ಎಂದು ಉತ್ತರಿಸುವುದು ಕಷ್ಟ.ತುಳು ಸಂಸ್ಕೃತಿ‌ ಕುರಿತು ಅಧ್ಯಯನ‌ಮಾಡಿದ ಡಾ

ಬಿ ಎ ವಿವೇಕ ರೈಗಳು 260 ದೈವಗಳ ಹೆಸರನ್ನು ಸಂಗ್ರಹಿಸಿ‌ಅವರ ಪಿಎಚ್ ಡಿ ನಿಬಂಧ ತುಳು ಜನಪದ ಸಾಹಿತ್ಯ ದಲ್ಲಿ ನೀಡಿದ್ದಾರೆ.ಇದನ್ನು ಪರಿಷ್ಕರಿಸಿ ಡಾ.ಚಿನ್ನಪ್ಪ ಗೌಡರು ಅವರ ಪಿಎಚ್ ಡಿ ನಿಬಂಧ ಭೂತಾರಾಧನೆ- ಒಂದು ಜಾನಪದೀಯ ಅಧ್ಯಯನದಲ್ಲಿ ಮುನ್ನೂರು ದೈವಗಳ ಹೆಸರಿನ ಪಟ್ಟಿ ನೀಡಿದ್ದಾರೆ.ರಘುನಾಥ ವರ್ಕಾಡಿಯವರು 404 ದೈವಗಳ ಹೆಸರನ್ನು ಸಂಗ್ರಹಿಸಿದ್ದಾರೆ ಅದರಲ್ಲಿ ಡಾ.ಚಿನ್ನಪ್ಪ ಗೌಡರು ಸಂಗ್ರಹಿಸಿದ ಹೆಸರುಗಳು ಸೇರಿದೆ

ಈ 404 ಸೇರಿದಂತೆ ನನಗೆ 2330 ದೈವಗಳ ಹೆಸರುಗಳು ಸಿಕ್ಕಿವೆ ,1238 ದೈವಗಳ ಮಾಹಿತಿಯೂ ಸಿಕ್ಕಿದ್ದು  ಕರಾವಳಿಯ ಸಾವಿರದೊಂದು ದೈವಗಳು ಕೃತಿಯಲ್ಲಿ ನನ್ನ ಅರಿವಿಗೆ ನಿಲುಕಿದಂತೆ ನೀಡಿದ್ದೇನೆ 

ಇದು.© ಡಾ‌ಲಕ್ಷ್ಮೀ ಜಿ ಪ್ರಸಾದ್ ಲೇ :,ಕರಾವಳಿಯ ಸಾವಿರದೊಂದು ದೈವಗಳು‌,ಮೊಬೈಲ್ : 9480516684  ಅಂತಿಮವಲ್ಲ.ಈವತ್ತಷ್ಟೇ ಸಂಜೀವ ನೆರಿಯ ಅವರು ಕಲ್ಲ ಮುದರ ಎಂಬ ಎರಡು ದೈವಗಳ ಐತಿಹ್ಯಗಳನ್ನು ತಿಳಿಸಿದ್ದು ಈ ಎರಡು ದೈವಗಳ. ಹೆಸರು ಕೂಡ ಈವತ್ತಷ್ಟೇ ಸಿಕ್ಕಿದೆ.ಈ ಪುಸ್ತಕ ಪ್ರಕಟಣೆಯ ನಂತರ ಕುಂಜಾರತಜ್ಜಿ ಭಟ್ಯೆದಿ ಕರ್ತಜ್ಜ,ಸಂಪಿಗೆತ್ತಾಯ ಸೇರಿದಂತೆ ಹದಿನೈದು ದೈವಗಳ ಮಾಹಿತಿ ಸಿಕ್ಕಿದೆ ,ಏಕಲವ್ಯ ಜುಮಾದಿ ಹನುಮಾನ್ ಪಂಜುರ್ಲಿ  ಕೆಮ್ಮಟೆ ಪಂಜುರ್ಲಿ ಮೊದಲಾದ ಹೆಸರುಗಳನ್ನು ಇತ್ತೀಚೆಗೆ ಕದ್ರಿ ನವನೀತ ಶೆಟ್ಟಿಯವರು ನೀಡಿದ್ದಾರೆ

ಹಾಗಾಗಿ ಇಲ್ಲಿ ಎಷ್ಟು ದೈವಗಳಿಗೆ ಆರಾಧನೆ ಇದೆ ಎಂದು ಇದಮಿತ್ಥಂ ಹೇಳಲು ಸಾಧ್ಯವಿಲ್ಲ.© ಡಾ‌ಲಕ್ಷ್ಮೀ ಜಿ ಪ್ರಸಾದ್

ನನಗೆ ಸಿಕ್ಕ ಮಾಹಿತಿಯನ್ನು ನನ್ನ ಜ್ಞಾನದ ಪರಿಧಿಯೊಳಗೆ ಸಂಶೋಧನಾ  ಅಧ್ಯಯನದ ವಿಧಾನಗಳ ತಳಹದಿಯಲ್ಲಿ ಸಂಕ್ಷಿಪ್ತವಾಗಿ ವಿಶ್ಲೇಷಣೆ ಮಾಡಿದ್ದೇನೆ‌.ಇದರಲ್ಲಿನ ದೈವಗಳ ಕಥೆಗಳು ನನ್ನ ಕಲ್ಪನೆಯ  ಸೃಷ್ಟಿಯಲ್ಲ.

ಪ್ರಚಲಿತ ಪಾಡ್ದನ ಐತಿಹ್ಯಗಳ ಮೂಲಕ ವಕ್ತೃಗಳ ಮೂಲಕ ಸಿಕ್ಕ ಮಾಹಿತಿಗಳು ಇವು.ಸಂಗ್ರಹ ಮತ್ತು ವಿಶ್ಲೇಷಣೆ ಮಾತ್ರ ನನ್ನದು ಇದರಲ್ಲಿರುವ ಮಾಹಿತಿಯೇ ಅಂತಿಮವಲ್ಲ.ಒಂದು ದೈವಕ್ಕೆ ಸಂಬಂಧಿಸಿದಂತೆ ಅನೇಕ ಪಾಡ್ದನ ಐತಿಹ್ಯಗಳಿರುತ್ತವೆ‌.ಇವುಗಳಲ್ಲಿ ಯಾವುದು ಸರಿ ಯಾವುದು ತಪ್ಪು ಎಂದು ಹೇಳಲು ಸಾಧ್ಯವಿಲ್ಲ..ನನಗೆ ಸಿಕ್ಕಿದ್ದನ್ನು ಒಟ್ಟು ಮಾಡಿ ಅಧ್ಯಯನದ ತಳಹದಿಯಲ್ಲಿ ವಿಶ್ಲೇಷಿಸಿ ಬರೆದಿರುವೆ‌.ಇದಕ್ಕೆ ಅನೇಕರು ಸಹಕಾರ ನೀಡಿದ್ದಾರೆ 

ಇದು ಅನೇಕ  ವಿದ್ವಾಂಸರ ಮೆಚ್ಚುಗೆಯನ್ನು ಕೂಡಾ ಪಡೆದಿದೆ.

 ತಿರುಗಿ ನೋಡಿದಾಗ ನನಗೇ ಇದೆಲ್ಲವನ್ನು ನಾನು ಬರೆದೆನೇ ? ಎಂದು ಸೋಜಿಗವಾಗುತ್ತದೆ.ಓರ್ವ ಸಾಮಾನ್ಯ ಉಪನ್ಯಾಸಕಿಯಾದ ನನಗೆ ಇದು ಅಸಾಧ್ಯದ ವಿಚಾರ.ದೈವ ದೇವರುಗಳೇ ಕೈಹಿಡಿದು ಬರೆಸಿದ್ದಾರೆ ಎಂದು ನನಗನಿಸುತ್ತದೆ

ನೀನೊಲಿದರೆ ಕೊರಡು ಕೊನರುವುದಯ್ಯ ಎಂದು ಶರಣ ಶ್ರೇಷ್ಠರಾದ ಬಸವಣ್ಣನವರು  ಹೇಳಿದಂತೆ ದೈವ ಕಾರುಣ್ಯದಿಂದಲೇ ಇದು ಸಾಧ್ಯವಾಗಿದೆ ಎಂದಷ್ಟೇ ಹೇಳಬಲ್ಲೆ

ಡಾ.ಲಕ್ಷ್ಮೀ ಜಿ ಪ್ರಸಾದ್ 


ಜಾನಪದ ಅಧ್ಯಯನದ ಆಚಾರ್ಯ ಕೃತಿ 

- ಡಾ.ನಾ ಮೊಗಸಾಲೆ 

ಡಾ. ಲಕ್ಷ್ಮೀ ಪ್ರಸಾದ್ (ಲಕ್ಷ್ಮೀ ವಾರಣಾಸಿ) ಅವರು ಕಾಸರಗೋಡು ಜಿಲ್ಲೆಯ ಕೋಳ್ಯೂರು ಗ್ರಾಮದ ವಾರಣಾಸಿ ಮೂಲದವರು .ಇವರ ತಂದೆ ವೇದಮೂರ್ತಿ ನಾರಾಯಣ ಭಟ್ಟರು  ವಿದ್ವಾಂಸರೆಂದು ಪ್ರಸಿದ್ಧರು. ತನ್ನ ಮನೆತನವು ವೈದಿಕಾಚರಣೆಯನ್ನೇ ಹೊಂದಿದ್ದರೂ, ಕುಟುಂಬದಲ್ಲಿ ದೈವದ ಆರಾಧನೆಯನ್ನು ಮಾಡುತ್ತಿರುವುದೇಕೆ ಎಂಬ ಕುತೂಹಲವೇ ಡಾ. ಲಕ್ಷ್ಮೀ ಪ್ರಸಾದ್ ಅವರಿಗೆ ಪ್ರೇರಣೆಯಾಗಿ ಅವರು ಈ ಕುರಿತಾದ ಸಂಶೋಧನೆಗೆ ಇಳಿದರು. 


ಇದರಿಂದ ಕರಾವಳಿ ಕರ್ನಾಟಕದ ಅಂದರೆ ಅವಿಭಜಿತ ದ.ಕ.ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ ಮತ್ತು ಕೊಡಗನ್ನೂ ಒಳಗೊಂಡಂತೆ ದೈವರಾಧನೆಯ ಆಶಯ ಆಕೃತಿಯನ್ನು ನಿರಂತರ ಸಂಶೋಧಿಸಲು ಅವರು ಮುಂದಾದರು. ಈ ನಿರಂತರತೆ ಇಪ್ಪತ್ತೊಂದು  ವರುಷಗಳ ಕಾಲ ನಡೆದುದರ ಪರಿಣಾಮವಾಗಿ ಈ ಮೇಲಿನ ಪ್ರದೇಶಗಳಲ್ಲಿ ಒಟ್ಟು ಎರಡು ಸಾವಿರದ ಇನ್ನೂರ ಮೂವತ್ತು  ದೈವಗಳು ಆರಾಧಿಸಲ್ಪಡುತ್ತವೆ ಎನ್ನುವ ಸತ್ಯ ಗೋಚರಿಸಿತು.


ಹಿರಿಯ ಜಾನಪದ ತಜ್ಞರೂ ವಿದ್ವಾಂಸರೂ ಆಗಿರುವ ಪ್ರೊ| ಬಿ.ಎ.ವಿವೇಕ ರೈ ಅವರು ತಮ್ಮ ಮಹಾಪ್ರಬಂಧದಲ್ಲಿ (1985) ಇನ್ನೂರ ಅರುವತ್ತೇಳು  ,ಇನ್ನೋರ್ವ ಜಾನಪದ ವಿದ್ವಾಂಸ ಪ್ರೊ| ಚಿನ್ನಪ್ಪಗೌಡರು ಇದನ್ನು ಪರಿಷ್ಕರಿಸಿ  ತಮ್ಮ ಮಹಾಪ್ರಬಂಧದಲ್ಲಿ (1990) ಮುನ್ನೂರು , ಮುಂದೆ ರಘುನಾಥ ವರ್ಕಾಡಿಯವರು ತಮ್ಮ ‘ಕಂಡಂಬಾರು ಮಲರಾಯ’ ಕೃತಿಯಲ್ಲಿ (2011) ನಾಲ್ಕು ನೂರ ಏಳು ದೈವಗಳ ಹೆಸರುಗಳನ್ನು ಪಟ್ಟಿ ಮಾಡಿದ್ದಾರೆ.


ಆಮೇಲೆ ಈ ಬಗ್ಗೆ ಸಂಶೋಧನೆ ನಡೆದದ್ದು ಕಡಿಮೆ ಅಥವಾ ಈ ಅರಿವಿನಲ್ಲೆ ಗಿರಕಿ ಹೊಡೆದದ್ದೇ ಹೆಚ್ಚು. ಆದರೆ ಡಾ. ಲಕ್ಷ್ಮಿ ಪ್ರಸಾದ್ ಅವರ ಆಸಕ್ತಿ ಅಥವಾ ಜಿಜ್ಞಾಸೆಯು ತಾವು ರಚಿಸಿದ ಮಹಾಪ್ರಬಂಧದ ಹೊತ್ತಿಗೆ (2007) ಸಾವಿರದ ನಾಲ್ಕು ನೂರ ಮೂವತ್ತೈದು ದೈವಗಳ ಕ್ಷೇತ್ರ ಕಾರ್ಯದ ತನಕ ಹಬ್ಬಿತು. ಇದೀಗ ಅವರು ಎರಡು ಸಾವಿರದ ಇನ್ನೂರ ಮೂವತ್ತು   ದೈವಗಳನ್ನು ಸಾಕ್ಷಿ ಸಮೇತ ಗುರುತಿಸಿ ನಾಡು ಬೆರಗಾಗುವಂತೆ ಮಾಡಿದ್ದಾರೆ.


ತುಳು ಸಂಸ್ಕೃತಿಯ ಪ್ರಧಾನ ಅಂಗವಾಗಿ ದೈವಾರಾಧನೆ ಇದೆ. ಅದು ಇಲ್ಲದ ತುಳು ಸಂಸ್ಕೃತಿಯೇ ಇಲ್ಲ ಎನ್ನುವುದು ಅದರ ಪಾರಮ್ಯ. ನಂಬಿಕೆಯ ಆಧಾರದ ಮೇಲೆ ನಿಂತಿರುವ ಈ ಆರಾಧನಾ ಪದ್ಧತಿಯು ಶತಮಾನಗಳ ಪರಂಪರೆಯುಳ್ಳದ್ದು. ಇಂಥ ಸಂಸ್ಕೃತಿಯ ಬೇರುಗಳ ಆಳಕ್ಕೆ ಇಳಿದು ಚಿನ್ನವನ್ನು ಅಗೆದು ತೆಗೆದು ಪುಟಕ್ಕಿಡುವ ಹಾಗೆ ಮಾಡುವ ಕೆಲಸವು ಸಂಕೀರ್ಣವೂ, ಸಂಕಷ್ಟದ್ದೂ ಹೌದು, ಹಾಗೆಯೇ ಪುರುಷರಿಗಷ್ಟೇ ಸೀಮಿತ ಎನ್ನುವಂತಿದ್ದ ಈ ಸಂಶೋಧನೆಯನ್ನು  ಮಹಿಳೆಯರು ಮಾಡಬಹುದೆನ್ನುವಂತೆ ಡಾ.ಲಕ್ಷ್ಮೀ ಪ್ರಸಾದರು ಮಾಡಿ ತೋರಿಸಿದ್ದಾರೆ. 


ಇದಕ್ಕೆ ಅವರು ಹುಟ್ಟಿದ ಗಂಡು ಮೆಟ್ಟಿನ ನೆಲದ ಪ್ರಭಾವ ಎಷ್ಟು ಕಾರಣವೋ ಅಷ್ಟೇ ಅವರ ಗಂಡೆದೆಯೂ ಕೂಡಾ! 

ಡಾ. ಲಕ್ಷ್ಮೀ ಪ್ರಸಾದರು ಸಂಸ್ಕೃತ( ಮೊದಲನೆಯ ರ‌್ಯಾಂಕ್) ಹಿಂದಿ ಮತ್ತು ಕನ್ನಡ( ನಾಲ್ಕನೆಯ ರ‌್ಯಾಂಕ್), ದಲ್ಲಿ ಸ್ನಾತಕೋತ್ತರ ಪದವೀಧರರು. ಒಂದು  ಎಂ.ಫಿಲ್ ಪದವಿ  ಹಾಗೂ ಎರಡು ಪಿ.ಹೆಚ್.ಡಿ ಪದವಿಗಳ‌ ಗರಿಯೂ ಅವರ ಸಾಧನೆಗೆ ದಕ್ಕಿದೆ. 


ಬದುಕನ್ನು ಅಧ್ಯಯನ ,ಅಧ್ಯಾಪನ ಮತ್ತು ಸಂಶೋಧನೆಗಳಿಗೆ  ಮೀಸಲಿಟ್ಟಿರುವ ಅವರ ಈ ಇಪ್ಪತ್ತಮೂರನೆಯ   ಕೃತಿ ಅವರ ಮಹಾತ್ವಾಕಾಂಕ್ಷೆಯ ಶಿಖರ.


ಸರಕಾರದ ಆಶ್ರಯವಿಲ್ಲದೆ, ಅಕಾಡಮಿಗಳ ಪ್ರೋತ್ಸಾಹವಿಲ್ಲದೆಯೇ  ತನಗೆ ತಾನೇ ಸ್ವಯಂ ಭೂವಾಗಿ ನಡೆಸಿದ ಈ ಕ್ಷೇತ್ರ ಕಾರ್ಯ ಆಧಾರಿತ ಅಧ್ಯಯನ ಅಪರೂಪದಲ್ಲಿ ಅಪರೂಪದ್ದು.


 ಭೂತ ಕಟ್ಟುವ ಜನಾಂಗದವರಿಂದ ಮತ್ತು ಇನ್ನಿತರ ಸಂಸ್ಕೃತಿ ಚಿಂತಕರ ಮೂಲದ ಐತಿಹ್ಯಗಳಿಂದ ಸಂಗ್ರಹಿಸಲ್ಪಟ್ಟು ವಿಶ್ಲೇಷಿಸಲ್ಪಟ್ಟ ಅವರ ಸಂಶೋಧನೆಯ  ಆಯ್ದ ಸಾವಿರದ ಇನ್ನೂರ ಐವತ್ತೊಂದು(1251) ದೈವಗಳ ಮಾಹಿತಿಗಳನ್ನು ಈ ಗ್ರಂಥದಲ್ಲಿ ಅವರು ಅನಾವರಣಗೊಳಿಸಿದ್ದಾರೆ. 


ಇದು ತುಳು ಸಂಸ್ಕೃತಿಯ ಹೊನ್ನ ಕಿರೀಟಕ್ಕೆ ಇಟ್ಟ ನವಿಲಗರಿ.


ಇದು ‘ಪಿಂತಿಲ್ಲ ಮುಂತಿಲ್ಲ’ ಎನ್ನುವ ಜಾನಪದ ಸಂಶೋಧನೆಯ ಆಚಾರ್ಯಕೃತಿಯಾಗಿದ್ದು ‘ಅಯ್ಯಯ್ಯ ಎಂಚ ಪೊರ್ಲಾಂಡ್‍ಂದ್ ತುಳುವರು ಮೈಯುಬ್ಬಿ ಹೇಳಬೇಕಣ್ಣ’ ಎನ್ನುವುದನ್ನು ಈ ಕಾಲದಲ್ಲಿ ಅನುರಣಿಸಲು ಕಾರಣವಾಗಿರುವ ವಿಸ್ಮಯ.


ಸ್ಥಳ : ಕಾಂತಾವರ           ಡಾ.ನಾ.ಮೊಗಸಾಲೆ

      ಕನ್ನಡ ಸಂಘ, ಕಾಂತಾವರ


 ಮಾಯ ಮತ್ತು ಜೋಗದ ಬೆಳಕಿನಲ್ಲಿ 

ಕರಾವಳಿಯ ಸಾವಿರದೊಂದು ದೈವಗಳು

ಅನುಕ್ರಮಣಿಕೆ 321  ಅಧ್ಯಾಯಗಳು

1 ಅಕ್ಕಚ್ಚು

2- ಅಕ್ಕ ಬೋಳಾರಿಗೆ

3-4ಅಕ್ಕೆರ್ಲು- ಅಂಬೆರ್ಲು

5-6 ಅಚ್ಚು ಮತ್ತು ಮೆಚ್ಚು ಬಂಗೇತಿಯರು

7 ಅಗ್ನಿ ಕೊರತಿ

8-13  ಅಗ್ನಿ ಭೈರವನ್ ಮತ್ತು ಪರಿವಾರ 

13- 15 ಅಜ್ಜ ಬಳಯ  ಮತ್ತು ಮಾಮಿ ಕುಲೆ

15-17 ಅಜ್ಜಮ್ಮ ದೇವರು ಮತ್ತು ಪರಿವಾರ 

18-26 ಅಜ್ಜಿ ಭೂತ , ಕೂಜಿಲು ಮತ್ತು ಇತರ ದೈವಗಳು

27  ಅಜ್ಜಿ ಬೆರೆಂತೊಲು

28-29 ಅಜ್ಜೆರ್ ಭಟ್ರು ಮತ್ತು ಅಜ್ಜೆರ್ ಪರಿವಾರ

30 ಅಡ್ಯಲಾಯ

31   ಅಡ್ಯಂತಾಯ

32-33 ಅಡಿ ಮಣಿತ್ತಾಯ ಮತ್ತು ಅಡಿಮರಾಂಡಿ

34-35  ಅಣ್ಣ ತಮ್ಮ ದೈವಗಳು/ಅತ್ತಾವರದ ದೈವಗಳು

36-37  ಅಣ್ಣೋಡಿ ಕುಮಾರ- ಕಿನ್ಯಂಬು

38  ಗುಟ್ಟು ಬಿಟ್ಟು ಕೊಡದ ಅಬ್ಬೆ ಜಲಾಯ

39 -40 ಅರಬ್ಬಿ ಮತ್ತು ಬ್ರಾಂದಿ 

41-44 ಅರಸು ಬಂಗಾಡಿತ್ತಾಯ ಮತ್ತು ಸೇರಿಗೆ ದೈವಗಳು

45 ಅಸುರಾಳನ್/ ಅಸುಳಾನುಂ ಮಕ್ಕಳು

46-47 ಅಂಗಕ್ಕಾರನ್ ಮರುಟೋಳನ್

48 ಅಂಗಾರ ಬಾಕುಡ

49 ಅಂಮಣ ಬನ್ನಾಯ

50-51 ಅಂಕೆ- ಉಮ್ಮಯ

52  ಆಚಾರಿ ಭೂತ

53 ಆಟಕಾರ್ತಿ

54  ಆಟಿ ಕಳೆಂಜ

55-57 ಆದಿ ವೇಡನ್ ಮತ್ತು ಪರಿವಾರ 

58 ಇಷ್ಟಜಾವದೆ 

59 ಉಗ್ಗೆದಲ್ತಾಯ 

60 ಉಮ್ಮಲ್ತಿ 

61-62 ಉಪ್ರಝಾಸ್ಸಿ ಮತ್ತು ಉಚ್ಚಬಲಿ ತೆಯ್ಯಂ

63-64 ಉರವ ಎರುಬಂಟ

65-88 ಉಳ್ಳಾಕುಲು   ಮತ್ತು ಉಳ್ಳಾಲ್ತಿ ದೈವಗಳು

89-90 ಎರು ಶೆಟ್ಟಿ( ಮಲೆ ಮುದ್ದ)

91-92  ಎಂಬ್ರಾನ್ ದೇವ- ಐಪ್ಪಳ್ಳಿ

93-99 ಏಲುವೆರ್ ಸಿರಿಕುಲು

100 ಒಕ್ಕು ಬಲ್ಲಾಳ

101-102 ಒರುಬಾಣಿಯೆತ್ತಿ ,ನೆಲ್ಲೂರಾಯ 

 103- 105 ಓಣಂ ದೈವಗಳು

106 ಓಟೆಚರಾಯ

107: ಕಟ್ಟು ಎಡ್ತುನ್ ಕುಟ್ಟಿ

‌108 ಕಟ್ಟದಲ್ತಾಯ

‌109-110 ಕಡವಿನ ಕುಂಞ ಮತ್ತು ಕಳವಿನ ಚಿಕ್ಕ

111-112 ಕಡಂಬಳಿತ್ತಾಯ,ಕೊಡಂಬಿಲ್ತಾಯ

113-114 ಕನಪಾಡಿತ್ತಾಯ ಮತ್ತು ಮಗ್ರಂದಾಯ

115  ಕನ್ನಡ ಕಲ್ಕುಡ

116  ಕನ್ನಡ ಬೀರ

117 ಕನ್ನಡ ಭೂತ

118-119 ಕನ್ನಲಾಯ ಮತ್ತು ಸ್ವಾಮಿ ನಂದೆದಿ

120 ಕನಿಯತಿ

121  ಕಪ್ಪಣ್ಣಣಿಕ/ ಕಾರ್ಯಸ್ಥನ್ 

 123-124 ಕರಿಯಣ್ಣ ನಾಯಕ ಮತ್ತು ಕೋಟಿ ನಾಯಕ 

125 ಕರಿಯ ಮಲ್ಲಯ್ಯ

  126-133 ಕರಿಂತಿರಿ ನಾಯರ್ ,ಪುಲಿಯೂರ್ ಕಾಳಿ ಮತ್ತು ಪುಲಿ ದೈವಗಳು 

134 -135 ಕರ್ನಗೆ ಮತ್ತು ಮಲಾರ್ ಜುಮಾದಿ

136-137  ಕಲಿಯಾಟ ಅಜ್ಜಪ್ಪ, ಕಾಟಾಳ ಬೊಳ್ತು

138-139 ಅಲಿಖಿತ ಇತಿಹಾಸ ಸಾರುವ ಕಲ್ಕುಡ ಕಲ್ಲುರ್ಟಿ ದೈವಗಳು 

140  ಕಂಡನಾರ ಕೇಳನ್

141  ಕಂರ್ಭಿ ಬೈದ್ಯೆದಿ

142  ಕಾಜಿಗಾರ್ತಿ

143-153  ಕಾಡ್ಯನಾಟದ ದೈವಗಳು 

154- 155  ಕಾಡೆದಿ  ಮತ್ತು ಕಾಡ್ತಿಯಮ್ನ

156-157 ಅತಿಕಾರೆ ಬೆಳೆಯನ್ನು ತಂದ ಕಾನದ ಕಟದರು

158-160 ಕಾನಲ್ತಾಯ ಮತ್ತು ಪರಿವಾರ ದೈವಗಳು

161-162 ಕಾಯರ್ತಾಯ ಮಾದ್ರಿತ್ತಾಯ

163-167 ಕಾರಿ ಕಬಿಲ ದೈವಗಳು 

168 ಕಾಳರಾತ್ರಿ 

169-172 ಧರ್ಮಸ್ಥಳದಲ್ಲಿ ನೆಲೆಸಿದ ದೈವಗಳು ಕಾಳರಾಹು,ಕಳರ್ಕಾಯಿ ,ಕುಮಾರ ಸ್ವಾಮಿ‌ ಕನ್ಯಾಕುಮಾರಿ 

173-178  ಕಾಂತಾ ಬಾರೆ ,ಬೂದಾ ಬಾರೆ , ಅಚು ಬೈದ್ಯೆತಿ ,ಪುಲ್ಲ ಪೆರ್ಗಡ್ತಿ ,ಉಳ್ಳಾಯ ,ಸಾರಮಾನ್ಯ ದೈವಗಳು 

 179 ಕಾಂತು ನೆಕ್ರಿ ಭೂತ

180  ಕಿನ್ನಿದಾರು

181 ಕೀಳು ದೈವ

183-183 ಮದುಮಕ್ಕಳ ರೂಪದಲ್ಲಿ ಕಂಗೊಳಿಸುವ ಕುಕ್ಕೆತ್ತಿ ಬಳ್ಳು ದೈವಗಳು 

184-185 ಕುಜುಂಬ ಕಾಂಜವ ಮತ್ತು ಕಾಚು ಕುಜುಂಬ  ದೈವಗಳು

186-190 ಕುಟ್ಟಿಚ್ಚಾತ್ತನ್ ,ಪಮ್ಮಚ್ಚು ಮತ್ತು ಸೇರಿಗೆ ದೈವಗಳು 

191 ಕುಡಿ ವೀರನ್ 

192 ಕುದುರೆತ್ತಾಯ / ಕುದುರೆ ಮುಖ ದೈವ

‌ 193-194 ಕುರವ ಮತ್ತು ಸತ್ಯಂಗಳದ ಕೊರತಿ

195 ಕುರುವಾಯಿ ದೈವ

‌196-203 ಕುಲೆ ಭೂತಗಳು - ತುಳುನಾಡಿನ ವಿಶಿಷ್ಟ ದೈವಗಳು

‌204   ಕುಂಞಮ್ಮ ಆಚಾರ್ದಿ

‌205  ಕುಂಞಾಳ್ವ ಬಂಟ

‌206 ಕುಂಞಿ ಭೂತ

‌207 ಕುಂಞಿ ರಾಮ ಕುರಿಕ್ಕಳ್

208 - 212 ಕುಂಜಿರಾಯ ದೈವಗಳು

213-214 ಕುಂಜಿ ಮತ್ತು ಅಂಗಾರ ದೈವಗಳು 

215  ಕುಂಜೂರಂಗಾರ

‌216 ಕುಂಟಲ್ದಾಯ

‌217 ಕುಂಟುಕಾನ ಕೊರವ

‌218-219 ಕುಂಡ - ಮಲ್ಲು ದೈವಗಳು 

220  ಕುಂಡೋದರ

221-224 ಕೆಂಚಣ್ಣ ಕರಿಯಣ್ಣ ಪಾಪಣ್ಣ ಮತ್ತು ಲಕ್ಷ್ಮೀ ನರಸಿಂಹ

225-226 ಕೇಚ ರಾವುತ ಮತ್ತು ರೇವಂತ 

‌227   ಕೇತುರ್ಲಾಯ

228-231 ಕೊಡಮಣಿತ್ತಾಯ,ವೈದ್ಯನಾಥ ,ಕುಡುಮದಾಯ ಮತ್ತು ಕುಕ್ಕಿನಂತಾಯ ದೈವಗಳು

 232 ಕೊಟ್ಟೆದಲ್ತಾಯ

‌233 ಕೊನ್ನೊಟ್ಟು ಕಡ್ತ

‌234  ತುಳುನಾಡಿನ ಜನಾನುರಾಗಿ ದೈವ ಕೊರಗ ತನಿಯ 

‌235 ಕೊರತಿ 

‌236 -237  ಕೊಲ್ಲಿ ಕುಮಾರ ಮತ್ತು ಕೊಲ್ಯತ್ತಾಯ

238-239 ಕೊಂಡಾಣದ ಬಂಟ ಮತ್ತು ತಂಕರು ಮೂಲ್ಯೆದಿ

240 ಅಪ್ರತಿಮ ವೀರ ಕೋಚು ಮಲ್ಲಿ 

241 242 ತುಳುನಾಡು ಬೆಳಗಿದ ಅವಳಿ ವೀರರು : ಕೋಟಿ ಚೆನ್ನಯರು

‌243-244 ಅಪ್ರತಿಮ ಸಾಹಸಿ ಕೋಟೆದ ಬಬ್ಬು ಮತ್ತು ಕಚ್ಚೂರ ಮಾಲ್ದಿ

‌245 ಕೋಟ್ರ ಗುತ್ತಿನ ಬಬ್ಬು 

‌246-247  ಕೋಟೆರಾಯ ಮತ್ತು ಕೋಟೇಶ್ವರ ದೈವಗಳು

248 ಕೋರಚ್ಚನ್ 

‌249 ಕೋಲು ಭಂಡಾರಿ

250   ಕೋಳೆಯಾರ ಮಾಮ

251ಗಣಪತಿ ಕೋಲ

252  ಗಂಗೆ ನಾಡಿ ಕುಮಾರ ,( ಓಡಿಲ್ತಾಯ)

253-254 ಗಂಡ ಗಣಗಳು ಮತ್ತು ಡೆಂಜಿ ಪುಕ್ಕೆ 

255-256 ಗಂಧರ್ವ ದೈವಗಳು

257   ಗಿಳಿರಾಮ

258  ಗಿಡಿರಾವಂತ

259 -260 ಗಿರಾವು ಮತ್ತು ಕೊಡೆಕಲ್ಲಾಯ

261 ಗುರು ಕಾರ್ನವೆರ್ 

262 ಗುರುನಾಥನ್ 

263-275 ಗುಳಿಗ ಮತ್ತು ಸೇರಿಗೆ  ದೈವಗಳು

( ಒರಿ ಮಾಣಿ ಗುಳಿಗ ,ಮಂತ್ರವಾದಿ ಗುಳಿಗ,ಸನ್ಯಾಸಿ ಗುಳಿಗ ,ತಂರ್ಜಿ ಗುತ್ತಿನ ಗುಳಿಗ ,ಮುಕಾಂಬಿ ಗುಳಿಗ,ಸಂಕೊಲಿಗ ಗುಳಿಗ,ಶಾಂತಿ ಗುಳಿಗ,ಸುಬ್ಬಿಯಮ್ಮ ಗುಳಿಗ,ಕಲಾಲ್ತಾಯ ಗುಳಿಗ ,ಜಾಗೆದ ಖಾವಂದೆರಾವು ಗುಳಿಗ,ಕಲಿಚ್ಚಿ,ಕಾಲನ್ ಗುಳಿಗ ) 

 276-300 ಚಾಮುಂಡಿ ಮತ್ತು ಸೇರಿಗೆದೈವಗಳು 

ಅಗ್ನಿ ಚಾಮುಂಡಿ ಗುಳಿಗ, ಕರಿ ಚಾಮುಂಡಿ,ಕೆರೆ ಚಾಮುಂಡಿ,ಚೌಂಡಿ,ಗುಡ್ಡೆ ಚಾಮುಂಡಿ ಅರದರೆ ಚಾಮುಂಡಿ ,ಅಸಗಲ ಚಾಮುಂಡಿ,ನಾಗ ಚಾಮುಂಡಿ,ಪಾಪೆಲು ಚಾಮುಂಡಿ, ನೆತ್ರಾಂಡಿ ,ಮನದಲಾತ್ ಚಾಮುಂಡಿ,ಮಾಪಿಳ್ಳ ಚಾಮುಂಡಿ ಕೋಮಾರು ಚಾಮುಂಡಿ ಇತ್ಯಾದಿ)

301-302 ಚಾವುಂಡೇಶ್ವರ ಮತ್ತು ಚಂಡಿಕೇಶ್ವರ 

303-314  ಚಿಕ್ಕು/ ಚಿಕ್ಕಮ್ಮ  ಪರಿವಾರ ದೈವಗಳು

 315 ಚಿನಿಕಾರ/ ಚೀನೀ ಬೂತಗಳು

316 ಚೆನ್ನಿಗರಾಯ

317-319 ಚೆಮ್ಮರತಿ,ಪಡುವೀರನ್ ದೈವಗಳು

320 ಚೆಂಬರ್ಪುನ್ನಾಯ

321-322 ಜಟಾಧಾರಿ ಮತ್ತು  ಶಾಂತ ದುರ್ಗೆ 

323 -334'  ಜಟ್ಟಿಗ  ದೈವಗಳು

(ಜೈನ ಜಟ್ಟಿಗ ಕೋಟೆ ಜಟ್ಟಿಗ ನೆತ್ರಾಣಿ ಜಟ್ಟಿಗ ಹೊಗೆವಡ್ಡಿ ಜಟ್ಟಿಗ ಅರಮನೆ ಜಟ್ಟಿಗ ಮಾಣಿ ಬೀರ ಜಟ್ಟಿಗಮಾಣಿಭದ್ರ ಜಟ್ಟಿಗ ಇತ್ಯಾದಿ) 

335-337 ಜಮೆಯ- ಜಮಯತಿ ,ಬಡೆದಿ ದೈವಗಳು

338  ಜಂಗ ಬಂಟ

339-340  ಜಾನು ನಾಯ್ಕ ಮತ್ತು ಬಂಡಿರಾಮ 

341  ಜಾರಂದಾಯ

342  ಜಾಲ ಬೈಕಾಡ್ತಿ

343   ಪನ್ನೆ ಬೀಡಿನ ಜಾಲ್ಸೂರಾಯ

344 ಜೋಕುಲು ದೈವೊಲು

345-346 ಜೈನ ಗುಜ್ಜಾರ್ಲು ಮತ್ತು ಜೈನ ಭೂತ 

347 ತಪ್ಪೇದಿ

348 ತನ್ನಿಮಾಣಿಗ 

 349-351 ತಂತ್ರಿಗಣಗಳು

352 ತಿಮ್ಮಣ್ಣ ನಾಯಕ

353-355 ತೆಕ್ಕನ್ ಕರಿಯಾತನ್, ಕನ್ನಿಕ್ಕೊರುಮಗನ್ ಮತ್ತು ಕೈಕೋಲನ್ ತೆಯ್ಯಂ

356 ತೋಡ ಕುಕ್ಕಿನಾರ್ 

357 ದಾರಮ್ಮ ಬಳ್ಳಾಲ್ತಿ 

358-361 ದಾರು ಕುಂದಯ ದೈವಗಳು 

362   ದೀಪದ ಮಾಣಿ

363   ದುಗ್ಗಲಾಯ ಮತ್ತು ಸುತ್ತು ಕೋಟೆ ಚಾಮುಂಡಿ 

364  ದೂಮ

365 ದೂಧುರ್ಮ / ದೂರ್ದುಮ 

366-367 ದೆಸಿಲು ಮತ್ತು ಕಿಲಮರತ್ತಾಯ

368 ದೇಬೆ ದೈವ,

369-370  ದೇರೆ ಮತ್ತು  ಮಾನಿ ದೈವಗಳು

371ದೇವಾನು ಪಂಬೆದಿಯಮ್ಮ

372 ದೇಯಿ ಬೈದೆತಿ

373-374 ದೇಸಿಂಗ ಉಳ್ಳಾಕುಲು ಮತ್ತು ,ಕೋಟೆದಾರ್

 375-378 ದೈವ ಸಾದಿಗೆ ಒಲಿಪ್ರಾಂಡಿ , ,ದೈವನ ಮುಟ್ನಾಯೆ ,ಅಡ್ಯೊಲ್ತಾಯೆ

379  ದೈವಂತಿ

380-400 ಧೂಮಾವತಿ ಮತ್ತು ಸೇರಿಗೆ ದೈವಗಳು 

ಕಾಂತೇರಿ ಜುಮಾದಿ,ಬಂಟ,ಮರ್ಲು ಜುಮಾದಿ,ಕರ್ಮಲೆ ಜುಮಾದಿ ,ದುರ್ಗಲ್ಲ ಜುಮಾದಿ,ಮಾಪುಳ್ತಿ ಧೂಮಾವತಿ ,ಪಡಿಂಞರೆ ಧೂಮಾವತಿ, ಧೂಮಹಾಸ್ತಿಯಮ್ಮ ,ಮಲಾರ್ ಜುಮಾದಿ ಮತ್ತು ಕರ್ನಗೆ ಇತ್ಯಾದಿ) 

401-404 ನಂದಿ ಹೆಸರಿನ ದೈವಗಳು ( ಹಿರೇ ನಂದಿ ಕಿರರ ನಂದಿ ,ಜೋಗಪ್ಪ ಶೆಟ್ಟಿ ,ನಂದಿಕೇಶ್ವರ ,ನಂದಿ ಗೋಣ) 

405-408  ನರಿ ತೆಯ್ಯಂ,ನರಿ ಪೂದ ಮತ್ತು ಸೇರಿಗೆ ದೈವಗಳು 

409 ನಂದಿಗೆನ್ನಾಯ

410-412  ನಾಗ ಕನ್ನಿಕೆ  ಮತ್ತು ನಾಗರಾಜರು 

413 ನಾಗ ದೈವ/ಭೂತ

414   ನಾಗ ಬ್ರಹ್ಮ 

415   ನಾಗ ಬ್ರಹ್ಮ ಮಂಡಲದ ದೈವಗಳು

416-417 ನಾರಳ್ತಾಯ ಮತ್ತು ಭೂತರಾಜ 

418 ನಾಲ್ಕೈತಾಯ

419-420  ನೀಚ ತನಿಯ ಮತ್ತು ಒಂಟಿ ಕಾಲಿನ ಬಬ್ಬರ್ಯ 

421-422  ನುರ್ಗಿ‌ಮದಿಮಾಲ್ ಮತ್ತು ದುರ್ಗಿ ಮದಿಮಾಲ್ 

423-424  ನೆತ್ತರು ಮುಗುಳಿ ಮತ್ತು ಭೈರವ 

425   ನೇರಳತ್ತಾಯ

426 -428  ನೈದಾಲ ಪಾಂಡಿ  ,ಪೂವತ್ತಿಮಾರ್ ಮತ್ತು ಮಹೇಶ್ವರನ್ ದೈವಗಳು

429 ಪಟ್ಟಾರ್ ತೆಯ್ಯಂ

430 ಪಟ್ಟೋರಿತ್ತಾಯ

431 ಪಡೆ ಬೀರ ಕಣ್ಣಂಡ ದೊಡ್ಡಯ್ಯ 

432-433 ಪಡ್ಕಂತಾಯ ಮತ್ತು  ಗೆಂಡಕೇತ್ರಾಯ

434 ಪತ್ತೊಕ್ಕೆಲು ಜನನಂದ ದೈವ

435-436:ಪನಯಾರ್  ಮತ್ತು ಸಂಪ್ರದಾಯ ದೈವ

437:ಪಯ್ಯ ಬೈದ್ಯ

438-443'ಪಯ್ಯಂಬಿಲ್ ಚಂದು ತಚ್ಚೋಳಿ ಒದೆನನ್ನ ಮತ್ತು ಪರಿವಾರ

444-445  ಪರವ  ಮತ್ತು ಪರಿವಾರ ನಾಯಕ

446 ಪಂಜಿ ಭೂತ

 447  -462 ಪಂಜುರ್ಲಿ ಮತ್ತು ಸೇರಿಗೆ ದೈವಗಳು

ಅಂಗಣತ್ತಾಯ ಪಂಜುರ್ಲಿ ಅಟ್ಟೊಡಾಯೆ ಪಂಜುರ್ಲಿ 

ಅಣ್ಣಪ್ಪ ಪಂಜುರ್ಲಿ ಅಲೇರ ಪಂಜುರ್ಲಿ‌

ಉಂರ್ದರ ಪಂಜುರ್ಲು ,ಒರಿ ಮರ್ಲೆ ಪಂಜುರ್ಲಿ

ಕಟ್ಟದಲ್ತಾಯ ಪಂಜುರ್ಲಿ ,ಕೆಂಪರ್ನ ಪಂಜುರ್ಲಿ ‌,ಕುಪ್ಪೆ ಪಂಜುರ್ಲಿ,ಕುಪ್ಪೆಟ್ಟು ಪಂಜುರ್ಲಿ

ಗಣಾಮಣಿ ಪಂಜುರ್ಲಿ,ಜುಂಬುರ್ಲಿ ,ತೆಲ್ಲಾರ್  ಪಂಜುರ್ಲಿ ದಾಸಪ್ಪ ಪಂಜುರ್ಲಿ

ದೆಂದೂರ ಪಂಜುರ್ಲಿ

ದೇವರ ಪೂಜಾರಿ ಪಂಜುರ್ಲಿ 

ಪಂಜಣತ್ತಾಯ ಪಂಜುರ್ಲಿ‌

ಬಗ್ಗು ಪಂಜುರ್ಲಿ,

ಬಗ್ಗು ಮೊಯ್ಲಿದಿ 

ವರ್ಣಾರ ಪಂಜುರ್ಲಿ 

ಸೇಮಿಕಲ್ಲ ಪಂಜುರ್ಲಿ 

468 ಪಾಣರಾಟ

469 ಪಿಲಿ ಭೂತ 

470 -471  ಪುದರ್ ಚಿನ್ನ ಬಂಟ ಮತ್ತು  ಪಿಲೆ ಪೆಲತ್ತಿ ದೈವಗಳು

472  ಪುದ  ಮತ್ತು ಪೋತಾಳ

473- 490 ಪುರಾಣ ದೇವತೆಗಳು ಮತ್ತು ಭೂತ ತೆಯ್ಯಂ ಗಳು

491-500ತುಳುನಾಡಿನ ಪುರುಷ ಭೂತಗಳು 

501  ಪುಲಂದಾಯ ಬಂಟ

502 ಪುಲಿಮರಂಞ ತೊಂಡನ್ 

503 -510  ಪುಲಿಯೂರ್ ಕಾಳಿ  ಪುಳ್ಳಿಕರಂಕಾಳಿ,ಕರಿಂತಿರಿ ನಾಯರ್ ಮತ್ತು ಐವರು ಹುಲಿ ದೈವಗಳು

511  ಪೆರಿಯಾಟ್ ಕಂಡನ್ 

512  ಪೆರುಂಬಳಯಚ್ಚನ್

513  ಪೊಟ್ಟನ್ 

514  520 ಪೊನ್ನಂಗಾಲತಮ್ಮೆ  ಮತ್ತು ಆರು  ಸಹೋದರರು

521 ಪೊನ್ವಾನ್ ತೊಂಡಚ್ಚನ್

522-525:ಪೊಸಮಹರಾಯ ,ಉಳ್ಳಾಲ್ತಿಯರುಮತ್ತು ಮಾಡ್ಲಾಯಿ 

526 -536 ಪೋಲೀಸ್,  ಕಳ್ಳ ,ಶಾನುಭಾಗ,ಪಟೇಲ, ಗುರಿಕ್ಕಾರ,ತಿಗಮಾರೆರ್ ,ಬಲಾಯಿಮಾರೆರ್,ಸೇನವ ,ಕಡೆಂಜು ಬಂಟ, ಸೇನವ ದೈವಗಳು

537 ಪೋಲೀಸ್ ತೆಯ್ಯಂ

 538-539 ಬಚ್ಚನಾಯಕ ಮತ್ತು ಮಂಞಣ ನಾಯಕ‌

540 -544 5ಬಬ್ಬರ್ಯ ಮತ್ತು ಸೇರಿಗೆ ದೈವಗಳು 

545-548 ಬಲವಾಂಡಿ ,ಕಂಡೆತ್ತಾಯ , ಉಳ್ಳಾಯ ,ಕುರಿಯಾಡಿತ್ತಾಯ

549  ಬಲ್ಲ ಮಂಜತ್ತಾಯ

550-555 ಬಲ್ಲಾಳ ಬಲ್ಲಾಳ್ತಿ ಮತ್ತು ಇತರ ದೈವಗಳು

556 ಬಲೀಂದ್ರ 

557  ಬಸ್ತಿನಾಯಕ

558 ಬಂಕಿ ನಾಯ್ಕ 

559-562 ಬಂಟಜಾವದೆ ಮತ್ತು ಉಳ್ಳಾಲ್ತಿ  ಪಡಿಕಲ್ಲಾಯ

562 ಬಾಕುಡತಿ

563 ಬಾಲೆ ಕನ್ಯಾಪು

564 -605 ಬ್ರಾಹ್ಮಣ ಮೂಲದ ದೈವಗಳು

606 ಬಿರ್ಮಣಾಚಾರಿ 

607 -608  ಬಿಲ್ಲಾರ ಬಿಲ್ಲಾರ್ತಿ ದೈವಗಳು

609 ಕುಂಬಳೆ ಸಿಮೆಯ ಪಟ್ಟದ ದೈವ ಬೀರಣ್ಣಾಳ್ವ

610  ಬೀರ್ನಾಚಾರಿ

611-613 ಬೂಡು ಬೊಮ್ಮಯ್ಯ ಮತ್ತು ಕತ್ತಲೆ ಬೊಮ್ಮಯ್ಯ,ಪಟ್ಟಂತರಸು

 614-616:ಬೆರ್ಮೆರ್,ಕಂಬೆರ್ಲು ಮತ್ತು ಹಕ್ಕೆರ್ಲು 

617-618 ಬೆಲೆಟಂಗರಜ್ಜ ಮತ್ತು ತಂಗಡಿ

619-620 ಬೇಡವ ಮತ್ತು ಬೇಟೆಗಾರ ದೈವಗಳು

621 ಬೊಟ್ಟಿ ಭೂತ

622 -625:ಬೋವ ದೈವಗಳು .

626 ಬೈನಾಟಿ 

627   ಬೈಸು ನಾಯಕ

628-690 ಭಗವತಿ ದೈವಗಳು

 692-694   ಭದ್ರಕಾಳಿ ,ಭದ್ರಕಾಳಿ ಭಗವತಿ ಮತ್ತು ವಣ್ಣಾತಿ ದೈವ

695 - 696  ಭದ್ರಕಾಳಿಮತ್ತು ಬೊಳ್ಳಿ ಬಿಲ್ ಅಯ್ಯಪ್ಪ 

697-698 ಭಂಡಾರಿ ಮತ್ತು ಪಿಲಡ್ಕತ್ತಾಯ‌

699 ಮಡಿಕತ್ತಾಯ

700-701 ಮದನಕ್ಕೆ ದೈಯಾರ್ ,ಕಳಿಗೋಂಕು ಮಾಬೀರರು

702-703'  ಮದಂಗಲ್ಲಾಯ ಕಡಂಗಲ್ಲಾಯ 

704-705 ಮದಿಮಾಯ ಮದಿಮಾಲ್

706ಮನಕ್ಕಡನ್ ಗುರುಕ್ಕಳ್ 

707 ಮನಕ್ಕೊಟ್ಟ ಅಮ್ಮ

708- 726 ಮನ್ಸರ  ದೈವಗಳು

717 ಮರಾಂಗಣೆ

718;ಮರುತಿಯೋಡನ್ ಕುರಿಕ್ಕಳ್

719-720  ಮಲಯಾಳ ಬ್ರಹ್ಮ ಮತ್ತು ಮಲ್ಯಾಳ ಭಟ್ರು 

721 ಮಲರಾಯ

722  ಮಲೆಕುಡಿಯರ ಅಯ್ಯಪ್ಪ 

723-726: ಮಲೆ ತಮ್ಮಚ್ಚ ಮತ್ತು ಪರಿವಾರ 

727-730 ಮಲೆರಾಯ ಮತ್ತು ಪರಿವಾರ 

 731 ಮಲೆಸಾವಿರ ದೈವ

732-733:ಮಂಗಳೆರ್ ಮತ್ತು  ಗುರು ಮಂಗೞೆರ್ 

734 -736:ಮಂತ್ರ ಗಣ ಮಂತ್ರ ದೇವತೆ ಮಂತ್ರ ಮೂರ್ತಿ ದೈವಗಳು

737 ಮಂದ್ರಾಯ

738-739 ಮಹಾಕಾಳಿ ಮತ್ತು ಮಾಂಕಾಳಿ ದೈವಗಳು

740-745 ಮಾಯಂದಾಲ್ ಮತ್ತು ಪರಿವಾರ  

746-747 ಮಾಯೊಲು ಮಾಯೊಲಜ್ಜಿ.

748-760 ಮಾರಿ ಭೂತಗಳು

761 -763 ಮಾಲಿಂಗ ರಾಯ ದಂಡಪ್ಪ ನಾಯಕ ಮಂಞ ನಾಯಕ ದೈವಗಳು‌

764 ಮಾಸ್ತಿಯಮ್ಮ 

765-766 ಮಿತ್ತೂರು ನಾಯರ್ ದೈವಗಳು


768-782 ಮುಗೇರ ದೈವಗಳು 

783 ಮುಡದೇರ್ ಕಾಳ ಭೈರವ 

784-786  ಮುತ್ತಪ್ಪನ್ ,ತಿರುವಪ್ಪನ್ ,ಮೂಲಂಪೆತ್ತಮ್ಮ

787  ಮುತ್ತು ಮಾರಿಯಮ್ಮ  

788 ಮುನಿಸ್ವಾಮಿ ದೈವ

789 ಮುವ್ವೆ ಮೂವ,ಮೂವಿಗೆ ವಾತೆ 

790 - 816ಮುಸ್ಲಿಂ ಮೂಲದ ದೈವಗಳು 

817 ಮೂಜಿಲ್ನಾಯ 

818-819 ಮೂಡೊಟ್ನಾರ್,ಪಡುವೆಟ್ನಾರ್ 

820 ಮೂರಿಲು

821 ಮೂರ್ತಿಲ್ಲಾಯ

822- 900 ಮೂಲ ಪುರುಷ ದೈವಗಳು 

901 ಮೆಕ್ಕೆ ಕಟ್ಟಿನ ಉರುಗಳು 

902-903  ಮೇರ ಮೇತಿಯರು

904 ಮೇಲಂಟಾಯ 

905 ಮೈಯೊಂದಿ

906  ಮೈಸಂದಾಯ

907 ಮೋಂದಿ ಕೋಲ‌

908 ಯಕ್ಷ ಯಕ್ಷಿಯರು ಮತ್ತು ಶ್ರೀಲಂಕಾದ  ಯಕುಮ ಕೋಲ‌ 

909 -910  ರಕ್ತೇಶ್ವರಿ ಮತ್ತು ಬವನೊ

911 ರಾಜನ್ ದೈವಗಳು

912 -914 ವಣ್ಣಾತನ್ ವಯನಾಡು ಕುಲವನ್,ಕಣ್ಣನ್ 

915 ವಡ್ಡಮರಾಯ

916 ವಿದೇಶೀ ಕಾಫ್ರೀ ದೈವಗಳು

917 ವಿಷ್ಣು ಮೂರ್ತಿ ಮತ್ತು ಪಾಲಂದಾಯಿ ಕಣ್ಣನ್

919 - 920 ವೀರಭದ್ರ/ ವೈರಜಾತ್,ವೀರನ್ 

921-924 ವೀರ ವಿಕ್ರಮೆರ್ ಮತ್ತು ಇರ್ವೆರ್ ಬೈದ್ಯೆರ್

925 ವೆಳ್ಳು ಕುರಿಕ್ಕಳ್

926 ವೇಟಕ್ಕೊರುಮಗನ್

927 ವೈದ್ಯಾಚಾರ್ಯ/ ವೈದ್ಯರಾಜನ್ 

928 ಶಗ್ರಿತ್ತಾಯ ದೈವ 

929 ಶಂಕರ ಬಡವಣ

930 -932 ಶಾಸ್ತಾವು,ಕರಿ ಭೂತ,ಕೋಮಾಳಿ

933 ಶಿರಾಡಿ ಭೂತ.

934 ಶಿವರಾಯ 

935 ಶ್ರೀಮಂತಿ ದೈವ

936-937 ಸತ್ಯ ಮಾಗಣ್ತಿ ಮತ್ತು ಕಲ್ಲು ದೈವ 

938 -942 ಬಾಕುಡರ ಸರ್ಪಕೋಲದ ದೈವಗಳು

943 ಸರ್ಪಂಕಳಿ

944 ಸರ್ಪಂತುಳ್ಳಲ್

945 ಸಂನ್ಯಾಸಿ ಮಂತ್ರ ದೇವತೆ

946 ಸಾದಿಕರಾಯ ಮತ್ತು ಹಾದಿಕಾರಾಯ 

947 ಸಾರ ಮಾಂಕಾಳಿ

948 ಸ್ವಾಮಿ ದೈವ 

949-956 ಸೀತಾಯುಂ ಮಕ್ಕಳುಂ,ದೈವತಾರ್ ಮತ್ತು ಪರಿವಾರ

957: ಸುಬ್ಬರಾಯ

958 ಸೋಣದ ಜೋಗಿ

959 ಹನುಮಂತ/ ಸಾರ ಪುಲ್ಲಿದಾರ್ ದೈವ

960 -961ಹಳ್ಳತ್ತಾಯ ಮತ್ತು ಅಲ್ನತ್ತಾಯ 

962 ಹಳೆಯಮ್ಮ

963 -973 ಹಾಯ್ಗುಳಿ ಮತ್ತು ಪರಿವಾರ 

ಮೂಕ ಹಾಯ್ಗುಳಿ,ಕೆಪ್ಪ ಹಾಯ್ಗುಳಿ,ತಾತ್ರಯ್ಯ,ಅಕ್ಸಾಲಿ ,ಮೂಡೂರ್ ಹಾಯ್ಗುಳಿ ,ನೆತ್ರ ಹಾಯ್ಗುಳಿ ಇತ್ಯಾದಿ )

974 -995 ಹಿರಿಯಾಯ ದೈವಗಳು

( ಆನೆ ಬೈದ್ಯ,ಸಿದ್ದ ಮರ್ದ ಬೈದ್ಯ,ಬಗ್ಗ ಪೂಜಾರಿ, ನಾಡು ಬೈದ್ಯ, ಬೊಲ್ಲ ಬೈದ್ಯ,ದೇರೆ ಬೈದ್ಯ ,ಚೆನ್ನಪ್ಪ ಪೂಜಾರಿ ,ಸಿದ್ದ ಬೈದ್ಯ,ಕೊರಗ ಬೈದ್ಯ ಇತ್ಯಾದಿ );

996-997 ಹುಲಿ ಮತ್ತು ಹಸರ ತಿಮ್ಮ 

998 -1000 ಹೊಸಮ್ಮ ,ಹೊಸಳಿಗಮ್ಮ ಮತ್ತು ಕುಲೆ ಮಾಣಿಕೊ

1001 ಹೌಟಲ್ದಾಯ ಮತ್ತು ಮಾಳದ ಕೊರಗ 

ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ 

ಅಧ್ಯಯನಾತ್ಮಕ ಗ್ರಂಥ  -© ಡಾ.ಲಕ್ಷ್ಮೀ ಜಿ ಪ್ರಸಾದ್

ಮೊಬೈಲ್ 9480516684 

ಪುಸ್ತಕಕ್ಕಾಗಿ ಸಂಪರ್ಕಿಸಿ 9480516684 

.

ಬಹುಮುಖ ಪ್ರತಿಭೆಯ ವಿದ್ವಾಂಸೆ ಮತ್ತು ಲೇಖಕಿ ಡಾ ಲಕ್ಷ್ಮೀ ಜಿ ಪ್ರಸಾದ್- ಕೊಳ್ಚಪ್ಪೆ ಗೋವಿಂದ ಭಟ್

 ಬಹುಮುಖ ಪ್ರತಿಭೆಯ ವಿದ್ವಾಂಸೆ ಮತ್ತು ಲೇಖಕಿ ಡಾ ಲಕ್ಷ್ಮೀ ಜಿ ಪ್ರಸಾದ್ https://nadinasamachara.com/2023/06/25/ಬಹುಮುಖ-ಪ್ರತಿಭೆಯ-ವಿದ್ವಾಂಸ/

ಬಹುಮುಖ ಪ್ರತಿಭೆಯ ವಿದ್ವಾಂಸೆ ಮತ್ತು ಲೇಖಕಿ ಡಾ ಲಕ್ಷ್ಮೀ ಜಿ ಪ್ರಸಾದ್





ಡಾ.ಲಕ್ಷ್ಮೀ ಜಿ ಪ್ರಸಾದ್ ಕಾಸರಗೋಡು ಜಿಲ್ಲೆಯ ಕೋಳ್ಯೂರಿನವರು. ಕನ್ನಡ, ಹಿಂದಿ, ಸಂಸ್ಕೃತದಲ್ಲಿ ಪಾಂಡಿತ್ಯವಿದ್ದು, ಕನ್ನಡ ಉಪನ್ಯಾಸಕರಾಗಿದ್ದಾರೆ. ತಂದೆ -ನಾರಾಯಣ ಭಟ್ ವಾರಣಾಸಿ, ತಾಯಿ -ಸರಸ್ವತಿ. ಪತಿ ಗೋವಿಂದ ಪ್ರಸಾದ ಪಂಜಿಗದ್ದೆ, ಮಗ- ಅರವಿಂದ.



ಉಜಿರೆಯ ಎಸ್ ಡಿಎಂ ಕಾಲೇಜಿನಲ್ಲಿ ಬಿಯಸ್ಸಿ ಪದವಿ. ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಿಂದ ಎಂ.ಎ[ಕನ್ನಡ] ನಾಲ್ಕನೇ ರ‍್ಯಾಂಕ್. ಮಂಗಳೂರು ವಿಶ್ವ ವಿದ್ಯಾಲಯದಿಂದ ಎಂ.ಎ[ಸಂಸ್ಕ್ರತ] ಪ್ರಥಮ ರ‍್ಯಾಂಕ್. ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಿಂದ ಎಂಎ[ಹಿಂದಿ], ಎಂ.ಫಿಲ್[ವಿಷಯ:ಈಜೋ ಮಂಜೊಟ್ಟಿ ಗೋಣ-ಒಂದು -ವಿಶ್ಲೇಷಣಾತ್ಮಕ ಅಧ್ಯಯನ), ಪಿಹೆಚ್.ಡಿ[ವಿಷಯ:ತುಳು ನಾಡಿನ ನಾಗ ಬ್ರಹ್ಮ ಮತ್ತು ಕಂಬಳ-ಒಂದು ವಿಶ್ಲೇಷಣಾತ್ಮಕ ಅಧ್ಯಯನ) ಹಂಪಿ ಕನ್ನಡ ವಿಶ್ವ ವಿದ್ಯಾಲಯ. ಎರಡನೆಯ ಪಿಹೆಚ್.ಡಿ ಪದವಿ (ವಿಷಯ‘ಪಾಡ್ದನಗಳಲ್ಲಿ ತುಳುವ ಸಂಸ್ಕೃತಿಯ ಅಭಿವ್ಯಕ್ತಿ’) ದ್ರಾವಿಡ ವಿಶ್ವ ವಿದ್ಯಾಲಯ ಕುಪ್ಪಂ, ಬಿ ಎಡ್ ಬೆಂಗಳೂರು ವಿಶ್ವ ವಿದ್ಯಾಲಯ , ಎನ್.ಇ.ಟಿ-ಯುಜಿಸಿ, ಕನ್ನಡ ಶಾಸನ ಮತ್ತು ಲಿಪಿ ಶಾಸ್ತ್ರ ಡಿಪ್ಲೋಮಾ (ಪ್ರಥಮ ರ‍್ಯಾಂಕ್).



ಕೃತಿಗಳು:

ತುಂಡು ಭೂತಗಳು-ಒಂದು ಅಧ್ಯಯನ, ತುಳು ಜನಪದ ಕಾವ್ಯಗಳಲ್ಲಿ ಕಾವ್ಯ ತತ್ವಗಳು , ಬೆಳಕಿನೆಡೆಗೆ, ಕನ್ನಡ ತುಳು ಜನಪದ ಕಾವ್ಯಗಳಲ್ಲಿ ಸಮಾನ ಆಶಯಗಳು, ತುಳು ಪಾಡ್ದನಗಳಲ್ಲಿ ಸ್ತ್ರೀ, ತುಳುವ ಸಂಸ್ಕಾರಗಳು ಮತ್ತು ವೃತ್ತಿಗಳು, ತುಳು ಜನಪದ ಕವಿತೆಗಳು, ಪಾಡ್ದನ ಸಂಪುಟ, ಕಂಬಳ ಕೋರಿ ನೇಮ, ತುಳು ನಾಡಿನ ಅಪೂರ್ವ ಭೂತಗಳು, ಚಂದಬಾರಿ ರಾಧೆ ಗೋಪಾಲ ಮತ್ತು ಇತರ ಪಾಡ್ದನಗಳು, ದೈವಿಕ ಕಂಬಳ ಕೋಣ, ಅರಿವಿನಂಗಳದ ಸುತ್ತ, ಮನೆಯಂಗಳದಿ ಹೂ, ನಾಗ ಬ್ರಹ್ಮ ಮತ್ತು ಕಂಬಳ –ಒಂದು ವಿಶ್ಲೇಷಣಾತ್ಮಕ ಅಧ್ಯಯನ, ಭೂತಗಳ ಅದ್ಭುತ ಜಗತ್ತು, ಶಾರದಾ ಜಿ ಬಂಗೇರರ ಮೌಖಿಕ ಜಾನಪದ, ಬಂಗಲೆ ಗುಡ್ಡ ಸಣ್ಣಕ್ಕ ನ ಮೌಖಿಕ ಜಾನಪದ, ಸುಬ್ಬಿ ಇಂಗ್ಲಿಷ್ ಕಲ್ತದು ಮತ್ತು ಇತರ ನಾಟಕಗಳು, ಶಿಕ್ಷಣ ಲೋಕ, ಕರಾವಳಿಯ ಸಾವಿರದೊಂದು ದೈವಗಳು,



ಪ್ರಶಸ್ತಿ-ಪುರಸ್ಕಾರಗಳು: OUTSTANDING TEACHER AWARD -2013 (ಶಾಮ್ ರಾವ್ ಸ್ಮಾರಕದಿಂದ ), ಸಾಹಿತ್ಯ ಸೇವೆಗೆ ಬೆಂಗಳೂರಿನ ಜಯಪ್ರಕಾಶ ನಾರಾಯಣ ರಾಷ್ಟ್ರೀಯ ಮಹಿಳಾ ರತ್ನ – 2009, ಕರ್ನಾಟಕ ಭೂಷಣ ಪುರಸ್ಕಾರ – 2009 ಸೈನಿಕ ಸೇವಾ ದಳ ಸಾಂಸ್ಕೃತಿಕ ಪ್ರತಿಷ್ಠಾನ, .ತುಳುವೆರೆ ಆಯನೋ ಪ್ರಶಸ್ತಿ 2009), ಸಂಶೋಧನಾ ವಿಭಾಗ], ಕಾವ್ಯಶ್ರೀ ಪುರಸ್ಕಾರ [ಕಥಾ ವಿಭಾಗ], ಕರ್ನಾಟಕ ಜಾನಪದ ರತ್ನ,- 2014 ಅಖಿಲ‌ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ, ಕಲಾ ಜ್ಯೋತಿ- 2010 ಪದ್ಮಶ್ರೀ ಸಾಂಸ್ಕೃತಿಕ ಪ್ರತಿಷ್ಠಾನ, ಬೆಂಗಳೂರು, ಬಲಿಯೇಂದ್ರ ಪುರಸ್ಕಾರ,- 2017 ತುಳುವೆರೆಂಕುಲು,ಬೆಂಗಳೂರು , ಕರಾವಳಿ ರತ್ನ – ದಕ್ಷಿಣ ಕನ್ನಡಿಗರ ಸಂಘ, ಬೆಂಗಳೂರು- 2018 ,ರಾಜ್ಯ ಆದರ್ಶ ಶಿಕ್ಷಕ ಪ್ರಶಸ್ತಿ- 2015, ಪರಮೇಶ್ವರ ಪುಲಿಕೇಶಿ ಪ್ರಶಸ್ತಿ – 2015, ಜಾನಪದ ಪ್ರಪಂಚ ಪುರಸ್ಕಾರ- ಕನ್ನಡ ಜಾನಪದ ಪರಿಷತ್ 2017,ಕಯುವೇ ಸಾಧನಾ ಪ್ರಶಸ್ತಿ -2018, ಕರ್ನಾಟಕ ಯುವ ರಕ್ಷಣಾ ವೇದಿಕೆ,ಬೆಂಗಳೂರು, ಹವ್ಯಕ ಸಾಧಕ ರತ್ನ ಪ್ರಶಸ್ತಿ- 2018 ವಿಶ್ವ ಹವ್ಯಕ ಸಮ್ಮೇಳನ, Award for Excellence – ಮಂತ್ರ ನಾಟ್ಯಕಲಾ ಗುರುಕುಲ ,ಉಳ್ಳಾಲ-2019 ,ಮರೆಯದ ಮಾಣಿಕ್ಯ ಪ್ರಶಸ್ತಿ -2022 ಹವಿಗನ್ನಡದ ಮೊದಲ ನಾಟಕಗಾರ್ತಿ ಎಂಬ ಚಾರಿತ್ರಿಕ ದಾಖಲೆ.



ಡಾ ಲಕ್ಷ್ಮೀ ಜಿ ಪ್ರಸಾದ್ ಈಗ ಪ್ರಾಧ್ಯಾಪಿಕೆಯಾಗಿ ಬೆಂಗಳೂರಿನಲ್ಲಿ ಸೇವೆ ನಿರ್ವಹಿಸುತ್ತಿದ್ದು ಅಲ್ಲಿ ನೆಲೆಸಿದ್ದಾರೆ. ಅವರ ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಇನ್ನೂ ಹೆಚ್ಚಿನ ಸಾಧನೆಯಾಗಲಿ ಎಂದು ನಮ್ಮೆಲ್ಲರ ಶುಭ ಹಾರೈಕೆಗಳು.



ಪರಿಚಯಿಸಿದವರು

ಡಾ ಕೊಳ್ಚಪ್ಪೆ ಗೋವಿಂದ ಭಟ್ ಮಂಗಳೂರು

Saturday 14 October 2023

ನಿಮ್ಮನ್ನು ಕಾಲೆಳೆದವರಿಗೂ ಪುಸ್ತಕ ದಲ್ಲಿ ಸ್ಥಾನ ಕೊಟ್ಟಿದ್ದು ನಿಜವಾಗಿಯೂ ನಿಮ್ಮ ದೊಡ್ಡತನ- ಅಪೂರ್ವ ಕೋಲ್ಯ



 

ನಿಮ್ಮನ್ನು ಕಾಲೆಳೆದವರಿಗೂ ಪುಸ್ತಕ ದಲ್ಲಿ ಸ್ಥಾನ ಕೊಟ್ಟಿದ್ದು ನಿಜವಾಗಿಯೂ ನಿಮ್ಮ ದೊಡ್ಡತನ- ಅಪೂರ್ವ ಕೋಲ್ಯ 

 ನಮಸ್ತೆ ಮೇಡಮ್ ಪುಸ್ತಕ ತಲುಪಿತು.. ಪುಸ್ತಕ ದಲ್ಲಿದ್ದ ನಿಮ್ಮ‌ಮನದಾಳದ ಮಾತುಗಳನ್ನು ಓದಿದೆ.. 

ನೀವು ಬರೆದ ಪುಸ್ತಕ ನನ್ನ ಗಮನ ಸೆಳೆಯಲು ನೀವು ಮಹಿಳೆ ಎನ್ನುವುದೇ ಆಗಿತ್ತು.ಕಾರಣ ಇಷ್ಟೆ ಹಳ್ಳಿಗಳಲ್ಲಿ ಒಂದು ರೀತಿಯ ಕಟ್ಟು  ಪಾಡುಗಳಿವೆ. ಮಹಿಳೆಯರು ಕೆಲವು ಆಚರಣೆ ಗಳನ್ನು ಮಾಡಬಾರದು. ಮತ್ತು ಭಾಗವಹಿಸಬಾರದು ಎಂದು. ದೇವರ ವಿಚಾರಗಳಿಗಿಂತ ದೈವದ ವಿಚಾರಗಳಲ್ಲಿ ಇದು ಹೆಚ್ಚು. ಇಂತ ಕಟ್ಟುಪಾಡುಗಳ ನಡುವೆ ಈ ಸಂಶೋಧನೆಯ ಹಾದಿ ಖಂಡಿತ ಹೂವಿನ ಹಾದಿಯಾಗಿರುವುದಿಲ್ಲ ಎಂದು ಗೊತ್ತಿತ್ತು..


 ನಿಮ್ಮ ಮನದಾಳದ ಮಾತುಗಳನ್ನು ಓದಿದಾಗ ಆ ಹಾದಿ ನಾನು ಅಂದುಕೊಂಡದ್ದಕ್ಕಿಂತಲೂ ಬಹಳ ಕಠಿಣ ವಾಗಿತ್ತು ಎಂಬುದು ಅರಿವಾಯಿತು. 


ಛಲ ಬಿಡದ ನಿಮ್ಮ ಹೆಜ್ಜೆ ಎಲ್ಲಾ ಹೆಂಗಳೆಯರಿಗೂ ಸ್ಪೂರ್ತಿ...  ವಾಹನದ ಹಿಂದಿದ್ದ ಬರವೊಂದನ್ನು ಓದಿದ್ದೆ "ಶತ್ರುಗಳ ಆಶೀರ್ವಾದ" ನಮ್ಮನ್ನು ಸದಾ ಬೆಂತಟ್ಟುವರೇ ಜೊತೆಯಲ್ಲಿದ್ದರೆ ನಮ್ಮ ಬೆಳವಣಿಗೆ ಯವುದೋ ಒಂದು ಹಂತದಲ್ಲಿ ನಿಂತು ಬಿಡುವ ಸಾಧ್ಯತೆ ಇರುತ್ತದೆ.. 


ಆದರೆ ನಮ್ಮನ್ನು ಕಾಲೆಳೆಯುವವರು ಇದ್ದರೆ ಒಂದಷ್ಟು ಹತಾಶರಾಗೋದು  ಸಹಜ ಆದರೆ ಅದೇ ನಮ್ಮನ್ನು ಇನ್ನೂ ಬೆಳೆಯಲು ಇನ್ನೂ ನಮ್ಮನ್ನು ನಾವು ನಾವು ಹೆಚ್ಚು ಬೆಳೆಸಲು ಸಹಾಯ ಮಾಡುತ್ತದೆ ಅನ್ನೋದು ಸತ್ಯ..



ನಿಮ್ಮನ್ನು ಕಾಲೆಳೆದವರಿಗೂ ಪುಸ್ತಕ ದಲ್ಲಿ ಸ್ಥಾನ ಕೊಟ್ಟಿದ್ದು ನಿಜವಾಗಿಯೂ ನಿಮ್ಮ ದೊಡ್ಡತನ...  ಮಾತಿನಲ್ಲಿ ವಾಕ್ಯದಲ್ಲಿ ದೋಷಗಳಿದ್ದರೆ ಕ್ಷಮಿಸಿ.. ಹಿರಿಯರ ಆಶೀರ್ವಾದ ಈ ಕಿರಿಯಳ ಮೇಲಿರಲಿ.. ನಿಮ್ಮ ಸಾಧನೆಗೆ ಮನದಾಳದ ಶುಭ ಹಾರೈಕೆಗಳು....

      ಅಪೂರ್ವ ಕೊಲ್ಯ