Saturday 24 May 2014

ಸಾವಿರದೊಂದು ಗುರಿಯೆಡೆಗೆ :ತುಳುನಾಡ ದೈವಗಳು -84 ಕುರವ ಭೂತ -ಡಾ.ಲಕ್ಷ್ಮೀ ಜಿ ಪ್ರಸಾದ


                         

ಕುಂಬಳೆ ಸಮೀಪದ ಚೌಕಾರುಗುತ್ತಿನಲ್ಲಿ ಕಂಬಳದ ಕೋರಿಯ ದಿನದಂದು ರಾತ್ರಿ ಒಂಜಿ ಕುಂದು ನಲ್ಪ ಭೂತೊಲು  ನೇಮ (ಒಂದು ಕಡಿಮೆ ನಲುವತ್ತು ದೈವಗಳ ನೇಮ) ಇದೆ.
 ಅಜ್ಜ ಬಳಯ ದೈವ ಮಾಮಿ ಸಮ್ಮಾನ ಮಾಡುವ ಹಾಗೆ ಕುರವ ದೈವ ಕೂಡ ಮಾಮಿ ಸಮ್ಮಾನವನ್ನು ಅಭಿನಯಿಸುತ್ತದೆ. ಮಲೆಯಾಳದಲ್ಲಿ ಕೊರಗನಿಗೆ ಕುರವ ಎಂದು ಹೇಳುತ್ತಾರೆ.

 ಕೊರಗನ ರೂಪಧರಿಸುವ ಶಿವನೇ ಕುರವ ಎಂದು ಹೇಳುತ್ತಾರೆ. ಬಾಕುಡ ಜನಾಂಗದವರು ಮದುವೆಯಂಥಹ ಶುಭಕಾರ್ಯವಿದ್ದಾಗ ಕುರವನಿಗೆ ಕುಡಿ ಕಟ್ಟಿ ಇಟ್ಟು ಆರಾಧಿಸುತ್ತಾರೆ.

 ಉಪದೈವವಾಗಿ ಆರಾಧಿಸಲ್ಪಡುವ ಕುರವನಿಗೆ ವಿಶೇಷ ವೇಷ ಭೂಷಣಗಳು ಇರುವುದಿಲ್ಲ. ಮುಖ್ಯದ ಭೂತದ ಅಣಿಯನ್ನು ತೆಗೆದ ನಂತರ ಅದೇ ವೇಷದಲ್ಲಿ ಕುರವನಿಗೆ ನೇಮ ನೀಡುತ್ತಾರೆ. ಅಜ್ಜ ಬಳಯ ಹಾಗೂ ಕುರವ ಮೂಲತಃ ಒಂದೇ ದೈವವಾಗಿದ್ದು ಪ್ರಾದೇಶಿಕವಾಗಿ ಎರಡು ಹೆಸರಿನಿಂದ ಆರಾಧಿಸಲ್ಪಡುತ್ತಿರು ಸಾಧ್ಯತೆ ಇದೆ

 ಕೋಳ್ಯೂರಿನ ಶಂಕರ ನಾರಾಯಣ ದೇವಾಲಯಕ್ಕೆ ಸಂಬಂಧಿಸಿದ ಸತ್ಯಂಗಳದ ಕೊರತಿ ನೇಮ ಪ್ರಸ್ತುತ ಶ್ರೀ ಆನಂದ ಕಾರಂತರ ಮನೆಯಲಿ ನಡೆಯುತ್ತದೆ .ಆಗ ಮೊದಲಿಗೆ ಅಲ್ಲಿ ಕುರವ ದೈವಕ್ಕೆ ಕೋಲ ಕೊಟ್ಟು ಆರಾಧಿಸುತ್ತಾರೆ .
ಆಗ ಹೇಳುವ ಪಾಡ್ದನದ ಪ್ರಕಾರ ಕುರವ ಮತ್ತು ಬೇಟೆಯಾಡುತ್ತಾ ಬಂದು ಅಲ್ಲಿ ನೆಲೆಯಾದವರು .

ಕುರವ ದೈವ ಬೇಟೆ ನಾಯಿಯ ಪ್ರತೀಕವಾಗಿ ಕೈಯಲ್ಲಿ ಒಂದು ಬಾಳೆಯ ಸಿಂಬಿಯಿಂದ ರಚಿಸಿದ ನಾಯಿಯ ಆಕಾರದ ರಚನೆಯನ್ನು ಹಿಡಿದುಕೊಂದಿರುತ್ತದೆ .



No comments:

Post a Comment