Monday 13 October 2014

ನೆಟ್ ಪರೀಕ್ಷೆಯಲ್ಲಿ ನಲ್ಲಿ ಫೈಲ್ ಎಂದು ತಿಳಿದಾಗ -ಡಾ.ಲಕ್ಷ್ಮೀ ಜಿ ಪ್ರಸಾದ

                                                                                       ಇವತ್ತು ಸ್ನೇಹಿತರೊಂದಿಗೆ ಹೀಗೆ ಮಾತನಾಡುವಾಗ  ಯುಜಿಸಿ ಡಿಗ್ರಿ ಕಾಲೇಜ್ ಹಾಗೂ ಯೂನಿವರ್ಸಿಟಿಗಳಲ್ಲಿ ಉಪನ್ಯಾಸಕರಾಗಲು ನಿಗಧಿ ಪಡಿಸಿದ ಕನಿಷ್ಠ ಅರ್ಹತೆಯಾಗಿರುವ ನೆಟ್ (National eligibility test for lectureship )ವಿಚಾರ ಬಂತು .ತಕ್ಷಣ ನನಗೆ ನನ್ನ ನೆಟ್ ಪರೀಕ್ಷೆಯ ಆತಂಕ ,ಫಲಿತಾಂಶದ ಭಯ  ,ಸೋಲನ್ನು ಸ್ವೀಕರಿಸಲಾಗದೆ ಇದ್ದಾಗ ಆಗುವ ತಲ್ಲಣಗಳು ನೆನಪಾದವು.
ನೆಟ್ ಪರೀಕ್ಷೆಯಲ್ಲಿ ಮೂರು ಪತ್ರಿಕೆಗಳು ಇರುತ್ತವೆ .ಮೊದಲ ಪತ್ರಿಕೆ M.A,M.COM,, M.SC ,M.SW..ಮಾಡಿದ ಎಲ್ಲರಿಗೂ ಸಾಮಾನ್ಯವಾಗಿರುವ ಕಡ್ಡಾಯ  ಪತ್ರಿಕೆ .ಇದರಲ್ಲಿ ಆರ್ಟ್ಸ್ ,ಸೈನ್ಸ್ ,ಕಂಪ್ಯೂಟರ್ ,ವ್ಯವಹಾರ ಜ್ಞಾನ,ತಿಳುವಳಿಕೆ ಗಳಿಗೆ ಸೇರಿದಂತೆ ಗಣಿತದ ವಿಜ್ಞಾನದ ,ಸಮಾಜದ ,ಸಾಮನ್ಯಜ್ಞಾನದ ಪ್ರಶ್ನೆಗಳಿರುತ್ತವೆ .ಹಾಗಾಗಿ ಇದು ಕೆಲವರಿಗೆ ತುಸು ಕಷ್ಟ ಎನಿಸುತ್ತದೆ .ವಾಸ್ತವದಲ್ಲಿ ಇದು ಅಷ್ಟೇನೂ ಕಷ್ಟಕರವಾಗಿಲ್ಲ .ಆದರೂ ಈ ಪತ್ರಿಕೆಗೆ ಪೂರ್ವ ತಯಾರಿ ಸಾಕಷ್ಟು ಬೇಕಾಗುತ್ತದೆ .

ಉಳಿದ ಐಚ್ಚಿಕ ಪತ್ರಿಕೆಗಳು ಎರಡು ಇದ್ದು ಇದು ಅವರವರು ಪಡೆದ ಸ್ನಾತಕೋತ್ತರ ಪದವಿಗೆ ಸಂಬಂಧಿಸಿದ ಪ್ರಶ್ನೆಗಳು ಇದರಲ್ಲಿರುತ್ತವೆ .
ನಾನು ನೆಟ್ ಪರೀಕ್ಷೆ ಬಹಳ ಕಷ್ಟ ಅದರಲ್ಲಿ ಪಾಸ್ ಮಾಡೋದೇ ಇಲ್ಲ ಇತ್ಯಾದಿ ವಿಚಾರಗಳನ್ನು ಏಳೆಂಟು ಬಾರಿನೆಟ್ ಕಟ್ಟಿಯೂ ಪಾಸ್ ಅಗಲಾಗದವರ ಅನುಭವಗಳನ್ನು ಕೇಳಿದ್ದೆ.
ನಾನು ಸಂಸ್ಕೃತ ಹಿಂದಿ ಎಂ ಎ ಪದವಿಗಳನ್ನು ಪಡೆದ ನಂತರ ಕನ್ನಡ ಎಂ ಎ ಓದಿದ್ದು .ಹಾಗಾಗಿ 2004 ರಲ್ಲಿ ನಾನು ಕನ್ನಡ ಸ್ನಾತಕೋತ್ತರ ಪದವೀಧರಳಾದೆ.ಮುಂದೆ ಕನ್ನಡ ಉಪನ್ಯಾಸಕಿಯಾಗಿಯೇ ಮುಂದುವರಿಯುದು ಎಂದು ನಿರ್ಧರಿಸಿ 2005ರ ಡಿಸೆಂಬರ್ ತಿಂಗಳಿನಲ್ಲಿ ನಡೆಯುವ ನೆಟ್ ಪರೀಕ್ಷೆಗೆ ಕಟ್ಟಿದೆ .ನೆಟ್ ಪರೀಕ್ಷೆಗೆ ಬೇಕಾದ ಮಾಹಿತಿಗಳು ,ಹಳೆಯ ಪ್ರಶ್ನೆ ಪತ್ರಿಕೆಗಳು ದ.ರಾಜಪ್ಪ ದಳವಾಯಿ ಅವರ ಸಾಹಿತ್ಯ ಕೋಶಹಾಗೂ ಪ್ರಥಮ ಪತ್ರಿಕೆಗೆ upkars ...(ಪೂರ್ತಿ ಹೆಸರು ಮರೆತು ಹೋಗಿದೆ ಈಗ ) ಪುಸ್ತಕದಲ್ಲಿದೆ ಎಂದು ಆತ್ಮೀಯರಾದ ಜಯಶೀಲ ಅವರು ತಿಳಿಸಿದ್ದರು .
ಹಾಗೆ ಆ ಎರಡು ಪುಸ್ತಕಗಳನ್ನು ಮನೆಗೆ ಖರೀದಿಸಿ ತಂದೆ .ಮೇಲಿಂದ ಮೇಲೆ ಓದಿದೆ ಕೂಡ .ಮೊದಲ ಪತ್ರಿಕೆಯಲ್ಲಿ ಮತ್ತೆ ಮತ್ತೆ ರಿಪೀಟ್ ಆಗುವ ಕೆಲ ಮಾದರಿಯ ಪ್ರಶ್ನೆಗಳನ್ನು ಬಿಡಿಸಲು ಅಭ್ಯಾಸ ಮಾಡಿಕೊಂಡೆ .
ಪರೀಕ್ಷೆಗೆ ಹೋಗಿ ಬರೆದೆ .ಪ್ರಶ್ನೆಗೆಅಲಿಗೆ ಉತ್ತರಿಸಿ ಹೊರಬಂದಾಗ ನನಗೆ ಪಾಸ್ ಆಗಬಹುದು ಎಂದೆನಿಸಿತು .ಹಾಗೆ ನನ್ನ ಪರಿಚಿತರಲ್ಲಿ ಅಲ್ಲಿ ಹೇಳಿದೆ .ಅಲ್ಲಿದ್ದವರಲ್ಲಿ ಅನೇಕರು ಏಳು ಎಂಟನೆ ಬಾರಿ ಪರೀಕ್ಷೆ ಬರೆದ ಅನುಭವವಿರುವವರು .ಆಗ ಅವರೆಲ್ಲ "ಇಲ್ಲ ಮೇಡಂ ನೆಟ್ ನಲ್ಲಿ 1 % ಮಾತ್ರ ಫಲಿತಾಂಶ ಕೊಡೋದು ,ಅವರು ಪಾಸ್ ಮಾಡಲ್ಲ ನಾವು ಇಷ್ಟು ಬಾರಿ ಬರೆದರೂ ಪಾಸ್ ಆಗಲು ಆಗುತ್ತಿಲ್ಲ ,ನೀವು ಮೊದಲ ಬಾರಿ ಬರೆದಿದ್ದೀರಿ ,ನಿಮಗೆ ಈಗ ಪಾಸ್ ಆಗಬಹುದು ಎಂದೆನಿಸುತ್ತದೆ ,ಫಲಿತಾಂಶ ಬಂದಾಗ ಗೊತ್ತಾಗುತ್ತದೆ" ಎಂದು ಹೇಳಿದರು.
 "ಅವೆರೆಲ್ಲ ಜಾಣರೇ,ಯಾರೂ ದಡ್ಡರಲ್ಲ ಹಾಗಾಗಿ ಅವರು ಹೇಳಿದ್ದು ನಿಜ ಇರಬಹುದು"ಎಂದು ಕೊಂಡೆ .ಮೂರು ನಾಲ್ಕು ತಿಂಗಳು ಕಳೆದವು ಫಲಿತಾಂಶ ಬರಲಿಲ್ಲ .ಆ ನಡುವೆ ಮತ್ತೆ ನೆಟ್ ಪರೀಕ್ಷೆಗೆ ಅರ್ಜಿ ಆಹ್ವಾನಿಸಿದರು ,ಹಿಂದಿನ ಪರೀಕ್ಷೆಯ ಫಲಿತಾಂಶ ಇನ್ನೂ ಬಾರದೆ ಇದ್ದ ಕಾರಣ ಮತ್ತೆ ನೆಟ್ ಪರೀಕ್ಷೆಗೆ ಕಟ್ಟಿದೆ .
ಜೂನ್ ಕೊನೆಯ ವಾರದಲ್ಲಿ ಪರೀಕ್ಷಾ ದಿನಾಂಕ ನಿಗದಿಯಾಗಿತ್ತು .ದಿನ ನಿತ್ಯ ನೆಟ್ ಪರೀಕ್ಷೆ ಫಲಿತಾಂಶ ಬಂದಿದೆಯ ಎಂದು ಪ್ರಸಾದ್ ಅವರಲ್ಲಿ ಅಂತರ್ಜಾಲದಲ್ಲಿ ನೋಡಲು ಹೇಳುತ್ತಿದ್ದೆ .ದಿನಾಲೂ ಆಫೀಸ್ ಇಂದ ಅವರು ಮನೆಗೆ ಬಂದಾಗ ನನ್ನ ಮೊದಲ ಪ್ರಶ್ನೆ ರಿಸಲ್ಟ್ ಬಂತಾ ?ಅವರದು ಮಾಮೂಲಿ ಉತ್ತರ ಇಲ್ಲವೆಂದು !
ಒಂದು ದಿನ ಮನೆ ಸಂಜೆ ಸಮೀಪದಲ್ಲಿರುವ ಗೆಳತಿ ಮನೆಗೆ ಹೋಗಿದ್ದೆ .ಮಾತನಾಡುತ್ತಾ ಹೊತ್ತುಹೋದದ್ದು ತಿಳಿಯಲಿಲ್ಲ .ಸಂಜೆ 7 ಗಂಟೆಹೊತ್ತಿಗೆ ನಾನು ಮನೆಗೆ ಹೊರಡುವಷ್ಟರಲ್ಲಿ  ಪ್ರಸಾದ್ ಅಲ್ಲಿಗೆ ಬಂದರು .ಸ್ವೀಟ್ ಕೊಟ್ಟು ನಿನ್ನ ನೆಟ್ ರಿಸಲ್ಟ್ ಬಂದಿದೆ ನೀನು ಪಾಸ್ ಆಗಿದ್ದಿ,congrats ಎಂದರು .ನನಗೆ ನಂಬಲೇ ಆಗಲಿಲ್ಲ !ಅವರು ಫಲಿತಾಂಶದ ಪ್ರಿಂಟೆಡ್ copy ಯನ್ನು ನೀಡಿದರು.ಹೌದು ಅದರಲ್ಲಿ ನನ್ನ ರಿಜಿಸ್ಟರ್ ನಂಬರ್ ಇತ್ತು !
ಸ್ನೇಹಿತೆ ಮನೆಯವರಿಗೆಲ್ಲ ಸ್ವೀಟ್ ಕೊಟ್ಟು ಮನೆಗೆ ಹಿಂತಿರುಗಿದೆ .

ಇದಾಗಿ 6 ವರ್ಷಗಳ  ನಂತರ ನಾನು ಮತ್ತೆ ನೆಟ್ ಪರೀಕ್ಷೆ ಕಟ್ಟಬೇಕಾಯಿತು .ನನಗೆ ಕನ್ನಡ ಎಂ ಎ ಯಲ್ಲಿ 65 % ಅಂಕಗಳು ಮಾತ್ರವಿದ್ದವು .ಇಷ್ಟರತನಕ ಡಿಗ್ರಿ ಕಾಲೇಜ್ ಗಳಿಗೆ ಸಂದರ್ಶನದ ಮೂಲಕ ಉಪನ್ಯಾಸಕರ ಹುದ್ದೆಯನ್ನು ತುಂಬುತ್ತಿದ್ದರು .ಎಂ ಎ ಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ 1:4 ನಿಷ್ಪತ್ತಿಯಲ್ಲಿ (ಒಂದು ಹುದ್ದೆಗೆ ನಾಲ್ಕು ಜನರಂತೆ )ಸಂದರ್ಶನಕ್ಕೆ ಆಹ್ವಾನಿಸುತ್ತಿದ್ದರು .
ಯೂನಿವರ್ಸಿಟಿ ಯಿಂದ university ಗೆ ವಾರ್ಷಿಕ ಸ್ಕೀಮ್ ಮತ್ತು ಸೆಮಿಸ್ಟರ್ ಸ್ಕೀಮ್ ಗಳಿಗೆ ಮೌಲ್ಯ ಮಾಪನ ಹಾಗೂ ಅಂಕ ನೀಡಿಕೆಯಲ್ಲಿ ತುಂಬಾ ವ್ಯತ್ಯಾಸವಿರುತ್ತದೆ.ಹಾಗಾಗಿ ಕನ್ನಡ ಎಂ ಎ ಯಲ್ಲಿ 80 -85 % ಅಂಕಗಳನ್ನು ಗಳಿಸಿದವರು ಇರುತ್ತಾರೆ .ಆದ್ದರಿಂದ 75 % ಕ್ಕಿಂತ ಕೆಳಗೆ ಇದ್ದವರಿಗೆ ಸಂದರ್ಶನಕ್ಕೆ  2006 ಮತ್ತು 2008 ರ ನೇಮಕಾತಿಯಲ್ಲಿ ಆಹ್ವಾನ ಬರಲಿಲ್ಲ .
ನನಗೆ ಇದರಿಂದಾಗಿ ಡಿಗ್ರಿ ಕಾಲೇಜ್ ನಲ್ಲಿ ಕೆಲಸ ಸಿಗುವ ಅವಕಾಶ ತಪ್ಪಿ ಹೋಯಿತು .ಅಂಕಗಳಿಲ್ಲ ಎಂದು ಕೈಕಟ್ಟಿ ಕೂರುವ ಜಾಯಮಾನ ನನ್ನದಲ್ಲ .
ಹಾಗಾಗಿ ನಾನು ಮತ್ತೊಮ್ಮೆ ಕನ್ನಡ ಎಂ ಎ ಗೆ ksou ವಿನಲ್ಲಿ ಕಟ್ಟಿ ಅಂಕ ಗಳಿಕೆಗಾಗಿ ತೀವ್ರ ತಯಾರಿ ನಡೆಸಿ ಪರೀಕ್ಷೆಗೆ ಹಾಜರಾದೆ .ಹಾಗಾಗಿ ನನಗೆ 78 % ಅಂಕಗಳೂ ನಾಲ್ಕನೇ ರಾಂಕ್ ಕೂಡ ಬಂತು .
ಈಗ ಒಂದು ಸಮಸ್ಯೆ ಎದುರಾಯಿತು .ನಾನು ನೆಟ್ ಎಕ್ಷಾಮ್ ಮತ್ತು ಪಿಎಚ್ ಡಿ ಯನ್ನು ಮೊದಲ ಕನ್ನಡ ಎಂ ಎ ಡಿಗ್ರಿ ಆಧಾರದಲ್ಲಿ ಪಡೆದದ್ದು ,ಹಾಗಿರುವಾಗ ಮುಂದೆ ಡಿಗ್ರಿ ಕಾಲೇಜ್ ಗೆ ಉಪನ್ಯಾಸಕರ ಹುದೆಗ್ ಅರ್ಜಿ ಆಹ್ವಾನಿಸಿದಾಗ ನನ್ನ ಎರಡನೇ ಕನ್ನಡ ಎಂ ಎ ಅಂಕಗಳನ್ನು ಪರಿಗಣಿಸುವುದು ಸಂಶಯ ಎಂದು ಅನೇಕ ಹಿತೈಷಿಗಳು ತಿಳಿಸಿದರು .

ಸರಿ ಹಾಗಾದರೆ ಎರಡನೇ ಕನ್ನಡ ಎಂ ಎ ಆಧಾರದಲ್ಲಿ ಇನ್ನೊಮ್ಮೆ ನೆಟ್ ಎಕ್ಷಾಮ್ ಪಾಸ್ ಮಾಡಿದರೆ ಆಯಿತು ಎಂದು ಕೊಂಡು ಮತ್ತೆ 2011 ರಲ್ಲಿ ನೆಟ್ ಎಕ್ಷಾಮ್ ಕಟ್ಟಿದೆ.ಈ ಭಾರಿ ವಿಪರೀತ ಆತ್ಮ ವಿಶ್ವಾಸ ಇತ್ತು .ಈ ಹಿಂದೆ ಒಂದೇ ಯತ್ನದಲ್ಲಿ ನೆಟ್ ಪಾಸ್ ಮಾಡಿದ್ದೇನೆ ಎಂಬ ಹುಂಬ ಧೈರ್ಯ ಬೇರೆ .ಹಾಗಾಗಿ ಈ ಹಿಂದಿನಂತೆ ಸರಿಯಾಗಿ ಅಭ್ಯಾಸ ಮಾಡಿರಲಿಲ್ಲ ,ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಒಮ್ಮೆ ಕೂಡ  ತಿರುವಿ ಹಾಕಲಿಲ್ಲ !ಆದರೆ ಈ ಮೊದಲು ನಾನು ನೆಟ್ ನಲ್ಲಿ ಪಾಸ್ ಆದ   ಬಳಿಕ ಅನೇಕರಿಗೆ ಈ ಬಗ್ಗೆ ಹೇಗೆ ತಯಾರಾಗ ಬೇಕು ಎಂಬ ಬಗ್ಗೆ ಮಾಹಿತಿ ನೀಡಿದ್ದೆ ,ಅನೇಕ ಪ್ರಶ್ನೆಪತ್ರಿಕೆಗಳ ಸಮಸ್ಯೆಗಳನ್ನುಬಿಡಿಸಲು ಸಹಾಯ ಮಾಡಿದ್ದೆ ,ಹಾಗಾಗಿ ಇದೆಲ್ಲ ತುಸು ನೆನಪಿತ್ತು !

ಪರೀಕ್ಷೆಯ ದಿನ ಬಂತು .ಹೋಗಿ ಬರೆದೆ .ಬರೆದು ಹೊರ ಬಂದು ಪ್ರಶ್ನೆ ಪತ್ರಿಕೆಯನ್ನು ಮತ್ತೊಮ್ಮೆ ಪರಿಶೀಲಿಸಿದಾಗ  "ಈ ಹಿಂದೆ ನೆಟ್ ಪರೀಕ್ಷೆಗೆ ಬರೆದಷ್ಟು ಚೆನ್ನಾಗಿ ಉತ್ತರಿಸಿಲ್ಲ .ಆದರೂ ಪಾಸ್ ಆಗುವಷ್ಟು ಬರೆದಿದ್ದೇನೆ"ಎಂದು ಎನಿಸಿತು .
ಮತ್ತೆ ನಾಲ್ಕೈದು ತಿಂಗಳು ಕಳೆದವು .ಈ ಹೊತ್ತಿಗಾಗುವಾಗ ನಾನು ಮೊಬೈಲ್ ಗೆ ಇಂಟರ್ನೆಟ್ ಕನೆಕ್ಷನ್ ಪಡೆದಿದ್ದೆ .ಹಾಗಾಗಿ ಪ್ರಸಾದ್ ಅವರಲ್ಲಿ ಫಲಿತಾಂಶ ಬಂತಾ  ಎಂದು ಕೇಳುವ ಪ್ರಮೇಯ ಇರಲಿಲ್ಲ .ದಿನಾಲೂ ಬೆಳಗ್ಗೆ ಸಂಜೆ ನಾನು ನೋಡುತ್ತಾ ಇದ್ದೆ .ಮತ್ತೆ ಪುನಃ ನೆಟ್ ಪರೀಕ್ಷೆಗೆ ಕಟ್ಟುವ ಸಮಯ ಬಂದರೂ ಫಲಿತಾಂಶ ಬರಲಿಲ್ಲ ಹಾಗೆ ಮತ್ತೊಮ್ಮೆ ನೆಟ್ ಕಟ್ಟಿದೆ .ಅದರ ಪರೀಕ್ಷಾ ದಿನಾಂಕ ಹತ್ತಿರ ಬಂದರೂ ಫಲಿತಾಂಶ ಬಂದಿಲ್ಲ .
ಈ ನಡುವೆ ಸರ್ಕಾರಿ ಪದವಿ ಪೂರ್ವ  ಕಾಲೇಜ್ ಗಳಿಗೆ  ಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಉಪನ್ಯಾಸಕರ ಹುದ್ದೆಗಳನ್ನು ತುಂಬಿದ್ದು ಅದರಲ್ಲಿ ನಾನು ಆಯ್ಕೆಯಾಗಿ ಬೆಳ್ಳಾರೆಯಲ್ಲಿ ಕೆಲಸ ಮಾಡುತ್ತಿದ್ದೆ .ನಾನು ನೆಟ್ ಪರೀಕ್ಷೆ ಕೇಂದ್ರ   ಬೆಂಗಳೂರು ಎಂದು ಆಯ್ಕೆ ಹಾಕಿದ್ದೆ .

ಹಾಗಾಗಿ ನನ್ನ ಹಾಲ್ ಟಿಕೆಟ್ನಲ್ಲಿ  ಬೆಂಗಳೂರಿನ ಮಹಾರಾಣಿ ಕಾಲೇಜ್ ನಲ್ಲಿ ಪರೀಕ್ಷೆಗೆ ಹಾಜರಾಗಲು ಸೂಚಿಸಿದ್ದರು .ಹಾಗೆ ನಾನು ಪರೀಕ್ಷೆಗೆ ಎರಡು ದಿನ ಮೊದಲೇ ಬೆಳ್ಲಾರೆಯಿಂದ ಬೆಂಗಳೂರಿಗೆ ರಾತ್ರಿ ರೈಲಿನಲ್ಲಿ ಹೊರಟೆ ,ಫಲಿತಾಂಶ ಬಾರದ ಕಳವಳ ,ಈ ಹಿಂದೆ ಪಾಸ್ ಆಗಿದ್ದೇನೆ ಎನ್ನುವ  ಆತ್ಮ ವಿಶ್ವಾಸ, ಎಲ್ಲ ಸೇರಿ ಏನೇನೂ ತಯಾರಿ ಮಾಡಿರಲಿಲ್ಲ ಈ ಬಾರಿ .

ರೈಲಿನಲ್ಲಿ ರಾತ್ರಿ ನಿದ್ರಿಸುವ ಮೊದಲು ಫಲಿತಾಂಶ ಬಂದಿದೆಯೇ ಎಂದು ಮೊಬೈಲ್ ನಲ್ಲಿ ನೋಡಿದ್ದೇ ಬಂದಿರಲಿಲ್ಲ .
ಯಾವಾಗಲೂ ಅಲರಾಮ್ ಸದ್ದು ಆಗದೆ ಎಂದೂ ಎಚ್ಚರಗೊಳ್ಳದ ನನಗೆ ಮರುದಿನ ಬೆಳಗಿನ ಜಾವ ಬೇಗನೆ ಎಚ್ಚರಾಗಿತ್ತು .ಬಹುಶ ಪರೀಕ್ಷೆಯ ಆತಂಕವೇ ಇರಬೇಕು !
ಎಚ್ಚರಾದ ತಕ್ಷಣ ನೆಟ್ ಫಲಿತಾಂಶ ಬಂದಿದೆಯೇ ನೋಡಿದೆ .ಫಲಿತಾಂಶ ಬಂದಿತ್ತು .
ನೆಟ್ ಪರೀಕ್ಷೆ ಯ ಫಲಿತಾಂಶ ಮೊಬೈಲ್ ನಲ್ಲಿ ನೋಡಲು ತುಂಬಾ ಹೊತ್ತು ಬೇಕು .ಪಾಸ್ ಆದ ಸಾವಿರಾರು ಜನರ ರಿಜಿಸ್ಟರ್ ಸಂಖ್ಯೆ ಅನುಕ್ರಮವಾಗಿ ಇರುತ್ತದೆ ಒಂದೊಂದೇ ಪುಟವನ್ನು ಮಗುಚುತ್ತಾ ಮುಂದೆ ಸಾಗಬೇಕು .
ನನ್ನ ರಿಜಿಸ್ಟರ್ ನಂಬರ್  063210123    ಎಂದು ನಗೆ ನೆನಪಿತ್ತು ಆದರೆ  .ಈ ಸಂಖ್ಯೆ ಪಾಸ್ ಅದವರ ಪಟ್ಟಿಯಲ್ಲಿ ಇರಲಿಲ್ಲ ಎಂದರೆ ನಾನು ಫೈಲ್ ಆಗಿದ್ದೆ !!
ಎದೆ ದಸಕ್ ಎನ್ನಿಸಿತು !ಆತ್ಮವಿಶ್ವಾಸದಲ್ಲಿ ಬೀಗುತ್ತಿದ್ದ ನನ್ನನ್ನು ತಣ್ಣೀರ ಕೊಳಕ್ಕೆ ಅದ್ದಿದಂತಾಗಿತ್ತು.!ಯಾಕೋ ಫೈಲ್ ಅನ್ನು ಸ್ವೀಕರಿಸಲು ಮನಸ್ಸು ಒಪ್ಪುತ್ತಿಲ್ಲ .ಹುಚ್ಚಿಯಂತೆ ಮತ್ತೆ ಮತ್ತೆ ನನ್ನ ನಂಬರ್ ಇದೆಯಾ ಎಂದು ಹುಡುಕುತ್ತಾ ಇದ್ದೆ ಅಷ್ಟರಲ್ಲಿ ಟ್ರೈನ್ ಕೆಂಗೇರಿ ತಲುಪಿತು ,ಪಕ್ಕದ ಪ್ರಯಾಣಿಕರಲ್ಲಿ ರಾತ್ರಿ ನಾನು ಕೆಂಗೇರಿರಿಯಲ್ಲಿ ಇಳಿಯುವುದು ಎಂದು ಹೇಳಿದ್ದೆ .ಕೆಂಗೇರಿ ಬಂದದ್ದೂ ನನಗೆ ಗೊತ್ತಾಗಲಿಲ್ಲ ,ಅವರು ನೀವು ಇಳಿಯುದಿಲ್ವ ಎಂದು ನೆನಪಿಸಿದಾಗ ದಡಬಡಿಸ್ಕೊಂಡುಇಳಿದೆ .ಅಲ್ಲಿಂದ ಯಾವುದೋ ಟ್ರಾನ್ಸ್ ನಲ್ಲಿದ್ದವರ ರೀತಿ ಹೇಗೋ ತೇಲಾಡಿಕೊಂಡು ಬಂದು ಯಶವಂತಪುರ ಬಸ್ ಹತ್ತಿ ಕುಳಿತೆಆದಿನ ನನಗೆ ಮನೆಗೆ ಹೋಗಿ ನಂತರ pu dept ಗೂ ಹೋಗಲಿದ್ದ ಕಾರಣ  ಡೈಲಿ ಪಾಸ್ ತೆಗೆದುಕೊಂಡೆ .
ಮತ್ತೆ ಬಸ್ ನಲ್ಲಿ ಕುಳಿತು ಫಲಿತಾಂಶದಲ್ಲಿ ನನ್ನ ನಂಬರ್ ಇದೆಯಾ ಎಂದು ಮತ್ತೆ ಮತ್ತೆ ಹುಡುಕುತ್ತಾ ಇದ್ದೆ .ಯಾಕೋ ಏನೋ ನಾನು ಫೈಲ್ ಆಗಿದ್ದೇನೆ ಎಂಬುದನ್ನು ನನ್ನ ಮನಸು ಸ್ವೀಕರಿಸಲು ತಕರಾರು ಮಾಡುತ್ತಿತ್ತು !!ಒಂದೆಡೆ ಫೈಲ್ ಅದ ಚಿಂತೆ ,ಇನ್ನೊಂದೆಡೆಫೈಲ್ ಆದಚಿಂತೆ  ಕಾರಣ ಮರುದಿವಸ ನೆಟ್ ಎಕ್ಷಾಮ್ ಗೆ ಹಾಜರಾಗಬೇಕಲ್ಲ ಎಂಬ ಚಿಂತೆ ,ಈ ಬಾರಿ ಪಾಸ್ ಆಗುತ್ತೆ ನಡು ಏನು ಗ್ಯಾರಂಟೀ ಎಂಬ ಕಳವಳ !
ಈ ತೊಳಲಾಟದಲ್ಲಿ ನಾನು ಇಳಿಯಬೇಕಾಗಿದ್ದ ಉಲ್ಲಾಳು ಕ್ರಾಸ್ ಬಂದದ್ದೆ ಗೊತ್ತಿಲ್ಲ.!ಮೂರು ನಾಲ್ಕು   ಕಿಲೋಮೀಟರ್ ಮುಂದೆ  ಹೋಗಿ ದೀಪ ಕಾಂಪ್ಲೆಕ್ಸ್ ಹತ್ರ ಬಂದಾಗಲೇ ಬಂದಾಗಲೇ ನನಗೆ ನಾನು ಇಳಿಯಬೇಕಾದಲ್ಲಿ ಇಳಿಯದೆ ಮುಂದೆ ಬಂದು ಬಿಟ್ಟಿದೇನೆ ಎಂದು ತಿಳಿದದ್ದು !
ಕೂಡಲೇ ಗಡಬಡಿಸಿ ಇಳಿದೆ !ರಸ್ತೆ ದಾಟಿ ಬಸ್ ಹಿಡಿದು ಹಿಂದೆ ಬಂದೆ ಉಲ್ಲಾಳು ಕ್ರಾಸ್ ನಲ್ಲಿ ಇಳಿದೆ.ಆಗ ನನಗೆ ನಾನು ನನ್ನ ಬ್ಯಾಗ್ ಅನ್ನುಹಿಂದಿನ  ಬಸ್ ನಲ್ಲಿ ಬಿಟ್ಟಿದ್ದೇನೆ ಎಂದು ನೆನಪಾಯಿತು .ಇಷ್ಟು ಆದಮೇಲೆ ಪ್ರಸಾದ್ ಗೆ ಫೋನ್ ಮಾಡಿ ಹೇಳಿದೆ .ಅವರು ಕೂಡಲೇ ಮನೆಯಿಂದ ಹೊರತು ನಾನಿದ್ದಲ್ಲಿಗೆ ಬಂದರು .ಅಲ್ಲಿಂದ ಯಶವಂತ ಪುರ ಬಸ್ನಿಲ್ದಾಣಕ್ಕೆ ವೇಗವಾಗಿ ಹೋದೆವು .ಆದರೆ ನಾವು ಅಲ್ಲಿಗೆ ಹೋಗುವಷ್ಟರಲ್ಲಿ ನಾನು ಇದ್ದ ಬಸ್ ಅಲ್ಲಿಗೆ ಬಂದು ಹಿಂದೆ ತಿರುಗಿ ಹೋಗಿತ್ತು .ಅಲ್ಲಿ ನನ್ನ ಬ್ಯಾಗ್ ಬಸ್ ನಲ್ಲಿ ಬಾಕಿಯಾದ ಬಗ್ಗೆ ಮಾಹಿತಿ ನೀಡಿ ಸಿಕ್ಕರೆ ಹಿಂತಿರುಗಿಸಲು ಮನವಿ ಮಾಡಿದೆವು .ಅವರು ನನ್ನಲ್ಲಿದ್ದ ಡೈಲಿ ಪಾಸ್ ನಂಬರ್ ನೋಡಿ ಇದು ಶಾಂತಿ ನಗರ ಡಿಪೋ ವ್ಯಾಪ್ತಿಯ ಬಸ್ ಅಲ್ಲಿ ವಿಚಾರಿಸಿ ಎಂದು ಹೇಳಿದರು.ಅಲ್ಲಿಗೆ ಫೋನ್ ಮಾಡಿ ವಿಷಯ ತಿಳಿಸಿ ಬ್ಯಾಗ್ ಸಿಕ್ಕರೆ ತಿಳಿಸಲು ಹೇಳಿದೆವು .ಆಯಿತು ನಾವು ಪ್ರಯತ್ನಿಸುತ್ತೇವೆ ಎಂದು ಅವರು ಹೇಳಿದರು .
ಅಲ್ಲಿಂದ ನಾವು ಮನೆಗೆ ಬಂದೆವು .

ಮನೆಗೆ ಬಂದು ಫ್ರೆಶ್ ಆಗಿ ಪ್ರಸಾದ್ ಮಾಡಿಕೊಟ್ಟ ಟೀ ಮತ್ತು ತಿಂಡಿ  ತಿನ್ನುತ್ತಾ (ನಾನು ಟೀ ತಿಂಡಿ ತಯಾರಿಸುವ ತಿನ್ನುವ ಮನಷ್ಟಿತಿಯಲ್ಲಿ ಇರಲಿಲ್ಲ )ಮತ್ತೊಮ್ಮೆ ಫಲಿತಾಂಶ ಹುಡುಕಿದೆ .ಆಗ ನನ್ನ ಗಮನಕ್ಕೆ ಒಂದು ವಿಚಾರ ಬಂತು .ಅಲ್ಲಿರುವ ಎಲ್ಲ ಸಂಖ್ಯೆಗಳು 8 ಡಿಜಿಟ್ಸ್ ಹೊಂದಿದ್ದವು ,ಆದರೆ ನನ್ನ ರಿಜಿಸ್ಟರ್ ನಂಬರ್ 9 ಡಿಜಿಟ್ಸ್ ಅನ್ನು ಹೊಂದಿತ್ತು .ಇಷ್ಟರ ತನಕ ನನ್ನ ನೆನಪಿನಲ್ಲಿದ್ದ ರಿಜಿಸ್ಟರ್ ನಂಬರ್ ಅನ್ನು ನಾನು ಹುಡುಕಿದ್ದೆ,ಈಗ ಯಾಕೋ ಸಂಶಯ ಆಗಿ ನನ್ನ ಹಾಲ್ ಟಿಕೆಟ್ ಹುಡುಕಿ ತೆಗೆದು ನೋಡಿದೆ !
ಹೌದು !ಇಲ್ಲಿ ಒಂದು ಅಂಕೆಯನ್ನುನಡುವೆ  ನಾನು ತಪ್ಪಾಗಿ ಹೆಚ್ಚು ಸೇರಿಸಿ ಹುಡುಕಾಡಿದ್ದೆ!06210123 ರ ಬದಲು 063210123 ಅನ್ನು ಹುಡುಕಾಡಿದ್ದೆ !
ಇಲ್ಲದೆ ಇರುವ ಸಂಖ್ಯೆಯನ್ನು ಫಲಿತಾಂಶದ ಪಟ್ಟಿ ತಾನೇ  ಹೇಗೆ ತೋರಿಸುತ್ತದೆ !  ಈಗ ನನ್ನ ಸರಿಯಾದ ಸಂಖ್ಯೆ ಹಾಕಿ ಹುಡುಕಿದೆ !
ಅಬ್ಬಾ!ದೇವರೇ ! ಆ ಕುಶಿಯನ್ನು ಏನು ಹೇಳಲಿ ,ನನ್ನ ಸಂಖ್ಯೆ ಅಲ್ಲಿತ್ತು ಅಂದರೆ ನಾನು ಪಾಸ್ ಆಗಿದ್ದೆ !



ನೆಟ್ ಎಕ್ಷಾಮ್ ಹಾಗೆಯೇ ಗುಮ್ಮ ಬಂತು ಗುಮ್ಮ ಎಂಬ ಹಾಗೆ ಏನೂ  ಭಯಾನಕವಾದದ್ದು ಇಲ್ಲವಾದರೂ ನಮ್ಮನ್ನು ಏನೋ ಭಯಂಕರ ಎನ್ನುವ ಹಾಗೆ ಹೆದರಿಸುತ್ತದೆ .ಏಳೆಂಟು ಬಾರಿ ಕಟ್ಟಿದರೂ ತುಂಬಾ ಜನರು  ಪಾಸ್ ಆಗಿಲ್ಲ ,ಅದರಲ್ಲಿ ಅರ್ಧ ಶೇಕಡಾ ,ಒಂದು ಶೇಕಡಾ ಮಾತ್ರ ಫಲಿತಾಂಶ ಕೊಡುತಾರೆ"ಇತ್ಯಾದಿ ಅತಿರಂಜಿತ ವಿಚಾರಗಳೇ ವಿದ್ಯಾರ್ಥಿಗಳನ್ನು  ಕಂಗಾಲು ಮಾಡುತ್ತದೆ .ಏಳೆಂಟು ಬಾರಿ ಕಟ್ಟಿದವರು ಒಮ್ಮೆ ಕೂಡ ತಯಾರಿ ಮಾಡಿ ಹೋಗಿರಲಿಕ್ಕಿಲ್ಲ ಎಂಬುದು ನಮಗೆ ತಲೆಗೆ ಹೋಗುವುದು ನಾವು ತಯಾರಿ ಮಾಡಿಕೊಂಡು ಹೋಗಿ ಬರೆದು ಯಶಸ್ಸನ್ನು ಗಳಿಸಿದಾಗಲೇ !

ಇರಲಿ ,ಮುಂದೆ ಸ್ವಲ್ಪ ಹೊತ್ತಿನಲ್ಲಿ ನಾನು ಬ್ಯಾಗ್ ಬಿಟ್ಟು ಇಳಿದಿದ್ದ ಬಸ್ ನ ನಿರ್ವಾಹಕ ಹರಿದಾಸ್ ಅವರಿಂದ ಫೋನ್ ಬಂತು ,ಆ ಬ್ಯಾಗ್ ನಲ್ಲಿ ನನ್ನ ಪ್ರಕಟಿತ ಪುಸ್ತಕವೊಂದು ಇತ್ತು ಅದರಲ್ಲಿ ನನ್ನ ಫೋನ್ ನಂಬರ್ ಇತ್ತು .ಅದನ್ನು ನೋಡಿ ಅವರು ಫೋನ್ ಮಾಡಿದ್ದರು .

ಅವರ ಮನೆ ಅಲ್ಲಿಯೇ ಉಳ್ಳಾಲ್ ಕ್ರಾಸ್ ಹತ್ರ ಇತ್ತು .ಅಲ್ಲಿಗೆ ಹೋಗಿ ಅವರಿಂದ ಬ್ಯಾಗ್ ತಂದೆವು ,ಬಹಳ ಪ್ರಾಮಾಣಿಕರಾಗಿದ್ದ ಅವರು ಬ್ಯಾಗ್ ಒಳಭಾಗದಲ್ಲಿ ಏನಿತ್ತು ಎನ್ನುವುದನ್ನು ಕೂಡ ತೆರೆದು ನೋಡಿರಲಿಲ್ಲ !ಹೊರಭಾಗದ ಜಿಪ್ ನಲ್ಲಿದ ಬುಕ್ ಅನ್ನು ನೋಡಿ ಫೋನ್ ಮಾಡಿದ್ದರು .ಇಂದಿನ ಕಾಲದಲ್ಲಿಯೂ ಒಳ್ಳೆಯತನ ಪ್ರಾಮಾಣಿಕತನ ಉಳಿದುಕೊಂಡಿದೆ ಎಂಬುದಕ್ಕೆ ಅವರು ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿದ್ದರು .

ನಾವು ಅಂದುಕೊಂಡ ಹಾಗೆ ಬದುಕು ಇರುವುದಿಲ್ಲ .ನಾನು ಡಿಗ್ರಿ ಕಾಲೇಜ್ ಉಪನ್ಯಾಸಕ ಹುದ್ದೆಯ ಸಂದರ್ಶನಕ್ಕೆ ಬರುವಷ್ಟು ಅಂಕಗಳನ್ನು ಗಳಿಸುವ ಸಲುವಾಗಿಯೇ ಪುನಃಎಂ ಎ ಮಾಡಿದೆ ಅಂಕಗಳನ್ನೂಗಳಿಸಿದೆ ,ಅದಕ್ಕೆ ಅರ್ಹತೆಯಾಗಿ ನೆಟ್ ಎಕ್ಷಾಮ್ ಅನ್ನೂ ಮತ್ತೊಮ್ಮೆ ಪಾಸ್ ಮಾಡಿದೆ !

ಆದರೆ ಈಗ ಡಿಗ್ರಿ ಕಾಲೇಜ್ ಗೆ ಅರ್ಹತೆಯಾಗಿ ನೆಟ್ ಅಥವಾ ಪಿಎಚ್.ಡಿ ಯನ್ನು ಹಾಗೂ ಎಂ ಎ ಯಲ್ಲಿ ಕನಿಷ್ಠ 55 % ಅಂಕಗಳನ್ನು ನಿಗದಿ ಪಡಿಸಿ ಉನ್ನತ ಶಿಕ್ಷಣ ಇಲಾಖೆಯು ಡಿಗ್ರಿ ಕಾಲೇಜ್ ಗಳಿಗೆ ಸುಮಾರು 1200 ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ತುಂಬುವ ಬಗ್ಗೆ ಸೂಚನೆ ನೀಡಿದೆ ,ಇನ್ನೊಂದು ವಾರದಲ್ಲಿ ಅರ್ಜಿ ಆಹ್ವಾನಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಎಲ್ಲರೂ ನಾನು ಕೂಡ .ನೆಟ್ /ಸ್ಲೆಟ್,ಅಥವಾ ಪಿಎಚ್.ಡಿ ಹಾಗೂ ಎಂ ಎಯಲ್ಲಿ 55 % ಅಂಕ ಪಡೆದವರು ಅರ್ಜಿ ಸಲ್ಲಿಸಿ  ಸ್ಪರ್ಧಾತ್ಮಕ ಪರೀಕ್ಷೆ ಬರೆಯಬಹುದು .ಇಲ್ಲಿ ಎಂ ಎಯಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸುವುದಿಲ್ಲ .ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸುವ ಅಂಕಗಳ ಮೂಲಕ ಆಯ್ಕೆಯಾಗುತ್ತದೆ .
ನಾನೂ ಅರ್ಜಿ ಸಲ್ಲಿಸಿ ಪರೀಕ್ಷೆ ಎದುರಿಸಬೇಕಿನ್ದಿದ್ದೇನೆ ,ಮುಂದೇನಾಗುತ್ತದೆ ನೋಡಬೇಕು !
 "ನೆಟ್ ಎಕ್ಷಾಮ್ ನಲ್ಲಿ ಫೈಲ್ ಆದೆ ಎಂಬ ಭಾವನೆ ನನ್ನನ್ನು ಎಷ್ಟು ಅವಾಂತರಗಳಿಗೆ ತಳ್ಳಿ ಹಾಕಿತು" ಎಂಬುದನ್ನು ನೆನಪಿಸಿಕೊಂಡು ಸೋಲು ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮನಸ್ಥೈರ್ಯವನ್ನು ಬೆಳೆಸಿಕೊಳ್ಳಲು ಯತ್ನಿಸುತ್ತಿದ್ದೇನೆ .  ಇತ್ತೀಚೆಗೆ ಮಂಗಳೂರು ಯೂನಿವರ್ಸಿಟಿಯಲ್ಲಿನ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಯ ಸಂದರ್ಶನದಲ್ಲಿನ ಸೋಲನ್ನು ದಿಟ್ಟವಾಗಿ ಎದುರಿಸಿದ್ದೇನೆ.ಅನ್ಯಾಯದ ವಿರುದ್ಧ ಕೋರ್ಟ್ ಗೆ ಹೋಗಿದ್ದೇನೆ ಮುಂದೇನಾಗುತ್ತದೋ ಗೊತ್ತಿಲ್ಲ !ಕಾಲಾಯ ತಸ್ಮೈ ನಮಃ




No comments:

Post a Comment