Wednesday, 5 November 2025

228 : ವಾಸುದೇವ ಅಸ್ರಣ್ಣ ಕಟೀಲು : ನಮ್ಮ‌ಹೆಮ್ಮೆಯ ಪುಸ್ತಕ‌ ಮಿತ್ರರು : ಕರಾವಳಿಯ ಸಾವಿರದೊಂದು ದೈವಗಳು : ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684


 

227: ಪ್ರೀತಮ್ ಶೆಟ್ಟಿ ಕಟೀಲು : ನಮ್ಮ‌ಹೆಮ್ಮೆಯ ಪುಸ್ತಕ‌ ಮಿತ್ರರು: ಕರಾವಳಿಯ ಸಾವಿರದೊಂದು ದೈವಗಳು : ಡಾ.ಲಕ್ಷ್ಮೀ ಜಿ ಪ್ರಸಾದ್ : ಮೊಬೈಲ್ 9480516684


 ಮನೆ‌ಮನಗಳನ್ನು ತುಂಬುತ್ತಿರುವ ಕರಾವಳಿಯ ಸಾವಿರದೊಂದು ದೈವಗಳು ಕೃತಿ ತಲುಪಿದಾಗ ಪೋಟೋ ತೆಗೆದು ಸಂಭ್ರಮಿಸಿದವರು ಪ್ರೀತಮ್ ಕಟೀಲು

226 : ಪ್ರವೀಣ್ ಶೆಟ್ಟಿ ,ಬೆಂಗಳೂರು: ನಮ್ಮ ಹೆಮ್ಮೆಯ ಪುಸ್ತಕ ಮಿತ್ರರು: ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್


 ಪ್ರವೀಣ್ ಶೆಟ್ಟಿ ,ಬೆಂಗಳೂರು: ನಮ್ಮ ಹೆಮ್ಮೆಯ ಪುಸ್ತಕ ಮಿತ್ರರು

: ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ : 9480516684

Monday, 3 November 2025

224 ಶಾಂಭವಿ ಧರಣೀಶ್ ನಮ್ಮ‌ಪ್ರೀತಿಯ ಪುಸ್ತಕ‌ ಮಿತ್ರರು : ಕರಾವಳಿಯ ಸಾವಿರದೊಂದು ದೈವಗಳು- ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684


 ಈ ಯಾಂತ್ರಿಕ ಜಗತ್ತಿನಲ್ಲಿ ಜನರು ಗುರಿಯಿಲ್ಲದೆ ಸಾಗುತ್ತಿರುವ ಸಮಯದಲ್ಲಿ, ಡಾ. ಲಕ್ಷ್ಮಿ ಅವರ ಕರಾವಳಿಯ ಸಾವಿರದೊಂದು ದೈವಗಳು ಕೃತಿ ಓದುಗರನ್ನು ಆಧ್ಯಾತ್ಮಿಕ ಚಿಂತನೆಗಳ ದಾರಿಯಲ್ಲಿ ಸಾಗಿಸುವ ದೀಪದಂತಿದೆ.
ಕರಾವಳಿಯ ನಂಬಿಕೆಗಳು, ದೈವಸಂಸ್ಕೃತಿ ಮತ್ತು ಮಾನವ ಬದುಕಿನ ಅಂತರಂಗವನ್ನು ಅವರು ಅದ್ಭುತವಾಗಿ ಹೆಣೆದಿದ್ದಾರೆ. ಧರ್ಮ ಮತ್ತು ಜೀವನದ ನಿಜವಾದ ಅರ್ಥವನ್ನು ಹುಡುಕುವ ಈ ಕೃತಿ, ಓದುಗರ ಮನದಲ್ಲಿ ಶಾಂತಿ, ಭಕ್ತಿ ಮತ್ತು ಚಿಂತನೆಗೆ ಸ್ಪೂರ್ತಿ ನೀಡುತ್ತದೆ.

ಲೇಖಕಿ ದೇವರು ಎಷ್ಟು ನಿಜವೋ ಅಷ್ಟೇ ನಿಜ ದೈವಗಳು ಎಂಬ ಸತ್ಯವನ್ನು ನಾಜೂಕಾಗಿ ಅನಾವರಣಗೊಳಿಸಿದ್ದಾರೆ. ಪ್ರತಿಯೊಬ್ಬ ಮಾನವನ ಬದುಕು ಅರ್ಥಪೂರ್ಣವಾಗಬೇಕೆಂಬ ಸಂದೇಶವನ್ನು ಈ ಕೃತಿ ನಿಜವಾದ ಭಾವದೊಂದಿಗೆ ಸಾರುತ್ತದೆ. ಮೌಲ್ಯಗಳು ಕ್ಷೀಣಿಸುತ್ತಿರುವ ಇಂದಿನ ಯುಗದಲ್ಲಿ, ಕರಾವಳಿಯ ಸಾವಿರದೊಂದು ದೈವಗಳು ಓದುಗರಿಗೆ ಆತ್ಮಶಾಂತಿ ಮತ್ತು ಧಾರ್ಮಿಕ ಪ್ರಜ್ಞೆಯ ಹೊಸ ಬೆಳಕನ್ನು ತರುತ್ತದೆ.- ಶಾಂಭವಿ ಧರಣೀಶ್ 

Sunday, 2 November 2025

223 ನಮ್ಮ‌ಹೆಮ್ಮೆಯ ಪುಸ್ತಕ‌ ಮಿತ್ರರು


 #ನಮ್ಮ_ಹೆಮ್ಮೆಯ_ಓದುಗ_ಮಿತ್ರರು 

#ಕರಾವಳಿಯ_ಸಾವಿರದೊಂದು_ದೈವಗಳು 


ಕಳೆದ ವರ್ಷ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕ ಪ್ರಕಟಣೆಗೆ ಮೊದಲೇ ಮುಂಗಡ ಪಾವತಿಸಿ ಕಾದಿರಿಸಿ ಬೆಂಬಲಿಸಿದವರು ಯುವ ಬರಹಗಾರರಾದ  ದಯಾನಂದ ರೈ ಕಳ್ವಾಜೆಯವರು.


ಪುಸ್ತಕದ ಕುರಿತಾದ ಅವರ ಮೆಚ್ಚುಗೆಯ ಮಾತುಗಳು ಇಲ್ಲಿವೆ


"ಮೇಮ್ ನಮಸ್ಕಾರ...

ನಾನು ದಯಾನಂದ ರೈ ಕಳ್ವಾಜೆ.ನಿಮ್ಮ ಪುಸ್ತಕ ನನ್ನ ಕೈಸೇರಿ ವರುಷ ಸಂದರೂ, ಅಭಿಪ್ರಾಯ ಹೇಳಲು ಅನುವಾಗಿರಲಿಲ್ಲ. ದೈವಾರಾಧಾನೆಯ ನೆಲೆ ಮತ್ತು ಸಂಸ್ಕೃತಿಯ ಕೆಲವು ಮಜಲುಗಳನ್ನು ತಿಳಿಯಪಡಿಸುವ ಪ್ರಯತ್ನ ಶ್ಲಾಘನೀಯ. ಈ ಸಂಗ್ರಹಯೋಗ್ಯ ಹೊತ್ತಗೆಯ ಹಿಂದೆ ಅದೆಷ್ಟು ಶ್ರಮವಿದೆಯೋ ನಾನರಿಯೆ. ಆದರೆ ದೈವಿಕ ಸಂಪ್ರದಾಯಗಳನ್ನು ನಂಬುವವರು, ಮತ್ತು ಅಧ್ಯಯನ ನಡೆಸುವವರು ತಮ್ಮ ತಮ್ಮ ಮನೆಯಲ್ಲಿ ಸಂಗ್ರಹಿಸಿಡಲೇ ಬೇಕಾದ ಹೊತ್ತಗೆ ಇದು. ಮೇಲಾಗಿ ಸಾವಿರಕ್ಕಿಂತಲೂ ಮಿಗಿಲಾದ ವಿಭಿನ್ನ ಸಂಸ್ಕಾರ ವಿಶೇಷಗಳನ್ನು ಲೇಖನಿಯಲ್ಲಿಳಿಸಿ ಬಲ್ಲವರಲ್ಲಿ ಕೇಳಿತಿಳಿದ ನಿಮ್ಮ ಬಗೆ ಬಹುಮಾನ್ಯ. ಅಭಿನಂದನೆಗಳು ಮೇಮ್ ನಮಸ್ಕಾರ 🙏"

222 ನಮ್ಮ‌ಪ್ರೀತಿಯ ಓದುಗ ಮಿತ್ರರು


 ಭರವಸೆಯ ಯುವ ಸಂಶೋಧಕ ಸುರೇಶ್ ಮಂಗಲ್ಪಾಡಿಯವರ ಕೈಯಲ್ಲಿ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್  


ಸುಮಾರು 18 ವರ್ಷಗಳ ಮೊದಲು ನಾನು ಇಂಚಲಂಗೋಡಿನಲ್ಲಿ ನಡೆಯುವ ಸರ್ಪಕೋಲ/ ಬೆರ್ಮೆರ ನಲಿಕೆ ರೆಕಾರ್ಡ್ ಮಾಡಲು ಹೋದಾಗ ಮಾಹಿತಿ ನೀಡಿ ಪೂರ್ಣ ಬೆಂಬಲ ನೀಡಿದವರು ರತ್ನಾಕರ,ಸುರೇಶ ಮತ್ತು ಸತೀಶ ಎಂಬ ಮಂಗಲ್ಪಾಡಿಯ ಸಹೋದರರು.

ಇವರಲ್ಲಿ ವೃತ್ತಿಯಲ್ಲಿ ಶಿಕ್ಷಕರಾಗಿರುವ ಅರ್ಥ ಶಾಸ್ತ್ರ ಸ್ನಾತಕೋತ್ತರ ಪದವೀಧರರಾದ ಸುರೇಶ್ ಅವರು ಇತ್ತೀಚೆಗೆ ಬಾಕುಡ ಸಮುದಾಯದವರ ಸರ್ಪಕೋಲದ ಬಗ್ಗೆ ಅಧ್ಯಯನ ಮಾಡಿ ಹೊಸ ಹೊಳಹುಗಳ ಸಂಶೋಧನಾ ಗ್ರಂಥವನ್ನು ಪ್ರಕಟಿಸಿದ್ದಾರೆ.ಪ್ರಸ್ತುತ ನಮ್ಮ‌ಕರಾವಳಿಯ ಸಾವಿರದೊಂದು ದೈವಗಳು ಕೃತಿಯನ್ನು ಮಲೆಯಾಳ ಭಾಷೆಗೆ ಅನುವಾದಿಸಲು ಮುಂದಾಗಿದ್ದಾರೆ 

ಇವರಿಂದ ಇನ್ನಷ್ಟು ಅಧ್ಯಯನ ನಡೆಯಲಿ ಸಂಶೋಧನಾ ಕೃತಿಗಳು ಪ್ರಕಟವಾಗಲಿ ಎಂಬ ಹಾರೈಕೆ ನನ್ನದು