Friday 15 November 2019

ಸಾವಿರದೊಂದು ಗುರಿಯೆಡೆಗೆ : ತುಳುನಾಡ ದೈವಗಳು 447 ಕುಟ್ಟಿಚ್ಚಾತನ್ - ಡಾ.ಲಕ್ಷ್ಮೀ ಜಿ ಪ್ರಸಾದ

ಕುಟ್ಟಿಚ್ಚಾತನ್ ಬಹಳ ಪ್ರಸಿದ್ಧ ದೈವ,ದನ ಕರುಗಳು,ಚಿನ್ನಾಭರಣಗಳು ಕಳೆದು ಹೋದರೆ ಕುಟ್ಟಿಚ್ಚಾತನಿಗೆ ಹರಿಕೆ ಹಾಕಿದರೆ ಸಿಗುತ್ತವೆ ಎಂದು ಜನರು ನಂಬಿ ಆರಾಧಿಸುತ್ತಾರೆ.
ಕುಟ್ಟಿಚ್ಚಾತನ್ ದೈವಿಕ ಹುಟ್ಡನ್ನು ಪಡೆದ ಶಿವ ಪಾರ್ವತಿಯರ  ಪುತ್ರ.
ಒಮ್ಮೆ ಶಿವ ಪಾರ್ವತಿಯರು ನಿರ್ಜನವಾದ ಬೆಟ್ಟದಲ್ಲಿ ವಲ್ಲುವರ್ ಜನಾಂಗದವರ ಜೊತೆಯಲ್ಲಿ ವಿಹರಿಸುತ್ತಾ ಇದ್ದರು. ಶಿವ ಪಾರ್ವತಿ ದೇವಿಯತು ಅಲ್ಲಿ ವಲ್ಲುವರ್ ಸಮುದಾಯದ  ಪುರುಷ ಮತ್ತು ಮಹಿಳೆಯಂತೆ ಇದ್ದರು.ಹಾಗಾಗಿ ಪಾರ್ವತಿಯನ್ನು ವಲ್ಲುವತಿ ಎಂದಿದ್ದಾರೆ. ವಲ್ಲುವರ್ ವಲ್ಲುವತಿ ರೂಪದ ಶಿವ ಪಾರ್ವತಿಯರಿಗೆ ಕರುವಲ್ ಮತ್ತು ಕುಟ್ಟಿಚ್ಚಾತನ್ ಎಂಬ ಇಬ್ಬರು ಮಕ್ಕಳು ಹುಟ್ಟುತ್ತಾರೆ‌
ಶಿವ ಅಂಶ ರೂಪದಲ್ಲಿ ಜನಿಸಿದ ಕುಟ್ಟಿಚ್ಚಾತನ್ ಹ ಹುಟ್ಟುವಾಗಲೇ ವಿಲಕ್ಷಣ ಸ್ವರೂಪವನ್ನು ಹೊಂದಿದ್ದನು.ಅತನು ವಿಶಿಷ್ಠವಾದ ಹೂವನ್ನು ಹಣೆಯಲ್ಲಿ ಧರಿಸಿದ್ದನು‌.ಮೂರನೆಯ ಕಣ್ಣನ್ನು ಕೂಡ ಹಣೆಯಲ್ಲಿ ಹೊಂದಿದ್ದನು.ಕಪ್ಪು ಮೈ ಬಣ್ಣದಲ್ಲಿ ಬಿಳಿ‌ಪಟ್ಟೆಯನ್ನು ಹೊಂದಿ ವಿಶಿಷ್ಠವಾದ ಕಳೆಯನ್ನು ಪಡೆದಿದ್ದನು.
ಅಲ್ಲಿಯೇ ಸಮೀಪದಲ್ಲಿ ಶಿವ ಭಕ್ತನಾದ  ಕಲಕಾಡು ನಂಬೂದಿರಿ ಜೀವಿಸುತ್ತಿದ್ದನು.ಶಿವನ ಅನನ್ಯ ಭಕ್ತನಾದ ಅವನಿಗೆ ಮಕ್ಕಳಿರಲಿಲ್ಲ. ಅವನು ಮತ್ತು ಅತನ ಮಡದಿ ಶಿವನನ್ನು ಅನನ್ಯ ಭಕ್ತಿಯಿಂದ ಅರಾಧಿಸಿದರು.ಅವರ ಮೇಲೆ ಅನುಗ್ರಹ ಬೀರಿದ ವಲ್ಲುವರ್,ವಲ್ಲುವತಿ ರೂಪದ ಶಿವ ಪಾರ್ವತಿಯರು ತಮ್ಮ ಎರಡನೇ ಮಗನನ್ನು ಈ ದಂಪತಿಗಳಿಗೆ ನೀಡಿದರು.
ಈ ಸಿವ ಪಾರ್ವತಿಯರ ಮಗನಾದ ಕುಟ್ಟಿಚ್ಚಾತನ್ ಬಹಳ ಬೇಗ ಎಲ್ಲ ವಿದ್ಯೆಗಳನ್ನು ಕಲಿತನು.ಜಾಣನಾತ ಈತ ಸಮಾಜ ವಿರೋಧಿ ನಡವಳಿಕೆಯನ್ನು ತೋರುತ್ತಿದ್ದನು. ಸಾತ್ವಿಕ ಬ್ರಾಹ್ಮಣ ನಂಬೂದಿರಿ ದಂಪತಿಗಳ ಮಗನಾಗ ಈಗ ಮಾಂಸಾಹಾರವನ್ನು ಸೇವಿಸುತ್ತಿದ್ದನು.ಮದ್ಯವನ್ನು ಕುಡಿಯುತ್ತಿದ್ದನು.ಜನರಿಗೆ ಉಪಟಳ ನೀಡುತ್ತಿದ್ದನು‌.
ಒಮ್ಮೆ ಹಸುವನ್ನು ಕೊಂದು ಅದರ ರಕ್ತವನ್ನು ಸೇವಿಸಿದನು.
ಕೊನೆಗೆ ಇವನ ಉಪಟಳ ತಾಳಲಾರದೆ ಇವನನ್ನು ಕೊಲ್ಲುತ್ತಾರೆ‌.
ಆದರೆ ಮರಣಾನಂತರ ಕೂಡ ‌ಮನೆಯಲ್ಲಿ ಅವನ ಧ್ವನಿ ಕೇಳಿಸುತ್ತಾ ಇತ್ತು.ಅದಕ್ಕಾಗಿ ಒಂದು ಹೋಮವನ್ನು ಮಾಡಿದರು.ಆ ಹೋಮದಿಂದ ಕುಟ್ಟಿಚ್ಚಾತನ್ ಎದ್ದು ಬರುತ್ತಾನೆ‌.ಚಲ ಪೆರುಮಲಯನ್ ನಲ್ಲಿ ಗುಡಿ ಕಟ್ಟುತ್ತಾರೆ.ನಂತರ ಅವನ ದೈವಿಕ ಶಕ್ತಿಯ ಅರಿವಾಗಿ ಆತನಿಗೆ ತೆಯ್ಯಂ ಕಟ್ಟಿ ಆರಾಧನೆ ಮಾಡುತ್ತಾರೆ.- ಡಾ.ಲಕ್ಷ್ಮೀ ಜಿ ಪ್ರಸಾದ

No comments:

Post a Comment