Monday 18 November 2019

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು: 449 ಓಣತಾರ್ ದೈವ

ಓಣಂ ಸಮಯದಲ್ಲಿ ಆರಾಧನೆ ಗೊಳ್ಳುವ ದೈವತವಿದು‌.ಓಣಂ ಸಮಯದಲ್ಲಿ ಆರಾಧನೆ ಆಗುವ ಕಾರಣ ಓಣತಾರ್ ಎಂಬ ಹೆಸರು ಬಂದಿರಬಹುದು.ಓಣಂ ಸಮಯದಲ್ಲಿ ಹತ್ತು ಹನ್ನೆರಡು ವರ್ಷದ ಹುಡುಗನಿಗೆ ಓಣತಾರ್ ತೆಯ್ಯಂ ನ ವೇಷಭೂಷಣ ಹಾಕುತ್ತಾರೆ‌.ಓಣತಾರ್ ಮನೆ ಮನೆಗೆ ಬಂದು ಮಹಾಬಲಿ ಕುರಿತಾದ ಹಾಡನ್ನು ಹಾಡುತ್ತಾ ಕುಣಿಯುತ್ತಾರೆ.ಈತನ ಜೊತೆಯಲ್ಲಿ ಚೆಂಡೆ ಬಾರಿಸಿಕೊಂಡು ಆತನ ಹಿರಿಯ ಬರುತ್ತಾನೆ.
ಓಣಂ ನಲ್ಲಿ ಮಹಾಬಲಿ ಯ ಆರಾಧನೆ ಇರುತ್ತದೆ.ಹಾಗೆಯೇ ಓಣತಾರ್ ದೈವ ಕೂಡ ಮಹಾಬಲಿ ಎಂದು ನಂಬಿ ಆರಾಧನೆ ಮಾಡುತ್ತಾರೆ‌.ಕಾಸರಗೋಡು ಸುತ್ತಮುತ್ತಲಿನ ಪರಿಸರದಲ್ಲಿ ಓಣತಾರ್ ಮನೆ ಮನೆಗೆ ಬರುತ್ತಾನೆ‌.ಆಗ ಅವರಿಗೆ ಅಕ್ಕಿ ಬೇಳೆ ಮೊದಲಾದವುಗಳನ್ನು ಮನೆಯವರು ಕೊಡುತ್ತಾರೆ.ರೋಗ ರುಜಿನಗಳನ್ನು ಓಣತಾರ್ ದೈವ  ತೆಗೆದುಕೊಂಡು ಹೋಗುತ್ತದೆ ಎಂದು ಜನರು ನಂಬಿ ಆರಾಧನೆ ಮಾಡುತ್ತಾರೆ.
ಆಧಾರ : http://mywordsnthoughts.com/myworld/all-about-kerala/do-you-know-about-onathar-and-kutti-theyyam/

No comments:

Post a Comment