Monday 18 November 2019

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು: 456-457 ಅಂಗಕ್ಕಾರನ್ ಮತ್ತು ಮರುಟೋಳ ದೈವಗಳು

ಅಂಗಕ್ಕಾರನ್ ಮತ್ತು ಮರುಟೋಳ( Marutola) ತೆಯ್ಯಂ.
ಕಾಸರಗೋಡಿನ ಸುತ್ತಲಿನ ಪ್ರದೇಶಗಳಲ್ಲಿ ಅಂಗಕ್ಕಾರನ್ ಮತ್ತು ಮರುಟೋಳ ಎಂಬ ಎರಡು ದೈವಗಳಿಗೆ ಆರಾಧನೆ ನಡೆಯುತ್ತದೆ.   ದ್ವಂದ್ವ ಯುದ್ಧ  ( ಕಳರಿ ಪಯಟ್ಟು) ಮಾಡಿದ ಇಬ್ಬರು ಶೂರರ ಕಥಾನಕ ಈ ದೈವಗಳ ಹಿನ್ನೆಲೆಯಲ್ಲಿ ಇದೆ‌.

ಅಂಗಕ್ಕಾರನ್ ಎಂಬುದು ಮಲೆಯಾಳ ಭಾಷೆಯ ಪದವಾಗಿದ್ದು ಇದಕ್ಕೆ ಅಂಗ ಸಾಧಕ,ಕುಸ್ತಿಪಟು,ವೀರ,ಹೋರಾಟಗಾರ  ಎಂಬರ್ಥ .
ಈ ಎರಡು ದೈವಗಳು ಕುಸ್ತಿಪಟುಗಳು, ವೀರರು ಆಗಿದ್ದರು‌.

ಅಂಗಕ್ಕಾರನ್ ತನ್ನ ಶತ್ರು ,ಪ್ರತಿಸ್ಪರ್ಧಿ ಯಾಗಿರುವ ಮರುಟೋಳನ( ಆತನ ಮೂಲ ಹೆಸರು ಕೇಳು) ಜೊತೆಯಲ್ಲಿ ದ್ವಂದ್ವ ಯುದ್ಧ  ಮಾಡಿ ಸೋಲಿಸುತ್ತಾನೆ.ಆಗ ಅವನ ಶತ್ರು ಮರುಟೋಳ ಓಡಿ ಹೋಗಿ ಕಣ್ಮರೆಯಾಗುತ್ತಾನೆ‌‌
ತುಸು ಸಮಯದ ನಂತರ ಅಂಗಕ್ಕಾರನ್ ನ ಕಣ್ಣಿಗೆ ಬೀಳುತ್ತಾನೆ ‌.ಆಗ ನಡೆದ ದ್ವಂದ್ವ ಯುದ್ಧದಲ್ಲಿ ಅಂಗಕ್ಕಾರನ್  ಮರುಟೋಳ ನನ್ನು ಕೊಲ್ಲುತ್ತಾನೆ.
ನಂತರ ಇವರಿಬ್ಬರೂ ದೈವತ್ವ ಪಡೆದು ತೆಯ್ಯಂ ಗಳಾಗಿ ಕೇರಳದ ಉತ್ತರ ಭಾಗವಾದ ಕಾಸರಗೋಡಿನ ಸುತ್ತುಮುತ್ತಲಿನ ಪ್ರದೇಶದಲ್ಲಿ ಆರಾಧನೆ ಪಡೆಯುತ್ತಾರೆ.
ಅಂಗಕ್ಕಾರನ್ ದೈವದ ಕೋಲ( ತೆಯ್ಯಂ ಕಟ್ಟ್) ಆಗುವಾಗ ಆತ ಮರುಟೋಳನನ್ನು ಸೋಲಿಸಿ ಕೊಂದದರ ಪ್ರತೀಕವಾಗಿ ಅಂಗಕ್ಕಾರನ್ ದೈವ ಮರುಟೋಳ ದೈವದ ಕತ್ತಿಯನ್ನು ಸೆಳೆದು ತೆಗೆದುಕೊಳ್ಳುತ್ತಾನೆ‌. - ಡಾ.ಲಕ್ಷ್ಮೀ ಜಿ ಪ್ರಸಾದ
ಆಧಾರ Theyyam calendar

No comments:

Post a Comment