Tuesday 19 November 2019

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು: 458-462 ಅಗ್ನಿ ಭೈರವನ್, ಆದಿ ಬೈರವನ್, ಭೈರವನ್, ಶಕ್ತಿ ಭೈರವನ್, ಐಓಗಿ ಭೈರವನ್

ಭೈರವನ್, ಅಗ್ನಿ ಭೈರವನ್,ಯೋಗಿ ಭೈರವನ್, ಶಕ್ತಿ ಭೈರವನ್ ಮತ್ತು ಆದಿ ಭೈರವನ್ ತೆಯ್ಯಂ ಗಳು
ಭೈರವನ್ ತೆಯ್ಯಂ ಹೆಸರು ಕೇಳಿದಾಗ ನಾನು ತುಳುವರು ಆರಾಧಿಸುವ ಕಾಳಭೈರವ ದೈವತವಿರಬಹುದೆಂದು ನಾನು ಭಾವಿಸಿದ್ದೆ‌.ಆದರೆ ಭೈರವನ್ ತೆಯ್ಯಂ ಮತ್ತು ಕಾಳ ಭೈರವ ಬೇರೆ ಬೇರೆ ದೈವಗಳು ‌.
ಬೈರವನ್ ಪಣನ್ಮಾರ್ ಸಮುದಾಯದವರ ಆರಾಧ್ಯ ದೈವತ‌.ಈ ದೈವಕ್ಕೆ ವಿಶಿಷ್ಠವಾದ ಹಿನ್ನೆಲೆ ಇದೆ‌.
ಚೆರುತಂಡನ್ ಮಠ/ ವಿಹಾರಕ್ಕೆ ಸಂಬಂಧಿಸಿದ ಮಹಿಳೆಗೆ ದೀರ್ಘಕಾಲ ಸಂತತಿಯಾಗಿರಲಿಲ್ಲ.ಅವಳು ಶಿವನ ಅನನ್ಯ ಭಕ್ತೆಯಾಗಿದ್ದು,ದಿನ ನಿತ್ಯ ಶಿವನನ್ನು ಧ್ಯಾನಿಸುತ್ತಿದ್ದಳು.ನಲುವತ್ತೊಂದು ದಿನಗಳ ಕಾಲ ಉಪವಾಸವಿದ್ದು ಅರ್ಚನೆ ಮಾಡುತ್ತಿದ್ದಳು.ಆ ಸಮಯದಲ್ಲಿ ಅವಳು ಒಂದು ಸಾವಿರ ಯೋಗಿಗಳಿಗೆ ಊಟ ಉಪಾಹಾರದ ವ್ಯವಸ್ಥೆ ಮಾಡುತ್ತಿದ್ದಳು.ಅವಳ ಭಕ್ತಿಗೆ ಒಲಿದ ಮಹೇಶ್ವರನು ಅನುಗ್ರಹ ಮಾಡುತ್ತಾನೆ‌.ಅವಳಿಗೆ ಓರ್ವ ಮಗ ಹುಟ್ಟುತ್ತಾನೆ‌‌ ಬಹಳ ಸುಸಂಸ್ಕೃತನೂ ಬುದ್ಧಿವಂತನೂ ಆದ ಆ ಮಗು ಚೀರಳನ್ ಏಳನೆಯ ವಯಸ್ಸಿಗೆ ವಿದ್ಯೆಯನ್ನು ಕಲಿತು ಮುಂದಿನ ಶಿಕ್ಷಣಕ್ಕೆ ಅಣಿಯಾಗುತ್ತಾನೆ‌.ಉನ್ನತ ಶಿಕ್ಷಣಕ್ಕೆ ಕಳುಹಿಸುವ ಮೊದಲು ಚೆರುತಂಡನ್ ಯೋಗಿಗಳನ್ನು ಆರಾಧಿಸಲು ನಿರ್ಧರಿಸಿ ಮಠಕ್ಕೆ ಯೋಗಿಗಳನ್ನು ಕರೆಯಲು ಹೋಗುತ್ತಾನೆ‌.ಅಲ್ಲಿ ನೋಡಬಾರದ್ದನ್ನು ನೋಡಿ ಅವರಿಗೆ ಶಪಿಸುತ್ತಾನೆ‌
ಆಗ ಯೋಗಿಗಳು ಚೀರಳನ್ ನ ರಕ್ತ ಮಾಂಸಗಳ ಭೋಜನವನ್ನು ಕೇಳುತ್ತಾರೆ ‌.ಬೇರೆ ದಾರಿ ಇಲ್ಲದೆ ಚೀರಳನ್ ನನ್ನು ಕೊಂದು ಅವನ ಮೂಳೆ ಮಾಂಸಗಳಿಂದ ಆಹಾರ ತಯಾರಿಸಿ ಚೆರುತಂಡನ್ ಯೋಗಿಗಳಿಗೆ ಬಡಿಸುತ್ತಾನೆ‌. ಆಗ ಚೀರಳನ್ ನ ಮೂಳೆಗಳು ಅವರ ಊಟದ ಎಲೆಯಲ್ಲಿ ಅಲುಗಾಡುತ್ತವೆ.ಅದನ್ನು ನೋಡಿ ಯೋಗಿಗಳಿಗೆ ಭಯವಾಗಿ ಅವನನ್ನು ನಿಯಂತ್ರಿಸುವ ಸಲುವಾಗಿ ಒಂದು ಹೋಮ ಮಾಡುತ್ತಾರೆ.ಆಗ ಚೀರಳನ್ ಭೈರವನ್ ದೈವವಾಗಿ ಹೋಮದ ಬೆಂಕಿಯಲ್ಲಿ ಕಾಣಿಸುತ್ತಾನೆ‌.ಅವನ ಜೊತೆಯಲ್ಲಿ ಅಗ್ನಿ ಭೈರವನ್, ಯೋಗಿ ಭೈರವನ್, ಆದಿ ಬೈರವನ್ ,ಶಕ್ತಿ ಭೈರವನ್ ತೆಯ್ಯಂ ಗಳು ಉದಿಸುತ್ತವೆ.ಆಗ ಇವರ ಶಕ್ತಿಯನ್ನು ಮನಗಂಡ ಯೋಗಿಗಳು ಇವರಿಗೆ ತೆಯ್ಯಂ ಕಟ್ಟಿಸಿ ಆರಾಧನೆ ಮಾಡುತ್ತಾರೆ. : ಡಾ.ಲಕ್ಷ್ಮೀ ಜಿ ಪ್ರಸಾದ
ಆಧಾರ: Theyyam calendar

No comments:

Post a Comment