Wednesday 4 September 2019

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು 441 ಸಾಹೇಬನ ಜಕ್ಕಿಣಿ/ ಗಣ ದೈವ© ಡಾ.ಲಕ್ಷ್ಮೀ ಜಿ ಪ್ರಸಾದ


             Shri Brahma Baidarkala Goli Garadi        Kshetra, Sasthana, Udupi (ಚಿತ್ರ ಅಂತರ್ಜಾಲದಿಂದ)
ಸಾವಿರದೊಂದು ಗುರಿಯೆಡೆಗೆ : ತುಳುನಾಡ ದೈವಗಳ ಸಾಹೇಬನ ಜಕ್ಕಿಣಿ ದೈವ © ಡಾ.ಲಕ್ಷ್ಮೀ ಜಿ ಪ್ರಸಾದ
 ಸಾಸ್ತಾನ ಗೋಳಿ ಗರಡಿಯಲ್ಲಿ ಸಾಹೇಬನ ಜಕ್ಕಿಣಿ ಎಂಬ ಒಂದು ದೈವಕ್ಕೆ ಆರಾಧನೆ ಇದೆ. ಅಲ್ಲಿ ಇತರ ದೈವಗಳ ನಡುವೆ ಸುಮಾರು ಎರಡು ಎರಡೂವರೆ ಅಡಿ ಎತ್ತರದ ಸಾಹೇಬನ ಜಕಣಿ ದೈವದ ಮೂರ್ತಿ/ ಪಾಪೆ ಕೂಡ ಇದೆ .ಈ ಮೂರ್ತಿಯ ವೇಷ ಭೂಷಣ ಮುಸ್ಲಿಮರ ವೇಷಭೂಷಣ ಆಗಿದೆ.ಈ ದೈವ ಮುಸ್ಲಿಂ ಮೂಲದ ದೈವತ.
ತುಳುನಾಡಿನಲ್ಲಿ ಯಾರು ಯಾಕೆ ಹೇಗೆ ಯಾವಾಗ ದೈವತ್ವ ಪಡೆಯುತ್ತಾರೆ ಎಂಬುದಕ್ಕೆ ಒಂದು ಸಿದ್ಧ ಸೂತ್ರವಿಲ್ಲ.ಆದರೂ ಅನೇಕರು  ಪ್ರಧಾನ ದೈವಗಳ ಆಗ್ರಹ ಅಥವಾ ಅನುಗ್ರಹಕ್ಕೆ ಈಡಾಗಿ ದೈವತ್ವ ಪಡೆದ ಬಗ್ಗೆ ಮಾಹಿತಿ ಸಿಗುತ್ತದೆ ‌. ತನ್ನ ಭಕ್ತೆ ಬ್ರಾಹ್ಮಣತಿಯ ಮಾನ ರಕ್ಷಣೆಗಾಗಿ ಮಾಯ ಮಾಡುವ ಧೂಮಾವತಿ ದೈವ ಆಕೆಯನ್ನು ತನ್ನ ಸೇರಿಗೆಗೆ ಸೇರಿಸಿ ದೈವತ್ವ ನೀಡಿ ಆರಾಧನೆ ಹೊಂದುವಂತೆ ಮಾಡುತ್ತದೆ.ಅದೇ ಸಂದರ್ಭದಲ್ಲಿ ದೈವದ ಕೋಪಕ್ಕೆ ತುತ್ತಾತ ಅರಬ್ಬೀ ವ್ಯಾಪಾರಿಯನ್ನು ಕೂಡ ದೈವ ಮಾಯ ಮಾಡಿ ಸೇರಿಗೆಗೆ ಸೇರಿಸುತ್ತದೆ‌.ಆತ ಅರಬ್ಬೀ ಭೂತವಾಗಿ ಆರಾಧನೆ ಪಡೆಯುತ್ತಾನೆ.ಅದೇ ರೀತಿಯಲ್ಲಿ ಪಂಜುರ್ಲಿ ದೈವದ ಆಗ್ರಹಕ್ಕೆ ತುತ್ತಾದ ಐದು ಚೀನೀ ವ್ಯಕ್ತಿಗಳು ಮಾಯವಾಗಿ ಚೀನಿ ದೈವಗಳಾಗಿದ್ದಾರೆ‌
ಗುಂಡ್ಮಿ ಬ್ರಹ್ಮಾವರ ಗರೋಡಿಯಲ್ಲಿ ಆರಾಧನೆ ಪಡೆಯುವ ಸಾಹೇಬನ ಜಕ್ಕಿಣಿ ದೈವ ಕೂಡ ಪಂಜುರ್ಲಿ ದೈವದ ಕೋಪಕ್ಕೆ ತುತ್ತಾಗಿ ದುರಂತವನ್ನಪ್ಪಿದ ಮುಸ್ಲಿಂ ಮೂಲದ ವ್ಯಕ್ತಿ. ದುರಂತ ಮತ್ತು ದೈವತ್ವ ತುಳು ಸಂಸ್ಕೃತಿಯ ಅವಿಭಾಜ್ಯ ಅಂಶ.ಅಂತೆಯೇ ದುರಂತವನ್ನಪ್ಪಿದ ಆ ಮುಸ್ಲಿಂ ಸಮುದಾಯದ ವ್ಯಕ್ತಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾನೆ.

ಈ ಬಗ್ಗೆ ಶ್ರೀವತ್ಸ ಪ್ರದ್ಯುಮ್ನ ಅವರಯ ಮಾಹಿತಿ ನೀಡಿದ್ದಾರೆ.
ಗರಡಿಯಲ್ಲಿ ಒಂದು ದಿನ ಪಂಜುರ್ಲಿ ದೈವದ ಕೋಲ ಆಗುತ್ತಾ ಇತ್ತು.ಆಗ ಪಂಜುರ್ಲಿ ದೈವದ ಶಕ್ತಿಯನ್ನು ಪರೀಕ್ಷಿಸುವ ಸಲುವಾಗಿ ನಾಲ್ಕು ಜನ ಸಾಹೇಬರು ( ಮುಸ್ಲಿಮರು) ಅಲ್ಲಿಗೆ ಬರುತ್ತಾರೆ.ಅವರಲ್ಲಿ ಒಬ್ಬಾತ ಸತ್ತವನಂತೆ  ನಟಿಸುತ್ತಾ ಮಲಗಿದ್ದು ,ಅವನ ತಂದೆ ಇತರ ಇಬ್ಬರು ಆತನನ್ನು ಹೊತ್ತು ತರುತ್ತಾರೆ. ಅವನ ತಂದೆ ನನ್ನ ಮಗ ಸಾಯುತ್ತಿದ್ದಾನೆ  .ಬದುಕಿಸು ಎಂದು ಪಂಜುರ್ಲಿ ದೈವದಲ್ಲಿ ಪ್ರಾರ್ಥನೆ ಮಾಡುತ್ತಾನೆ.ಆಗ ಪಂಜುರ್ಲಿ ದೈವ ಸಿಂಗಾರವನ್ನು ಕೊಟ್ಟು ನೀರಿನಲ್ಲಿ ಅದ್ದಿ ಚಿಮುಕಿಸುವಂತೆ ಹೇಳುತ್ತದೆ. ಹಾಗೆ ಮಾಡಿ ಆತನನ್ನು ಎಬ್ಬಿಸಲು ಹೋದಾಗ ಆತ ನಿಜಕ್ಕೂ ಸತ್ತಿರುತ್ತಾನೆ.
ಪಂಜುರ್ಲಿ ದೈವದ ಶಕ್ತಿ ಪರೀಕ್ಷೆ ಮಾಡುವ ಸಲುವಾಗಿ ದೈವದ ಮುಂದೆ ಸುಳ್ಳಾಡಿ ನಾಟಕ ಮಾಡಿದಾಗ ದೈವ ಕೋಪಗೊಂಡು ಆತ ನಿಜಕ್ಕೂ ಸಾಯುವಂತೆ ಮಾಡುತ್ತದೆ. ಮುಂದೆ ಆತ ಅಲ್ಲಿ ಪಂಜುರ್ಲಿ ದೈವದ ಸೇರಿಗೆಗೆ ಸಂದು ಸಾಹೇಬನ ಜಕ್ಕಿಣಿ ಎಂಬ ಹೆಸರಿನಲ್ಲಿ ಆರಾಧನೆ ಪಡೆಯುತ್ತಾನೆ.
ಈ ಬಗ್ಗೆ ಮಾಹಿತಿ ನೀಡಿದ ಶ್ರೀ ವತ್ಸ ಪ್ರದ್ಯುಮ್ನ ಅವರಿಗೆ ಕೃತಜ್ಞತೆಗಳು
© ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕರು, ಸರ್ಕಾರಿ ಪದವಿ ಪೂರ್ವ ಕಾಲೇಜು, ನೆಲಮಂಗಲ

1 comment:

  1. The casino's welcome bonus is $20 free in no time at - DrmCD
    The casino's welcome 사천 출장마사지 bonus is a 세종특별자치 출장마사지 $20 free bonus. · 속초 출장마사지 Signup today · Log into a new account · Enter a link and verify your account · Enter 문경 출장샵 the bonus 서귀포 출장샵

    ReplyDelete