Saturday, 17 January 2026

Daiva book ಕರಾವಳಿಯ ಸಾವಿರದೊಂದು ದೈವಗಳು : ನಮ್ಮ‌ಹೆಮ್ಮೆಯ ಪುಸ್ತಕ‌ಮಿತ್ರರು‌- ಡಾ.ಗಣೇಶ್ ಕಂಬಾರು


 ಡಾ. ಲಕ್ಷ್ಮೀ ಜಿ. ಪ್ರಸಾದ್( mobile 9480516684) ಅವರ "ಕರಾವಳಿಯ ಸಾವಿರದ ಒಂದು ದೈವಗಳು“ ಎಂಬ ಕೃತಿ ಕೇವಲ ಒಂದು ಪುಸ್ತಕವಲ್ಲ; ಅದು ಕರಾವಳಿಯ ಜನಜೀವನ, ನಂಬಿಕೆ, ಸಂಸ್ಕೃತಿ ಮತ್ತು ಆತ್ಮೀಯತೆಯನ್ನು ಒಟ್ಟಾಗಿ ಒಳಗೊಂಡಿರುವ ಒಂದು ಸಂಸ್ಕೃತಿಯ ದಸ್ತಾವೇಜು. ತುಳುನಾಡಿನ ದೈವ ಆರಾಧನೆ ಎಂಬ ವಿಶಿಷ್ಟ ಪರಂಪರೆಯನ್ನು ಲೇಖಕರು ಅತ್ಯಂತ ಸಂವೇದನಾಶೀಲತೆಯಿಂದ ಹಾಗೂ ಅಧ್ಯಯನಪೂರ್ಣವಾಗಿ ದಾಖಲಿಸಿದ್ದಾರೆ. ದೈವಗಳು ಇಲ್ಲಿ ದೇವರಾಗಿಯಷ್ಟೇ ಅಲ್ಲ, ಸಮಾಜದ ನೈತಿಕ ಸಂಹಿತೆ, ನ್ಯಾಯದ ಸಂಕೇತ ಮತ್ತು ಜನಸಾಮಾನ್ಯರ ಬದುಕಿನ ಅವಿಭಾಜ್ಯ ಅಂಗಗಳಾಗಿ ಮೂಡಿ ಬರುತ್ತವೆ.


ಈ ಕೃತಿಯ ವೈಶಿಷ್ಟ್ಯವೆಂದರೆ ಲೇಖಕರು ವಿಷಯವನ್ನು ಅಕಾಡೆಮಿಕ್ ದೃಷ್ಟಿಯಿಂದ ಮಾತ್ರವಲ್ಲದೆ, ಜನಪದದ ಉಸಿರಿನೊಂದಿಗೆ ನಿರೂಪಿಸಿರುವ ರೀತಿ. ಪ್ರತಿ ದೈವದ ಹಿನ್ನೆಲೆ, ಅದರ ಪೌರಾಣಿಕ ಕಥನ, ಆರಾಧನೆಯ ವಿಧಾನ ಮತ್ತು ಸಾಮಾಜಿಕ ಮಹತ್ವವನ್ನು ಸುಲಭವಾದ ಭಾಷೆಯಲ್ಲಿ ವಿವರಿಸಿದ್ದಾರೆ. ಇದರಿಂದ ಓದುಗನಿಗೆ ಕರಾವಳಿಯ ದೈವ ಸಂಸ್ಕೃತಿ ಕೇವಲ ತಿಳಿವಳಿಕೆಯ ವಿಷಯವಾಗದೆ, ಅನುಭವದ ರೂಪದಲ್ಲಿ ಮನಸ್ಸಿಗೆ ಹತ್ತಿರವಾಗುತ್ತದೆ. ಸಂಶೋಧನೆ ಮತ್ತು ಭಾವನಾತ್ಮಕತೆ ಎರಡೂ ಸಮನ್ವಯಗೊಂಡಿರುವುದು ಈ ಕೃತಿಯ ದೊಡ್ಡ ಸಾಧನೆ.


ಒಟ್ಟಾರೆ, "ಕರಾವಳಿಯ ಸಾವಿರದ ಒಂದು ದೈವಗಳು" ಕರಾವಳಿಯ ಸಂಸ್ಕೃತಿಯನ್ನು ಅರಿಯಬೇಕೆನ್ನುವ ಪ್ರತಿಯೊಬ್ಬ ಓದುಗನಿಗೂ ಅವಶ್ಯ ಓದುವ ಕೃತಿ. ನಮ್ಮ ಮಣ್ಣಿನ ನಂಬಿಕೆಗಳು, ಪರಂಪರೆಗಳು ಮತ್ತು ಜನಜೀವನವನ್ನು ಮುಂದಿನ ತಲೆಮಾರಿಗೆ ಕಾಪಾಡುವ ಉದ್ದೇಶದಿಂದ ಬರೆಯಲ್ಪಟ್ಟ ಈ ಕೃತಿ, ಕನ್ನಡ ಸಾಹಿತ್ಯಕ್ಕೆ ಒಂದು ಮಹತ್ವದ ಕೊಡುಗೆ ಎಂದು ನಿಸ್ಸಂಶಯವಾಗಿ ಹೇಳಬಹುದು.


ಡಾ. ಗಣೇಶ್ ಕಂಬಾರು

( ಟಿಪ್ಪಣಿ: ಪ್ರೆಸ್ಟೀಜ್ ಗ್ರೂಪ್ ನಲ್ಲಿ ಸೀನಿಯರ್ ಜೆನರಲ್ ಮ್ಯಾನೇಜರ್ ಆಗಿ ಬೆಂಗಳೂರಿನಲ್ಲಿ ನೆಲೆಸಿರುವ ಕಂಬಾರಿನ ಡಾ.ಗಣೇಶ್ ಕಂಬಾರು ಅವರು ನನ್ನ ಅಧ್ಯಯನ ಗ್ರಂಥದ ಬಗ್ಗೆ ನೀಡಿದ ಅಭಿಪ್ರಾಯ - ಡಾ.ಲಕ್ಷ್ಮೀ ಜಿ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು, ಮೊಬೈಲ್ 9480516684)

Friday, 16 January 2026

240 daiva book ನಮ್ಮ ಹೆಮ್ಮೆಯ ಪುಸ್ತಕ ಮಿತ್ರರು ಮೂಲತಃ ಕಂಬಾರಿನವರಾದ ಪ್ರೆಸ್ಟೀಜ್ ಗ್ರೂಪಿನಲ್ಲಿ ಮ್ಯಾನೇಜರ್ ಆಗಿ ಬೆಂಗಳೂರಿನಲ್ಲಿ ನೆಲೆಸಿರುವ ಡಾ.ಗಣೇಶ್ ಕಂಬಾರು ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ The Thousand and One Daivas of Karavali-Dr Lakshmi G Prasad,mob 9480516684


 ನಮ್ಮ ಹೆಮ್ಮೆಯ ಪುಸ್ತಕ ಮಿತ್ರರು

ಮೂಲತಃ ಕಂಬಾರಿನವರಾದ ಪ್ರೆಸ್ಟೀಜ್ ಗ್ರೂಪಿನಲ್ಲಿ ಮ್ಯಾನೇಜರ್ ಆಗಿ ಬೆಂಗಳೂರಿನಲ್ಲಿ ನೆಲೆಸಿರುವ ಡಾ.ಗಣೇಶ್ ಕಂಬಾರು

ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ 

The Thousand and One Daivas of Karavali-Dr Lakshmi G Prasad,mob 9480516684

Thursday, 4 December 2025

239 ನಮ್ಮ ಹೆಮ್ಮೆಯ ಓದುಗರು : ಕರಾವಳಿಯ ಸಾವಿರದೊಂದು ದೈವಗಳು


ಡಾ. ಶಯದೇವಿಸುತೆ ಮರವಂತೆ (ಡಾ. ಜ್ಯೋತಿ ಜೀವನ್ ಸ್ವರೂಪ್)
ಜಿಲ್ಲಾಧ್ಯಕ್ಷರು, ಕ.ಜಾ.ಪ. ಉಡುಪಿ ಜಿಲ್ಲಾ ಮಹಿಳಾ ಘಟಕ ಹಾಗೂ, ಪತ್ರಿಕಾ & ಮಾಧ್ಯಮ ಚಿತ್ರರಂಗ ವೃತ್ತಿ ನಿರತರು 





 

238 ನಮ್ಮ ಹೆಮ್ಮೆಯ ಪುಸ್ತಕ‌ಮಿತ್ರರು: ಶರಶ್ವಂದ್ರರಾವ್


 

Sunday, 9 November 2025

232 ಸೂರ್ಯ ನಾರಾಯಣ ಮಂಗಳೂರು: ನಮ್ಮ ಹೆಮ್ಮೆಯ ಓದುಗ ಮಿತ್ರರು : ಕರಾವಳಿಯ ಸಾವಿರದೊಂದು ದೈವಗಳು: ಡಾ.ಲಕ್ಷ್ಮೀ ಜಿ ಪ್ರಸಾದ್ ,ಮೊಬೈಲ್ 9480516684


 “ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು” ಪುಸ್ತಕವು ಕರಾವಳಿಯ ದೈವಗಳ ಹಿನ್ನೆಲೆಯನ್ನು ಅರಿಯಲು ಉತ್ಸಾಹಿ ಓದುಗರಿಗೆ ಅತ್ಯಂತ ಉಪಯುಕ್ತವಾದ  ಗ್ರಂಥ. ದೈವಾರಾಧನೆ, ಅದರ ಹಿನ್ನೆಲೆಗಳು ಹಾಗೂ ಸಂಪ್ರದಾಯಗಳ ಕುರಿತಾಗಿ ಶೋಧನಾತ್ಮಕವಾಗಿ ವಿಶ್ಲೇಷಣೆ ನೀಡಿರುವ ಈ ಗ್ರಂಥವು, ಕರಾವಳಿಯ ಶ್ರದ್ಧಾ, ಸಂಸ್ಕೃತಿ, ಮತ್ತು ಜನಪದ ವಾಡಿಕೆಗಳ ಸರಳ ಕಲಿಕೆಗಾಗಿ ಅತ್ಯುತ್ತಮ ಮಾರ್ಗದರ್ಶಿಯೂ ಆಗಿದೆ. ಓದುಗರ ಕುತೂಹಲ ಅಥವಾ ಸಂಶೋಧನ ಮನಸ್ಸಿಗೆ ಇದು ಖಚಿತವಾಗಿ ಪುಷ್ಠಿ ನೀಡುತ್ತದೆ.
ಧನ್ಯವಾದಗಳೊಂದಿಗೆ: ಸೂರ್ಯನಾರಾಯಣ ವಾಲ್ಪಾಡಿ

Friday, 7 November 2025

231 ಶ್ರೀ ಚನ್ನ ಕೇಶವ ಕಲ್ಮಾಡಿ : ನಮ್ಮ ಹೆಮ್ಮೆಯ ಓದುಗ ಮಿತ್ರರು: ಕರಾವಳಿಯ ಸಾವಿರದೊಂದು ದೈವಗಳು : ಡಾ.ಲಕ್ಷ್ಮೀ ಜಿ ಪ್ರಸಾದ್ ,


 ಆಕಸ್ಮಿಕವಾಗಿ ರೈಲಿನಲ್ಲಿ ಭೇಟಿಯಾದ  ಟೆಕ್ನಿಕಲ್ ಎಜುಕೇಶನ್ ಡಿಪಾರ್ಟ್ಮೆಂಟ್ ನಲ್ಲಿ ಜಾಯಿಂಟ್ ಡೈರೆಕ್ಟರ್ ಆಗಿ ನಿವೃತ್ತರಾದ ಶ್ರೀಯುತ  ಚನ್ನ ಕೇಶವ ಕಲ್ಮಾಡಿ..

Wednesday, 5 November 2025

229 ಚೇತನ್ ರೈ ಮಾಣಿ : ನಮ್ಮ‌ಪ್ರೀತಿಯ ಪುಸ್ತಕ‌ಮಿತ್ರರು: ಖ್ಯಾತ ಚಲನ ಚಿತ್ರ ಕಲಾವಿದರು : ಕರಾವಳಿಯ ಸಾವಿರದೊಂದು ದೈವಗಳು: ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684


 

228 : ವಾಸುದೇವ ಅಸ್ರಣ್ಣ ಕಟೀಲು : ನಮ್ಮ‌ಹೆಮ್ಮೆಯ ಪುಸ್ತಕ‌ ಮಿತ್ರರು : ಕರಾವಳಿಯ ಸಾವಿರದೊಂದು ದೈವಗಳು : ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684


 

227: ಪ್ರೀತಮ್ ಶೆಟ್ಟಿ ಕಟೀಲು : ನಮ್ಮ‌ಹೆಮ್ಮೆಯ ಪುಸ್ತಕ‌ ಮಿತ್ರರು: ಕರಾವಳಿಯ ಸಾವಿರದೊಂದು ದೈವಗಳು : ಡಾ.ಲಕ್ಷ್ಮೀ ಜಿ ಪ್ರಸಾದ್ : ಮೊಬೈಲ್ 9480516684


 ಮನೆ‌ಮನಗಳನ್ನು ತುಂಬುತ್ತಿರುವ ಕರಾವಳಿಯ ಸಾವಿರದೊಂದು ದೈವಗಳು ಕೃತಿ ತಲುಪಿದಾಗ ಪೋಟೋ ತೆಗೆದು ಸಂಭ್ರಮಿಸಿದವರು ಪ್ರೀತಮ್ ಕಟೀಲು

226 : ಪ್ರವೀಣ್ ಶೆಟ್ಟಿ ,ಬೆಂಗಳೂರು: ನಮ್ಮ ಹೆಮ್ಮೆಯ ಪುಸ್ತಕ ಮಿತ್ರರು: ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್


 ಪ್ರವೀಣ್ ಶೆಟ್ಟಿ ,ಬೆಂಗಳೂರು: ನಮ್ಮ ಹೆಮ್ಮೆಯ ಪುಸ್ತಕ ಮಿತ್ರರು

: ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ : 9480516684

Monday, 3 November 2025

224 ಶಾಂಭವಿ ಧರಣೀಶ್ ನಮ್ಮ‌ಪ್ರೀತಿಯ ಪುಸ್ತಕ‌ ಮಿತ್ರರು : ಕರಾವಳಿಯ ಸಾವಿರದೊಂದು ದೈವಗಳು- ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684


 ಈ ಯಾಂತ್ರಿಕ ಜಗತ್ತಿನಲ್ಲಿ ಜನರು ಗುರಿಯಿಲ್ಲದೆ ಸಾಗುತ್ತಿರುವ ಸಮಯದಲ್ಲಿ, ಡಾ. ಲಕ್ಷ್ಮಿ ಅವರ ಕರಾವಳಿಯ ಸಾವಿರದೊಂದು ದೈವಗಳು ಕೃತಿ ಓದುಗರನ್ನು ಆಧ್ಯಾತ್ಮಿಕ ಚಿಂತನೆಗಳ ದಾರಿಯಲ್ಲಿ ಸಾಗಿಸುವ ದೀಪದಂತಿದೆ.
ಕರಾವಳಿಯ ನಂಬಿಕೆಗಳು, ದೈವಸಂಸ್ಕೃತಿ ಮತ್ತು ಮಾನವ ಬದುಕಿನ ಅಂತರಂಗವನ್ನು ಅವರು ಅದ್ಭುತವಾಗಿ ಹೆಣೆದಿದ್ದಾರೆ. ಧರ್ಮ ಮತ್ತು ಜೀವನದ ನಿಜವಾದ ಅರ್ಥವನ್ನು ಹುಡುಕುವ ಈ ಕೃತಿ, ಓದುಗರ ಮನದಲ್ಲಿ ಶಾಂತಿ, ಭಕ್ತಿ ಮತ್ತು ಚಿಂತನೆಗೆ ಸ್ಪೂರ್ತಿ ನೀಡುತ್ತದೆ.

ಲೇಖಕಿ ದೇವರು ಎಷ್ಟು ನಿಜವೋ ಅಷ್ಟೇ ನಿಜ ದೈವಗಳು ಎಂಬ ಸತ್ಯವನ್ನು ನಾಜೂಕಾಗಿ ಅನಾವರಣಗೊಳಿಸಿದ್ದಾರೆ. ಪ್ರತಿಯೊಬ್ಬ ಮಾನವನ ಬದುಕು ಅರ್ಥಪೂರ್ಣವಾಗಬೇಕೆಂಬ ಸಂದೇಶವನ್ನು ಈ ಕೃತಿ ನಿಜವಾದ ಭಾವದೊಂದಿಗೆ ಸಾರುತ್ತದೆ. ಮೌಲ್ಯಗಳು ಕ್ಷೀಣಿಸುತ್ತಿರುವ ಇಂದಿನ ಯುಗದಲ್ಲಿ, ಕರಾವಳಿಯ ಸಾವಿರದೊಂದು ದೈವಗಳು ಓದುಗರಿಗೆ ಆತ್ಮಶಾಂತಿ ಮತ್ತು ಧಾರ್ಮಿಕ ಪ್ರಜ್ಞೆಯ ಹೊಸ ಬೆಳಕನ್ನು ತರುತ್ತದೆ.- ಶಾಂಭವಿ ಧರಣೀಶ್ 

Sunday, 2 November 2025

223 ನಮ್ಮ‌ಹೆಮ್ಮೆಯ ಪುಸ್ತಕ‌ ಮಿತ್ರರು


 #ನಮ್ಮ_ಹೆಮ್ಮೆಯ_ಓದುಗ_ಮಿತ್ರರು 

#ಕರಾವಳಿಯ_ಸಾವಿರದೊಂದು_ದೈವಗಳು 


ಕಳೆದ ವರ್ಷ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕ ಪ್ರಕಟಣೆಗೆ ಮೊದಲೇ ಮುಂಗಡ ಪಾವತಿಸಿ ಕಾದಿರಿಸಿ ಬೆಂಬಲಿಸಿದವರು ಯುವ ಬರಹಗಾರರಾದ  ದಯಾನಂದ ರೈ ಕಳ್ವಾಜೆಯವರು.


ಪುಸ್ತಕದ ಕುರಿತಾದ ಅವರ ಮೆಚ್ಚುಗೆಯ ಮಾತುಗಳು ಇಲ್ಲಿವೆ


"ಮೇಮ್ ನಮಸ್ಕಾರ...

ನಾನು ದಯಾನಂದ ರೈ ಕಳ್ವಾಜೆ.ನಿಮ್ಮ ಪುಸ್ತಕ ನನ್ನ ಕೈಸೇರಿ ವರುಷ ಸಂದರೂ, ಅಭಿಪ್ರಾಯ ಹೇಳಲು ಅನುವಾಗಿರಲಿಲ್ಲ. ದೈವಾರಾಧಾನೆಯ ನೆಲೆ ಮತ್ತು ಸಂಸ್ಕೃತಿಯ ಕೆಲವು ಮಜಲುಗಳನ್ನು ತಿಳಿಯಪಡಿಸುವ ಪ್ರಯತ್ನ ಶ್ಲಾಘನೀಯ. ಈ ಸಂಗ್ರಹಯೋಗ್ಯ ಹೊತ್ತಗೆಯ ಹಿಂದೆ ಅದೆಷ್ಟು ಶ್ರಮವಿದೆಯೋ ನಾನರಿಯೆ. ಆದರೆ ದೈವಿಕ ಸಂಪ್ರದಾಯಗಳನ್ನು ನಂಬುವವರು, ಮತ್ತು ಅಧ್ಯಯನ ನಡೆಸುವವರು ತಮ್ಮ ತಮ್ಮ ಮನೆಯಲ್ಲಿ ಸಂಗ್ರಹಿಸಿಡಲೇ ಬೇಕಾದ ಹೊತ್ತಗೆ ಇದು. ಮೇಲಾಗಿ ಸಾವಿರಕ್ಕಿಂತಲೂ ಮಿಗಿಲಾದ ವಿಭಿನ್ನ ಸಂಸ್ಕಾರ ವಿಶೇಷಗಳನ್ನು ಲೇಖನಿಯಲ್ಲಿಳಿಸಿ ಬಲ್ಲವರಲ್ಲಿ ಕೇಳಿತಿಳಿದ ನಿಮ್ಮ ಬಗೆ ಬಹುಮಾನ್ಯ. ಅಭಿನಂದನೆಗಳು ಮೇಮ್ ನಮಸ್ಕಾರ 🙏"

222 ನಮ್ಮ‌ಪ್ರೀತಿಯ ಓದುಗ ಮಿತ್ರರು


 ಭರವಸೆಯ ಯುವ ಸಂಶೋಧಕ ಸುರೇಶ್ ಮಂಗಲ್ಪಾಡಿಯವರ ಕೈಯಲ್ಲಿ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್  


ಸುಮಾರು 18 ವರ್ಷಗಳ ಮೊದಲು ನಾನು ಇಂಚಲಂಗೋಡಿನಲ್ಲಿ ನಡೆಯುವ ಸರ್ಪಕೋಲ/ ಬೆರ್ಮೆರ ನಲಿಕೆ ರೆಕಾರ್ಡ್ ಮಾಡಲು ಹೋದಾಗ ಮಾಹಿತಿ ನೀಡಿ ಪೂರ್ಣ ಬೆಂಬಲ ನೀಡಿದವರು ರತ್ನಾಕರ,ಸುರೇಶ ಮತ್ತು ಸತೀಶ ಎಂಬ ಮಂಗಲ್ಪಾಡಿಯ ಸಹೋದರರು.

ಇವರಲ್ಲಿ ವೃತ್ತಿಯಲ್ಲಿ ಶಿಕ್ಷಕರಾಗಿರುವ ಅರ್ಥ ಶಾಸ್ತ್ರ ಸ್ನಾತಕೋತ್ತರ ಪದವೀಧರರಾದ ಸುರೇಶ್ ಅವರು ಇತ್ತೀಚೆಗೆ ಬಾಕುಡ ಸಮುದಾಯದವರ ಸರ್ಪಕೋಲದ ಬಗ್ಗೆ ಅಧ್ಯಯನ ಮಾಡಿ ಹೊಸ ಹೊಳಹುಗಳ ಸಂಶೋಧನಾ ಗ್ರಂಥವನ್ನು ಪ್ರಕಟಿಸಿದ್ದಾರೆ.ಪ್ರಸ್ತುತ ನಮ್ಮ‌ಕರಾವಳಿಯ ಸಾವಿರದೊಂದು ದೈವಗಳು ಕೃತಿಯನ್ನು ಮಲೆಯಾಳ ಭಾಷೆಗೆ ಅನುವಾದಿಸಲು ಮುಂದಾಗಿದ್ದಾರೆ 

ಇವರಿಂದ ಇನ್ನಷ್ಟು ಅಧ್ಯಯನ ನಡೆಯಲಿ ಸಂಶೋಧನಾ ಕೃತಿಗಳು ಪ್ರಕಟವಾಗಲಿ ಎಂಬ ಹಾರೈಕೆ ನನ್ನದು