Friday 13 October 2023

ಅಪರೂಪದ ಚಾಮುಂಡಿ ಪಾಡ್ದನ - ಡಾ.ಲಕ್ಷ್ಮೀ ಜಿ ಪ್ರಸಾದ್

 ಚಾಮುಂಡಿ ಪಾಡ್ದನ ಸಂ- ಡಾ.ಲಕ್ಷ್ಮೀ ಜಿ ಪ್ರಸಾದ್ 

ಹಾಡಿದವರು ಶಾರದಾ ಜಿ ಬಂಗೇರ

ಇದು ತುಳು ಭಾಷೆಯಲ್ಲಿದೆ.ನಾನು ಶಾರದಾ ಜಿ ಬಂಗೇರರಿಂದ ಅವರಿಗೆ ತಿಳಿದ ಎಲ್ಲ ಪಾಡ್ದನಗಳನ್ನು  ರೆಕಾರ್ಡ್ ಮಾಡಿ ಅನುವಾದಿಸಿ ವಿಶ್ಲೇಷಿಸಿ ಶಾರದಾ ಜಿ ಬಂಗೇರರ ಮೌಖಿಕ ಸಂಕಥನ ಎಂಬ ಪುಸ್ತಕ ರಚಿಸಿದ್ದು ಪ್ರಚೇತ ಬುಕ್ ಹೌಸ್ ಪ್ರಕಟಿಸಿದೆ

ಆ ಪುಸ್ತಕದ ಆಯ್ದ ಭಾಗ ಇದು copy rights reserved © ಡಾ‌.ಲಕ್ಷ್ಮೀ ಜಿ ಪ್ರಸಾದ್


 ಚಾಮುಂಡಿ ಪಾಡ್ದನ- (ಸಂ ) ಡಾ.ಲಕ್ಷ್ಮೀ ಜಿ ಪ್ರಸಾದ್ ,ಹಾಡಿದವರು ಶಾರದಾ ಜಿ ಬಂಗೇರ 

 


ಡೆನ್ನಾನಾ ಡೆನ್ನಾನಾ ಡೆನ್ನಾಡೆನ್ನಾನಾ

ಓಯೇ ಡೆನ್ನಾನ ಡೆನ್ನಾನ ಡೆನ್ನಾಡೆನ್ನಾನಾ

ಎಡ ಭಾಗದಲ್ಲಿದೆ ಎಡಮಲೆ

ಬಲ ಭಾಗದಲ್ಲಿದೆ ಬಲಮಲೆ

ಎಡ ಭಾಗದಲ್ಲಿದೆ ಎಡಮಲೆ

ಬಲ ಭಾಗದಲ್ಲಿದೆ ಬಲಮಲೆ

ನಡುವಿನಲ್ಲಿ ಸಂಪಿಗೆ ಸುರಗೆ ತೋಟವಿದೆ

ಓ ನಡುವಿನಲ್ಲಿ ಸಂಪಿಗೆ ಸುರಗೆ ತೋಟವಿದೆ

ಭೀಮುರಾಯರ ಮಣ್ಣಿನಲ್ಲಿ

ಬೆಳಗಿನ ಜಾವದಲ್ಲಿ ಎದ್ದರು

ಭೀಮುರಾಯರು ಭಟ್ಟರು ಒಡೆಯರು ( ಸಂ) ಡಾ.ಲಕ್ಷ್ಮೀ ಜಿ ಪ್ರಸಾದ್ 

ಕೈಕಾಲು ಮುಖ ತೊಳೆದು

ಭೀಮುರಾಯರು ಭಟ್ಟರು ಒಡೆಯರು

ಮಡಿತುಂಬು ಇಡುವ ಕೋಣೆಗೆ ಹೋದರು

ಭೀಮಗರಾಯರು ಭಟ್ಟರು ಒಡೆಯರು

ತುಂಡು ತೆಗೆದು ಸೊಂಟಕ್ಕೆ ಮಡಿಬಟ್ಟೆ

ಸುತ್ತಿಕೊಂಡರು ಭೀಮುರಾಯರು ಭಟ್ಟರು

ಸಂಪಿಗೆ ಸುರಗೆ ತೋಟದಲ್ಲಿ

ಭೀಮುರಾಯರ ಮಣ್ಣಿನಲ್ಲಿ

ಮುತ್ತು ತಾವರೆಯ ಕೆರೆಯಲ್ಲಿ

ಕೈಕಾಲು ಮುಖ ತೊಳೆದುಕೊಂಡು ಹೋಗುವರು

ಅವರು ಭೀಮುರಾಯರ ಭಟ್ಟರು ಒಡೆಯರು

ಬಿಳಿಯ ತಾವರೆಯ ಹೂವಾಗಿ

ನಲಿದುಕೊಂಡು ನಗಾಡಿಕೊಂಡು ಬರುವುದಲ್ಲಿ

ಬಿಳಿಯ ತಾವರೆಯ ಹೂವೊಂದು

ಆ ಹೊತ್ತಿಗೆ ಸೆರಗು ಒಡ್ಡಿದರು

ಆ ಹೊತ್ತಿಗೆ ಸೆರಗು ಒಡ್ಡಿದರು

ಅವರು ಭೀಮುರಾಯರು ಭಟ್ಟರು ಒಡೆಯರು

ನಲಿಯುತ್ತಾ ನಗುತ್ತಾ ಬರುವುದು

ಬಿಳಿಯ ತಾವರೆಯ ಹೂವೊಂದು

ಉಟ್ಟಮಡಿ ವಸ್ತç ಅಂಗವಸ್ತçವನ್ನು ಒಡ್ಡಿದಾಗ

ಬಂದು ಬೀಳುವುದು ಬಿಳಿಯ ತಾವರೆಯ ಹೂವು

ಆರು ಎಸಳಿನಲ್ಲಿ ಮೂರು ಕುಸುಮದಲ್ಲಿ

ಬೆಳೆದು ಅರಳುವುದು ನೋಡಿದಾಗ

ಬಾರಿ ದೊಡ್ಡ ಸೋಜಿಗವೇ ಕಾಣಿಸುತ್ತದೆ ( ಸಂ) ಡಾ.ಲಕ್ಷ್ಮೀ ಜಿ ಪ್ರಸಾದ್ 

ಭೀಮುರಾಯರು ಬಂದರAತೆ

ಹಿಡಿದುಕೊAಡು ಅಂಗವಸ್ತçವನ್ನು ಕೊಡುವರು

ಚಾವಡಿ ನಡುಮನೆಗೆ ಬಂದು

ದೇವರ ಗುಂಡದ ಹೊಸಿಲಿನಲ್ಲಿ

ಇಡುವಾಗ ಕಾಣಿಸುತ್ತದೆ

ಪೂರ್ವದಲ್ಲಿ ಸೂರ್ಯ

ಹುಟ್ಟಿದಂತೇ ಕಾಣುತ್ತದೆ

ಬಿಳಿಯ ತಾವರೆಯ ಹೂವಾಗಿ

ಒಳಗಿನ ಸುತ್ತಿಗೆ ಹೋಗುವರು

ಭೀಮುರಾಯರು ಭಟ್ಟರು ಒಡೆಯರು

ದೇವರ ತಲೆಯಲ್ಲಿ ಇರಿಸುವರು

ಭೀಮುರಾಯರು ಭಟ್ಟರು ಒಡೆಯರು

ಅಡ್ಡ ಜಾರಿ ಬೀಳುತ್ತದೆ.

ಬಿಳಿಯ ತಾವೆಯ ಹೂವು ಅದು

ಆರು ಎಸಲು ಮೂರು ಕುಸುಮ ಬೀಳುವಾಗ

ನಡುವಿನಲ್ಲಿ ಮಗು ಆಳುವ ಶಬ್ದ ಕೇಳುವುದು

ಆ ಕಡೆ ಈ ಕಡೆ ನೋಡುವರು ಭೀಮುರಾಯರು ಭಟ್ಟರು

ಗಿಂಡಿಯ ನೀರು ತಳಿಯುವಾಗ

ಒಂದು ಬಿಳಿಯ ತಾವರೆಯ ಹೂವಿನಲ್ಲಿ

ಒಂದು ಮಗು ಉಂಟಾಯಿÄತ

ಕುಟುAಬ ಸಂಸಾರ ಇಲ್ಲದ

ಮನೆಯಲ್ಲಿ ಮಗು ಆಳುವ ಧ್ವನಿ ಕೇಳುತ್ತದೆ

ಎಂದರು ಭೀಮುರಾಯರು ಭಟ್ಟರು ಒಡೆಯರು

ಏನು ಹೆಸರು ಇಡುವುದು ಎಂದು ಕೇಳುವಾಗ

ಹೇಳಿದರು ಅವರು ಆರು ಎಸಳು ಮೂರು ಕುಸುಮದಲ್ಲಿ

ಉದ್ಭವವಾದ ದೇವಿ ಅವರೇ

ಚಾಮುಂಡಿ ಎಂದು ಹೆಸರು ಇಟ್ಟರು.-  ಡಾ‌.ಲಕ್ಷ್ಮೀ ಜಿ‌ ಪ್ರಸಾದ್ 

No comments:

Post a Comment