Thursday 5 October 2023

ಕರಾವಳಿಯ ಸಾವಿರದೊಂದು ದೈವಗಳು‌: ಸುಬ್ಬಿಯಮ್ಮ ಗುಳಿಗ © ಡಾ.ಲಕ್ಷ್ಮೀ ಜಿ‌ಪ್ರಸಾದ್

       


            ಡಾ.ಲಕ್ಷ್ಮೀ ಜಿ ಪ್ರಸಾದ್ ರಚಿಸಿರುವ ಕರಾವಳಿಯ  ಸಾವಿರದೊಂದು ದೈವಗಳು ಗ್ರಂಥದ ಆಯ್ದ ಭಾಗ  ,ಹೆಚ್ಚುನ ಮಾಹಿತಿಗೆ 9480516684 ಗೆ ಕರೆ ಅಥವಾ ವಾಟ್ಸಪ್ ಮೆಸೇಜ್ ಮಾಡಬಹುದು                   
  ಚಿತ್ರ ಕೃಪೆ :ದೈವ ರಾಜ ಗುಳಿಗ   
copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ  ಸುಬ್ಬಿಯಮ್ಮ ಗುಳಿಗ ಗುಳಿಗನ ಸೇರಿಗೆಗೆ ಸಂದಿರುವ ದೈವ .ಗುಳಿಗ ಪಂಜುರ್ಲಿ ಚಾಮುಂಡಿ ಮಲರಾಯ ಮೊದಲಾದ ಪ್ರಧಾನ ದೈವಗಳ ಆಗ್ರಹ ಅಥವಾ ಅನುಗ್ರಹಕ್ಕೆ ಪಾತ್ರರಾಗಿ ಅನೇಕರು ದೈವತ್ವ ಪಡೆದಿರುವ ವಿಚಾರ ತುಳುನಾಡಿನಾದ್ಯಂತ ಅಲ್ಲಲ್ಲಿ ಕಂಡು ಬರುತ್ತದೆ .ಆದರೆ ಏನೊಂದೂ ತಪ್ಪು ಮಾಡದೆ ಇರುವ ಚಂದ ಹುಡುಗಿಯರ ಮೇಲೆ ದೈವಗಳು ದೃಷ್ಟಿ ಬೀರಿ ಮಾಯ ಮಾಡಿ ತನ್ನ ಸೇರಿಗೆಗೆ ಸಂದಾಯ ಮಾಡುವ ಅಪರೂಪದ ವಿದ್ಯಮಾನಗಳ ಬಗ್ಗೆ ಒಂದೆರಡು ಉದಾಹರಣೆಗಳು ಸಿಗುತ್ತವೆ .ಸುಬ್ಬಿಯಮ್ಮ ಈ ರೀತಿ ಮಾಯವಾಗಿ ದೈವತ್ವ ಪಡೆದವಳು .ಇದೇ ರೀತಿ ದಾರು  ಬಿರ್ಮಕ್ಕ ಕೂಡಾ ಪಂಜುರ್ಲಿಯ ದೃಷ್ಟಿ ಬಿದ್ದು ಮಾಯ ಆಗಿ ದೈವತ್ವ ಪಡೆದ ಬಗ್ಗೆ ದಾರು ಕುಂದಯ ದೈವಗಳ ವೃತ್ತಾಂತದಲ್ಲಿ ಮಾಹಿತಿ ಲಭ್ಯವಾಗುತ್ತದೆ .
ಸುಬ್ಬಿಯಮ್ಮ ಗುಳಿಗನ ಪಾದ್ದನವನ್ನು ಡಾ.ಅಮೃತ ಸೋಮೇಶ್ವರ ಅವರು ಸಂಗ್ರಹಿಸಿದ್ದಾರೆ .
ಘಟ್ಟದ ಮೇಲೆ ರಾಮು ಗುಳಿಗಂದಾರ ಮತ್ತು ಅವನ ಮಗಳು ಸುಬ್ಬಿಯಮ್ಮ ಇದ್ದರು ಸುಬ್ಬಿಯಮ್ಮ ತುಂಬಾ ಚಂದ ಹುಡುಗಿ ..ರಾಮು ಗುಳಿಗಂದಾರ ವೃತ್ತಿಯಲ್ಲಿ ಬಳೆಗಾರ .ಆವರು ಬಳೆ ಮಾರಿಕೊಂಡು ಘಟ್ಟದ ಕೆಳಗೆ ಇಳಿದು ಮಂಗಳೂರಿಗೆ ಬರುತ್ತಾರೆ .ಅಲ್ಲಿಂದ ಮಂಜೆಶ್ವರಕ್ಕೆ ಬರುತ್ತಾರೆ .ಮಾಲಾಡಿ ಗುತ್ತಿನಲ್ಲಿಅವರಿಗೆ ರಾತ್ರಿ ತಂಗಲು ತಡೆ ಬಿಡಾರ ಸಿಗುತ್ತದೆ .ಅಲ್ಲಿ ಅವರು ಅಡುಗೆ ಮಾಡಿ ಮಲಗುತ್ತಾರೆ .
ಮರುದಿನ ಬೆಳಗ್ಗೆ ಎದ್ದು ರಾಮು ಗುಳಿಗಂದಾರ್ ಬಳೆ ಮಾರಲು ಹೋಗುತ್ತಾನೆ .ಇತ್ತ ಬೆಳಗ್ಗೆ ಎದ್ದ ಸುಬ್ಬಿಯಮ್ಮ ತಲೆ ಬಾಚಿ ಕಟ್ಟಿ ಹೂ ಮುಡಿದು ಕುಂಕುಮದ ಬೊಟ್ಟು ಇಟ್ಟು ಅಲಂಕಾರ ಮಾಡಿಕೊಳ್ಳುತ್ತಾಳೆ .ಮೊದಲೇ ಸುಂದರಿ ಈಗ ಅಲಂಕಾರದಿಂದ ಅವಳ ಸೊಬಗು ಇನ್ನಷ್ಟು ಹೆಚ್ಚಾಗುತ್ತದೆ .copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ
ಮನೆಯಲ್ಲಿ ನೀರು ಇಲ್ಲ್ಲವೆಂದು ನೀರು ತರಲು ಕೊಡ ತೆಗೆದುಕೊಂಡು ಬಾವಿಗೆ ಹೋಗುತ್ತಾಳೆ .ಚೆಲುವೆಯಾದ ಸುಬ್ಬಿಯಮ್ಮನನ್ನು ನೋಡಿದ ಗುಳಿಗ ದೈವ ಹದ್ದಿನ ರೂಪದಲ್ಲಿ ಬಂದು ಬಾವಿಯ ಪಣೆ ಮರದಲ್ಲಿ ಕುಳಿತುಕೊಳ್ಳುತ್ತಾನೆ .ಅವಳು ಬಗ್ಗಿ ನೀರು ಎತ್ತುವಾಗ ಅವಳನ್ನು ಎಳೆದು ಬಾವಿಗೆ ಹಾಕುತ್ತಾನೆ ,ನೀರಿಗೆ ಬಿದ್ದು ಉಸಿರು ಕಟ್ಟಿ ಅವಳು ಸಾಯುತ್ತಾಳೆ .
ಬಳೆ ಮಾರಿ ಕತ್ತಲಾಗುವಾಗ ಮನೆಗೆ ಬಂದ ರಾಮು ಗುಳಿಗಂದಾರ್ ಮಗಳನ್ನು ಕಾಣದೆ ಹುಡುಕುತ್ತಾನೆ .ಕೊನೆಗೆ ಬಾವಿಯಲ್ಲಿ ಅವಳ ಮೃತ ದೇಹ ತೇಲುತ್ತಿರುವುದು ಕಾಣಿಸುತ್ತದೆ .
ಹೆಣವನ್ನು ಎತ್ತಿ ಸಂಸ್ಕಾರ ಮಾಡುವಾಗ ಚಿತೆ ಉರಿಯುತ್ತದೆ ,ಪೂರ್ತಿ ಉರಿಯುವ ಮೊದಲು ಸುಬ್ಬಿಯಮ್ಮನ ಕೂಗು ಕೇಳಿಸುತ್ತದೆ .ಆಗ ತಂದೆ ಯಾರ ಜೊತೆ ಇದ್ದೀಯ ಮಗಳೇ ಎಂದು ಕೇಳಲು "ನಾನು ಗುಲಿಗನ ಜೊತೆ ಹೋಗುತ್ತಿದ್ದೇನೆ ಎಂದು ಹೇಳುತ್ತಾಳೆ
"ಸುಬ್ಬಿ ಬಾರಿ ಪೊರ್ಲುದ ಪೊನ್ನು ಆದಿತ್ನೆದ್ದಾವರ ಆಲೆಗ್ ಗುಲಿಗನ್ ದಿಟ್ಟಿ ಅಂಡ್ ಪನ್ವೇರ್ ,ಗುಲಿಗನ ಸೇರಿಗೆಡ್ ಇತ್ತಿನ ಈ ಸುಬ್ಬಿಗ್ ತಲಪ್ಪಾಡಿಡು ಸಾನ ಉಂಡು (ಸುಬ್ಬಿ ಬಹಳ ಸುಂದರಿ ಹೆಣ್ಣು ಆಗಿದ್ದರಿಂದ ಅವಳಿಗೆ ಗುಳಿಗನ ದೃಷ್ಟಿ ಆಯಿತು ,ಗುಳಿಗನ ವಶದಲ್ಲಿ ಇದ್ದ ಸುಬ್ಬಿಗೆ ತಲಪ್ಪಾಡಿಯಲ್ಲಿ ಸ್ಥಾನ ಇದೆ )ಎಂಬ ಪಾಡ್ದನದ ಮಾತುಗಳು ಬಹಳ ಮುಖ್ಯವಾಗಿವೆ "ಎಂದು ಡಾ.ಬಿ.

ಎ ವಿವೇಕ ರೈ ಅಭಿಪ್ರಾಯ ಪಟ್ಟಿದ್ದಾರೆ .
ಯಾವುದೇ ತಪ್ಪು ಮಾಡದ ಸುಬ್ಬಿ ಮೇಲೆ ಗುಲಿಗನ ದೃಷ್ಟಿ ಯಾಕೆ ಬಿತ್ತು?ಅವಳು ಸುಂದರಿ ಎಂಬ ಕಾರಣಕ್ಕೆ ಗುಲಿಗನ ದೃಷ್ಟಿ ಬಿತ್ತು ಎಂಬುದಕ್ಕೆ ಏನರ್ಥ ?ಎಂಬುದು ಇಲ್ಲಿ ಸ್ಪಷ್ಟವಾಗುವುದಿಲ್ಲcopy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ
ಸುಂದರಿಯಾದ ಸುಬ್ಬಿ ಮೇಲೆ ಯಾರಾದರೂ ಕಣ್ಣು ಹಾಕಿದ್ದು ಅವನ ಉಪದ್ರ ಸಹಿಸಲಾರದೆ ಅವಳು ಬಾವಿಗೆ ತಾನಾಗಿಯೇ ಹಾರಿರುವ ಸಾಧ್ಯತೆ ಇದೆ .ಅವಳಿಗೆ ಉಪದ್ರ ಕೊಟ್ಟಾತ ಅರಸನೋ ಪಾಳೆಗಾರನೋ ಆಗಿದ್ದು ಬಲಿಷ್ಟನಾಗಿದ್ದು ಅವನ ತಪ್ಪನ್ನು ಮರೆ ಮಾಚುವ ಸಲುವಾಗಿ ಗುಲಿಗನ ದೃಷ್ಟಿ ಬಿದ್ದು ಬಾವಿಗೆ ಬಿದ್ದು ಸತ್ತಳು ಎಂದು ಹೇಳಿರುವ ಸಾಧ್ಯತೆ ಇದೆ /ಅಥವಾ ಆಕಸ್ಮಿಕವಾಗಿ ಬಾವಿಗೆ ಬಿದ್ದು ದುರಂತವನ್ನಪ್ಪಿದ ಘಟನೆಗೆ ಗುಳಿಗನ ದೃಷ್ಟಿಯ ಕಥಾನಕ ಸೇರಿರುವ ಸಾಧ್ಯತೆ ಕೂಡ ಇದೆ .
ಏನೇ ಆಗಿದ್ದರೂ ಸುಬ್ಬಿಯಮ್ಮ ಮುಂದೆ ಗುಲಿಗನ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧಿಸಲ್ಪಡುತ್ತಾಳೆ .
ಸುಬ್ಬಿಯಮ್ಮ ಸುಂದರ ಹುದುಗಿಯಾದ್ದರಿಂದ ಸುಬ್ಬಿಯಮ್ಮ ದೈವದ ಅಲಂಕಾರ ಕೂಡ ಸುಂದರ ಹುಡುಗಿಯಂತೆ ಇರುತ್ತದೆ .
ಆಧಾರ ಗ್ರಂಥ
ಸುಬ್ಬಿಯಮ್ಮ ಪಾಡ್ದನ :(ಸಂ) ಡಾ.ಅಮೃತ ಸೋಮೇಶ್ವರ
ತುಳು ಜನಪದ ಸಾಹಿತ್ಯ -ಡಾ.ಬಿ ಎ ವಿವೇಕ ರೈ

No comments:

Post a Comment